ಮಂಗಳವಾರ, ಆಗಸ್ಟ್ 14, 2012

ಅದ್ರಷ್ಟವಂತರ ಜೀವನದಾಟ ಈ ಮೀನುಗಾರಿಕೆ :

ಮೀನುಗಾರಿಕೆ ಎಂದರೆ ಹಾಗೆ ಅದ್ರಷ್ಟವಂತರ ಜಿಂದಗಿಯ ಖೇಲ್ ಅಂತಲೇ ಹೇಳಬಹುದು. ತಮ್ಮ ಜೀವದ ಹಂಗು ತೊರೆದು ನೀರಿಗೆ ಇಳಿಯಬೇಕಾಗುತ್ತದೆ. ಸಮುದ್ರಕ್ಕೆ ತೆರಳಿದ ಮೀನುಗಾರರು ವಾಪಸ್ಸು ಬರುತ್ತಾರೆ ಎಂಬ ಯಾವುದೇ ವಿಶ್ವಾಸವೂ ಇರುದಿಲ್ಲ. ಅದರಲ್ಲೂ ಮುಖ್ಯವಾಗಿ ಆಳಸಮುದ್ರದಲ್ಲಿ ಮೀನುಗಾರಿಕೆಯನ್ನು ನಡೆಸುವ ಮೀನುಗಾರರ ಪಾಡು ಹೇಳತೀರದು. ಸರಿ ಸುಮಾರು 100 ನಾಟಿಕಲ್ ಮೈಲು ದೂರ ಸಾಗುವ ಬೋಟ್, ಹೆಚ್ಚೆಂದರೆ 20 -22 ದಿನ ಮೀನುಗಾರಿಕೆ ನಡೆಸಿ ದಡಸೇರುತ್ತಾರೆ. 

ಸಾಮಾನ್ಯ ವಾಗಿ 10 -15 ದಿನಗಳವರೆಗೆ ಕಾರ್ಯಚರಣೆ ಮುಂದುವರಿಯುತ್ತದೆ. ಹೆಚ್ಚೂ-ಕಮ್ಮಿ 7 -8 ದಿನಗಳವರೆಗಳಂತೂ ಸಮುದ್ರ ವಾಸ ತಪ್ಪಿದ್ದಲ್ಲ. ಅಷ್ಟು ದಿನಕ್ಕೆ ಬೇಕಾಗುವಷ್ಟು ಸಾಮಾನು -ಸರಂಜಾಮುಗಳನ್ನು ಹೊತ್ತುಯ್ಯಲಾಗುತ್ತದೆ. ಒಂದು ಬೋಟ್ ನಲ್ಲಿ 8 ರಿಂದ 10 ಜನ ಇದ್ದೆ ಇರುತ್ತಾರೆ. ಒಂದು ಪ್ರಕಾರದಲ್ಲಿ ಯೋಚಿಸಿದರೆ ಮೀನುಗಾರರ ಜೀವನ ನೀರಿನ ಮೇಲಿನ ಗುಳ್ಳೆಯಂತೆ. ಯಾವಾಗ ಬೇಕಾದರೂ ಒಡೆಯಬಹುದು. ಕಾರ್ಯಾಚರಣೆಯ ಮಧ್ಯೆ ತೂಫಾನ್, ದಟ್ಟಅಲೆ ಆಗಮಿಸಿದರೆ, ಮೋಡ ಮುಸುಕಿ ತೆರಳುವ ಹಾದಿ ಕೆಟ್ಟರೆ, ಷ್ಟಿಮರ್ ಗೆ, ದೋಣಿಗೆ, ಅಚಾನಕ್ ಆಗಿ ಡಿಕ್ಕಿಯಾಗಿ ಅಪಘಾತ ಸಂಭವಿಸುವ ಪ್ರಮೇಯವೂ ಇರುತ್ತದೆ. ಇಂಥ ಅವಘಡ ಹಲವಾರು ಬಾರಿ ಕರಾವಳಿಯಲ್ಲಿ ಸಂಭವಿಸಿದೆ. ಬೋಟ್ ನಲ್ಲಿರುವ ಒಬ್ಬ ಸದಸ್ಯನಿಗೂ ಅನಾರೋಗ್ಯ ಲಕ್ಷಣ ಕಂಡು ಬಂದರೆ ದೇವರೇ ಗತಿ. ಗಂಭೀರ ಪ್ರಮಾಣದಲ್ಲಿ ಆರೋಗ್ಯದಲ್ಲಿ ಏರುಪೇರು ಉಂಟಾದರೆ ಸಮುದ್ರದಲ್ಲಿಯೇ ಕೊನೆಯುಸಿರೆಳಯಬೇಕು. 
 ರಕ್ಷಣೆಗೋಸ್ಕರ ಕಾರ್ಯಚರಣೆಯನ್ನು ಸ್ಥಗಿತಗೊಳಿಸಿ ದಡ ಸೇರಲೇ ಬೇಕಾಗುತ್ತದೆ. ದೂರ ಪ್ರಯಾಣಿಸಿ ಬರಿಕೈಲ್ಲಿ ವಾಪಸು ಬಂದರೆ ನಷ್ಟದ ಹೊಣೆ ಮೀನುಗಾರರೆ ಹೊರಬೇಕು. ಇತ್ತೀಚೆಗಿನ ದಿನಗಳಲ್ಲಿ ವಯರ್ ಲೆಸ್ ಸಾಧನ (walky talky ) ಪ್ರತಿಯೊಂದು ಬೋಟ್ ನಲ್ಲಿ 3 ರಿಂದ 4 ಸೆಟ್ ಅವಶ್ಯಕವಾಗಿದ್ದರೂ, ಕೆಲವೊಮ್ಮೆ ನೆಟ್ ವರ್ಕ್ ತೊಂದೆರೆ ಉಂಟಾಗಿ ಊಟಕ್ಕಿಲ್ಲದ ಉಪ್ಪಿನ ಕಾಯಿಯಂತಾಗುತ್ತದೆ. ಒಟ್ಟಾರೆ ಸಮಸ್ಯೆಗಳ ಸರಮಾಲೆಯಲ್ಲಿ ಕ್ಷಣ -ಕ್ಷಣವೂ ದುಗುಡ -ಆತಂಕದಿಂದ ಸರಿಯಾದ ನಿದ್ದೆ ಆಹಾರ ಬಿಟ್ಟು ದಿನ ದೂಡುವ ಇವರ ಸಾಹಸಮಯ ಜಿಂದಗಿಗೆ ಸೆಲ್ಯೂಟ್ ಹೊಡೆಯಲೇ ಬೇಕು .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ