ಶನಿವಾರ, ನವೆಂಬರ್ 20, 2021

ರೈತರ ಎದುರು ಮಂಡಿಯೂರಿದರೇ ಪ್ರಧಾನಿ ? ಮೋದಿಯ ಭಾವುಕತೆಯ ಭಾಷಣದ ಅರ್ಥವೇನು ?

ನವೆಂಬರ್ 19 ರಂದು ದೇಶವನ್ನು ಉದ್ದೇಶಿಸಿ ಮಾತನಾಡಿದ್ದ ,ಪ್ರಧಾನ ಮಂತ್ರಿ ನರೇಂದ್ರ ಮೋದಿ ಗುರುನಾನಕ್ ಜಯಂತಿಯ ಶುಭಕೋರುತ್ತಾ , ದೇಶದ ಜನತೆಗೆ ಕ್ಷಮೆ ಯಾಚಿಸಿದ್ದು ನಿಜಕ್ಕೂ ಬೇಸರ ತರಿಸಿತ್ತು . ಕೇಂದ್ರ ಸರಕಾರ ಜಾರಿಗೆ ತಂಡ ಮೂರು ಕೃಷಿ ಮಸೂದೆಯನ್ನು ಹಿಂತೆಗೆದು ಕೊಳ್ಳಲಾಗುವುದು ರೈತರಿಗೆ ಅರ್ಥೈಸುವಲ್ಲಿ ವಿಫಲರಾಗಿದ್ದೇವೆ ,ರೈತರೇ ತಮ್ಮ ಹೋರಾಟವನ್ನು ಕೊನೆಗಾಣಿಸಿ, ಹೊಲಕ್ಕೆ ಸಾಗಿ ಎಂದು ಭಾವುಕತೆಯನ್ನು ವ್ಯಕ್ತಪಡಿಸಿದರು . ರೈತರೆಂಬ ಹಣೆಪಟ್ಟಿಯಲ್ಲಿರುವವರಿಗೆ ,ಪ್ರತಿ ಪಕ್ಷದವರಿಗೆ,ವಿರೋಧಿಗಳ ಸಂತೋಷಕ್ಕೆ ಮಾತ್ರ ಪಾರವೇ ಇರಲಿಲ್ಲ . ಮೋದಿ ಸೋತರು ,ರೈತರು ಗೆದ್ದರು ಎಂಬ ಅಭಿಪ್ರಾಯದ ಜೊತೆಗೆ ಮುಂಬರುವ ಜುನಾವಣೆಯನ್ನು ದ್ರಷ್ಟಿಯಲ್ಲಿತ್ತು ಕೊಂಡು ಮೋದಿ ವಾಪಸ್ ಪಡೆದರು ಎಂಬೆಲ್ಲಾ ಮಾತು ಹರಿದಾಟುತ್ತಿವೆ . ಒಟ್ಟಾರೆ ಕ್ರಷಿ ಕಾಯ್ದೆಯನ್ನು ಹಿಂಪಡೆಯಲು ಕಾರಣವೇನು ?
ಮೂರು ಕ್ರಷಿ ತಿದ್ದುಪಡಿ ಮಸೂದೆ ಪ್ರಸ್ತಾಪಕ್ಕೆ ಬಂದು ಹೆಚ್ಚು ಕಮ್ಮಿ ಒಂದುವರ್ಷ ದಾಟಿದೆ . ಇದರ ನಡುವೆ ಸಾಕಷ್ಟ ಚುನಾವಣೆಗಳೂ ಬಂದೂ ಹೋಗಿವೆ ,ಪ್ರತಿಭಟನೆಗೆ ನಾಂದಿ ಹಾದಿ , ಹರತಾಳ ಮುಂದುವರಿಯುತ್ತಲೇ ಇವೆ . ಒಂದಷ್ಟು ರೈತರು ಪ್ರಾಣವನ್ನೂ ಕಳೆದು ಕೊಂಡರು ಅಂತಹ ಸಮಯದಲ್ಲಿಈ ಕಾಯ್ದೆಯನ್ನು ಹಿಂದೆ ತೆಗೆದು ಕೊಳ್ಳದ ಮೋದಿ, ಅದ್ಯಾಕೆ ನ.19 ರ ದಿನ ಅದೂ ,ಗುರುನಾನಕ್ ಜಯಂತಿಯಂದೇ ಈ ತೀರ್ಮಾನಕ್ಕೆ ಬಂದರು ಎಂಬದು ಯಕ್ಷಪ್ರಶ್ನೆ ? ಕ್ರಷಿ ಕಾಯ್ದೆ ವಿರೋಧಿಸಿದವರ ಸಿಂಹ ಪಾಲು ಪಂಜಾಬ್ ರಾಜ್ಯದ ರೈತರು . ಸಿಖ್ಖರಿಗೆ ಗುರುನಾನಕ್ ದೇವರು . ಮುಂದೆ ಚುನಾವಣೆ ಸಮೀಪ ವಿರುವುದು ಕೂಡಾ ಪಂಜಾಬ್ ರಾಜ್ಯದಲ್ಲೇ.ಹೀಗಾಗಿಯೇ ಮೋದಿ ಪಂಜಾಬ್ ನಲ್ಲಿ ಓಟ್ ಬ್ಯಾಂಕಿಗ್ ಗೆ ಈ ಕಾರ್ಯಕ್ಕೆ ಮುಂದಾದರೇ ? ಎಂಬ ಮಾತುಗಳು ಪಚಲಿತದಲ್ಲಿವೆ.ಕಾಂಗ್ರೆಸ್ ನ ಬಲಿಷ್ಠ ಕೋಟೆ ಪಂಜಾಬ್ ನಲ್ಲಿ ಕಮಲ ಅರಳುವುದು ಅಷ್ಟೊಂದು ಸುಲಭದ ಮಾತು ಅಲ್ಲ . ಇನ್ನು ಮೋದಿ ಮೇಲೆ ಕಿಡಿಕಾರುತ್ತಿರುವ ಪಂಜಾಬಿಗರಿಂದ ಓಟ್ ದಕ್ಕಿಸಿಕೊಳ್ಳುವುದು ಸಹ ಕಷ್ಟ ಸಾಧ್ಯ . ಇಂತಿಪ್ಪ ಮೋದಿ ಯಾಂಡ್ ಟೀಮ್ ಅದರ ಬಗ್ಗೆ ಖಂಡಿತವಾಗಿಯೂ ಸೋತಿದ್ದಲ್ಲ 'ನಾ ಕೊಡೆ ನೀ ಬಿಡೆ' ಎನ್ನವಂತ ಸ್ಥಿತಿಗೆ ಅಂತ್ಯ ಹಾಡಲೇ ಬೇಕಿತ್ತು ಅದಕ್ಕಾಗಿ ಈ ತೀರ್ಮಾನಕ್ಕೆ ಬಂದಿರಬಹದು . ಅದೇನೇ ಇರಲಿ ಭಾರವಾದ ಧ್ವನಿಯಲ್ಲಿ ಭಾವನೆಯನ್ನು ಮೇಳೈಸುತ್ತಿದ್ದ ಪ್ರಧಾನಿ ಮೋದಿ ಮಾತಿನಲ್ಲಿ ಅರ್ಥವಿತ್ತು ನಾವು ರೈತರಿಗೆ ಅರ್ಥೈಸಿ ಹೇಳುವಲ್ಲಿ ಸೋತಿದ್ದೇವೆ ನಾವೀದನ್ನು ಸಂಸತ್ತಿನಲ್ಲಿ ಚರ್ಚಿಸಿ ಹಿಂದಕ್ಕೆ ತೆಗೆದು ಕೊಳ್ಳುತ್ತೇವೆ ಅಂದಾಗ ನಿಜವಾದ ರೈತರಿಗೆ ದುಃಖದ ಕಟ್ಟೆ ಒಡೆಯದೇ ಇರಲಾರದು . ರೈತರ ಶ್ರಯೋಭಿರುವುದ್ದಿಗಾಗಿ ತಂದ ಕಾಯ್ದೆ ರೈತರಿಗೆ ಬೇಡವೆಂದ ಮೇಲೆ ಇನ್ನೇನು ಮಾಡಲು ಸಾಧ್ಯ ? ತಮ್ಮ ಲಾಭಕ್ಕಾಗಿ ಮಧ್ಯವರ್ತಿಗಳು ಒಂದಷ್ಟು ರೈತರನ್ನು ಎತ್ತಿಕಟ್ಟಿ ಕೊನೆಗೂ ತಮ್ಮ ಆಸೆ ತೀರಿಸಿ ಕೊಂಡಿವೆ .ತಮ್ಮ ಕಾಲಿಗೆ ತಾವೇ ಕೊಡಲಿಪೆಟ್ಟು ಕೊಟ್ಟು ಕೊಂಡ ರೈತರು ಮುಂದೆ ಅನುಭವಿಸಲೇಬೇಕಾಗಿದೆ.