ಶುಕ್ರವಾರ, ಮಾರ್ಚ್ 19, 2021
ಕಿಸಾನ್ ಕೀ ಆಂದೋಲನಾ ಎಷ್ಟು ಸರಿ ?
ಕೇಂದ್ರ ಸರ್ಕಾರದ 3 ರೈತ ಕಾಯ್ದೆಯನ್ನು ವಿರೋಧಿಸಿ ದಿಲ್ಲಿಯಲ್ಲಿ ಹೋರಾಟನಿರತ ರೈತರು ಮಂಕಾದರೆ ಎಂಬ ಗುಮಾನಿ ಹಬ್ಬುತ್ತಿದೆ .ತಮ್ಮಿಂದ ಸರ್ಕಸ್ ಸಾಧ್ಯವಾಗುವುದಿಲ್ಲ ಎಂದು ಅರಿತು ಹೋಶ್ /ಜೋಷ್ ಕಳೆದು ಕೊಂಡರೇ ?
ಕಳೆದ 2-3ತಿಂಗಳುಗಳಿಂದ ಸಹಸ್ರಾರು ಮಂದಿ ರೈತರೆಂಬ ಹಣೆಪಟ್ಟಿಯಲ್ಲಿರುವವರು ಕೇಂದ್ರ ಸರಕಾರವು ರೈತರಿಗಾಗಿ ತಂದ ಕಾಯ್ದೆಯನ್ನು ವಿರೋಧಿಸಿ ಉಗ್ರ ಹೋರಾಟಕ್ಕೆ ಕಿಚ್ಚು ಹಚ್ಚಿಸಿದ್ದವು ,ಸಾಂಘವಾಗಿ ಸಾಗುತ್ತಿದ್ದ ಹೋರಾಟ ಒಂದಷ್ಟು ಉಗ್ರ ಸ್ವರೂಪವನ್ನು ಪಡೆದು ಕೊಂಡಿತ್ತು, ದೆಹಲಿಯ ಕೆಂಪು ಕೋಟೆಯಲ್ಲಿ ಕೆಂಪು ಧ್ವಜವನ್ನು ಹಾರಿಸಿತ್ತು . ಟ್ಯಾಕ್ಟರ್ ನ್ನು ಹೋರಾಟ ನಿಯಂತ್ರಿಸುತ್ತಿದ್ದ ಪೋಲೀಸರ ಮೇಲೆ ಹಾರಿಸುವಲ್ಲಿ ಮುಂದಾಗಿತ್ತು ,ಭಾರತ್ ಬಂದ್ ಕೂಡಾ ಮಾಡಲಾಗಿತ್ತು , ಹಸಿರು ಶಾಲು ತೊಟ್ಟ ಕಿಡಿಗೇಡಿಗಳು ಇಷ್ಟೆಲ್ಲಾ ಅನಾಚಾರಕ್ಕೆ ಮುನ್ನುಡಿ ಬರೆದಿದ್ದರು .
ರೈತ ಅನ್ನದಾತ .,ನಮ್ಮ ದೇಶದಲ್ಲಿ ರೈತರಿಗೆ ಹಾಗೂ ಸೈನಿಕರಿಗೆ ಇರುವಷ್ಟು ,ಕೊಡುವಷ್ಟು ಗೌರವ -ಘನತೆ ಮತ್ಯಾರಿಗೂ ಇಲ್ಲಾ ಅವರುಗಳೇ ನಿಜವಾದ ಹೀರೋಗಳು ,ಭೂಮಿ ಪುತ್ರ ,ಅನ್ನ ನೀಡುವ ದೇವರುಗಳು ಎಂಬಿತ್ಯಾದಿ ವ್ಯಾಖ್ಯಾನ ಗಳಿರುವ ರೈತ ನಿಜಕ್ಕೂ ಇಷ್ಟೊಂದು ಉಗ್ರ ರೂಪ ತಾಳು ವನೇ ? ಇಲ್ಲಾ..! ಅಸಾಧ್ಯದ ಮಾತು., ನಷ್ಟ /ಕಷ್ಟವನ್ನು ಕಂಡ- ಬೆಂದ ಜೀವವದು ಅವರಿಗೆ ರೂಢಿಯಾಗಿ ಬಿಟ್ಟಿದೆ .ತಾವು ಬೆಳೆಯುವ ಬೆಳೆಯಲ್ಲಿ ನಷ್ಟವೇ ಹೊರತು ಲಾಭ ಅಲ್ಪ ಪ್ರಮಾಣದ್ದು ಎಂಬುದು . ಮಾರುಕಟ್ಟೆಯಲ್ಲಿ ಉತ್ತಮ ಬೆಂಬಲ ಬೆಲೆ ಇದ್ದರೂ , ರೈತರಿಗೆ ಮಾತ್ರ ನಾಲ್ಕಾಣೆಯಷ್ಟೂ ಲಾಭ ವಿಲ್ಲಾ . ಎಲ್ಲಾವೂ ಮಧ್ಯವರ್ತಿಗಳ ಪಾಲು . ಅವರುಗಳ ಜೋಳಿಗೆ ಮಾತ್ರ ತುಂಬುತ್ತದೆ . ಇದೆಲ್ಲವನ್ನು ಮನಗೊಂಡರೇ ಕೇಂದ್ರ ಸರ್ಕಾರದ ಈ ಕಾಯ್ದೆ ರೈತರ ಬದುಕಿಗೆ ಬೆಳಕು ಎನ್ನದೇ ವಿಧಿ ಇಲ್ಲ . ಇದಕ್ಕೆಂದೇ ಒಂದಷ್ಟು ಕಾರ್ಪೊರೇಟ್ ಕಂಪನಿಗಳನ್ನು ನೇಮಿಸಿದ್ದೂ ಅವುಗಳು ರೈತರಿಂದ ನೇರ ಖರೀಧಿ ಮಾಡುತ್ತದೆ ಇಲ್ಲಿ ಮಧ್ಯವರ್ತಿಗಳ ಪ್ರವೇಶ ವಿರುವುದಿಲ್ಲ . ಮಾರುಕಟ್ಟೆ ದರವೇ ರೈತರಿಗೆ ಲಭಿಸುತ್ತದೆ,
ಅಗ್ಗದ ರೀತಿಯಲ್ಲಿ ನಮಗೆ ದುಡ್ಡು ಮಾಡಲು ಸಾಧ್ಯವಿಲ್ಲ ಎಂದು ಆಲೋಚಿಸಿ ಇದರಿಂದ ಕುಪಿತ ಗೊಂಡು ಮಧ್ಯವರ್ತಿಗಳು ಒಂದಷ್ಟು ರೈತರನ್ನು ಎತ್ತಿಕಟ್ಟಿ ಹಾಗೂ ನಕಲಿ ರೈತರನ್ನು ಸ್ರಷ್ಟಿಸಿ ಹೋರಾಟಕ್ಕೆ ಇಳಿದವು ಅಷ್ಟೇ . ನಿಜವಾದ ರೈತರು, ಈ ಯೋಜನೆಯಿಂದ ಸಂತಸ ಗೊಂಡಿದ್ದಾರೆ . ಸಾಕಷ್ಟು ಜನ ಸಾಮಾಜಿಕ ಜಾಲ ತಾಣದಲ್ಲಿ ಸಹಾ ಹೇಳಿಕೊಂಡಿದ್ದನ್ನು ಸಹಾ ನಾವು ಕಣ್ಣಾರೆ ಕಾಣುತ್ತಿದ್ದೇವೆ .
ಇನ್ನೂ ,ಕೆಲವೊಂದು ಬುದ್ಧಿ ಜೀವಿಗಳು ,ಕೇಂದ್ರ ಸರ್ಕಾರದ ವಿರೋಧಿಗಳು ಸಹಾ ಧ್ವನಿ ಗೂಡಿಸಿದ್ದಾರೆ ಎಪಿ ಎಂಸಿ ಮುಚ್ಚಿ ಹೋಗುತ್ತದೆ., ಒಂದಷ್ಟು ಕಾಲದವರೆಗೆ ಉತ್ತಮ ಬೆಲೆ ತೆತ್ತು ,ರೈತರಿಂದ ಬೆಳೆ ಪಡೆಯಲಾಗುತ್ತದೆ . ತದನಂತರ ತಮ್ಮ ಮನಸ್ಸಿಗೆ ತಿಳಿದ ರೀತಿಯಲ್ಲಿ ಖರೀಧಿಸಲಾಗುತ್ತದೆ ಇದರಿಂದ ರೈತರಿಗೆ ನಷ್ಟವೇ ಹೊರತು ರೈತರಿಗೆ ಉಳಿಗಾಲವಿಲ್ಲ ವೆಂದೆಲ್ಲಾ ಆರೋಪದ ಮಳೆಯನ್ನು ಸುರಿಸುತ್ತಿವೆ ., ಇದು ಸತ್ಯಕ್ಕೆ ದೂರವಾದರೂ, ಆ ಸಮಯದಲ್ಲಿ ಅಂತಹ ಪರಿಸ್ಥಿತಿ ಉದ್ಬವಿಸಿದ್ದೇ ಯಾದರೇ ರೈತರು ಬೀದಿಗೆ ಇಳಿಯಬಹುದು ಅದನ್ನು ಬಿಟ್ಟು ಪ್ರಸ್ತುತ, ಇದಕ್ಕೆ ಹಿಂದೇಟು ಹಾಕುವುದು ತರವಲ್ಲ ,ಸರಿಯಲ್ಲ . ಈಗಾಗಲೇ ಈಡೀ ಜಗತ್ತೇ ಮೆಚ್ಚುವಂತಹ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಯಾವುದೇ ಯೋಜನೆಯನ್ನು ರೂಪಿಸುವುದಕ್ಕಿಂತ ಮೊದಲು ಅದರ ಒಳಗುಟ್ಟು ಆಳ -ಅಗಲವನ್ನು ಮನಗೊಂಡೇ ರಚಿತ ವಾಗಿಯೇ ಇರುತ್ತದೆ. ಅಷ್ಟು ಸುಲಭಕ್ಕೆ ಮೋದಿ ಪಡೆ ಹಿಂದೆ ತೆಗೆದು ಕೊಳ್ಳುವ ಕಾರ್ಯಕ್ಕೆ ಕೈ ಹಾಕುವುದಿಲ್ಲ . ಈ ಯೋಜನೆ ಫಲ ಕಾಣುವಲ್ಲಿ ಕೋಟಿ ಕೋಟಿ ರೈತರ ಹಾರೈಕೆಯೇ ಶ್ರೀ ರಕ್ಷೆ ಆಗಿರುವುದರಿಂದ ಕಾಯ್ದೆ ಖಂಡಿತವಾಗಿಯೂ ಹಳ್ಳ ಸೇರದು
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)

ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ