ಬುಧವಾರ, ಆಗಸ್ಟ್ 19, 2020
ಇವರುಗಳಿಗೆ ಯಾಕೆ ತಾರತಮ್ಯ ?
ಕರೋನ ದಿಂದ ಇಡೀ ಪ್ರಪಂಚ ಕಂಗೆಟ್ಟುಹೋಗಿರುವುದು ನಿಜ.,ಅದರಲ್ಲೂ ಜಗತ್ತಿನ ಎರಡನೇ ಅತೀ ದೊಡ್ಡ ಜನ ಸಂಖ್ಯೆಯನ್ನು ಹೊಂದಿರುವ ಆರ್ಥಿಕತೆಯಲ್ಲಿ ಅಷ್ಟೊಂದು ಸಧೃಢ ವಾಗಿರದ ಭಾರತಕ್ಕೆ ಸವಾಲೇ ಸರಿ. ತನ್ಮಧ್ಯೆ ಕೆಲವೊಂದು ರಾಜ್ಯಗಳು ಸರ್ಕಾರದ ವತಿಯಿಂದ ಒಂದಷ್ಟು ಯೋಜನೆಗಳನ್ನು ದಯಪಾಲಿಸಿವೆ. ಇದಕ್ಕೆ ನಮ್ಮ ಕರ್ನಾಟಕ ರಾಜ್ಯವು ಹೊರತಾಗಿಲ್ಲ.ನಿರ್ಗತಿಕರಿಗೆ,ವ್ಯಾಪಾರಿಗಳಿಗೆ,ಕಲಾವಿದರು ,ಹೋಟೆಲ್ ಕಾರ್ಮಿಕರು ಇನ್ನಿತರ ದಿನ ಕೂಲಿ ಕಾರ್ಮಿಕರ ಸ್ಥಿತಿ ಶೋಚನೀಯವಾಗಿದೆ. ಇದೆಲ್ಲಾ ಅರಿತ ಸರ್ಕಾರವು ಒಂದಷ್ಟು ಯೋಜನಾ ನೀತಿಯನ್ವಯ ಆಟೋ ,ಟಾಕ್ಸಿ ಚಾಲಕರಿಗೆ, ಅಗಸಿಗರಿಗೆ, ಕ್ಷೌರಿಕರಿಗೆ ಸಹಾಯಧನವನ್ನು ಕಲ್ಪಿಸಲಾಗಿದೆ . ಒಳ್ಳೆಯ ಬೆಳವಣಿಗೆ ಕೂಡಾ .,ಆದರೆ ಆದ್ಯಾಕೋ ತಾರತಮ್ಯವಾದಂತ ವಿಚಾರ ಮೂಡುತ್ತದೆ. ದಿನದ ಒಂದು ಹೊತ್ತಿನ ತುತ್ತಿಗಾಗಿ ಕೂಲಿ ಮಾಡುವವರ ಪೈಕಿ ಯಕ್ಷಗಾನ ಕಲಾವಿದರುಗಳು ಹೋಟೆಲ್ ನೌಕರುಗಳೂ ಸೇರಿದ್ದಾರೆ ಇವರುಗಳು ಆ ಯೋಜನೆಯಲ್ಲಿ ಸ್ಥಾನ ಪಡೆಯದಿರುವುದು ವಿಪರ್ಯಾಸ .ಕೆಲವೊಂದು ಯಕ್ಷಗಾನ ಮೇಳಗಳು ದೇವಸ್ಥಾನದ ವತಿಯಿಂದ ಅದರಲ್ಲೂ ,ಧಾರ್ಮಿಕ ದತ್ತಿ ಇಲಾಖೆಯಡಿಯಲ್ಲಿ ಕಾರ್ಯಾಚರಿಸುವುದರಿಂದ ಅದಕ್ಕೆ ಒಳಪಡುವ ಯಕ್ಷಗಾನ ಮೇಳಗಳಿಂದ ಕಲಾವಿದರುಗಳಿಗೆ ಕಿಂಚಿತ್ ಸಹಾಯಕವಾಗುತ್ತದೆ.ಧಾರ್ಮಿಕ ದತ್ತಿಯಿಂದ ಹೊರತಾಗಿರುವ ಯಕ್ಷಗಾನ ಮೇಳಕ್ಕೆ ಇದು ಲಭ್ಯತೆ ಇಲ್ಲ. ಡೇರೆ ಮೇಳಗಳು ಸೇರಿದಂತೆ ಕೆಲವು ಮೇಳಗಳು ದೇವಳದ ವತಿಯಿಂದ ನಡೆಯಲ್ಪಡುವ ಯಕ್ಷಗಾನ ಕಲಾವಿದರುಗಳಿಗೆ ಅನುಕೂಲವಾಗುವಂತೆ ಸರ್ಕಾರ ಯೋಚಿಸುವುದರ ಜೊತೆಗೆ ಹೋಟೆಲ್ ಕಾರ್ಮಿಕರ ಬಗ್ಗೆನೂ ಗಮನ ಹರಿಸಬೇಕಾಗಿದೆ .ಲಾಕ್ ದೌನ್ ಪರಿಣಾಮ ಅದೆಷ್ಟೋ ಹೋಟೆಲ್ ಗಳು ಮುಚ್ಚಿವೆ .ಹೋಟೆಲ್ ಕಟ್ಟಡಗಳ ಬಾಡಿಗೆ ಕಟ್ಟಲು ಸಹಾಯಕರಾದ ಸಾಕಷ್ಟು ಮಾಲೀಕರು ಹೋಟೆಲ್ ಗಳನ್ನೂ ಮಾರಾಟ ಮಾಡಿದ್ದಾರೆ. ಅದರಲ್ಲೂ ಅದನ್ನೇ ನಂಬಿಕೊಂಡು ಕರ್ತವ್ಯ ನಿರ್ವಹಿಸುತ್ತಿದ್ದ ಕಾರ್ಮಿಕರಿಗೆ ಉದ್ಯೋಗ ವಿಲ್ಲದಂತಾಗಿದೆ ಇನ್ನು ಅನ್ಲಾಕ್ ಆಗಿ ಹೋಟೆಲ್ ತೆರೆದರೂ, ವ್ಯಾಪಾರಿಗಳಿಲ್ಲದೇ ಬಿಕೋ ಎನ್ನುತ್ತಿದೆ . ತರುವಾಯ ಹೋಟೆಲ್ ನಲ್ಲಿ ದುಡಿಯುವವ ಕಾರ್ಮಿಕರ ಸಂಖ್ಯೆನ್ನು ಕೂಡಾ ತಗ್ಗಿಸಲಾಗಿದೆ . ಇನ್ನೊಂದೆಡೆ ಪಾರ್ಸೆಲ್ ಕೊಡುವ ಪದ್ದತಿ ಜಾರಿಯಾದ್ದರಿಂದ ಕಾರ್ಮಿಕರು ಉದ್ಯೋಗಕ್ಕೆ ಕತ್ತರಿ ಬಿದ್ದಿದೆ. ತಾವು ಮಾಡಿಟ್ಟ ಸಾಲ ಕಟ್ಟಲಾಗದೇ,ಮಾಸಿಕ ಬಾಡಿಗೆ ಪಾವತಿಸಲಾಗದೇ ,ಹೋಟೆಲ್ ವ್ಯವಹಾರದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಯಶ ಕಾಣದೇ ಹೋಟೆಲ್ ಮಾಲೀಕರಗಳು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ . ದಿನೇ -ದಿನೇ ಈ ಸಂಖ್ಯೆ ಏರುಗತಿಯತ್ತ ಸಾಗುತ್ತಿದೆ.ಈ ಎಲ್ಲಾ ಸಮಸ್ಯೆಯನ್ನು ಹೋಗಲಾಡಿಸಲು ಸರ್ಕಾರಕ್ಕೆ ತುಸು ಕಷ್ಟವೇ ಆದರೂ ಪರಿಹಾರ ಅಥವಾ ಪರ್ಯಾಯ ಮಾರ್ಗಗಳ ಮೂಲಕ ಇಂತವರಿಗೆ ಸಹಾಯವಾಗಬೇಕಿದೆ .ಇಂತಹ ಯೋಜನೆಗಳ ಮೂಲಕ ಬೇಧ -ಭಾವ ಮಾಡದೇ ಇದ್ದರೇ ಕಿಂಚಿತ್ ಉಪಕಾರವಾಗಬಲ್ಲದು.
ಭಾನುವಾರ, ಆಗಸ್ಟ್ 2, 2020
ಇದರ ಹಿಂದೆ ಇರುವವರ ಕೈವಾಡ ಯಾರದ್ದು ?
ಕರೋನಾ ಕರ್ನಾಟಕಕ್ಕೆ ಕಾಲಿಟ್ಟ ಘಳಿಗೆ ಯಿಂದ ಆಯುರ್ವೇದ ಪಂಡಿತ ಡಾl ಗಿರಿಧರ್ ಕಜೆಯವರು ನನ್ನಲ್ಲಿ ಔಷಧ ವಿದೆ , ನಾನು ಇದನ್ನು ಸಂಪೂರ್ಣವಾಗಿ ಗುಣಪಡಿಸುತ್ತೇನೆ ಎಂದು ಬಹಿರಂಗವಾಗಿ ಸವಾಲ್ ಹಾಕಿದ್ದರು ಅಂತೆಯೇ ಸರಕಾರಕ್ಕೆ ಮನವಿಯನ್ನೂ ಸಲ್ಲಿಸಿದ್ದರು ಆದರೇನು ಮಾಡೋಣ ಹೇಳಿ ದಪ್ಪ ಕಿವಿಯ ಸರ್ಕಾರಕ್ಕೆ ಇದೆನ್ನೆಲ್ಲಾ ಕೇಳುವ ವ್ಯವಧಾನ ವಿರಲಿಲ್ಲ ಯಾವುದರಲ್ಲಿ ಎಷ್ಟು ಪೀಕಬೇಕೋ ಎಂಬ ಆಲೋಚನಾ ಲೋಕದಲ್ಲಿರುವವರಿಗೆ ಇದು ಅರ್ಥವಾಗುವುದಿಲ್ಲ. ಅನುಮತಿಗೆ ಒಂದಷ್ಟು ಸಮಯ ಹಿಡಿಯುತ್ತದೆ ಎಂಬುದನ್ನು ಅಲ್ಲಗೆಳೆಯುವಂತಿಲ್ಲ ,ಸಮಯಕ್ಕೆ ಬೆಲೆ ಇಲ್ಲದಾಗ ಮಾತ್ರ ಅನುಮಾನ ಹೊಗೆಯಾಡುತ್ತವೆ . ದುಡ್ಡು ಮಾಡುವ ಆಸೆಯನ್ನು ಎಳ್ಳಷ್ಟೂ ಹೊಂದಿರದ ಅಪ್ರತಿಮ ,ಪ್ರಾಮಾಣಿಕ ವ್ಯಕ್ತಿ ಡಾ l ಕಜೆಯವರು ಅವರ ವ್ಯಕ್ತಿತ್ವವೇ ಅಂತದ್ದು ಎನ್ನುವುದಕ್ಕೆ ಇಲ್ಲಿರುವ ಕೆಲವು ಉದಾಹರಣೆಯನ್ನು ಗಮನಿಸಬಹುದು . ಕೋಟಿಗಟ್ಟಲೇ ಸುರಿದರೂ ವಾಸಿಯಾಗದ ಖಾಯಿಲೆ ಕೇವಲ ನೂರು ರೂಪಾಯಿಯಲ್ಲಿ ದಯಪಾಲಿಸುತ್ತಿದ್ದಾರೆ.ಅಷ್ಟು ಮಾತ್ರವಲ್ಲದೇ ಮಾಧ್ಯಮಗಳ ಮೂಲಕ ಮನೆಯಲ್ಲಿ ಹೇರಳವಾಗಿ, ಸುಲಭವಾಗಿ ಸಿಗುವ ಮದ್ದುಗಳನ್ನು ಪ್ರಚಾರ ಪಡಿಸುತ್ತಿದ್ದಾರೆ. ತಮ್ಮ ಬಳಿ ಬರುವ ರೋಗಿಗಳಿಗೆ ಉಚಿತವಾಗಿ ಮೆಡಿಸಿನ್ ನ್ನು ಹಂಚುತ್ತಿದ್ದಾರೆ. ಕೇವಲ ಕರೋನ ದಿಂದ ಮುಕ್ತರಾಗಬೇಕೆಂಬ ಅಭಿಲಾಷೆ ಮನಸ್ಥಿತಿ ಮಾತ್ರ ಅವರಲ್ಲಿದೆ. ಇತ್ತ ಅಪ್ರೂವಲ್ ಗೆ ಛಲ ಬಿಡದ ಇವರು ಸಾಕಷ್ಟು ಬಾರಿ ಸರ್ಕಾರದ ಸಂಬಂಧಪಟ್ಟ ಅಧಿಕಾರಿಗಳ ಹಿಂದೆ ಬಿದ್ದು ,ತಮ್ಮ ಔಷಧದ ಅನುಮತಿಗೆ ಬೇಡಿಕೆ ಇಡುತ್ತಾ ಕಚೇರಿ ಅಲೆದಾಡಿದ್ದರ ಫಲ ಶೃತಿಗಏನೋ ಎಂಬಂತೆ , ಕೊನೆಗೂ ದಾರಿ ಕಾಣದ ಸರ್ಕಾರದ ಸಂಬಂಧ ಪಟ್ಟ ಇಲಾಖೆ ಒಂದು ಶರತ್ತುವಿನ ಅನ್ವಯ ಡಾ l ಕಜೆ ಬಳಿ ಇರುವ ಎಲ್ಲಾ ಈ ಸಂಬಂಧ ಔಷಧವನ್ನು ಸರ್ಕಾರಕ್ಕೆ ಹಸ್ತಾ೦ತರಿಸಬೇಕು ಹಾಗೂ ಸ್ವತಃ ಯಾರಿಗೂ ಕೊಡುವಂತಿಲ್ಲ ಎಂಬ ಸರಕಾರದ ತೀರ್ಮಾನಕ್ಕೆ ಬದ್ಧರಾಗಿ ತಮ್ಮ ಸನಿಹಕ್ಕೆ ಬರುವ ರೋಗಿಗಳಿಗೆ ಔಷಧೋಪಚಾರವನ್ನು ನಿಲ್ಲಿಸಿ ಸರ್ಕಾರದ ದಿಂದಲೇ ಪೂರೈಕೆ ಕಂಡರೆ ಒಂದಿನಿತು ಒಳ್ಳೆದು ಎಂದಾಲೋಚಿಸಿದರೇ ,ಇತ್ತ ನಡೆದಿದ್ದೇ ಬೇರೆ ಕಜೆ ಔಷಧಗಳೆಲ್ಲವೂ ಸರಕಾರದ ಗೋದಾಮಿನಲ್ಲಿ ಬಂಧಿಯಾಯಿತೇ ವಿನಾ: ರೋಗಿಗಳಿಗೆ ತಲುಪಲೇ ಇಲ್ಲ . ಮಾಫಿಯಾದ ಕರಿ ಮೋಡ ಆವರಿಸಿ ಬಿಟ್ಟಿತ್ತು ,ಪಟ್ಟಭದ್ರ ಹಿತಾಸಕ್ತಿಗಳ ನಡುವೆ ಸಿಲುಕಿತು. ಖಾಸಗೀ ಆಸ್ಪತ್ರೆಗಳಿಗೆ ಹೊಡೆತ ಬೀಳುತ್ತದೆ ,ಔಷಧ ತಯಾರಿಸುವ ಕಂಪನಿಗಳಿಗೆ ಬರೆ ಬೀಳುತ್ತವೆ ಎಂಬ ಕಾರಣದಿಂದ ಈ ಔಷಧಿ ಮಾರುಕಟ್ಟೆಗೆ ಬಾರದಿರಲು ಕಾಣದ ಕೈಗಳು ಕೆಲಸ ಮಾಡಿವೆ. ಕೆಲವು ಸೆಲಬ್ರಿಟಿಗಳನ್ನೂ ಸೇರಿದಂತೆ ಅದೆಷ್ಟೋ ರೋಗಿಗಳನ್ನು ಗುಣ ಪಡಿಸಿದ ಡಾ l ಕಜೆಯವರು ಪ್ರಶಂಸಾರ್ಹರು .ಖುದ್ದು ಸಚಿವ ಸಿಟಿ ರವಿಯವರು ಸಹಾ ಮಾಧ್ಯಮದ ಮುಂದೆ ಹೇಳಿದ್ದರು ನಾನು ಡಾ l ಕಜೆಯವರ ಔಷಧ ದಿಂದಲೇ ಗುಣಮುಖನಾಗಿದ್ದೇನೆ ಎಂದು . ಅಸುರರ ಕ್ಷೇತ್ರದಲ್ಲಿ ಜಯ ಲಭಿಸುವುದು ಅಷ್ಟು ಸುಲಭದ ಮಾತು ಅಲ್ಲವೇ ಅಲ್ಲ. ನಮ್ಮವರಿಗೂ ಅಷ್ಟೇ ನಮ್ಮ ಮನೆಯ ಊಟ ಹಿಡಿಸುವುದಿಲ್ಲ ಆಯುರ್ವೇದ ಔಷಧ ನಮ್ಮ ಕೊಡುಗೆ ,ಭಾರತದ ಆಯುರ್ವೇಧ ಪದ್ಧತಿ ಮತ್ತಿನ್ನೇಲ್ಲೂ ಯಾವುದೇ ದೇಶದಲ್ಲಿ ಸಿಗುವುದಿಲ್ಲ. ಅದರದ್ದೇಯಾದ ಮಹತ್ವ ಗುಣ ವಿಶೇಷತೆಗಳಿವೆ . ರೋಗವನ್ನು ಹೊಡೆದು ಓಡಿಸುವ ಶಕ್ತಿ ಇದೆ . ಇಂಗ್ಲಿಷ್ ಮೆಡಿಸಿನ್ ಬಗ್ಗೆ ಹಾತೊರೆಯುವ ನಾವುಗಳು ಇದರ ಬಗ್ಗೆ ಕಿಂಚಿತ್ ಒಲವು ನೀಡಬೇಕಾಗಿದೆ. ಡಾ l ಕಜೆಯವರ ಔಷಧ ಮಾರುಕಟ್ಟೆಗೆ ಬರುವಂತಾಗಲಿ.
ಮಂಗಳವಾರ, ಜುಲೈ 28, 2020
ಅಂತವರಿಗಿಂತ ಕೆಟ್ಟವನಾದನೇ ಡ್ರೋನ್ ಪ್ರತಾಪ್ ?
ಡ್ರೋನ್ ಪ್ರತಾಪ್ ಹೆಸರು ಕೇಳದವರು ಯಾರು ಇಲ್ಲ 2-3 ವರ್ಷಗಳ ಹಿಂದೆ ಅತೀ ಹೆಚ್ಚು ಜನಪ್ರೀಯ ಗೊಂಡ ಪ್ರತಾಪ್ ಮತ್ತೆ ಸುದ್ದಿಯಾಗುತ್ತಿದ್ದಾರೆ ಬಡತನ ದಿಂದ ಬಂದು ತನ್ನ ಪ್ರಯತ್ನ ಮತ್ತು ಯಶೋಗಾಥೆ ಯಿಂದ ಯುವ ವಿಜ್ಞಾನಿ ಎಂಬ ನಾಮಾಂಕಿತ ದೊಂದಿಗೆ ಎಲ್ಲಾರಿಗೂ ಮಾದರಿ ಎನಿಸಿಕೊಂಡ ಈತ ಕಳೆದ ಒಂದಷ್ಟು ದಿನಗಳಿಂದ ಈಚೆಗೆ ಸಾಮಾಜಿಕ ಜಾಲ ತಾಣ ಸೇರಿದಂತೆ ಮಾಧ್ಯಮಗಳ ಚಾವಡಿಯಲ್ಲಿ ವಸ್ತುವಾಗುತ್ತಿದ್ದಾರೆ . ಬಗೆ ಬಗೆಯ ಟ್ರೊಲ್ಸ್ ಗಳು ಅನೇಕಾನೇಕ ಆತನ ಕಥೆಗಳು ವಿಚಿತ್ರಕಾರಿಯಾಗಿ ತಾರಕಕ್ಕೇರುತ್ತಿದೆ . ಅಂತಹ ದೊಡ್ಡ ತಪ್ಪು ಮಾಡಿದ್ದಾನೆಯೇ ಪ್ರತಾಪ್ ? ತಪ್ಪು ದೊಡ್ಡದಿರಲಿ ಸಣ್ಣದಿರಲಿ ತಪ್ಪು ತಪ್ಪೇ ! ದ್ರೋಹ ವಂಚನೆ ಎಂಬಿತ್ಯಾದಿಗಳಿಂದ ಸುದ್ದಿಯಲ್ಲಿರುವ ಪ್ರತಾಪ್ ನನ್ನು ಈ ಸ್ಥಿತಿಗೆ ಕರೆತಂದವರು ಯಾರು ? ಈಗಿನ ಅದೇ ಮಾಧ್ಯಮ ವಲ್ಲವೇ ?ಹಾಗೆ ನೋಡಿದರೆ ಪ್ರತಾಪ್ ನದ್ದು ಎಲ್ಲವೂ ಸತ್ಯವಲ್ಲ ಹಾಗಂತ ಎಲ್ಲವೂ ಸುಳ್ಳೆಂದು ಹೇಳಲಾಗದು. ಪ್ರತಾಪ್ 'ಈ ತ್ಯಾಜ್ಯ' ವಸ್ತುಗಳನ್ನು ಬಳಸಿ ಡ್ರೋನ್ ಮಾಡದಿರಬಹುದು ,ಕೆಲವು ಸಿನಿಮಾ ಕಥೆಗಳನ್ನು ತನ್ನ ಭಾಷಣದಲ್ಲಿ ಬಿಸಾಕಿರಬಹುದು ,ದೇಶ ಸುತ್ತದಿರಬಹುದು . ಆದರೂ ಆತನಲ್ಲಿ ಸ್ವಲ್ಪ ಲಾಲೆಜ್ಡ್ ಇದೆ. ಅದಿದೆ ಅನ್ನುವುದಕ್ಕೆ ಎಲ್ಲೋ ಆತನ ಹಾವ -ಭಾವ ದಿಂದ ಆರ್ಥವಾಗುತ್ತಿದೆ ಮೆಡಲ್ ಗಳನ್ನೂ ಪಡೆಯದಿದ್ದರೂ ಆ ಸ್ಥಳ ಗಳಿಗೆ ಎಂಟ್ರಿಯನ್ನು ದಕ್ಕಿಸಿಕೊಂಡಿರುವುದು ಎಲ್ಲೋ ಅವನಲ್ಲಿನ ಪ್ರತಿಭೆ ಸಾಕ್ಷಿ ಒದಗಿಸುತ್ತಿದೆ ಒಂದಷ್ಟು ಪ್ರಯತ್ನ ಪಟ್ಟರೇ ಖಂಡಿತವಾಗಿಯೂ ಸಾಧಿಸಬಲ್ಲನು ಅದೆಲ್ಲಾ ಬದಿಗಿರಿಸಿದರೇ ,ಇಂದಿನ ಈ ಎಲ್ಲಾ ಗೊಂದಲ, ಗೊಡವೆಗಳಿಗೆ ಸೋಶಿಯಲ್ ನೆಟ್ವರ್ಕ್ ,ನ್ಯೂಸ್ ವಾಹಿನಿಗಳೇ ಕಾರಣ. ಇದೀಗ ಅದೂ ಇದೂ ಎಂದು ವರ್ಣರಂಜಿತವಾಗಿ ಕಥೆ ಕಟ್ಟುವ ಇವುಗಳು ಅಂದು ಈತನ ಪೂರ್ವಪರವನ್ನು ಕಂಡು ಕಾರ್ಯಕ್ರಮವನ್ನು ಪ್ರಸಾರ ಮಾಡ್ಬೇಕಿತ್ತು . ತಮ್ಮ ಟಿಆರ್ಪಿ ತೆವಲಿಗೋಸ್ಕರ ಇಂತಹ ಕಾರ್ಯಕ್ರಮಗಳಿಗೆ ಕಥನ ಹೆಣೆಯುವರ ಮಧ್ಯೆ ಸಿಕ್ಕಿದ್ದೇ ಛಾನ್ಸು ಎನ್ನುತ್ತಾ ಇಲ್ಲ ಸಲ್ಲದ ಸುಳ್ಳು -ಪೊಳ್ಳುಗಳನ್ನು ಹೇಳಲು ಒಳ್ಳೆಯ ಪ್ಲಾಟ್ ಪಾರ್ಮ್ ಸಿಕ್ಕಿತ್ತು ಪ್ರತಾಪ್ ಗೆ . ಅದನ್ನೇ ಬಂಡವಾಳ ಮಾಡ್ಕೊಂಡು ಬಿಟ್ಟದ್ದ . ಹಲವಾರು ಜನರಿಗೆ ,ಕಡಿಮೆ ಸಮಯದಲ್ಲಿ ರೋಲ್ ಮಾಡೆಲ್ ಆಗಿಬಿಟ್ಟ . ಆತನ ಮೇಲೆ ಕನಿಕರ ತೋರಿಸದ್ದ ಕೈಗಳಿಗೆ ಆತನ ಯಶೋಗಾಥೆಯನ್ನು ಆಲಿಸಿದ ಮನಸ್ಸುಗಳಿಗೆ ಘಾಸಿಯಾಗಿದ್ದು ಬಿಟ್ಟರೇ ತಲೆ ಹೋಗುವಂತ ವಿಚಾರವೇನೂ ಇರಲಿಲ್ಲ. ದಿನೇ -ದಿನೇ ಟ್ರೋಲ್ ಮಾಡುವವರು ಸುದ್ದಿ ರೆಡಿ ಮಾಡುವವರು ಆಲೋಚಿಸಿ . ಗುಬ್ಬಿ ಮೇಲೆ ಬ್ರಹ್ಮಸ್ತ್ರವೇಕೇ ? ದೇಶವನ್ನು ಲೂಟಿ ಗೈದವರು,ಕೊಳ್ಳೆ ಹೊಡೆದವರು ,ಆಶ್ವಾಸೆಯನ್ನು ಕೊಟ್ಟು ಓಟು ಪಡೆದು ಸ್ವಾರ್ಥ ಪರಿಧಿಯಲ್ಲಿ ಸುತ್ತುವ ರಾಜಕಾರಣಿ ಗಳಿಗೆ , ದೇಶದ ಅನ್ನ ತಿಂದು ಅನ್ಯ ದೇಶಗಳ ಎಂಜಲು ನೆಕ್ಕುವವರಿಗಿಂತ ದೊಡ್ಡ ತಪ್ಪು ಮಾಡಿಲ್ಲ ಪ್ರತಾಪ್. ಇವರುಗಳು ಮಾಧ್ಯಮ ಮತ್ತು ನೆಟ್ಟಿಗರಿಗೆ ಆಹಾರ ವಾಗದಿರುವುದು ವಿಪರ್ಯಾಸ . ಬಗ್ಗಿದವರಿಗೆ ಹಿಡಿದಷ್ಟು ಗುದ್ದು ಕೊಡುವುದು ತರವಲ್ಲ !
ಶುಕ್ರವಾರ, ಜುಲೈ 17, 2020
ಚೀನಾಕ್ಕೆ ಶರಣಾಯಿತೇ ಅಮೇರಿಕಾ ?!
ವಿಶ್ವದ ದೊಡ್ಡಣ್ಣ ಅಮೇರಿಕಾ. ಇದಕ್ಕೆ ಎದುರಾಳಿ ದೇಶವನ್ನು ಊಹಿಸುವುದೇ ಕಷ್ಟ.ಬಲಿಷ್ಟ ರಾಷ್ಟ್ರ. ವಿಜ್ಞಾನ ,ತಂತ್ರಜ್ಜಾನ,ಆರ್ಥಿಕತೆ ,ಸಾರ್ಥಕತೆ ಹೀಗೆ ಎಲ್ಲಾ ವಿಭಾಗದಲ್ಲಿ ಅಭಿವ್ರದ್ಧಿ ಹೊಂದಿರುವ ವಿಶ್ವದ ನಂಬರ್ ಒನ್ ರಾಷ್ಟ್ರ ಅಮೇರಿಕಾ ಎಂಬುವುದನ್ನು ಒತ್ತಿ ಹೇಳಬೇಕಾದ ಅವಶ್ಯಕತೆ ಇಲ್ಲ. ವಿಶ್ವದ ಎಲ್ಲಾ ದೇಶಗಳೂ ಅಮೇರಿಕಾದ ಮಾತನ್ನು ತಪ್ಪದೇ ಒಪ್ಪುತ್ತದೆ. ಅಮೇರಿಕಾ ನಮಗೇನಾದರೂ ಮಾಡಿಬಿಡಬಹುದೆಂಬ ಆತಂಕದ ಜೊತೆಗೆ ಸಂಕಷ್ಟ ಕಾಲದಲ್ಲಿ ಸಹಾಯಕ್ಕಾದರೂ, ಅಮೇರಿಕಾವನ್ನು ಅಪ್ಪಿಕೊಳ್ಳಲೇ ಬೇಕು. ಎಂಬುದು ಗಮನಾರ್ಹ ಸಂಗತಿ. ಯಾರಿಗೂ ಕ್ಯಾರೆ ಮಾಡದ ಸಧ್ಯದ ಟ್ರಂಪ್ ಸಾರಥ್ಯದ ಅಮೇರಿಕಾ, ಪ್ರಸ್ತುತ ಎಲ್ಲೊ ಒಂದು ಕಡೆ ಚೀನಾಕ್ಕೆ ಹೆದರುತ್ತಿದೇಯಾ ಎಂಬ ಭಾವನೆ ಉಂಟಾಗುತ್ತಿದೆ. ಸಾಮನ್ಯವಾಗಿ ಎಲ್ಲರಲ್ಲೂ ಇದ್ದ ಅಭಿವ್ಯಕ್ತಿ ಎಂದರೆ ಕ್ರೂರಿ ಕೊರೋನಾವನ್ನು ಕೊಟ್ಟ ಚೀನಾವನ್ನು ಮಟ್ಟಹಾಕಲು ,ಅದಕ್ಕೆ ತಕ್ಕ ಪಾಠ ಕಲಿಸುವುದು ಅಮೇರಿಕಾ ಬಿಟ್ಟರೇ ಇನ್ಯಾವುದರಿಂದಲೂ ಅಸಾಧ್ಯ. ಅದರಲ್ಲೂ ಅಮೇರಿಕಾ ಸ್ಕೂರ್ ಪಟ್ಟಿಯಲ್ಲಿ ಅಗ್ರಪಂಕ್ತಿಯ ಸ್ಥಾನ ಪಡೆದಿದೆ .ಕೋಪಾಗ್ನಿಯಲ್ಲಿ ಅದು ಕುದಿಯುತ್ತಿದೆ. ಪ್ರತ್ಯಕ್ಷವಾಗಿ ಅಲ್ಲದಿದ್ದರೂ, ಪರೋಕ್ಷವಾಗಿ ಮಾಡುತ್ತಿರುವ ಟೀಕಾ ಪ್ರಹಾರದಲ್ಲಿ ಸುಲಭವಾಗಿ ಅರ್ಥೈಸಿಕೊಳ್ಳಬಹುದು. ಉಂಟಾದ ನಷ್ಟ ಭರಿಸುವುದರಿಂದ ಹಿಡಿದು,ಯುದ್ದಕ್ಕೆ ಸನ್ನದ್ದವಾಗುವ ರೀತಿಯಲ್ಲಿ ಬಡಾಯಿ ಕೊಚ್ಚಿಕೊಳ್ಳುತ್ತಿದೆ.ಚೀನಾದ ಬೆಂಬಲಕ್ಕೆ ಕಡಿವಾಣ ಹಾಕಲು ಇತರ ದೇಶಗಳಿಗೆ ಖಡಾಕ್ ವಾರ್ನಿಂಗ್ ಕೊಟ್ಟಿದೆ . ವಿಶ್ವ ಆರೋಗ್ಯ ಸಂಸ್ಥೆಯ ವಿರುದ್ದ ಗುಡುಗಿದೆ.
ಬೆಂಬಲ ಒತ್ತಟ್ಟಿಗಿರಲಿ,ಇತರ ದೇಶಗಳು ಸಹಾ ಚೀನಾದ ವಿರುದ್ಧ ಕಿಡಿಕಾರುತ್ತಿವೆ. ಅವುಗಳಿಂದ ಪ್ರತಿಕಾರ ತೀರಿಸಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಸ್ವತಂತ್ರವಾಗಿ ಹೋರಾಡುವ ಶಕ್ತಿ ಇರುವುದು ವಿಶ್ವದ ದೊಡ್ಡಣ್ಣನಿಗೆ ಮಾತ್ರ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ಕೊಟ್ಟು ಸುಮ್ಮನಾಗುತ್ತಾರೆ ವಿನಹ ಪ್ರತಿರೋಧದ ಪ್ರಭಾವವಾಗಿಲ್ಲ. ಚೀನಾದ ವಸ್ತುಗಳನ್ನು ಬಹಿಷ್ಕರಿಸಬೇಕು .ಚೀನಾಕ್ಕೆ ಇರುವ ಬೆಂಬಲವನ್ನು ಹಿಂದುತೆಗೆದು ಕೊಳ್ಳಬೇಕೆಂಬ, ನಿಬಂಧನೆ-ನಿರ್ಭಂಧ ಮಾತುಗಳನ್ನು ಹೇಳುತ್ತದೆಯಾದರೂ, ಅದರ ಪಾಲನೆ ಕಟ್ಟುನಿಟ್ಟಾಗಿ ಖುದ್ದು ಅಮೇರಿಕಾ ದಿಂದಲೇ ಆಗುತ್ತಿಲ್ಲ. ಎಲ್ಲವೂ ಬಾಲಿಶ!
ಭಾರತ ಇತ್ತಿಚೆಗೆ 59 ಯಾಪ್ ಗಳನ್ನು ಬ್ಯಾನ್ ಮಾಡಿತ್ತು.ಅಮೇರಿಕಾ ಭಾರತವನ್ನು ಪ್ರಶಂಸಿಸಿತ್ತು .ಲಡಾಖ್ ಗಡಿಯಲ್ಲಿ ಯೋಧರ ಮೇಲಾದ ದಾಳಿಯನ್ನು ಖಂಡಿಸಿ,ಭಾರತಕ್ಕೆ ಬೆಂಬಲವನ್ನೂ ನೀಡಿತ್ತು. ಭಾರತ ಚೈನಾದ ಯಾಪ್ ನ್ನು ಬ್ಯಾನ್ ಮಾಡಿದ ಬೆನ್ನಲ್ಲೇ ತಾನೂ ಕೂಡಾ ನೀಷೇಧಿಸುತ್ತೇನೆಂದು ಘೋಷಿಸಿತ್ತು. ಕಾಲ ಉರುಳುತ್ತಿದೆ ಅಮೇರಿಕಾ ಸುಮ್ಮನಾಗಿದೆ. ಮಾತು ಮರೆತಂತಿದೆ.
ಚೀನಾದ ವೈರಸ್ ಹೆಚ್ವು ಪ್ರಭಾವ ಬೀರಿದ್ದು ಅಮೇರಿಕಾದ ಮೇಲೆ., ಚೇತರಿಕೆ ಹಂತಕ್ಕೂ ಸಾಗದ ಅಮೇರಿಕಾ ಚೀನಾಕ್ಕೆ ಶರಣಾದಂತಿದೆ. ಮತ್ತಿನ್ಯಾವುದಾದರೂ ವೈರಸ್ ನ್ನು ತಯಾರುಮಾಡಿ ಬಿಡಬಹುದೆಂಬ ದಿಗಿಲು ತಗುಲಿರಬಹುದೇ?!! ಈ ಸಂದರ್ಭ ಸಮಂಜಸವಲ್ಲಾ ಆ ಕಾಲಕ್ಕೆ ಕಾಯೋಣ ಎಂಬ ವಿಚಾರ ವಿರಬಹುದೇ ಗೊತ್ತಿಲ್ಲ ! ಅಮೇರಿಕಾ ದಿಂದ ಮುಂದೆ ನಾವೇನು ನಿರೀಕ್ಷಿಸಬಹುದು ? ಕಾದು ನೋಡೊಣ. !
-ಶಿವಕುಮಾರ್ ಹೊಸಂಗಡಿ
ಗುರುವಾರ, ಜುಲೈ 2, 2020
ಈ ಪರಿಯ ನಿರ್ಲಕ್ಷೆ ಯಾಕೆ?
ಇಟಲಿ,ಪ್ರಾನ್ ಸೇರಿದಂತೆ ಅನೇಕ ದೇಶಗಳಲ್ಲಿ ಕೊವೀಡ್ ಮ್ರತರನ್ನು ಲಾರಿಯಲ್ಲಿ ತುಂಬಿಸಿ ದೊಡ್ಡ ಹೊಂಡಕ್ಕೆ ಡಂಪ್ ಮಾಡುವ ವಿಡೀಯೋವನ್ನು ನಾವೇಲ್ಲಾ ಇತ್ತಿಚೆಗೆ ಕಂಡಿರುತ್ತೇವೆ. ಅಂತದ್ದೇ ಚಿತ್ರಣವನ್ನು ನಮ್ಮ ದೇಶದ ರಾಜ್ಯದಲ್ಲಿನ ಬಳ್ಳಾರಿ,ದಾವಣಗಿರಿ,ಯಾದಗಿರಿಯಲ್ಲಿ ನೋಡುವ೦ತಾಗಿದ್ದು ನಮ್ಮ ದೌರ್ಭಾಗ್ಯ ಸರಿ !ಯಾವುದೇ ಕರುಣೆ,ಅನುಕಂಪ,ಗೌರವ,ಸೌಜನ್ಯ,ನಾಚಿಕೆ,ಮರ್ಯಾದೆ ಇಲ್ಲದೇ ಬೀದಿ ನಾಯಿ ಸತ್ತಾಗ ಹೇಗೆ ಅದನ್ನು ದರ-ದರನೆ ಎಳೆದು ಹೊಂಡಕ್ಕೆ ಎಸಯಲಾಗುತ್ತದೋ ಕಾರ್ಯ ರೂಢಿಗತವಾಗಿದೆ. ಜೆಸಿಬಿ ಯಂತ್ರದ ಮೂಲಕ ಗುಂಡಿಗೆ ದೂಡುವ,ಒಂದೇ ಹೊಂಡದಲ್ಲಿ 4-5 ಶವವನ್ನು ಎಸೆಯುವ ಪರಿಸ್ತಿತಿಯನ್ನು ನೋಡಿದರೇ ಕರುಳು ಚುರುಕ್ ಅನ್ನುತ್ತದೆ. ಇನ್ನು ಇದನ್ನು ಗಮನಿಸುತ್ತಿರುವ ಅವರನ್ನು ಕಳೆದು ಕೊಂಡ ಕುಟುಂಬಸ್ಥರಿಗೆ ಹೇಗಾಗಬೇಡ. ನಾಯಿ,ಇಲಿ ಸತ್ತಾಗ ಅವುಗಳ ಬಾಲ ಹಿಡಿದು ದರ ದರನೇ ಎಳೆದು ಎಸೆಯುತ್ತೇವೆ ಸೇಮ್ ಟು ಸೇಮ್ ಎಸೆಯುತ್ತಿರುವ ಆರೋಗ್ಯ ಸಿಬ್ಬಂದಿಗಳಿಗೆ ಶೇಮ್ ಆಗಬೇಕು., ತಮ್ಮಂತಯೇ ಇನ್ನೊಬ್ಬರ ದೇಹ ಎಂಬ ಕಿಂಚಿತ್ ಅರಿವು ಇಲ್ಲವೇ? ಒಂದು ನಾಯಿ ಸತ್ತರೇ ಇನ್ನೊಂದು ನಾಯಿ ಅದೇಷ್ಟು ಉಪಚಾರ ಮಾಡುತ್ತದೆ. ಕಣ್ಣೀರು ಸುರಿಸುತ್ತದೆ. ತನ್ನ ಮೂತಿಯಿಂದ ಮಣ್ಣು ಮಾಡುತ್ತದೆ, ನಾಯಿಗಿಂತ ಕಡೆಯಾದೇವಾ?ಶ್ವಾನಕ್ಕಿರುವಷ್ಟು, ಬುದ್ದಿಮತ್ತೆ,ಪಾಪ ಪ್ರಜ್ನೆ ನಮ್ಮವರಿಗೆ ಇಲ್ಲದೇ ಇರುವುದು ಕಳವಳಕಾರಿ. ಕೋವಿಡ್ ರೋಗಿಗಳಿಂದ ದೂರವಿರಬೇಕು,ಮ್ರತದೇಹದಿಂದಲೂ ಕೂಡಾ ಹೌದು.ಭಯ,ಆತಂಕ ಎಲ್ಲಾರಲ್ಲೂ ಇರುತ್ತದೆ. ನರ್ಸ್ ,ಡಾಕ್ಟರ್ ಎಷ್ಟು ಕಾಳಜಿಯಿಂದ ರೋಗಿಗಳಿಗೆ ಟ್ರೀಟ್ ಮೆಂಟ್ ಕೊಡುತ್ತಾರೆ.ಆದರೆ ಇತ್ತ ಸತ್ತವರ ಶವವನ್ನು ದೂರದಿಂದ ಎಸೆಯುವರಿಗೆ ಇದು ಪಾಲನೆಯಾಗುವುದಿಲ್ಲವೇ? ಪಿಪಿಇ ಧಿರಿಸುಗಳನ್ನು ಧರಿಸಿಯೂ, ಇಂಥಹ ಕಾರ್ಯಕ್ಕೆ ಮುಂದಾಗುವುದು ಎಷ್ಟು ಸರಿ ?ಅಷ್ಟೊಂದು ಭಯವೇ? ಶವಕ್ಕೂ ಕೂಡಾ ಪುಲ್ ಕವರ್ ಮಾಡಲಾಗುತ್ತದೆ ಆ ಹೊದಿಕೆ ಯಿಂದ ವೈರಸ್ ಹೊರಬರಲು ಸಾಧ್ಯವೇ? ತಾವುಗಳು ಸಹಾ ತುಂಬಾನೆ ರಕ್ಷಣಾತ್ಮಕ ಕವಚವನ್ನೇ ತೊಟ್ಟೂ ಹೀಗೆ ಮಾಡಲು ತಮಗೆ ಮನಸ್ಸು ಹೇಗೆ ಬರುತ್ತದೆ ?ನಿಮ್ಮ ಮನೆಯ ಸದಸ್ಯಗಳಿಗೆ ಹೀಗೆ ಮಾಡುತ್ತೀರಾ ?" ಸತ್ತವರ ದೇಹ ಎತ್ತ ಬಿದ್ದರೇನು?" ಎಂಬ ನಾಣ್ಣುಡಿ ಇದೆ.ಆದರೂ ಕೂಡಾ ನಮ್ಮಲ್ಲಿ ಸತ್ತವರಿಗೆ ಎಷ್ಟು ಶಾಸ್ತ್ರ ,ಸಂಪ್ರದಾಯಯುತವಾಗಿ ಅಂತ್ಯಕ್ರೀಯೆಯನ್ನು ಮಾಡಲಾಗುತ್ತದೆ. ಅದು ಬದಿಗಿರಲಿ ಕಿಂಚಿತ್ ಸರಿಯಾಗಿ ಹೊಂಡಕ್ಕೆ ಹಾಕಿ ದಫನ ಮಾಡಲೂ ನಿಮ್ಮಿಂದ ಸಾಧ್ಯವಾಗುತ್ತಿಲ್ಲ ,ಒಂದೇ ಗುಂಡಿಗೆ ಒಂದೇ ಮ್ರತ ದೇಹ ಅಂತ ಗೋತ್ತಿದ್ದರೂ, 4-5 ಶವವನ್ನು ಒಂದೇ ಸಮನೆ ಸುರಿಯುವ ನೀವುಗಳು ಬುದ್ದಿಭ್ರಮಣೆರೇ? ಅಂದರೂ ಅತಿಶಯೊಕ್ತಿ ಯಾಗಲಾರದು .ಒಂದು ಸರ್ಕಾರಿ ಹುದ್ದೆಯನ್ನು ಹೊಂದಿರುವ ವ್ಯಕ್ತಿ ಮ್ರತರಾದರೇ ಸಕಲ ಸರ್ಕಾರಿ ಗೌರವ ಲಭಿಸುತ್ತದೆ ಆದರೆ ಇಲ್ಲಿ ಕೋವಿಡ್ ಗೆ ತುತ್ತಾದರೇ ಜೆಸಿಬಿಯ ಮೂಲಕ ಕಸವನ್ನು ಬೀಸಾಡುವ ಹಾಗೆ ಗುಂಡಿಗೆ ದೂಡಿ ಅಂತ್ಯಸಂಸ್ಕಾರ ಕಾರ್ಯ ಮುಗಿದು ಬಿಡುವ ಪದ್ದತಿ ಜಾರಿಯಲ್ಲಿದೆ .ಎಂತಹ ಕಾಲಘಟ್ಟದಲ್ಲಿ ನಾವಿದ್ದೇವೆ ? ಹೌದು !ಕರೋನ ಸಮಸ್ಯೆಇದೆ .ಪ್ರಸ್ತುತದ ಪರಿಸ್ಥಿತಿ ಎಲ್ಲರಿಗೂ ಅರ್ಥವಾಗುತ್ತದೆ. ಆದರೂ ಈ ಪರಿಯ ನಿರ್ಲಕ್ಷೆ,ನಿರ್ಲಜ್ಜೆ ಯಾಕೆ?ದ್ರಷ್ಠಿ ಕೋನ ಬದಲಾಗಿದೆ!!
ಮಂಗಳವಾರ, ಜೂನ್ 30, 2020
App ಅಷ್ಟೇ ಬ್ಯಾನ್ ಆದರೆ ಸಾಕೇ?
ಚೀನಾ ಆಕ್ರಮಣದ ಬಳಿಕ ಭಾರತದಲ್ಲಿ ಚೀನಾ ಬಾಯ್ಕಟ್ಟ್ ಆಂದೋಲನವೇ ಶುರುವಾಯಿತು , ಚೀನಾ ವಸ್ತುಗಳನ್ನು ಬಹಿಷ್ಕರಿಸಬೇಕು ಎಂಬಂತ ಕೂಗುಗಳು ಸಾಮಾಜಿಕ ಜಾಲ ತಾಣಗಳಲ್ಲಿ ಬಲವಾದವು.ಸಾಕಷ್ಟು ಜನರು ತಮ್ಮ ಮೊಬೈಲ್ ನಲ್ಲಿನ App ಗಳನ್ನು ಅಳಿಸಿಯೂ ಆಯಿತು. ಇತ್ತ ಸರ್ಕಾರ 59 App ಗಳನ್ನು ಬ್ಯಾನ್ ಮಾಡಿಯೂ ಬಿಟ್ಟಿತು. ಇದು ಚೀನಾ ವಿರುದ್ಧದ ಮಹಾ ಸಮರ ಎಂದು ಬಿಂಬಿತವಾದರೂ, ಇನ್ನೊಂದೆಡೆ ಸೈಬರ್ ಕ್ರೈಮ್ ಅನ್ನು ತಪ್ಪಿಸುವ ಸಲುವಾದ ವಿಷಯ ಎಂಬುದು ಗುಟ್ಟಿನಲ್ಲಿ ಇದೆ. ಅದೇನೇ ಇರಲಿ App ಗೆನೋ ಬ್ರೇಕ್ ಬಿತ್ತು. ಆದರೆ ಎಲ್ಲಾ App ಗಳನ್ನು ನಿಷೇಧ ಮಾಡುವಲ್ಲಿ ಸರ್ಕಾರ ವಿಫಲವಾಯಿತೇ? ಈ 59 App ನಲ್ಲಿ ಹೆಚ್ಚೆಂದರೆ 10-12 ಮಾತ್ರ ಸಾಮನ್ಯವಾಗಿ ಉಪಯೋಗವಾಗುತ್ತಿದೆ. ಅತೀ ಹೆಚ್ಚು ಪ್ರಚಲಿತದಲ್ಲಿರುವ Paytm Zoom ,PUBG ಯಂತಹ ಇನ್ನಿತರ App ಗಳು ಸರ್ಕಾರದ ಕಣ್ಣಿಗೆ ಕಾಣಿಸದಿದ್ದದ್ದು ವಿಪರ್ಯಾಸ.! ಇಷ್ಟಾದರೂ ಆಯಿತಲ್ಲಾ ಸ್ತುತ್ಯಾರ್ಹ.ಗಿಳಿಯ ಮೇಲೆ ಬ್ರಹ್ಮಾಸ್ತ್ರ ಎಂಬತೆ ಯಾವುದೋ ಮುಖ್ಯನೋ ಅದನ್ನು ಬಿಟ್ಟು ಈ App ಮೇಲೆ ಮಾತ್ರ ದುಶ್ಮನ್ ಗಿರಿ ತೋರಿಸಿದೆ ಸರ್ಕಾರ. ಇದರಿಂದ ಎಳ್ಳಷ್ಟು ಪ್ರಯೋಜನ ವಿಲ್ಲ.ರಕ್ಕಸ ಹೊಟ್ಟೆಗೆ ಅರೆ ಕಾಸಿನ ಮಜ್ಜಿಗೆಯೇ ಸರಿ !!ಧೈರ್ಯ ,ಸ್ಥೈರ್ಯ ,ತಾಕತ್ತು ಇದ್ದರೇ ಎಲೆಕ್ಟ್ರಾನಿಕ್ ಸಹಿತ ಇನ್ನಿತ್ತರ ವಸ್ತುಗಳನ್ನು ಬ್ಯಾನ್ ಮಾಡಲಿ.ಅದು ಅಸಾಧ್ಯದ ಮಾತು. World Trade Organization ಪ್ರಕಾರ ಹಾಗೆ ಮಾಡುವಂತಿಲ್ಲ.ಜನ ಸಾಮಾನ್ಯರ ಮೇಲೆ ಜವಬ್ದಾರಿಯನ್ನು ಹೊರಿಸಿದಂತಿದೆ ,ಜನ ಸಾಮಾನ್ಯರೂ ಸಹಾ ಅಷ್ಟೇ ಅಸಹಾಯಕರು . ಹೆಚ್ಚಾಗಿ ,ಕಡಿಮೆ ಕ್ರಯದ ವಸ್ತುವಿನ ಹಿಂದೆ ಬೀಳುವ ನಮ್ಮಿಂದ ಇದು Impossible !.ಇದು ಸರ್ಕಾರದ ಆಡಳಿತ ವ್ಯವಸ್ಥೆಯಲ್ಲೆ ಆಗಬೇಕು ಸುಲಭವಾಗಿ ದೇಶದ ಗಲ್ಲಿ -ಗಲ್ಲಿಯಲ್ಲಿ ಸಿಗುವಂತ ಈ ಮಾಲುಗಳಿಗೆ ಕಡಿವಾಣ ಬೀಳಬೇಕು. ಜನ ಸಾಮನ್ಯರು ಹೆಚ್ಚೆಂದರೆ ತಮ್ಮ ಮೊಬೈಲ್ ನಲ್ಲಿನ App ನ್ನ Uninstall ಮಾಡಬಹುದು,ಅದನ್ನು ಎಲ್ಲಾ ಮನಸ್ಥಿತಿಯವರು ಮಾಡುತ್ತಾರೆ ಎಂಬ ವಿಶ್ವಾಸವಿಲ್ಲ .,Tiktok ನಂತಹ App ಭಾರತದಲ್ಲಿ ಹೆಚ್ಚು ಜನಪ್ರೀಯತೆಯನ್ನು ಪಡೆದು ಕೊಂಡಿದೆ. ಲಕ್ಷ, ಕೋಟಿಗಟ್ಟಲೇ ಫಾಲವರ್ಸ್ ನ್ನು ಹೊ0ದಿರುವವರು ಇದಕ್ಕೆ ಹಿಂಜರಿಯುವುದು ಅಷ್ಟೇ ಸತ್ಯ, ಎನೇ ಇರಲಿ ಅಂತೂ ,ಇಂತೂ ಒಂದಷ್ಟು App ಗಳಿಗೆ ಸರ್ಕಾರ ವಿದಾಯ ಹೇಳಿದೆ .ಅದರಲ್ಲೂ Tiktok ಬಂದ್ ಆಗಿದ್ದೂ ಸಂತೋಷಕರ !ಇನ್ನೂ ಬೇರೆ ವಸ್ತುಗಳ ಕಥೆ ಎನು?ಅವುಗಳ ಆಯುಸ್ಸು ಎಂದು ?ಮೊದಲಿಗೆ ಚೀನಾದ ಆಮದನ್ನು ನಿಲ್ಲಿಸಬೇಕು. ಈಗಿರುವ ಎಲ್ಲಾ ಸ್ಟಾಕ್ ಗಳಿಗೆ ಬೆಂಕಿ ಬೀಳಬೇಕು. ಚೈನಾ ಮೊಬೈಲ್ ಉಪಯೋಗ ಮಾಡುತ್ತಿರುವವರಿಗೆ ಅದೇ ಬೆಲೆಯ ಮೊಬೈಲ್ ದಯಪಾಲಿಸಿ. ಚೈನಾದಂತೆ ನಮ್ಮಲ್ಲಿ ಯಾಕೆ ಅದೇ ಬೆಲೆಗೆ ವಸ್ತುಗಳು ತಯಾರಿಸಲು ಸಾಧ್ಯವಾಗುತ್ತಿಲ್ಲ?App ಗೆಯೆನೋ ಪರ್ಯಾಯವಾಗಿ ನಮ್ಮಲ್ಲಿ ಹೊಸ App ಸ್ರಷ್ಠಿಯಾಗಬಹುದು., ಇತರ ವಸ್ತುಗಳು ಭವಿಷ್ಯ ?? ಸರ್ಕಾರದ ಮುಂದೆ ಇರುವ ಸವಾಲುಗಳು ಇವು.!
ಭಾನುವಾರ, ಜೂನ್ 28, 2020
ಆಡಂಬರದ ಮದುವೆಗೆ ಕರೋನ ತಂತು ಕಡಿವಾಣ !
"ಮದುವೆ ಮಾಡಿ ನೋಡು ಮನೆ ಕಟ್ಟಿ ನೋಡು” ಎಂಬ ಗಾದೆ ಮಾತಿದೆ. ಇದರ ಅರ್ಥ ಆಧುನಿಕ ಜಗತ್ತಿನಲ್ಲಿ ಈ ಎರಡು ಕೆಲಸ ಬಹಳ ಕಷ್ಟಕರವಾದದ್ದು. ಆರ್ಥಿಕ ಸ್ಥಿತಿ ತುಂಬಾ ಮುಖ್ಯವಾದದ್ದು .ಮನೆಯನ್ನು ಹೇಗಾದರೂ ಕಟ್ಟಬಹುದು ಆದರೆ ಈ ಮದುವೆ ಎನ್ನುವ ಒಂದು ಕಾರ್ಯಕ್ರಮ ಇದೆಯಲ್ಲ ಇದನ್ನು ಎಷ್ಟೇ ಅದ್ದೂರಿ ,ಆಡಂಬರವಾಗಿ ಆಚರಿಸಿದರೂ , ಮರುದಿನ ಮನಸ್ಸಲ್ಲಿ ಏನೋ ಕಳೆದುಕೊಂಡ ಅನುಭವ ಮನೆ ಮಂದಿಗೆ ಉಂಟಾಗುತ್ತದೆ.ಮನೆಯವರೆಲ್ಲಾ ಒಟ್ಟು ಸೇರಿ ಒಂದು ದೊಡ್ಡ ಮೀಟಿಂಗ್ ಕೂಡ ಅರೆಂಜ್ ಮಾಡಿ , "ಹೀಗೆ ಮಾಡಿದ್ರೆ ಚೆನ್ನಾಗಿತ್ತು ,ಹಾಗೆ ಆಗಿದ್ದಿದ್ದರೆ ಒಳ್ಳೆದಿತ್ತು ,ಆ ಮನೆಯವರು ಆ ತರಹ ಮಾಡಿದ್ದರು ,ಈ ಮನೆಯವರು ಈ ತರಹ ಮಾಡಿದ್ದಾರೆ ಇಷ್ಟು ಖರ್ಚು ಮಾಡಿದ್ದವರಿಗೆ ಅದೊಂದ್ದನ್ನು ಪೂರ್ಣ ಗೊಳಿಸಬೇಕಿತ್ತು ." ಎಂಬ ಅಭಿವ್ಯಕ್ತಿ ಹೊರಹೊಮ್ಮುತ್ತದೆ .ಎಲ್ಲಿಯಾದರೂ ಮನೆವರ ಹಿತೈಷಿಗಳು ಸಿಕ್ಕಿದ್ದರೆ ಅವರು ಹೇಳುದು ಕೂಡಾ ಹೀಗೆ "ಮದುವೆ ಚೆನ್ನಾಗಿ ನಡೆದು ಹೋಯ್ತು ಆದರೆ ಅದೊಂದು ಇದ್ದಿದ್ದರೆ ,ಹಾಗೆ ಆಗಿದ್ದರೇ ಇನ್ನೂ ಗಮ್ಮತ್ತು ಇರ್ತಾ ಇತ್ತು ". ಎಂದು ತಟ್ಟನೆ ಇತ್ತ ಕಡೆಯಿಂದ ಉತ್ತರವೂ ಅಷ್ಟೇ "ಇನ್ನೊಬ್ಬನು ಇದ್ದಾನಲ್ಲ ಮದುವೆಗೆ ಅವನಿಗೆ ನೀವು ಹೇಳಿದ ಹಾಗೆ ಮಾಡೋಣ" ಎನ್ನುತ್ತಾರೆ .ಹೌದು ! ನಮ್ಮಲ್ಲಿ ಮದುವೆಗೆ ಮಾಡಿದಷ್ಟು ಖರ್ಚು-ವೆಚ್ಚು ಇನ್ಯಾವುದೇ ಕಾರ್ಯಕ್ರಮಕ್ಕೆ ಮಾಡಲಾಗುವುದಿಲ್ಲ . ಅಷ್ಟೊಂದು ಅದ್ದೂರಿ ,ಆಡಂಬರವಾಗಿ ಮಾಡಲಾಗುತ್ತದೆ . ನಮ್ಮ ದೇಶದಲ್ಲಿ ಮದುವೆ ವಿಷಯ ಬಂದರೆ, ಇಡಿಯ ಜೀವಮಾನ ಉಳಿಸಿದ ಗಳಿಕೆಯನ್ನು ಒಂದೇ ದಿನದಲ್ಲಿ ಖರ್ಚು ಮಾಡಿಸದಿದ್ದರೆ ಅದು ಮದುವೆಯೇ ಅಲ್ಲ. ಇದಕ್ಕೆಂದೇ ಮಕ್ಕಳು ಚಿಕ್ಕವರಿದ್ದಾಗಿನಿಂದಲೇ ಮದುವೆಗಾಗಿ ಹಣವನ್ನು ಉಳಿಸುತ್ತಾ ಬರುವುದೇ ಹೆಚ್ಚಿನವರು ಅನುಸರಿಸುವ ಮಾರ್ಗ.! ಉಳ್ಳವುರಿಗಂತೂ ಖರ್ಚಿಗೆ ಲೆಕ್ಕ -ಪತ್ರವೇ ಇರುವುದಿಲ್ಲ .ಅಷ್ಟೊಂದು ವಿಜೃಂಭಣೆಯಿಂದ ಮದುವೆ ಕಾರ್ಯವನ್ನು ಮುಗಿಸಿ ಬಿಡುತ್ತಾರೆ . ಆದರೆ ಇಲ್ಲದವರು ಸಹಾ ಅದೇನೋ ಕಷ್ಟಪಟ್ಟು ,ಸಾಲ -ಸೂಲ ಮಾಡಿ ಹಣ ಹೊಂದಿಸಿ ಆಡಂಬರಕ್ಕೆ ದಾಸರಾಗಿ ಬಿಡುತ್ತಾರೆ . ಉಳ್ಳವರು ಆನೆ ಮೇಲೆ ಹೋಗುತ್ತಾರೆ . ಇಲ್ಲದವರು ಅವರನ್ನು ನೋಡಿ ಸಂತೋಷ ಪಡಬೇಕೇ ವಿನಃ ಅವರಂತೆ ನಾವು ಮಾಡಬೇಕು ಎಂದು ಬಯಸುವುದು ಎಷ್ಟು ಸರಿ ? ಹಾಸಿಗೆ ಇದ್ದಷ್ಟೇ ಕಾಲು ಚಾಚ ಬೇಕು ಅಲ್ಲವೇ ? ಸರಳವಾಗಿ ಮದುವೆ ಮಾಡೋಣ ಎಂದು ಯಾರಾದರೂ ಸಲಹೆ ಮಾಡಿದರೆ ಎಲ್ಲಾ ಕಡೆಗಳಿಂದ ಇದಕ್ಕೆ ವಿರೋಧ ಎದುರಾಗುತ್ತದೆ.ನಮಗಿಂತಲೂ ಆರ್ಥಿಕವಾಗಿ ಹಿಂದುಳಿದ ಇನ್ನಾರೋ ಮಾಡಿದ ಮದುವೆಯನ್ನು ಉದಾಹರಿಸಿ ಅವರಿಗಿಂತ ನಾವೇನು ಕಡಿಮೆ ಎಂಬ ಧೋರಣೆ ಅನುಸರಿಸಲಾಗುತ್ತದೆ .ಮದುವೆ ಎಂಬುದು ವ್ಯಕ್ತಿಯ ಬಾಳಿನಲ್ಲಿ ಒಮ್ಮೆ ಮಾತ್ರ ನಡೆಯುವಂತದ್ದು, ಅದನ್ನು ಅದ್ದೂರಿಯಾಗಿ ಮಾಡಬೇಕು ,ನೆರ ಹೊರೆಯವರು ನಮ್ಮನ್ನು ಕೊಂಡಾಡಬೇಕು ,ಎಲ್ಲರ ಮೆಚ್ಚುಗೆಗೆ ಪಾತ್ರರಾಗಬೇಕು ಎಂಬ ಈ ಮನೋಭಾವವೇ ಆಧುನಿಕ ದಿನಗಳಲ್ಲಿ ಎದ್ದು ಕಾಣುತ್ತಿದೆ . ಈ ಆಡಂಬರಕ್ಕೆ ಇದೇ ಮೂಲ ಕಾರಣವಾದರೂ, ಇನ್ನೊಂದು ವಿಚಾರವನ್ನೂ ಗಮನಿಸಬೇಕು ,ಸ್ವರ್ಧಾತ್ಮಕತೆಯೂ ಸಹಾ ಇಲ್ಲಿ ಮೇಳೈಸುತ್ತದೆ . "ಆ ಮನೆಯವರ ಬಳಿ ಬಿಡಿಗಾಸು ಇಲ್ಲದಿದ್ದರೂ ,ಸಹಾ ಮಕ್ಕಳಿಗೆ ಅಷ್ಟೊಂದು ಅದ್ದೂರಿಯಾಗಿ ಮದುವೆ ಮಾಡಿಸಿದ್ದಾರೆ ನಾವು ಅವರಿಂದ ಮೇಲ್ ಸ್ಥರದಲ್ಲಿ ಇದ್ದೇವೆ ಎಂದು ಅಹಂಕಾರದ ಆರ್ಭಟಕ್ಕೆ ಜೋತು ಬೀಳುವ ಇವರಲ್ಲಿ, ಅಸಲಿಗೆ ಆರ್ಥಿಕ ಪರಿಸ್ಥಿತಿ ಸುಭಧ್ರವಿಲ್ಲದಿದ್ದರೂ ,ಮದುವೆ ಮಾಡಿಸುತ್ತಾರೆ .ಅರ್ಥ ಇಷ್ಟೇ ಅವರಿಗಿಂತ ನಾವು ಕಡಿಮೆ ಯಾಗಬಾರದು ಎಂಬಂತ ಮನಸ್ಥಿತಿ ಹಲವರಲ್ಲಿದೆ. ಅಂತಹ ಮ್ಯಾಟರುಗಳೇ ಇಂದಿನ ದಿನ ಸಿಂಹ ಪಾಲು ಅಂದರೂ ಅತಿಶಯೋಕ್ತಿ ಯಾಗಲಾರದು . ಎಲ್ಲಿಯವರಿಗೆ ಅಂದರೆ ಮದುವೆಯ ಆಮಂತ್ರಣ ಪತ್ರಿಕೆ ತನಕವೂ ಈ ಪೈಪೋಟಿ ಮುಂದುವರಿಯುತ್ತದೆ! 2-3 ದಿನದಲ್ಲಿ ಸಮಾರಂಭ ವಿದಾಯ ಕಾಣುತ್ತೆ . ಇದಕ್ಕೆ ವೆಚ್ಚವಾಗುವ ಹಣದ ಸಂದಾಯವಾಗುದಕ್ಕೆ ಅದೆಷ್ಟು ಸಮಯ ಬೇಕೋ ಗೊತ್ತಿಲ್ಲ .,ಅದೇಗೋ ಕಷ್ಟ ಪಟ್ಟು ಭರಿಸಲೇ ಬೇಕಾಗುತ್ತದೆ . ಮದುವೆ ಸಮಾರಂಭ ಎನ್ನುವುದು ಒಂದೇ ದಿನದಲ್ಲಿ ಮುಗಿದು ಹೋಗುವಂತ್ತದ್ದಲ್ಲ ., ಕಾರ್ಯಕ್ರಮದ ಲಿಸ್ಟ್ ಬಹಳ ಉದ್ದವಿದ್ದರೂ ,ಆ ಮೂರು ದಿನಗಳಲ್ಲಿ ಖರ್ಚಾಗುವ ವಿಚಾರ ಮಾತ್ರ ಬಹಳ ಮುಖ್ಯ .ಮೊದಲಿಗೆ ಪ್ರಾರಂಭವಾಗುವುದು ನಿಶ್ಚಿತಾರ್ಥದಿಂದ. ಎಂಗೇಜ್ಮೆಂಟ್ ಗೆ ದೊಡ್ಡ ಹಾಲ್ ಬೇಕು ಕಡಿಮೆ ಅಂದರೂ ಸಾವಿರ ಜನ ಸೇರಲೇ ಬೇಕು ಅವರೆಲ್ಲರನ್ನು ಮೊಬೈಲಜಿಷನ್ ಮಾಡಲು ವಾಹನದ ವ್ಯವಸ್ಥೆ ,ಹಾಲ್ ನ ಅಲಂಕಾರ ,ಭೂರಿ ಭೋಜನ ದೊಂದಿಗೆ ಎಂಗೇಜ್ಮೆಂಟ್ ಕಾರ್ಯಕ್ರಮ ಫಿನಿಷ್ !ನೆಕ್ಸ್ಟ್ ಸ್ಟೆಪ್ ಮೆಹಂದಿ ಕಾರ್ಯಕ್ರಮ ಕೆಲವೊಂದು ಮಂದಿ ತಮ್ಮ ನಿವಾಸದಲ್ಲೇ ಹಮ್ಮಿಕೊಂಡರೇ , ಇನ್ನೂ ಕೆಲವರು ಆಗಲೇ ಹೇಳಿದಂತೆ ಪ್ರಸಿದ್ಧ ಹಾಲ್ ಗಳನ್ನೇ ಆಯ್ಕೆ ಮಾಡಿ ಕೊಳ್ಳುತ್ತಾರೆ . ಮನೆ ಮುಂದೆ ಶಾಮಿಯಾನ ,ಮನೆ ಪೂರ್ತಿ ಕಲರ್ ಫುಲ್ ಲೈಟಿಂಗ್ಸ್ ನೊಂದಿಗೆ ಬಗೆ-ಬಗೆಯ ಅಲಂಕಾರ . ಜೊತೆಗೆ ನಾನ್ ವೆಜ್ ಊಟ.ಇನ್ನೂ ಮೆಹಂದಿಗೆ ಮಧ್ಯಪಾನ ವಿಲ್ಲದೇ ಅದು ಪೂರ್ಣಗೊಳ್ಳುವುದೇ ಇಲ್ಲ ,ಇದನ್ನು ಕರಾವಳಿ ಕರ್ನಾಟಕದಲ್ಲಿ ಯೆಥೇಚ್ಛವಾಗಿ ಕಾಣ ಬಹುದು.ಡ್ಯಾನ್ಸ್ ಆರ್ಕೆಷ್ಟ್ರಾ ದೊಂದಿಗೆ ಮೆಹಂದಿ ಕಾರ್ಯಕ್ರಮ ಖತಮ್ .!ನಂತರ ಬರುವುದೇ ಮದುವೆ ,ಆರತಕ್ಷತೆ ಇದೂ ಸಹಾ ಅಷ್ಟೇ ಇದಕ್ಕೆ ಹೊರತಾಗಿಲ್ಲ ಪ್ರಸಿದ್ಧ ಹಾಲ್ ,ಸಾವಿರಾರು ಜನರ ಕೂಡುವಿಕೆ ,ವಾಹನದ ವ್ಯವಸ್ಥೆ ,ಭೂರಿ ಭೋಜನ ಇತ್ಯಾದಿ ಇತ್ಯಾದಿ.!ಇದು ಕಾರ್ಯಕ್ರಮದ ಹೈಲೈಟ್ಸ್., ಆದರೆ ಇನ್ನು ಹಿನ್ನೋಟವೂ ಅಷ್ಟೇ ಅದ್ಭುತ ,ಅಮೋಘ ! ವರನ ಕಡೆಯಿಂದ ವಧುಗೆ ನಿರ್ದಿಷ್ಟ ಬಂಗಾರದ ಬೇಡಿಕೆ ,ಅದಕ್ಕೆ ಅನುಗುಣವಾಗಿ ಏನು ಕೊರತೆ ಬಾರದ ಹಾಗೆ ತುಸು ಹೆಚ್ಚೇ ಹಾಕಿ ಈಗೀಗ ಕೆಜಿ ಗಟ್ಟಲೇ ಬಂಗಾರದ ಹೇರಿಕೆ ಕಂಡು ಬರುತ್ತದೆ . ಲಕ್ಷಗಟ್ಟಲೇ ಹಣದ ಬಟ್ಟೆ !, ವಧು-ವರರರಿಗೆ ಮಾತ್ರವಲ್ಲದೇ ಕುಟುಂಬಸ್ಥರಿಗೆ ನೆಂಟರಿಷ್ಟರಿಗೂ ತೆಗೆಯಲಾಗುತ್ತದೆ.ಲೋಡುಗಟ್ಟಲೇ ಬಟ್ಟೆ -ಬರೆಗೆ ಎಷ್ಟು ಬೆಲೆಯಾಗಬೇಡ ?ಒಂದೇ ಕಲರ್ ಬಟ್ಟೆಯನ್ನು ತೊಟ್ಟು ಒನ್ದಷ್ಟು ಮಂದಿ ಮದುವೆ ಮಂಟಪದಲ್ಲಿ ಮಿರ-ಮಿರ ಮಿಂಚುತ್ತಿರುದನ್ನು ಕಂಡಿರುತ್ತೇವೆ .ಮದುವೆಗೆ ಬಂದವರು ಎಲ್ಲಾ ನಮ್ಮನ್ನೇ ಗಮನಿಸಲಿ ಎಂಬ ಉದ್ದೇಶ ! ಆಡಂಬರಕ್ಕೆ ಎಣೆ ಇಲ್ಲ . ಎಂತೆಂತಾ ನಮೂನೆಗಳು ? ಎಷ್ಟೆಲ್ಲಾ ದುಂದು ವೆಚ್ಚ ?ಇಷ್ಟೆಲ್ಲಾ ಆಡಂಬರ ಅವಶ್ಯಕೆತೆ ಇದೆಯೇ ? ಸರಳವಾಗಿ ಮದುವೆಯಾದರೆ ನೂರು ವರ್ಷ ಬಾಳುವುದಿಲ್ವೇ ?ಎಲ್ಲವೂ ಪ್ರತಿಷ್ಠೆಗೋಸ್ಕರ ಅಷ್ಟೇ !ಹಾಗಂತಾ ಸಿಂಪಲ್ ಆಗಿ ಮದುವೆಯಾಗುವವರು ಇಲ್ಲವಂತಲ್ಲ . ಕೆಲವೊಮ್ಮೆ ಪರಿಸ್ಥತಿ ಸರಳ ಮದುವೆಗೆ ನೂಕಿ ಬಿಡುತ್ತದೆ. ಪ್ರೀತಿ -ಪ್ರೇಮ -ಪ್ರಣಯದಲ್ಲಿ ತೇಲಾಡುವ ಪ್ರೇಮ ಪಕ್ಷಿಗಳು ಸರಳ ಮದುವೆಗೆ ಹೊಂದಿಕೊಳ್ಳಲೇ ಬೇಕು . ಪ್ರೇಮಿಗಳ ಮನೆಯಲ್ಲಿ ಒಪ್ಪಿಗೆ ಸಿಗದೇ ಇದ್ದಾಗ ತನ್ನ ಸ್ನೇಹಿತರೊಂದಿಗೆ ರಿಜಿಸ್ಟರ್ ಮ್ಯಾರೇಜ್ ಅಥವಾ ಯಾವುದೋ ದೇವಸ್ಥಾನದಲ್ಲಿ ತಾಳಿ ಕಟ್ಟುವುದು ಇದ್ದೇ ಇರುತ್ತದೆ . ಇದು ಸರಳ ಮದುವೆಗೆ ಬೆಸ್ಟ್ ಎಗ್ಸಾಂಪಲ್ ! ಇನ್ನು ಅಲ್ಲಲ್ಲಿ ಕೆಲವು ಸಂಘಟನೆ ಮತ್ತು ದೇವಸ್ಥಾನದ ವತಿಯಿಂದ ಉಚಿತ ಸಾಮೂಹಿಕ ವಿವಾಹ ಎಂದು ವರ್ಷದಲ್ಲಿ ಒಮ್ಮೆ ದೊಡ್ಡ ಕಾರ್ಯಕ್ರಮವನ್ನು ಇಟ್ಟುಕೊಳ್ಳುತ್ತವೆ . ಆ ವೇದಿಕೆಯಲ್ಲಿ ಒಂದಷ್ಟು ಉಚಿತವಾಗಿ ಕೆಲವೊಂದು ವಸ್ತುಗಳು(ವಸ್ತ್ರ ಆಭರಣ ) ಸಹಾ ಲಭಿಸುತ್ತದೆ . ಅತೀ ಬಡತನದ ಬೇಗೆಯಲ್ಲಿದ್ದವರು,ಹರಕೆ ಹೊತ್ತವರು ,ಅಂತರ್ಜಾತೀಯ ವಧು-ವರರು ಈ ಕಾರ್ಯಕ್ರಮದಲ್ಲಿ ಸಾಮಾನ್ಯವಾಗಿ ಹೆಸರನ್ನು ನೊಂದಾಯಿಸಿಕೊಳ್ಳುತ್ತಾರೆ .ಆಗಲೇ ಹೇಳಿದಂತೆ ಇಂತಹ ಪರಿಸ್ಥಿತಿಗೆ ಹೊಂದಿಕೊಂಡು ಸರಳ ವಿವಾಹ ನಡೆಯುತ್ತದೆ .ಈಗಿನ ಪರಿಸ್ಥಿತಿ ಯಾವುದಕ್ಕೂ ಕ್ಯಾರೇ ಮಾಡುತ್ತಿಲ್ಲ ,ಹಣ ,ಅಂತಸ್ತು ,ಗೌರವ ,ಘನತೆ ಸ್ವರ್ಧಾತ್ಮಕತೆಗೆ ಬ್ರೇಕ್ ಹಾಕಲು ಕರೋನ ಬಂದಿದೆ. ಈ ವರ್ಷ ಕರೋನ ಎಂಬ ಮಹಾಮಾರಿ ವಕ್ಕರಿಸಿ , ಜನ ಸಾಮನ್ಯರನ್ನು ಹೈರಾಣಾಗಿಸಿದ್ದು ಎಲ್ಲರಿಗೂ ಗೊತ್ತಿರುವುದೇ . ಇದರಿಂದ ಹೆಚ್ಚು ಹೊಡೆತ ಬಿದ್ದಿದ್ದು ಈ ಮದುವೆ ಸಮಾರಂಭಕ್ಕೆ ಈಗಾಗಲೇ ಮೊದಲೇ ನೊಂದಾಯಿಸದಂತೆ ,ಒಳ್ಳೆಯ ದಿನ, ಶುಭ ಘಳಿಗೆ ಯೊಂದಿಗೆ ನಡೆಯಬೇಕೆಂದು ಆಕಾಂಕ್ಷೆ ಪಟ್ಟವರಿಗೆ ಅದ್ದೂರಿ ಕೈ ಕೊಟ್ಟಿದೆ .ರಾಜಕಾರಣಿಗಳ ಮಕ್ಕಳು ,ಸಿನಿಮಾ ಮಂದಿಗಳೆಂಬ ಸೆಲೆಬ್ರಿಟಿಗಳಿಗೆ ಕರೋನ , ಮದುವೆ ವಿಷಯದಲ್ಲೂ ಮಾರಕವಾಗಿದಂತೂ ಸತ್ಯ . ಹೆಚ್ಚಿನವರು ಮದುವೆ ದಿನಾಂಕವನ್ನು ಮುಂದೆ ದೂಡಿದರೂ , ಎಷ್ಟು ದಿನ ಎಂದು ಕಾಯಬಹುದು ? ಈಗಾಗಲೇ 4-5 ತಿಂಗಳು ಕಳೆದರೂ , ಕರೋನಾ ಕಥೆ ಮುಗಿಯುವ ಲಕ್ಷಣ ಕಾಣುತಿಲ್ಲ. ಹಾಗಾಗಿ ಅನಿವಾರ್ಯವಾಗಿ ಸರಳ ಮದುವೆಗೆ ಅಡಿ ಇಡಲೇಬೇಕಾಯಿತು. ಕುಟುಂಬಸ್ಥರ ಸಮ್ಮುಖದಲ್ಲಿ ,ಬೆರಳೆಣಿಕೆಯ ನೆಂಟರುಷ್ಟರುಗಳ ಜೊತೆಗೆ ವಿವಾಹವಾಗುವಲ್ಲಿ ಉಂಟಾದ ಕೊರತೆ ಯಾದರೂ ಏನು ? ಒನ್ದಷ್ಟು ಆಡಂಬರ, ನೆರೆ ಹೊರೆಯವರು ವೀಕ್ಷಣೆಗೆ ಇಲ್ಲ ಎಂಬುದು ಬಿಟ್ಟರೇ , ಮತ್ತಿನ್ನೇನು ತೊಡಕು ?ಹೀಗೆ ಮದುವೆಯಾದರೆ ಗಂಡ -ಹೆಂಡತಿಯಾಗಿ ಸುಖವಾಗಿ ಬಾಳುದಿಲ್ಲವೇ ?ಊರ -ಪರ ಊರಿನವರಿಗೆ ತಮ್ಮ ಅದ್ದೂರಿತನವನ್ನು ತೋರ್ಪಡಿಸುವ ಅಗತ್ಯವಿಲ್ಲ ಸತಿ -ಪತಿಯಾದ ಮೇಲೆ ಎಲ್ಲಾರಿಗೂ ಅರಿವಾಗುತ್ತದೆ .ಕರೋನ ಇದಕ್ಕೊಂದು ದೊಡ್ಡ ಕಡಿವಾಣ ಹಾಕಿದ್ದು ಸಂತೋಷ ತಂದಿದೆ. ಮದುವೆ ಕಾರ್ಯ ಪ್ರಸ್ತುತ ಕರೋನ ಕಾಲದಲ್ಲಿ ಹೇಗೆ ನಡೆಯುತ್ತಿದೆಯೋ ಅದೇ ರೀತಿ ಮುಂದೆ ಕೂಡಾ ಸರಳವಾಗಿ ನಡೆಯಲಿ .
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)






