ಭಾನುವಾರ, ಆಗಸ್ಟ್ 2, 2020

ಇದರ ಹಿಂದೆ ಇರುವವರ ಕೈವಾಡ ಯಾರದ್ದು ?


ಕರೋನಾ ಕರ್ನಾಟಕಕ್ಕೆ ಕಾಲಿಟ್ಟ ಘಳಿಗೆ ಯಿಂದ ಆಯುರ್ವೇದ ಪಂಡಿತ ಡಾl ಗಿರಿಧರ್ ಕಜೆಯವರು ನನ್ನಲ್ಲಿ ಔಷಧ ವಿದೆ , ನಾನು ಇದನ್ನು ಸಂಪೂರ್ಣವಾಗಿ ಗುಣಪಡಿಸುತ್ತೇನೆ ಎಂದು ಬಹಿರಂಗವಾಗಿ ಸವಾಲ್ ಹಾಕಿದ್ದರು ಅಂತೆಯೇ ಸರಕಾರಕ್ಕೆ ಮನವಿಯನ್ನೂ ಸಲ್ಲಿಸಿದ್ದರು ಆದರೇನು ಮಾಡೋಣ ಹೇಳಿ ದಪ್ಪ ಕಿವಿಯ ಸರ್ಕಾರಕ್ಕೆ ಇದೆನ್ನೆಲ್ಲಾ ಕೇಳುವ ವ್ಯವಧಾನ ವಿರಲಿಲ್ಲ ಯಾವುದರಲ್ಲಿ ಎಷ್ಟು ಪೀಕಬೇಕೋ ಎಂಬ ಆಲೋಚನಾ ಲೋಕದಲ್ಲಿರುವವರಿಗೆ ಇದು ಅರ್ಥವಾಗುವುದಿಲ್ಲ. ಅನುಮತಿಗೆ ಒಂದಷ್ಟು ಸಮಯ ಹಿಡಿಯುತ್ತದೆ ಎಂಬುದನ್ನು ಅಲ್ಲಗೆಳೆಯುವಂತಿಲ್ಲ ,ಸಮಯಕ್ಕೆ ಬೆಲೆ ಇಲ್ಲದಾಗ ಮಾತ್ರ ಅನುಮಾನ ಹೊಗೆಯಾಡುತ್ತವೆ . ದುಡ್ಡು ಮಾಡುವ ಆಸೆಯನ್ನು ಎಳ್ಳಷ್ಟೂ ಹೊಂದಿರದ ಅಪ್ರತಿಮ ,ಪ್ರಾಮಾಣಿಕ ವ್ಯಕ್ತಿ ಡಾ l ಕಜೆಯವರು ಅವರ ವ್ಯಕ್ತಿತ್ವವೇ ಅಂತದ್ದು ಎನ್ನುವುದಕ್ಕೆ ಇಲ್ಲಿರುವ ಕೆಲವು ಉದಾಹರಣೆಯನ್ನು ಗಮನಿಸಬಹುದು .
ಕೋಟಿಗಟ್ಟಲೇ ಸುರಿದರೂ ವಾಸಿಯಾಗದ ಖಾಯಿಲೆ ಕೇವಲ ನೂರು ರೂಪಾಯಿಯಲ್ಲಿ ದಯಪಾಲಿಸುತ್ತಿದ್ದಾರೆ.ಅಷ್ಟು ಮಾತ್ರವಲ್ಲದೇ ಮಾಧ್ಯಮಗಳ ಮೂಲಕ ಮನೆಯಲ್ಲಿ ಹೇರಳವಾಗಿ, ಸುಲಭವಾಗಿ ಸಿಗುವ ಮದ್ದುಗಳನ್ನು ಪ್ರಚಾರ ಪಡಿಸುತ್ತಿದ್ದಾರೆ. ತಮ್ಮ ಬಳಿ ಬರುವ ರೋಗಿಗಳಿಗೆ ಉಚಿತವಾಗಿ ಮೆಡಿಸಿನ್ ನ್ನು ಹಂಚುತ್ತಿದ್ದಾರೆ. ಕೇವಲ ಕರೋನ ದಿಂದ ಮುಕ್ತರಾಗಬೇಕೆಂಬ ಅಭಿಲಾಷೆ ಮನಸ್ಥಿತಿ ಮಾತ್ರ ಅವರಲ್ಲಿದೆ. ಇತ್ತ ಅಪ್ರೂವಲ್ ಗೆ ಛಲ ಬಿಡದ ಇವರು ಸಾಕಷ್ಟು ಬಾರಿ ಸರ್ಕಾರದ ಸಂಬಂಧಪಟ್ಟ ಅಧಿಕಾರಿಗಳ ಹಿಂದೆ ಬಿದ್ದು ,ತಮ್ಮ ಔಷಧದ ಅನುಮತಿಗೆ ಬೇಡಿಕೆ ಇಡುತ್ತಾ ಕಚೇರಿ ಅಲೆದಾಡಿದ್ದರ ಫಲ ಶೃತಿಗಏನೋ ಎಂಬಂತೆ , ಕೊನೆಗೂ ದಾರಿ ಕಾಣದ ಸರ್ಕಾರದ ಸಂಬಂಧ ಪಟ್ಟ ಇಲಾಖೆ ಒಂದು ಶರತ್ತುವಿನ ಅನ್ವಯ ಡಾ l ಕಜೆ ಬಳಿ ಇರುವ ಎಲ್ಲಾ ಈ ಸಂಬಂಧ ಔಷಧವನ್ನು ಸರ್ಕಾರಕ್ಕೆ ಹಸ್ತಾ೦ತರಿಸಬೇಕು ಹಾಗೂ ಸ್ವತಃ ಯಾರಿಗೂ ಕೊಡುವಂತಿಲ್ಲ ಎಂಬ ಸರಕಾರದ ತೀರ್ಮಾನಕ್ಕೆ ಬದ್ಧರಾಗಿ ತಮ್ಮ ಸನಿಹಕ್ಕೆ ಬರುವ ರೋಗಿಗಳಿಗೆ ಔಷಧೋಪಚಾರವನ್ನು ನಿಲ್ಲಿಸಿ ಸರ್ಕಾರದ ದಿಂದಲೇ ಪೂರೈಕೆ ಕಂಡರೆ ಒಂದಿನಿತು ಒಳ್ಳೆದು ಎಂದಾಲೋಚಿಸಿದರೇ ,ಇತ್ತ ನಡೆದಿದ್ದೇ ಬೇರೆ ಕಜೆ ಔಷಧಗಳೆಲ್ಲವೂ ಸರಕಾರದ ಗೋದಾಮಿನಲ್ಲಿ ಬಂಧಿಯಾಯಿತೇ ವಿನಾ: ರೋಗಿಗಳಿಗೆ ತಲುಪಲೇ ಇಲ್ಲ . ಮಾಫಿಯಾದ ಕರಿ ಮೋಡ ಆವರಿಸಿ ಬಿಟ್ಟಿತ್ತು ,ಪಟ್ಟಭದ್ರ ಹಿತಾಸಕ್ತಿಗಳ ನಡುವೆ ಸಿಲುಕಿತು. ಖಾಸಗೀ ಆಸ್ಪತ್ರೆಗಳಿಗೆ ಹೊಡೆತ ಬೀಳುತ್ತದೆ ,ಔಷಧ ತಯಾರಿಸುವ ಕಂಪನಿಗಳಿಗೆ ಬರೆ ಬೀಳುತ್ತವೆ ಎಂಬ ಕಾರಣದಿಂದ ಈ ಔಷಧಿ ಮಾರುಕಟ್ಟೆಗೆ ಬಾರದಿರಲು ಕಾಣದ ಕೈಗಳು ಕೆಲಸ ಮಾಡಿವೆ. ಕೆಲವು ಸೆಲಬ್ರಿಟಿಗಳನ್ನೂ ಸೇರಿದಂತೆ ಅದೆಷ್ಟೋ ರೋಗಿಗಳನ್ನು ಗುಣ ಪಡಿಸಿದ ಡಾ l ಕಜೆಯವರು ಪ್ರಶಂಸಾರ್ಹರು .ಖುದ್ದು ಸಚಿವ ಸಿಟಿ ರವಿಯವರು ಸಹಾ ಮಾಧ್ಯಮದ ಮುಂದೆ ಹೇಳಿದ್ದರು ನಾನು ಡಾ l ಕಜೆಯವರ ಔಷಧ ದಿಂದಲೇ ಗುಣಮುಖನಾಗಿದ್ದೇನೆ ಎಂದು . ಅಸುರರ ಕ್ಷೇತ್ರದಲ್ಲಿ ಜಯ ಲಭಿಸುವುದು ಅಷ್ಟು ಸುಲಭದ ಮಾತು ಅಲ್ಲವೇ ಅಲ್ಲ. ನಮ್ಮವರಿಗೂ ಅಷ್ಟೇ ನಮ್ಮ ಮನೆಯ ಊಟ ಹಿಡಿಸುವುದಿಲ್ಲ ಆಯುರ್ವೇದ ಔಷಧ ನಮ್ಮ ಕೊಡುಗೆ ,ಭಾರತದ ಆಯುರ್ವೇಧ ಪದ್ಧತಿ ಮತ್ತಿನ್ನೇಲ್ಲೂ ಯಾವುದೇ ದೇಶದಲ್ಲಿ ಸಿಗುವುದಿಲ್ಲ. ಅದರದ್ದೇಯಾದ ಮಹತ್ವ ಗುಣ ವಿಶೇಷತೆಗಳಿವೆ . ರೋಗವನ್ನು ಹೊಡೆದು ಓಡಿಸುವ ಶಕ್ತಿ ಇದೆ . ಇಂಗ್ಲಿಷ್ ಮೆಡಿಸಿನ್ ಬಗ್ಗೆ ಹಾತೊರೆಯುವ ನಾವುಗಳು ಇದರ ಬಗ್ಗೆ ಕಿಂಚಿತ್ ಒಲವು ನೀಡಬೇಕಾಗಿದೆ. ಡಾ l ಕಜೆಯವರ ಔಷಧ ಮಾರುಕಟ್ಟೆಗೆ ಬರುವಂತಾಗಲಿ.