ಶನಿವಾರ, ಜುಲೈ 9, 2016
ರಾಜ್ಯದ ದುಷ್ಟ ಆಡಳಿತದ ಮುಖವಾಡಕ್ಕೆ ಇನ್ನೊಂದು ಬಲಿ ! ಮತ್ತೆಷ್ಟೋ ?
ನಿಜಕ್ಕೂ ಕರುಳು ಹಿಂಡುವಂತ ಪ್ರಸಂಗ ! ಹೌದು ಏನಾಗುತ್ತಿದೆ ರಾಜ್ಯದಲ್ಲಿ ? ರಕ್ಷಕರಿಗೆ ರಕ್ಷಣೆ ಇಲ್ಲದಿದ್ದರೆ ? ಅವರುಗಳಿಗೆ ಸೂಕ್ತವಾದ ಕಾನೂನುಗಳಿಲ್ಲವೇ ?ದಕ್ಷ -ನಿಷ್ಟಾವಂತ ಅಧಿಕಾರಿಗಳಾಗಿ ಸಮಾಜ ಸೇವೆ ಮಾಡುವುದು ತಪ್ಪಾ ?.. ಕಿಚಕರ ಸಾಮ್ರಾಜ್ಯದಲ್ಲಿ ಅರ್ಜುನನ೦ತವರಿಗೆ ಬೆಲೆ -ನೆಲೆ ಮರೀಚಿಕೆಯೇ ? ಸಾರಥಿ ಕ್ರಷ್ಣ ನೀ ಬೇಗನೇ ಬಾರೋ ಅನ್ನದೇ ವಿಧಿ ಇಲ್ಲ .. ಕೇವಲ ಎರಡೇ ಎರಡು ದಿನದಲ್ಲಿ ಇನ್ನೊಬ್ಬ ಪೋಲಿಸ್ ಅಧಿಕಾರಿ ಆತ್ಮಹತ್ಯಗೆ ಶರಣಾಗಿದ್ದಾರೆ . ಹಿರಿಯ ಅಧಿಕಾರಿ ಡಿವೈಎಸ್ ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಯೊಂದಿಗೆ ಮತ್ತೊಮ್ಮೆ ರಾಜ್ಯದ ದುಷ್ಟ ಆಡಳಿತದ ಮುಖವಾಡ ಬಯಲುಗೊಂಡಿದೆ . ಪೊಲೀಸ್ ಅಧಿಕಾರಿಗಳಿಗೆ ಟಾರ್ಚರ್ ಕೊಡಲಾಗುತ್ತದೆ ಎನ್ನುವುದು ಈಗ ಹೊರ ಬಂದಿರುವ ಮಾಹಿತಿ ಅಲ್ಲ. ಈ ಹಿಂದೆ ಕೂಡ ಹಲವರುಘಟನೆಗಳು ಘಟಿಸಿತ್ತು. ಕೆಲವರು ಸಾವನ್ನಪ್ಪಿದ್ದರೇ. ಕೆಲವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಕೆಲವರ ಸಾವಿಗೆ ನಿರ್ಧಿಷ್ಟವಾದ ಕಾರಣ ಸಿಕ್ಕಿಲ್ಲ ..ಕಾರಣ ಹಿರಿಯ ಅಧಿಕಾರಿಗಳಿಗೆ ಟಾರ್ಚರ್ ಎಂಬ ಹಣೆ ಪಟ್ಟಿ ಇದ್ದಾರೂ ,ಹಲವರು ಬಹಿರಂಗ ಪಡಿಸದೇ ಇಹ ಲೋಕ ತ್ಯಜಿಸಿದ್ದರೆ , ಇನ್ನೂ ಹೆಚ್ಚಿನವರು ಎಲ್ಲವನ್ನೂ ನುಂಗಿ ಕೊಂಡು ಅನಿವಾರ್ಯವಾಗಿ ಮನೆ ಮಜ್ಜಿಗೆ ಮರದ ಅಡಿ ಕುಡಿಯ ಬಾರದೆಂದು ಜೀವನ ಸಾಗಿಸುತ್ತಿದ್ದಾರೆ .ಏನೇ ಇರಲಿ ಎಲ್ಲವೂ ಅವನ ಆಟ ..ನಿನ್ನೆಯ ಘಟನೆ ಬಗ್ಗೆ ಯೋಚಿಸಿದರೆ ತುಂಬಾನೇ ಬೇಸರವಾಗುತ್ತದೆ.ನಿನ್ನೆ ಆತ್ಮಹತ್ಯೆ ಶರಣಾಗುವ ಮುನ್ನ ಗಣಪತಿ ಸತ್ಯವನ್ನು ಹೊರಗೆಡವ ಬೇಕೆಂಬ ನಿಟ್ಟಿನಲ್ಲಿ ಖಾಸಗಿ ಟಿವಿ ಚಾನೆಲ್ ಒಂದಕ್ಕೆ ಸಂದರ್ಶನ ನೀಡಿ ಎಲ್ಲವನ್ನೂ ಎಳೆ- ಎಳೆಯಾಗಿ ವಿವರಿಸಿದ್ದರು .. ನನ್ನ ಸಾವಿಗೆ ಇಂತವರೇ ಕಾರಣ ಎಂದು ಕಡ್ಡಿ ತುಂಡು ಮಾಡಿದಂತೆ ಸತ್ಯವನ್ನೇ ಬೊಟ್ಟು ಮಾಡಿ ಮುಂಗಡವಾಗಿ ಕಕ್ಕಿದ್ದರು .. ಆದರೆ ಇಲ್ಲಿ ಆಗಿದ್ದು ಏನು ? ಎಲ್ಲಕ್ಕೂ ಸಾಕ್ಷಿ ಬೇಕೆಂಬ ನ್ಯಾಯಾಲಯದ ಬಯಕೆಗೆ ಒಂದು ಪಟ್ಟು ಹೆಚ್ಚೇ ಎಂಬಂತೆ ಸಾಕ್ಷಿ ಪುರಾವೆಗಳು ಚಿತ್ರಿಕರಿಲ್ಪಟ್ಟ ವಿಡಿಯೋದಲ್ಲಿ ಇದ್ದವು ..ಆದರೆ ಹೇಸಗೆ ಲಜ್ಜೆ ಗೆಡಿತನದ ದುಷ್ಟ -ಭಂಡ ರಾಜಕೀಯ ವ್ಯವಸ್ತೆಯಲ್ಲಿ ..ಅಪರಾಧಿಗಳಿಗೆ ಇದುವರೆಗೂ ಯಾವುದೇ ಕ್ರಮ ಕೈ ಕೊಳ್ಳದಿರುವುದು ವಿಪರ್ಯಾಸವೇ ಸರಿ !. ಏನ್ರೀ ಇದು ? ಬೇಲಿ ಕಾಯುವವರು ಬಿಡಿ, ಓಟು ಹಾಕಿ ಗೆಲ್ಲೀಸಿದ ನಮಗೆ ಕೂಡಾ ಒಂದು ಕಿಂಚಿತ್ ಹೋರಾಟದ ಮನೋ ಭಾವನೆ ಉಂಟಾಗದಿರುವುದು ಶೋಜಿಗ . ಕೇವಲ ಒಂದಷ್ಟು ಜನ ಬಾಯಿ ತೆರೆದದ್ದು ಸಮಾಧಾನಕರ ತಂದರೂ ವಿಪಕ್ಷಳು ಅವುಗಳ ಕುರ್ಚಿ ಭದ್ರತೆಗಾಗಿ ಮಜಾ ತೆಗೆದು ಕೊಂಡು ಸಂಕ ಮುರಿದಲ್ಲೇ ಸ್ನಾನ ಎನ್ನುವಂತೆ ಕಿಡಿಕಾರುವುದು ಬಿಟ್ಟರೆ ಫಲಿತಾಂಶ ಮಾತ್ರ ಶೂನ್ಯ !. ಹೋರಾಟ ಹರತಾಳ ಮಾಡಿದರೆ ಸತ್ತವರು ಎದ್ದು ಬರುತ್ತಾರೆ ಎಂಬ ಆಲೋಚನೆ ಅಲ್ಲ ಅಟಲಿಸ್ಟ್ ಮುಂದಿನ ಅಧಿಕಾರಿಗಳ ಸರದಿಗೆ ಪುಲ್ ಸ್ಟಾಪ್ ಬಯಸಬಹುದಲ್ಲ ಎಂಬ ಒಂದು ಆಶಯ ವಷ್ಟೇ . ಇನ್ನು ಅಪರಾಧಿಗಳಿಗೆ ನಮಲ್ಲಿ ಅಷ್ಟೇ ಶಿಕ್ಷೆ ಇದೆ ಅದು ಬಿಡಿ (!) ಕೇವಲ ಮಾವನ ಮನೆಗೆ ಹೋಗಿ ಬಂದ ರೀತಿಯಲ್ಲಿ ಸಕಲ ರಾಜ ಮಾರ್ಯಾದೆಯೊಂದಿಗೆ ಅವರಗಳ ಬಂಧನದ ಡ್ರಾಮ ಮುಕ್ತಾಯವಾಗುತ್ತದೆ . ಮತ್ತದೇ ರಾಗ ಮತ್ತದೇ ಹಾಡು ! ಆದರೆ ತಪ್ಪಿತಸ್ತರು ಮುಖವಾಣಿಗೆ ಬರಬೇಕು ಎನ್ನುವ ಇರಾದೆ ಅಷ್ತೆ .ಸಂತ್ರಸ್ತರ ಅನ್ಯಾಯಕ್ಕೆ ನಿರ್ದಿಷ್ಟ ಕಾರಣ ಗೊತ್ತಿದ್ದರೂ, ಸಿಬಿಐ ಸಿಐಡಿ ಎಂದೆಲ್ಲಾ ವರ್ಷಾನುಗಟ್ಟಲೆ ಎನ್ಕ್ವಯರಿ ಅದೂ ಇದೂ ಕಥೆ ಕಟ್ಟಿ ಸ್ವಲ್ಪ ದಿನಗಳಲ್ಲಿ ಎಲ್ಲ ನೆನಪುಗಳೂ ಮಾಸಿ ಬಿಡುತ್ತವೆ . ಇದಕ್ಕೆ ಇಂತ್ತದ್ದೆ ಕೆಲವು ಇತ್ತೀಚೆಗಿನ ನಡೆದ ಘಟನೆಯನ್ನು ನೆನಪು ಮಾಡಿ ಕೊಳ್ಳಿ.
ಐಎಎಸ್ ಅಧಿಕಾರಿ ಡಿ.ಕೆ.ರವಿ ಒಬ್ಬ ಪ್ರಾಮಾಣಿಕ ಅಧಿಕಾರಿ ಎಂದೇ ಹೆಸರು ವಾಸಿಯಾಗಿದ್ದರು. ರಿಯಲ್ ಎಸ್ಟೇಟ್ ಮಾಫಿಯಾ ಹಾಗೂ ಅಕ್ರಮ ಮರಳು ದಂಧೆಕೋರರ ಪಾಲಿಗೆ ಸಿಂಹಸ್ವಪ್ನವಾಗಿದ್ದರು. ಇಂಥಹ ಅಧಿಕಾರಿ 2014ರಲ್ಲಿ ನೇಣಿಗೆ ಶರಣಾಗಿದ್ದರು ಇದು ರಾಜ್ಯ ಮಾತ್ರವಲ್ಲ ದೇಶವನ್ನೇ ತಲ್ಲಣ ಗೊಳಿಸಿತ್ತು . ಕಾರಣ ಗೊತ್ತಿದ್ದೂ ಪ್ರಕರಣದ ಸಿಬಿಐ ಗೆ ವಹಿಸಲಾಗಿತ್ತು ತನಿಖೆ ಮುಂದುವರಿಯುತ್ತಿದೆ ಯಾವಾಗ ಕೊನೆ ಗೊಳ್ಳುತ್ತೋ ಗೊತ್ತಿಲ್ಲ !
ಮೊನ್ನೆ ಮೊನ್ನೆಯಷ್ಟೇ ಚಿಕ್ಕಮಗಳೂರು ಡಿವೈಎಸ್ಪಿ ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆಗೆ ಶರಣಾಗಿದ್ದರು. ಆತ್ಮಹತ್ಯೆಗೂ ಮುನ್ನ ಇವರ ವಿರುದ್ಧ ವ್ಯಕ್ತಿಯ ಕಿಡ್ನ್ಯಾಪ್ ಮಾಡಿ ಹಣ ಪಡೆದ ಆರೋಪವೂ ಸೇರಿ ಇಲ್ಲ -ಸಲ್ಲದ ಅದೂ- ಇದೂ ಇದು ಎಂದು ರೆಕ್ಕೆ ಪುಕ್ಕ ಕಟ್ಟಿ ಒಂದಷ್ಟು ದಿನ ಅಧಿಕಾರಿಯ ಮೇಲೆ ಗೂಬೆ ಕೊರಿಸಲಾಗಿತ್ತು .
ಆದರೆ, ಕಲ್ಲಪ್ಪ ಕುಟುಂಬ ಮಾತ್ರ ಎಸ್ಪಿ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾರೆ ಎ0ದು ಬಿಗು ಪಟ್ಟು ಹಿಡಿದಾಗ ಸರ್ಕಾರ ಬೇರೆ ದಾರಿಕಾಣದೇ.ಈ ಪ್ರಕರಣವನ್ನೂ ಸಿಐಡಿ ತನಿಖೆಗೆ ವಹಿಸಿತ್ತು ಹೇಗೋ ಏನು ತನಿಖೆ ಆರಂಭಗೊಂಡಿದೆ ಅಂತ್ಯ ಮಾತ್ರ ಗೊತ್ತಿಲ್ಲ .
ಇನ್ನೂ ಕೂಡ್ಲಿಗಿ ಡಿವೈಎಸ್ಪಿ ಅನುಪಮಾ ಶೆಣೈ ಕೂಡ ದಕ್ಷತೆ ಯಿಂದ ಕಾರ್ಯ ನಿರ್ವಹಿಸಿದ ಅಧಿಕಾರಿ. ಕೂಡ್ಲಿಗಿ ಯಲ್ಲಿ ನಡೆಯುತ್ತಿರುವ ಅಕ್ರಮ ಮಧ್ಯ ಮತ್ತು ಹಿತಕರ ಘಟನೆಯನ್ನು ಪತ್ತೆ ಹಚ್ಚಿ ಇದಕ್ಕೆ ಕಾರ್ಮಿಕ ಸಚಿವ ಪಿ.ಟಿ ಪರಮೇಶ್ವರ್ ನಾಯಕ್ ಸಾಥ್ ಇದೆ ಎಂಬ ವಿಷಯ ಬಹಿರಂಗ ವಾಗುತ್ತಿದಂತೆ , ಸಚಿವ ಅನುಪಮಾ ಶೆಣೈಯನ್ನು ತನ್ನ ಪವರ್ ಬಳಸಿ ಬಿಜಾಪುರಕ್ಕೆ ಎತ್ತಂಗಡಿ ಮಾಡಿಸಿದ್ದರು. ಸರಕಾರಕ್ಕೆ ಇದನ್ನು ಗಮನಕ್ಕೆ ತಂದರೂ ಪ್ರಯೋಜನ ಕಾಣದೇ ಇದ್ದಾಗ ನೇರವಾಗಿ ಅನಪಮಾ ಶೆಣೈ ರಾಜೀನಾಮೆ ನೀಡಿದ್ದರು . ಕಾರಣ ಪರಮೇಶ್ವರ್ ಟಾರ್ಚ್ರ್ ಅನ್ನೋದನ್ನು ವಿವರಿಸಿ ಹೇಳಬೇಕಾಗಿಲ್ಲ . ಹೀಗೆ ರಾಜ್ಯದಲ್ಲಿ ಪ್ರಭಾವಿಗಳ ಹಿರಿಯ ಅಧಿಕಾರಿಗಳ ಕಿರುಕುಳ ತಾಳಲಾರದೆ ಅಧಿಕಾರಿಗಳು ಬಲಿಯಾಗುತ್ತಿದ್ದಾರೆ. ಒಂದೂ ಪ್ರಕರಣದಲ್ಲೂ ಸರ್ಕಾರ ನ್ಯಾಯ ಒದಗಿಸಿಕೊಟ್ಟಿದ್ದು ಕಾಣುತ್ತಿಲ್ಲ ಎನ್ನುವುದು ನೋವಿನ ಸಂಗತಿ. ರಾಜ್ಯದ ದುಷ್ಟ ಆಡಳಿತದ ಮುಖವಾಡಕ್ಕೆ ಇನ್ನೊಂದು ಬಲಿ !
ಯಾಗಿದೆ ,, ಮುಂದೆ ಎಷ್ಟೋ ? ಪ್ರಜ್ಞಾವಂತರೆ ಎಚ್ಚರ ಗೊಳ್ಳಿ..ನಮಗೆ ರಕ್ಷಣೆ ನೀಡುವವರನ್ನು ನಾವು ನಾವು ರಕ್ಷಣೆ ನೀಡುವುದರಲ್ಲಿ ಏನು ತಪ್ಪು ..
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳು (Atom)



