ಶನಿವಾರ, ನವೆಂಬರ್ 28, 2015
ಜನ ಪ್ರತಿನಿಧಿಗಳೇ ಶೇಮ್ ! ನಾಚಿಕೆಯಾಗಬೇಕು ನಿಮ್ಮ ಜನ್ಮಕ್ಕೆ !
ಮೂಡಬಿದಿರೆಯ ಬಜರಂಗದಳ ಕಾರ್ಯಕರ್ತ ಪ್ರಶಾಂತ್ ಪೂಜಾರಿ ಬರ್ಭರವಾಗಿ ಹಾಡು ಹಗಲೇ ಇತ್ತೀಚಿಗೆ ಹತ್ಯೆ ಮಾಡಲಾಗಿತ್ತು . ಆಡಳಿತ ರೂಢ ಕಾಂಗ್ರೆಸ್ ಪಾಳಯದ ಸರ್ಕಾರಕ್ಕೆ ಪ್ರಶಾಂತ್ ಪೂಜಾರಿ ಕೊಲೆ ಎಂಬುದು ಬೀದಿ ನಾಯಿ ಸತ್ತಂತ ಬುದ್ದಿ ಮತ್ತೆಯನ್ನು ಹೊಂದಿದೆ , ಶೇಮ್ ಎನ್ನಬೇಕು ಕರಾವಳಿಯ ಕಾಂಗ್ರೆಸ್ ತನ್ನನ್ನು ತಾನೇ ನಡುಬೀದಿಯಲ್ಲಿ ನಗ್ನವಾಗಿಸಿ ಜನರಿಂದ ಶೇಮ್ ಎನಿಸಿಕೊಳ್ಳುತ್ತಿದೆ. ಯಾವೊಬ್ಬ ಕಾಂಗ್ರೆಸ್ ಪ್ರತಿನಿಧಿ , ಕರಾವಳಿಯ ಐದು ಜನರ ಪೈಕಿ ಯಾವೊಬ್ಬನೋ ಸಹಾ ಅತ್ತ ತಲೆ ಹಾಕಿ ಮಲಗಿಲ್ಲ ಮೂಡಬಿದಿರೆಯ ಕಾಂಗ್ರೆಸ್ ಶಾಸಕ ಮತ್ತು ಸಚಿವ ಅಭಯಚಂದ್ರ ಜೈನ್ ಕೊಲೆಯಾದ ಪ್ರಶಾಂತ್ ಮನೆಗೆ ಭೇಟಿಯೂ ನೀಡಿಲ್ಲ. ಜಿಲ್ಲೆಯ ಉಸ್ತುವಾರಿ ಸಚಿವ ರಮಾನಾಥ ರೈ ಕೂಡ ಸೌಜನ್ಯಕ್ಕೂ ಈ ಘಟನೆಯನ್ನು ಖಂಡಿಸಿಲ್ಲ ಮತ್ತು ಪ್ರಶಾಂತ್ ತಂದೆ ತಾಯಿಯನ್ನು ಮಾತಾಡಿಸಿಲ್ಲ. ಇದು ನಿಜಕ್ಕೂ ಅಮಾನವೀಯ. ಕೊಲೆಯಾದವನ ಸಿದ್ಧಾಂತ ಏನೇ ಇರಲಿ ತನ್ನೂರಿನ ಒಬ್ಬ ಹುಡುಗ ಕೊಲೆಯಾಗಿದ್ದಾನೆ, ಕಾನೂನು ಬಾಹಿರ ಕೃತ್ಯವೊಂದು ನಡೆದಿದೆ. ಅದನ್ನು ಶಾಸಕ ಮತ್ತು ಮಂತ್ರಿ ಖಂಡಿಸಬೇಕಿತ್ತು. ತಂದೆತಾಯಿಗೆ ಸಾಂತ್ವನ ಹೇಳಬೇಕಿತ್ತು. ಅಟ್ ನೀಸ್ಟ್ ತಮ್ಮ ಎಂದಿನ ಮೊಸಳೆ ಕಣ್ಣೀರನ್ನದರೂ ಹಾಕಿ ಕೈ ತೊಳೆದು ಕೊಳ್ಳ ಬಹುದಾಗಿತ್ತು .. ಛೆ !ನಾಚಿಕೆ ಯಾಗಬೇಕು ಇವರ ಜನ್ಮಕ್ಕೆ !.. ರಾಜಕೀಯ, ಸಿದ್ಧಾಂತ ಭೇದ ಏನೇ ಇರಲಿ ಓರ್ವ ಸರ್ಕಾರದ ಮತ್ತು ಜನರ ಪ್ರತಿನಿಧಿಯಾಗಿದರೂ ಪ್ರಶಾಂತ್ ಮನೆಗೆ ಹೋಗಲೇಬೇಕಿತ್ತು. ಎಂತೆಂತಹ ರೌಡಿ ಶೀಟರ್ಗಳು, ಕೊಲೆಗಡುಕರೆಲ್ಲ ಸತ್ತಾಗ ಕಾಂಗ್ರೆಸಿಗರು ಅವರ ಮನೆಗೆ ಹೋಗಿಲ್ಲವೆ? ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿಲ್ಲವೆ? ಕುಟುಂಬದವರಿಗೆ ಸಾಂತವನ ಹೇಳಿಲ್ಲವೆ? ಹಾಗಾದರೆ ಪ್ರಶಾಂತ್ ಪೂಜಾರಿಯ ಮನೆಗೆ ಹೋಗಿ ಅವರ ತಂದೆ ತಾಯಿಗೆ ಸಾಂತ್ವನ ಹೇಳಿ ,ತನಿಖೆಯ ಭರವಸೆ ನೀಡಬಹುದದಿತ್ತು? ದನಗಳ್ಳ ಕಬೀರ್ ಕ್ಕಿಂತಲೂ ಈತ ಕಡೇಯಾದನೇ ?! ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳು ಮಾತಾಡಬೇಕಿದೆ !
ಯಕ್ಷಗಾನಕ್ಕೆ ಉಳಿವಿದೆ .. ಅಳಿವಿಲ್ಲ !!!
ವೈಜ್ಞಾನಿಕ ತಂತ್ರಜ್ಞಾನಗಳ ನಡುವೆ ಯಕ್ಷಗಾನ ಸ್ಥಿರವಲ್ಲ ಎಂಬ ಹಲವರ ಬಾವುಕತೆಯ ಆಲೋಚನೆಗೆ ನಿಜಕ್ಕೂ ವರ್ತಮಾನದ ವಾತಾವರಣ ಧೈರ್ಯ ತುಂಬುತ್ತಿದೆ . ಟೆಂಟ್ ಆಟ ಗಳ ಜೊತೆಗೆ ಬಯಲಾಟ ತನ್ನದೆಯಾದ ಛಾಪನ್ನು ಇಂದಿಗೂ ಇರಿಸಿಕೊಂಡು ಬಂದಿದೆ . ಜೊತೆಗೆ ಇನ್ನಷ್ಟು ಮತ್ತಷ್ಟು ಮೊಗದಷ್ಟು ಜನಪ್ರಿಯತೆ ಮಳೈಸಿ ಕೊಂಡು ನಾಗಾಲೋಟದಲ್ಲಿ ಮಿಂಚುತ್ತಿದೆ ಅಂದರೆ ಅತಿಶಯೋಕ್ತಿಯಾಗಲಾರದು 'ಕಾಲಕ್ಕೆ ತಕ್ಕಂತೆ ಕೋಲ' ಎಂಬ ಆಡು ನುಡಿಯಂತೆ ವೈವಿಧ್ಯಮಯವಾಗಿ ವಿವಿಧತೆಯನ್ನು ಪೋಣಿಸುತ್ತಿದೆ . ಸ್ವರ್ದಾತ್ಮಕತೆ ಎಷ್ಟೇ ಇದ್ದರೂ ಕಲೆಗೆ ಬೆಲೆ ಕೊಡುತ್ತಾ ಬಂದಿರುವ ಗಂಡು ಕಲೆ ಯಕ್ಷಗಾನ ತನ್ನದೆಯಾದ ಅಂಗ-ಆಕಾರ, ಗಟ್ಟಿತನವನ್ನು ಉಳಿಸಿ ,ಬೆಳಿಸಿ ,ಕಾಯ್ದಿರಿಕೊಂಡು ಬನ್ದಿದೆ. ಸಮಯಕ್ಕನುಗುಣವಾಗಿ ಕಾಲಮಿತಿಯ ಪ್ರದರ್ಶನ ತೋರುವುದರ ಜೊತೆಗೆ ಮನೋರಂಜನಾತ್ಮಕವಾಗಿ ಸಾಕಷ್ಟು ಅಭಿರುವುದ್ಧಿ ಪಥದತ್ತ ಮುನ್ನುಗ್ಗುತ್ತಿದೆ . ಅಟ್ಟಣಿಗೆ , ಜೋಡಾಟ , ಕೂಡಾಟಗಳ ಮೂಲಕ ಮನೋರಂಜನಾತ್ಮಕವಾಗಿ ಪ್ರೇಕ್ಷಕರ ಮನಗೆಲ್ಲುತ್ತಿದೆ. ವರ್ಷಕ್ಕೊಂದು ನವನವೀನ ಕಥಾನಕ ಗಳಿಂದ ಟೆಂಟ್ ಆಟಗಳು ಯಕ್ಷ ಪ್ರೇಮಿಗಳನ್ನು ಹಿಡಿದಿಟ್ಟು ಕೊಳ್ಳುತ್ತಿದೆ . ಇನ್ನು ಬಯಲಾಟಗಳಿಗೆ ಬರಗಾಲವೇ ಇಲ್ಲ ಬೆಳಕಿನ ಸೇವೆ ಅದೆಷ್ಟು ಭಕ್ತಿ ಪ್ರಧಾನ ದಿಂದ ನಡೆಯುತ್ತಿದೆ ಎಂದರೆ ಆಸ್ತಿಕರು ,ಆಸಕ್ತದಾರ ಪ್ರಮಾಣವೇ ಕಾರಣ ಎಂಬುದನ್ನು ತಳ್ಳಿ ಹಾಕುವಂತಿಲ್ಲ ವರ್ಷಪ್ರತಿಯಂತೆ ಒಂದೊಂದು ಸನ್ನಿಧಾನ ದಿಂದ ಹೊಸ ಹೊಸ ಯಕ್ಷಗಾನ ಮೇಳಗಳು ಉದಯವಾಗುತ್ತಿರುವುದರ ಜೊತೆಗೆ ಸಾಕಷ್ಟು ವರ್ಷಗಳ ವರೆಗಿನ ಬುಕ್ಕಿಂಗ್ ಕಾಣತ್ತಿರುವುದಕ್ಕೆ ಯಕ್ಷ ಅಭಿಮಾನಿಗಳ ಕ್ರಪಾ ಕಟಾಕ್ಷವಲ್ಲದೇ ಇನ್ನೇನು ?. ಕಟೀಲು ಆರು ಮೇಳಗಳನ್ನು ಹೊಂದಿದ್ದರೂ, ಮಂದಾರ್ತಿಯಲ್ಲಿ ಐದು ಮೇಳಗಳಿದ್ದರೂ , ಸುಮಾರು ಹದಿಮೂರು ವರ್ಷಗಳವರೆಗೆ ಬುಕ್ಕಿಂಗ್ !!!.ಹೆಚ್ಚುವರಿ ಮೇಳಗಳ ಅಗತ್ಯವಿದ್ದರೂ ಕಲಾವಿದರುಗಳ ಕೊರತೆಯಿಂದ ಇದ್ದದ್ದರಲ್ಲಿಯೇ ನಿಭಾಯಿಸಬೇಕಾದ ಅಗತ್ಯತೆಯನ್ನು ಅನುಭವಿಸಬೆಕಾಗಿದೆ. ಮಾರಣಕಟ್ಟೆ ಮೇಳವೂ ಸಹಾ ಹಲವಾರು ವರ್ಷಗಳಿಂದ ಎರಡು ಮೇಳಗಳನ್ನು ಕಟ್ಟಿಕೊಂಡು ತಿರುಗಾಟದಲ್ಲಿದೆ ಹರಕೆ ಆಟಗಳ ಸಂಖ್ಯೆ ಮಾತ್ರ ಏರುತ್ತಲೇ ಇದೆ .. ಈ ಸಾಲಿಗೆ ಇನ್ನೊಂದು ಸೇರ್ಪಡೆ ಕಮಶಿಲೆ ಮೇಳ . ಕುಂದಾಪುರ ದಿಂದ ಪೂರ್ವಾಭಿಮುಖವಾಗಿ ೩೦ ಕಿಲೋ ಸಾಗಿದರೆ ಸಹ್ಯಾದ್ರಿ ತಪ್ಪಲಿ ಸ್ವಚ್ಛ ಪರಿಸರದ ಕುಬ್ಜಾ ನದಿ ತೀರದಲ್ಲಿ ನೆಲೆ ನಿಂತಿರುವ ಶಕ್ತಿದಾಯಿನಿ ಕಮಲಶಿಲೆ ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನ ದಿಗ್ದರ್ಶನವಾಗುತ್ತದೆ. ಭಕ್ತರ ಸಕಲ ಇಷ್ಟರ್ಥವನ್ನು ನೀಗಿಸುತ್ತಾಳೆ ಎನ್ನುವುದಕ್ಕೆ ಬೆಳಕಿನ ಸೇವೆ ಯಕ್ಷಗಾನಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲ, ಒಂದು ಮೇಳವನ್ನು ಕಟ್ಟಿಕೊಂಡು ಎರಡು ದಶಕಕ್ಕೂ ಅಧಿಕ ಕಾಲದಿಂದ ನಡೆದು ಕೊಂಡು ಬರುತ್ತಿದ್ದ ಮಂಡಳಿ ಇದೀಗ ಹರಕೆ ಆಟವನ್ನು ತೀರಿಸಲು ಇನ್ನೊಂದು ಮೇಳವನ್ನು ಕಟ್ಟಬೇಕಾದ ಅನಿವಾರ್ಯತೆ ಉದ್ಬವಿಸಿದ್ದರಿಂದ ಈ ವರ್ಷದಿಂದ ಎರಡು ಮೇಳಗಳೊಂದಿಗೆ ತಿರುಗಾಟಕ್ಕೆ ಹೊರಟಿದೆ .ನ್ನೇನು ಬೇಕು ?ಯಕ್ಷಗಾನಕ್ಕೆ ಉಳಿವಿದೆ.. ! ಕಲಾವಿದರ ಕೊರೆತೆ ಕೊಂಚ ತಲ್ಲಣವನ್ನು ತರುತ್ತಿರುವುದನ್ನು ಬಿಟ್ಟರೆ, ಯಕ್ಷ ಪ್ರೇಮಿಗಳ ಸಂಖ್ಯೆ ಒಂದಿನಿತು ಕಡಿಮೆಯಾಗಿಲ್ಲ ಗುಣಮಟ್ಟವಲ್ಲದ (ಸಿನಿಮಾ ಶೈಲಿ ) ಕಥಾನಕ ಎಲ್ಲೋ ತುಸು ಮುನಿಸು ಕೆಲೆವೆಡೆ ಕೇಳಿ ಬರುತ್ತಿರುವುದು ಹೊರತು ಪಡಿಸಿದರೆ ,ಯಕ್ಷಗಾನಕ್ಕೆ ಬಾಳ್ವೆ ಇದೆ. ಬಗ್ಗೆ ಪ್ರಸಂಗ ಕರ್ತರು ಯೋಚಿಸಿದರೆ ಯಕ್ಷಗಾನಕ್ಕೆ ಯಾವುದೇ ಕಳಂಕಬಾರದು .
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳು (Atom)




