ಶುಕ್ರವಾರ, ಆಗಸ್ಟ್ 21, 2020

ಕಣ್ತುಂಬಿಸಿ ಕೊಳ್ಳುವಂತಿಲ್ಲ ಈ ಬಾರಿಯ ಚೌತಿ ಹಬ್ಬವನ್ನಾ !

ಗಣೇಶ ಚತುರ್ಥಿ ಹಬ್ಬ ಮತ್ತೆ ಬಂದಿದೆ ..ಚೌತಿ ಹಬ್ಬವೆಂದ ಕೂಡಲೇ ಬಾರಿ ಗೌಜು . ಕುಟುಂಬದವರ ಜೊತೆ ಊರವರ ಜೊತೆಗೆ ರಂಗು -ರಂಗಾಗಿ ಆಚರಿಸಬಲ್ಲ ಆಕರ್ಷಣೀಯ ಹಬ್ಬಗಳ ಪೈಕಿ ಮೇಲ್ಪಂಕ್ತಿಯಲ್ಲಿ ಕಂಡು ಬರುತ್ತದೆ ಗೌರಿ -ಗಣೇಶ ಹಬ್ಬ. ಮನೆಯಲ್ಲೇ ಮೂರ್ತಿ ಇಟ್ಟು ಸಾಂಪ್ರದಾಯಿಕ ಪೂಜೆ ಮಾಡಿ ವಿಸರ್ಜನೆ ಮಾಡುವ ಪದ್ಧತಿ ಒಂದೆಡೆಯಾದರೆ ಇನ್ನು ಸಾರ್ವಜನಿಕ ಗಣೇಶೋತ್ಸವ ಮತ್ತೊಂದು ಕಡೆ ಜಗಮಗಿಸುತ್ತದೆ . ಮಹಾರಾಷ್ತ್ರ ಸೇರಿದಂತೆ ಅತೀ ಹೆಚ್ಚಾಗಿ ದಕ್ಷಿಣ ಭಾರತದ ಗಲ್ಲಿ -ಗಲ್ಲಿ ಗಳಲ್ಲಿ ಚೌತಿ ಗಣೇಶ ಮನೆ ಮಾತಾಗುತ್ತಾನೆ . ಅದೆಷ್ಟು ಸಡಗರ ಅದೆಂತಾ ಅದ್ದೂರಿತನ ಎಂದು ವರ್ಣಿಸುವುದಕ್ಕೆ ಪದಗಳೇ ಸಿಗದು. ಅಷ್ಟೊಂದು ಆಡಂಬರ ಮೇಳೈಸುತ್ತದೆ .ಊರು ಬಿಟ್ಟು ಪರ ಊರ ಸೇರಿದವರು ಉದ್ಯೋಗಸ್ತರು ,ಶಿಕ್ಷಣ ಪಡೆಯುತ್ತಿರುವವರು ಈ ಹಬ್ಬಕ್ಕಾಗಿ ತಮ್ಮೂರಿಗೆ ಬಾರದೇ ಇರಲಾರರು. ಇಷ್ಟೊಂದು ಆಕರ್ಷಣೆ ಈ ಗೌರಿ ಗಣೇಶ ಹಬ್ಬಕ್ಕೆ ಇದೆ. ಕರೋನ ಈ ಬಾರಿ ಮಾತ್ರ ಕಂಟಕ ತಂದು ಬಿಟ್ಟಿದೆ. ಹಾಗಂತ ಈ ಚೈನಾ ವೈರಸ್ ಪ್ರತಿಯೊಂದು ಹಬ್ಬ ಹರಿದಿನ ಶುಭ ಕಾರ್ಯಕ್ಕೆ ಕಡಿವಾಣ ತಂದಿದ್ದು ನಿಜವೇ ಯಾದರೂ, ಗಣೇಶನ ಹಬ್ಬದವರೆಗಾದರೂ ಓಡಿ ಹೋಗಬಹುದುದೆಂಬಂತಿದ್ದ ನಿರೀಕ್ಷೆ ಹುಸಿಯಾಗಿದೆ.
ಒಂದು ದಿನದಿಂದ ಹಿಡಿದು ಮೂರು ದಿನ, ಹದಿನೈದು ದಿನ ,ತಿಂಗಳು ಗಟ್ಟಲೇವರೆಗೂ ತಾತ್ಕಾಲಿಕ ಪೆಂಡಾಲ್ ಗಳಲ್ಲಿ ಗಣೇಶನ ವಿಗ್ರಹವನ್ನು ವಿಟ್ಟು ಹಗಲು- ಇರುಳು ಎನ್ನದೇ ಧಾರ್ಮಿಕ ,ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಮನೆಯಲ್ಲೂ ಅಷ್ಟೇ ಸಂಭ್ರಮದ ವಾತಾವರಣ ಸ್ರಷ್ಟಿಯಾಗುತ್ತದೆ. ಸಾರ್ವಜನಿಕ ಗಣೇಶೋತ್ಸವದಲ್ಲಿ ಮುಸ್ಸಂಜೆ ಯಿಂದ ಮಧ್ಯರಾತ್ರಿವರೆಗೆ ಕೆಲವೆಡೆ ಮುಂಜಾನೆ ತನಕವೂ ನಾಟಕ ,ನ್ರತ್ಯ, ರಸಮಂಜರಿ ಕಾರ್ಯಕ್ರಮಗಳು ಮನರಂಜಿಸುತ್ತದೆ . ಒಂದೊಂದು ಊರಿನಲ್ಲಿ ಕಡಿಮೆಯೆಂದರೂ ೨-೩ ಸಾರ್ವಜನಿಕ ಗಣೇಶೋತ್ಸವ ನಡೆಯುತ್ತದೆ ಊರಿಗೆ ಊರೇ ಹಬ್ಬದ ಸಂಭ್ರಮ ಸಡಗರದಲ್ಲಿ ತೇಲಿ ಹೋಗುತ್ತದೆ.ಮದುವಣ ಗಿತ್ತಿಯಂತೆ ಊರು ಶ್ರ೦ಗಾರ ಗೊಳ್ಳುತ್ತದೆ .ಬಗೆ ಬಗೆಯ ಗಣೇಶನ ವಿಗ್ರಹ :ಚೌತಿಯ ಗಣೇಶ ಆಸ್ತಿಕ ಮತ್ತು ನಾಸ್ತಿಕನಾಗಿ ಕಂಗೊಳಿಸುತ್ತಾನೆ. ಧಾರ್ಮಿಕ ಶ್ರದ್ಧೆಯ ಜೊತೆಗೆ ಮೋನೋರಂಜನಾತ್ಮಕವಾಗಿಯೂ ಸೆಳೆಯುತ್ತಾನೆ ಚೌತಿಯ ಹಬ್ಬದಂದು ಪುಟಾಣಿ ಗಣೇಶ ನಿಂದ ಹಿಡಿದು ಆಳೆತ್ತರದ ಗಣೇಶ ಕಾಣಸಿಗುತ್ತಾನೆ . ಇನ್ನು ಮುಂಬಾಯಿಯಂತ ಮಹಾನಗರದಲ್ಲಿ ಕಟ್ಟಡ ಗಾತ್ರದ ಗಣೇಶ ವಿಗ್ರಹ ವನ್ನಿಟ್ಟು ಪೂಜಿಸಲಾಗುತ್ತದೆ . ಇನ್ನೊಂದು ವಿಶೇಷವೆಂದರೆ ಆಯಾಯ ಟ್ರೆಂಡ್ ಗೆ ಅನುಗುಣವಾಗಿ ವೈರಲ್ ವ್ಯಕ್ತಿಯನ್ನು ಹೋಲುವಂತ ಗಣೇಶನ ವಿಗ್ರಹವನ್ನು ರಚಿಸುತ್ತಾರೆ ವಿಗ್ರಹ ರಚನಾಕಾರರು . ಉದಾಹರಣೆಗೆ ನರೇಂದ್ರ ಮೋದಿ ,ಕ್ರಿಕೆಟ್ ರುಗಳು, ಸೆಲೆಬ್ರಿಟಿಗಳ ಒಳಗೊಂಡ೦ತೆ ಚಿತ್ರ- ವಿಚಿತ್ರವಾಗಿ ಗಣೇಶನ ರೂಪ, ಆಕಾರ ,ಸ್ರಷ್ಟಿಯಾಗುತ್ತದೆ. ಇದಕ್ಕೆ ಅಷ್ಟೇ ಬೇಡಿಕೆಯೂ ಇದೆ ಬೇಡಿಕೆದಾರರ ಅಭಿರುಚಿ ಬಯಕೆ ಮೇರೆಗೆ ರಚಿತ ಗೊಳ್ಳುತ್ತದೆ ಎನ್ನುವ ಅಭಿಪ್ರಾಯ ರಚನಕಾರರ ವಲಯದ್ದು . ಒಟ್ಟಾರೆ ಇಲ್ಲಿ ಗಣೇಶ ಭಾವ - ಭಕ್ತಿಗೆ ಮಾತ್ರವಲ್ಲದೇ ಮನೋರಂಜನಾ ವಸ್ತು ಕೂಡಾ ಆಗುವುದು ಸುಳ್ಳಲ್ಲ . ಇದಕ್ಕೆ ಹಲವರ ಆಕ್ಷೇಪಗಳಿದ್ದರೂ,ಇದುವರೆಗೂ ರಚನೆಯಲ್ಲಿ ಒಂದಿನಿತು ಬದಲಾವಣೆ ಕಂಡಿಲ್ಲ.
ಮೆರವಣಿಗೆ :ಇನ್ನೊಂದು ಆಕರ್ಷಣೆ ಎಂದರೆ ಅದು ವಿಸರ್ಜನಾ ಮೆರವಣಿಗೆ . ಅದ್ಭುತ ಶೋಭಾಯಾತ್ರೆಯಲ್ಲಿ ಕಿ.ಮೀ. ಗೂ ಅಧಿಕ ದೊರದವರೆಗೆ ಜನಸಂಧಣಿ . ನಾಸಿಕ್ ಬ್ಯಾಂಡ್ ,ಚಂಡೆ ,ಟ್ಯಾಬ್ಲೋ ,ಪಟಾಕಿ ಪ್ರತಾಪ ಸೇರಿದಂತೆ ಇನ್ನಿತರ ಬಗೆ- ಬಗೆಯ ವೇಷ ಧಾರಿಗಳು ಮನಸೆಳೆಯುತ್ತಾರೆ. ಎಲ್ಲಾಕ್ಕಿಂತ ಹೆಚ್ಚಾಗಿ ಮೆರವಣಿಗೆಯಲ್ಲಿ ಸಾಗುವ ಪ್ರತಿಯೊಬ್ಬರ ಹೆಜ್ಜೆ ಬದಲಾವಣೆ ಗೊಳ್ಳುತ್ತದೆ. ತಮಗೆ ಅರಿವಿಲ್ಲದಂತೆ ಕಾಲು ಕುಣಿತಕ್ಕೆ ಒಗ್ಗಿ ಕೊಳ್ಳುತ್ತದೆ. ಇಂಥ ಕ್ಷಣಕ್ಕಾಗಿ ಜಾತಕಪಕ್ಷಿ ಯಂತಿರುವ ನಶೆ ಏರಿಸಿ ನಾಚುವ ವರ್ಗವನ್ನು ,ಡಿಜೆ ಸೌಂಡ್ ,ಕ್ಯಾಬರೇ ಸಾಂಗ್ ನಮಗೆ ಹಾಗೂ ವೀಕ್ಷಕರಿಗೆ ಖುಷಿ ಎಂಟರ್ಟೈನ್ಮೆಂಟ್ ಸಿಕ್ಕರೇ ಇತ್ತ ಗಣೇಶ ಮರುಗದೇ ಇರಲಾರನು .!! ವಿಸರ್ಜನೆ :ಕೊನೆಯ ವಿಚಾರಕ್ಕೆ ಬಂದರೆ ,ಗಣೇಶನ ಉತ್ಸವ ವಿಗ್ರಹವಾದ ಮಣ್ಣಿನ ಮೂರ್ತಿಯನ್ನು ವಿಸರ್ಜನೆ ಮಾಡಲೇ ಬೇಕಾಗುತ್ತದೆ ಬಾವಿ, ಕೆರೆ, ನದಿಯಲ್ಲಿ ವಿಧಿ ವಿಧಾನಗಳಂತೆ ಪೂಜಾ ಕೈಂಕರ್ಯ ನಂತರ ವಿಸರ್ಜನೆ ಮಾಡುವುದು ರೂಢಿ. ಗ್ರಾಮೀಣ ಪ್ರದೇಶಗಳಲ್ಲಿ ಬಾವಿ ,ಕೆರೆ, ನದಿಗಳಿಗೆ ಬರಗಾಲವಿಲ್ಲ ಆದರೆ ಪಟ್ಟಣ ಪ್ರದೇಶಗಳಲ್ಲಿ ಗಣೇಶನನ್ನು ನೀರಿನಲ್ಲಿ ತೇಲಿಸುವುದು ಕಷ್ಟದ ಕೆಲಸ . ಅಲ್ಲಿ -ಇಲ್ಲಿ ,ಆಚೆ -ಈಚೆ ಹೊತ್ತಲ್ಲದ ಹೊತ್ತಿನ ಗತ್ತಿನಲ್ಲಿ ತಿರುಗಿಸಿ , ಗಣೇಶ ಅರ್ಧ ಜೀವ ಕೆಳೆದು ಕೊಂಡು ಕೊನೆಗೆ ನೀರಿನಲ್ಲಿ ಮುಳುಗುತ್ತಾನೆ . ಚೌತಿ ರೂವಾರಿ ಊರಾದ ಮುಂಬೈಗೆ ಮಾತ್ರ ಸಮುದ್ರ ಸಾಕಾಗುವುದಿಲ್ಲ ಆಳೆತ್ತರದ ಗಣೇಶ ಮೂರ್ತಿ ವಿಸರ್ಜನೆ ಗೊಂಡರೂ, ಮರುದಿನ ಪತ್ರಿಕೆಯಲ್ಲಿ ಗಣೇಶನ ಮೂರ್ತಿಯ ಚಿತ್ರಗಳನ್ನೂ ಕಂಡರೆ ಮನಸ್ಸು ಮರುಗುತ್ತದೆ ಅರ್ಧಕರ್ಧ ತುಂಡರಿಸಿದ ಮೂರ್ತಿಗಳು ಸಮುದ್ರ ದಡದಲ್ಲಿ ಕಾಣ ಸಿಗುತ್ತದೆ. ಸಾಕಷ್ಟು ದಿನಗಳ ತನಕ ಕಾಪಾಡಲು ಮೂರ್ತಿ ರಚನೆಯಲ್ಲಿ ಜೇಡಿ ಮಣ್ಣಿನ ಜೊತೆ ಒಂದಷ್ಟು ರಾಸಾಯನಿಕ ವಸ್ತು ಹಾಗೂ ಪೈಂಟ್ ಗಳ ಬೆರೆಕೆಯಲ್ಲಿ ರೂಪುಗೊಳಿಸುವುದರಿಂದ ನೀರಿನಲ್ಲಿ ಕರಗುವುದು ತುಸು ಕಷ್ಟಕರವಾದರೇ , ಇನ್ನೊಂದೆಡೆ ನೀರು ಕಲುಷಿತ ಗೊಳುತ್ತದೆ., ಮಾಲಿನ್ಯ ಭರಿತ ನೀರಿನಲ್ಲಿ ಸಮುದ್ರ ಸಸ್ತನಿ ಗಳಿಗೆ ಮಾರಕವಾಗುವುದರ ಜೊತೆಗೆ ಅದನ್ನು ಸೇವಿಸುವ ಮನುಷ್ಯನಿಗೂ ಇಲ್ಲ ಸಲ್ಲದ ಖಾಯಿಲೆಗಳು ತಗುಲುವುದರಲ್ಲಿ ಎರಡು ಮಾತಿಲ್ಲ. ಚೌತಿ ಗಣೇಶ ಇದೆನ್ನೆಲ್ಲಾವನ್ನೂ ಅರಗಿಸಿ ಕೊಳ್ಳಲಾರನಾದರೂ ,ಅನುಭವಿಸಲೇ ಬೇಕು ವರ್ಷಕ್ಕೆ ಒಂದು ಬಾರಿ . ! ಈ ವರ್ಷ ಗಣೇಶನ ನೆಮ್ಮದಿಗೆ ಯಾವುದೇ ಭಂಗ ವಿಲ್ಲಾ .! ಡಿಜೆ ಸೌಂಡ್ ಇಲ್ಲ ,ಕ್ಯಾಬರೆ ನರ್ತನ ಇಲ್ಲ ದೇಹ ಛಿದ್ರ ಗೊಳ್ಳುವ ನೋಟವಿಲ್ಲ . ಎಲ್ಲಕ್ಕೂ ಕರೋನ ಕಡಿವಾಣ ಹಾಕಿದೆ . ಕಾದು ಕುಳಿತು ಎಂಜಾಯ್ ಮಾಡುವ ನಮ್ಮಂತ ಮನಸ್ಸುಗಳಿಗೆ ಮಾತ್ರ ಬೇಸರ ತಂದಿದೆ. ಕರೋನಕ್ಕಿಷ್ಟು ಹಿಡಿ ಶಾಪ ಹಾಕಿ ಮನೆಯಲ್ಲೇ ಕಾಲ ಕೆಳೆಯಬೇಕಾಗಿದೆ .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ