ಭಾನುವಾರ, ಏಪ್ರಿಲ್ 27, 2014

ವಿಚಾರ ಹೀನ ವಿವಾದ

ಮತ್ತೆ ರಾಜ್ಯಾದ್ಯಾಂತ ಉಡುಪಿ ಶ್ರೀ ಕ್ರಷ್ಣ ಮಠ  ಸುದ್ದಿಯಾಗುತ್ತಿದೆ.  ಹಲವಾರು ಬಾರಿ ವಿಚಾರಹೀನ ವಿವಾದಕ್ಕೆ ಎಡೆಯಾಗುತ್ತಿದ್ದ ಮಠ , ಈ ಬಾರಿಯೂ ಅಷ್ಟೇ . ಜಾತಿ ಪಂಕ್ತಿ ಭೇಧವೆಂಬ ನೆಪ ಒಡ್ಡಿ ಭಂಟ ಸಮುದಾಯವನ್ನು ಎತ್ತಿ ಕಟ್ಟಲಾಗುತ್ತಿದೆ ಎಂಬದು  ಪ್ರಜ್ಞಾವಂತರ ನುಡಿ. ಊಟಕ್ಕೆ(ಅನ್ನಪ್ರಸಾದ ) ಕೂತ ಸಂದರ್ಭ ದಲ್ಲಿ ''ನೀನು ಯಾವ ಜಾತಿ ಯಾವ ಮಠ , ಕುಲ,   ಗೋತ್ರ'' ಎಂಬೀ ಪ್ರಶ್ನೆ ಗಳನ್ನೂ ಒಡ್ಡಿ  , ನನ್ನನ್ನು ಬೋಜನ ಶಾಲೆಯಿಂದ ಹೊರಹಾಕಿದ್ದಾರೆ ಇದರಿಂದ ಅವಮಾನಿತಳಾಗಿದ್ದೇನೆ .. ಎಂದು ಪ್ರತಿಭಟನೆಗೆ ಧುಮುಕಿದ ಹಾಗೂ ಜಾತಿ ಎಂಬ ಪ್ರಶ್ನೆ ಯನ್ನು ಒತ್ತಿ ಹಿಡಿದು ಭಂಟ ಸಮುದಾಯವನ್ನು ಮಠಕ್ಕೆ ವಿರೋಧ ಕಟ್ಟಿ ಕೊಳ್ಳುವಲ್ಲಿ  ಸಫಲತೆಯನ್ನು ಸಾಧಿಸುವಲ್ಲಿ ಶ್ರಮಿಸುತ್ತಿರುವ , ವಸಂತಿ ಮೇಡಂ ರವರಿಗೆ  , ತಾವು ಒಬ್ಬ ಉಪನ್ಯಾಸಕಿ ಆಗಿ ಅಲ್ಲಿನ ಸ್ಥಳೀಯ ನಿವಾಸಿಯಾಗಿ ತಮಗೆ ಅಲ್ಲಿನ ನೀತಿ ನಡವಳಿಕೆಗಳು ಗೊತ್ತಿಲ್ಲದೇ ಇರುವುದು ಸೋಜಿಗವೇ ಸರಿ!

ಪಂಕ್ತಿ ಭೇದ ಎನ್ನುವುದು ಎಲ್ಲೆಡೆ ನಡೆಯುತ್ತಿದೆ ಅದು ಮೊದಲಿಂದಲೂ ನೆಡೆದು ಕೊಂಡು ಬಂದ ರೀತಿ .. ಬ್ರಹ್ಮಣರಿಗೆ , ವಿಐಪಿ ಗಳಿಗೆ  ಪಂಕ್ತಿ ಗಳಿರುತ್ತವೆ .. ನಂತರ ಇತರರಿಗೆ ನಡೆಯಲ್ಪಡುವುದು   ತಲೆ -ತಲಾತಂತರ ದಿಂದ ಬಂದ ಪದ್ಧತಿ. ಮೊನ್ನೆ ಇಲ್ಲಿ ಆಗಿದ್ದು ಅಷ್ಟೇ ಗೊತ್ತಿದ್ದೂ ,ಗೊತ್ತಿಲ್ಲದೆಯೋ  ಬ್ರಾಹ್ಮಣ ರ  ಪಂಕ್ತಿಯಲ್ಲಿ  ತಾನು  ಕೂತಿದ್ದಲ್ಲದೇ   ಮಠದ ಮೇಲೆ ಬೆರಳು ಮಾಡಿ ತೋರಿಸುತ್ತಿರುವ ಇವರ ವಿರುದ್ಧವೇ ಪ್ರತಿಭಟನೆ ಯಾಗಬೇಕ್ಕಿತ್ತು/ ಆಗಬೇಕು. ಸ್ವತಃ ವಸಂತಿ ಶೆಟ್ಟಿ ಯವರೇ ಕ್ಷಮೆ ಕೇಳಬೇಕು . 
ಇಲ್ಲಿ ಕೇವಲ ವಸಂತಿ ಶೆಟ್ಟಿ ಎಂಬ ಉಪನ್ಯಾಸಕಿ ಮಾತಿಗೆ ಮಣೆ ಹಾಕಲಾಗುತ್ತಿದೇಯೆ ವಿನಾ: ಸತ್ಯ ವಿಚಾರ ಯಾರಿಗೂ ಗೊತ್ತಿಲ್ಲ. ಎಲ್ಲರೂ ಮಠದ ವಿರುದ್ಧವೇ ಧ್ವನಿ ಎತ್ತಿದ್ದಾರೆ , 'ಅನ್ನ ಬ್ರಹ್ಮ' ಎಂದು ನಾಮಾಕಿ೦ತ ಗೊಂಡಿರುವ  ಶ್ರೀ ಕ್ರಷ್ಣ  ಮಠ ದಲ್ಲಿ ಇದುವರೆಗೂ ಇಂಥ ಒಂದು ವಿವಾದ ಸ್ರಷ್ಟಿಯಾಗಿಲ್ಲ . ಸಾವಿರಾರು ಭಕ್ತಾಧಿಗಳು , ಸಾವಿರಾರು ವಿಧ್ಯಾರ್ಥಿಗಳು ಇಲ್ಲಿಂದಲೇ ದಿನನಿತ್ಯ ಅನ್ನ ಪ್ರಸಾದವನ್ನು ಸ್ವಿಕರಿಸುತ್ತಿದ್ದೂ , ಈ ವಿವಾದ ಹಲವರಲ್ಲಿ ಬೇಸರ ಸ್ರಷ್ಟಿ ಮಾಡಿದೆ ..ಮದ್ವಾಚಾರ್ಯರ ಕಾಲದಿಂದಲೂ ಕರಾವಳಿ ಯಲ್ಲಿ ಇರುವ ದೊಡ್ಡ ಸಮುದಾಯವಾದ ಭಂಟ ರಿಂದ ಸಹಾಯ ಹಸ್ತವೂ ಸೇರಿದಂತೆ ಏನೋ ಒಂದು ರೀತಿ ಅವಿನಾಭಾವ ಸಂಭಂದ ಇದೆ . ಇದನ್ನು ಹಾಳು ಗೆಡವಲು ಹೆಣೆದ ಕುತಂತ್ರ ಎಂಬುದು ಹಲವರ ವಾದ .


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ