ಶನಿವಾರ, ಏಪ್ರಿಲ್ 4, 2026
ಭಟ್ಟರು ಕೆಟ್ಟರು ಈ ನಡೆತೆಯಿಂದ : ಯಕ್ಷಗಾನ ಕಲಾವಿದ ಉಜಿರೆ ಅಶೋಕ್ ಭಟ್ಟರ 'ಸಿಲ್ಲಿ' ಹೇಳಿಕೆ ಸುತ್ತಾ ಒಂದು ಸುತ್ತು !
ಹೇಳಿ-ಕೇಳಿ ನಾನು ಯಕ್ಷಗಾನ ಪ್ರೇಮಿ ಅದೂ ಅಲ್ಲದೇ ನನ್ನ ಪಕ್ಕದ ಊರಿನಲ್ಲಿ ಸರಿಸುಮಾರು ನಾಲ್ಕು ಕಿಲೋಮೀಟರ್ ದೂರದಲ್ಲಿ ನಡೆದ ಘಟನೆ ಇದೀಗ ರಾಜ್ಯದಾದ್ಯಂತ ಸುದ್ದಿ ಆಗುತ್ತಿದೆ.ಈ ಸುದ್ದಿ ಕಾಡುತ್ತಿರುವುದರಿಂದ ನನ್ನ ಒಡಲ ಧ್ವನಿಯಲ್ಲಿ ಹರಡಲೇಬೇಕಾಗಿದೆ ನಾನು ಊರಿನಲ್ಲಿದ್ದಿದ್ದರೆ ಖಂಡಿತವಾಗಿಯೂ 10-15 ಕಿ.ಮೀ ದೂರದಲ್ಲಿ ಎಲ್ಲೇ ಆಟ ಇದ್ದಾರೂ ಆಮಂತ್ರಣ ಇಲ್ಲದಿದ್ದರೂ,ರಾತ್ರಿ ಬೈಕ್ ಸ್ಟಾರ್ಟ್ ಆಗದೇ ಇರುತ್ತಿರಲಿಲ್ಲ ಇದು ಬಜಪನ್ ನಿಂದ ನೆಡೆದುಕೊಂಡು ಬಂದ ರೀತಿ.
ಅದು ಮಾರ್ಚ್ 25ನೇ ತಾರೀಕು ನಾನು ಊರಿನಲ್ಲಿ ಇರಲಿಲ್ಲ ಆಟ ಮಿಸ್ ಮಾಡ್ಕೊಂಡಿದ್ದೆ.ಹೆನ್ನಾಬೈಲುವಿನ ಬಕ್ರ ಮನೆ ಎಂಬಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಮೇಳದವರಿಂದ ಹರಕೆ ಬಯಲಾಟ ಇದ್ದಿತ್ತು 'ಶ್ರೀ ಕೃಷ್ಣ ಪಾರಿಜಾತ' ಪ್ರಸಂಗ.ಅದರ ನೇರ ಪ್ರಸಾರ ಕ್ಷೇತ್ರದ ಮೇಳದವರ ಅಧೀಕೃತ ಯೂಟ್ಯೂಬ್ ಚಾನೆಲ್ ನಲ್ಲಿ ಪ್ರಸಾರವಾಗುತ್ತಿತ್ತು.ಸಮಯ ರಾತ್ರಿ 11 ಗಂಟೆ ಆಗಿರಬಹುದೇನೋ,? ಧರ್ಮಸ್ಥಳ ಮೇಳದವರ ಆಟ ಆಗುವುದು ನಮ್ಮ ಆ ಪ್ರದೇಶದಲ್ಲಿ ಬಹಳ ಅಪರೂಪ!ತೆಂಕುತಿಟ್ಟು ಅಪರೂಪದಲ್ಲಿ ಅಪರೂಪವೇ ಎಂದರು ತಪ್ಪಲ್ಲ.ಇನ್ನು ಕ್ಷೇತ್ರದ ಮೇಳವೆಂದ ಮೇಲೆ ಹೇಳಬೇಕೇ ಅಕ್ಕಪಕ್ಕದ ಗ್ರಾಮದವರು ಅದೂ ಇತ್ತೀಚಿಗೆ ಹೆಚ್ಚಿನ ಎಲ್ಲಾ ಮೇಳಗಳು ಕಾಲಮಿತಿಗೆ ಒಗ್ಗಿಕೊಂಡಿರುವುದರಿಂದಲೋ ಏನೋ ಪ್ರೇಕ್ಷಕರು ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದರು., ಸ್ವಾಭಾವಿಕ ಈಗಾಗಲೇ ಹೇಳಿದಂತೆ !! ಕೃಷ್ಣನ ವೇಷಧಾರಿಯಾಗಿ ಪ್ರಸಿದ್ಧ ಅರ್ಥ ಧಾರಿಯಾಗಿರುವ ಹಿರಿಯ ಕಲಾವಿದರಾದ ಉಜಿರೆ ಅಶೋಕ್ ಭಟ್ಟರು ರಂಗಸ್ಥಳದಲ್ಲಿದ್ದರು ಭಾಗವತರಾದ ಸಿರಿಮನೆ ರಾಮಕೃಷ್ಣ ಮಯ್ಯರ ಸೊಗಸಾದ ಆಲಾಪನೆಗೆ ಶಿಳ್ಳೆ,ಚಪ್ಪಾಳೆಗಳು ಧಾರಾಳವಾಗಿ ಬೀಳುತ್ತಿದ್ದವು.ಅದೇನಾಯ್ತೋ ಗೊತ್ತಿಲ್ಲ ಕೃಷ್ಣನ ವೇಷಧಾರಿಯಾಗಿದ್ದ ಅಶೋಕ್ ಭಟ್ಟರ ಮೇಲೆ ಭೂತದ ಆವೇಶವಾಯಿತೆನೋ ಎಂಬಂತೆ ಭಾಗವತರ ಪದ ಮುಗಿದು ಚಂಡೆ ಪೆಟ್ಟು ನಿಲ್ಲುವುದಕ್ಕಿಂತ ಮೊದಲೇ
"ನೀವು ಶಿಳ್ಳೆ ನಿಲ್ಲಿಸದಿದ್ದರೆ ನಾನು ಹೋಗ್ತೇನೆ ಡೊಂಬರಾಟ ಅಲ್ಲ ಇದು ನಾನು ಆಗನಿಂದ ಗಮನಿಸುತ್ತಿದ್ದೇನೆ ಚೌಕಿಯಲ್ಲಿದ್ದೇನೆ ಸಭ್ಯ ಸಭೆಯನ್ನು ಬಯಸುತ್ತೇನೆ ನನಗೆ ದಾಕ್ಷಿಣ್ಯ ಯಾರದ್ದು ಇಲ್ಲ. ಇಲ್ಲಿ ಯಾಕೆ ಕುಣಿಯುತ್ತೇವೆ ಗೊತ್ತುಂಟ ನಿಮಗೆ? ಯಾರು ಆಟ ಆಡಿಸುವರು ಏನಂತ ಆಲೋಚನೆ ಮಾಡಿದ್ದೀರಿ ?ನಿಮಗೆ ಈ ಕ್ಷೇತ್ರದಲ್ಲಿ ನಮ್ಮ ತಿರುಗಾಟ ಎಷ್ಟು ಅಂತ ಗೊತ್ತುಂಟಾ? ಎಂತದ್ದು ಅದು ಶಿಳ್ಳೆ ಏನದು ಶಿಳ್ಳೆ ? ಕೋಳಿಕಟ್ಟವ? ಇಲ್ಲಿ ಕಂಬಳವಾ ? ಯಾರದು ಏನು ಆಲೋಚನೆ ಮಾಡಿದ್ದೀರಿ? ರೆಕಾರ್ಡ್ ಆಗಿದೆ ನನಗೆ ಯಾರ ದಾಕ್ಷಿಣ್ಯ ಇಲ್ಲ ಯಾರದು ಶಿಳ್ಳೆ ಹಾಕಿದವ ?ಆಗದಿದ್ದರೆ ಹೋಗು ಬನ್ಸ್ ತಿಂದು ಭಾಗವತರ ಕಂಠವನ್ನು ತೆಗಿತೀರಾ ? ಸಭ್ಯ ಸಭೆಯನ್ನು ಬಯಸ್ತೇನೆ ಅರ್ಥ ಮಾಡಿಕೊಳ್ಳಬೇಕು ಹುಚ್ಚರನ್ನು ಬೆಳೆಸಬೇಡಿ ಕಲಾಪ್ರೇಕ್ಷಕರನ್ನು ಬೆಳೆಸಿ., ಒಂದು ಕಲಾ ಸೇವೆ ನಡೆಯುತ್ತಿರುವುದು ಇಲ್ಲಿ ನಾವು ಕೆಲಸ ಇಲ್ಲದೇ ಇರೋದಕ್ಕೆ ಕುಣಿಯುವುದಲ್ಲ ಬೆವರು ಇಳಿಸುವುದಲ್ಲ ಆಯ್ತಾ ವಿಶಿಲ್ ಕೊಟ್ಟವ್ರ್ಯಾರು ದುಡ್ಡು ಕೊಟ್ಟವ್ರ್ಯಾರು ಧಾರ್ಮಿಕ ಭಾಷಣ ಮಾಡಬೇಕಾ ಒಂದು ಗಂಟೆ ಆಟ ಮಾಡಬೇಕಾ ?ಹೇಳಿ ಏನ್ ಹೇಳ್ತೀರಿ ಹಿರಿಯರೇ? ಎಂದು ಒಂದೇ ಸಮನೆ ಪ್ರೇಕ್ಷಕರನ್ನು ಗುರಿಯಾಗಿಸಿಕೊಂಡು ಅವಹೇಳನಕಾರಿಯಾಗಿ ಅವಮಾನ ರೀತಿಯಲ್ಲಿ ರಂಗಸ್ಥಳದಲ್ಲಿ ಹೇಳಿದ್ದರು.
ಆ ವಿಡಿಯೋ ಕ್ಷಣಮಾತ್ರದಲ್ಲಿ ಯಕ್ಷಗಾನ ಪ್ರೇಮಿಗಳಿಂದ ವೈರಲ್ ಆಗಿತ್ತು. ಪರ -ವಿರೋಧ ಚರ್ಚೆಗೆ ಗ್ರಾಸವಾಯಿತು. ಪರಕಿಂತಲೂ ಅಶೋಕ್ ಭಟ್ಟರ ಈ ಹೇಳಿಕೆ ಕಲಾರಂಗ, ಕಲಾ ಅಭಿಮಾನಿಗಳು, ಕಲಾವಿದರು, ಕಲಾಪ್ರೇಕ್ಷಕರ ಆಕ್ರೋಶಕ್ಕೆ ಕಾರಣವಾಯಿತು.ಪತ್ರಿಕೆ,ಟಿವಿ ಮಾಧ್ಯಮಗಳಲ್ಲಿ ಬಿಸಿ -ಬಿಸಿ ಪ್ರಚಾರ ಪಡೆಯಿತು. ಹಿರಿ-ಕಿರಿಯ ಕಲಾವಿದರುಗಳು ಇವರ ಈ ಹೇಳಿಕೆ ವಿರುದ್ಧ ಹರಿಹಾಯ್ದರು.ಟ್ರೊಲ್ ಪೇಜ್ ಗೆ ಕೂಡಾ ಆಹಾರವಾಯಿತು.
ಇನ್ನು ಹಿರಿಯ ಜನಪ್ರಿಯ ಯಕ್ಷಗಾನ ಕಲಾವಿದ ಸರಪಾಡಿ ವಿಶ್ವನಾಥ ಶೆಟ್ಟಿ ಅವರು ಮುಖ್ಯವಾಹಿನಿಗೆ ಬಂದು ಇದನ್ನು ಖಂಡಿಸಿದರು ಅಂತಹ ಕಲಾವಿದರಿಗೆ ಬುದ್ಧಿವಾದ ಹೇಳಿದರು ಹಾಗೂ ಕಲಾ ಪ್ರೇಮಿಗಳ ಪರವಾಗಿ ಕ್ಷಮೆಯನ್ನೂ ಯಾಚಿಸಿದರು. ಇನ್ನು ಸಾಕಷ್ಟು ಪ್ರಸಿದ್ಧ ಕಲಾವಿದರುಗಳು ರಂಗಸ್ಥಳದಲ್ಲಿ ಕಥೆ ಸಾಗುವ ಮಧ್ಯದಲ್ಲಿ ನೇರಾ -ನೇರ ಟಾಂಗ್ ನೀಡಿದರು.ಹಾಸ್ಯಾಸ್ಪದವಾದ ರಂಜಿಸಿದರು.ಕಂಬಳದ ಆಯೋಜಕರು ಕಂಬಳ ಪ್ರೇಮಿಗಳು ಸಹಾ ಭಟ್ಟರ ವಿರುದ್ಧ ಕಿಡಿ ಕಾರಿದರು.ತೀವ್ರವಾಗಿ ತರಾಟೆಗೆ ತೆಗೆದು ಕೊಂಡಿದ್ದಾರೆ.
ಯಕ್ಷಗಾನ ಎಂಬುದು ಗಂಡು ಕಲೆ, ದೈವಿಕಲೆ, ರಾಜಕಲೆ ಎಂದು ಪ್ರಸಿದ್ಧಿ ಪಡೆದಿದೆ ನೂರಾರು ವರ್ಷಗಳ ಇತಿಹಾಸವಿದೆ. ಆಧುನಿಕ ವಿಜ್ಞಾನ ತಂತ್ರಜ್ಞಾನ ಟಿವಿ ಕಂಪ್ಯೂಟರ್ ಗಳ ನಡುವೆಯೂ ಸಹಾ ಈ ಕಲೆ ಇನ್ನೂ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ. ಆಧುನಿಕ ದಿನಗಳಲ್ಲಿ ಪ್ರೇಕ್ಷಕರ ಸಂಖ್ಯೆ ಕುಂಠಿತಗೊಳ್ಳುತ್ತಿದ್ದರೂ ,ಕಾಲಕ್ಕೆ ತಕ್ಕಂತೆ ವಿವಿಧತೆಗಳನ್ನು ಅಳವಡಿಸಿಕೊಂಡು ಕಾಲಮಿತಿ ಆಟಗಳಿಂದ ಪ್ರೇಕ್ಷಕರನ್ನು ಇನ್ನು ಹಿಡಿದಿಟ್ಟುಕೊಂಡಿದೆ.ಆದರೆ ಇಂತಹ ಕಲಾವಿದರುಗಳಿಂದ ಈ ಅಸಹ್ಯತನದಿಂದ ಆಟಕ್ಕೆ ಬರುವವರ ಸಂಖ್ಯೆ ಕುಂಠಿತಗೊಂಡರೂ ಅಚ್ಚರಿ ಪಡಬೇಕಿಲ್ಲ.ಕಲಾವಿದರನ್ನು ಬೆಳೆಸಿರುವುದು, ಬೆಳೆಸಿದ್ದು ,ಬೆಳೆಸುವುದು ಪ್ರೇಕ್ಷಕರಲ್ಲವೇ ? ಪ್ರೇಕ್ಷಕರ ಚಪ್ಪಾಳೆ ಶಿಳ್ಳೆಗಳೇ ಕಲಾವಿದರಿಗೆ ಶ್ರೀ ರಕ್ಷೆ ಅದೇ ಅವರ ಹುಮ್ಮಸ್ಸು, ಉತ್ಸಾಹ, ಪ್ರೋತ್ಸಾಹಕ್ಕೆ ದಾರಿ ದೀಪ !ಅಂತಹ ಪ್ರೇಕ್ಷಕರನ್ನು ಆ ಭವ್ಯ, ದಿವ್ಯ ವೇದಿಕೆಯಲ್ಲಿ ಅವಮಾನಿಸಿರುವುದು ಸಹ್ಯವೇ ?
ಉಜಿರೆ ಅಶೋಕ್ ಭಟ್ಟರಿಗೆ ಶಿಳ್ಳೆ ,ಚಪ್ಪಾಳೆಗಳ ಪ್ರೋತ್ಸಾಹ ಅಗತ್ಯವಿಲ್ಲದಿದ್ದರೆ ಅಥವಾ ಅದರಿಂದ ತೊಂದರೆಯಾಗುತ್ತಿದ್ದರೆ ಅದನ್ನು ಅಲ್ಲಗಳೆಯಲು ಹತ್ತು- ಹಲವು ಉಪಾಯಗಳಿದ್ದವು ,ಕಥಾ ಪ್ರಸಂಗದ ಸಂಭಾಷಣೆ ನಡುವೆ ಅದನ್ನು ಪ್ರಸ್ತಾವಿಸಿ ಶಿಳ್ಳೆ ಚಪ್ಪಾಳೆ ಗೆ ಕಡಿವಾಣ ಹಾಕಬಹುದು.ಆಟ ಆಡಿಸುವವರನ್ನು ,ಸಂಯೋಜಕರನ್ನು ಬರ ಹೇಳಿ ಅವರಿಗೆ ವಿಷಯ ಪ್ರಸ್ತಾಪಿಸಿ ಅಲ್ಲಿಂದ ಸಂದೇಶ ರವಾನಿಸುವ ಅವಕಾಶಗಳಿತ್ತು., ಭಾಗವತರ ಮೈಕಿನಲ್ಲಿ ವಿನಂತಿ ಪಡಿಸಬಹುದಿತ್ತು, ಇನ್ನು ಆಟದ ಮಧ್ಯ ಕೃತಜ್ಞತೆ ಕೋರಲು ಬರುವ ಕಲಾವಿದರಿಗೆ ಈ ವಿಷಯವನ್ನು ಕೊಟ್ಟು ಸೌಜನ್ಯವಾಗಿ ವಿವೇಚನಾ ರೀತಿಯಲ್ಲಿ ಸಾರಬಹುದಿತ್ತು. ಅದನ್ನು ಬಿಟ್ಟು ರಂಗಸ್ಥಳದಲ್ಲಿಯೇ ಏಕಾಏಕಿ ಪ್ರೇಕ್ಷಕರಿಗೆ,ಆಟ ಆಡಿಸುವವರಿಗೆ ಅವಮಾನ ಮಾಡುವುದರ ಜೊತೆಗೆ ಜನಪ್ರೀಯ ಜಾನಪದ ಕ್ರೀಡೆಗಳಲ್ಲಿ ಒಂದಾದ ಕರಾವಳಿಯ ಸಾಂಪ್ರದಾಯಿಕ ಕ್ರೀಡೆಯಾದ ಕಂಬಳ ,ಕೋಳಿ ಅಂಕಕ್ಕೆ ಹೋಲಿಸಿದ್ದು ,ಹೀಯಾಳಿಸಿದ್ದು ಎಷ್ಟು ಸರಿ ?ಇನ್ನು ಡೊಂಬ ಸಮುದಾಯದವರು ಆಚರಿಸುವ ಡೊಂಬರಾಟ ಬಗ್ಗೆ ಲಘುವಾಗಿ ಉದಾಹರಿಸಿದ್ದು ನಿಜಕ್ಕೂ ಜೀರ್ಣಿಸಿಕೊಳ್ಳಲಾರದ ವಿಚಾರ. ಉಜಿರೆ ಆಶೋಕ ಭಟ್ಟರ ಬಗ್ಗೆ ಒಳ್ಳೆಯ ಅಭಿಮಾನವಿದೆ ಹಿರಿಯ ಕಲಾವಿದ ಯಾವುದೇ ಪಾತ್ರವಾದರೂ ಜೀವತುಂಬವ ಅದ್ಬುತ ವೇಷಧಾರಿ, ತಾಳಮದ್ಧಲೆಯ ಮಹಾರಥ ಅವರ ಅರ್ಥಗಾರಿಕೆಗೆ ಮಾರೋ ಹೋಗದೆ ಇರುವವರೇ ಇಲ್ಲ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದ ಇವರು ಒಂದೇ ಒಂದು ದಿನ ಎಲ್ಲವನ್ನೂ ಹಾಳು ಮಾಡಿಕೊಂಡರು .
ಈ ಹೇಳಿಕೆಗೆ ಬೇರೆ ಯಾವುದೇ ಪ್ರದೇಶದಲ್ಲಾದರೂ ಅಲ್ಲಿನ ಚಿತ್ರಣ ಬದಲಾಗುತ್ತಿತ್ತು ಅದಕ್ಕೆ ತಕ್ಕ ಉತ್ತರ ಅದೇ ಸಮಯದಲ್ಲಿ ಅಲ್ಲಿನ ಕಲಾಪ್ರೇಮಿಗಳು ನೀಡುತ್ತಿದ್ದರು ಎನ್ನುವುದು ಹಲವರ ಅಭಿಪ್ರಾಯ .ಕುಂದಾಪುರ ಭಾಗದ ಜನರು ಮುಗ್ಧ ಜೀವಿಗಳು ಅದೇ ಹೇಳಿಕೆಯನ್ನು ಬೇರೆ ಡೆ ನೀಡುತ್ತಿದ್ದರೆ ಆ ಕ್ಷಣವೇ ಅಲ್ಲಿಂದ ಜಾಗ ಖಾಲಿ ಮಾಡಬೇಕಿತ್ತು ಯಾಕೆಂದರೆ ಈ ಹಿಂದಿಂದ ಘಟನೆಗಳನ್ನು ನೆನಪು ಮಾಡಿಕೊಂಡರೇ, ಈ ಹಿಂದಿನ ಶಿರಸಿಯ ಘಟನೆಯಾಗಿರಬಹುದು ಅಥವಾ ಬೆಳ್ತಂಗಡಿ ನಡೆದ ಅಹಂಕಾರಿತನಕ್ಕೆ ಬೆಲೆತೆತ್ತಿದ್ದರು ಆದರೂ ಅದರಿಂದ ಇನ್ನೂ ಬುದ್ಧಿ ಕಲಿತಿಲ್ಲ ಇದು ನಿಜಕ್ಕೂ ಒಳ್ಳೆ ಬೆಳವಣಿಗೆ ಅಲ್ಲವೇ ಅಲ್ಲ ಈಗಾಗಲೇ ವ್ರತಿ ಜೀವನದ ಕೊನೆ ಹಂತದಲ್ಲಿರುವ ಇವರು ಉಳಿದಿರುವ ದಿನಗಳಲ್ಲಿ ಕಲಾ ಪ್ರೌಢತ್ವವನ್ನು ಬೆಳೆಯಿಸಿಕೊಂಡು ಪ್ರೇಕ್ಷಕರ ವಲಯದಿಂದ ಕಲೆಗೆ ಬೆಲೆ ಸಿಗಲಿ ಎಂದೆಷ್ಟೇ ಹೇಳಬಹುದು.
ಬುಧವಾರ, ಮಾರ್ಚ್ 11, 2026
ಅವಮಾನಿಸಿದವರೇ ಮಾಡಿದರು ಸನ್ಮಾನ ! ಅಂಜದೇ ಸಾಧನೆಗೈದ ಸಂಜು !!
ಎಸ್ !ಅಂತೂ ಎಲ್ಲರ ನಿರಿಕ್ಷೆಯಂತೆ ಮ್ಯಾನ್ ಇನ್ ಬ್ಲೂ ಹುಡುಗರು ಪ್ರತಿಷ್ಠಿತ ಟಿ ಟ್ವೆಂಟಿ 2026ರ ಕ್ರಿಕೆಟ್ ವಿಶ್ವ ಕಪ್ ನ್ನು ಗೆದ್ದು ವಿಶ್ವ ಚಾಂಪಿಯನ್ ಆಗಿ ಮತ್ತೊಮ್ಮೆ ಹೊರಹೊಮ್ಮಿದ್ದಾರೆ . ಎರಡು ವರ್ಷಕ್ಕೊಮ್ಮೆ ನಡೆಯುವ ಟಿ20 ವಿಶ್ವಕಪ್ ಪಂದ್ಯಾಟವು ಪ್ರಾರಂಭಿಕ ಪಂದ್ಯ ಧೋನಿ ನೇತೃತ್ವದಲ್ಲಿ 2007ರಲ್ಲಿ ಟೀಮ್ ಇಂಡಿಯಾ ವಿಶ್ವಕಪ್ ಮೂಡಿಗೆರೆಸಿಕೊಂಡಿತು. ಸಾಕಷ್ಟು ವಿರಾಮದ ಬಳಿಕ ಇಂಡಿಯನ್ ಟೀಮ್ 2024ರಲ್ಲಿ ರೋಹಿತ್ ಶರ್ಮ ನಾಯಕತ್ವದಲ್ಲಿ ಮತ್ತೆ ಕಪ್ ಗೆ ಮುತ್ತಿಕ್ಕಿತ್ತು .
ಇದೀಗ ಗೆದ್ದು ಬೀಗಿ ಸತತ ಎರಡು ಬಾರಿ ಒಟ್ಟು ಮೂರು ಬಾರಿ ವಿಶ್ವಕಪ್ ಗೆದ್ದ ತಂಡವಾಗಿ ವಿಶ್ವ ದಾಖಲೆಯನ್ನು ತನ್ನ ಹೆಸರಿಗೆ ಬರೆಯಿಸಿ ಕೊಂಡಿದೆ.
ನಮ್ಮ ಭಾರತದ ಕ್ರಿಕೆಟ್ ತಂಡದಲ್ಲಿ ಇರುವಷ್ಟು ಅತ್ತ್ಯುತ್ತಮ ಆಟಗಾರರು ಬೇರೆಯಲ್ಲೂ ಸಿಗಲಿಕ್ಕೆ ಇಲ್ಲ ಒಬ್ಬರಿಗಿಂತ ಒಬ್ಬರು ಬಲಿಷ್ಠರು ಇಂತಹ ಪ್ಲೇಯರ್ಗಳನ್ನು ಅರಸಿ ಆರಿಸಿ ಆಯ್ಕೆ ಮಾಡೋದು ಸುಲಭದ ಮಾತು ಅಲ್ಲವೇ ಅಲ್ಲ ಅದೊಂದು ದೊಡ್ಡ ಸವಾಲು !. ಈ ಬಾರಿ ಹದಿನೈದು ಸದಸ್ಯರುಳ್ಳ ಒಳ್ಳೆಯ ಟೀಮನ್ನು ಆಡಳಿತ ಮಂಡಳಿ ಸೆಲೆಕ್ಟ್ ಮಾಡಿದಾಗಲೇ ಕ್ರಿಕೆಟ್ ಪಂಡಿತರು ಲೆಕ್ಕ ಹಾಕಿದ್ದರು ಈ ಬಾರಿ ಕಪ್ ಇಂಡಿಯಾದ ಮಡಿಲಿಗೆ ಎಂದು.ಅಂತೆಯೇ ಗ್ರೂಪ್ ಹಂತದಲ್ಲಿ ಒಂದು ಪಂದ್ಯ ಸೋತಿದ್ದು ಹೊರತು ಪಡಿಸಿದರೇ ಮತ್ತೆಲ್ಲವೂ ಗೆಲುವಿನ ಪತಾಕೆಯನ್ನು ಹಾರಿಸಿದ್ದೆವು .ಇದೆಲ್ಲವನ್ನೂ ಒತ್ತಿಟ್ಟಿಗಿಟ್ಟು ಬೊಟ್ಟು ಮಾಡಿ ಹೇಳಬಯಸಿದ್ದು ನಮ್ಮ ಸಂಜು ಸ್ಯಾಮ್ಸನ್ ಬಗ್ಗೆ
ವಿಕೆಟ್ ಕೀಪರ್ ಕಮ್ ಓಪನಿಂಗ್ ಬ್ಯಾಟರ್ ಆಗಿರುವ ಕೇರಳದ ಮೂಲದ ಸಂಜು ICC ಟ್ರೊಫಿಯಲ್ಲಿ ಆತನ ಬ್ಯಾಟ್ ನಿಂದ ರನ್ ನಿರೀಕ್ಷಿಸಲು ಸಾಧ್ಯವಿಲ್ಲ ಈತ ಕೇವಲ ಐಪಿಎಲ್ ಪ್ಲೇಯರ್ ಎಂಬ ಕುಹಕದ ಮಾತುಗಳು ಕೇಳಿ ಬರುತ್ತಿತ್ತು. ದುರಾದೃಷ್ಟವೇಬಂತೆ ಆತನ ಬ್ಯಾಟ್ ನಿಂದ ರನ್ ಕೂಡಾ ಹರಿಯುತ್ತಿರಲಿಲ್ಲ. ಮೊದಲೇ ಮೇನೇಜ್ಮೆಂಟ್ ರಾಜಕೀಯ ,ಆಯ್ಕೆಯ ಒತ್ತಡ... ಈತನ ಭವಿಷ್ಯದ ಮೇಲೆ ತೂಗುಗತ್ತಿ ನೇತಾಡುತ್ತಿತ್ತು . ಫಲಶ್ರುತಿ ಎಂಬಂತೆ ಸಾಕಷ್ಟು ಸೀರೀಸ್ ನಿಂದ ಹೊರಗೆ ಉಳಿಯಬೇಕಾದ ಪರಿಸ್ಥಿತಿ ಬಂದೊದಗಿತ್ತು. ಸೋಶಿಯಲ್ ಮೀಡಿಯಾವು ಸಂಜು ಪರವಾಗಿ ಆಯ್ಕೆಯ ಪ್ರಕ್ರಿಯೆಗೆ ಮ್ಯಾನೇಜ್ಮೆಂಟ್ ಗೆ ಚಾಟಿ ಬೀಸುತ್ತಿದ್ದವು.ಅದೇನೋ 2024 ರ ಟಿ20 ವಿಶ್ವಕಪ್ 15ರ ಬಳಗದಲ್ಲಿ ಸ್ಥಾನ ಪಡೆದಿದ್ದರೂ ಲಾಸ್ಟ್ ವರೆಗೆ ಬೆಂಚ್ ಬಿಸಿ ಮಾಡುವ ಕಾಯಕ ಮಾತ್ರ ಈತನದಾಗಿತ್ತು. ಒಂದೇ ಒಂದು ಮ್ಯಾಚ್ ನಲ್ಲಿ ಚಾನ್ಸ್ ಸಿಗಲೇ ಇಲ್ಲ .
ತದನಂತರ ಕೆಲವೊಂದು ಸೀರಿಸ್ ನಲ್ಲಿ ಸ್ಥಾನ ಸಿಕ್ಕರೂ,ಕಳಪೆ ಪ್ರದರ್ಶನ ದಿಂದ ಹೊರಗೆ ಉಳಿಯಬೇಕಾಯಿತು.ಅಂತೂ 2026ರಲ್ಲಿ ಸೆಲೆಕ್ಟ್ ಆಗಿದ್ದೆ ರೋಚಕ ! ಹದಿನೈದು ಸದಸ್ಯರ ಟೀಮ್ ನಲ್ಲಿ ಇಬ್ಬರು ಕೀಪರ್ಸ್ ಗಳನ್ನ ಸೇರಿಸಿ ಕೊಳ್ಳುವ ಅವಕಾಶದಲ್ಲಿ ಮೊದಲಿಗೆ ಇಶಾನ್ ಕಿಶನ್ ಹೆಸರು ಕೇಳಿಬಂದಿತ್ತು ಯಾಕೆಂದರೆ ಇತ್ತೀಚಿಗೆ ನಡೆದ ಸೈಯದ್ ಮುಸ್ತಾಕ್ ಆಲಿ ಹಾಗೂ ರಣಜಿ ಟ್ರೋಫಿಯಲ್ಲಿ ಉತ್ತಮ ಫಾರ್ಮ್ ನಲ್ಲಿರುವುದರಿಂದ ಕಣ್ಣು ಮುಚ್ಚಿ ಸೆಲೆಕ್ಟ್ ಮಾಡಲಾಗಿತ್ತು . ಇನ್ನು ಹಿರಿಯ ಅನುಭವಿ ಆಟಗಾರ 31ರ ಹರೆಯದ ಸಂಜು ಸ್ಯಾಮ್ಸನ್ ಹಾಗೂ ಇತ್ತೀಚಿಗೆ ಉತ್ತಮ ಲಯ ಕಂಡು ಕೊಳ್ಳುತ್ತಿರುವ ಜಿತೇಶ್ ಶರ್ಮ ನಡುವೆ ಪೈಪೋಟಿ ಯಲ್ಲಿ ಕೊನೆಗೆ ಸಂಜು ಸ್ಥಾನ ಗಿಟ್ಟಿಸಿ ಕೊಳ್ಳುವಲ್ಲಿ ಸಫಲತೆಯನ್ನು ಸಾಧಿಸಿದ್ದರು .
ಸಂಜುವಿನ ಅದೃಷ್ಟ ಪುನಹ ಕೈ ಕೊಡುತ್ತಿತ್ತು ಗ್ರೂಪ್ ಹಂತದ ಎರಡೆರಡು ಪಂದ್ಯದಲ್ಲಿ ಒಂದಂಕಿ ಸುತ್ತಿ ಪೆವಿಲಿಯನ್ ಸೇರುತ್ತಿದ್ದು ಅಭಿಮಾನಿಗಳಿಗೆ ಬಾರಿ ನಿರಾಸೆ ಜೊತೆಗೆ ಕೋಚ್ ಗಳ ಕೆಂಗಣ್ಣಿಗೆ ಗುರಿಯಾಗುತ್ತಿದ್ದರು. ಟಿ20 ವಿಶ್ವ ರ್ಯಂಕಿಂಗ್ ನಲ್ಲಿ ಮೊದಲ ಸ್ಥಾನದಲ್ಲಿರುವ ಅಭಿಷೇಕ್ ಶರ್ಮ ನಿಂದ ಕಳಪೆ ಪ್ರದರ್ಶನ ಬರುತ್ತಿದ್ದರೂ, ಆತನಿಗೆ ಸಿಗುತ್ತಿದ್ದ ಅವಕಾಶ ಸಂಜುಗೆ ಸಿಕ್ಕಿರಿಲಿಲ್ಲ ಪುನಃ ಪುನಃ ಬೆಂಚ್ ಕಾಯುವ ಪರಿಸ್ಥಿತಿ ಬಂದೊದಗಿತು ಒಂದೆರಡು ಮ್ಯಾಚ್ ನಲ್ಲಿ ಇಶಾನ್ ಕಿಶನ್ ನ್ನು ಸಂಜು ಬದಲಿಗೆ ವಿಕೆಟ್ ಕೀಪರ್ ಆಗಿ ನೇಮಿಸಲಾಯಿತು .
ಆತನ್ನು ಬೌಂಡರಿ ಲೈನ್ ನಲ್ಲಿ ಫೀಲ್ಡ್ ಗೆ ಕಳುಹಿಸುತ್ತಿದ್ದರು. ನತದೃಷ್ಟ ಸಂಜು ವಿನ ಬ್ಯಾಟ್ ನಿಂದ ರನ್ ಬಾರದೇ ಇದ್ದರೂ ವಿಕೆಟ್ ಕೀಪಿಂಗ್ ನಲ್ಲಿಏನೂ ಮೋಸ ಇರಲಿಲ್ಲ ಎತ್ತಿದ ಕೈ. ಇಶಾನ್ ಕಿಶನ್ ಗಿಂತ ಉತ್ತಮವಾಗಿಯೇ ಕೀಪಿಂಗ್ ಮಾಡ ಬಲ್ಲ ಸಾಮರ್ಥ್ಯದ ಸಂಜು ಬೌಂಡರಿ ಲೈನ್ ನಲ್ಲಿ ನಿಲ್ಲಬೇಕಾಯಿತು. ಪ್ರೆಸ್ ಮೀಟ್ ನಲ್ಲಿ ಹೊರಹೊಮ್ಮುತ್ತಿದ್ದ ಹೆಡ್ ಕೋಚ್ ಗೌತಮ್ ಗಂಭೀರ್ ಹಾಗೂ ನಾಯಕ ಸೂರ್ಯಕುಮಾರ್ ವ್ಯಂಗ್ಯ ಮಾತುಗಳನ್ನು ಅದು ಹೇಗೋ ಅರಗಿಸಿ ಕೊಂಡರೂ ಗೊತ್ತಿಲ್ಲ.
ಒಂದೇ ಒಂದು ಚಾನ್ಸ್ ಗೆ ಕಾಯುತ್ತಿದ್ದ ಸಂಜುಗೆ ಆದಿನ ಅವಕಾಶ ಸಿಗುತ್ತದೆ.ಇದು ಮಾಡು ಇಲ್ಲವೇ ಮಡಿ ಎನ್ನುವಂತಿದ್ದ ಅವಕಾಶವನ್ನು ಅದ್ಭುತವಾಗಿ ಬಳಸಿಕೊಂಡರು. ಮ್ಯಾಚ್ ಸೂಪರ್ 8 ಗೆ ಸ್ಥಾನ ಪಡೆಯುವುದಕ್ಕೂ ಸಂಜುಗೆ ಕೂಡ ಮುಂದಿನ ಸ್ಥಾನ ಭದ್ರ ಪಡಿಸಲು ಈ ಮ್ಯಾಚ್ important ಆಗಿತ್ತು. ಮುಂದೆ ನಡೆದಿದ್ದೇ ಇತಿಹಾಸ !! ವೆಸ್ಟ್ ಇಂಡೀಸ್ ವಿರುದ್ಧ ಪಂದ್ಯದಲ್ಲಿ 50 ಬಾಲ್ ಗೆ ಬರೋಬ್ಬರಿ 97 ರನ್ ಚಚ್ಚಿದ ಸಂಜು ನಾಟ್ ಔಟ್ ! ಇಂಡಿಯಾವನ್ನು ಗೆಲ್ಲಿಸುವುದರ ಜೊತೆಗೆ ನಿರ್ಲಕ್ಷ್ಯೆ ಮಾಡಿದವರಿಗೆ ಬ್ಯಾಟ್ ನಿಂದ ಉತ್ತರ ಕೊಟ್ಟು ಮ್ಯಾನ್ ಆ ದಿ ಮ್ಯಾಚ್ ಪ್ರಶಸ್ತಿಯನ್ನು ಪಡೆದರು. ಜೊತೆಗೆ ಕೀಪರ್ ಸ್ಥಾನವೂ ಭದ್ರವಾಯಿತು.ಸಂಜುವಿನ ಬ್ಯಾಟ್ ಆರ್ಭಟ ಕಡಿಮೆ ಯಾಗಲಿಲ್ಲ ಸೆಮಿ ಫೈನಲ್ ನಲ್ಲೂ ಇಂಗ್ಲೆಂಡ್ ಬಾಲರ್ ಗಳನ್ನೂ ಇಲ್ಲಿಲ್ಲದಂತೆ ಕಾಡಿದರು ಬೌಂಡರಿಗಳ ಮೇಲೆ ಬೌಂಡರಿ! ಚೆಂಡು ಸೀಮಾ ಗೆರೆ ದಾಟುತ್ತಿತ್ತು.46 ಬಾಲ್ ಗೆ 89 ರನ್ ಗಳಿಸಿ ತಂಡ ಫೈನಲ್ ತಲುಪಲು ಮುಖ್ಯಪಾತ್ರ ಮಾತ್ರವಹಿಸಿದ ಸಂಜುವಿನ ಈ ಹೋರಾಟ ಕಡಿಮೆಯಾಗಲಿಲ್ಲ ನ್ಯೂಜಿಲ್ಯಾಂಡ್ ವಿರುದ್ಧ ಫೈನಲ್ ನಲ್ಲಿ 89ರನ್ 46 ಬಾಲಿಗೆ ಜಾಣ್ಮೆ,ತಾಳ್ಮೆಯ ಆಟಕ್ಕೆ ಇಡೀ ಕ್ರಿಕೇಟ್ ಜಗತ್ತು ಬೆಕ್ಕಸ ಬೆರಗಾಯಿತು. ಟೀಮ್ ಕೋಚ್ ಸೇರಿದಂತೆ ಕ್ಯಾಪ್ಟನ್ ಎಲ್ಲರೂ ತಲೆತಗ್ಗಿಸಿದರು, ತಲೆಬಾಗಿ ವಂದಿಸಿದರು. ಎಷ್ಟೆಲ್ಲಾ ಅವಮಾನವನ್ನು ಉಂಡ ಸಂಜು 2 ಬಾರಿ ಮಾನ್ ಒಫ್ ದಿ ಮ್ಯಾಚ್ ಕೊನೆಗೆ ಮ್ಯಾನ್ ಆಫ್ ದಿ ಸೀರೀಸ್ ನ್ನು ಪಡೆದರು ಇದು ನಿಜಕ್ಕೂ ಅದ್ಭುತ!! ಅವಮಾನಿಸಿದವರೇ ಮುಂದೆ ಸನ್ಮಾನ ಸ್ವೀಕರಿಸಿದ ಪರಿ ನಿಜಕ್ಕೂ ಗ್ರೇಟ್! ಪ್ರತಿಭೆ ಇದ್ದರೂ ವೇದಿಕೆ ಸಿಗದೇ ಹೋಗುವುದು ಬೇಸರ ಸರಿಸುವ ವಿಚಾರ ಒಂದೆರಡು ಮ್ಯಾಚ್ ನಲ್ಲಿ ಕಳಪೆ ಯಾದರೂ ಇನ್ನೊಂದೆರೆಡು ಚಾನ್ಸ್ ಕೊಟ್ಟರೇ ಖಂಡಿತ ಫಲ ಸಿಗುತ್ತದೆ ಪ್ರತಿಭೆ ಇದ್ದರೇ ಸಾಲದು ಅದೃಷ್ಟ ಕೂಡ ಬೇಕು ಅಲ್ಲವೇ?
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)


