ಸೋಮವಾರ, ನವೆಂಬರ್ 9, 2020
ಕೊಹ್ಲಿ ಕೋ ಹಠಾವ್ ಆರ್ ಸಿ ಬಿ ಕೋ ಬಚಾವೋ !
ಹೀಗೊಂದು ಮಾತು ಸಾಮಾಜಿಕ ಜಾಲತಾಣಗಳಲ್ಲಿ ಬಿಗುಗೊಳ್ಳ್ಳುತ್ತಿದೆ . ಕೊಹ್ಲಿ ಅಭಿಮಾನಿಗಳಿಗೆ ಅರಗಿಸಿಕೊಳ್ಳಲಾಗದ ಕಹಿ ಸತ್ಯವಾದರೂ, ಕ್ರಿಕೆಟ್ ಪಂಡಿತ ಲೆಕ್ಕಾಚಾರ ಮೇಲಿನ ಮಾತಿಗೆ ಸಹ ಮತ ನೀಡುತ್ತಿದೆ. ಬದಲಾವಣೆ ಜಗದ ನಿಯಮ ಬದಲಾವಣೆ ಅವಶ್ಯಕ ."ಈ ಸಲ ಕಪ್ ನಮ್ದೇ" ಎಂಬ ಆರ್ ಸಿ ಬಿ ಘೋಷ ವಾಕ್ಯ ಅದೆಷ್ಟೋ ವರ್ಷಗಳಿಂದ ಕೇಳಿ ಬರುತ್ತಿದೆ., ವರ್ಷಗಳಿಂದ ವರ್ಷಕ್ಕೂ ಸಹಾ ಅಭಿಮಾನಿಗಳ ಸಂಖ್ಯೆಯೂ ಬಲ ಗೊಳ್ಳುತ್ತಿದೆ . ಕಪ್ ಮಾತ್ರ ಇಂದಿಗೂ ದಕ್ಕಿಲ್ಲ . ಸಿಗುವ ಮಾತು ಕೂಡಾ ದೂರ. ಎಲ್ಲಿಯವರಿಗೆ ವಿರಾಟ್ ಕೊಹ್ಲಿ ಕ್ಯಾಪ್ಟನ್ ಆಗಿರುತ್ತಾನೋ ಅಲ್ಲಿಯವರಗೆ ಕಪ್ ಕನಸಿನ ಮಾತು ಎಂಬುದು ಕ್ರಿಕೆಟ್ ಪ್ರೇಮಿಗಳ ಉವಾಚ !
ಎಲ್ಲರ ಫೆವರೇಟ್ ತಂಡ ಆರ್ ಸಿ ಬಿ. ಘಟ -ಘಟಾನು ಆಟಗಾರರನ್ನು ಹೊಂದಿರುವ ಬಲಿಷ್ಠ ತಂಡ ಇದು. ಐಪಿಲ್ ಆರಂಭವಾದ ವರ್ಷ 2008ರಿಂದ ಇಂದಿನವರಿಗೆ ಯಾವ ಟೀಂ ಕೂಡಾ ನಿರ್ಮಿಸಿದ ದಾಖಲೆಯನ್ನು ಆರ್ ಸಿ ಬಿ ತನ್ನ ಹೆಸರಿನಲ್ಲಿ ಇರಿಸಿಕೊಂಡಿದೆ. ಆದರೆ ಕಪ್ ಮಾತ್ರ ಕನಸ್ಸಾಗಿಯೇ ಉಳಿದಿದೆ . ಕಳೆದ ಕೆಲವು ವರ್ಷಗಳಿಂದ ಆರ್ ಸಿ ಬಿ ಯಲ್ಲಿ ಕರ್ನಾಟಕದ ಆಟಗಾರರು ಬೆರಳೆಣಿಕೆ ಪ್ರಮಾಣದಲ್ಲಿ ಇದ್ದರೂ, ಕನ್ನಡಿಗರ ಪ್ರೀತಿ ಒಂದಿನಿತೂ ಕಡಿಮೆಯಾಗದೇ ಈ ಸಲವೂ ಕಪ್ ನಮ್ದೇ ಎಂಬ ಘೋಷ ವಾಕ್ಯವನ್ನು ಹೃದಯದಲ್ಲಿ ಅಚ್ಚೋತ್ತಿ ಕೊಂಡಿದ್ದರು .
ಈ ಬಾರಿ ಯಾದರೂ ಖಂಡಿತವಾಗಿಯೂ ಕಪ್ ನಮ್ದೇ ಎಂದು ಭಾವಿಸಿದ್ದರು ಹಲವಾರು ಮಂದಿ. ಪ್ರಥಮ ಪಂದ್ಯದಲ್ಲಿ ಗೆದ್ದು ಬೀಗಿತ್ತು ಎಲ್ಲರ ಮನಃಪಟಲವೂ ಸಹಾ ಸಂತಸದಿಂದ ಭರ್ತಿ ಆಗಿತ್ತು. ಬ್ಯಾಕ್ ಟು ಬ್ಯಾಕ್ ಗೆದ್ದಾಗ ಎಲ್ಲೋ ಈ ಸಲ ಕಪ್ ಮುಡಿಗೇರಿಸಲಿದೆ ಎಂಬಂತ ನೋಟ ಹರಿದಿತ್ತು. ಪಾಯಿಂಟ್ ಟೇಬಲ್ ನಲ್ಲಿ ಎರಡನೇ ಸ್ಥಾನವನ್ನೂ ಅಲಂಕರಿಸಿ ಕೊಂಡಿತ್ತು . ಈ ಸಂಭ್ರಮ ಬಹು ಕಾಲ ಉಳಿಯಲಿಲ್ಲ ಸತತ ನಾಲ್ಕು ಪಂದ್ಯದಲ್ಲಿ ಸೋಲನ್ನು ಒಪ್ಪಿಕೊಂಡಿತ್ತು . ಪ್ಲೇ ಆಪ್ ಪ್ರವೇಶಾತಿ ಕಷ್ಟ ವೆಂಬಂತ ಇದ್ದ ಸ್ಥಿತಿಯಲ್ಲಿ ನೆಟ್ ರನ್ ರೆಟ್ ಆಧಾರದ ಮೇಲೆ ಎಂಟ್ರಿ ಪಡೆದು ಕೊಂಡೇ ಬಿಟ್ಟಿತ್ತು. ಅಂತೂ ನಿರ್ಣಾಯಕ ಎಲಿಮಿಟರ್ ಪಂದ್ಯದಲ್ಲಿ ಸೋತು ಮನೆಯ ದಾರಿ ಹಿಡಿಯಿತು. ಕೋಟ್ಯಂತರ ಅಭಿಮಾನಿಗಳಿಗೆ ನಿರಾಶೆ ಉಂಟು ಮಾಡಿತ್ತು ಎಂದು ಒತ್ತಿ ಹೇಳಬೇಕಾಗಿಲ್ಲ .
ಎಲಿಮೇಟರ್ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಇಳಿದ ಆರ್ ಸಿ ಬಿ Mr.360 ಡಿಗ್ರಿ ಖ್ಯಾತಿಯ ಎ ಬಿ ಡಿ ವಿಲಿಯರ್ಸ್ ಹಾಗೂ ಬೌಲರ್ ಗಳು ಆಸರೆ ಆಗಿ ಕೊನೆ ಹಂತದಲ್ಲಿ ಒಂದಷ್ಟು ಫೈಟ್ ಬಂದರೂ ಮ್ಯಾಚ್ ಕೈ ತಪ್ಪಿ ಹೋಗಿತ್ತು.
ಸೆಲ್ಫಿಶ್ ಕೊಹ್ಲಿ ಯಾವಾಗಲೂ ಅರ್ಥವಿಲ್ಲದ ವಿಭಿನ್ನ ಆಲೋಚನೆಗಳಿಗೆ ಹೆಸರು ಪಡೆದ ವ್ಯಕ್ತಿ . ಎಲೆಮೇಟರ್ ಮ್ಯಾಚ್ ಕೂಡಾ ಇದಕ್ಕೆ ಹೊರತಾಗಿಲ್ಲ ಒನ್ ಡೌನ್ ,ಸೆಕೆಂಡ್ ಡೌನ್ ಗೆ ಬರುವ ಕೊಹ್ಲಿ ಓಪನಿಂಗ್ ಗೆ ಬಂದು ಬಿಟ್ಟ,ಹೋದ ಪುಟ್ಟ ಬಂದ ಪುಟ್ಟ ಅಂತ ಎರಡಂಕಿಯ ರನ್ ಗಳಿಸದೇ ಪೆವಿಲಿಯನ್ ದಾರಿ ಹಿಡಿದು ಬಿಟ್ಟ. ಆರನ್ ಫಿಂಚ್ ಹಾಗೂ ಮೋಹಿನ್ ಆಲಿ ಒಪೆನರ್ ಆಗಿ ಬಂದಿದ್ದರೇ ಒಂದಷ್ಟು ರನ್ ಕಲೆ ಹಾಕುತ್ತಿದ್ದರು . ಅದು ಆಗಲೇ ಇಲ್ಲ . ಇನ್ನು ಬೌಲರ್ ಗಳಲ್ಲೂ ಬದಲಾವಣೆ .ಸಾಕಷ್ಟು ಪಾರ್ಮ್ನಲ್ಲಿದ್ದು, ವಿಕೆಟ್ ಕಿತ್ತು , ರನ್ ಮಳೆಗೆ ಬ್ರೇಕ್ ಹಾಕಿದ್ದ ಮಹಮ್ಮದ್ ಸಿರಾಜ್ ,ಚಂಪಾ ಹಾಗೂ ಮೋಹಿನ್ ಆಲಿ ಓವರ್ ಗಳನ್ನು ತಡೆ ಹಿಡಿದಿದ್ದು ಸೋಲಿಗೆ ಪ್ರಮುಖ ಕಾರಣವಾಯಿತು .,ಹಲವರ ಕೆಂಗಣ್ಣಿಗೆ ಕೊಹ್ಲಿ ಗುರಿಯಾಗಿದ್ದರು. ಒಂದೆಡೆ ಬಂಡೆಯಂತೆ ನಿಂತಿದ್ದ ಹೋಲ್ಡರ್ ಹಾಗೂ ವಿಲ್ಯಮ್ಸನ್ ಜೋಡಿಯಲ್ಲಿನ ಒಂದು ವಿಕೆಟ್ ಉರುಳಿದ್ದರೆ ಪಂದ್ಯ ಆರ್ ಸಿ ಬಿ ಪಾಲಾಗುತ್ತಿತ್ತು ಅದಾಗದಿರುವದಕ್ಕೆ ಮುಖ್ಯ ಕಾರಣ ಕ್ಯಾಪ್ಟನ್ ಕೊಹ್ಲಿ ! ಇದು ಕೇವಲ ಕೆಲವು ಸ್ಯಾಂಪಲ್ ಉದಾಹರಣೆ ಅಷ್ಟೇ .ಇಂತದ್ದೇ ಈ ಸೀಸನ್ ನಲ್ಲಿ ಬಹಳಷ್ಟು ತಪ್ಪು ನಿರ್ಧಾರಗಳನ್ನು ತೆಗೆದು ಕೊಂಡಿದ್ದರು. ಇದು ಕೊಹ್ಲಿಗೆ ಕ್ಯಾಪ್ಟನ್ ಪಟ್ಟ ಸಿಕ್ಕ ವರ್ಷದಿಂದಲೂ ಅದೇ ಹಾಡು ಅದೇ ರಾಗ.!
ವಿರಾಟ್ ಕೊಹ್ಲಿ ಟಿ-20,ಒನ್ ಡೇ ,ಟೆಸ್ಟ್ ಎಲ್ಲದರಲ್ಲೂ ಅಗ್ರ ಕ್ರಮಾಂಕದ ಆಟಗಾರ ಎಂಬುದನ್ನು ತಳ್ಳಿ ಹಾಕುವಂತಿಲ್ಲ ., ಆದರೆ ಐ ಪಿ ಎಲ್ ನಲ್ಲಿ ಮಾತ್ರ ತೀರಾ ಕಳಪೆ ಪ್ರದರ್ಶನ . ನಾಯಕತ್ವದಲ್ಲಿ ವೈಫಲ್ಯತೆ ಎದ್ದು ಕಾಣುತ್ತದೆ , 2013ರಲ್ಲಿ ಕೊಹ್ಲಿಗೆ ಆರ್ ಸಿ ಬಿ ಯ ಕ್ಯಾಪ್ಟನ್ ಪಟ್ಟ ದೊರಕಿತ್ತು . 2016ರಲ್ಲಿ ಫೈನಲ್ ಪ್ರೇವೇಶಿಸಿ ,ರನ್ನರ್ ಅಪ್ ಆಗಿದ್ದು ಹೊರತು ಪಡಿಸಿದರೆ, ಮತ್ತೆಂದೂ ತಲೆ ಎತ್ತವ ಗೌಜಿಗೆ ಹೋಗಿಲ್ಲ. ಸಿ ಎಸ್ ಕೆ ತಂಡದ ಕ್ಯಾಪ್ಟನ್ ಎಂ ಎಸ್ ದೋನಿ ಮೂರು ಬಾರಿ ಚಾಂಪಿಯನ್ ಆಗಿದ್ದರೇ , ರೋಹಿತ್ ಶರ್ಮ ಸಾರಥ್ಯದ ಮುಂಬಾಯಿ ಇಂಡಿಯನ್ಸ್ ನಾಲ್ಕು ಬಾರಿ ಕಪ್ ಎತ್ತಿದ್ದರು .ಕೊಹ್ಲಿಗೆ ಆ ಯೋಗ್ಯತೆ ಇನ್ನೂ ಬಂದಿಲ್ಲ . ಟೀಂ ಗಟ್ಟಿ ಇದ್ದರೇನು ನಿರ್ವಹಿಸುವ ಕೌಶಲ್ಯ ಮುಖ್ಯ . ಅದಕ್ಕೆ ದಿ ಗ್ರೇಟ್ ಕೊಹ್ಲಿ ಅನರ್ಹ .
ಟೀಮ್ ಇಂಡಿಯಾದಲ್ಲಿ ಕೊಹ್ಲಿ ನಾಯಕನಾಗಿ ಕೆಲವೊಂದು ಪಂದ್ಯ ಜಯಿಸಿದ್ದರೂ, ಅದರ ಫಲಶ್ರುತಿ ದೋನಿ ಎಂಬ ಮಾಂತ್ರಿಕನದ್ದು ಅಷ್ಟೇ ಎನ್ನುತ್ತಾರೆ ಲೆಂಜೆಡ್ ಕ್ರಿಕೆಟರ್ಸುಗಳು . ದೋನಿ ಇಲ್ಲದ ಭವಿಷ್ಯದ ಟೀಂ ಇಂಡಿಯಾ, ಕೊಹ್ಲಿ ನೇತೃತ್ವದಲ್ಲಿ ಮ್ಯಾಚ್ ಹೇಗೆ ದಡ ಸೇರತ್ತೋ ಕಾದು ನೋಡೋಣ ?!
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳು (Atom)
