ಗುರುವಾರ, ಸೆಪ್ಟೆಂಬರ್ 24, 2020

ಡ್ರಗ್ಸ್ ವಿಚಾರವನ್ನು ಬಹಿರಂಗ ಪಡಿಸಿದ ಇಂದ್ರಜಿತ್, ಸಂಬರಗಿ ಅಭಿನಂದನಾರ್ಹರು !

ಸಿನಿಮಾದಲ್ಲಿ ಕಾಣುತ್ತಿದ್ದ ರೀಲ್ ಕಹಾನಿಯನ್ನು ರಿಯಲ್ ಆಗಿ ಸಿನಿಮಾ ಭಾಂದವರಿಂದಲೇ ನೋಡಬೇಕಾದ ಪರಿಸ್ಥಿತಿ ಈಗ ಬಂದೊದಗಿದೆ .,ವಿಪರ್ಯಾಸದ ಜೊತೆಗೆ ಅಚ್ಚರಿಯನ್ನು ಮೂಡಿಸುತ್ತಿದೆ . ಡ್ರಗ್ಸ್ ಸಪ್ಲೆಯರ್ 'ಅನಿಕಾ' ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ನಂತರ ರಾಜ್ಯದಲ್ಲಿ ಡ್ರಗ್ಸ್ ವಿಚಾರ ಬೆಳಕಿಗೆ ಬರಲು ಪ್ರಾರಂಭವಾಯಿತು . ನಿರ್ದೇಶಕ ನಟ' ಇಂದ್ರಜಿತ್ ಲಂಕೇಶ್' ಹಾಗೂ ಸಾಮಾಜಿಕ ಕಾರ್ಯಕರ್ತ 'ಪ್ರಶಾಂತ್ ಸಂಬರ್ಗಿ' ಮುಖ್ಯವಾಹಿನಿಗೆ ಬಂದು ಈ ವಿಚಾರದ ಬಗ್ಗೆ ಬಹಿರಂಗ ಹೇಳಿಕೆ ಕೊಟ್ಟು ,ನಂತರ ಸಾಕಷ್ಟು ಬೆಳವಣಿಗೆ ಕಂಡು ಬಂತು ,ಬಗೆದಷ್ಟು ಡ್ರಗ್ಸ್ ಜಾಲದ ಅನಾವರಣ ಬಯಲಾಗಲಾರಂಭಿಸಿತು . ಡ್ರಗ್ಸ್ ದಂಧೆ ಎಲ್ಲಾ ಕಡೆಯಲ್ಲೂ ತನ್ನ ಕಬಂಧ ಬಾಹುವನ್ನು ಚಾಚಿದೆ . ಸಾಮಾನ್ಯ ಪಾರ್ಟಿಯಿಂದ ಹಿಡಿದು ಕಾಲೇಜು ಅಂಗಳದವರೆಗೂ ಹರಡಿರುವುದು ಸತ್ಯ ಸಂಗತಿ ! ಸಿನಿಮಾ ಕ್ಷೇತ್ರದಲ್ಲಿ ಬೀಡು ಬಿಟ್ಟರುವುದು ,ಕೆಲವು ನಟ-ನಟಿಯರು ಈ ಮಾಫಿಯಾದಲ್ಲಿ ಮುಳುಗಿರುವುದನ್ನು ಕಂಡರೇ ಮೂಗಿನ ಮೇಲೆ ಬೆರಳು ಇಟ್ಟುಕೊಳ್ಳುವಂತೆ ಮಾಡಿದೆ. ಮೊದಲೇ ಚಿತ್ರರಂಗ ಶುಕ್ರ ದೆಸೆಯಲ್ಲಿದೆ . ೨೦೨೦ ಈ ಕರಾಳ ವರ್ಷ ಅದೆಷ್ಟು ಕಲಾವಿದರುಗಳನ್ನು ಬಲಿ ಪಡೆದು ತೀರಾ ದುಃಖದಲ್ಲಿರುವ ಗಾಂಧೀನಗರಕ್ಕೆ ಈಗ ನಶೆಯ ವಿಚಾರದಲ್ಲಿ ಸಂಪೂರ್ಣ ಕಮರಿ ಹೋಗಿರುವುದು ಸುಳ್ಳಲ್ಲ! ಮಾದಕ ವಸ್ತುವನ್ನು ಸೇವಿಸುವುದು ಅದರಲ್ಲಿ ಪಾಲ್ಗೊಳ್ಳುವುದು ದೊಡ್ಡ ಅಪರಾಧ . ಅದರಲ್ಲೂ ,ಸಿನಿಮಾ ಎಂಬುದು ಪಬ್ಲಿಕ್ ಗೆ ತೀರಾ ಹತ್ತಿರ ಸಂಬಂಧಪಟ್ಟಿರುವ ಕಲಿಕಾ ಮಾಧ್ಯಮ . ಸಾಮಾನ್ಯರೂ ಸಹಾ ಅದರಲ್ಲಿರುವ ವಿಚಾರವನ್ನು ಅರಿತು ನಡೆಯುವವರು. ಸಿನಿಮಾ ಮಂದಿಯನ್ನು ಮೆಚ್ಚಿಕೊಳ್ಳುತ್ತಾರೆ. ನೆಚ್ಚಿ ಕೊಳ್ಳುತ್ತಾರೆ., ಅವರುಗಳ ಉದ್ದುದ್ದಾ ಡೈಲಾಗ್ ನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುತ್ತಾರೆ . ಈ ನಿಟ್ಟಿನಲ್ಲಿ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುವ ಸೆಲೆಬ್ರಟಿಗಳು ಈ ಹಾದಿಗೆ ಇಳಿದರೇ ಎಂಥಾ ದುರ್ದೈವ ? ಸೆಲೆಬ್ರಿಟಿಗಳು ಅದೆಷ್ಟು ಜಾಗೂರಕರಾಗಿದ್ದರೂ ,ಗಾಸಿಪ್ ಅವರ ಬಳಿ ಸುತ್ತುತ್ತಾ ಇರುತ್ತದೆ ಈ ತನ್ಮಧ್ಯೆ ಈ ಕರ್ಮ ಕಾಂಡದಲ್ಲಿ ಭಾಗಿಯಾಗಿರುವವರಿಂದ ಉತ್ತಮ ನಟ -ನಟಿಯರು ಸೇರಿದಂತೆ ಸಂಪೂರ್ಣ ಕಲಾವಿದರುಗಳಿಗೆ ,ಸಿನಿಮಾ ಇಂಡಸ್ಟ್ರಿಗೆ ಕೆಟ್ಟ ಹೆಸರು ಜೊತೆಗೆ ಕಟುವಾಗಿ ಟೀಕಿಸುವ ನಡತೆ ಹುಟ್ಟಿಕೊಳ್ಳುತ್ತದೆ .ಇದು ಎಲ್ಲರಿಗೂ ಗೊತ್ತಿದ್ದರೂ ಸಹಾ ಬೆಳಕಿಗೆ ತರುವಲ್ಲಿ ಹಿಂದೇಟು ಹಾಕುತ್ತಿದ್ದಾರೆ .
ಧೈರ್ಯ -ಸ್ಥೈರ್ಯ ದಿಂದ ತಮಗೆ ಅರಿತ ವಿಚಾರವನ್ನು ಬಹಿರಂಗ ಪಡಿಸುವಲ್ಲಿ ಶಕ್ತರಾದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಮತ್ತು ಸಮಾಜ ಸೇವಕ ಪ್ರಶಾಂತ್ ಸಂಬರಗಿ ಅಭಿನಂದನಾರ್ಹರು. ಫಲ ಶ್ರುತಿಯಂಬತೆ ಇಬ್ಬರು ನಟಿಯರು ಜೈಲು ಪಾಲಾಗಿದ್ದಾರೆ . ಇನ್ನಷ್ಟು ಜನರ ವಿಚಾರಣೆ ಸಿಸಿಬಿ ಯಿಂದ ನಡೆಯುತ್ತಿದೆ . ಉಪ್ಪು ತಿಂದವರು ನೀರು ಕುಡಿಯಲೇ ಬೇಕು . ಇನ್ನು ಊಟಕ್ಕಿಲ್ಲದ ಉಪ್ಪಿಕಾಯಿ ಯಂತಿರುವ ಚಲನಚಿತ್ರ ವಾಣಿಜ್ಯ ಮಂಡಳಿ ಇದನ್ನೆಲ್ಲವನ್ನೂ ಹತೋಟಿಗೆ ತರುವಲ್ಲಿ ಶ್ರಮಿಸಬೇಕು ಅದನ್ನು ಬಿಟ್ಟು ತಮಗೆ ಸಂಬಂದ ವಿಲ್ಲಾ ಎಂದು ಕಣ್ಣಿದ್ದೂ ಕುರುಡರಂತೆ ವರ್ತಿಸುವ ರೀತಿ ಸರಿ ಅಲ್ಲ . ಆರೋಪಿಗಳ ಪರ ನಿಲ್ಲುವವಂತೆ ಭಾಸವಾಗುವ ರೀತಿಯ ನಡವಳಿಕೆ ಮೇಲ್ನೋಟಕ್ಕೆ ಮೊನ್ನೆಯ ದಿನ ಅರಿವಿಗೆ ಬಂದಿತ್ತು . ಪ್ರಶಾಂತ್ ಸಂಬರಗಿ ಆರೋಪಕ್ಕೆ ಅವರ ವಿರುದ್ಧ ತಿರುಗಿ ಬಿದ್ದು," ಅವರಿಗೆ ಸಿನಿಮಾ ವಿಚಾರದ ಬಗ್ಗೆ ಮಾತಾಡುವುದಕ್ಕೆ ಅವರು ಇಂಡಸ್ಟ್ರಿಗೆ ಸಂಬಂಧ ಪಟ್ಟವರಲ್ಲ . ಅದೇನೇ ಇದ್ದರೂ ವಾಣಿಜ್ಯ ಮಂಡಳಿಗೆ ಬಂದು ಕಂಪ್ಲೇಟ್ ಕೊಡೆಬೇಕಿತ್ತು" ಎಂದೆಲ್ಲಾ ಸ್ಟೇಟ್ಮೆಂಟ್ ಕೊಡುವ , ವಾಣಿಜ್ಯ ಮಂಡಳಿಗೆ ಎಲ್ಲವೂ ಅರಿವಿದ್ದು ಆರೋಪಿಗಳಿಗೆ ಸಪೋರ್ಟ್ ಮಾಡುತ್ತಿದೆಯೋ ಎನ್ನುವ ಅನುಮಾನ ಹುಟ್ಟುತ್ತಿದೆ. ಏನೇ ಇರಲಿ ಸೆಲೆಬ್ರಟಿಗಳನ್ನ ಮುಂದಿಟ್ಟು ಸರಾಗವಾಗಿ ಈ ದಂಧೆಯನ್ನು ನೆಡೆಸುವ ಇದರ ಹಿಂದಿನ ಬ್ರಹತ್ ಕುಳಗಳ ಜಾಡು ಹಿಡಿಯಬೇಕು .ಮಾದಕ ವಸ್ತುಗಳನ್ನು ಕಡಿವಾಣ ಹಾಕಲು ಯುವ ಪೀಳಿಗೆಗಳ ಹಿತದ್ರಷ್ಠಿಯಿಂದ ಪಾರದರ್ಶಕವಾಗಿ ತನಿಖೆಗೆ ಎಲ್ಲರೂ ಸಹಕರಿಸ ಬೇಕಾಗಿದೆ . ಪಟ್ಟಭದ್ರ ಹಿತಾಸಕ್ತಿಗಳಿಗೆ ತನಿಖಾಧಿಕಾರಿಗಳು ತಲೆ ಕೆಡಿಸಿ ಕೊಳ್ಳದೇ ಕಾರ್ಯಾನುಮಖವಾಗವ ಸ್ವಾತಂತ್ರ ಶಕ್ತಿಯನ್ನು ಸಂಭಂದ ಪಟ್ಟ ಇಲಾಖೆ ನೀಡ ಬೇಕಾಗಿದೆ. ಇಲಾಖಾಧಿಕಾರಿಗಳ ಮೇಲೆ ಒತ್ತಡ ತರುವಂತ ತನಿಖೆಯ ಹಾದಿ ತಪ್ಪಿಸುವ ಕೆಲಸ ವಾಗಬಾರದು. ಹಾಗಾದರೆ ಮಾತ್ರ ದಂಧೆಯನ್ನು ಮಟ್ಟ ಹಾಕಲು ಸಾಧ್ಯವಾಗ ಬಹುದು . ಆರೋಪ ಕೇಳಿಬಂದಿರುವಂತ ನಟ -ನಟಿಯರು ,ಕಲಾವಿದರುಗಳು , ರಾಜಕಾರಣಿಗಳು, ರಾಜಕಾರಣಿಗಳ ಮಕ್ಕಳು, ಉದ್ಯಮಿಗಳನ್ನ ವಿಚಾರಣೆಗೆ ಒಳಪಡಿಸಿ .,ಕಾನೂನಾತ್ಮಕವಾಗಿ ಸೂಕ್ತ ಶಿಕ್ಷೆಯಾಗಲಿ . ಡ್ರಗ್ಸ್ ಪೆಡ್ಲರ್ ಗಳ ಜೊತೆಗೆ ಗುರುತಿಸಿ ಕೊಂಡವರು ,ನಿರಂತರ ಪಾರ್ಟಿಯಲ್ಲಿ ಬಾಗಿಯಾದವರ ಬಂಧನವಾದರೇ ,ಕದ್ದು ಮುಚ್ಚಿ ನಡೆಯುತ್ತಿರುವ ಈ ವ್ಯವಹಾರ, ವೈವಾಟುದಾರರಿಗೆ ನಡುಕ ಉಂಟಾಗುವುದರಲ್ಲಿ ಸಂದೇಹ ವಿಲ್ಲಾ ಹಾಗೂ ಪೂರ್ಣ ವಿದಾಯ ಕಾಣುವುದರಲ್ಲಿ ಯಾವುದೇ ಅನುಮಾನವಿಲ್ಲಾ !

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ