ಬುಧವಾರ, ನವೆಂಬರ್ 21, 2012

ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಬೆಲೆ ಇಲ್ಲವೇ ?



ಸಾಮಾಜಿಕ ತಾಣ ,ವ್ರತ್ತ ಪತ್ರಿಕೆ ಸೇರಿದಂತೆ ಇನ್ನಿತರ ವಿವಿಧ ಮಾಧ್ಯಮಗಳಲ್ಲಿ ತಮ್ಮ -ತಮ್ಮ ಅನಿಸಿಕೆ -ಅಭಿಮತ ,ಅಭಿವ್ಯಕ್ತಿ ಎಂಬ ವಿಧಾನಗಳ ಮೂಲಕ  0ವಾದವನ್ನು ಮಂಡಿಸುದಕ್ಕೆ ಮುಕ್ತವಾದ ಸ್ವಾತಂತ್ರ್ಯ ಅವಕಾಶದ ಹಕ್ಕು ಎಲ್ಲರಿಗೂ ,ಎಲ್ಲಾ ಸಮಯದಲ್ಲೂ ,ಎಲ್ಲಾ ಕ್ಷೇತ್ರದಲ್ಲೂ ಇದೆ . ಅದಕ್ಕೆ ಯಾರ ಸಮ್ಮತಿಯ ಅವಶ್ಯಕತೆಯೂ ಇರೂವುದಿಲ್ಲ ,ಆದರೆ ಮೊನ್ನೆ -ಮೊನ್ನೆ ಬಾಳಾ ಟಾಕ್ರೆ ವಿವಾದದ ಬಗ್ಗೆ ಉಂಟಾದ ಘಟನೆಯಿಂದಾಗಿ ಅಭಿವ್ಯಕ್ತಿ ಸ್ವತಂತ್ರ ಹಕ್ಕು ಗಾಳಿ ಹಿಡಿದಿರವುದು ದುಖಕರ ಸಂಗತಿ ಟಾಕ್ರೆ  ಬಗ್ಗೆ ಅಭಿಮಾನದ ಎಳೆ ಇದ್ದರೂ .ಒಂದೊಂದು ಆತಂಕಕಾರಿ ಚಟುವಟಿಯಿಂದ ಅಸಮಧಾನದ ವಾತಾವರಣದಿಂದ  ,ಎಲ್ಲೊ ಒಂದು ಕಡೆ ತೆರೆಮರೆಯಲ್ಲಿ ನೆಲೆಸಿರುವದು  ಸತ್ಯ ವಿಚಾರವೇ . ಅವರ ಅಂತ್ಯ ಕ್ರಿಯೆದ ವೇಳೆ ಮುಂಬಯಿ ಬಂದ್ ಮಾಡಿದ್ದರಿಂದ ಹಲವಾರು ಸಮಸ್ಯೆಯನ್ನು ಹುಟ್ಟು ಹಾಕಿದ್ದರಿಂದ ''ಶಹಾನ್''  ಎನ್ನುವವರು ತಮ್ಮ ಮುಕ್ತ ಅನಿಸಿಕೆ ಯನ್ನು facebook ಎಂಬ ಸಾಮಾಜಿಕ ತಾಣ ದಲ್ಲಿ ಹಂಚಿ ಕೊಂಡಿದ್ದರು .ಅದು ಸ್ತುತರ್ಹ,ಅವರ ಹಕ್ಕೂ ಕೂಡ ಹೌದು . ಪೋಸ್ಟ್ ಇವರ ಗೆಳತಿ ''ವೇಣು ಶ್ರೀನಿವಾಸ್ ''ಗೆ ಒಪ್ಪಿಗೆ ಯಾಗಿ like ನ್ನು ಅದುಮಿ ಬಿಟ್ಟರು . ಒಂದು ಪುಟ್ಟ ವಿಚಾರಕ್ಕೆ ಈರ್ವರನ್ನು ಪೋಲಿಸ್ ರನ್ನು ಬಂಧಿಸಿ ಬಿಟ್ಟರು ,ಶಿವ ಸೇನಾ ಸದಸ್ಯರು ,ಟಾಕ್ರೆ ಅಭಿಮಾನಿಗಳೆಂದು ಕರೆಯುವ ಕೆಲವು ಮಹಾನುಭರು  ಶಾಹಿನ್ ಚಿಕ್ಕಪ್ಪನ ಆಸ್ಪತ್ರೆ ಯನ್ನು ದ್ವಂಸವನ್ನೂ ಕೂಡ ಮಾಡಿ ಬಿಟ್ಟರು ಒಂದು ಪುಟ್ಟ ಕಾಮೆಂಟ್ ನಿಂದ ಬೆಟ್ಟದಂಥ ಸ್ಥಿತಿ ಉದ್ಬವಿಸಿ ಇಬ್ಬರ ಮನಸ್ಥಿತಿ ಕುಂಠಿತಗೊಂಡದ್ದಲ್ಲದೆ  ,ಮನೆಯವರ ಮರ್ಯಾದೆಯೂ ಬೀದಿಗೆ ಬಂದು ಬಿಟ್ಟಿತು .facebook  ಖಾತೆ ಯನ್ನು ಮುಚ್ಚುವ0ತಾಯಿತು ,
ಇನ್ನು ಮುಂದೆ ಯಾವುದೇ ಅಭಿಪ್ರಾಯವನ್ನು ಹಂಚಿ ಕೊಳ್ಳುವ ಮನಸ್ಸು ಮುದುಡಿ ಹೋಗುವಂತಾಯಿತು .ನಿಜಕ್ಕೂ ಇದು ಅರಗಿಸಿ ಕೊಳ್ಳಲಾಗದ ವಿಚಾರವೇ . ತಮ್ಮ ಅಭಿವ್ಯಕ್ತಿ ಸ್ವತಂತ್ರ ವನ್ನು  ಯಾರೂ ಸಹಾ ಕಸಿದು ಕೊಳ್ಳುವ ಹಕ್ಕನ್ನು ಪಡೆಯುವ ಇಲ್ಲದಿದ್ದರೂ ಸಂಧರ್ಬದಲ್ಲಿ ಕಾನೂನು ಕಾಯ್ದೆ ಗಳೆಲ್ಲ ಸತ್ತು ಸುಡು ಗಾಡು ಸೇರಿ ಬಿಟ್ಟುವು .ಭಾರತೀಯ ನೀತಿ ಸಂಹಿತೆ ಪ್ರಕಾರ ಬಂಧನ ನ್ಯಾಯ ಸಮ್ಮತವೇ ಅಲ್ಲ .ಏನೇ ಇರಲಿ ಆಗಿದ್ದು ಆಗಿ ಹೋಗಿದೆ  ಇದರ ಪರಿಣಾಮ ಮುಂದೆ ಯಾವುದೇ ವ್ಯಕ್ತಿಯೂ ತಮ್ಮ ಅಭಿವ್ಯಕ್ತಿ ಯನ್ನು ಅನಾವರಣ ಗೊಳಿಸಲು ಆಲೋಚನೆ ಮಾಡಬೇಕಾದ ಪರಿಸ್ತಿತಿ ಉದ್ಬವ ಗೊಂಡಿದೆ .


ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಗೆ ಅಂತರಾಷ್ಟ್ರೀಯ ಕ್ರೀಡಾ ಪಟು ಮಮತಾ ಪೂಜಾರಿ ಯಾ ಹೆಸರು ಮರೆತು ಹೋಯಿತೇ ??


ನವೆಂಬರ್ ಒಂದರಂದು ಪ್ರತಿವರ್ಷವೂ ನೀಡುವಂತೆ ಉಡುಪಿ ಜಿಲ್ಲೆಯು ರಾಷ್ಟ್ರ ಮತ್ತು ರಾಜ್ಯಮಟ್ಟದಲ್ಲಿ ಉತ್ತಮ ಸಾಧನೆ ಮಾಡಿದ ಸಾಧಕರನ್ನು ಜಿಲ್ಲೆ ಮೂಲೆ -ಮೂಲೆ ಗಳಿಂದ ಆಯ್ಕೆ ಮಾಡಿ ಸನ್ಮಾನದ ಜೊತೆಗೆ ಪ್ರಶಸ್ತಿ ಯನ್ನು ನೀಡುವುದು ವರ್ಷದ ವಾಡಿಕೆ .ಪ್ರತಿ ವರ್ಷ ದಂತೆ ವರ್ಷವೂ ಸಹಾ  ಸುಮಾರು 25 ಜನ ಸಾಧಕರಿಗೆ ಅವಕಾಶವನ್ನು ನೀಡಲಾಗಿತ್ತು .ಹಲವರಿಗೆ ಕಾರ್ಯ ಕ್ರಮದಲ್ಲಿ ಅನಗತ್ಯ ವಾಗಿ ಆಯ್ಕೆ ಮಾಡಲಾಗಿದೆ ಎಂಬ ಬಲ ವಾದ ಕೂಗುಮೊಳಗುತ್ತಿದ್ದರೆ  ,ಇನ್ನೂ ಕೆಲವರಿಗೆ ಸಂದರ್ಭಕ್ಕೆ ತಕ್ಕ ಸಮಯೋಚಿತ ವಾಗಿತ್ತು ಎಂಬ ನುಡಿ ಯೂ ಸಹಾ ಕೇಳಿ ಬಂದಿದಂತೂ ಸತ್ಯ. ಇದು ವರ್ಷದ ಅದೇ ರಾಗ ..ಅದೇ ಹಾಡು..! ಆದರೆ ಎಲ್ಲಕ್ಕಿಂತ ಹೆಚ್ಚಾಗಿ ಅಸಮಾಧಾನದ ವಿಷಯವೆಂದರೆ ಜಿಲ್ಲೆಯ ಕಾರ್ಕಳ ತಾಲೋಕಿನ ಮಮತಾ ಪೂಜಾರಿ ವಿಚಾರ ಕೇವಲ ಉಡುಪಿ ಜಿಲ್ಲೆಗೆ ಮಾತ್ರವಲ್ಲ ರಾಷ್ಟ್ರ ,ಅಂತರಾಷ್ಟ್ರ ಮಟ್ಟದಲ್ಲೂ ಚಿರಪರಿಚಿತ .ಭಾರತ ದೇಶದ ಕಬ್ಬಡಿ ತಂಡದ ನಾಯಕಿಯಾಗಿಯೂ ,ಉತ್ತಮ ಆಟದ ಕಾಣಿಕೆ ನೀಡಿ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಹೆಸರನ್ನು ಬೆಳಗಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ .ಆದರೆ ಇಂಥ ಮಹಾನ್ ಕ್ರೀಡಾ ಪಟುವಿಗೆ ಜಿಲ್ಲಾ ರಜ್ಯೋತ್ಸವ ಪ್ರಶಸ್ತಿ ನೀಡದಿರವುದು ಬಹಳ ಬೇಸರದ ವಿಚಾರ .ಇವಳ ಸಾಧನೆಗೆ ಸುವರ್ಣ ಕರ್ನಾಟಕ ರಜ್ಯೋತ್ಸವ ಪ್ರಶಸ್ತಿ ಲಬಿಸಬೇಕಿತ್ತು ,ಆದರೆ ಒಲಂಪಿಕ್ ಪಂದ್ಯಾಟದಲ್ಲಿ ಪ್ಯಾರ ಒಲಂಪಿಕ್ ನಲ್ಲಿ ಹೆಚ್ .ಆರ್ .ಗಿರೀಶ್ ಗೌಡ .. ಕಂಚು ಪದಕವನ್ನು ಗೆದ್ದು ಕೊಂಡದ್ದಿರಿಂದ ಸ್ಥಾನದ ಆರ್ಹತೆಯಿಂದ ಹೊರೆಗೆ ಬಂದರೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯಂತೂ ಕಟ್ಟಿಟ್ಟ ಬುತ್ತಿಯೆಂದೆ ಎಲ್ಲಾರೂ ಭಾವಿಸಿದ್ದರು  ಆದರೆ ಆಯ್ಕೆ ಮಂಡಳಿಯ ಅವೈಜ್ನ್ನಾನಿಕ ತನ ದಿಂದ ಮಮತಾ ಪೂಜಾರಿಯ ಹೆಸರನ್ನು ಕೈ ಬಿಡಲಾಗಿದ್ದೂ ಪ್ರಶಸ್ತಿಗೊಂದು ನೆಲೆಯ ಬೆಲೆಯನ್ನೇ ಕಳೆದು ಕೊಳ್ಳುವಂತಾಗಿದೆ .'''ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಯನ್ನುದು ಕೇವಲ ಹಣ ಉನ್ನತ ,ಗಣ್ಯ ವ್ಯಕ್ತಿ ಗಳ ಶಿಪಾರಸ್ಸಿ ನಿಂದ ಮಾತ್ರ ಸಿದ್ದಿಸುಲು  ಸಾಧ್ಯ ಎಂಬ ಕಹಿ ಸತ್ಯ''ಕ್ಕೆ ತುಪ್ಪ ಸವರಿದಂತ ಪರಿಸ್ತಿತಿ ನಿರ್ಮಾಣವಾಗಿದೆ ..