ಮಂಗಳವಾರ, ಜುಲೈ 16, 2013

ವಿಧಾನ ಸೌಧ ಯಾರಪ್ಪನ ಮನೆಯ ಸ್ವತ್ತಲ್ಲ


ಕೆಂಗಲ್ ಹನುಮಂತಯ್ಯನವರ ಕನಸ್ಸಿನ ಕೂಸು ಇದು. ಇವರು ಮುಖ್ಯ ಮಂತ್ರಿ ಯಾಗಿದ್ದ ಸಂಧರ್ಭ ತಮ್ಮ ಆಡಳಿತಾವಧಿಯಲ್ಲಿ ಇದನ್ನು ರಚಿಸಿದ್ದರು  . ಪ್ರಜಾ ಪ್ರಭುತ್ವದ ವ್ಯವಸ್ಥೆಯಡಿಯಲ್ಲಿ ಆರಿಸಿ ಬಂದ ಜನಪ್ರತಿನಿಧಿಗಳನ್ನ ಒಗ್ಗೂಡಿಸಿ ಜನಹಿತಕ್ಕಾಗಿ ಚರ್ಚಾಕೂಟವನ್ನು ಏರ್ಪಡಿಸಲು  ನಿರ್ಮಿಸಲ್ಪಟ್ಟ ಸಂಸತ್ತು ಇದಾಗಿದೆ .
ವಿಶ್ವದಾದ್ಯಂತ  ಸಂಚಾರ ಮಾಡಿ  ಅಲ್ಲಲ್ಲಿನ ಒನಪು ,ವೈಯಾರ ,ವಿಸ್ಮಯ ,ವಿಶಿಷ್ಟತೆಯ ಅರಿವನ್ನು ಅಳವಡಿಸಿ ಕೊಂಡು ಹನುಮಂತಯ್ಯನವರು ರಾಜ್ಯದ ರಾಜಧಾನಿಯಾದ ಬೆಂಗಳೂರಿನ ಹ್ರದಯ ಭಾಗದಲ್ಲಿ 2 ಕೋಟಿ ರೂ. ಗೋ ಅಧಿಕ  ವೆಚ್ಚದಲ್ಲಿ 1956 ರರಲ್ಲಿ ಇದನ್ನು ನಿರ್ಮಿಸಿದರು. ಇಂತಿಪ್ಪ ವಿಧಾನ ಸೌಧ ಅದರದ್ದೇಯಾದ ಗೌರವ ,ಘನತೆಯನ್ನು ಹೊಂದಿದೆ . ಸೌಧವನ್ನು ದೇವಾಲಯವೆಂದೇ ಪರಿಗಣಿಸಲಾಗಿದೆ . ದೈವಭಕ್ತಿ ,ದೈವೀ ನಿಷ್ಠೆಯ ಗೌರವ ಭಾವದ ಪ್ರತೀಕವಾಗಿದೆ  ಎಂದರೆ ಅದು ಅತಿಶಯೋಕ್ತಿಯಾಗಲಾರದು . ಜನಗಳ ಸೇವೆಯೇ ಜನಾರ್ಧನ ಸೇವೆ ಎಂದಾಲೋಚಿಸುವ ಜನಪ್ರತಿನಿಧಿಗಳು ಭಕ್ತಿ ಭಾವದಿಂದಲೇ  ಪ್ರವೇಶಿಸಿ ಧನ್ಯತಾ ಭಾವವವನ್ನು ಮೆರೆಯುತ್ತಾರೆ .   ಅದೇ ಸತ್ಯ .. ಅದೇ ನಿತ್ಯವೂ ಕೂಡಾ ಹೌದು . ಆದರೆ  ಬಹಳ ಬೇಸರದ ವಿಚಾರವೆಂದರೆ ಕಾಲಘಟ್ಟ ಬದಲಾಗುತ್ತಿದೆ . ಕಾಲ ಚಕ್ರದ ಗ್ರಹಗತಿಯಲ್ಲಿ ವಿಧಾನಸೌಧ ಕರಗುತ್ತಿದೆ .. ಮುಮ್ಮುಲ ಮರುಗುತ್ತಿದೆ .
ಸೌಧ ಪ್ರವೇಶಿಸಲು ದೇವರು ಮಾಡಿ ಕೊಟ್ಟ ಅವಕಾಶವೆಂದು ಭಾವಿಸಬೇಕಾದ ಇಂದಿನ ಕೆಲವು ಮಂತ್ರಿ ಮಹೋದಯರು ವಾಸ್ತು ,ಜ್ಯೋತಿಷ್ಯದ ಎಂಬ ಪದ್ದತಿಗೆ ದಾಸರಾಗಿ ವಾಸ್ತು ಶಿಲ್ಪದಂತಿರುವ ವಿಧಾನ ಸೌಧದ ಗೋಡೆಯನ್ನು ಒಡೆಯುವ ಯೋಜನೆಗೆ ಕಟಿ ಬದ್ದರಾಗಿದ್ದಾರೆ  . ಪೂಜನೀಯ ಭಾವದಿಂದ ಅದನ್ನು ಆರೈಕೆ ಮಾಡಬೇಕಾದುದ್ದು ಅವರ ಕರ್ತವ್ಯದ ಜೊತೆಗೆ ,ಜವಾಬ್ದಾರಿಯೂ ಕೂಡಾ ಹೌದು . ಆದರೆ ಇಷ್ಟ ಬಂದಂತೆ ಹೇಸಿಗೆ(ನೀಲಿ ಚಿತ್ರ ವೀಕ್ಷಣೆ ಸೇರಿದಂತೆ  ) ಪ್ರವತ್ತಿಯನ್ನು ತಾಳುತ್ತಿರುವ ಇಂತವರಿಗೆ ಕಠಿಣ ಕಾನೂನು ಇಲ್ಲವೇ ?


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ