ಸೋಮವಾರ, ಆಗಸ್ಟ್ 6, 2012

ಜಂಗಲ್ ಜಾಕಿ ಗೆ ಏನಾಯಿತು ?

ಸಮಯ 8 ಗಂಟೆಯಾದರೆ ಸಾಕು ಸಮಸ್ತ ವೀಕ್ಷಕರು ಟೀವಿಯ  ಮುಂದೆ ಕೂರುತ್ತಾ ಯಾವಾಗ ರಾಜೇಶ್ ಬರ್ತಾನೆ ? ಅವನ  ನಡೆ -ನುಡಿಯನ್ನು ಆಲಿಸಬೇಕು ಛಲ-ಕುತೂಹಲ -ಆತುರ -ಕಾತರ ಬೆಟ್ಟದಷ್ಟು ಕೂಡಿರುತಿತ್ತು ಆತನ ಚಿತ್ರಣ ಮುಗಿದ ತಕ್ಷಣ ಮುಂದಿನ ದಿನಕ್ಕೆ ಇದೆ ಕಿಚ್ಚಿನ ವಾತಾವರಣವನ್ನು  ಮುಂದುವರಿಸುತಿತ್ತು .ಯಾವುದೇ ಟಾಸ್ಕ್ ನಲ್ಲಿ ಈತ ಸೋಲದಂತೆ ದೇವರಲ್ಲಿ ಹರಕೆ ಹೊತ್ತವರು ಅಧಿಕ ಜನ.ಆತನೇ ಪ್ರಥಮ ಬಹುಮಾನ ಗೆಲ್ಲಲಿ ಎಂದು ಆಶಯ ,ಹಾರೈಕೆ ಯನ್ನು ಹೊಂದಿದವರು ಬಹಳಷ್ಟು ಮಂದಿ.ಅಂತೂ ಸಾಕಷ್ಟು ಜನರ ಹಾರೈಕೆ ,ಆಶಿರ್ವಾದದ ಫಲದಿಂದ ಆತ ರಿಯಾಲಿಟಿ ಶೋ ಗೆದ್ದು 10 ಲಕ್ಷ ಬಹುಮಾನ ಪಡೆದೆ ಬಿಟ್ಟ .
ಅಂದ ಹಾಗೆ ಈ ಸ್ಟೋರಿ ಹೇಳುತ್ತಿರುವದು 2 ವರ್ಷದ ಹಿಂದೆ ಸುವರ್ಣ ವಾಹಿನಿಯಲ್ಲಿ ಪ್ರಸಾರ ಕಾಣುತಿದ್ದ 'ಹಳ್ಳಿ ಹೈದ ಪ್ಯಾಟಿಗ್ ಬಂದ ' ಎಂಬ ರಿಯಾಲಿಟಿ ಷೋ ವಿಜೇತ ರಾಜೇಶನ ಬಗ್ಗೆ.ಈ ರಿಯಾಲಿಟಿ ಶೋ ಎಷ್ಟು ಜನಪ್ರಿಯವಾಗಿದ ಎಂದರೆ ,ಬಹಳಷ್ಟು ಜನ ಈತನ ನಡವಳಿಕೆಯನ್ನು ಮೆಚ್ಚಿ ಹರಿಸಿದ್ದರು ..ಈತನೂ ಅಷ್ಟೇ ಒಂತರ ಜೋಕರ್  ತರಹ ಅರ್ದ ಮಾನಸಿಕ ಸ್ಥಿಯಲ್ಲಿಯನ್ನೇ  ಆ ಸಮಯದಲ್ಲಿ ಹೊಂದಿದ್ದ. ಆತನ ಕೆಲವಂದು ನಡವಳಿಕೆಯನ್ನು ಗಮನಿಸುತ್ತಿದ್ದರೆ ಆಗಲೇ ಅರಿವಾಗುತ್ತಿತ್ತು . ದೌರ್ಭಾಗ್ಯ ಎಂದರೆ ಆತ ಈಗ ಪೂರ್ಣ ಮಾನಸಿಕ ಅಸ್ವಸ್ಥನಾಗಿ ಮೈಸೂರಿನ ಕೆ .ಆರ್ .ಆಸತ್ರೆ ಯನ್ನು ಸೇರಿದ್ದಾನೆ .ಮಾನಸಿಕ ರೋಗಿಗಳ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ . ಅಂದ ಹಾಗೆ ಈ ರಾಜೇಶ್ ಎನ್ನುವವನು ಮೈಸೂರು ಜಿಲ್ಲೆ ಹೆಚ್ಚ್.ಡಿ .ಕೋಟೆ ಯಲ್ಲಿನ ದಟ್ಟ ಕಾನನದಲ್ಲಿ ಪ್ರಾಣಿ -ಪಕ್ಷಿಗಳೊಡನೆ ಬೆಳೆದ ಗಿರಿಜನ ಯುವಕ .ಕಾಡಿನಲ್ಲಿ ಸಿಕ್ಕ ಗೆಡ್ಡೆ -ಗೆಣಸುಗಳನ್ನು ತಿಂದು ,ಹರಿಯುವ ಹೊಳೆಯ ನೀರನ್ನು ಕುಡಿದು ಜೀವನ ಸಾಗಿಸುತ್ತಿರುವ ಈ ಯವಕನ್ನು ಸಿಟಿ ಗೆ ತಂದರೆ  ಕಾಲ ಕಳೆಯುದಾದರೂ ಹೇಗೆ ? 
ಅಂತೆಯೇ ರಿಯಾಲಿಟಿ ಶೋ ವಿನ್ ಆದ .ಹಾಗೆಯೇ   ಇವನ ವಿಚ್ಚಿದ್ರ ಕಾರಿ ನಡವಳಿಕೆ ಯಿಂದ ಅಪಾರ ಅಭಿಮಾನಿ ಬಳಗವನ್ನು ಪಡೆದನು.ರಿಯಾಲಿಟಿ ಶೋ ನಲ್ಲಿ ಕ್ಲಿಕ್ ಆಗಿದ್ದೆ ತಡ ನಿರ್ದೇಶಕ ರವಿ ಕಡೂರು ಈ ಜೋಡಿಯನ್ನು ಇಟ್ಟು ಒಂದು ಸಿನಿಮ ಮಾಡಿದರೆ ಹೇಗಿರುತ್ತೆ ಎಂದು ಲೆಕ್ಕಚಾರ ಹಾಕಿ 'ಜಂಗಲ್ ಜಾಕಿ ' ಅನ್ನುವ ಒಂದು ಅವನ ಸುತ್ತಲು ಹೆಣೆಯಲಾದ ಕತೆಯನ್ನು ಕಟ್ಟಿ ಸಿನಿಮಾ ನಿರ್ಮಾಣಕ್ಕೆ ತೊಡಗಿದರು .ಸಿನಿಮಾ 2 ವರ್ಷದಿಂದ ಶೂಟಿಂಗ್ ನಡೆಯುತ್ತಿದ್ದರೂ ಬಿಡುಗಡೆ ಕಾಣುವ ಲಕ್ಷಣವಿಲ್ಲ .ರಾಜಿಶ್ನಿಗೆ ಒಂದು ಕಡೆ ಪ್ಯಾಟೆಯ ಸಿನಿಮ ಸಹವಾಸ ,ಇನ್ನೊಡೆದೆ ಹಳ್ಳಿಯ ಜೀವನದ ತಾಕಲಾಟ ಒಂದು ರೀತಿಯಲ್ಲಿ ಎಲ್ಲಿಯೂ ನೆಲೆ ಸಿಗದೇ ಅತಂತ್ರ ಪರಿಸ್ತಿತಿಯನ್ನು ಹೊಂದಿದನು . ಇನ್ನೊಂದೆಡೆ ಮಾದುವೆಯೂ ಬೇರೆ ಮಾಡಿ ಕೊಂಡಿದ್ದನು .2 ವರ್ಷ ಕಳೆದರೂ ಚಿತ್ರ ಬಿಡುಗಡೆ ಕಾಣಲಿಲ್ಲ ಎಂಬ ನೋವು ಬೇರೆ ಮಡುಗುಟ್ಟಿತ್ತು
 
ಇನ್ನು ಆತನ ಸ್ನೇಹಿತರು ,ಅಭಿಮಾನಿಗಳು ಚಿತ್ರ ಎಂದು ರೀಲಿಜ್ ಎಂದು ಪದೇ-ಪದೇ ಕೇಳುತ್ತಿದ್ದರು .ಮೊದಲೇ ಅರೆ ಮಾನಸಿಕ ಅದರೊಳಗೆ ಈ  ಪ್ರಶ್ನೆಗಳ ಸರಮಾಲೆ ಬೇರೆ .ಈ  ಎಲ್ಲ ಒತ್ತಡ ,ಆಘಾತದಿಂದ ಪೂರ್ಣ ಬುದ್ದಿ ಬ್ರಮಣೆ ಯಾಗಿ ಬಿಟ್ಟಿದ್ದಾನೆ ಎಂದು ಆತನ ಹಾವ -ಬಾವ ,ಆಳ -ಅಂತರಾಳವನ್ನು ಅರಿತವರಿಗೆ ಅರ್ಥವಾಗುತಿತ್ತು .ನಿಜಕ್ಕೂ ಇದರಲ್ಲಿ ಯಾರದ್ದು ತಪ್ಪು ? ರಾಜೇಶನದ್ದೇ ?ರಿಯಾಲಿಟಿ ಬಳಗದ್ದೇ?ಸಿನಿಮಾದ್ದೇ ?ಯಕ್ಷ ಪ್ರಶ್ನೆ ಗೆ ಉತ್ತರ .. ಯಾವನಿಗ್ ಗೊತ್ತು ? 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ