ಬುಧವಾರ, ಜುಲೈ 25, 2012

ಅನಾವ್ರಷ್ಟಿ ತಡೆಗೆ -ಕಪ್ಪೆಗಳ ಮದುವೆ,ಸೀಮಂತ ,ನಾಮಕರಣ ಮುಂದೆ ???

  ಅನಾವ್ರಷ್ಟಿ ತಡೆಗೆ -ಕಪ್ಪೆಗಳ ಮದುವೆ,ಸೀಮಂತ ,ನಾಮಕರಣ  ಮುಂದೆ ???

ಅನಾವ್ರಷ್ಟಿ ಯನ್ನು ತಡೆಯಲು ,ಅತಿವ್ರಷ್ಟಿಯನ್ನು ಬಿಳ್ಕೊಡಲು ಜನ ಸಾಮಾನ್ಯರು ಮಾಡುವ ಕಾರು-ಬಾರು ಒಂದೆರಡಲ್ಲ .ದೇವರಲ್ಲಿ ಹಲವಾರು ಬಗೆ ಗಳಲ್ಲಿ ಹರಕೆ -ಬಲಿ ಗಳನಿಟ್ಟು,ವರುಣ ನ ಆಗಮನಕ್ಕೆ ಮೇ ತಿಂಗಳಿಂದ ಕರೆಯೋಲೆ ಎಲ್ಲರ ಮನ -ಮನೆ ಗಳಲ್ಲಿ ,ದೇವಸ್ಥಾನ ,ಗುಡಿ -ಮಠ ಗಳ ಲ್ಲಿ ನಾನಾ ರೀತಿಯ ತಂತ್ರ -ಮಂತ್ರ ,ಪೂಜಾ -ಪುನಸ್ಕಾರ ನಡೆಯಲ್ಪಡುತ್ತದೆ. ಅದರಲ್ಲೂ ಅಳ ಲನ್ನು ಹೇಳ ತೀರದು .ಅದೆಷ್ಟೋ ಹರ ಸಾಹಸದಿಂದ ಮಳೆ ರಾಯನನ್ನು ವೆಲ್ ಕಂ ಮಾಡಲು ಹೆಣಗಾಡುತ್ತಾರೆ. ಸರ್ಕಾರವು ಸಹಾ ಕಣ್ಣೊರೆಸುವ ತಂತ್ರಕ್ಕೆ ಮಣಿ ಯಾಗುತ್ತದೆ ಆ ಬಜೆಟ್ ಏಎ ಬಜೆಟ್ ಎಂದು ಬರಗಾಲದಿಂದ ತೊಯ್ಯೋತ್ತಿರುವ ಕೆಲವು ಪ್ರದೇಶಗಳಿಗೆ ವಿವಿಧ ಯೋಜನೆಯನ್ನು ಹರಿಸುತ್ತದೆ .ಇನ್ನು ವಿಜ್ಞಾನವೂ ಸಹಾ ಒಂದು ಬದಿಯಲ್ಲಿ ನಾನಿದ್ದೇನೆ ಎಂದು ಬಾಯಿ ಬಿಡುತ್ತದೆ .ನಾವೇನೂ ಕಮ್ಮಿ ಇಲ್ಲ ಅಂತ ವಿಜ್ಞಾನಿಗಳು ಆಕಾಶಕ್ಕೆ ರಕ್ಕಸ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತೆ ಉಪ್ಪು ಮತ್ತಿತ್ತರ ರಾಸಾಯನಿಕ ಪಧಾರ್ಥವನ್ನು ಸಿಂಪಡಿಸಿ ಮೋಡ ಬರಿಸಿ ಕ್ರತಕ ಮಳೆ ಬರಿಸುವದಕ್ಕೆ ಶ್ರಮ ಪಡುತ್ತಾರೆ ಅವರ ಅದೃಷ್ಟಕ್ಕೆ ಎಲ್ಲೊ ಒಂದು ನಾಲ್ಕು ಹನಿಯನ್ನು ಚೆಲ್ಲಿ ಮಂಗ -ಮಾಯವಾಗಿ ಬಿಡುತ್ತದೆ .
ಇನ್ನು ಬಯಲು ಸಿಮೆ .ಉತ್ತರ ಕನ್ನಡ ಜಿಲ್ಲೆಯಲ್ಲಿ ಅಬ್ಬಅಬ್ಬಾ ಎಂತೆಂತ ಕಸರತ್ತುಗಳನ್ನು ನಡೆಸುತ್ತಾರೆ ,ಎತ್ತನ್ನು ಓಡಿಸೋದು ,ಉಪ್ಪಿನ ಹೋಮವನ್ನು ಮಾದ್ವುದರಿಂದ ಹಿಡಿದು ,ಕಪ್ಪೆಗಳಿಗೆ ಮದುವೆ ,ಸೀಮಂತ ದವರೆಗೂ ಕೈ ಹಾಕಿದ್ದಾರೆ .ಅದೆಲ್ಲ ಅವರವರ ಭಕ್ತಿ -ಭಾವಗಳಿಗೆ ಬಿಟ್ಟ ವಿಚಾರ .ಆದರೆ ಮೊನ್ನೆ -ಮೊನ್ನೆ ಕರಾವಳಿಯ ಬುದ್ದಿವಂತರ ಜಿಲ್ಲೆಯೆಂದು ಹೆಸರು ಗಳಿಸಿದ ಉಡುಪಿಯಲ್ಲಿ ಈ ಒಂದು ಜಿಲ್ಲಿಗೆ ವಿರುದ್ಧವಾದ ಅಚ್ಚರಿಯ ಘಟನೆಯೊಂದು ನಡೆದು ಹೋಯಿತು .ಮಳೆ ರಾಯನ ಓಲೈಕೆಗೆ ಎಲ್ಲಾ ಕಡೆಗಳಿರುವಂತೆ ಇಲ್ಲಿಯೂ ಸಹಾ ಆ ಸಮಯದಲ್ಲಿ ದೇವತಾ ಕಾರ್ಯಗಳು ಆಚರಿಸಲ್ಪದುತ್ತವೆ..ಹೋಮ -ಹವಣ,ಸಿಯಾಳ ಅಭಿಷೇಕ .ಕ್ಷಿರಾಭಿಷೇಕ    ಹೀಗೆ ಭಕ್ತಿ ಪ್ರಧಾನ ವಾಗಿ ನಡೆಯುತ್ತದೆ .ಆದರೆ ಇಲ್ಲಿ ಮೊನ್ನೆ ನಡೆದಿದ್ದು ಮಾತ್ರ ವಿಚಿಧ್ರಿ ಕಾರಿ  ನಡೆದಿದಿದ್ದು ಇಷ್ಟೇ  ಕಪ್ಪೆ ನಾಮಕರಣ .ಅರ್ಥಾತ್ ತೊಟ್ಟಿಲನ್ನು ಕಟ್ಟುವ ಪದ್ಧತಿ .ಅಂದರೆ ಹಿಂದೂ ಸಂಪ್ರದಾಯದ ಪ್ರಕಾರ ಮಗು ಜನಿಸಿದ 11 ದಿಂದ ಬಳಿಕ ತೊಟ್ಟಿಲಿಗೆ ಹಾಕಿ ನಾಮಕರಣ ಮಾಡಲಾಗುತ್ತದೆ ಟೀಟ್ ಅದೇ ರೀತಿ ಮೊನ್ನೆ ಉಡುಪಿ ಯಕಿದಿಯೂರು ಸಭಾ೦ ಗ ಣ ಜಿಲ್ಲಾ ನಾಗರೀಕ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು ಅವರು ಈ ಕಾರ್ಯಕ್ರಮದ ರೂವಾರಿ ಯಾಗಿದ್ದರು .6 ಕಪ್ಪೆಗಳನ್ನು ಹಿಡಿದು ತಂದು ಹೆಂಗೆಳೆಯರ ಆರತಿ ತಟ್ಟೆ ,ವಾದ್ಯ ಘೋಷ ,ತಾಳ-ಮೇಳ ಗಳ ಸಂಯೋಜನೆ ಯೊಂದಿಗೆ 'ಮಳೆರಾಯ 'ಎಂದು ನಾಮಕರಣ ವನ್ನು ಮಾಡಿಸಿ ಬಿಟ್ಟರು ಇದೆಂತ ಆಚರಣೆ ಮರ್ರೆ ಕೇಳಿದರೆ ಅವರೇ ಹೇಳುವಂತೆ ಹಿಂದೆ ಬೇರೆ -ಬೇರೆ ಜಿಲ್ಲೆ ಗಳಲ್ಲಿ ಕಪ್ಪೆಗಳಿಗೆ ಮದುವೆ ,ಸಿಮಂತ ಮಾಡಿಸಿಲಾಗಿದೆ ಈಗ ನಾವು ನಾಮಕರಣ ಮಾಡುವ ಕಾರ್ಯಕ್ಕೆ ಕೈ ಹಾಕಿದ್ದೇವೆ ಕಪ್ಪೆಗಳು ವಟ ಗುಟ್ಟಿದರೆ ಮಳೆ ಬರುತ್ತದೆ ಎಂಬ ನಂಬಿಕೆ ತಲೆ -ತಲೆಯ೦ರದಿಂದ  ಬಂದಿದೆ .ನೆರದಿದ್ದವರ ಅಚ್ಚರಿಯ ಪ್ರಶ್ನೆಗೆ ಸಿದ್ದ ಉತ್ತರವನ್ನು ನೀಡಿದರು .ಏನೇ ಇರಲಿ ಬುದ್ದಿವಂತರ ನಾಡಿಗೆ ಈ ಒಂದು ಕಾರ್ಯ ಕರ್ಮ ಅವಶ್ಯ ವಿತ್ತೇ ಹಲವಾರು ಜನ ಮನಸ್ಸಿನಲ್ಲಿ ಹೇಳಿಕೊಂಡರೆ ,ಕಪ್ಪೆಗಳಿಗೆ ಮದುವೆ ಆಯಿತು ,ಸಿಮಂಥ ಆಯಿತು ,ನಾಮಕರಣವೂ ಆಯಿತು ಮುಂದೆ ಏನು ? ಎಂಬ ಪ್ರಶ್ನೆಯನ್ನು ಮೂಗಿನ ಮೇಲಿಟ್ಟು ಎಲ್ಲರೂ ಜಾಗ ಖಾಲಿ ಮಾಡಿದರು .