ಮಂಗಳವಾರ, ಜೂನ್ 23, 2020
ನಿಜವಾದ ಸ್ವಾರ್ಥಿಗಳು ಯಾರು ?
“ತಂದೆ ತಾಯಿ ತೀರಿಕೊಂಡರೂ, ಊರಿಗೆ ಬಾರದ ಇವರುಗಳು ತಮ್ಮ ಜೀವ ಭಯದಿಂದ ತಮ್ಮ ತಮ್ಮ ಮನೆಗಳಿಗೆ ದೌಡಾಯಿಸುತ್ತಿದ್ದಾರೆ. ಇವರೆಲ್ಲಾ ಸ್ವಾರ್ಥಿಗಳು .ಸ್ವಾರ್ಥಕ್ಕಾಗಿ ಜೀವಿಸುತ್ತಾರೆ” ಎಂದು ಸೋಶಿಯಲ್ ನೆಟ್ವರ್ಕ್ ಗಳ ಮೂಲಕ ಅನಿವಾಸಿಗಳಿಗೆ ದಿಕ್ಕಾರ ಕೂಗುವವರಲ್ಲಿ ಎಷ್ಟು ಸ್ವಾರ್ಥ ತುಂಬಿದೆ ನೋಡಿ ಇವರುಗಳು ಹೊರಗಿನಿಂದ ವೈರಸ್ ಹೊತ್ತು ತಂದರೇ ನಮಗೆಲ್ಲಿ ಹರಡುತ್ತದೋ ಎಂಬ ಹೆದರಿಕೆ ,ಸ್ವಾರ್ಥ ಮನೋಭಾವನೆಯಿಂದ ಹೀಗೆಲ್ಲಾ ಉಸುರುತ್ತಾರೆ. ಹೊರಗಿನವರ ಆರ್ಥಿಕ ಸಹಾಯ,ಅಲ್ಲಿನ ವಸ್ತುಗಳಿಗೆ ಹಾತೊರೆಯುವರಲ್ಲಿಯೇ ಇದೆ ಸ್ವಾರ್ಥಪರತೆ. ಕರೋನ ಎಂಬ ಮಹಾಮಾರಿಯಿಂದ ಈಡೀ ಜಗತ್ತು ಹೈರಾಣಾಗಿ ಹೋಗಿದೆ . ಈ ಸಂದರ್ಭದಲ್ಲಿ ಊರು ಬಿಟ್ಟು ಪರ ರಾಜ್ಯ, ಪರ ದೇಶಕ್ಕೆ ದುಡಿಯಲು ಹೋದ ಹಲವರ ಸ್ಥಿತಿಯೂ ಕೂಡಾ ಚಿಂತಾ ಜನಕವಾಗಿದೆ . ಉದ್ಯೋಗವಿಲ್ಲ , ಸರಿಯಾದ ಆಹಾರವಿಲ್ಲ ,ರೂಮ್ ಬಾಡಿಗೆ ನೀಡಲು ಕೈಯಲ್ಲಿ ಕಾಸಿಲ್ಲ ಈ ಕಾರಣ ದಿ೦ದ ಕಷ್ಟಪಟ್ಟು ತಮ್ಮ ಊರಿಗೆ ಮರಳಿ ಬರುವವರಿಗೆ ಬಹಿಷ್ಕಾರದ ಕೂಗು ಎದುರಾಗಿದೆ . ಚೀನಾದಲ್ಲಿ ಹುಟ್ಟಿದ ಕರೋನ ಈಗ ಜಗತ್ತಿನಾದ್ಯಂತ ಕೇಕೆ ಹಾಕುತ್ತಿದೆ ಅಂದರೆ ಹೊರದೇಶದಲ್ಲಿರುವವರು ಅಲ್ಲಿಂದ ಪುಕ್ಕಟ್ಟೆಯಾಗಿ ತಂದು ಕಾಯಿಲೆಯನ್ನು ಇಲ್ಲಿ ಹಬ್ಬಿಸುತ್ತಾರೆ .ಅವರುಗಳು ಬರುವುದು ಬೇಡ ಅವರುಗಳಿಂದಲೇ ಈ ಪರಿಯ ರೋಗ ವೃದ್ಧಿ ಗೊಳ್ಳುತ್ತಿದೆ ಎಂದು ಹೇಳುವವರ ಮಾತಿನಲ್ಲಿ ಕೊಂಚ ಅರ್ಥವಿದೆಯಾದರೂ , ಅನಿವಾಸಿಗಳ ತಪ್ಪಾದರೂ ಏನು ?ಅವರುಗಳಿಗೂ ಸಹಾ ಜೀವ ಭಯವಿಲ್ಲವೇ ?ಬದುಕ ಬೇಕೆಂಬ ಬಯಕೆ ಇಲ್ಲವೇ ? ಬಯಸಿ ಬಯಸಿ ಯಾರು ಕೂಡ ರೋಗಗಕ್ಕೆ ಬಲಿಯಾಗುದಿಲ್ಲ ,ಅದರಲ್ಲೂ ಈ ಕರೋನ ದಿಂದ ಎಷ್ಟು ಜಾಗ್ರತಿವಹಿಸಿದರೂ ಅದು ನಮ್ಮನ್ನು ಆವರಿಸಿ ಬಿಡುತ್ತದೆ . ಹಾಗಂತ ಎಲ್ಲರಲ್ಲೂ ಈ ಖಾಯಿಲೆ ಇರುತ್ತದೆ ಅಂತ ಅಲ್ಲಾ ಕೆಲವರಲ್ಲಿ ಕಂಡೂ ಬಂದರೂ ,ಹಲವರಲ್ಲಿ ನೆಗೆಟಿವ್ ಕೇಸೇ ತುಂಬಿ ಇರುತ್ತವೆ . ಅಂದ ಮಾತ್ರಕ್ಕೆ ಅವರುಗಳು ಬರುವುದು ಸರಿಯಲ್ಲ ಎಂಬುದರಲ್ಲಿ ಅರ್ಥವಿಲ್ಲಾ . ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕುವುದು ತರವಲ್ಲ . ಅದೇಷ್ಟು ಕಷ್ಟಪಟ್ಟು ವಿಧ್ಯಾಭ್ಯಾಸ ಮುಗಿಸಿ ತಮ್ಮ ಸ್ವಂತ ಊರಿನಲ್ಲಿ ಉದ್ಯೋಗ ಸಿಗದೇ ಇದ್ದಾಗ, ನೆಲೆಗೆ ಬೆಲೆಗೆ ಸಿಗದೇ ಇದ್ದಾಗ , ಅನಿವಾರ್ಯವಾಗಿ ಹೊರದೇಶ ,ಹೊರರಾಜ್ಯವನ್ನು ಅವಲಂಭಿಸಬೇಕಾಗಿ ಬರುತ್ತದೆ. ತಮ್ಮ ಅವಶ್ಯಕ್ತತೆಗೆ ಇಲ್ಲಿ ಸಿಗುವ ಹಣ ತ್ರಪ್ತಿ ದಾಯಕವಾಗಿಲ್ಲವಾದ್ದರಿಂದ . ತಮ್ಮ ಆರ್ಥಿಕ ಸಮಸ್ಯೆಯನ್ನು ಸರಿದೂಗಿಸಲು ಕಂಡರಿಯದ ಪ್ರದೇಶಕ್ಕೆ ,ಅಲ್ಲಿನ ವಾತಾವರಣ, ಜನ ಸಂಪರ್ಕ ಯೋಗ್ಯವಲ್ಲದಿದ್ದರೂ ,ಸಹಾ ಮನೆಯವರನ್ನೇಲ್ಲಾ ಬಿಟ್ಟು ವರ್ಷಗಟ್ಟಲೇ ದೂರವಿದ್ದೂ , ಹಗಲು ರಾತ್ರಿ ಯೆನ್ನದೇ ,ತಮ್ಮ ಕಷ್ಟವನ್ನೇಲ್ಲಾ ಇಷ್ಟವನ್ನಾಗಿಸಿ ಸುಖ ಜೀವನ ನಡೆಸುತ್ತಾರೆ . ತೀರಿ ಹೋದ ತಂದೆ-ತಾಯಿಯನ್ನೋ ಸಂಬಂದಿಕರನ್ನು ನೋಡಲು ಬಾರದವರು ಈ ಕರೋನಾ ದಿಂದ ಊರಿಗೆ ಮರಳುತ್ತಾರೆ ಎಂಬ ಮಾತು ಎಲ್ಲೋ ಸತ್ಯದ ತಲೆ ಮೇಲೆ ಹೊಡೆಯುತ್ತಿದ್ದರೂ, ಎಲ್ಲಾರಿಗೂ ಒಪ್ಪಿಗೆ ಯಾಗುವಂತ್ತದ್ದಲ್ಲ .ಒಂದೋ,ಎರಡು ಕೇಸುಗಳು ಅಲ್ಲಿನ ಪರಿಸ್ಥಿತಿ ಗೆ ಅನುಗುಣವಾಗಿ ಹೀಗೆ ಮಿಸ್ಸಿಂಗ್ ಆಗಬಹುದು.. ಹಲವಾರು ಕಡೆಯಲ್ಲಿ ಅಗ್ರಿಮೆಂಟ್ ,ಜವಬ್ದಾರಿಯುತ ಕೆಲಸ,ರಜೆ ಸಿಗದೇ ಇರುವುದು ಹೀಗೆ ಮುಂತಾದ ಕಾರಣಗಳಿಂದ ಎಮರ್ಜೆನ್ಸಿಗೆ ಬಾರದೇ ಇರುವುದು ಎಲ್ಲೋ ಬೆರಳು ಎಣಿಕೆ ಯಷ್ಟು ನಡೆಯುತ್ತದೆ ಅಷ್ಟೇ! ಊರಿಗೆ ಬರಬೇಡಿ ಎಂದು ಹೇಳುವವರು ಮುಂದೆ ಯಾವುದಾದರೂ ಧಾರ್ಮಿಕ .ಸಾಂಸ್ಕ್ರತಿಕ, ಕಾರ್ಯಕ್ರಮ ವಿದ್ದಾಗ ,ಫೋನ್ ಹಾಯಿಸಿ ಮೆಸೆಜ್ ಮಾಡಿ, ಎಷ್ಟೇಷ್ಟೋ ಬೇಡಿಕೆ ಇಡುತ್ತಾರೆ .ಅವರಿಂದ ಲಾಭ ಬೇಕು., ಆದರೆ ಕಷ್ಟ ಮಾತ್ರ ಬೇಡ. ನಿಜವಾದ ಸ್ವಾರ್ಥಿಗಳು ಇವರುಗಳೇ. ಗಣೇಶೋತ್ಸವ ,ಶಾರದೋತ್ಸವ,ಕೋಲ,ನೇಮ, ನಾಗಮಂಡಲ,ದೇವಸ್ಠಾನದ ಧಾರ್ಮಿಕ ಉತ್ಸವ ಇನ್ನಿತರ ಯಾವುದೇ ಧಾರ್ಮಿಕ ,ಸಾಂಸ್ಕೃತಿಕ ,ಸಾಮಾಜಿಕ ಕಾರ್ಯಕ್ರಮಕ್ಕೆ ಆರ್ಥಿಕ ಪರಿಸ್ತಿತಿ ನೆಟ್ಟಗೆ ಇದ್ದರೇ ಅದು ನಾವು ಎಣಿಸಿದಂತೆ ನಿಗದಿತ ಫಲಿತಾಂಶ ನೀಡಲು ಸಾಧ್ಯ. ಸಮೀಕ್ಷೆ ಬಿದಿಗಿರಲಿ .,ವಾಸ್ತವಾರ್ಹವಾಗಿಯೂ ಅನಿವಾಸಿಗಳದ್ದೇ ಹೆಚ್ಚಿನ ಹಣ ಸಂಗ್ರಹವಾಗುವುದು. ಗಲ್ಪ್ ರಾಷ್ಟ್ರ ,ಮಹಾರಾಷ್ಟ್ರ ,ಮತ್ತಿತ್ತರ ಪ್ರದೇಶದಲ್ಲಿರುವವರೇ ಸಹಾಯ ಮಾಡುವುದು ತಾವು ಆ ಕಾರ್ಯಕ್ರಮ ಹಾಜರಾಗದೇ ಇದ್ದರೂ, ನಮ್ಮ ಊರು ನಮ್ಮ ದೇವಸ್ಥಾನ ನಮ್ಮ ಕಾರ್ಯಕ್ರಮ ಎಂದು ಎಣಿಸಿ , ಹೆಚ್ಚಿನ ಪ್ರಮಾಣದಲ್ಲೇ ಸಹಾಯ ಹಸ್ತ ನೀಡುತ್ತಾರೆ ಆಗ ಅವರ ಸಹಾಯ ಬೇಕಿತ್ತು. ಈಗ ಪಾಪ ಅಲ್ಲಿ ಕೆಲಸ ಇಲ್ಲ ಆಹಾರ ಇಲ್ಲದೇ ಒದ್ದಾಡುತ್ತಿರುವವರು ಊರಿಗೆ ಬಂದರೆ ಅಪಸ್ವಾರ !.ನಿಜಕ್ಕೂ ಬೇಸರದ ವಿಚಾರ ಅಷ್ಟಕ್ಕೂ ಅವರು ಬರುವುದು ಸ್ವಂತ ಊರಿಗೆ .,ಅವರ ಮನೆಗೆ ಅಲ್ಲವೇ ?ಅದನ್ನು ತಡೆಯುವ ಅಥವಾ ಅಲ್ಲ ಗೆಳೆಯುವ ಹಕ್ಕೂ ಯಾರಿಗೂ ಇಲ್ಲ .
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)

ನಿಜವಾದ ಮಾತು ಸಹೋದರ....
ಪ್ರತ್ಯುತ್ತರಅಳಿಸಿ