ಮಂಗಳವಾರ, ಆಗಸ್ಟ್ 14, 2012

ಅದ್ರಷ್ಟವಂತರ ಜೀವನದಾಟ ಈ ಮೀನುಗಾರಿಕೆ :

ಮೀನುಗಾರಿಕೆ ಎಂದರೆ ಹಾಗೆ ಅದ್ರಷ್ಟವಂತರ ಜಿಂದಗಿಯ ಖೇಲ್ ಅಂತಲೇ ಹೇಳಬಹುದು. ತಮ್ಮ ಜೀವದ ಹಂಗು ತೊರೆದು ನೀರಿಗೆ ಇಳಿಯಬೇಕಾಗುತ್ತದೆ. ಸಮುದ್ರಕ್ಕೆ ತೆರಳಿದ ಮೀನುಗಾರರು ವಾಪಸ್ಸು ಬರುತ್ತಾರೆ ಎಂಬ ಯಾವುದೇ ವಿಶ್ವಾಸವೂ ಇರುದಿಲ್ಲ. ಅದರಲ್ಲೂ ಮುಖ್ಯವಾಗಿ ಆಳಸಮುದ್ರದಲ್ಲಿ ಮೀನುಗಾರಿಕೆಯನ್ನು ನಡೆಸುವ ಮೀನುಗಾರರ ಪಾಡು ಹೇಳತೀರದು. ಸರಿ ಸುಮಾರು 100 ನಾಟಿಕಲ್ ಮೈಲು ದೂರ ಸಾಗುವ ಬೋಟ್, ಹೆಚ್ಚೆಂದರೆ 20 -22 ದಿನ ಮೀನುಗಾರಿಕೆ ನಡೆಸಿ ದಡಸೇರುತ್ತಾರೆ. 

ಸಾಮಾನ್ಯ ವಾಗಿ 10 -15 ದಿನಗಳವರೆಗೆ ಕಾರ್ಯಚರಣೆ ಮುಂದುವರಿಯುತ್ತದೆ. ಹೆಚ್ಚೂ-ಕಮ್ಮಿ 7 -8 ದಿನಗಳವರೆಗಳಂತೂ ಸಮುದ್ರ ವಾಸ ತಪ್ಪಿದ್ದಲ್ಲ. ಅಷ್ಟು ದಿನಕ್ಕೆ ಬೇಕಾಗುವಷ್ಟು ಸಾಮಾನು -ಸರಂಜಾಮುಗಳನ್ನು ಹೊತ್ತುಯ್ಯಲಾಗುತ್ತದೆ. ಒಂದು ಬೋಟ್ ನಲ್ಲಿ 8 ರಿಂದ 10 ಜನ ಇದ್ದೆ ಇರುತ್ತಾರೆ. ಒಂದು ಪ್ರಕಾರದಲ್ಲಿ ಯೋಚಿಸಿದರೆ ಮೀನುಗಾರರ ಜೀವನ ನೀರಿನ ಮೇಲಿನ ಗುಳ್ಳೆಯಂತೆ. ಯಾವಾಗ ಬೇಕಾದರೂ ಒಡೆಯಬಹುದು. ಕಾರ್ಯಾಚರಣೆಯ ಮಧ್ಯೆ ತೂಫಾನ್, ದಟ್ಟಅಲೆ ಆಗಮಿಸಿದರೆ, ಮೋಡ ಮುಸುಕಿ ತೆರಳುವ ಹಾದಿ ಕೆಟ್ಟರೆ, ಷ್ಟಿಮರ್ ಗೆ, ದೋಣಿಗೆ, ಅಚಾನಕ್ ಆಗಿ ಡಿಕ್ಕಿಯಾಗಿ ಅಪಘಾತ ಸಂಭವಿಸುವ ಪ್ರಮೇಯವೂ ಇರುತ್ತದೆ. ಇಂಥ ಅವಘಡ ಹಲವಾರು ಬಾರಿ ಕರಾವಳಿಯಲ್ಲಿ ಸಂಭವಿಸಿದೆ. ಬೋಟ್ ನಲ್ಲಿರುವ ಒಬ್ಬ ಸದಸ್ಯನಿಗೂ ಅನಾರೋಗ್ಯ ಲಕ್ಷಣ ಕಂಡು ಬಂದರೆ ದೇವರೇ ಗತಿ. ಗಂಭೀರ ಪ್ರಮಾಣದಲ್ಲಿ ಆರೋಗ್ಯದಲ್ಲಿ ಏರುಪೇರು ಉಂಟಾದರೆ ಸಮುದ್ರದಲ್ಲಿಯೇ ಕೊನೆಯುಸಿರೆಳಯಬೇಕು. 
 ರಕ್ಷಣೆಗೋಸ್ಕರ ಕಾರ್ಯಚರಣೆಯನ್ನು ಸ್ಥಗಿತಗೊಳಿಸಿ ದಡ ಸೇರಲೇ ಬೇಕಾಗುತ್ತದೆ. ದೂರ ಪ್ರಯಾಣಿಸಿ ಬರಿಕೈಲ್ಲಿ ವಾಪಸು ಬಂದರೆ ನಷ್ಟದ ಹೊಣೆ ಮೀನುಗಾರರೆ ಹೊರಬೇಕು. ಇತ್ತೀಚೆಗಿನ ದಿನಗಳಲ್ಲಿ ವಯರ್ ಲೆಸ್ ಸಾಧನ (walky talky ) ಪ್ರತಿಯೊಂದು ಬೋಟ್ ನಲ್ಲಿ 3 ರಿಂದ 4 ಸೆಟ್ ಅವಶ್ಯಕವಾಗಿದ್ದರೂ, ಕೆಲವೊಮ್ಮೆ ನೆಟ್ ವರ್ಕ್ ತೊಂದೆರೆ ಉಂಟಾಗಿ ಊಟಕ್ಕಿಲ್ಲದ ಉಪ್ಪಿನ ಕಾಯಿಯಂತಾಗುತ್ತದೆ. ಒಟ್ಟಾರೆ ಸಮಸ್ಯೆಗಳ ಸರಮಾಲೆಯಲ್ಲಿ ಕ್ಷಣ -ಕ್ಷಣವೂ ದುಗುಡ -ಆತಂಕದಿಂದ ಸರಿಯಾದ ನಿದ್ದೆ ಆಹಾರ ಬಿಟ್ಟು ದಿನ ದೂಡುವ ಇವರ ಸಾಹಸಮಯ ಜಿಂದಗಿಗೆ ಸೆಲ್ಯೂಟ್ ಹೊಡೆಯಲೇ ಬೇಕು .

ಅಣ್ಣನ ಹೋರಾಟ ಹಿಂದಕ್ಕೆ ?!

ಪ್ರಸ್ತುತ ಶತಮಾನದಲ್ಲೂ ಗಾಂಧೀಜಿಯ ತತ್ವದಡಿಯಲ್ಲಿ ವಿಹರಿಸುತ್ತಾ ,ಜನಮನ್ನಣೆಗಳಿಸಿ  ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದ ,ಅಣ್ಣ ಹಾಜರೆ  'ಆಧುನಿಕ ಗಾಂಧೀ 'ಎಂದೇ ಪ್ರಸಿದ್ಧಿಯನ್ನು ಪಡೆದು ಕೊಂಡರು.
ಬ್ರಷ್ಟಾಚಾರ ಮುಕ್ತ ರಾಷ್ಟ್ರ ಸ್ಥಾಪನೆ .ವಿದೇಶ ದಲ್ಲಿರುವ ಕಪ್ಪು ಹಣವನ್ನು ವಾಪಸು ಪಡೆಯುದರ ಸಲುವಾಗಿ ಕೇಂದ್ರ ಸರ್ಕಾರದ ವಿರುದ್ದ  ಹೋರಾಟದ ಚಾಟಿ ಬೀಸಿದರು .ತನ್ನ ಸಂಗಡಿಗರನ್ನು ಒಳಗೂಡಿ ಆಹಿಂಸಾತ್ಮಕ ಪ್ರತಿಭಟನೆ ನಡೆಸಿದರು .ಉಪವಾಸ ಸತ್ಯಾಗ್ರಹವನ್ನು ಕೆಲಕಾಲ ನಿರ್ಭೀತಿ ಯಿಂದ ನಡೆಸಿದರು .ಬವಿಷ್ಯ ಇಂತದ್ದೊಂದು ಚಳುವಳಿ ಯನ್ನು ದೇಶದಲ್ಲಿ ಸಾಕಷ್ಟು ಮೊದಲೇ ನಡೆಸಬೇಕಿತ್ತು ಎಂದು ಆಲೋಚನೆ ಮಗ್ನರಾದವರು  ಹಲವರು ಜನ .

 ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದ ಮೇಲಾದರೂ ಅಣ್ಣ ನಂತಹ ದೇಶದ ಹಿತ ಚಿಂತಕರ ಕಾರ್ಯಕ್ಕೆ ದೇಶದಲ್ಲೆಡೆ ಸಾಕಷ್ಟು ಬೆಂಬಲ ವ್ಯಕ್ತಗೊಂಡಿತು .ಅಣ್ಣನ ಪ್ರತಿಭಟನೆಯ ಕಾವು  ಕ್ಷಣ ಕಾಲ ಕೇಂದ್ರ ಸರ್ಕಾರದ ಬುಡವನ್ನು ಅಲ್ಲಾಡಿಸಿ ಬಿಟ್ಟಿತು .ಈ ಕ್ರಮವನ್ನು ಕಂಡು ಕೇಂದ್ರ ಮೊಸಳೆ ಕಣ್ಣಿರನ್ನು ಮಿಡಿದು ಬಯಕೆಯನ್ನು ಈಡೇರಿಸುವಲ್ಲಿ ಪ್ರಯತ್ನಿಸುದಾಗಿ ಒಪ್ಪಿ ಕೊಂಡಿತು..ಪ್ರಯತ್ನಕ್ಕೆ ಸಿಕ್ಕ ಫಲ ದಿಂದ ಅಣ್ಣ ಹೂ ನಗೆನ್ನು ಮನಸ್ಸಿನಲ್ಲಿ ಚೆಲ್ಲಿದರು .ಆದರೆ ಭರವಸೆ ಕೊಟ್ಟ ಕೇಂದ್ರ ಸರಕಾರ ಬಯಕೆ ಈಡೇರಿಸುವಲ್ಲಿ ವಿಫಲವಾಯಿತು .ಕೆರಳಿದ ಆಣ್ಣ ಟೀಮ್ ಮತ್ತದೇ ಪ್ರತಿಭಟನೆ ನಿರಶನದ ಹಾದಿ ಮುಂದುವರಿಸಿದರೂ ,ಕೇಂದ್ರ ಯಾವುದೇ ರಿಯಾಕ್ಟ್ ಮಾಡದೇ ನೀರಿನ ಮೇಲೆ ಹೋಮ ಮಾಡಿದಂತ ಪರಿಸ್ತಿತಿ ಉದ್ಭವಗೊಂಡಿತು .ಯಾವದೇ ಒಬ್ಬ ಮನುಷ್ಯ ಎಷ್ಟು ದಿನ ಅಂತ ಉಪವಾಸ ಆಚರಿಸಲು ಸಾಧ್ಯ ?
ಉಪವಾಸ ಬಿಟ್ಟ ಅಣ್ಣ ಈ ವಿಷಯದಲ್ಲಿ ಅಸಾಯಕರಾದರು .ಮನವಲಿಸಲು ಈ ಹೋರಾಟ ಮಾರ್ಗದಿಂದ ಅಸಾಧ್ಯ ಎಂದು ಇಲ್ಲಿಗೆ ಕೈ ತೊಳೆದು ಕೊಂಡುಬಿಟ್ಟರೆ ,ಅಣ್ಣ ತಂಡದವರು ಮಾತ್ರ ಅಣ್ಣನ ಕಿವಿ ಊದಿ ಒಂದು ಸ್ವತಂತ್ರ್ಯ ಪಕ್ಷವನ್ನು ಕಟ್ಟಿ ಚುನಾವಣೆಗೆ ಸ್ವರ್ಧಿಸಿ ಹೋರಾಟ ನಡೆಸುದಾಗಿ ಸಾರಿ ಬಿಟ್ಟರು .ನಿಜಕ್ಕೂ ಅಣ್ಣ ರಾಜಕೀಯ ಸೇರಿ ಹೋರಾಟಕ್ಕೆ ಅನುವಾದರೆ ಇದು ಒಂದು ಕಪ್ಪು ಚುಕ್ಕೆ ಅಣ್ಣನ ಮೇಲೆ ಆವರಿಸುದರಲ್ಲಿ ಯಾವದೇ ಸಂಶಯ ವಿಲ್ಲ .ರಾಜಕೀಯ ಎಂದರೆ (ರಾ -ರಾವಣ ,ಜ-ಜರಾಸಂದ,ಕೀ -ಕೀಚಕ ,ಯ -ಯಮ )ದಂತರರುವ ರಾಕ್ಷಸ ಕೂಟಕ್ಕೆ ಒಬ್ಬ ಸಚ್ಚ ಸೌಧ ಪಂಥದ ಸನ್ನಡತೆಯ ವ್ಯಕ್ತಿ ಬಾಗಿಯಾಗಲು ಅಸಾಧ್ಯ ಮಾತೇ ಸರಿ .
 

ಸತ್ಯತ್ವನ್ನು ಮೆಟ್ಟಿ ಮಿಥ್ಯದ ಹಾದಿ ಯನ್ನೇ  ಹಿಡಿಯ ಬೇಕಾಗುತ್ತದೆ .ಇದು ಅಣ್ಣ ಟೀಂ ಗೆ ಆರೋಗ್ಯಕರ ವಿಚಾರವಲ್ಲ .ಒಂದು ಲೆಕ್ಕಚಾರದ ಪ್ರಕಾರ ಅಣ್ಣ ಇದಕ್ಕೆ ಒಗ್ಗಿಕೊಂಡರೆ ಅಣ್ಣ ನ ಇದುವರೆಗಿನ ಹೋರಾಟಕ್ಕೆ ಯಾವದೇ ಅರ್ಥ ವಿಲ್ಲ ..............

ಹೋ ಸ್ಟೇ ಮೇಲೆ ದಾಳಿ ವಾಸ್ತವ ಸಂಗತಿ ಏನು ?

ಜುಲೈ 28 ರಂದು ಮ೦ಗಳೂರಿನ ಪಡಿಲ್ ನಲ್ಲಿನ ಹೋಂ ಸ್ಟೇ ಮೇಲೆ ದಾಳಿಯ ಪರಿಣಾಮ, ನಾನ ಕಡೆ ಚರ್ಚೆಗೆ ಗ್ರಾಸವಾಗಿತ್ತು ಒಂದೆಡೆ  ಹಿ೦.ಜಾ .ವೇ ಯ ತಪ್ಪೆಂದು ಬಿಂಬಿತವಾದರೆ ಇನ್ನೊಂದೆಡೆ ವಿಧ್ಯಾರ್ಥಿಗಳದ್ದೇ ಮಹಾ ತಪ್ಪು ಎಂದು ಪ್ರತಿಭಟನೆ ವ್ಯಕ್ತ ವಾಗಿದ್ದವು .ಒಟ್ಟಾರೆಯಾಗಿ ಮೇಲ್ ನೋಟಕ್ಕೆ ಹಿ೦.ಜಾ.ವೇ ಯ ತಪ್ಪು ಸಾಬೀತು ಗೊಳ್ಳುವ೦ತಿದ್ದರೂ,ವಿಧ್ಯಾರ್ಥಿ ಗಳದ್ದೂ ತಪ್ಪು ಇಲ್ಲವಂತಿಲ್ಲ ಯಾವತ್ತೂ ಕೆಂಡ ವಿಲ್ಲದೇ ಹೊಗೆ ಯಾಡುದಿಲ್ಲ.ಕರಾವಳಿ ಸಂಘ ಪರಿವಾರಗಳ ನಾಡು .ಸಂಸ್ಕ್ರತಿಯ ರಕ್ಷಣೆ  ಹೆಸರಲ್ಲಿ ಬಗೆ -ಬಗೆಯ ಸಂಘಗಳು ತೊಡಗಿವೆ .ಸಂಸ್ಕ್ರತಿಯ ಉಳಿವಿಗಾಗಿ ಕಾರ್ಯ ನಿರ್ವಹಿಸುತ್ತವೆ .
 ಅಂತೆಯೇ ಉಳಿದ ಸಂಘಟನೆಗಳೂ ಅಷ್ಟೇ ತಲೆ ಎತ್ತಿವೆ .ತಾವೇನೂ ಇತರರುಗಳಿಗೆ ಕಮ್ಮಿ ಇಲ್ಲದಂತೆ ಪೈಪೋಟಿ ನೀಡುತ್ತಿವೆ .ಒಂದು ಲೆಕ್ಕದಲ್ಲಿ ಈ ಪ್ರತಿ ಸ್ವರ್ಧಿ ತನದಿನದಿಂದಲೇ ಇದು ಇಷ್ಟೊಂದು ತಲೆ ಎತ್ತಿದೆ.ಹೋಂ ಸ್ಟೇ ಯಲ್ಲಿನ birthday party ಕರ್ತೃ ಸ್ಥಳೀಯ ವಿಧ್ಯಾರ್ಥಿ .ಆತನ ನಿವಾಸ ಇರುವದು ಮ೦ಗಳೂರಿನಲ್ಲಿಯೇ .ಆತ ತನ್ನ ಸ್ನೇಹಿತರಿಗೆ ಪಾರ್ಟಿ ಕೊಡುವ ಮನಸಿದ್ದರೆ .ತನ್ನ ಸ್ವಂತ ಮನೆಗೆ ಬರ ಹೇಳಬಹುದಿತ್ತು .ಮನೆಗೆ ಆಹ್ವಾನಿಸಿ ಗಮ್ಮತ್ತ್ ಲ್ಲಿ ಆಚರಿಸಬಹುದಿತ್ತು .ಅದೆಲ್ಲ ಬಿಟ್ಟು ಹೋ೦  ಸ್ಟೇ ಯಲ್ಲೇ arrenge ಮಾಡಿದ್ದರ ಗುಟ್ಟೇನು ?bithday ಪಾರ್ಟಿ, ಸಹಜ -ಸಾಮಾನ್ಯವಾಗಿ ಹಿಂದಿನ ದಿನ ರಾತ್ರಿ 12 ಗಂಟೆ ನಂತರ ಮತ್ತು ಮರುದಿನ ಮಧ್ಯಾನದ ಒಳಗೆ ಆಚರಿಸುವ ಪರಿ ಎಲ್ಲಡೆ ಕಾಣ ಸಿಗುತ್ತವೆ .ಆದರೆ ಇವರದ್ದು ಏನೋ diffrent plan ಸಂಜೆ 6 ಗಂಟೆ ಯ ಮೇಲೆ .!
 ಅಷ್ಟಕ್ಕೂ ಅಲ್ಲಿ ಯಾವುದೇ decoration ಆಗಲಿ ,cake ಸೇರಿದಂತೆ ಮತಿತ್ತರ ವಸ್ತುಗಳೇ ಇಲ್ಲ !ವಿಧ್ಯಾರ್ಥಿನೀಯರೂ ಅಷ್ಟೇ ಅವರು ತೊಟ್ಟಿದ್ದ ಉಡುಗೆ -ತೊಡುಗೆಯನ್ನು ಗಮನಿಸುತಿದ್ದರೆ?? ಹಿ೦ .ಜಾ .ವೇ ಯು ದಾಳಿ ಮಾಡಿ ಬಂಧಿಸುವ plan  ನಿಜಕೂ success  ಹಂತವನ್ನು ತಲುಪಿದ್ದರೂ ,ಹಲ್ಲೆ ಮಡಿ ಚಿಕ್ಕ ಎಡವಟ್ ನಿಂದ ಏಕ್ ದಂ flap ನ್ನು ಅನುಭವಿಸಿದ್ದರು .ಹಲ್ಲೆ ಮಾಡಿದ್ದೂ ಒಂದು ಲೆಕ್ಕದಲ್ಲಿ ತಪ್ಪೇಯಾದರೂ ,ಅಲ್ಲಿನ ಪರಿಸ್ಥಿತಿ ಆ ಮಟ್ಟಕ್ಕೆ ದೂಡಿತ್ತು .ಅಲ್ಲಿ ನೆರೆದಿದ್ದ ಒಬ್ಬ್ಬ ವರದಿಗಾರರ ಪ್ರಕಾರ ಒಂದೊಂದು ಹೇಳಿಕೆ,ಅಲ್ಲಿ  5 -6 ,7 -8 -9 ಮಂದಿ ಎಂಬ ವರದಿ ಸಿಕ್ಕರೆ .ನಿಜಕ್ಕೂ ಅಲ್ಲಿ ಜಮಾವಣೆ ಗೊಂಡಿದ್ದು 15 -20 ಕ್ಕೂ ಅಧಿಕ ಎಂಬುದು ಅಲ್ಲಿನ ಸ್ಥಳೀಯ ಪರ್ತ್ಯಕ್ಷದರ್ಶಿಗಳ ಅಭಿಮತ .ದಾಳಿ ನಡೆದ ತಕ್ಷಣ ಎಲ್ಲ ವಿಧ್ಯಾರ್ಥಿಗಳು ಇದ್ದೇನೋ-ಬಿದ್ದೆನೋ ಎನ್ನುತ್ತಾ ,ತಮ್ಮ -ತಮ್ಮ ಚಪ್ಪಲಿ ,ವಾಹನಗಳನ್ನು ಬಿಟ್ಟು ಕಾಲ್ಕಿತ್ತರೆ,ಕೆಲವರು ಒಂದನೇ floor ನಿಂದ ಜಿಗಿದಿದ್ದಾರೆ .ಇದು ಬೇಕಿತ್ತಾ ?
 ಅಪರಾಧಿ ಎಂಬ ಭಾವನೆ ಇದರಿಂದಲೇ ತಿಳಿಯುದಿಲ್ಲವೇ?ಇವರನ್ನು ಹತೋಟಿಗೆ ತರುವದಕ್ಕಾಗಿ,ವಿಧ್ಯಾರ್ಥಿ ಗಳನ್ನೂ ಕ್ರೋಧಿಕರಿಸುವ ಸಲುವಾಗಿ ಅನಿವಾರ್ಯವಾಗಿ ಹಲ್ಲೆ ಮಾಡಲಾಯಿತು ,ಅಟ್ಟಾಡಿಸಿಕೊಂಡು,ಜಬ್ರದಸ್ತ್ ನಲ್ಲಿ ಹಿಡಿದು ಕೊಣೆಯಲ್ಲಿ ಬಂಧಿಸಬೇಕಾಯಿತು ಎನ್ನುದು ಮೂಲ ಗಳಿಂದ ತಿಳಿದು ಬರುತ್ತಿರುವುದು ವಾಸ್ತವಾರ್ಹ ಸಂಗತಿ .ನಮ್ಮದು ತಪ್ಪಿಲ್ಲ ಎಂದ ಮೇಲೆ ಸೀದಾ ಮಧ್ಯಮ ವರದಿಗಾರರ  ಸಮ್ಮುಖ ದಲ್ಲಿ ನಿಂತು ಕೆಮರಾಕ್ಕೆ ಫೋಸು ಕೊಟ್ಟು ಸತ್ಯ ಸಂಗತಿ ಯನ್ನು ಹೇಳ ಬಹುದಿತ್ತು .ಆದರೆ ಇವರಗಳು ಮಾಡಿದ್ದೇನು? ಕುಂಬಳ ಕೈ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡುದೆಂದರೆ ಇದೆ ಅಲ್ವೇ ?