ಸೋಮವಾರ, ಆಗಸ್ಟ್ 6, 2012

ಪತ್ರಕರ್ತರ ಮೇಲೆ ಕೇಸು ದಾಖಲಿಸಿದ ಕಾನೂನು ಇಲಾಖೆಗೆ ದಿಕ್ಕಾರ ..

ಮೊನ್ನೆ ಜುಲೈ 28 ರಂದು ಹಿ೦ .ಜಾ. ವೇ ಯ ಕಾರ್ಯಕರ್ತರು ಮ೦ಗಳೂರಿನ ಹೋಂ ಷ್ಟೇ ಮೇಲೆ ದಾಳಿ ನಡೆಸಿದ ಪ್ರಕರಣ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬುದ್ದಿವಂತ ಜಿಲ್ಲೆಯ ಕರಾಳ ಮುಖ ಪರಿಚಿಸಲ್ಪಟ್ಟಿತು. ಇದರಲ್ಲಿ ತಪ್ಪು ಎನ್ನುವ ಅಂಶ ಒಂದೆಡೆ ಮೇಲ್ನೋಟಕ್ಕೆ ಹಿ೦ .ಜಾ. ವೇ. ಯಿಂದ ಉಂಟಾಗಿದ್ದರೆ  ಪಾರ್ಟಿ ನಡೆಸುತ್ತಿದ್ದ ವಿಧ್ಯಾರ್ಥಿಗಳಿಂದಲೂ  ತಪ್ಪು ಇಲ್ಲವಂತಲ್ಲ ,ಬೆಂಕಿ ಇಲ್ಲದೆ ಹೊಗೆಯಾಡದು .ಒಟ್ಟಾರೆ  ತಪ್ಪಿತಸ್ತರನ್ನು ಬಂಧಿಸಿ ಸೂಕ್ತ ಶಿಕ್ಷೆಗೆ ಗುರಿ ಪಡಿಸಬೇಕಾಗಿದ್ದ ನಮ್ಮ ಆರಕ್ಷಕ ದಳದವರು ಪ್ರಾಥಮಿಕವಾಗಿ ಈ ಘಟನೆಯನ್ನು ಚಿತ್ರೀಕರಿಸಿದ ಕಸ್ತೂರಿ ವಾಹಿನಿಯ ನವೀನ,tv9 ನ ರಾಜೇಶ  ಸೇರಿ ಮತ್ತಿಬ್ಬರು ಪತ್ರಕರ್ತರ ವಿರುದ್ಧ ಒಟ್ಟು 4 ಜನರ ಮೇಲೆ ಕೇಸು ಜಡಿದು ಬಿಟ್ಟಿದ್ದಾರೆ .ನಮ್ಮ ವಾಹಿನಿಗೆ ನಮ್ಮ ಪತ್ರಿಕೆಗೆ ಒಂದು exclusive  ಸುದ್ದಿ ನಮಿಂದ ಸಿಗಲಿ ಎಂಬ ಉದ್ದೇಶ ಇರಬಹುದು ,ನಮ್ಮ ಕರ್ತವ್ಯವನ್ನು ಆದಷ್ಟು ಗುಣಮಟ್ಟದಿಂದ ಪಾಲಿಸಬೇಕೆಂಬ ಹೋರಾಟವೂ  ಇರಬಹುದು.
ಸಮಾಜದ ಕುಂದು ಕೊರತೆಯನ್ನು ಕೊಂಚ ಮಟ್ಟದಲ್ಲಿ ತಿದ್ದುವಲ್ಲಿ ,ಜಾಗ್ರತೆ ಮೂಡಿಸುವಲ್ಲಿ ಜನಹಿತ ಕಳಾ -ಕಳಿ ಯಿಂದ ತಮ್ಮ ಕೈಲಾದಷ್ಟು ಅಳಿಲು ಸೇವೆ ಮಾಡವ ಇವರಗಳಿಗೆ ಮುಖ್ಯ ವಾಗಿ ಯಾವ ರಕ್ಷಣೆಯೂ ಇಲ್ಲ .ಎಲ್ಲೊ ಅಪಘಾತ ,ಆಘಾತ ಸಂಬವಿಸಿದಾಗ ಕೇವಲ ಪತ್ರಕರ್ತ ಸಂಘ ಕಂಬನಿ ಮಿಡಿಯುತ್ತದೆ ವಿನಹ..ಇನ್ನ್ಯರದ್ದೆ ಸುಖ ನುಡಿ ಅನಪೇಕ್ಷಿತ .ಒಟ್ಟಾರೆಯಾಗಿ ಮೊನ್ನೆ ನಡೆದ ಘಟನೆಯಲ್ಲಿ ಜೀವದ ಹಂಗು ತೊರೆದು ಘಟನಾ ವಿವರವನ್ನು ಕಲೆ ಹಾಕಿದ ಈ ಪತ್ರಕರ್ತ ಬಂಧುಗಳಿಗೆ ಪಾರಿತೋಷಕ ವಿರಲಿ ,ಒಂದೊಳ್ಳೆ ಮಾತನ್ನು ಹೇಳುವದನ್ನು ಬಿಟ್ಟು ಇವರಗಳ ಮೇಲೆಯೇ ಅಪರಾಧಿ ಎಂಬ ಹೆಣೆ ಪಟ್ಟಿಯನ್ನು ನೀಡಿದ್ದು ಎಷ್ಟು ಸಮಂಜ ಸ ಎಂಬ ಪ್ರಜ್ಞಾವಂತರ ಪ್ರಶ್ನೆಗೆ ,ಕಾನೂನು ಇಲಾಖೆ ಉತ್ತರ ಹೇಳಬೇಕಾಗಿದೆ. ಈ ವರಧಿಗಾರರು ಮೊನ್ನೆಯ ಈ ಕಹನಿಯನ್ನು ತೋರಿಸದಿದ್ದರೆ ಖಂಡಿತವಾಗಿಯೂ ಅಲ್ಲಿ ನಡೆದ ಸ್ವಷ್ಟ -ಸ್ವಚ್ಛ ಘಟನಾ ವಿವರ ಏನೆಂಬುದು ಯಾರಿಗೂ ಅರ್ಥವಾಗುತ್ತಿರಲಿಲ್ಲ ,ಹಾಗೆ ಅದರಲ್ಲಿ ಪಾಲ್ಗೊಂಡ ಕಿಡಿಗೆಡಿಗಳನ್ನು ಬಂಧಿಸುವಲ್ಲಿ ಇವರುಗಳ ಕ್ಯಾಮರದ ಕೈ ಚಾಲಕ ಸಹಕಾರಿಯಗಿತ್ತಲ್ಲವೇ? ಈ ಒಂದು ಘಟನೆಯಿಂದ ಎಲ್ಲರ ಮನೆ -ಮನಗಳಲ್ಲಿ ಜಾಗ್ರತೆ ಮೂಡಿಸುವ ಒಂದು ಅರಿವಿನ ವೇದಿಕೆಯೂ ಆಗಿದೆ ಎನ್ನುದರಲ್ಲಿ ಎರಡು ಮಾತಿಲ್ಲ.ಇಂತವರಿಗೆ ಒಂದು ಮೆಚ್ಚುಗೆಯ ಮಾತನಾಡುದನ್ನು ಬಿಟ್ಟು ಇವರಗಳ ವಿರುದ್ಧವೇ  ಕೇಸು ದಾಖಲಿಸಲು ಸಫಲರಾಗಿರುವ ಕಾನೂನು ಇಲಾಖೆಗೆ,  ಈ ಕ್ರತ್ಯದ ಹಿಂದಿರುವ ಕಾಣದ ಕೈ ಗಳ,ಬಾಗಿಯಾದ ವ್ಯಕ್ತಿಗಳ ಬಂಡವಾಳ ಬಯಲಾಗುತ್ತದೆ ಎಂಬ ರಕ್ಷಣಾತ್ಮಕ ಕಾರ್ಯವಾಗಿರಬಹುದೇ ? ಸಂಶಯದ ಹೊಗೆಯಾಡುತ್ತಿದೆ.

ತಪ್ಪಿತಸ್ತರನ್ನು ಕಾನೂನಿಗೆ ಗುರಿಪಡಿಸಿ . ಈ ತರಹದ ಘಟನೆ ಶಾಶ್ವತವಾಗಿ ಮರುಕಳಿಸದಿರಲಿ


                                    ಬುದ್ದಿವಂತರ ನಾಡಲ್ಲಿ ಅರಗಿಸಿಕೊಳ್ಳಲಾಗದ ಘಟನೆ


ಇತ್ತೀಚಿಗೆ ನಡೆದ ಗುವಾಹಾಟಿ ಪ್ರಕರಣದಿಂದ ಮೂಗಿನ ಮೇಲೆ ಬೆರಳನಿಟ್ಟು .ಇಂತದೊಂದು ಉಗ್ರತನ ದುರ್ಘಟನೆ ನಮ್ಮಲ್ಲೂ ಚಳಪಳಿಸುತ್ತದೆಯೇ ಎಂದು ಕೋಪ -ಆವೇಶ -ಆಕ್ರೋಶ ಹತಾಶೆ ಗಳನ್ನೂ ಕೋಟಿ ಹೃದಯಗಳು ಅರಗಿಸಿಕೊಳ್ಳುತ್ತಿರುವ ಮಧ್ಯೆ ಗಾಯದ ಮೇಲೆ ಬರೆ ಎಳೆದಂತೆ ಮಂಗಳೂರಿನ ಪಡಿಲ್ ನ ಹೋಂ ಷ್ಟೇ ಮೇಲೆ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರ ಹಿಂಸಾತ್ಮಕ ರೀತಿಯಲ್ಲಿ ನಡೆದುಕೊಂಡ ಚಿತ್ರಣವನ್ನು ಗಮನಿಸುತ್ತಿದ್ದರೆ ,ನಿಜಕ್ಕೂ ಎಂತವನಿಗಾದರೂ ಹೃದಯ ಕಲ್ಲಾಗದೇ ಇರಲಾರದು.
ಸಂಸ್ಕ್ರತಿ -ಸಬ್ಯೆತೆಗೆ ಹೆಸರು ಪಡೆದ ಕರ್ನಾಟಕ ಅದರಲ್ಲೂ ಬುದ್ದಿವಂತರ ನಾಡಾದ ಕರಾವಳಿಯಲ್ಲಿ ನಡೆದ ಈ ಘಟನೆಯನ್ನು ಸಹಿಸಿ ಕೊಳ್ಳುದಾದರೂ ಹೇಗೆ ? ರೇವ್ ಪಾರ್ಟಿ ನಡೆಯುತ್ತಿದೆ  ಎಂಬ ವರ್ತಮಾನ ಮೇರೆಗೆ ಅಲ್ಲಿಗೆ ದಾವಿಸುವ ಸಂ ಸ್ಕ್ರತಿ ರಕ್ಷಕರು ಎಂದು ಹಣೆಪಟ್ಟಿ ಯಲ್ಲಿದ್ದ ಹಿ೦ .ಜಾ .ವೇ  ಮೊದಲು ಪೋಲಿಸ್ ಇಲಾಖೆ ಗೆ ಸುದ್ದಿ ಮುಟ್ಟಿಸ ಬೇಕಿತ್ತು .ತಮ್ಮ ಘನ೦ದಾರಿ ಕೆಲಸವನ್ನು ಕ್ಲಿಕ್ ಮಾಡಿಕೊಳ್ಳ ಬೇಕೆಂದು ಪ್ರೆಸ್ /ಮೀಡಿಯಾದ ಜೊತೆ ತೆರಳುವ ಉದ್ದೇಶ ವಾದರೂ ಏನು ?ಒಳ ನುಗ್ಗಿ ಏಕಾ-ಎಕಿ ಹಲ್ಲೆ ನಡೆಸುದರ ಬದಲು ಅಲ್ಲಿನ ಸನ್ನಿವೇಶ ,ವಿವರವನ್ನು ಪಡೆಯ ಬೇಕಿತ್ತು ..ಅಟ್ ಲಿಸ್ಟ್ ವಿಧ್ಯಾರ್ಥಿಗಳ  ಮಾತನ್ನು ಆಲಿಸಲಾದರೂ  ಪುರಸೊತ್ತು ನೀಡದೇ ತಾಲಿಬಾನ್ ರೀತಿಯಲ್ಲಿ ಮನ ಬಂದಂತೆ ತಳಿಸಿ ,ವಿಧ್ಯಾರ್ಥಿಗಳ ,ಅದರಲ್ಲೂ ಹೆಣ್ಣು ಮಕ್ಕಳ ಬಟ್ಟೆಯನ್ನು ವಿವಸ್ತ್ರ ಗೊಳಿಸಿದ್ದು ಅಟ್ಟಾಡಿಸಿಕೊಂಡು ಹಲ್ಲೆ ನಡೆಸಿದ್ದೂ ನಿಜಕ್ಕೂ ಖಂಡನೀಯ . .
ಘಟನೆಗೆ  ಹಿ .ಜಾ .ವೇ ಯು ನಮ್ಮ ಪಾತ್ರವಿಲ್ಲ ಇದರಲ್ಲಿ ದುಷ್ಟಶಕ್ತಿಗಳ ಕೈವಾಡ ವಿದೆ .ಎಂದು ಸಮರ್ಥಿಸಿಕೊಂಡಿದೆಯಾದರೂ, ಭಾಗವಹಿಸಿದ ಎಲ್ಲ ಕಿಡಿ ಗೆಡಿಗಳನ್ನು ಬಂದಿಸಬೇಕು ನಂತರ ಸತ್ಯವನ್ನು ಹೊರ ಹಾಕಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು .ಈ ಕ್ರತ್ಯವನ್ನು ಎಸಗಿದ ಇವರುಗಳಿಗೆ ಅಕ್ಕ -ತಂಗಿಯರಿಲ್ಲವೆ?ಅಥವಾ ಆಕಾಶದಿಂದ ಬಿದ್ದವರೇ ?ತಾಯಿ ಹೆಣ್ಣಲ್ಲವೇ ? ಹಿಂದೂ ಸಂಘಟನೆಯ ಹೆಸರಿನ ವರ್ತನೆ ಇದು ಮೊದಲಿನದ್ದೇನೂ ಅಲ್ಲ ಈ ಹಿಂದೆ 2009 ಜನವರಿ 24 ರಂದು ಬಲ್ಮಟ ದ ಪಬ್ ಮೇಲೆ ಶ್ರೀ ರಾಮ ಸೇನಾ ಕಾರ್ಯ ಕರ್ತರ ದಂಡು ದಾಳಿ ನಡೆಸಿತ್ತು.ಆ ಸಮಯದಲ್ಲೇ ಒಂದು ಬಿಗು  ಕಟ್ಟು -ನಿಟ್ಟಾ ದ ಕ್ರಮ ಕೈ ಗೊಂಡಿದ್ದರೆ, ಪ್ರಾಯಷ: ಇವತ್ತಿನ ಈ ಘಟನೆ ನಡೆಯುತ್ತಿರಲಿಲ್ಲವಿತ್ತೇನೋ ? ಅಷ್ಟಕ್ಕೂ ಇವರರುಗಳ ವಿರುದ್ದ ಕ್ರಮ ಕೈ ಗೊ ಳ್ಳುದಾದರೂ ಹೇಗೆ? ಕೈ ಗೊಳ್ಳುವವರಾದರು ಯಾರು? ಎಂಬ  ಪ್ರಶ್ನೆ ಮೂಡುತ್ತಿದೆ  ಕರ್ನಾಟಕದ ಬಿಜೆಪಿ ಸರ್ಕಾರಕ್ಕೆ ಇವರುಗಳೇ ದಾರಿ ದೀಪ ಸಂಘ ಪರಿವಾರಗಳ  ಪಾರ೦ಪರ್ಯವಿಲ್ಲದೆ ಬಿಜೆಪಿ ಸೆಟ್ಟೆರಲು  ಸಾದ್ಯವಿಲ್ಲ
ತಪ್ಪಿತಸ್ತರ ವಿರುದ್ದ ಕ್ರಮ ಜರುಗಿಸಿದರೆ ಬಿಜಿಪಿ ಅಶಕ್ತಿದಾಯಕವಾಗುತ್ತದೆ  ಹೀಗಾಗಿಯೇ ಏನೋ ಇಷ್ಟೊಂದು ಎತ್ತರಕ್ಕೆ ಮೀರಿ ಈ ರೀತಿಯ ಘಟನೆಗಳು ಮರುಕಳಿಸಲು ಆಡಳಿತ ಪಕ್ಷ ಸಾಕ್ಷಿ ಭೂತವಾಗುತ್ತಿದೆ .ಇವತ್ತಿನ ಈ ಘಟನೆಯನ್ನು ಇಲ್ಲಿಗೆ ಬಿಟ್ಟರೆ ಮುಂದೆ ಈ ಸಂಘಟನೆ ಗಳು ಒಂಟಿ ಮನೆಯ ಮೇಲೆ ದಾಳಿ ಮಾಡಿ ಹೆಂಗಳೆಯರನ್ನು ಮಾನ ಬಂಗ ಮಾಡದೇ ಇರಲಾರರು ಎಂಬುದಕ್ಕೆ ಯಾವುದೇ ಅನುಮಾನ ವಿಲ್ಲ . ಸಮಾಜದ ಹಿತಕ್ಕಾಗಿ  ಕಾರ್ಯನಿರ್ವಹಿಸುತ್ತವೆ ಎಂಬ ಹಣೆ ಪಟ್ಟಿಯನ್ನು ಹೊಂದಿದ್ದರೆ  ಮಲ್ಪೆ ಯಲ್ಲಿ ನಡೆದ ರೇವ್ ಪಾರ್ಟಿಯನ್ನು ನಿಲ್ಲಿಸ ಬಹುದಿತ್ತು ,ವಿಧಾನ ಸೌದದಲ್ಲಿ ಬ್ಲೂ ಫಿಲ್ಮ ನೋಡುತಿದ್ದ ಸಚಿವರ ವಿರುದ್ಧ ಹೊರಡಬಹುದಿತ್ತು  ಆಗ ಎಲ್ಲಿಗೆ ಹೋಗಿತ್ತು ಇವರುಗಳ ಕೆಚ್ಚದೆಯ ವೀರತನ ?



ಜಂಗಲ್ ಜಾಕಿ ಗೆ ಏನಾಯಿತು ?

ಸಮಯ 8 ಗಂಟೆಯಾದರೆ ಸಾಕು ಸಮಸ್ತ ವೀಕ್ಷಕರು ಟೀವಿಯ  ಮುಂದೆ ಕೂರುತ್ತಾ ಯಾವಾಗ ರಾಜೇಶ್ ಬರ್ತಾನೆ ? ಅವನ  ನಡೆ -ನುಡಿಯನ್ನು ಆಲಿಸಬೇಕು ಛಲ-ಕುತೂಹಲ -ಆತುರ -ಕಾತರ ಬೆಟ್ಟದಷ್ಟು ಕೂಡಿರುತಿತ್ತು ಆತನ ಚಿತ್ರಣ ಮುಗಿದ ತಕ್ಷಣ ಮುಂದಿನ ದಿನಕ್ಕೆ ಇದೆ ಕಿಚ್ಚಿನ ವಾತಾವರಣವನ್ನು  ಮುಂದುವರಿಸುತಿತ್ತು .ಯಾವುದೇ ಟಾಸ್ಕ್ ನಲ್ಲಿ ಈತ ಸೋಲದಂತೆ ದೇವರಲ್ಲಿ ಹರಕೆ ಹೊತ್ತವರು ಅಧಿಕ ಜನ.ಆತನೇ ಪ್ರಥಮ ಬಹುಮಾನ ಗೆಲ್ಲಲಿ ಎಂದು ಆಶಯ ,ಹಾರೈಕೆ ಯನ್ನು ಹೊಂದಿದವರು ಬಹಳಷ್ಟು ಮಂದಿ.ಅಂತೂ ಸಾಕಷ್ಟು ಜನರ ಹಾರೈಕೆ ,ಆಶಿರ್ವಾದದ ಫಲದಿಂದ ಆತ ರಿಯಾಲಿಟಿ ಶೋ ಗೆದ್ದು 10 ಲಕ್ಷ ಬಹುಮಾನ ಪಡೆದೆ ಬಿಟ್ಟ .
ಅಂದ ಹಾಗೆ ಈ ಸ್ಟೋರಿ ಹೇಳುತ್ತಿರುವದು 2 ವರ್ಷದ ಹಿಂದೆ ಸುವರ್ಣ ವಾಹಿನಿಯಲ್ಲಿ ಪ್ರಸಾರ ಕಾಣುತಿದ್ದ 'ಹಳ್ಳಿ ಹೈದ ಪ್ಯಾಟಿಗ್ ಬಂದ ' ಎಂಬ ರಿಯಾಲಿಟಿ ಷೋ ವಿಜೇತ ರಾಜೇಶನ ಬಗ್ಗೆ.ಈ ರಿಯಾಲಿಟಿ ಶೋ ಎಷ್ಟು ಜನಪ್ರಿಯವಾಗಿದ ಎಂದರೆ ,ಬಹಳಷ್ಟು ಜನ ಈತನ ನಡವಳಿಕೆಯನ್ನು ಮೆಚ್ಚಿ ಹರಿಸಿದ್ದರು ..ಈತನೂ ಅಷ್ಟೇ ಒಂತರ ಜೋಕರ್  ತರಹ ಅರ್ದ ಮಾನಸಿಕ ಸ್ಥಿಯಲ್ಲಿಯನ್ನೇ  ಆ ಸಮಯದಲ್ಲಿ ಹೊಂದಿದ್ದ. ಆತನ ಕೆಲವಂದು ನಡವಳಿಕೆಯನ್ನು ಗಮನಿಸುತ್ತಿದ್ದರೆ ಆಗಲೇ ಅರಿವಾಗುತ್ತಿತ್ತು . ದೌರ್ಭಾಗ್ಯ ಎಂದರೆ ಆತ ಈಗ ಪೂರ್ಣ ಮಾನಸಿಕ ಅಸ್ವಸ್ಥನಾಗಿ ಮೈಸೂರಿನ ಕೆ .ಆರ್ .ಆಸತ್ರೆ ಯನ್ನು ಸೇರಿದ್ದಾನೆ .ಮಾನಸಿಕ ರೋಗಿಗಳ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ . ಅಂದ ಹಾಗೆ ಈ ರಾಜೇಶ್ ಎನ್ನುವವನು ಮೈಸೂರು ಜಿಲ್ಲೆ ಹೆಚ್ಚ್.ಡಿ .ಕೋಟೆ ಯಲ್ಲಿನ ದಟ್ಟ ಕಾನನದಲ್ಲಿ ಪ್ರಾಣಿ -ಪಕ್ಷಿಗಳೊಡನೆ ಬೆಳೆದ ಗಿರಿಜನ ಯುವಕ .ಕಾಡಿನಲ್ಲಿ ಸಿಕ್ಕ ಗೆಡ್ಡೆ -ಗೆಣಸುಗಳನ್ನು ತಿಂದು ,ಹರಿಯುವ ಹೊಳೆಯ ನೀರನ್ನು ಕುಡಿದು ಜೀವನ ಸಾಗಿಸುತ್ತಿರುವ ಈ ಯವಕನ್ನು ಸಿಟಿ ಗೆ ತಂದರೆ  ಕಾಲ ಕಳೆಯುದಾದರೂ ಹೇಗೆ ? 
ಅಂತೆಯೇ ರಿಯಾಲಿಟಿ ಶೋ ವಿನ್ ಆದ .ಹಾಗೆಯೇ   ಇವನ ವಿಚ್ಚಿದ್ರ ಕಾರಿ ನಡವಳಿಕೆ ಯಿಂದ ಅಪಾರ ಅಭಿಮಾನಿ ಬಳಗವನ್ನು ಪಡೆದನು.ರಿಯಾಲಿಟಿ ಶೋ ನಲ್ಲಿ ಕ್ಲಿಕ್ ಆಗಿದ್ದೆ ತಡ ನಿರ್ದೇಶಕ ರವಿ ಕಡೂರು ಈ ಜೋಡಿಯನ್ನು ಇಟ್ಟು ಒಂದು ಸಿನಿಮ ಮಾಡಿದರೆ ಹೇಗಿರುತ್ತೆ ಎಂದು ಲೆಕ್ಕಚಾರ ಹಾಕಿ 'ಜಂಗಲ್ ಜಾಕಿ ' ಅನ್ನುವ ಒಂದು ಅವನ ಸುತ್ತಲು ಹೆಣೆಯಲಾದ ಕತೆಯನ್ನು ಕಟ್ಟಿ ಸಿನಿಮಾ ನಿರ್ಮಾಣಕ್ಕೆ ತೊಡಗಿದರು .ಸಿನಿಮಾ 2 ವರ್ಷದಿಂದ ಶೂಟಿಂಗ್ ನಡೆಯುತ್ತಿದ್ದರೂ ಬಿಡುಗಡೆ ಕಾಣುವ ಲಕ್ಷಣವಿಲ್ಲ .ರಾಜಿಶ್ನಿಗೆ ಒಂದು ಕಡೆ ಪ್ಯಾಟೆಯ ಸಿನಿಮ ಸಹವಾಸ ,ಇನ್ನೊಡೆದೆ ಹಳ್ಳಿಯ ಜೀವನದ ತಾಕಲಾಟ ಒಂದು ರೀತಿಯಲ್ಲಿ ಎಲ್ಲಿಯೂ ನೆಲೆ ಸಿಗದೇ ಅತಂತ್ರ ಪರಿಸ್ತಿತಿಯನ್ನು ಹೊಂದಿದನು . ಇನ್ನೊಂದೆಡೆ ಮಾದುವೆಯೂ ಬೇರೆ ಮಾಡಿ ಕೊಂಡಿದ್ದನು .2 ವರ್ಷ ಕಳೆದರೂ ಚಿತ್ರ ಬಿಡುಗಡೆ ಕಾಣಲಿಲ್ಲ ಎಂಬ ನೋವು ಬೇರೆ ಮಡುಗುಟ್ಟಿತ್ತು
 
ಇನ್ನು ಆತನ ಸ್ನೇಹಿತರು ,ಅಭಿಮಾನಿಗಳು ಚಿತ್ರ ಎಂದು ರೀಲಿಜ್ ಎಂದು ಪದೇ-ಪದೇ ಕೇಳುತ್ತಿದ್ದರು .ಮೊದಲೇ ಅರೆ ಮಾನಸಿಕ ಅದರೊಳಗೆ ಈ  ಪ್ರಶ್ನೆಗಳ ಸರಮಾಲೆ ಬೇರೆ .ಈ  ಎಲ್ಲ ಒತ್ತಡ ,ಆಘಾತದಿಂದ ಪೂರ್ಣ ಬುದ್ದಿ ಬ್ರಮಣೆ ಯಾಗಿ ಬಿಟ್ಟಿದ್ದಾನೆ ಎಂದು ಆತನ ಹಾವ -ಬಾವ ,ಆಳ -ಅಂತರಾಳವನ್ನು ಅರಿತವರಿಗೆ ಅರ್ಥವಾಗುತಿತ್ತು .ನಿಜಕ್ಕೂ ಇದರಲ್ಲಿ ಯಾರದ್ದು ತಪ್ಪು ? ರಾಜೇಶನದ್ದೇ ?ರಿಯಾಲಿಟಿ ಬಳಗದ್ದೇ?ಸಿನಿಮಾದ್ದೇ ?ಯಕ್ಷ ಪ್ರಶ್ನೆ ಗೆ ಉತ್ತರ .. ಯಾವನಿಗ್ ಗೊತ್ತು ?