ಗುರುವಾರ, ಮಾರ್ಚ್ 13, 2014

ಸಾಮಾನ್ಯರಿಗೊಂದು ನ್ಯಾಯ ಪ್ರಭಾವಿಗಳಿಗೊಂದು ನ್ಯಾಯ ?!

ಇದು ಮೊನ್ನೆ ನಡೆದ ಘಟನೆ .ಕರ್ನಾಟಕದ ನಂಬರ್ ಒನ್ ಸುದ್ದಿ ಚಾನೆಲ್  ಟಿವಿ 9 ,ಈಗಾಗಲೇ  ಬ್ರಷ್ಟ  ರಾಜಕಾರಣಿ ಎಂದು ಜನ ಜನಿತವಾಗಿದ್ದ ,ಪ್ರಸ್ತುತ ರಾಜ್ಯದ ಇಂಧನ ಸಚಿವ ಡಿ .ಕೆ .ಶಿವಕುಮಾರ್ ಬಗ್ಗೆ ಕುಟುಕು  ರಹಸ್ಯ ಕಾರ್ಯಾಚರಣೆಗೆ ಮುಂದಾಗಿತ್ತು .ಹೇಗೋ ಏನೋ ವರದಿಗೆ  ತೆರಳಿದ್ದ ಪ್ರತಿನಿಧಿಗಳಾದ ಶ್ರೇಯಸ್ ಮತ್ತು ಶ್ವೇತಾ  ಅವರು ಸಿಕ್ಕಿ ಬಿದ್ದರು . ಸಾಮನ್ಯವಾಗಿ ಇಂಥಹ ತನಿಖಾ ವರದಿಗೆ ಎಷ್ಟೇ ಜಾಗ್ರತೆ ಇದ್ದರೂ ಸಾಲದು ,ಹಾಗೆ ಸ್ವಲ್ಪ ಅಜಾಗುರುಕತೆ ಯಿಂದ ಡಿಕೆಶಿ ಮತ್ತು ಬೆಂಬಲಿಗರ ಬಲೆಗೆ ಬಿದ್ದ ಇರ್ವರನ್ನು ಮನಬಂದಂತೆ ತಳಿಸಿದ್ದಲ್ಲದೇ , ಪೊಲೀಸರಿಗೂ ಒಪ್ಪಿಸಿ ಬಿಟ್ಟರು . ಇಲ್ಲ ಸಲ್ಲದ ಕೇಸನ್ನು ಜಡಿದು ನ್ಯಾಯಲಯಕ್ಕೆ ಹಾಜರುಪಡಿಸುವಲ್ಲಿಯೂ ಸಫಲರಾದರು . ಇದರಲ್ಲಿ ತಪ್ಪು ಯಾರದ್ದು ? ನಿರ್ಭೀತಿಯಿಂದ ಕುಟುಕು ಕಾರ್ಯಾಚರಣೆಗೆ ಮುಂದಾಗಿ ಬ್ರಷ್ಟಚಾರಿಗಳ ಮುಖವನ್ನು ಸಮಾಜಕ್ಕೆ ತೋರ್ಪಡಿಸಲು ಮುಂದಾದ ಚಾನಲ್ ನದೇ ಅಥವಾ ಇದನ್ನೇ ಮಹಾ ತಪ್ಪು ಎಂದು ಹಿಗ್ಗಾ -ಮುಗ್ಗಾ ಹಲ್ಲೆ ಮಾಡಿದ ರಾಜ್ಯದ ಘನವೆತ್ತ ಸಚಿವ ಮಹಾಶಯನದ್ದೇ .. ?ತಪ್ಪು ಚಾನಲ್ ನದ್ದೇ ಯಾದರೂ ಅದಕ್ಕೊಂದು ಕಾನೂನು ಇಲ್ಲವೇ ? ತಾವೇ ಕಾನೂನನ್ನು ,ಅದೂ ಒಬ್ಬ ಜನನಾಯಕನಾಗಿ ಕೈ ಗೆ ಎತ್ತಿ ಕೊಂಡದ್ದು ಎಷ್ಟು ಸರಿ ? ಅಷ್ಟಕ್ಕೂ ಚಾನಲ್ ನದ್ದು ಏನು ಮಹಾನ್  ತಪ್ಪು ?ಬ್ರಷ್ಟಚಾರಿಗಳ ಮುಖವಾಡವನ್ನು ಕಳಚುವಲ್ಲಿ ಇಂಥಹ ಒಂದು ಕಾರ್ಯಾಚರಣೆ ಬಹಳ ಮುಖ್ಯವೆ.. ಇದೆ ರೀತಿ ರಹಸ್ಯ ಕಾರ್ಯಚರ್ಣೆಯಲ್ಲಿ ಟಿವಿ 9 ಸಹಿತ ಹಲವಾರು ಮಾಧ್ಯಮಗಳು ವರದಿ ಮಾಡಿ ಸಕ್ಸಸ್ ಕಂಡು ,ಜನ ಸಮುಖದಲ್ಲಿ ನಿಲ್ಲಿಸಿವೆ.. ಒಬ್ಬ ಜವಾಬ್ದಾರಿಯುತ  ಸಚಿವನಾಗಿ ಮಾಡಿದ ಈ ಕಾರ್ಯಕ್ಕೆ ರಾಜ್ಯಾದ್ಯಂತ ಉಗ್ರ ಪ್ರತಿಭಟನೆಯಾಗುತ್ತಿದ್ದರೂ , ಸರ್ಕಾರ ಯಾಕೆ ಕ್ರಮ ಕೈ ಗೊಳ್ಳುತ್ತಿ ಲ್ಲ .. ಸಾಮಾನ್ಯರಿಗೊಂದು ನ್ಯಾಯ ಪ್ರಭಾವಿಗಳಿಗೊಂದು ನ್ಯಾಯದ ಜೋಕಾಲಿಯನ್ನು ದೂಡುತ್ತಿರುವ  ಪೋಲಿಸ್ ಇಲಾಖೆಗೆ ದಿಕ್ಕಾರ !!!.  

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ