ಮೂರುವರೆ ವರ್ಷಗಳಲ್ಲಿ ಮೂಗಿನ ಮೇಲೆ ಬೆರಳು ಇಟ್ಟುಕೊಳ್ಳುವಂತೆ ಮಾಡಿದ ಭಾರತದ ಪ್ರಥಮ ಪ್ರಧಾನ ಮಂತ್ರಿ....
ಮೂರು ವರ್ಷಗಳ ಕೆಳಗಿನ ಮಾತು ಆದಾಗಲೇ ಗುಜರಾತ್ ರಾಜ್ಯವನ್ನು ಅಭಿವೃದ್ದಿ ಪಡಿಸಿ ಉತ್ತುಂಗಕ್ಕೆ ಕೊಂಡು ಒಯ್ದಿದ್ದ ,ಸತತ ಮೂರನೇ ಬಾರಿಯೂ ಮುಖ್ಯಮಂತ್ರಿಯಾಗಿ ಗಮನ ಸೆಳೆದಿದ್ದ ಸರೆಂದ್ರ ಮೊದಿಯೆಂಬ ಎಂಬ ಸಾಮಾನ್ಯ ವ್ಯಕ್ತಿಯ ಹೆಸರು ಭವಿಷ್ಯದ ಬಾರತದ ಪ್ರಧಾನಿಯಾದರೆ ಹೇಗೆ ? ಎಂಬ ವಿಚಾರ ಗುನುಗಿತ್ತಿತ್ತು ಹೆಚ್ಚಿನ ಸಮಯ ಬೇಕಾಗಿರಲಿಲ್ಲ ಪ್ರಧಾನಿ ಕುರ್ಚಿ ಚಾಯಿವಾಲಾ ಮೋದಿಯನ್ನು ಅರಸಿ ಕೊಂಡು ಬರುವುದಕ್ಕೆ.. ತತ್ಸಮಯದ ಪ್ರಜ್ಞಾವಂತರಲ್ಲಿ ಸಾಕಷ್ಟು ಉತ್ತರ ವಿಲ್ಲದ ಪ್ರಶ್ನೆಗಳೇ ಹರಿದಾಡಿದ್ದವು ಕೇವಲ ಗುಜರಾತ್ ರಾಜ್ಯವನ್ನು ಅಭಿವುದ್ಧಿ ಪಡಿಸಿದಂತೆ ಅರ್ಥಾತ್ ಒಂದೇ ರಾಜ್ಯವನ್ನು ಆಳಿದಂತೆ ತಮ್ಮ ಕೈಯಲ್ಲಿ ಈಗ ಮೂವತ್ತು ರಾಜ್ಯದ ವಸ್ತುವಾರಿಯನ್ನು ನಿಭಾಯಿಸಲು ಸಾಧ್ಯವೇ ? ಎಂಬಿತ್ಯಾದಿ ವ್ಯಂಗ್ಯ ರೀತಿಯ ಪ್ರಶ್ನಾವಳಿ, ಆಲೋಚನೆಗಳು ಓಡಾಡಿದ್ದಮ್ತೂ ಸತ್ಯ .ಆದರೆ ಮೋದಿ ಎಲ್ಲವನ್ನೂ ಸುಳ್ಳು ಮಾಡಿ ಕೇವಲ ಮೂರುವರೆ ವರ್ಷಗಳಲ್ಲಿ ಮೂಗಿನ ಮೇಲೆ ಬೆರಳು ಇಟ್ಟುಕೊಳ್ಳುವಂತೆ ಮಾಡಿದ್ದಾರೆ. ಮೋದಿ ಮೊದಲು ಮಾಡಿದ ಕಾರ್ಯವೇ ದೇಶ ಪರ್ಯಟನೆ . ಹೌದು!, ಮೋದಿಗೇನು ದೇಶ ತಿರುಗಾಡ ಬೇಕೆಂಬ ಹಂಬಲ ,ವಾಂಛೆ ಇತ್ತೇ ? ಯಾಕೆ ಕಾಲಿಗೆ ಚಕ್ರ ಕಟ್ಟಿ ಕೊಂಡಂತೆ ದೇಶವನ್ನು ಸುತ್ತುತ್ತಿದ್ದರಲ್ಲ ಎಂಬಂತ ವ್ಯಂಗ್ಯ ನುಡಿ ಇದ್ದರೂ ಒಂದೇ ದಿನದಲ್ಲಿ ಮೂರು ದೇಶವನ್ನು ಸುತ್ತಿ ಬಂದದ್ದೂ ಎಲ್ಲವೂ ದಾಖಲೆ ಯಾದರೂ ಇದರ ಹಿಂದಿನ ಮರ್ಮ ಮೋದಿ ಗಲ್ಲದೇ ಬೇರೆ ಯಾರಿಗೂ ತಿಳಿಯದು . ಮೋದಿ ಆಲೋಚನೆಯೇ ಬೇರೆ ಶತ್ರುಗಳನ್ನೂ ಮಿತ್ರರನ್ನಾಗಿಸುವ ಕಾರ್ಯಕ್ಕೆ ಕೈಂಕರ್ಯ ತೊಟ್ಟಿದ್ದು ಶತ್ರು ದೇಶವನ್ನೂ ಬಿಡದೇ ಸ್ನೇಹ ಸಂಪಾದಿಸಿ ಅಲ್ಲಿನವರ ಅಭಿಮಾನದ ಜೊತೆಗೆ ಅಭಿರುದ್ಧಿಗೆ ಬೇಕಾದ ಟಿಪ್ಸ್ ಗಳನ್ನೂ ಆಯ್ದು ಕೊಂಡು ಬಂದ ಮೊದಲಿಗ ಮೋದಿ ಎಂದರೂ ತಪ್ಪಾಗಲಾರದು .
ಸ್ವಚ್ಹ ಬಾರತ ಎಂದು ಪೊರಕೆ ಹಿಡಿದಾಗ ಸೆಲೆಬ್ರೇಟಿ ಗಳಿಂದ ಹಿಡಿದು ಸಾಮನ್ಯ ನಾಗರಿಕನೂ ,ರಾಜಕೀಯ ಪಂಡಿತರೂ ಎ.ಸಿ ರೂಂ ಕಾರ್ಮಿಕರೂ ಅಲ್ಲದೇ , ಇನ್ನೂ ಪೊರಕೆಯನ್ನು ಕಾಣದ ಮಹಾನುಭಾವರು ಕೂಡ ಹಿಡಿ ಕಟ್ಟನ್ನು ಹಿಡಿಯುವಂತೆ ಮಾಡಿದ ಛಾತಿ ಕ್ರತು ಶಕ್ತಿ ಕೆವಲ ಮೋದಿಗಲ್ಲದೇ ಬೇರಾರಿ೦ದಲೂ ಸಾಧ್ಯವೇ ? ಮೋದಿಯ ಯೋಗ ದಿನದ ಆಚರಣೆಗೆ ಭಾರತ ಮಾತ್ರ ವಲ್ಲದೇ ಮೋದಿಯನ್ನು ದೂಷಿಸುವವ್ರಲ್ಲದೇ ಐಟಿ -ಬೀಟಿ ಕಂಪನಿಗಳೂ ಸೇರಿದಂತೆ ಜಗತ್ತಿನ 192 ದೇಶಗಳು ಪಾಲ್ಗೊಳ್ಳುವಂತೆ ಮಾಡಿದ್ದೂ ಪ್ರಶಂಸೆಯ ಮಹಾ ಪೂರವನ್ನು ಹರಿಯುವಂತೆ ಮಾಡಿದ ಡಿ ಗ್ರೇಟ್ ಮೋದಿ ಬುದ್ದಿಮತ್ತೆ ಅಲ್ಲದೇ ಮತ್ತಿನೇನು ?.
ಒಟ್ಟಾರೆ ವಿವರಿಸುತ್ತಾ ಹೋದರೆ ಅದೊಂದು ಧಾರಾವಾಹಿಯೇ ಆಗಬಹುದು ಸಿಂಪಲ್ ಆಗಿ ಮೂರುವರೆ ವರ್ಷಗಳಲ್ಲಿ ಭಾರತ ಕಂಡ ಅದ್ಬುತ ಜನ ಸೇವಕ ಮೋದಿ ತಂದ ಜನೋಪಯೋಗಿ ಯೋಜನೆಯ ಹೈಲೈಡ್ಸ್ ಗಮನಿಸುವುದಾದರೆ . ಕ್ಲೀನ್ ಇಂಡಿಯಾ , ಸಿಲ್ಕ್ ಇಂಡಿಯಾ , ಮೆಕ್ ಇಂಡಿಯಾ , ಜನಧನ ಯೋಜನೆ , ಡಿಜಿಟಲ್ ಇಂಡಿಯಾ , ಆದರ್ಶ ಗ್ರಾಮ ಯೋಜನೆ. ಒನ್ ಬ್ಯಾಂಕ್ , ಒನ್ ಪೆನ್ಶನ್ , ಫಸಲ್ ಬೀಮಾ ಯೋಜನೆ, ಅಟಲ್ ಪೆನ್ಶನ್ ಯೋಜನೆ, ದೀನ್ ದಯಾಳ್ ಯೋಜನೆ, ಸ್ಮಾರ್ಟ್ ಅಪ್ಹ್ ಇಂಡಿಯಾ, ಬೇಟಿ ಬಚಾವೋ , ಬೇಟಿ ಪಡಾವೋ ಯೋಜನೆ, ಬುಲೆಟ್ ಟ್ರೈನ್ ಎಲ್ಪಜಿ , ಮನೆ ಮನೆಗಳಲ್ಲೂ ಗ್ಯಾಸ್ ಒಲೆಯನ್ನು ಉಚಿತವಾಗಿ ಪರಿಚಯಿಸಿದ ಪುಣ್ಯಾತ್ಮ .ಇಷ್ಟೆಲ್ಲಾದ ನಡುವೆಯೂ ಏಟಿಗೆ ಎದುರೇಟು ನೀಡಿದ ಕ್ರಾಂತಿಕಾರಿ , ಬಾರತದ ಸಿಪಾಯಿಗಳ ಮೇಲೆ ಪಾಕಿಸ್ತಾನಿ ಉಗ್ರರು ನಡೆಸಿದ ಘೋರ ಹತ್ಯಾ ಕಾಂಡಕ್ಕೆ , ಬಂದೂಕಿಂದಲೇ ಉತ್ತರ ಕೊಟ್ಟದ್ದೂ ನಿಜಕ್ಕೂ ದಾಖಲೆಯೇ ಸರಿ ಕೇವಲ ರಾತ್ರಿ ಬೆಳಗು ಆಗುವಷ್ಟರಲ್ಲಿ ಸರ್ಜಿಕಲ್ ಸ್ಟ್ರೈಕ್ ಮುಖಾಂತರ ಪಾಕಿ ಸ್ತಾನಿ ನೆಲದಲ್ಲೇ ನಮ್ಮ ಸಿಪಾಯಿಗಳಿಂದ ಸುಮಾರು ಹದಿನೆಂಟಕ್ಕೂ ಅಧಿಕ ಉಗ್ರರ ಮಾರಣ ಹೋಮ ನಡೆಸಿ ಬಿಟ್ಟಿ ಎದೆಗಾರಿಕೆ ಈ ಹಿಂದಿನ ಯಾವ ಪ್ರಧಾನಿಯಲ್ಲಿತ್ತು ?
ಯಾವೊಬ್ಬ ಮಾಡದ ಊಹಿಸಲಾರದ ದೇಶವನ್ನೇ ಗಡ ಗಡ ನಡುಗಿಸಿದ ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ಅoದ್ರೆ ಅದು ಬ್ಲಾಕ್ ಮನಿ ಉಳ್ಳವರ ನಿದ್ದೆ ಗೆಡಿಸಿದ್ದ, ಜಗತ್ತಿನಾದ್ಯಂತಸಂಚನ ಮೂಡಿಸಿದ ಮಹ್ಹಾನ್ ಕಾರ್ಯ .. ಕಾಳಾ ಧನ್ ವಾಪಸಾತಿ ! 500 1000 ಮುಖ ಬೆಲೆಯ ನೋಟುಗಳನ್ನು ತುರ್ತಾಗಿ ನಿಲ್ಲಿಸಿ ಹೊಸ ಬಗೆಯ ನೋಟುಗಳನ್ನೂ ಬಿಡುಗಡೆ ಯೋಚಿಸಿದ ರೀತಿ ನಿಜಕ್ಕೂ ಪ್ರಶಂಸನೀಯ ! ಇದು ಎಂದೂ ಆಗಬೇಕಿತ್ತು , ಭಾರತಾಂಬೆಯ ಮಡಿಲಿನಲ್ಲಿ ಇಂತಹ ದಿಟ್ಟ ಶೂರ ವೀರಾಧಿವೀರ ಒಬ್ಬ ಪ್ರಧಾನಿ ಇದ್ದನೇಯೇ ? ಈತ ಸಾಕಾಷ್ಟು ವರ್ಷಗಳ ಮೊದಲೇ ಪಟ್ಟವನ್ನು ಅಲಂಕರಿಸಬೇಕಿತ್ತು ,ಬಾರತ ಎಲ್ಲೋ ಹೋಗುತ್ತಿತ್ತು
ಇದೂವರೆಗೂ ಯಾವೊಬ್ಬ ಪ್ರಧಾನ ಮಂತ್ರಿ ಮಾಡದ ಕಾರ್ಯಕ್ಕೆ ಕೈ ಹಾಕಿ ಸಕ್ಸಸ್ ಹಾದಿಯಲ್ಲಿ ಮಿನುಗುತ್ತಿರುವ ನರೇಂದ್ರ ಮೋದಿ ಯ ಮಕುಟಕ್ಕೆ ಮತ್ತೊಂದು ಗರಿಬಂದಂತಾಗಿದೆ . ಒಂದೆರಡು ವಾರ ಸಾಮಾನ್ಯ ನಾಗರಿಕರಿಗೆ ಕೊಂಚ ಸಂಕಷ್ಟ ತಂದರೂ ಮುಂದಿನ ದಿನಗಳಲ್ಲಿ ಶ್ರೀಮಂತರೆನಿಸಿ ಕೊಂಡಿರುವವರಿಂದ ಜೀತ ಪದ್ಧತಿ ರಕ್ತ ಹೀರುವ ಬುದ್ದಿಗೆ ಕಡಿವಾಣ ಬೀಳುವುದು ವಿಪರ್ಯಾಸ ವಾದರೂ ವಾಸ್ತವ ! ಒಂದೆರಡು ವಾರ ಇದರಿಂದ ಸಾಮಾನ್ಯ ನಾಗರಿಕನಿಗೆ ನಿಜವಾಗಿಯೂ ಕಷ್ಟ ಇದ್ದೇ ಇರುತ್ತದೆ . ದೇಶದ ಮುಂದಿನ ಬವಿಷ್ಯಕಾಗಿ ನಾವು ಇದನ್ನು ಅರಗಿಸಿ ಕೊಳ್ಳಲೆ ಬೇಕು ..
ದಿನವೀಡಿ ಕೆಲಸ ಕಾರ್ಯವನ್ನು ಬಿಟ್ಟು ನೋಟ್ ಚೇಂಜ್ ಗೆ ಕಾಯಬೇಕಾ ದಾರೂ ಇದೊಂದು ನಮ್ಮಿಂದ ದೇಶಕ್ಕೆ ಸಲ್ಲುತ್ತಿರುವ ಸೇವೆ ಎಂದು ಆಲೋಚಿಸಿ ಈ ಒಂದು ಯೋಜನೆಯ ಜೊತೆಗೆ ಕೈ ಜೋಡಿಸ ಬೇಕಾಗಿದೆ . ಸಮಾಜ ಸೇವೆ ದೇಶ ಸೇವಕರೆದು ಹಣೆ ಪಟ್ಟಿಯಲ್ಲಿರುವವರು ಈಗ ಸಿಕ್ಕ ಅವಕಾಶವನ್ನು ಉಪಯೋಗಿಸಿ ಕೊಂಡು ,ವಯಸ್ಸುಆದವರಿಗೆ, ಮಹಿಳೆಯರಿಗೆ ,ಮಕ್ಕಳಿಗೆ ತಮ್ಮಿಂದ ಆದಷ್ಟು ಸಹಾಯವನ್ನು ನೀಡಬಹುದು ಇದು ನನ್ನ ದೇಶ ಸಲ್ಲಿಸುತ್ತಿರುವ ಕಿಂಚಿತ್ ಸೇವೆ ಎಂದು ಮನಗಾಣ ಬೇಕು .ಇಂತಹ ಅವಕಾಶ ಮುಂದೆಂದೂ ದೊರಕದು .ಹತ್ತುಹೆಗಲುಗಳು, ಹತ್ತುಮನಸುಗಳುಒಂದಾಗಬೇಕಷ್ಟೆ.
ಕೊನೆಯ ಮಾತು
ಮೋದಿ ನಿಮಗಿದೋ ಕೋಟಿ ಕೋಟಿ ನಮಸ್ಕಾರ
ಬೆಚ್ಚಿ ಬೀಳಿಸಿತ್ತು ಜಗತ್ತನ್ನು ಏಳರ ರಾತ್ರಿಯ ಆ ಸುದ್ದಿ
ಭಾರತಾ೦ಬೆಯ ಮಡಿಲಿನಲ್ಲಿತ್ತು ಮೋದಿ ಎಂಬ ಪ್ರಧಾನಿಯಲ್ಲಿ ಮಾತ್ರ ಆ ಬುದ್ದಿ!
ಜನಸೇವಕ ಭಾರತದ ಕುಲ ಪುತ್ರ ಒನ್ ಅಂಡ್ ಓನ್ಲಿ ಈ ಮ್ಯಾನ್
ಮಾಡಿಯೇ ಬಿಟ್ಟರು ಐತಿಹಾಸಿಕ ದಾಖಲೆ , ಕ್ಷಣಮಾತ್ರದಲ್ಲೇ ನೋಟ್ ಬ್ಯಾನ್ !
ದೇಶದಾದ್ಯಂತ ಕೇಳಿಬರುತ್ತಿತ್ತು ಶತಮಾನಗಳಿಂದ ಕಳಾಧನದ ಸದ್ದು
ಎದೆ ಗುಂದದೇ ನಿರ್ಬೀತಿಯಿಂದ ಕೊಟ್ಟೇಬಿಟ್ಟರು ದೊಡ್ಡವರ ಎದೆಗೆ ನೇರ ಗುದ್ದು !
ಪ್ರಸ್ತುತ ಪರಿಸ್ತಿತಿಯಲ್ಲಿ ಅರ್ಥವಾಗುತ್ತಿದೆ ಜನ ಸಾಮಾನ್ಯರೇ ನಿಮ್ಮ ಸಂಕಷ್ಟ ನಮಗಿಂದು
ಭವ್ಯ ಬಾರತದ ಕನಸ್ಸಿಗೆ ,ಅಭಿರುದ್ಧಿ ಪಥಕ್ಕೆ ಸಾಕು ಈ ಸೇವೆ ಮುಂದೆಂದೂ !
ಉಳ್ಳವರಿಂದ ಇಲ್ಲದವರಿಗೆ ಕಳಚಿ ಕೊಂಡಿತು ತಿರಸ್ಕಾರ ಭಾವ , ಧನಿಕರಿಂದ ಒದಗಿಸಿದ ಈ ಪುರಸ್ಕಾರ
ದೇಶ ಕಂಡ ಅದ್ಬುತ ಪ್ರಧಾನಿ ,ಯುಗಪುರುಷ ಮೋದಿ ನಿಮಗೆ ಕೋಟಿ ಕೋಟಿ ನಮಸ್ಕಾರ !
ಕೋಪ ಬಿಡಿ ಕ್ಯೂ ನಲ್ಲಿ ನಿಲ್ಲಿ ಇದು ನನ್ನ ದೇಶ ಸೇವೆ ಎಂದು ಸಹಿಸಿ
ಇದು ನಿಮ್ಮಿಂದ ಸಾಧ್ಯ ,ನೋಟು ದೊರೆಗಳನ್ನು ಅಳಿಸಿ ದೇಶವನ್ನು ಉಳಿಸಿ !
