ಮಂಗಳವಾರ, ಏಪ್ರಿಲ್ 9, 2019
ಮೋದಿ ಮತ್ತೊಮ್ಮೆ ಮನದಲ್ಲಿರಲಿ!
ಲೋಕ ಸಭಾ ಚುನಾವಣೆ ಮತ್ತೆ ಬಂದಿದೆ . ಮೋದಿ ಸರ್ಕಾರವನ್ನು ಮತ್ತೆ ತರಲು ಒಕ್ಕೊಲರಿಂದ ಯುವ ಸಮುದಾಯ ,ಪ್ರಜ್ಞಾವಂತ ನಾಗರಿಕರು ಸಜ್ಜಾಗಿದ್ದಾರೆ . "ಮೋದಿ.. ಮೋದಿ" ! 'ಮತ್ತೊಮ್ಮೆ ಮೋದಿ' !! ಎಂಬ ವೇದ ವಾಕ್ಯವನ್ನು ಉಚ್ಚರಿಸುತ್ತಿದ್ದಾರೆ ಸ್ತುತರ್ಹ! ಸುಮಾರು 70ವರ್ಷಗಳ ಬಳಿಕ ಪ್ರಧಾನಿ ಹುದ್ದೆಗೆ ಒಂದು ಗೌರವ ಮತ್ತು ದೇಶದ ಅಭಿವೃವುದ್ಧಿಗೆ ಹೆಸರುವಾಸಿಯಾಗಿದ್ದು ಮೋದಿ ಬಿಟ್ಟರೆ ಬೇರಾರಿಂದಲೂ ಆ ರೆಕಾರ್ಡ್ನ್ನು ಮುರಿಯುದಕ್ಕೆ ಸಾಧ್ಯವಾಗಿಲ್ಲ ,ಭವಿಷ್ಯದಲ್ಲಿ ನರೇಂದ್ರ ಮೋದಿ ಬಿಟ್ಟರೆ ಆ ಸಾಲಿಗೆ ಬೇರೆ ಯಾರೂ ಆ ಯೋಗ್ಯತೆಯನ್ನು ಕಾಪಾಡುದಕ್ಕೆ ಸಾಧ್ಯವೇ ಇಲ್ಲ . ಮೋದಿ ಪ್ರಧಾನಿಯಾಗುವುದಕ್ಕೆ ಮುಂಚೆ ಗುಜರಾತ್ ನಲ್ಲಿ ಹ್ಯಾಟ್ರಿಕ್ ಮುಖ್ಯ ಮಂತ್ರಿಯಾಗಿ ಸಾಧನೆ ಸಾಹಸಗಾಥೆ ಅವರ ಬಗ್ಗೆ ಪ್ರಶಂಸೆಯ ಮಾತು ದೇಶದ ಉದ್ದಗಲಕ್ಕೂ ಮೂಡಲು ಹೆಚ್ಚಿನ ಸಮಯವೇ ಬೇಕಾಗಿರಲಿಲ್ಲ ಪ್ರಧಾನಿ ಪಟ್ಟ ಸ್ವೀಕರಿಸಿದ ನಂತರ ಮೂಗಿನ ಮೇಲೆ ಬೆರಳು ಇಟ್ಟುಕೊಳ್ಳುವಂತೆ ಮಾಡಿದ್ದೂ ಸುಳ್ಳಲ್ಲ . ದೇಶದ ಗಲ್ಲಿ -ಗಲ್ಲಿ ಗಳಲ್ಲಿ ಬಿಡಿ ಶತ್ರು ದೇಶದವರ ಕೂಡಾ ಚಾಯಿವಾಲನ ಬಗೆಗೆ ಉತ್ತಮ ಮಾತುಗಳನ್ನು ಆಡುತ್ತಿವೆ . ಚೌಕಿದಾರನ ಅದೆಷ್ಟೋ ಯೋಜನೆಗಳು ಅದೆಂತಾ ಯೋಚನೆಗಳು !! .ಒಂದಂತೂ ಸತ್ಯ ಮೋದಿಗೆ 5 ವರ್ಷ ಎಲ್ಲೂ ಸಾಕಾಗಿಲ್ಲ ಇನ್ನೂ ಸಾಕಷ್ಟು ಯೋಜನೆಗಳು ಅವರ ಬತ್ತಳಿಕೆ ಯಲ್ಲಿದೆ ಚಿಗುರು ಒಡೆಯುತ್ತಿದೆ. ಇನ್ನೂ ಸಮಯ ಬೇಕು ಆ ಸಮಯ ನಮ್ಮಲ್ಲಿದೆ ನಾವು ಕೊಟ್ಟರೆ ಖಂಡಿತವಾಗಿಯೂ ಮುಂದಿನ ಅವಧಿಯಲ್ಲಿ ದೇಶ ಇನ್ನಷ್ಟು ಬಲ ಶಾಲಿಯಾಗುವದರಲ್ಲಿ ಯಾವುದೇ ಅನುಮಾನ ವಿಲ್ಲಾ . ನೋಟ್ ಬ್ಯಾನ್ ಜಿಎಸ್ಟಿ ಗಳೆಲ್ಲಾ ಮುಂದಿಟ್ಟು ವಿರೋಧ ಪಕ್ಷದವರು ಮತ ಭೇಟಿಗೆ ಇಳಿದಿದ್ದಾರೆ . ಅದು ಪ್ರಜ್ಞಾವಂತರಿಗೆ ಗೊತ್ತು ಎಲ್ಲೂ ಒಂದ್ಚೂರು ಜನ ಮಾನಸದಲ್ಲಿ ತೊಂದರೆ ತಂದಿದ್ದು ಸತ್ಯ ಆದರೆ ,ಇದು ದೇಶಕ್ಕೆ ಎಷ್ಟು ಲಾಭ ತಂದಿದೆ ಎನ್ನುವುದನ್ನು ಸಹಾ ಮನಗಾಣಬೇಕು . ಕಳೆದ 70ವರ್ಷಗಳಿಂದ ಗಾಂಧಿ ಎಂದು ಹೆಸರು ಹೇಳಿ ಕೊಂಡು ಬಂದ ಅತಿರಥರಿಂದ ಅದೆಷ್ಟು ಪ್ರಯೋಜನ ದೇಶ ಕಂಡಿದೆ ಎಂದು ಎಲ್ಲರಿಗೂ ಗೊತ್ತಿರುವ ವಿಚಾರವೇ .ಕಳೆದ ಬಾರಿ ರಾಬೊಟೋ ಮನ್ಮೋಹನ್ ಸಿಂಗ್ ನ್ನು ಪ್ರಧಾನಿ ಮಾಡಿದ ಕಾಂಗ್ರೆಸ್ ಈಗ ರಾಹುಲ್ ಗಾಂಧಿಯನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸದೆ . ಕೆಜಿಗೂ ಲೀಟರ್ ಗೂ ವ್ಯತ್ಯಾಸ ಗೊತ್ತಿಲ್ದೆ ಇರುವವ , ಸರಿಯಾಗಿ ಮಾತನ್ನು ಹೊರಡಿಸಲಾಗದವ .ಕಂಡ ಕಂಡ ಸಭೆಯಲ್ಲಿ ಟ್ರಾಲ್ ಪೀಸ್ ಆಗಿರುವ ಈಗ ಒಂದೊಮ್ಮೆ ಪ್ರಧಾನಿಯಾದ್ರೆ ದೊಡ್ಡ ಜೋಕರ್ ಬಿಟ್ಟರೆ ಪ್ರಧಾನಿ ಕುರ್ಚಿಗೆ ಅಯೋಗ್ಯ !ಇನ್ನೂ ಕಾಂಗ್ರೆಸ್ ನಲ್ಲಿ ಯಾವೊಬ್ಬನೂ ಸಹಾ ಪ್ರಧಾನಿ ಸ್ಥಾನಕ್ಕೆ ಇಲ್ಲವೇ ಇಲ್ಲ . ಒಂದಿಷ್ಟು ಮೈತ್ರಿ ಪಕ್ಷಗಳು ಕುರ್ಚಿ ಆಸೆಗೆ ಹಪಹಪಿಸುತ್ತವೆ .ಒಂದೊಮ್ಮೆ ಈ ದೋಸ್ತಿ ಸರ್ಕಾರ ಸ್ಥಾಪನೆಯಾದರೂ ಸುಭದ್ರ ಸರ್ಕಾರ ಎಷ್ಟರ ಮಟ್ಟಿಗೆ ನೀಡಬಲ್ಲರು ಎಂಬುದು ಎಲ್ಲರ ಅರಿವೆಗೆ ಬಂದಿರುವಂತದ್ದೇ. ಇನ್ನು ಮಹಾ ಘಟ ಬಂಧನ್ ಎಂದು ಹೋರಾಟಕ್ಕೆ ಇಳಿದಿರುವ ಇವರುಗಳಿಂದ ಯಾವ ಸರಿ ಸಾಟಿ ಇಲ್ಲ ಮೋದಿ ಹೆಸರು ಹೇಳಲಿಕ್ಕೂ ಲಾಯಿಕ್ಕ ಇಲ್ಲದ ಇವರುಗಳ ನಾಲಿಗೆ ಎಷ್ಟು ಹರಿಸಿದರೂ ಅಷ್ಟೇ ! 18 ಗಂಟೆಗಳ ಕಾಲ ಹಗಲು ಇರುಳು ಎನ್ನದೆ . ತನ್ನ ಪರಿವಾರವನ್ನು ಬಿಟ್ಟು ದೇಶದ ಸೇವೆಗಾಗಿ ದುಡಿಯುತ್ತಿರುವ ತನ್ನ ರಾಜಕೀಯದ ಅಧಿಕಾರಾವಧಿಯಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದೆ ಭ್ರಷ್ಟಾಚಾರ ಮುಕ್ತ ಪಾರದರ್ಶಕವಾಗಿ ಆಡಳಿತ ನೀಡಿದ ಮೋದಿ ಮುಂದೆಯೂ ಸಹಾ ಅತೀ ಹೆಚ್ಚು ಮತಗಳಿಂದ ಆರಿಸಿ ಬರ್ಬೇಕು . ಇದೆ ಬರುವ ಲೋಕ ಸಭಾ ಚುನಾವಣೆಯಲ್ಲಿ ತಮ್ಮ ಅಮೂಲ್ಯವಾದ ಮತವನ್ನು ನೀಡೋಣ ಸ್ಥಳೀಯ ಅಭ್ಯರ್ಥಿ ಯಾರೇ ಇರಲಿ ಮೋದಿ ಮುಖ ನೋಡಿ ತಮ್ಮ ಓಟ್ ಒತ್ತಿ ಇದು ಸ್ಥಳೀಯ ಚುನಾವಣಯಲ್ಲ ಅಭ್ಯರ್ಥಿಯ ಅರ್ಹತೆ ಪ್ರಮಾಣ ಪತ್ರವನ್ನು ನೋಡುವುದು ಬೇಡ ಭವಿಷ್ಯ ಭಾರತದ ಬಗ್ಗೆ ಗಮನ ವಹಿಸೋಣ ..ಮೋದಿ ಮತ್ತೊಮ್ಮೆ ಎಂಬದು ಮನದಲ್ಲಿರಲಿ !
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)

Nice bro
ಪ್ರತ್ಯುತ್ತರಅಳಿಸಿ