ಭಾನುವಾರ, ಅಕ್ಟೋಬರ್ 5, 2014

ಪ್ರಾಣಕ್ಕೆ ಎರವಾಯಿತೇ ಫೋಟೋ ತೆಗೆಯೋ(ಸೋ ) ಹುಚ್ಚು ?!

ಹೌದು ! ಫೋಟೋ ತೆಗೆಯೋ ಹುಚ್ಚು ಹಾಗೆ ಫೋಟೋಗೆ ಪೋಸ್ ಕೊಡೋ  ಹುಚ್ಚು ನಮ್ಮಲ್ಲಿ ಬಹಳಷ್ಟು , ನಾನಾ ರೀತಿಯಲ್ಲಿ ಬಳಕೆ ಯಲ್ಲಿದೆ .... ನಾವ್ ತೆಗೆಯೋ ಚಿತ್ರ ಚೆನ್ನಾಗಿ ಬರಬೇಕು , ಯಾರೂ ಮಾಡದ ಸಾಹಸಕ್ಕೆ ಕೈ ಹಾಕಬೇಕು ಎಂದು ಸಾಕಷ್ಟು ಛಾಯಾ ಗ್ರಾಹಕರೂ ಸೇರಿದಂತೆ ಕೆಮರಾ ಹಿಡಿಯುವ ಸಾಕಷ್ಟು ಮಂದಿಯ ಆಲೋಚನೆ ಇದೆ ಆಗಿರುತ್ತದೆ ..ಇಂಥ ಸಾಕಷ್ಟು ಸರ್ಕಸ್ ಸಾಹಸದಲ್ಲಿ , ಪ್ರಾಣಿಗಳ ಬಾಯಿಗೆ ಆಹಾರ ವಾದ , ಪ್ರಕ್ರತಿಯ ಹೊಡೆತಕ್ಕೆ ಸಿಲುಕಿ ಸತ್ತವರ ಸಂಖ್ಯೆ ನಮ್ಮಲ್ಲಿ ಬಹಳಷ್ಟು ಜನರ ಉದಾಹರಣೆ ಇದೆ.. ಸಾಧನೆಯ ನಾಗಾ ಲೋಟದಲ್ಲಿ ಕೊನೆ ಉಸಿರು ಎಳೆದವರ ವಿಚಾರ ಒತ್ತಟ್ಟಿಗಿರಲಿ ,, ದರೆ  ತಮ್ಮಗಳ ಫೋಟೋ ಬಾರಿ ಪೇಮಸ್ ಆಗ್ಬೇಕು ಎಂಬ ಹಠ , ಆಶಯ , ಹವಿರ್ಬಾವ ಇದೆ ಯಲ್ಲ ಇದಕ್ಕೆ ಏನ್ ಅನ್ಬೇಕೋ ಗೊತ್ತಾಗಲ್ಲ .. ಅದು ಎಲ್ಲಿಯವರೆಗೆ ಎಂದರೆ ತಮ್ಮ ಪ್ರಾಣ ವನ್ನೂ ಪಣಕ್ಕೆ ಇಟ್ಟು ಫೋಟೋ ಕ್ರೇಜ್ ನಲ್ಲಿ ಮುಳುಗುತ್ತಾರೆ  ಎಂದರೆ ?.. ಬೀಸುವ ಗಾಳಿಯಲ್ಲಿ  ಮುಳುಗೇಳುವ ನೀರಿನಲ್ಲಿ ,ಹಾರಾಡುವ ಆಕಾಶದಲ್ಲಿ ,ವಾಹನಗಲ್ಲಿ ತಮ್ಮ ಛಲ ಬಲ , ವನ್ನು ತೋರ್ಪಡಿಸುವ ಬೇರೆ ವಿಚಾರ ಒಂದಷ್ಟು ತರಭೇತಿ ಪಡೆದು ಅದರಲ್ಲಿ ನಿಪುಣತೆ  ಸಾಧಿಸ ಬೇಕೆಂಬ ಆಲೋಚನೆಯಿಂದ ಅಂತಹ ಒಂದು ಕಾರ್ಯಕಕ್ಕೆ ಕೈ ಹಾಕಿ ಸಕ್ಸಸ್ ಕಂಡವರೂ ಇದ್ದಾರೆ ,ಇದರಲ್ಲಿ ಅಪಾಯ ಕಟ್ಟಿಟ್ಟ ಬುತ್ತಿಯೇ ಆದರೂ , ಅದು ಸಾಮಾನ್ಯವೇ . ಆದ್ರೆ  ಇವುಗಳ  ಬಗ್ಗೆ ಲವಲೇಶವೂ ಗೊತ್ತಿಲ್ಲದೇ   ಪ್ಯಾಶನ್ ಗೋಸ್ಕರ ಇಂತಹ ಒಂದು ಅಪಯಕಾರಿ  ಸನ್ನಿವೇಶದಲ್ಲಿ ಫೋಟೋ ತೆಗಿಸಿ ಕೊಳ್ಳುವ ಚಟ ಕ್ಕೆ ಏನ್ ಅನ್ನ ಬೇಕೋ ಗೊತ್ತಿಲ್ಲ ಪ್ಯಾಶನ್ ಫೋಟೋಗೆ.. ಹೆಚ್ಚ್ಗಾಗಿ ಇದಕ್ಕೆ ಯಂಗ್ ಅಂಡ್ ಅನರ್ಜಿಟಿಕ್  ಯುವಕರು ಮಾತ್ರ ನಮ್ಮ ಕಣ್ಣ ಮುಂದೆ ತೋಚುತ್ತಿದ್ದರೆ ಇದೀಗ ಹೆಣ್ಣು ಹೈಕಳುಗಳೂ ಇದರಲ್ಲಿ ತಲ್ಲಿನರಾಗಿ ಜೀವ ವನ್ನು ಕಳೆದು ಕೊಳ್ಳುತ್ತಿರ್ವಿವುದ ಮಟ್ಟಿಗೆ  ಇಳಿದಿದ್ದಾರೆ ಎಂದರೆ ?  ಘಟನೆಗೆ ಉತ್ತಮ ಉದಾಹರಣೆ ಪುತ್ತೂರಿನಾ ಇಂಜಿನಿಯರಿಂಗ್ ಕಾಲೇಜಿನ ವಿಧ್ಯಾರ್ಥಿನಿಯರನ್ನೇ ನಾವು ಕಾಣ ಬಹುದು .. ಮೊನ್ನೆ ಭಾನುವಾರ ವಿವಿಧ ಬಂಗಿಯಲ್ಲಿ ಫೋಟೋ ವನ್ನು ತೆಗೆಸಿದ್ದು ಸಾಲದೇ ರೈಲು ಹಳಿಯಲ್ಲಿ ಅದೂ ರೈಲು ವೇಗವನೂ ಕಂಡೂ ಫೋಟೋ ಅವಾಂತರ ಹುಚ್ಚಿಗೆ ಪ್ರಾಣ ವನ್ನೇ ಕಳೆದು ಕೊಂಡರೇ , ಇನ್ನು ರಕ್ಷಣೆ ಗೆ ಧಾವಿಸಿದ ಇನ್ನೊಬ್ಬಾಕೆ ಅದೃಷ್ಟ ಚೆನ್ನಾಗಿತ್ತು ಸ್ವಲ್ಪದರಲ್ಲೇ ಸಾವಿನದವಡೆಯಿಂದ ಪಾರಾದರೂ ಕೈ ಮೂಳೆ  ಮುರಿದೆ ಬಿಟ್ಟಿತು,, ಬವಿಷ್ಯ ಮುಂದೆ ಫೋಟೋ ತೆಗಿಯುವಾಗ ಇವಳಿಗೆ ಇದು ಅರಿವಾಗಬಹುದು ಫೋಟೋ ಕ್ಲಿಕಿಸುವ್ದಕ್ಕೆ ಕೈ ಹಿಂಜರಿಯಬಹುದೇನೋ ?! ಇನ್ನು ದುರ್ದೈವಿ ಮ್ರತ ವಿಧ್ಯಾರ್ಥಿನಿ ಯಿಂದ ಉಳಿದವರೂ ಪಾಠ ಕಲಿತಾರೆನೋ ? ಓದಿನಲ್ಲಿ ಮುಂದಿದ್ದ ವಿಧ್ಯಾರ್ಥಿನಿಯರಿಗೆ ಓಡುವ ರೈಲಿನ ಮುಂದೆ ಫೋಟೋ ತೆಗೆದರೆ ,ಶಾಶ್ವತವಾಗಿ ನಮ್ಮ ಫೋಟೋ ಮನೆ ಗೋಡೆಯಲ್ಲಿ ತುಗುತ್ತದೆ ಎಂದು ಅರಿವಾಗದೇ ಇರುವುದು ಕಾಕತಾಳೀಯ. ಉರಿಯುವ ಬೆಂಕಿಗೆ ತುಪ್ಪ ಹಾಕಿದಂತೆ ಹೇಳುವುದು ನನ್ನ ಉದ್ದೇಶ ಅಲ್ಲಕೇವಲ ಒಂದು ಫೋಟೋ ಗೋಸ್ಕರ ತಮ್ಮ ಜೀವನವನ್ನೇ ಪಿನಿಶ್ ಮಾಡಿ ಕೊಳ್ಳು ವುದಿದೆಯಲ್ಲ ಅದು ಹೇಸಿಗೆ ,ಲಜ್ಜೆಗೇಡಿ ತನ .. !! ಬಯಸಿ ಬಯಸಿ ಆಗದೇ ಇದ್ದರೂ ಜಾಗ್ರತೆ ಹಳಿ ತಪ್ಪದಿರಲಿ ,ಇಂಥ ಘಟನೆ ಗಳು ಎಂದೂ ನಡೆಯದಿರಲಿ ಎಂದು ಆಶಿಸೋಣ
ಕೊನೆಯುಸಿರು ಎಳೆಯುವ ಮುಂಚೆ ಕೊನೆಯ ಪೊಟೊ 

ಕೊಳವೆ ಬಾವಿಯೋಳಗೆ ಇನ್ನೊಂದು ಪುಟಾಣಿ : ಮತ್ತದೇ ರಾಗ.. ಆಳುವ ಹಾಳು ವ್ಯವಸ್ತೆಗೆ .?... ಛೀ .. ಶೆಮ್.. ಶೇಮ್ !!!

ಕೇವಲ ಒಂದುವರೆ ತಿಂಗಳುಗಳ ಅವಧಿಯಲ್ಲಿ ಕೊಳವೆ ಬಾವಿಯೇಂಬ ಮ್ರತ್ಯುಕೂಪಕ್ಕೆ ತನ್ನದಲ್ಲದ ತಪ್ಪಿಗೆ ಇನ್ನೊಂದು  ಮಗು ಆಹುತಿ ಯಾಗಿದೆ.  ಛೇ .,ಆಳುವ ಹಾಳು  ವ್ಯವಸ್ತೆಗೆ ಶೆಮ್ ಎಲ್ಲದೇ ವಿಧಿ ಇಲ್ಲ.
ಒಂದುವರೆ ತಿಂಗಳ ಗಳ ಹಿಂದೆ ಆ ಬಿಜಾಪುರದ ಘಟನೆ ಮರೆ ಮಾಚುವ ಮುಂಚೆ ಇಂತಹ ಒಂದು ಘಟನೆ ನಡೆದೆ ಬಿಟ್ಟಿದೆ. ಆ ದಿನ ನಡೆದ ಘಟನೆಯನ್ನು ಮನಸ್ಸಿನಾಳಕ್ಕೆ ಇಳಿಸಿ ಕೊಂಡು ಕೊಂಚ ಅದರ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮ ಕೈ ಗೊಂಡಿದ್ದೇ ಯಾಗಿದ್ದರೇ ಖಂಡಿತವಾಗಿಯೂ ಇಂದು ಬಾಗಲಕೋಟೆಯಲ್ಲಿ ಇಂತದ್ದೊಂದು ಪ್ರಕರಣ ದಾಖಲಾಗುತ್ತಿರಲಿಲ್ಲ. ಕೇವಲ ಖುರ್ಚಿಗಾಗಿ ಕಾದಾಡುತ್ತಿರುವ ಆಳುವ ಸರ್ಕಾರಕ್ಕೆ ಇದರ ಬಗ್ಗೆ ಯೋಚಿಸುವುದಕ್ಕೆ ಸಮಯವಾದರೂ ಎಲ್ಲಿ ಸಿಗುತ್ತದೆ ಹೇಳಿ ? ಮಾಧ್ಯಮಗಳಿಗಿರುವಶ್ಟು ಕಿಂಚಿತ್ ಸದುದ್ದೇಶ ಸರ್ಕಾರಕ್ಕೆ ಇಲ್ಲ. ಪ್ರತಿಯೊಂದು ಹಳ್ಳಿ, ಮೂಲೆ - ಮೂಲೆ ಗಳಲ್ಲಿರುವ ಮ್ರತ್ಯುಕೂಪಗಳನ್ನು ಸಂಬಂದಪಟ್ಟ ಅಧಿಕಾರಿಗಳ ಮುಂದೆ ತಂದರೂ , ಅದರ ಬಗ್ಗೆ ಕ್ರಮಕೈಗೊಳ್ಳಲಾಗದ ಜನಪ್ರತಿನಿಧಿಗ ಳು ಇದ್ದೂ ಏನು ಪ್ರಯೋಜನಾ ?  ಉದಾಹರಣೆಗೆ ಶಿರಹಟ್ಟಿ ಶಾಸಕರ ಹೊಲದಲ್ಲಿ ೪ ಕೊಳವೆ ಬಾವಿಗಳಿದ್ದೂ, ಅದನ್ನೇ ಮುಚ್ಚಲು ಸಾಧ್ಯವಾಗದ ಆತ ಇನ್ನು ಕ್ಶೇತ್ರದ ದಲ್ಲಿರುವ ಕೊಳವೆ ಬಾವಿಯನ್ನು ಅರಸಲು ಸಾಧ್ಯವೇ ? ಆಳುವ ವವರಿಂದ ಖಂಡಿತವಾಗಿಯೂ ನೀರಿಕ್ಶೆ ಮಾಡಲು  ಸಾಧ್ಯವೇ ಇಲ್ಲ . ತಮ್ಮ  ತಮ್ಮ ಊರಿನ ಹೊಲದಲ್ಲಿರುವ ಕಣ್ಣಿಗೆ ತೋಚಿದನ್ನು ನಾವೇ ಅದನ್ನೇ ಗತಿ ಗಾಣಿಸಬೇಕೇ ವಿನಾ: ಸಂಬಂದ ಪಟ್ಟವರ ಕಣ್ತೆರೆಸುವಲ್ಲಿ ಅನಾಹುತ ನಡೆದೇ ಹೊಗಿರುತ್ತದೆ. ಆದ್ದರಿಂದ ಇದರ ಬಗ್ಗೆ ಗಮನ ಹರಿಸೋಣ ಮುಂದಿನ ಒಂದಷ್ಟು ಜೀವವನ್ನು ರಕ್ಶಿಸುವಲ್ಲಿ ಅಳಲು ಸೇವೆ ಮಾಡೋಣ.