ಬುಧವಾರ, ನವೆಂಬರ್ 21, 2012

ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಬೆಲೆ ಇಲ್ಲವೇ ?



ಸಾಮಾಜಿಕ ತಾಣ ,ವ್ರತ್ತ ಪತ್ರಿಕೆ ಸೇರಿದಂತೆ ಇನ್ನಿತರ ವಿವಿಧ ಮಾಧ್ಯಮಗಳಲ್ಲಿ ತಮ್ಮ -ತಮ್ಮ ಅನಿಸಿಕೆ -ಅಭಿಮತ ,ಅಭಿವ್ಯಕ್ತಿ ಎಂಬ ವಿಧಾನಗಳ ಮೂಲಕ  0ವಾದವನ್ನು ಮಂಡಿಸುದಕ್ಕೆ ಮುಕ್ತವಾದ ಸ್ವಾತಂತ್ರ್ಯ ಅವಕಾಶದ ಹಕ್ಕು ಎಲ್ಲರಿಗೂ ,ಎಲ್ಲಾ ಸಮಯದಲ್ಲೂ ,ಎಲ್ಲಾ ಕ್ಷೇತ್ರದಲ್ಲೂ ಇದೆ . ಅದಕ್ಕೆ ಯಾರ ಸಮ್ಮತಿಯ ಅವಶ್ಯಕತೆಯೂ ಇರೂವುದಿಲ್ಲ ,ಆದರೆ ಮೊನ್ನೆ -ಮೊನ್ನೆ ಬಾಳಾ ಟಾಕ್ರೆ ವಿವಾದದ ಬಗ್ಗೆ ಉಂಟಾದ ಘಟನೆಯಿಂದಾಗಿ ಅಭಿವ್ಯಕ್ತಿ ಸ್ವತಂತ್ರ ಹಕ್ಕು ಗಾಳಿ ಹಿಡಿದಿರವುದು ದುಖಕರ ಸಂಗತಿ ಟಾಕ್ರೆ  ಬಗ್ಗೆ ಅಭಿಮಾನದ ಎಳೆ ಇದ್ದರೂ .ಒಂದೊಂದು ಆತಂಕಕಾರಿ ಚಟುವಟಿಯಿಂದ ಅಸಮಧಾನದ ವಾತಾವರಣದಿಂದ  ,ಎಲ್ಲೊ ಒಂದು ಕಡೆ ತೆರೆಮರೆಯಲ್ಲಿ ನೆಲೆಸಿರುವದು  ಸತ್ಯ ವಿಚಾರವೇ . ಅವರ ಅಂತ್ಯ ಕ್ರಿಯೆದ ವೇಳೆ ಮುಂಬಯಿ ಬಂದ್ ಮಾಡಿದ್ದರಿಂದ ಹಲವಾರು ಸಮಸ್ಯೆಯನ್ನು ಹುಟ್ಟು ಹಾಕಿದ್ದರಿಂದ ''ಶಹಾನ್''  ಎನ್ನುವವರು ತಮ್ಮ ಮುಕ್ತ ಅನಿಸಿಕೆ ಯನ್ನು facebook ಎಂಬ ಸಾಮಾಜಿಕ ತಾಣ ದಲ್ಲಿ ಹಂಚಿ ಕೊಂಡಿದ್ದರು .ಅದು ಸ್ತುತರ್ಹ,ಅವರ ಹಕ್ಕೂ ಕೂಡ ಹೌದು . ಪೋಸ್ಟ್ ಇವರ ಗೆಳತಿ ''ವೇಣು ಶ್ರೀನಿವಾಸ್ ''ಗೆ ಒಪ್ಪಿಗೆ ಯಾಗಿ like ನ್ನು ಅದುಮಿ ಬಿಟ್ಟರು . ಒಂದು ಪುಟ್ಟ ವಿಚಾರಕ್ಕೆ ಈರ್ವರನ್ನು ಪೋಲಿಸ್ ರನ್ನು ಬಂಧಿಸಿ ಬಿಟ್ಟರು ,ಶಿವ ಸೇನಾ ಸದಸ್ಯರು ,ಟಾಕ್ರೆ ಅಭಿಮಾನಿಗಳೆಂದು ಕರೆಯುವ ಕೆಲವು ಮಹಾನುಭರು  ಶಾಹಿನ್ ಚಿಕ್ಕಪ್ಪನ ಆಸ್ಪತ್ರೆ ಯನ್ನು ದ್ವಂಸವನ್ನೂ ಕೂಡ ಮಾಡಿ ಬಿಟ್ಟರು ಒಂದು ಪುಟ್ಟ ಕಾಮೆಂಟ್ ನಿಂದ ಬೆಟ್ಟದಂಥ ಸ್ಥಿತಿ ಉದ್ಬವಿಸಿ ಇಬ್ಬರ ಮನಸ್ಥಿತಿ ಕುಂಠಿತಗೊಂಡದ್ದಲ್ಲದೆ  ,ಮನೆಯವರ ಮರ್ಯಾದೆಯೂ ಬೀದಿಗೆ ಬಂದು ಬಿಟ್ಟಿತು .facebook  ಖಾತೆ ಯನ್ನು ಮುಚ್ಚುವ0ತಾಯಿತು ,
ಇನ್ನು ಮುಂದೆ ಯಾವುದೇ ಅಭಿಪ್ರಾಯವನ್ನು ಹಂಚಿ ಕೊಳ್ಳುವ ಮನಸ್ಸು ಮುದುಡಿ ಹೋಗುವಂತಾಯಿತು .ನಿಜಕ್ಕೂ ಇದು ಅರಗಿಸಿ ಕೊಳ್ಳಲಾಗದ ವಿಚಾರವೇ . ತಮ್ಮ ಅಭಿವ್ಯಕ್ತಿ ಸ್ವತಂತ್ರ ವನ್ನು  ಯಾರೂ ಸಹಾ ಕಸಿದು ಕೊಳ್ಳುವ ಹಕ್ಕನ್ನು ಪಡೆಯುವ ಇಲ್ಲದಿದ್ದರೂ ಸಂಧರ್ಬದಲ್ಲಿ ಕಾನೂನು ಕಾಯ್ದೆ ಗಳೆಲ್ಲ ಸತ್ತು ಸುಡು ಗಾಡು ಸೇರಿ ಬಿಟ್ಟುವು .ಭಾರತೀಯ ನೀತಿ ಸಂಹಿತೆ ಪ್ರಕಾರ ಬಂಧನ ನ್ಯಾಯ ಸಮ್ಮತವೇ ಅಲ್ಲ .ಏನೇ ಇರಲಿ ಆಗಿದ್ದು ಆಗಿ ಹೋಗಿದೆ  ಇದರ ಪರಿಣಾಮ ಮುಂದೆ ಯಾವುದೇ ವ್ಯಕ್ತಿಯೂ ತಮ್ಮ ಅಭಿವ್ಯಕ್ತಿ ಯನ್ನು ಅನಾವರಣ ಗೊಳಿಸಲು ಆಲೋಚನೆ ಮಾಡಬೇಕಾದ ಪರಿಸ್ತಿತಿ ಉದ್ಬವ ಗೊಂಡಿದೆ .


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ