ಆಳಿಗೊಂದು ಕಲ್ಲು !! ನ್ಯೂಸ್ ಚಾನೆಲ್ ಗಳಿಗೆ ಹಬ್ಬವೋ ಹಬ್ಬ !!! ದಿನದ ಇಪ್ಪತ್ತನಾಲ್ಕು ಗಂಟೆ ರವಿಬೆಳಗೆರೆ ಬಗ್ಗೆ ಸುದ್ದಿಯೋ ಸುದ್ದಿ..! ಇದ್ದಿದ್ದು ಇಲ್ಲದಿದ್ದು ಎಲ್ಲವನ್ನೂ ಉಪ್ಪು ,ಖಾರ, ಹುಳಿ ಬೆರೆಸಿ ,ಒಸಮಾ ಬಿಲ್ ಲಾಡೆನ್ ಗೆ ಹೋಲಿಸುವಂತ ವಿದ್ಯಾಮಾನ ಸಧ್ಯ ಜಾರಿಯಲ್ಲಿದೆ .
ಬಂಧನ ಮುಕ್ತರಾದ ಮೇಲೆ ಈ ನ್ಯೂಸ್ ಚಾನೆಲ್ ಗಳ ಹಾಗೂ ಅದರ ಲೈವ್ ಡಿಸ್ಕಷನ್ ನಲ್ಲಿ ಭಾಗವಹಿಸಿದವರ ಉವಾಚದ ಕ್ಲಿಪ್ ಗಳನ್ನು ನೋಡಿದರೆ ಖಂಡಿತವಾಗಿಯೂ ಬೆಳೆಗೆರೆ ಇನ್ನೊಮ್ಮೆ ನಾನು ಹುಟ್ಟಿ ಬಂದ್ದಿದೇನೋ ಎಂಬಷ್ಟರ ಮಟ್ಟಿಗೆ ಭಾಸ ವಾಗದೇ ಇರದು ಅರ್ಥಾತ್ ಒಬ್ಬಬ್ಬರ ತೆಗಳಿಕೆ ,ಹೊಗಳಿಕೆ, ಬಾಲ್ಯ ಯವ್ವನ ಹೀಗಿದ್ದಿತೆ ?ತನ್ನ ಕಣ್ಣನ್ನು ತಾನೇ ನಂಬಲಾರದ ಸನ್ನಿವೇಶ ಎದುರಾಗಬಹುದೇನೋ ?
ತನ್ನ ಆಪ್ತ ಸ್ನೇಹಿತ ಸಹೋದ್ಯೋಗಿ ಸುನಿಲ್ ಹೆಗ್ಗರವಳ್ಳಿ ಕೊಲೆಗೆ ಸುಪಾರಿ ಕೊಟ್ಟಿದ್ದಾರೆ ಎಂದು ಗೌರಿ ಲಂಕೇಶ್ ವಿಚಾರಣೆ ವೇಳೆ ಸಿಕ್ಕಿ ಬಿದ್ದ ಹಂತಕನ ಮಾತು ಕೇಳಿ ಪತ್ರಕರ್ತ ರವಿ ಬೆಳೆಗೆರೆ ಯನ್ನು ಅನಾರೋಗ್ಯದ ನಡುವೆಯೂ ರಾತ್ರೋ ರಾತ್ರಿ ಬಂಧಿ ಸಲಾಗಿತ್ತು . ಆ ಹಂತಕನ ಮಾತು ಬ್ರಹ್ಮವಾಕ್ಯವೆಂದು ತಿಳಿದ ಕಾನೂನು ವ್ಯವಸ್ಥೆ ಅರೆಷ್ಟ್ ಮಾಡಿ ಬಿಟ್ಟಿತು .ಕಾನೂನಿನಲ್ಲಿ ಬಂಧಿಸುವುದುಕ್ಕೆ ಸಮಯ ,ಜಾಗ ಯಾವುದು ಬೇಕಾಗಿಲ್ಲ ಆದರೆ ಇದು ಎಲ್ಲರಿಗೂ ಅನ್ವಯ ವಾಗುವಂತೆ ಇರ್ಬೇಕು ಅಲ್ವೇ ಆದರೆ ಅಚ್ಚರಿ ಅನ್ನಿಸುವುದು ಇಲ್ಲಿ ,ಪೋಲಿಸ್ ಅದಿಕಾರಿ ಬಿ.ಗಣಪತಿ , ಐ.ಪಿ.ಎಸ್ ಅಧಿಕಾರಿ ಡಿ ಕೆ ರವಿ ಕೇಸ್ ಗಳಿಗೆ ಅರ್ಥವೇ ವಿಲ್ಲ ಅವರ ಮನೆಯವರು ಖಡ ಖಂಡಿತವಾಗಿ ಸಾಕ್ಷಿ ಸಮೇತ ಹೇಳುತ್ತಿದ್ರೂ ತಪ್ಪಿತಸ್ತರು ಯಾರು ಎಂದೂ ಗೊತ್ತಿದ್ದರೂ ಅಪರಾಧಿಗಳನ್ನೂ ಬಂಧಿಸಲು ಸಾಧ್ಯವಾಗಿಲ್ಲ , ಇವರೆಲ್ಲಾ ಬಿಡಿ ಸಾಮನ್ಯ ಜನರ ಗತಿ ನೋಡಿ ಮೊನ್ನೆ ಮೊನ್ನೆ ಪ್ರವೆಸ್ ಮೆಸ್ತಾ ಹೊನ್ನಾವರದ ಘಟನೆಯನ್ನೇ ನೆನಪು ಮಾಡಿಕೊಳ್ಳೋಣ ಎಲ್ಲವೂ ಗೊತ್ತಿದ್ದರೂ ಅರೆಷ್ಟ್ ಮಾಡುವಲ್ಲಿ ?? ಕಣ್ಣಾರೆ ಕಂಡ ಊರವರು ಇದ್ದಾರೆ , ಮನೆಯವರು ಸಾಕ್ಷಿ ನುಡಿಯುತ್ತಿದ್ದಾರೆ ಅದರೂ ಪ್ರಯೋಜನವಿಲ್ಲ .ಅದೇ ಒಬ್ಬ ಆಗುಂತನ ಮಾತು ಆಲಿಸಿ, ಆಧರಿಸಿದ ಕಾನೂನು ವ್ಯವಸ್ಥೆಗೆ ಏನು ಹೇಳೋಣ ?ರಾಜ್ಯ ರಾಜಕಾರಣದ ಆಡಳಿತ ವ್ಯವಸ್ಥೆಗೆ ಕಾನೂನು ಈಲಾಖೆ ಕರ್ತವ್ಯ ಏನೂ ಹೇಳಿ ಪ್ರಯೋಜನ ಇಲ್ಲ .
ಒಟ್ಟಾರೆ ರವಿ ಬೆಳಗೆರೆ ಯಾರೂ ಮಾಡದ ತಪ್ಪು ಮಾಡಿಲ್ಲ ಹಾಗಂತಾ ಮಾಡಿದ್ದೆ ಸರಿ ಎಂದೂ ಸಹಾ ಹೇಳಲಾಗುತ್ತಿಲ್ಲ .ಸಿಕ್ಕಿದ್ದೇ ಚಾನ್ಸು ಅನ್ನುತ್ತಾ ವಿರೋಧಿಗಳಿಂದ ಹಿಡಿದು ರಾಜಕೀಯ ನೇತಾರುಗಳಿಂದ ಹಿಡಿದು ಮೀಡಿಯ ಕೂಡಾ ಬೆನ್ನಿಗೆ ಬಿದ್ದು ಸೇಡು ತೀರಿಸಿಕೊಳ್ಳುವುದು ಇದೆಯಲ್ಲಾ ಅದು ಸಮಂಜಸವಾಗಿ ಕಾಣುತ್ತಿಲ್ಲ . ಅಪರಾಧಿಯೋ ಇಲ್ಲವೋ ಅದು ಬೇರೆ ಮಾತು .ಅದು ಸೂಕ್ತವಾದ ತನಿಖೆ ಯಿಂದ ಸಾಬೀತು ಆಗಬೇಕು . ಆಗುತ್ತದೆ ಅಲ್ಲಿಯವರೆಗೆ ಅನಾರೋಗ್ಯದ ನಡುವೆ ರಾತ್ರೋ ರಾತ್ರಿ ಏಕಾಏಕಿ ಬಂಧೀಸಿ ಇಲ್ಲ ಸಲ್ಲದ ಆರೋಪದಡಿಯಲ್ಲಿ ಕೇಸು ದಾಖಲಿಸಿ ವಿಚಾರಣೆ ಯನ್ನು ನಡೆಸುವದರ ಜೊತೆಗೆ ವಿಕ್ರತೆಯನ್ನು ಮರೆಯುವುದು ಇದೆಯಲ್ಲ ಅದನ್ನು ಸಹಿಸಿ ಕೊಳ್ಳಕ್ಕೆ ಆಗ್ತಾ ಇಲ್ಲ ?ಇಲ್ಲ ಸಲ್ಲದ ವಿಚಾರವನ್ನು ಹೆಣೆದು ,ವಿರೋಧಿಗಳನ್ನು ಸ್ಟುಡಿಯೋ ದೊಳಗೆ ಕೂರಿಸಿ 24 ಗಂಟೆಯವರೆಗೂ ಕಾರ್ಯಕ್ರಮವನ್ನು ಎಳೆಯುವುದು ಎಳ್ಳಷ್ಟು ಸರಿಯಲ್ಲ ?ಜನಪ್ರತಿನಿಧಿಗಳಿಗೆ ಒಂದು ನ್ಯಾಯ ಬೆಳೆಗೆರೆಗೆ ಒಂದು ನ್ಯಾಯ ಇದೆಂತಾ ತಾರತಮ್ಯ ? ಕಂಟ್ರವರ್ಸಿ ಪತ್ರಕ್ರತರೆಂದೇ ? ಯಾರಿಗೂ ಬೆದರದೇ ಇದ್ದದ್ದನ್ನು ಇದ್ದ ಹಾಗೆ ಪೆನ್ನುನ್ನು ಖಡ್ಗವಾಗಿಸುವ ಛಾತಿಗಾಗಿಯೇ ? ಇವರ ಸೃಜನ ಶೀಲ ಕ್ರೀಯಾಶಿಲತೆಗೆ ಅದೆಸ್ಟೋ ಅಸಾಧ್ಯವಾದ ಯಾರು ಮಾಡದ ವಿಚಾರ ವೈವಿಧ್ಯೆತೆ ಎಂಟದೆ ಭಂಟನಂತೆ ತನ್ನ ಮೊನಚು ಬರವಣಿಗೆಯಲ್ಲಿ ತೋರಿಸಿ ಕೊಟ್ಟಿದ್ದಾರೆ . ಅತೀ ಹೆಚ್ಚು ಸಂಖ್ಯೆಯಲ್ಲಿ ಇವರ ಅಕ್ಷರವನ್ನು ಪ್ರೀತಿಸುವ ಓದುಗ ವರ್ಗವಿದೆ . ಒಂದು ಬುಕ್ ರಿಲಿಸ್ ಆದ್ರೆ ಬಹಳ ದೊಡ್ಡ ಮಟ್ಟದಲ್ಲಿ ಶೆಲಿಂಗ್ ಇರುವುದು ಇವರ ಗಟ್ಟಿತನಕ್ಕೆ ಸಾಕ್ಷಿ . ಪಾತಕ ಲೋಕದ ಅನಾವರಣ, ಕ್ರೈಂ ನ್ನು ತುಂಬಾ ಹತ್ತಿರ ದಿಂದ ಕಂಡವರು ಕಂಡ ಹಾಗೆ ಲೇಖನಿ ಚಳಪಳಿಸುವುದರ ಹಿಂದೆ ಗಂಭೀರ ಚಿಂತನೆ ಆ ಕ್ರತು ಶಕ್ತಿ ಬೆಳೆಗೆರೆ ಬಿಟ್ಟರೆ ಬೇರೆ ಯಾರಿಂದಲೂ ಅಸಾಧ್ಯ ..! ಏನೇ ಇರಲಿ ಪುಲ್ ಸ್ಟಾಪ್ ಇಡುವ ಮುನ್ನ ಕೊನೆಯದಾಗಿ ಒಂದೇ ಒಂದು ಮಾತು ಬೆಳೆಗೆರೆ ಮಾಡಿದ್ದು ಸರಿ ಎಂಬುದು ನನ್ನ ಓಡಲದ್ವನಿ ವಿವರವಲ್ಲ . ತಪ್ಪು ಯಾರೇ ಮಾಡಲಿ ತಪ್ಪು ತಪ್ಪೇ ! ಅದಕ್ಕೊಂದು ಅರ್ಥ ವ್ಯವಸ್ತೆ ಇದೆ ಅದೇ ದಿಕ್ಕಿನಲ್ಲಿ ಸಾಗಬೇಕು ಸಂವಿಧಾನದ ಕಾನೂನು ಒಡೆದು ಬಡಿದು ಆಳುವ ಈ ನೀತಿ ಸರಿಯಲ್ಲ ಅಷ್ಟೇ !

