ಶುಕ್ರವಾರ, ಡಿಸೆಂಬರ್ 16, 2011

ಮಡೆ-ಮಡೆ ಸ್ನಾನ -ಅನಗತ್ಯ ವಿವಾದ

ಮಡೆ-ಮಡೆ   ಸ್ನಾನ -ಅನಗತ್ಯ ವಿವಾದ 


ಶ್ರೀ ಕುಕ್ಕೆ ಸುಬ್ರಮ್ಹಣ್ಯ ದೇವಸ್ಥಾನ
 ಎಲ್ಲಿ ನೋಡಿದರೂ ,ಬಿಸಿ ಬಿಸಿ ಸುದ್ದಿ ,ದಿನ ಬೆಳಗಾದ್ರೆ ವ್ರತ್ತ ಪತ್ರಿಕೆ ಇಂದ ಹಿಡಿದು ದೃಶ್ಯ ಮಧ್ಯ ಮಗಳಲ್ಲಿ ವಿವಿಧ ಬಗೆಯ ಅವತಾರಗಳಿಂದ ವ್ಯಾಖ್ಯನಿಸಲ್ಪಡುತ್ತಿದೆ  ಮಡೆ-ಮಡೆ  ಸ್ನಾನ  ಕಥಾನಕ .ಕಾಲೇಜ್ ಕ್ಯಾಂಪಸ್ ನಿಂದ ,ವಿಧಾನ ಸಭೆ ಯವರೆಗೂ ಇದರ ಚರ್ಚೆ -ಸವ್ವಾದ.. ಹೌದು ವಿಚಾರದ ಅಲೆಯನ್ನು ಕೇಳುತ್ತಿದ್ದರೆ ನಗೆಯ ನಡಿಗೆಯನ್ನು ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ .ನಾಗನ ಪ್ರಸಿದ್ದ ಕ್ಷೇತ್ರ ವಾಗಿರುವ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದಲ್ಲಿ ಚಂಪಾಸೃಷ್ಟಿಯ ಸಮಯದಲ್ಲಿ 3 ದಿನಗಳ ಕಾಲ ವಿಶೇಷ ಪೂಜೆಯ ನಡುವೆ ,ಮಡೆ-ಮಡೆ  ಸ್ನಾನ ಎನ್ನುವ ಒಂದು ವಿಶಿಷ್ಟ ಸೇವೆ (ಹರಕೆ) ಇಲ್ಲಿ ನೆದೆಯಲ್ಪದುತ್ತದೆ.ಬ್ರಾಹಣರು ಉಂಡ ಎಲೆಯ ಮೇಲೆ ಉರುಳು ಸೇವೆ ಮಾಡುದೆ ಮಡೆ-ಮಡೆ  ಸ್ನಾನ. ಇದರಿಂದ ನಾಗನ ಪ್ರಮುಖ ಅವಕ್ರಪಗೆ ಉಂಟಾಗುವ ಸಂತಾನ ಪ್ರಾಪ್ತಿ ಮತ್ತು ಚರ್ಮ ಸಂಬಂಧಿ ರೋಗಗಳಿಗೆ ಇದು ರಾಮಬಾಣ  ಎನ್ನುದು ಇದರ ಹರಕೆ ಹೊತ್ತ ಫಲಾನುಭವಿಗಳ ಅಭಿವ್ಯಕ್ತಿ .ಇದಕ್ಕೆ ಸುಮಾರು 500  ವರ್ಷಗಳ ಇತಿಹಾಸ ವಿದೆ . ಇಷ್ಟೊಂದು ವರ್ಷಗಳಿದ ನಡೆದು ಬರುತ್ತಿರುವ ಸಂಪ್ರದಾಯ ವರ್ಷ ವೇ ಯಾಕೆ ಬೆಳಕಿಗೆ ,ವಿಚಾರಣಿಗೆ,ದೊಡ್ಡ ಸುದ್ದಿ ಮಾಡಿದ್ದುದ್ದರ ಅರ್ಥವೇ ಗೊತ್ತಾಗುತ್ತಿಲ್ಲ .ದಿನಕೊಂದರಂತೆ ಹುಟ್ಟಿಕೊಳ್ಳುತ್ತಿರುವ ದೃಶ್ಯ ಮಾಧ್ಯಮಗಳ ಸ್ಪರ್ಥಾತ್ಮಕ ಭರ -ಭರಾಟೆಯ ನಡವಿನ ಸಂಘರ್ಷದ ಸ್ವಷ್ಟ ಸುದ್ದಿ ಅಷ್ಟೇ .ಹಾಗಂತ ಇದು ಇದು ಒಂದು ಉತ್ತಮವಾದ ಸಂಪ್ರದಾಯ/ಪದ್ಧತಿ  ಎಂಬುದು ಸರಿಯಲ್ಲ .ಇದನ್ನೇ ಕೇವಲ ನಿಷೇಧಿಸಬೇಕೆಂದು ಪಟ್ಟು ಹಿಡಿದು ಬೊಟ್ಟು ಮಡಿ ತೋರಿಸುತ್ತಿರುವ ಕೆಲವರ ವಾಖ್ವಗರಿಗೆ ಏನೆನ್ನಬೇಕೋ ಗೊತ್ತಾಗುತ್ತಿಲ್ಲ .
ಮಡೆ ಸ್ನಾನ  ಅಂದ್ರೆ ಇದೆ
ವಿರೋದಿಸುವವರ ವಿರುದ್ದ ಹಲ್ಲೆ
ಪ್ರಾಣಿ ಬಲಿ ಸೇರಿದಂತೆ ಹತ್ತು -ಹಲವು ಅನಿಷ್ಟ ಪದ್ಧತಿ ಗಳು ನಮ್ಮಲ್ಲಿ ರಾರಾಜಿಸುದನ್ನು ತಡೆಹಿಡಿಯುದನ್ನು ಬಿಟ್ಟು ಇದರ ಬೆನ್ನೇ ಹಿಡಿದಿರುದು ನಾಚಿಗೆ ಗೆಡಿತನ.ಒಬ್ಬೊಬ್ಬರ ಆಚರಣೆ ,ಅವರವರುಗಳ ಭಾವ -ಭಕ್ತಿಗೆ ತಕ್ಕಂತೆ ಹರಕೆ ,ಆರಾಧನೆಗೆಳು ವಿಚಿತ್ರ .ಒಂದೊಂದು ಭಾಗದಲ್ಲಿ ಒಂದೊಂದು ದೈವದ ಪ್ರಭಾವ ಹೆಚ್ಚು .ಕಷ್ಟ ಪರಿಹಾರಕ್ಕಾಗಿ ಹರಕೆ ಹೊತ್ತವರು ಸೇವೆಯನ್ನು ಮಾಡುತ್ತಾರೆ ..ಹಾಗಾಗಿ ಸಂಸೃತಿ ನಡೆದುಕೊಂಡು ಬಂದಿದೆ .ಹಾಗಂತ ಇದನ್ನು ಪ್ರತಿಯೊಬ್ಬರೂ ಮಾಡಲೇಬೇಕು ಎಂಬ ಕಟ್ಟಪ್ಪಣೆ ಏನೂ ಇಲ್ಲ ಅಪ್ಪ ನೆಟ್ಟ ಆಲದ ಮರಕ್ಕೆ ನೇಣು ಹಾಕಿಕೊಂಡವರು ಜಮಾನದಲ್ಲಿ ಯಾರೂ ಇಲ್ಲ . ಮಡೆ-ಮಡೆ   ಸ್ನಾನ  ದಲ್ಲಿ ಪಾಲ್ಗೊಂಡವರು /ನೆಚ್ಚಿಕೊಂಡವರು ಅನಕ್ಷರಿಸ್ತರಿಗಿತ ಬುದ್ದಿವನ್ಥರು ,ವಿದ್ಯಪರಿಣಿತರ   ಸಂಖ್ಯೆ ಯೇ ಹೆಚ್ಚಇದರಿಂದ ಅನುಕೂಲವಾದವರು ಅವಲಂಬಿಸಿಕೊಂಡುಬಂದಿದ್ದಾರೆ .ಆದುದರಿಂದ ಅವರವರುಗಳ ಭಿನ್ನ -ಭಿನ್ನ ನಂಬಿಕೆ ವಿಶ್ವಾಸದ ಪ್ರತಿಷ್ಠೆ ಅಷ್ಟೇ . ವಿರೋದಿಸುವವರ  ವಿರುದ್ದ ಹಲ್ಲೆ -ಹರತಾಳಕ್ಕೆ ಮೊನ್ನೆ  ಆಸ್ವಾಧ ಕೊಟ್ಟಿದು ಅನವಶ್ಯಕವಾಗಿತ್ತು ..ಇದು ಬುದ್ದಿವಂತರ ನಾಡಿನ ಲಕ್ಷಣವಲ್ಲ .


 ಚಿತ್ರ ಕೃಪೆ -ಗೂಗಲ್