ಬುಧವಾರ, ಅಕ್ಟೋಬರ್ 7, 2020
ಅನುಶ್ರೀಯೂ.. ಡ್ರಗ್ಸೂ..!
ಸ್ಟಾರ್ ನಿರೂಪಕಿ ಅನುಶ್ರೀ ಹೆಸರು ಡ್ರಗ್ಸ್ ಜಾಲದಲ್ಲಿ ತಳಕು ಹಾಕಿ ಕೊಂಡಿದ್ದರ ವಿಚಾರ ಈಗ ಭಯಂಕರ ಸುದ್ದಿಯಾಗಿ ಹರಡಲಾರಂಭಿಸಿದೆ. ಮಾದಕ ಜಾಲಕ್ಕೆ ಸಂಬಂಧ ಪಟ್ಟಂತೆ ಕೊರಿಯೋ ಗ್ರಾಫರ್ ಕಿಶೋರ್ ನನ್ನ ಬಂಧಿಸಲಾಗಿತ್ತು. ಬಂಧನದ ಬಳಿಕ ಕಿಶೋರ್ ಬಯಲು ಪಡಿಸಿದ್ದ .,ನಮ್ಮ ಪಾರ್ಟಿಯಲ್ಲಿ ಅನುಶ್ರೀ ಪಾಲ್ಗೊಳ್ಳುತ್ತಿದ್ದಳು ಹಾಗೂ ಡ್ರಗ್ಸ್ ಸೇವಿಸುತ್ತಿದ್ದಳು ಎಂದು. ,ವಿಷಯ ತಿಳಿದ ಸಿಸಿಬಿ ಪೊಲೀಸರು ಅನುಶ್ರೀ ಗೆ ನೋಟಿಸ್ ನೀಡಿತ್ತು . ಅಂತೆಯೇ ಮಂಗಳೂರಿನ ಸಿಸಿಬಿ ತಂಡ ಹೆಚ್ಚಿನ ವಿಚಾರಣೆಗೆ ಒಳಪಡಿಸಿ ಬಿಡುಗಡೆ ಮಾಡಿತ್ತು ನಂತರ ನಡೆದಿದ್ದು ಸುದ್ದಿಯೋ ಸುದ್ದಿ ಸಾಕಷ್ಟು ಮಂದಿ ಅವಳು ಒಳ್ಳೆ ಹುಡುಗಿ ಅವಳು ಡ್ರಗ್ಸ್ ಜಾಲದಲ್ಲಿ ಇಲ್ಲ ಎಂಬ ಧ್ವನಿ ಮೊಳಗಿಸುತ್ತಿದ್ದರೇ, ಇತ್ತಾ ಇದಕ್ಕೆ ವಿರುದ್ಧವಾದ ಅಪವಾದ ಕೇಳಿ ಬರುತ್ತಿವೆ .ಅದೂ ಇದೂ ಎಂದು ರೆಕ್ಕೆ ಪುಕ್ಕ ಕಟ್ಟಿಕೊಂಡು ಸುದ್ದಿ ಹಾರಾಡುತ್ತಿವೆ. ಅನುಶ್ರೀ ಸ್ವಷ್ಟಿಕರಣಕ್ಕಾಗಿ ಮಾಧ್ಯಮಗಳ ಮುಂದೆ ಬಂದಿದ್ದೂ ಆಯ್ತು , fbಯಲ್ಲಿ ಬಂದಿದ್ದೂ ಆಯಿತು. fb ಯಲ್ಲಿ ಲೈವ್ ಬಂದೂ ಅತ್ತು ,ಗೊಗೇರದು ಹೇಳಿದ್ದೂ ಆಯ್ತು "೧೨ ವರ್ಷಗಳ ಹಿಂದೆ ಕಿಶೋರ್ ನಂಗೆ ಡಾನ್ಸ್ ಮಾಷ್ಟ್ರ್ ಆಗಿದ್ದರು ಆಗ ನಾನು ವಿನ್ ಕೂಡಾ ಆಗಿದ್ದೆ ಅದೇ ಈಗ ನನಗೆ ಮುಳುವಾಗಿದೆ ಅದೇ ಸಂಕಷ್ಟ ತಂದು ಕೊಡುತ್ತದೆ ಎಂದು ನಾನು ಎಣಿಸಿರಲಿಲ್ಲ . ನಾನು ಅಮ್ಮ ಮತ್ತು ತಮ್ಮನ ಜೊತೆ ಸುಂದರವಾಗಿ ಜೀವನ ನಡೆಸುತ್ತಿದ್ದೇನೆ ,ಸುಖವಾಗಿ ಕಾಲ ಕಳೆಯುತ್ತಿದ್ದೇನೆ ಯಾವುದೇ ಪಾರ್ಟಿಗೆ ನಾನು ಹೋಗುವುದಿಲ್ಲ . ೧೨ ವರ್ಷದ ಹಿಂದೆ ಪರಿಚಯ ಹಾಗೂ ಕಳೆದ ಕೆಲವು ವರ್ಷಗಳ ಹಿಂದೆ ಆತನ ಡಾನ್ಸ್ ಕ್ಲಾಸ್ ಉದ್ಘಾಟನೆಗೆ ನಾನು ತೆರಳಿದ್ದೆ ಅಷ್ಟೇ. ಈಗ ಏನೂ ಕಾಂಡೆಕ್ಟ್ ಇಲ್ಲ ಎಂದಿದ್ದರು. ಬೆಂಕಿ ಇಲ್ಲದೇ ಹೊಗೆಯಾಡುತ್ತದೆಯೇ ? ಎಂಬ ಪ್ರಶ್ನೆ ಸಾಮಾನ್ಯ ನಾಗರೀಕರಲ್ಲೂ ಅನುಮಾನ ಹುಟ್ಟಿಸುತ್ತಿದೆ ಸುಖಾ -ಸಮ್ಮನೆ ಆತ ಪೋಲೀಸರ ಮುಂದೆ ಅನುಶ್ರೀ ಹೆಸರು ಹೇಳುವುದಕ್ಕೆ ಸಾಧ್ಯವಿಲ್ಲ . ಎಲ್ಲೂ ಇದರಲ್ಲಿ ಅನುಶ್ರೀ ಇರಬಹುದೆಂಬ ಗುಮಾನಿ ಕಂಡು ಬರುತ್ತದೆ ಇದರ ಮಧ್ಯೆ ಸಿಸಿಬಿ ಯಿಂದ ಇನ್ನೊಂದು ಬಾಂಬ್ ಹೊರಬಿತ್ತು . ಮಂಗಳೂರಿನ ಸಿಸಿಬಿ ಕಚೇರಿಗೆ ವಿಚಾರಣೆಗೆ ತೆರಳುವುದಕ್ಕಿಂತ ಮೊದಲು ,ಅನುಶ್ರೀ ತನ್ನ ಮೊಬೈಲ್ ನಿಂದ ಹಲವಾರು ದೊಡ್ಡ -ದೊಡ್ಡ ರಾಜಕಾರಣಿಗಳಿಗೂ ಸೇರಿದಂತೆ ಉದ್ಯಮಿಗಳಲ್ಲಿ ಒತ್ತಡ ಹೇರಿದ್ದರಂತೆ ನನ್ನನ್ನು ಬಂಧಿಸಿದಂತೆ ನೋಡಿಕೊಳ್ಳಿ ಎಂದು ಅಲವತ್ತು ಕೊಂಡಿದ್ದರಂತೆ ಅವರ ಅಪ್ಪಣೆ ಮೇರೆಗೆ ಪೊಲೀಸರು ಕೇವಲ ವಿಚಾರಣೆಯನ್ನು ನೆಡೆಸಿ ಕಳುಹಿಸಿದ್ದರೆಂಬುದು ಸುದ್ದಿ . ಇನ್ನು ಸಿಸಿಬಿ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅನುಶ್ರೀಯನ್ನು ವಿಚಾರಣೆ ಮಾಡಿದ ಅಧಿಕಾರಿಯನ್ನು ವರ್ಗಾವಣೆ ಮಾಡಲಾಗಿದೆ . ಇದೆಲ್ಲವನ್ನೂ ಕಂಡರೇ ಅನುಶ್ರೀ ತಪ್ಪು ಮಾಡಿರಬಹುದೇ ಅನುಮಾನಕ್ಕೆ ಕಾರಣವಾಗಿದೆ. ತಪ್ಪು ಮಾಡಿಲ್ಲವೆಂದ ಮೇಲೆ ವಿಚಾರಣೆಗೆ ಒಳಪಡುವ ಮುನ್ನಾ ದಿನ ರಾಜಕಾರಣಿಗೆ ಕಾಲ್ ಮಾಡಿದ್ದು ಯಾಕೆ ಎಂಬ ಪ್ರಶ್ನೆ ಮನದಲ್ಲಿ ಮೂಡುತ್ತದೆ. ಏನೇ ಇರಲಿ ಇದೀಗ ಬಂದ ಇನ್ನೊಂದು ಸುದ್ದಿಯ ಪ್ರಕಾರ ರಾಜ್ಯ ಸರ್ಕಾರವು ಅಧಿಕಾರಿಗಳಿಗೆ ಪ್ರೀ ಹ್ಯಾಂಡ್ ಕೊಟ್ಟಿದ್ದಾರಂತೆ. ಇನ್ನೊಮ್ಮೆ ವಿಚಾರಣೆ ನಡೆಯುತ್ತಾ ? ಅನುಶ್ರೀ ಅರೆಸ್ಟ್ ಆಗ್ತಾರಾ ? ಕಾಲವೇ ಉತ್ತರ ಹೇಳಬೇಕು . ಕಷ್ಟ ದಿಂದ ಮೇಲೆ ಬಂದು ಯಾವುದೇ ಗಾಡ್ ಫಾದರ್ ಇಲ್ಲದೇ ಸೆಲೆಬ್ರಿಟಿ ಆಗಿದ್ದ ಅನುಶ್ರೀ ಕಹಾನಿಗೆ ಅಧಿಕ ಬೆಲೆ ಬರುತ್ತದೆ ಅದಿಲ್ಲವೆಂದರೆ ಇಷ್ಟು ದಿನ ಸಂಪಾದಿಸಿದ ಇಮೇಜ್ ನೀರಲ್ಲಿ ಕೊಚ್ಚಿ ಹೋಗುತ್ತದೆ ಅಷ್ಟೇ !!
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳು (Atom)
