ಭಾನುವಾರ, ಅಕ್ಟೋಬರ್ 18, 2020

ಪವರ್ ಟಿವಿಯನ್ನು ಬಂದ್ ಮಾಡಿಸಿದ್ದು ಯಾರು ?

ಪವರ್ ಟಿವಿಯನ್ನು ಸ್ಥಗಿತ ಗೊಳಿಸಲಾಗಿದೆ. ಸುಮಾರು ಎರಡು ವರ್ಷಗಳ ಹಿಂದೆ ಪ್ರಾರಂಭವಾಗಿದ್ದ ರಾಜ್ಯ ಮಟ್ಟದ ಪವರ್ ಟಿವಿ ಮಂಗಳೂರು ಮೂಲದ ರಾಕೇಶ್ ಶೆಟ್ಟಿ ಎಂಬುವವರ ಒಡೆತನವನ್ನು ಹೊಂದಿತ್ತು . ಕಳೆದ ಒಂದಷ್ಟು ದಿನಗಳಿಂದ ಸಿಎಂ ಯಡಿಯೂರಪ್ಪನ ಮಗ ಬಿ.ಎಸ್ ವಿಜೇಯೇಂದ್ರರವರ ಭ್ರಷ್ಟಾಚಾರದ ವಿರುದ್ಧ ಗಂಟೆ ಗಟ್ಟಲೇ ನಿರಂತರ ಕಾರ್ಯಕ್ರಮವನ್ನು ಬಿತ್ತರಿಸುತ್ತಾ ಬಂದಿತ್ತು ಸಂಸತ್ ಅಧಿವೇಶದಲ್ಲಿ ಪ್ರತಿ ಪಕ್ಷಗಳು ಈ ವಿಚಾರವನ್ನು ಎಳೆದು ತಂದವು ಯಡಿಯೂರಪ್ಪನವರು ಸದನದಲ್ಲಿ ನೇರ ಸವಾಲು ಹಾಕಿದ್ದರು "ಭ್ರಷ್ಟಾಚಾರ ಆರೋಪ ಸಾಬೀತು ಆದರೆ ನಾನು ರಾಜೀನಾಮೆ ಕೊಡುತ್ತೇನೆ ಹಾಗೂ ಶಾಶ್ವತ ರಾಜಕೀಯ ಸನ್ಯಾಸತ್ವ ಸ್ವೀಕರಿಸುತ್ತೇನೆ" ಎಂಬ ಮಾತು ಹೊರಹಾಕಿದ್ದರು .
ಇತ್ತ ಪವರ್ ಟಿವಿಯೂ ತಮ್ಮೆಲ್ಲಾ ಪವರ್ ನೊಂದಿಗೆ ಕಾರ್ಯಕ್ರಮವನ್ನು ಸತತವಾಗಿ ಪ್ರಸಾರ ಮಾಡುತ್ತಾ ಬರುತ್ತಿತ್ತು . ವಿಜೇಂದ್ರ ಮುಖ್ಯವಾಹಿನಿಗೆ ಬಂದು ಯಾವುದೇ ಪ್ರತಿಕ್ರೀಯೆ ನೀಡಿರಲಿಲ್ಲ . ಟ್ವಿಟ್ಟರ್ ಮೂಲಕ ಒಂದೆರಡು ಪೋಸ್ಟ್ ಮಾಡಿದ್ದರು ."ಸತ್ಯಕ್ಕೆ ದೂರವಾದ ವಿಚಾರವನ್ನು ಪವರ್ ಟಿವಿಯಲ್ಲಿ ಬಿತ್ತರಿಸಲಾಗುತ್ತಿದೆ ನನ್ನ ತೇಜೋವಧೆ ಮಾಡಲಾಗುತ್ತದೆ. ಎಂದು ಮಾನನಷ್ಟ ಮೊಕದ್ದಮೆ ಯಡಿಯಲ್ಲಿ ಕೇಸು ದಾಖಲಿಸಿದ್ದೇನೆ "ಎಂದು ಬರೆದು ಕೊಂಡಿದ್ದರು. ಒಂದೆರಡು ದಿನ ಉರುಳಿಲ್ಲ ಪವರ್ ಟಿವಿ ಎಂಡಿ ರಾಕೇಶ್ ಶೆಟ್ಟಿ ಮನೆ ಮೇಲೆ ಪೊಲೀಸರ ದಾಳಿ ಆಗುತ್ತದೆ.,ಪ್ರಿನ್ಸಿಪಲ್ ಎಡಿಟರ್ ರೆಹಮಾನ್ ಹಾಸನ್ ರವನ್ನು ಪೊಲೀಸರು ವಿಚಾರಣೆಗೆ ಠಾಣೆಗೆ ಕರೆಸಿಕೊಳ್ಳುತ್ತಾರೆ. ಇತ್ತ ಪವರ್ ಟಿವಿ ಕಚೇರಿ ಬಂದ ಪೊಲೀಸರು ಬೇಕಾದಷ್ಟು ಡೀಟೇಲ್ಸ್ ಜಪ್ತಿ ಮಾಡುತ್ತಾರೆ ಎಲ್ಲಾಕ್ಕಿಂತ ಹೆಚ್ಚಾಗಿ ಸರ್ವರ್ ಗೆ ಕೈ ಹಾಕಿ ಅದನ್ನು ಸ್ಥಗಿತ ಗೊಳಿಸುತ್ತಾರೆ . ಅಂದಿನಿಂದ ಇಂದಿನವರಿಗೆ ಪವರ್ ಟಿವಿ ಕ್ಲೋಸ್ ಆಗಿದೆ. ಆಂಕರ್ ಗಳು ತಮ್ಮ fb ಲೈವ್ ನಲ್ಲಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ . ಆದಷ್ಟು ಬೇಗ ಮತ್ತೆ ನಾವು ಬರುತ್ತೇವೆ ಎಂದಿದ್ದಾರೆ ಹಾಗೆಯೇ ಸಂಪಾದಕೀಯ ಸಲಹೆಗಾರರಾದ ರವೀಂದ್ರ ರೇಷ್ಮೆಯವರು " ಒಂದೊಳ್ಳೆ ಲಾಯರ್ ನಮ್ಮ ಕೇಸನ್ನು ಎತ್ತಿ ಕೊಂಡಿದ್ದಾರೆ ಬೇಗ ಆನ್ ಏರ್ ನಲ್ಲಿ ಬರುತ್ತೇವೆ "ಎಂದು ಹೇಳಿದ್ದರು . ಎರಡು ವಾರ ಕಳೆದರೂ ಇನ್ನೂ ಪವರ್ ಟಿವಿಯ ಸುದ್ದಿಯೇ ಇಲ್ಲ . ಇದನ್ನೇ ನಂಬಿ ಕೊಂಡಿದ್ದ ೨೫೦ ಕ್ಕೂ ಅಧಿಕ ನೌಕರರ ಕೆಲಸಕ್ಕೆ ಕತ್ತರಿ ಬಿದ್ದಿದೆ . ಪವರ್ ಟಿವಿಯ ಪ್ರಕಾರ ನಮ್ಮ ಚಾನೆಲ್ ನ್ನು ಸರ್ಕಾರ ಸ್ಥಗಿತ ಗೊಳಿಸಿದೆ ಎಂದು ಬಿಜೆಪಿ ಸಾರಥ್ಯದ ಯಡಿಯೂರಪ್ಪರ ವಿರುದ್ಧ ದೂರುತ್ತಿದ್ದಾರೆ. ಇನ್ನೂ ಬಿಜೆಪಿ ಮುಖಂಡರು ಹೇಳುವುದೇ ಬೇರೆ ನಾವು ಯಾವುದೇ ಚಾನೆಲ್ ನ್ನು ಬಂದ್ ಮಾಡಿಸಿಲ್ಲ.
ಹಾಗಾದರೆ ಬಂದ್ ಮಾಡಿಸಿದ್ದು ಯಾರು ಎಂಬ ಪ್ರಶ್ನೆಗೆ ಒಂದಷ್ಟು ಉತ್ತರ ಜೀವಂತವಾಗಿ ಮೇಲ್ನೋಟಕ್ಕೆ ಹೊಳೆಯುತ್ತಿದೆ.ಪವರ್ ಟಿವಿ ಆಫ್ ಆಗುವ ಒಂದೆರಡು ದಿನಗಳ ಹಿಂದೆ ಸಾಮಾಜಿಕ ಕಾರ್ಯಕರ್ತ ಟಿ.ಜೆ ಅಬ್ರಹಾಂ ರವರು ಪವರ್ ಟಿವಿಯ ಬಗ್ಗೆ ಕಿಡಿಕಾರಿದ್ದರು . ಒಂದಷ್ಟು ಡಾಕ್ಯುಮೆಂಟ್ಸ್ ನ್ನು ತೋರಿಸಿ "ಇದನ್ನು ಹಿಡಿದು ಡೆಲ್ಲಿಗೆ ತೆರಳುತ್ತೇನೆ ಏನು ಮಾಡುತ್ತೇನೆ ನೋಡಿ ಕೊಳ್ಳಿ" ಎಂದು ಬಹಿರಂಗ ಸವಾಲು ಹಾಕಿದ್ದರು. ಇನ್ನೊಂದೆಡೆ ವಿಜೇಯೇಂದ್ರನ ಭ್ರಷ್ಟಾಚಾರಕ್ಕೆ ಸಂಬಂಧ ಪಟ್ಟಂತೆ ಕoಟ್ರಾಕ್ಟರ್ ಒಬ್ಬರಿಗೆ ಆಮಿಷ ಒಡ್ಡಿ ವಿಜೇಂದ್ರನ ಬಗ್ಗೆ ಸುಳ್ಳು ಹೇಳಬೇಕೆಂದು ಒತ್ತಡ ತಂದಿದ್ದರಂತೆ ಪವರ್ ಟಿವಿ ಎಂಡಿ . ಆ ಕಂಟ್ರಾಕ್ಟರ್ ಪೊಲೀಸರಿಗೆ ಕಂಪ್ಲೇಟ್ ಕೊಟ್ಟು ಎಫ್ ಐ ಆರ್ ರಿಜಿಸ್ಟರ್ ಮಾಡಿಸಿದ್ದರಂತೆ ಇದು ಸಹಾ ಪೊಲೀಸ ದಾಳಿಗೆ ಕಾರಣವಾಗಿರ ಬಹುದೇ ಗೊತ್ತಿಲ್ಲ .ಪವರ್ ಟಿವಿ ಎಂ ಡಿ ರಾಕೇಶ್ ಶೆಟ್ಟಿ ವಿಜೇಯೇಂದ್ರರವರಿಗೆ ಯಾವುದೋ ಬೇಡಿಕೆ ಒಡ್ಡಿದ್ದಾರಂತೆ ಅದು ಸಾಧ್ಯವಾಗದ ಹಿನ್ನಲೆಯಲ್ಲಿ ಕತೆ ಕಟ್ಟಿ ಕಾರ್ಯಕ್ರಮ ಮಾಡಲಾಗುತ್ತದೆ ಎಂದು ವಿಜೇಂದ್ರ ಹೇಳುತ್ತಿದ್ದಾರೆ ಇನ್ನು ಪವರ್ ಟಿವಿಯವರದ್ದು ಇದಕ್ಕೆ ಭಿನ್ನವಾದ ಅಪವಾದ . ಒಟ್ಟಾರೆ ಇದರಲ್ಲಿ ಯಾರದ್ದು ಸತ್ಯ ಯಾರದ್ದು ಮಿಥ್ಯ ಎಂಬುದು ಕಗ್ಗಂಟಾಗಿ ಉಳಿದಿದೆ. ಸೂಕ್ತ ತನಿಖೆಗೆ ಒಳಪಡಿಸಿ ಯಾರು ಅಪರಾಧಿಗಳೆಂದು ಬಯಲಿಗೆ ತರುವ ಬದಲು ಚಾನೆಲ್ ನ್ನು ಬಂದ್ ಮಾಡಿಸುವುದು ಸರಿಯಲ್ಲ . ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಅದನ್ನೇ ನಂಬಿಕೊಂಡ ಅದೆಷ್ಟು ಉದ್ಯೋಗಿಗಳ ಹೊಟ್ಟೆಗೆ ತಣ್ಣೀರು ಬಟ್ಟೆ ಕೊಟ್ಟದ್ದು ಸರಿಯಲ್ಲ . ಸರ್ಕಾರ ಆಲೋಚಿಸಬೇಕು. ಇನ್ನು ಸಾಕಷ್ಟು ಚಾನೆಲ್ ಗಳು ನಮ್ಮಲ್ಲಿ ವಿದೆ ಪತ್ರ ಕರ್ತರ ಸಂಘಟನೆಗಳೂ ,ಜನಪರ ಸಂಘಟನೆಗಳೂ ಸಹಾ ನಮ್ಮಲ್ಲಿ ಕಮ್ಮಿ ಇಲ್ಲ. ಎಲ್ಲರೂ ಸಹಾ ಒಕ್ಕಲೂರಿನಿಂದ ಖಂಡಿಸಬೇಕಿತ್ತು ಆ ಕಾರ್ಯವಾಗಿಲ್ಲ ವಯಕ್ತಿಕ ವಿಚಾರವೇನೇ ಇರಲಿ ಪವರ್ ಟಿವಿ ತಪ್ಪು ಮಾಡಿರಲಿ ಮಾಡದಿರಲಿ ಅವರು ಮಾಡಿದ್ದು ಸರಿ ಎಂದು ವಾದಿಸುವುದಲ್ಲ ಸೂಕ್ತ ನ್ಯಾಯಕ್ಕಾಗಿ ಧ್ವನಿ ಎತ್ತ ಬೇಕಾಗಿತ್ತು. ಕೊನೆಯದಾಗಿ ಒಂದು ಮಾತು ತಪ್ಪು ಯಾರದ್ದೇ ಇರಲಿ ತನಿಖೆ ಯಾಗಬೇಕು ನಿಜ ಬೆಳಕಿಗೆ ಬರಬೇಕು ಅಷ್ಟೇ !