ಭಾನುವಾರ, ಆಗಸ್ಟ್ 26, 2012

ಇದು ಮೊಸಳೆ ಕಣ್ಣೀರೆ ?

ಸುಮಾರು 3 ಲಕ್ಷಕ್ಕೂ ಅಧಿಕ ಜನಸಂಖ್ಯೆಯಲ್ಲಿ ಕರ್ನಾಟಕವನ್ನು ಆಶ್ರ ಯಿಸಿರುವ ಉತ್ತರ ಭಾರತದ ಈಶಾನ್ಯ ಭಾಗದ  ಜನತೆ ಕಳೆದ ಮೂರು ದಿನಗಳಿಂದ ಪುಂಖಾನು -ಪುಂಖ ವಾಗಿ ಕಾಲ್ಕಿಳುತ್ತಿರುವ ಚಿತ್ರಣವನ್ನು ನೋಡಿ ಅನೇಕರು ಕರ್ನಾಟಕದ ಜನಸಂಖ್ಯೆ ಕಡಿಮೆಯಾಗಲಿ ನಮ್ಮ ನಿರುದ್ಯೋಗಿ ಗಳಿಗೆ  ಫಲ ಸಿಕ್ಕಿಲಿ ಅನ್ನುವಂತ ಮನಸ್ಥಿತಿ ಹೊಂದಿದ್ದರೆ , ಇವರುಗಳಿಂದ ನಮ್ಮ ರಾಜ್ಯಕ್ಕೆ ಬಹಳಷ್ಟು ಲಾಭಾ೦ಶವಿದೆ ಎಂಬ ವಿಚಾರ ತೆರೆ ಮರೆಯಲ್ಲಿ ಪ್ರಜ್ಞಾವಂತರು ಆಲೋಚಿಸುತ್ತಿದ್ದರೆ ,ನಮ್ಮ ರಾಜ್ಯದ ರಾಜಕೀಯ ಪಂಡಿತರಿಗೆ ಏನ್ ಅನ್ನಿಸುತ್ತಿದ್ದ್ಯೋ ಗೊತ್ತಿಲ್ಲ ಒಟ್ಟಾರೆ ಪಕ್ಷ ಬೇಧ ಮರೆತು ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಬೀಡು ಬಿಟ್ಟು ಮೈಕ್ ಹಿಡಿದು ಬೊಗಳೆ ಬಿಡುತ್ತಾ, ಈ ವಿಚಾರದಲ್ಲೂ ಅಷ್ಟೇ ನಿರಂತರವಾಗಿ  ಒಬ್ಬರನೊಬ್ಬರು ದೂರುದರಲ್ಲೇ ಕಾಲ ಕಳೆಯುತ್ತಿದ್ದಾರೆ ...ಹೋಗುವವರನ್ನು ಕೈ ಹಿಡಿದು ಕುಳ್ಳಿರಿಸಲು ಅಸಾಧ್ಯದ ಮಾತು
ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ  ಹಾಕಿದ ನಡವಳಿಕೆ ಎಳ್ಳಷ್ಟು ಸರಿಯಲ್ಲ ಇವರುಗಳಿಗೆ ಸೂಕ್ತ ವಾದ ಭದ್ರತೆ ಒದಗಿಸುವಲ್ಲಿ ಆಡಳಿತ ಪಕ್ಷ ವಿಫಲ ವಾಗಿದೆ ಎಂದು ಕಿಡಿ ಕಾರುತ್ತಿರುವ ,ಒಂದೊಂದು ವಿಚಾರ ಸಿಕ್ಕರೆ ಸಾಕು ಆಡಳಿತ ಪಕ್ಷಕ್ಕೆ ಸರಿಯಾಗಿ ಜಾಡಿಸುವ , ವಿರೋಧ ಪಕ್ಷದ ಮಹಾನುಭಾವರು ಒಮ್ಮೆ ಆ ಸ್ಥಾನದಲ್ಲಿದ್ದಾರೆ ಏನು ಮಾಡುತ್ತಿದ್ದರು ?ಒಟ್ಟಾರೆ ಈ ವಿಚಾರ ದಲ್ಲಿ ಬಹಳಷ್ಟು ಪ್ರಶ್ನೆ ಉದ್ಭವಿಸುತ್ತಿದೆ.ರೆಗುಲರ್  ಟ್ರೈನ್ ಇದ್ದರೂ ,ಸ್ಪೆಷಲ್ ಟ್ರೈನ್ ವ್ಯವಸ್ಥೆ   ಈಶಾನ್ಯರನ್ನು ಕಳಿಸುದರ ಉದ್ದೇಶ ವೇನು?  ಈ ವ್ಯವಸ್ಥೆ ಮೂಲಕ ಆದಷ್ಟು ಬೇಗ  ಜಾಗಖಾಲಿ ಮಾಡಲಿ ಎಂಬ ಮನೋಭಾವನೆ ಹೊಂದಿರ ಬಹುದೇ ? ಆಕಸ್ಮಾತ್ ಅವರುಗಳಿಗೆ ಟ್ರೈನ್ ಸಂಪರ್ಕ ಇಲ್ಲದ ಪರಿಸ್ಥಿತಿ ಯಲ್ಲಿ  ಈಶಾನ್ಯರು ಹೇಗೆ ತೆರಳಲು ಸಾಧ್ಯ ವಾಗುತಿತ್ತು ? ಒಟ್ಟಾರೆಯಾಗಿ ಮೊಸಳೆ ಕಣ್ಣಿರು ಮಿಡಿಯುತ್ತಿರುವ ಇವರುಗಳ ಆತ್ಮ ಶಕ್ತಿ ಏನು ಹೇಳುತ್ತಿದೆ ಗೊತ್ತಿಲ್ಲ.ಏನೆ ಇರಲಿ ಉತ್ತರ ಭಾಗದಲ್ಲಿನ ನಾಗರಿಕರಿಗೆ ಸಂಕಟ -ಸಿಂಪತಿ ತೋರುವ ನಮ್ಮ ರಾಜಕಾರಣಿಗಳು ನಮ್ಮ ಉತ್ತರ ಕರ್ನಾಟಕದಲ್ಲಿನ ಕೆಲವು ಪ್ರದೇಶಗಳ ಜನರು ವಸತಿ ,ಆಹಾರ ,ಉದ್ಯೋಗಕ್ಕಾಗಿ  ಗುಳ್ಳೆಹೋಗುತ್ತಿರುದನ್ನು ತಪ್ಪಿಸುವದ ಸಲುವಾಗಿ ಬೇರೆ ಪರ್ಯಾಯ ಮಾರ್ಗವನ್ನು ಅರಸಬಹುದಿತ್ತು .ಒಂದಷ್ಟು ಸಾನ್ತ್ವಾನದ ನುಡಿ ಯನ್ನಾದರೂ ಹೇಳಬಹುದಿತ್ತು ..ಆಗ  ಇವರ ಹೋರಾಟದ ಸ೦ವಹನ  ಶೀಲ ಕಣ್ಣೀರ ಗಾಥೆ ಎಲ್ಲಿಗೆ ಹೋಗಿತ್ತು ?




ಸಿನಿಮಾ ಸಮಾಜದ ಒಳಿತಿಗೋ ..ಕೆಡುಕಿಗೋ..?

ಸಿನಿಮಾ ಎನ್ನುವುದು 3 ಗಂಟೆ ಗಳ ಮನ ರಂಜಿಸುವ ಒಂದು ಕಾಲ್ಪನಿಕ ಮನೋರಂಜನಾ ಕ್ಷೇತ್ರ .ಸಮಯ ಸದುಪಯೋಗ ,ಸಮಯ ಕಳೆಯುವದಕ್ಕಾಗಿ ಮನೋರಂಜನೆ ಗೋಸ್ಕರ ,ಅಬಲ ರಿಂದ ವ್ರದ್ಧ್ರ ವರಗೆ ಸಿನಿಮಾದ ಮೊರೆ ಹೋಗುವದು  ಸಾಮಾನ್ಯ ಮತ್ತು ಅತ್ಯಂತ ಹೆಚ್ಚು ಬಳಕೆ ಯಾಗುತ್ತಿರುವ ಒಂದು ಜನಪ್ರಿಯ ತಾಣ .ಚಿತ್ರ ದ ಸನ್ನಿವೇಶ ಕಪಾಲಕಲ್ಪಿತ ವಾದರೂ ಮೇಲ್ನೋಟಕ್ಕೆ ಸತ್ಯ ಅಂಶವನ್ನೇ ಉಣಬಡಿ ಸುತ್ತಾ ಕೆಲವಂದು ಕಥಾ ಹಂದರವು ಮನಸ್ಸಿನ ಭಾವನೆ ಯನ್ನು ತಲ್ಲಣ ಗೊಳಿಸುತ್ತದೆ , ತುಡಿತ -ಮಿಡಿತ ದ ಭಾವನಾ ತ್ಮಕ ಬೀಜ ಮನಸ್ಸಿನ ಬುಟ್ಟಿಯಲ್ಲಿ ಕೊರೆಯುವ ಶಕ್ತಿ ಯನ್ನು ಸಿನಿಮಾದ ಕೆಲ ಕಹಾನಿ ಚಲಕ್ ನಲ್ಲಿರುತ್ತದೆ .ಅದೇನೇ ಇರಲಿ  ಸಿನಿಮಾ ಸಮಾಜಕ್ಕೊಂದು ,ವ್ಯಕ್ತಿಗೊಂದು ಉತ್ತಮ ಸಂದೇಶ ವನ್ನು ನೀಡುದರ ಜೊತೆಗೆ ಸ್ರಜನಾತ್ಮಕ ನಡತೆ ,ಉತ್ತಮ ಕೌಶಲ್ಯ ಕಲಿಸಿ ಕೊಡುತ್ತದೆ ,ಅದೇ ತರಹ ಒಂದು ಉತ್ತಮ ಸಮಾಜ ಮುಖಿ ಯಾಗಿ ಕಾರ್ಯ ನಿರ್ವಹಿಸ ಬೇಕು ಎಂಬ ತುಡಿತ ಪ್ರಜ್ಞಾವಂತರ ಬಯಕೆ .ಹೆಚ್ಚಿನ ಸಿನಿಮಾ ಗಳು ಕಾಲ್ಪನಿಕ ಭಾವ ಬಿತ್ತಿಯಾದರೇ ಕೆಲವು ಒಂದು ನಿರ್ದೇಶಕರು ಸತ್ಯ ಘಟನೆಗೆ ಸುಣ್ಣ -ಬಣ್ಣವನ್ನು ಹದ ವಾಗಿ ಬೆರೆಯಿಸಿ ಬೆಳ್ಳಿಪರದೆಯ ಮೇಲೆ ಹರಿಯ ಬಿಡುತ್ತಾರೆ .
ನಮ್ಮಲ್ಲಿನ ಹೆಚ್ಚಿನ ಜನರ ಆಸೆ ನೋಡಿ  ಸಿನಿಮಾ ನೋಡಿ ಸಲ್ಮಾನ್ ಖಾನ್ ಆಗ್ಬೇಕು ,ದರ್ಶನ್ .ಸುದೀಪ್ ತರ ಪೈಟಿಂಗ್ ಗೆ ಒಗ್ಗಿ ಕೊಳ್ಳ ಬೇಕು ಎಂಬ ಮನಸ್ಥಿತಿ ಯನ್ನು ಹೊಂದಿರುತ್ತಾರೆ .ಸಿನಿಮಾ ಎಂದರೆ ಹಾಗೆ ಅಲವೇ ಪುಸ್ತಕದ ಬದನೆ ಕಾಯಿ  ಸಿನಿಮಾದಲ್ಲಿ 15 ಜನ ರೌಡಿ ಗಳೊಂದಿಗೆ ಹೊಡೆದಾಡುವ ಪರಿ ನಿಜ ಜೀವನದಲ್ಲಿ ನಿಜಕ್ಕೂ ಕನಸ್ಸಿನಲ್ಲೂ ಆಲೋಚಿಸಲು ಸಾಧ್ಯ ವೇ.?. ಆದರೂ ಚಪಲ -ಚಟ ಮಾತ್ರ ಯಾರನ್ನೂ ಬಿಡೋಲ್ಲ . ‘ಪ್ರೀತ್ಸೋದ್ ತಪ್ಪಾ’ ಫಿಲಂ ನೋಡೋದ ಬೂಪ ನೊಬ್ಬ ಶಿವಮೊಗ್ಗದ ಬಸ್ ಸ್ಟ್ಯಾಂಡ್  ಸಮೀಪ ಟೀಟ್ ರವಿಚಂದ್ರ ನ್  ತರಹ ಬೈಕ್ ರೈಡ್ ಮಾಡಿ ಸ್ತಳದಲ್ಲೇ ಕೈ -ಕಾಲು  ಮುರಿದು ಕೊಂಡ ಚಿತ್ರಣವನ್ನು ಹಲವಾರು ಮಂದಿ ಕಣ್ಣಾರೆ ಕಂಡಿದ್ದರು .ಇನ್ನು ಸಿನಿಮದಲ್ಲಿ ಕಾಣಸಿಗುವ  ರೌಡಿ ಸಂ ,ದರೋಡೆ ಯನ್ನು ನಮ್ಮಲ್ಲಿ ಅದೆಷ್ಟೋ ಬುದ್ದಿವಂತರು (!?) ಪ್ರಯೋಗ ಮಾಡಿ ಸಕ್ಸುಸ್ ಆದವರೂ ಇದ್ದಾರೆ ,ಫೈಲ್ ಆಗಿ ಪೋಲಿಸ್ ಸ್ಟೇಷನ್ ನಲ್ಲಿ ಫೈಲ್ ನಲ್ಲಿ ಬಂಧಿ ಯಾದವರೂ ಇದ್ದಾರೆ .ಸಿನಿಮಾದಲ್ಲಿ ರೈಲನ್ನು ಹೇಗೆ ಬ್ಲಾಶ್ಸ್ಟ್ ಮಾಡುತ್ತಾರೆ ಎಂಬ ಒಂದು ಮಾಸ್ಟರ್ ಪ್ಲಾನ್ ಒಂದು ಚಿತ್ರದಲ್ಲಿ ಚಿತ್ರಿಸಲ್ಪಟ್ಟಿತ್ತು .ಅದೇ  ವಿದಾನದಲ್ಲಿ 3 ದಶಕದ ಹಿಂದೆ ಉತ್ತರ ಭಾರತದಲ್ಲಿ ನೆರೆವೆರಿಸಿದ್ದರು ನಮ್ಮ ಅತಿರಥರು .ಇಂಥ ಅದೆಷ್ಟೋ ಘಟನಾವಳಿ ಗಳು ನಮ್ಮ ಸುತ್ತ -ಮುತ್ತ ನಡೀತಾ ಇರುತ್ತವೆ .ಇದಕ್ಕೆಲ್ಲ ಮುಖ್ಯ ಕಾರಣವೇ  ಸಿನಿಮಾ ಹಂಗಾಮ . ಮೊನ್ನೆ -ಮೊನ್ನೆ ನಮ್ಮಲ್ಲೂ ಇಂತದ್ದೇ ಘಟನೆ ಉದ್ಭವಿಸಿತ್ತು  ಅದು ಆಗಷ್ಟ್ 7 ಮೈ ಸೂರ ನ ಅಶ್ವಿನಿ ಎಂಬಾಕೆ ಯನ್ನು ಚಿತ್ರ ವಿಚಿದ್ರಕಾರಿ ಯಾಗಿ ಕೊಲೆ ಮಾಡಲಾಗಿತ್ತು .ಪೊಲೀಸರು ಹೇಗೋ ಹಂತಕರನ್ನು ಬಂಧಿ ಸುವಲ್ಲಿ ಸಫಲರಾದರು ಆರಕ್ಷಕರ ಪೆಟ್ಟಿನ ರುಚಿಗೆ ಅಂತೂ ಸತ್ಯವನ್ನೇ ಬಾಯಿ ಬಿಟ್ಟರು .ನಾವು ದಂಡು ಪಾಳ್ಯ ಫಿಲಂ ನೋಡಿ ಈ ಕಾರ್ಯಕ್ಕೆ ಇಳಿದೆವು ,ಇದೆ ರೀತಿ ಕೋಲಾರ ,ದೊಡ್ಡ ಬಳ್ಳಾಪುರ ದಲ್ಲಿ ಸ್ಕೆಚ್ ರೆಡಿ ಮಾಡಿ ಬಚಾವ್ ಆದವು ಎಂದು ತಮ್ಮ ಪ್ಲಾಶ್ ಬ್ಯಾಕ್ ಅನ್ನು ತೆರೆದಿಟ್ಟರು .ಇಂಥ ಅದೆಷ್ಟೋ ಕ್ರತ್ಯ ಈ ಸಿನಿಮಾ ಕಹಾ ನಿ ಯಿಂದಲೇ ತೆರೆ ಮರೆಯಲ್ಲಿ  ನಡೆಯಲ ಪಡುತ್ತದೆ .ಆದರೆ ಇದು ಮಾತ್ರ ಹೆಚ್ಚಾಗಿ ಯಾರಿಗೂ ಕಾಣ ಸಿಗವುದಿಲ್ಲ .ಅದೆಷ್ಟೋ ಹಂತಕರನ್ನು ,ಪಡ್ಡೆಗಳನ್ನೂ ಸ್ರಷ್ಟಿ ಮಾಡುದಕ್ಕೆ ಪಣತೊಟ್ಟಿರುವ ಈ ಸಿನಿಮಾದಿಂದ ಒಬ್ಬನಾದರೂ ಜಗ ಮೆಚ್ಚಿದ ಮಗ ,ಬಂಗಾರದ ಮನುಷ್ಯ ನನ್ನಾಗಿ ರೂಪು ಗೊಳ್ಳಲು ಒಂದೂ ಚಿತ್ರಣವೂ ಪ್ರೇರಣೆಯಾಗದಿರುವುದು  ವಿಪರ್ಯಾಸ .!!!