ಭಾನುವಾರ, ಸೆಪ್ಟೆಂಬರ್ 10, 2017
ಅಂದು ಹಿತೇಂದ್ರ ಪ್ರಸಾದ್ . ಇಂದು ಗೌರಿ ಲಂಕೇಶ್!
ನನಗೆ ಒಮ್ಮೆಲೇ ಉಸಿರು ಬಿಗಿ ಹಿಡಿಸಿದ್ದು ಅಂದರೆ ಇದು ! ಅಂದು ಹಾಯ್ ಮಾರುತ ಪತ್ರಿಕೆಯ ಹಿತೇಂದ್ರ ಪ್ರಸಾದ್ ಹಾಗೂ ಇಂದು ಲಂಕೇಶ್ ಪತ್ರಿಕೆಯ ಗೌರಿ ಲಂಕೇಶ್ ಮರ್ಡರ್ ! ನನಗೆ ಕೆಲವೇ ಕೆಲವು ಪತ್ರ ಕರ್ತರ ಪೈಕಿ ಇವರಿಬ್ಬರ ಬರವಣಿಗೆ ಅಚ್ಚುಮೆಚ್ಚು ! ವಾರ -ದಿಂದ ವಾರಕ್ಕೆ ಕೂತೂಹಲ ದಿಂದ ಇವರ ಲೇಖನಕ್ಕಾಗಿ ಕಣ್ಣು ಕಾದು ಕುಳಿತಿರುತ್ತಿತ್ತು . ಹಿತೇಂದ್ರ ಪ್ರಸಾದ್ ರ ಹಾಯ್ ಮಾರುತ ಉಡುಪಿಯಿಂದ ಪ್ರಕಟಕೊಳ್ಳುತ್ತಿದ್ದೂ ಕರಾವಳಿಯಾದ್ಯಂತ ಜನಪ್ರೀಯ ಗೊಂಡಿತ್ತು ,ಸಂಚಲನವನ್ನೂ ಮೂಡಿಸಿತ್ತು .ಹಲವಾರು ದೊಡ್ಡ -ದೊಡ್ಡ ಕುಳಗಳನ್ನೇ ಎದುರಿಗೆ ಹಾಕಿ ಕೊಂಡು ತಮ್ಮ ತೀಕ್ಷ್ಣ ಬರಹದ ಮೂಲಕ ಚಾಟಿ ಬೀಸುತ್ತಿದ್ದರು ,ಇವರ ದುಷ್ಮನ್ ಸಂಖ್ಯೆ ಎಶ್ಟಿತೆಂದರೆ ಸ್ವತ: ಕೆಲವು ಪತ್ರಕರ್ತರ ಕೆಂಗಣ್ಣಿಗೂ ಗುರಿಯಾಗಿ ವಿರೋಧವನ್ನು ಕಟ್ಟಿ ಕೊಂಡ್ಡಿದ್ದರು ಯಾವ ಬೆದರಿಕೆಗೂ ಹೆದರದೆ ರಾಜಾರೋಷವಾಗಿ ಬೆರೆಯುತ್ತಿದ್ದರು ಹಾಗೂ ಲೇಖನಿ ಮೊನಚು ಗೊಳಿಸುತ್ತಿದ್ದರು ಹಾಗೂ ಒಬ್ಬಂಟಿಯಾಗಿಯೇ ತಿರುಗಾಡುತ್ತಾ ತನಿಖಾ ಕ್ರೈಮ್ ವರದಿಗಳನ್ನ ಸಿದ್ದ ಪಡಿಸುತ್ತಿದ್ದರು . ಅಂದು ರಾತ್ರಿ (22/08/2006 )ವರದಿಗೆ ತೆರಳಿದ್ದ ಮಣಿಪಾಲನ ತಲ್ಲೂರು ಬಾರ್ ನಲ್ಲಿ ಪಬ್ಲಿಕ್ ಳ ಎದುರೇ ತಲವಾರು ಕಾಳಗದಲ್ಲಿ ಅಲ್ಲೇ ಕೊನೆ ಉಸಿರು ಎಳೆದಿದ್ದರು . ಮರುದಿನ ಪತ್ರಕರ್ತ ಹಿತೇಂದ್ರ ಪ್ರಸಾದ್ ಮರ್ಡರ್ ಎಂದು ಬಿಂಬಿತ ಕೊಂಡಿತ್ತು . ಯಾವೊಬ್ಬ ಪತ್ರಕರ್ತನೂ ಕೂಡಾ ಬೀದಿಗೆ ಬಂದು ಪ್ರತಿಭಟನೆಗೆ ಮುಂದಾಗಲಿಲ್ಲ .ಇಂತವರೇ ಹತ್ಯೆ ಮಾಡಿದ್ದಾರೆ ಎಂದು ಗೊತ್ತಿದ್ದರೂ ಸಹಾ ಕಾನೂನು ಕೂಡಾ ಕ್ರಮ ಕೈಗೊಳ್ಳುವಲ್ಲಿ ವಿಫಲವಾಯಿತು ಇದು ಆದಿನದ ಮಾತು ಬಿಡಿ. ಇಂದು ಗೌರಿ ಲಂಕೇಶ್ ಮರ್ಡರ್ ..!!! ಇವರ ಹೆಸರು ಕೆಳದಿರುವವರು ಯಾರೂ ಇಲ್ಲ ಅಷ್ಟೊಂದು ಕಾಂಟ್ರವರ್ಸಿ, ಗಾಸಿಪ್ ಗಳ ಮೂಲಕ ಕರ್ನಾಟಕ ಬಿಡಿ ಜಗತ್ತಿನಾದ್ಯಂತ ಪ್ರಸಿದ್ದಿ ಪಡೆದವರು . ಇಂಗ್ಲಿಷ್ ಪತ್ರಕರ್ತೆಯಾಗಿ ವೃತ್ತಿ ಜೀವನ ಆರಂಭಿಸಿದ್ದ ಇವರು ಪ್ರಗತಿಪರರ ಗುಂಪು ಎಡಪಂತೀಯದಲ್ಲಿ ಗುರುತಿಸಿಕೊಂಡಿದ್ದವರು . ೫೫ ವರ್ಷದ ಗೌರಿ ಲಂಕೇಶ್ ,ತನ್ನ ತಂದೆ ಪಿ ಲಂಕೇಶ್ ನಿಧನದ ನಂತರ ಅವರು ನಿರ್ವಹಿಸುತ್ತಿದ್ದ ಲಂಕೇಶ್ ಪತ್ರಿಕೆಯ ಚುಕ್ಕಾಣಿ ಹಿಡಿದು "ಗೌರಿ ಲಂಕೇಶ್ "ಎಂದು ಟೈಟಲ್ ಚೇಂಜ್ ಮಾಡಿ ಖಾರವಾಗಿ ಲೇಖನಿ ಓಡಾಡಿಸುತ್ತಿದ್ದ ಪರಿ ಹಾಗೂ ಪ್ರತಿಕ್ರೀಯಿಸುತ್ತಿದ್ದ ಚಾತುರ್ಯತೆ ಜನಜನಿತ . ಅವರ ಬರವಣಿಗೆಯ ಶೈಲಿ ಲೇಖನಿಯನ್ನು ಖಡ್ಗವನ್ನಾಗಿಸಿ ಬೀಸುತ್ತಿದ್ದ ಪರಿ ಇಷ್ಟವಾಗಿತ್ತೇ ವಿನಹಾ ವೈಚಾರಿಕತೆಯನ್ನು ಮಾತ್ರ ಒಪ್ಪುವಂತೆ ಇರುತ್ತಿರಲಿಲ್ಲ .ಅವರ ಮೂಗಿನ ನೇರಕ್ಕೆ ಅವರ ವಾದ ಮಂಡಿಸುತ್ತಿದ್ದರು ,ಅವರ ವಿಚಾರವಾದಿತನವನ್ನು ಕೆಲವರು ಅಪ್ಪಿಕೊಂಡಿದ್ದಾರೆ ಸಾಕಷ್ಟು ಜನದೂಷಿಸುತ್ತಾರೆ .ಹೀಗಾಗಿಯೇ ಪರ ವಿರೋಧದ ಅಲೆಗಳಲ್ಲಿ ಕೊಂಚ ಪ್ರಚಲಿತವನ್ನೂ ಪಡೆದು ಕೊಂಡಿದ್ದರು .
ಅದೇನೋ ಹೇಗೋ ಗೊತ್ತಿಲ್ಲ.(06/09/2018) ಹಂತಕರು ಗುಂಡು ಹಾರಿಸಿಬಿಟ್ಟರು ಕ್ಷಣ ಮಾತ್ರದಲ್ಲಿ ಯಾವುದೇ ಕುರುಹುವಿಲ್ಲದೇ ನಿಗೂಢವಾಗಿ ನಡೆದು ಹೋಯಿತು ದಿಟ್ಟೆಯ ಹತ್ಯೆ !ಹಾಗೆ ನೋಡಿದ್ದರೆ ಹಿತೇಂದ್ರ ಪ್ರಸಾದ್ ಗೆ ಸಾಕಷ್ಟು ಬೆದರಿಕೆ ಕರೆ ಬಂದಿತ್ತು ,ವರದಿ ಪ್ರಕಟಿಸಿದರೆ ಹತ್ಯೆ ಮಾಡುತ್ತೇವೆ ಎಂಬ ವಚನವನ್ನು ಕೊಟ್ಟ ಕಹಾನಿಯನ್ನು ಎಳೆ- ಎಳೆ ಯಾಗಿ ಪ್ರಸಾದ್ ಪತ್ರಿಕೆಯಲ್ಲಿ ಹೇಳಿ ಕೊಂಡಿದ್ದರು ಕೂಡಾ ..ಅವರ ಕೊನೆಯ ಬರಹ ನನಗೆ ನನಪು ಇದ್ದ ಹಾಗೆ ನಾನು ಓದಿದ್ದು ಮಣಿಪಾಲ ತಲ್ಲೂರ್ ಬಾರ್ ನಲ್ಲಿ ನಡೆಯುವ ಲೈವ್ ಬ್ಯಾನ್ಡ್ ಬಗ್ಗೆ ಇದರ ಬಗ್ಗೆ ಸರದಿ ವರದಿಯನ್ನು ಬಿತ್ತರಿಸುತ್ತಿದ್ದರು . ಸಂಚಿಕೆ ಮೊದಲ ಕಂತಿನಲ್ಲಿ ಲೈವ್ ಬ್ಯಾಂಡ್ ನ ಪೂರ್ವಾಪರವನ್ನು ವಿವರಿಸಿದ್ದರು ಇನ್ನೊಂದಿಷ್ಟು ಇಂಟ್ರೆಸ್ಟಿಂಗ್ ಅಂಶವನ್ನು ಮುಂದಿನ ಸಂಚಿಕೆಗೆ ಮುಂದು ವರಿಸಿದ್ದರು .ಇನ್ನೇನು ಅದು ಅಚ್ಚಾಗುವ ಹಂತದಲ್ಲಿತ್ತು ಇದೆ ವಿಷಯಕ್ಕಾಗಿ ಆ ರಾತ್ರಿ ಖುದ್ದು ಲೈವ್ ಬ್ಯಾಂಡ್ ಗೆ ತೆರಳಿ ವಿಷಯ ಸಂಗ್ರಹಿಸುತ್ತಿದ್ದ ಸಂದರ್ಭ ಮಾರುಕಾಯುಧ ಗಳಿಂದ ಎಕಾಏಕಿ ಹಲ್ಲೆ ನಡೆಸಿ ಹಾಯ್ ಮಾರುತದ ಉಸಿರನ್ನು ನಿಲ್ಲಿಸಿದ್ದರು . ಇದೆಲ್ಲಾ ಇತಿಹಾಸ . ಇಂದಿನ ಈ ಘಟನೆ ಕೇಳಿ ಅಂದಿನ ಘಟನೆ ಮನಪಠಲಕ್ಕೆ ಬಂತು . ಹೌದು ಗೌರಿ ವಿಷಯವೂ ಕೂಡ ಶಾಕಿಂಗ್ ತಂದಿದೆ ಸೈದಾಂತಿಕ ವಾಗಿ ವಿರೋಧಿಗಳಿರುವುದು ಸಾಮಾನ್ಯ ಆದರೇ ಯಾವುದೇ ಬೆದರಿಕೆ ವಿಚಾರವನ್ನು ಅವರು ಎಲ್ಲಿಯೂ ಪ್ರಸ್ತಾಪಿಸಿಲ್ಲ ಅನಿರೀಕ್ಷಿತವಾಗಿ ಘಟನೆ ನಡೆದಿದೆ . ಹತ್ಯೆ ಖಂಡನೀಯ ! ಒಂದೊಳ್ಳೆಯ ಪತ್ರಕರ್ತೆಯನ್ನು ಕಳೆದು ಕೊಂಡಿದ್ದೇವೆ ಎಂದು ಹೇಳಬಲ್ಲೆ ., ವಯಕ್ತಿಕವಾಗಿ ಅವರ ಸಾಹಿತ್ಯದ ಶೈಲಿಯನ್ನು ಮಾತ್ರ ಇಷ್ಟಪಟ್ಟಿದ್ದೆ .ಅವರ ಪ್ರಚೋದನಾ ಕಾರಿ ಬೀಷಣದ ಭಾಷಣ ಹಾಗೂ ಎಡಪಂತೀಯ ನಿಲವುಗಳನ್ನು ನಾನು ವಿರೋಧಿಸ್ತೆನೆ . ಅಂದ ಹಾಗೆ ನಾನು ಓದಿದ್ದ ಅವರ ಕೊನೆ ಮುಖ ಪುಟ ವರದಿ "ಚಂಡಾಲ ಭಟ್ಟನಿಗೆ ಇನ್ನೆಷ್ಟು ಬಲಿ? .ಅವರ ಆತ್ಮಕ್ಕೆ ಭಗವಂತ ಶಾಂತಿ ನೀಡಲಿ ಹಂತಕರ ಬಂಧನವಾಗಲಿ ..
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳು (Atom)



