ಮಂಗಳವಾರ, ಜುಲೈ 16, 2013

ಎಂದೋ ನಡೆಯಬೇಕಿತ್ತು ?!

 ಇದು ಎಂದೋ  ನಡೆಯಬೇಕಾಗಿತ್ತು ಅಂತೂ ಈಗ ಕಾಲ ಕೂಡಿ ಬಂದಿದೆಯೇನೊ ಎನ್ನಬಹುದು  ಸಂಸ್ಕ್ರತಿ -ಸಭ್ಯತೆಗೆ ಹೆಸರಾದ ಕರಾವಳಿ ಜಿಲ್ಲೆಯಲ್ಲಿ ಒಂದು  ಕ್ರಷ್ಣನ ನಾಡು ಉಡುಪಿ . ಮಣಿಪಾಲ್ ವಿಶ್ವವಿಧ್ಯಾನಿಲಯ ಜಗತ್ಪ್ರಸಿದ್ದ. ರಾಜ್ಯದ ಇತರ ಜಿಲ್ಲೆಗ ಳಿಂದ ಹಾಗೂ ದೇಶದ ಇತರ ರಾಜ್ಯಗಳಿಂದ ಮಾತ್ರವಲ್ಲದೇ ವಿದೇಶಗಳಿಂದಲೂ ವಿಧ್ಯಾರ್ಜನೆಗೆ ಮಣಿಪಾಲ್ ತಾಂತ್ರಿಕ ಮತ್ತು ವೈದ್ಯಕೀಯ ವಿಧ್ಯಾಲಯನ್ನು ಆಶ್ರಯಿಸಿಕೊಂಡಿರುವವರ ಸಂಖ್ಯೆ ಬಲು ದೊಡ್ಡದು.  

'ಮಣಿಪಾಲ್ ಒಂದು ಮಿನಿ ಅಮೇರಿಕಾ '?! : ವಾಸ್ತವಕ್ಕೆ ಮಣಿಪಾಲನ್ನು ಒಂದಿರುಳಿನಲ್ಲಿ ಬೆಲೆ ಕೊಟ್ಟು ಆಲೋಚಿಸಿದರೇ ನಮ್ಮ ಮನ:ಪಟಲದಲ್ಲಿ ಸದ್ದಿಲ್ಲದೇ ಮಣಿಪಾಲ್ ಎಂಬುದು ಮಿನಿ ಅಮೇರಿಕಾ ಎಂಬ ಕಲ್ಪನೆ ಮೂಡಿ ಮರೆಯಾಗದೇ ಇರದು .ಕಾರಣ , ಪಾಶ್ಚತ್ಯ ಸಂಸ್ಕ್ರತಿಯ ಜೊತೆಗೆ ಅದರ ಅಪ್ಪಳಿಕೆಯ ಪ್ರಭಾವವನ್ನು ಹೊಂದಿರುವ ,ಅದಕ್ಕೆ ಮಾರು ಹೋಗುವ ಉಳ್ಳವರ ಪಾಲಿ ನೊಂದಿಗೆ ಮಣಿಪಾಲ್ ಯುನಿವರ್ಸಿಟಿ ಹತ್ತಿರದ ಸಂಬಂಧವನ್ನು ಹೊಂದಿರುವುದರಿಂದ ಅವರುಗಳ ಭಾಷೆ ,ವೇಷ - ಭೂಷಣ ,ತಿಂಡಿ - ತೀರ್ಥ ಎಲ್ಲಾವೂ ಪರಕೀಯ ರೀತಿ -ನೀತಿಯನ್ನು ಅಳವಡಿಸಿ ಕೊಂಡಿದ ಜೊತೆಗೆ ಮಣಿಪಾಲ್ ಒಂದು ಪುಟ್ಟ ಪ್ರಾಂತ್ಯವಾದರೂ ಮುಗಿಲೆತ್ತರಕ್ಕೆ ಪಸರಿಸುತ್ತಿರುವ ಕಟ್ಟಡಗಳು,ಕಾಂಗ್ರೇಟ್  ಕಾಡುನ್ನು ತನ್ನ ತೆಕ್ಕೆಗೆ ಹಾಕಿ ಕೊಳ್ಳುತ್ತಿದೆ , ತುಂಡುಡುಗೆ ಉಟ್ಟು , ಹೆಗಲ ಮೇಲೆ ಕೈ ಹಾಕಿ ಕೊಂಡು ಹೊತ್ತು -ಗೊತ್ತಿಲ್ಲದೇ ಎಲ್ಲೇಂದರಲ್ಲಿ ಅಲೆದಾಡುತ್ತಿರುವ ಜಂಟಿ ,ಒಂಟಿ ನಡುಗೆಯ ವಿದ್ಯಾಮಾನದ ಲ್ಲಿರುವ ಮಣಿಪಾಲ್ ಒಂದು ಮಿನಿ ಅಮೇರಿಕ ಎಂಬ ಭಾವನೆ ಸದ್ದಿಲ್ಲದೇ ಮೊಳಕೆ ಒಡೆಯುತ್ತದೆ . ಇಂತಿಪ್ಪ ಪರಿಸ್ತಿತಿಯಲ್ಲಿ ಅಮೇರಿಕಾದಲ್ಲಿ ಚಾಲ್ತಿ ಯಲ್ಲಿರುವ ಪದ್ಧತಿ ನಮ್ಮಲಿ ಇಲ್ಲದಿರುವದರಿಂದ ಮೊನ್ನೆ ಈ ಅತ್ಯಾಚಾರ ಪ್ರಕರಣ ದಾಖಲಾಗಿರಬಹುದು . ಅಷ್ಟಕ್ಕೂ ವಾಸ್ತವದ ಸಂಗತಿ ಯನ್ನು ಗಮನಿಸುತ್ತಿದ್ದರೆ  ನಡೆದ ಘಟನೆಯೆನೋ ಅಷ್ಟೋಂದು ಮಹತ್ವ ಪೂರ್ಣಾ ವಾದುದ್ದಲ್ಲ. ಹಲವಾರು ದಶಕಗಳ ಇತಿಹಾಸವನ್ನು ಹೊಂದಿರುವ ಈ  ಯುನಿವರ್ಸಿಟಿ ವಿಧ್ಯಾರ್ಥಿಗಳ ನಡವಳಿಕೆಯಿಂದ ಎಂದೋ ಇದು ಅನುರಣಿಸಬೇಕಿತ್ತು.  ಆದರೆ ಮೇಲೆ ತಿಳಿಸಿದಂತೆ ಸಭ್ಯತೆ -ಸಂಸ್ಕರ್ತಿಗೆ ಹೆಸರಾದ  ಬುದ್ದಿವಂತರ ನಾಡಾದುದರಿಂದ  ಮೊನ್ನೆ -ಮೊನ್ನೆ ಜರುಗಿದೆ ಅಷ್ಟೇ.
ಅಷ್ಟಕ್ಕೂ ಅತ್ಯಾಚರಿಗಳದ್ದೇ ಮಹಾನ್ ತಪ್ಪು ಎಂದೇ ಬಿಂಬಿಸಲಾಗುತ್ತಿದೆಯಾದರೂ , ಎರಡು ಕೈ ತಟ್ಟಿದರೆ ಮಾತ್ರ ಚಪ್ಪಾಳೆ ಎಂಬ ಕಿಂಚಿತ್ ಅರಿವು ಮೂಡಬಾರದೇಕೆ ? ಆಕರ್ಷಣೆ / ಆಸ್ಪದ ವಿಲ್ಲದೇ ಯಾವುದೇ ಅತ್ಯಾಚಾರ ಪ್ರಕರಣ ದಾಖಲಾಗಲು ಸಾಧ್ಯವಿಲ್ಲ. ತಪ್ಪು ಎರಡು ಕಡೆಯಿಂದಲೂ ಇದೆ. ಇನ್ನು ಸಂಕ ಮುರಿದಲ್ಲೆ ಸ್ನಾನ ಮಾಡಲು ಬಯಸುವ ಕೆಲವು ಕಾಮಾಂಧರು  ಹಿಡಿದಿಡಲು ಬಹಳ ಕಷ್ಟ. ಮೊನ್ನೆ ಘಟನೆಯ ಬಗ್ಗೆ ಹೇಳ ಬೇಕಂದರೆ ಒಂಬ್ಬಂಟಿಯಾಗಿ ಸಾಗುವ ಅವಶ್ಯಕತೆ ಆ ವಿಧ್ಯಾರ್ಥಿ ನೀಗೆ ಇತ್ತೆ? ಇದನ್ನೆ ಅಸ್ತ್ರವಾಗಿ ಕಾಮ ಪಿಪಾಸುಗಳು ಬಳಸಿ ಕೊಂಡಿದ್ದರು. ದೆಹಲಿಯಲ್ಲಿ ನಡೆದ ಘಟನೆಯೂ ಸಹಾ ಇದಕ್ಕಿಂತ ತೀರ ಭಿನ್ನವಾಗಿರಲಿಲ್ಲ. ಎರಡು ಘಟನೆಗಳೂ ಒಂದೇ ರೀತಿಯದ್ದವು. ಎನೇ ಯಾಗಲಿ ಗಾಂಧೀಜಿ ಕಂಡ ಕನಸು ,ಕನಸ್ಸೇ ಹೊರತು ನನಸಾಗುವುದಿಲ್ಲ. ನಮ್ಮ ತನ ,ನಮ್ಮ ಜಾಗ್ರತೆ ನಮ್ಮಲ್ಲಿದ್ದರೇ ಇಂಥಹ ಅಹಿತಕರ ಘಟನೆ ನಡೆಯದಂತೆ ತಡೆಗಟ್ಟಬಹುದು ಇಲ್ಲದಿದ್ದರೆ ಇದು ನಿಂತ ನೀರಲ್ಲ. 

ವಿಧಾನ ಸೌಧ ಯಾರಪ್ಪನ ಮನೆಯ ಸ್ವತ್ತಲ್ಲ


ಕೆಂಗಲ್ ಹನುಮಂತಯ್ಯನವರ ಕನಸ್ಸಿನ ಕೂಸು ಇದು. ಇವರು ಮುಖ್ಯ ಮಂತ್ರಿ ಯಾಗಿದ್ದ ಸಂಧರ್ಭ ತಮ್ಮ ಆಡಳಿತಾವಧಿಯಲ್ಲಿ ಇದನ್ನು ರಚಿಸಿದ್ದರು  . ಪ್ರಜಾ ಪ್ರಭುತ್ವದ ವ್ಯವಸ್ಥೆಯಡಿಯಲ್ಲಿ ಆರಿಸಿ ಬಂದ ಜನಪ್ರತಿನಿಧಿಗಳನ್ನ ಒಗ್ಗೂಡಿಸಿ ಜನಹಿತಕ್ಕಾಗಿ ಚರ್ಚಾಕೂಟವನ್ನು ಏರ್ಪಡಿಸಲು  ನಿರ್ಮಿಸಲ್ಪಟ್ಟ ಸಂಸತ್ತು ಇದಾಗಿದೆ .
ವಿಶ್ವದಾದ್ಯಂತ  ಸಂಚಾರ ಮಾಡಿ  ಅಲ್ಲಲ್ಲಿನ ಒನಪು ,ವೈಯಾರ ,ವಿಸ್ಮಯ ,ವಿಶಿಷ್ಟತೆಯ ಅರಿವನ್ನು ಅಳವಡಿಸಿ ಕೊಂಡು ಹನುಮಂತಯ್ಯನವರು ರಾಜ್ಯದ ರಾಜಧಾನಿಯಾದ ಬೆಂಗಳೂರಿನ ಹ್ರದಯ ಭಾಗದಲ್ಲಿ 2 ಕೋಟಿ ರೂ. ಗೋ ಅಧಿಕ  ವೆಚ್ಚದಲ್ಲಿ 1956 ರರಲ್ಲಿ ಇದನ್ನು ನಿರ್ಮಿಸಿದರು. ಇಂತಿಪ್ಪ ವಿಧಾನ ಸೌಧ ಅದರದ್ದೇಯಾದ ಗೌರವ ,ಘನತೆಯನ್ನು ಹೊಂದಿದೆ . ಸೌಧವನ್ನು ದೇವಾಲಯವೆಂದೇ ಪರಿಗಣಿಸಲಾಗಿದೆ . ದೈವಭಕ್ತಿ ,ದೈವೀ ನಿಷ್ಠೆಯ ಗೌರವ ಭಾವದ ಪ್ರತೀಕವಾಗಿದೆ  ಎಂದರೆ ಅದು ಅತಿಶಯೋಕ್ತಿಯಾಗಲಾರದು . ಜನಗಳ ಸೇವೆಯೇ ಜನಾರ್ಧನ ಸೇವೆ ಎಂದಾಲೋಚಿಸುವ ಜನಪ್ರತಿನಿಧಿಗಳು ಭಕ್ತಿ ಭಾವದಿಂದಲೇ  ಪ್ರವೇಶಿಸಿ ಧನ್ಯತಾ ಭಾವವವನ್ನು ಮೆರೆಯುತ್ತಾರೆ .   ಅದೇ ಸತ್ಯ .. ಅದೇ ನಿತ್ಯವೂ ಕೂಡಾ ಹೌದು . ಆದರೆ  ಬಹಳ ಬೇಸರದ ವಿಚಾರವೆಂದರೆ ಕಾಲಘಟ್ಟ ಬದಲಾಗುತ್ತಿದೆ . ಕಾಲ ಚಕ್ರದ ಗ್ರಹಗತಿಯಲ್ಲಿ ವಿಧಾನಸೌಧ ಕರಗುತ್ತಿದೆ .. ಮುಮ್ಮುಲ ಮರುಗುತ್ತಿದೆ .
ಸೌಧ ಪ್ರವೇಶಿಸಲು ದೇವರು ಮಾಡಿ ಕೊಟ್ಟ ಅವಕಾಶವೆಂದು ಭಾವಿಸಬೇಕಾದ ಇಂದಿನ ಕೆಲವು ಮಂತ್ರಿ ಮಹೋದಯರು ವಾಸ್ತು ,ಜ್ಯೋತಿಷ್ಯದ ಎಂಬ ಪದ್ದತಿಗೆ ದಾಸರಾಗಿ ವಾಸ್ತು ಶಿಲ್ಪದಂತಿರುವ ವಿಧಾನ ಸೌಧದ ಗೋಡೆಯನ್ನು ಒಡೆಯುವ ಯೋಜನೆಗೆ ಕಟಿ ಬದ್ದರಾಗಿದ್ದಾರೆ  . ಪೂಜನೀಯ ಭಾವದಿಂದ ಅದನ್ನು ಆರೈಕೆ ಮಾಡಬೇಕಾದುದ್ದು ಅವರ ಕರ್ತವ್ಯದ ಜೊತೆಗೆ ,ಜವಾಬ್ದಾರಿಯೂ ಕೂಡಾ ಹೌದು . ಆದರೆ ಇಷ್ಟ ಬಂದಂತೆ ಹೇಸಿಗೆ(ನೀಲಿ ಚಿತ್ರ ವೀಕ್ಷಣೆ ಸೇರಿದಂತೆ  ) ಪ್ರವತ್ತಿಯನ್ನು ತಾಳುತ್ತಿರುವ ಇಂತವರಿಗೆ ಕಠಿಣ ಕಾನೂನು ಇಲ್ಲವೇ ?