ಸೋಮವಾರ, ಆಗಸ್ಟ್ 6, 2012

ಪತ್ರಕರ್ತರ ಮೇಲೆ ಕೇಸು ದಾಖಲಿಸಿದ ಕಾನೂನು ಇಲಾಖೆಗೆ ದಿಕ್ಕಾರ ..

ಮೊನ್ನೆ ಜುಲೈ 28 ರಂದು ಹಿ೦ .ಜಾ. ವೇ ಯ ಕಾರ್ಯಕರ್ತರು ಮ೦ಗಳೂರಿನ ಹೋಂ ಷ್ಟೇ ಮೇಲೆ ದಾಳಿ ನಡೆಸಿದ ಪ್ರಕರಣ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬುದ್ದಿವಂತ ಜಿಲ್ಲೆಯ ಕರಾಳ ಮುಖ ಪರಿಚಿಸಲ್ಪಟ್ಟಿತು. ಇದರಲ್ಲಿ ತಪ್ಪು ಎನ್ನುವ ಅಂಶ ಒಂದೆಡೆ ಮೇಲ್ನೋಟಕ್ಕೆ ಹಿ೦ .ಜಾ. ವೇ. ಯಿಂದ ಉಂಟಾಗಿದ್ದರೆ  ಪಾರ್ಟಿ ನಡೆಸುತ್ತಿದ್ದ ವಿಧ್ಯಾರ್ಥಿಗಳಿಂದಲೂ  ತಪ್ಪು ಇಲ್ಲವಂತಲ್ಲ ,ಬೆಂಕಿ ಇಲ್ಲದೆ ಹೊಗೆಯಾಡದು .ಒಟ್ಟಾರೆ  ತಪ್ಪಿತಸ್ತರನ್ನು ಬಂಧಿಸಿ ಸೂಕ್ತ ಶಿಕ್ಷೆಗೆ ಗುರಿ ಪಡಿಸಬೇಕಾಗಿದ್ದ ನಮ್ಮ ಆರಕ್ಷಕ ದಳದವರು ಪ್ರಾಥಮಿಕವಾಗಿ ಈ ಘಟನೆಯನ್ನು ಚಿತ್ರೀಕರಿಸಿದ ಕಸ್ತೂರಿ ವಾಹಿನಿಯ ನವೀನ,tv9 ನ ರಾಜೇಶ  ಸೇರಿ ಮತ್ತಿಬ್ಬರು ಪತ್ರಕರ್ತರ ವಿರುದ್ಧ ಒಟ್ಟು 4 ಜನರ ಮೇಲೆ ಕೇಸು ಜಡಿದು ಬಿಟ್ಟಿದ್ದಾರೆ .ನಮ್ಮ ವಾಹಿನಿಗೆ ನಮ್ಮ ಪತ್ರಿಕೆಗೆ ಒಂದು exclusive  ಸುದ್ದಿ ನಮಿಂದ ಸಿಗಲಿ ಎಂಬ ಉದ್ದೇಶ ಇರಬಹುದು ,ನಮ್ಮ ಕರ್ತವ್ಯವನ್ನು ಆದಷ್ಟು ಗುಣಮಟ್ಟದಿಂದ ಪಾಲಿಸಬೇಕೆಂಬ ಹೋರಾಟವೂ  ಇರಬಹುದು.
ಸಮಾಜದ ಕುಂದು ಕೊರತೆಯನ್ನು ಕೊಂಚ ಮಟ್ಟದಲ್ಲಿ ತಿದ್ದುವಲ್ಲಿ ,ಜಾಗ್ರತೆ ಮೂಡಿಸುವಲ್ಲಿ ಜನಹಿತ ಕಳಾ -ಕಳಿ ಯಿಂದ ತಮ್ಮ ಕೈಲಾದಷ್ಟು ಅಳಿಲು ಸೇವೆ ಮಾಡವ ಇವರಗಳಿಗೆ ಮುಖ್ಯ ವಾಗಿ ಯಾವ ರಕ್ಷಣೆಯೂ ಇಲ್ಲ .ಎಲ್ಲೊ ಅಪಘಾತ ,ಆಘಾತ ಸಂಬವಿಸಿದಾಗ ಕೇವಲ ಪತ್ರಕರ್ತ ಸಂಘ ಕಂಬನಿ ಮಿಡಿಯುತ್ತದೆ ವಿನಹ..ಇನ್ನ್ಯರದ್ದೆ ಸುಖ ನುಡಿ ಅನಪೇಕ್ಷಿತ .ಒಟ್ಟಾರೆಯಾಗಿ ಮೊನ್ನೆ ನಡೆದ ಘಟನೆಯಲ್ಲಿ ಜೀವದ ಹಂಗು ತೊರೆದು ಘಟನಾ ವಿವರವನ್ನು ಕಲೆ ಹಾಕಿದ ಈ ಪತ್ರಕರ್ತ ಬಂಧುಗಳಿಗೆ ಪಾರಿತೋಷಕ ವಿರಲಿ ,ಒಂದೊಳ್ಳೆ ಮಾತನ್ನು ಹೇಳುವದನ್ನು ಬಿಟ್ಟು ಇವರಗಳ ಮೇಲೆಯೇ ಅಪರಾಧಿ ಎಂಬ ಹೆಣೆ ಪಟ್ಟಿಯನ್ನು ನೀಡಿದ್ದು ಎಷ್ಟು ಸಮಂಜ ಸ ಎಂಬ ಪ್ರಜ್ಞಾವಂತರ ಪ್ರಶ್ನೆಗೆ ,ಕಾನೂನು ಇಲಾಖೆ ಉತ್ತರ ಹೇಳಬೇಕಾಗಿದೆ. ಈ ವರಧಿಗಾರರು ಮೊನ್ನೆಯ ಈ ಕಹನಿಯನ್ನು ತೋರಿಸದಿದ್ದರೆ ಖಂಡಿತವಾಗಿಯೂ ಅಲ್ಲಿ ನಡೆದ ಸ್ವಷ್ಟ -ಸ್ವಚ್ಛ ಘಟನಾ ವಿವರ ಏನೆಂಬುದು ಯಾರಿಗೂ ಅರ್ಥವಾಗುತ್ತಿರಲಿಲ್ಲ ,ಹಾಗೆ ಅದರಲ್ಲಿ ಪಾಲ್ಗೊಂಡ ಕಿಡಿಗೆಡಿಗಳನ್ನು ಬಂಧಿಸುವಲ್ಲಿ ಇವರುಗಳ ಕ್ಯಾಮರದ ಕೈ ಚಾಲಕ ಸಹಕಾರಿಯಗಿತ್ತಲ್ಲವೇ? ಈ ಒಂದು ಘಟನೆಯಿಂದ ಎಲ್ಲರ ಮನೆ -ಮನಗಳಲ್ಲಿ ಜಾಗ್ರತೆ ಮೂಡಿಸುವ ಒಂದು ಅರಿವಿನ ವೇದಿಕೆಯೂ ಆಗಿದೆ ಎನ್ನುದರಲ್ಲಿ ಎರಡು ಮಾತಿಲ್ಲ.ಇಂತವರಿಗೆ ಒಂದು ಮೆಚ್ಚುಗೆಯ ಮಾತನಾಡುದನ್ನು ಬಿಟ್ಟು ಇವರಗಳ ವಿರುದ್ಧವೇ  ಕೇಸು ದಾಖಲಿಸಲು ಸಫಲರಾಗಿರುವ ಕಾನೂನು ಇಲಾಖೆಗೆ,  ಈ ಕ್ರತ್ಯದ ಹಿಂದಿರುವ ಕಾಣದ ಕೈ ಗಳ,ಬಾಗಿಯಾದ ವ್ಯಕ್ತಿಗಳ ಬಂಡವಾಳ ಬಯಲಾಗುತ್ತದೆ ಎಂಬ ರಕ್ಷಣಾತ್ಮಕ ಕಾರ್ಯವಾಗಿರಬಹುದೇ ? ಸಂಶಯದ ಹೊಗೆಯಾಡುತ್ತಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ