ಗುರುವಾರ, ಅಕ್ಟೋಬರ್ 25, 2018

ನಿಮ್ಮ ಅತೀರೇಕದ ಅಭಿಮಾನಕ್ಕೆ ಎಕ್ಕಡದಲ್ಲಿ ಹೊಡಿಬೇಕು !


ನಮ್ಮಲ್ಲಿ ಸಿನಿಮಾ ನಟ -ನಟಿಯರ ಮೇಲೆ ಇದ್ದಷ್ಟು ಅಭಿಮಾನ ಬೇರೆಯಲ್ಲೂ ಅಷ್ಟೊಂದು ಕಾಣಸಿಗುವುದಿಲ್ಲ . ರೀಲ್ ಹೀರೋಗಳನ್ನು ರಿಯಲ್ ಹೀರೊಗಳನ್ನಾಗಿ ನಾವು ಬಿಂಬಿಸ್ತವೆ . ಅಭಿಮಾನವನ್ನು ಮುಗಿಲೆತ್ತರಕ್ಕೆ ತೋರಿಸ್ತೇವೆ . ಎಷ್ಟೊಂದು ಅಭಿಮಾನ ನಮ್ಮ ತೆಕ್ಕೆಯಲ್ಲಿ ಅಂಟಿಕೊಂಡಿರುತ್ತವೆ ಅಂದ್ರೆ ತಮ್ಮ ಪ್ರಾಣವನ್ನು ಧಾರೆ ಎರೆಯುವುದಕ್ಕೂ ಸೈ ! ಇನ್ನೂ ಎಂತೆಂಥಾದೋ ಮನೋಭೂಮಿಕೆ ಅಡಕವಾಗಿರುತ್ತವೆ., ಅದೆಷ್ಟೋ ಮಂದಿ ನಟ ನಟಿಯರಿಗಾಗಿ ಪ್ರಾಣ ತ್ಯಾಗ ಮಾಡಿದ್ದನ್ನು ನೋಡಿದ್ದೇವೆ . ಪ್ರತಿಭಟನೆ ,ನಮ್ಮ- ನಮ್ಮ ಹಿರೊಗಳಿಗೋಸ್ಕರ ಹೋರಾಟ -ಹಾರಾಟ ,ಹಲ್ಲೆ -ಹರತಾಳ ಎಲ್ಲವನ್ನೂ ಕಂಡಿದ್ದೇವೆ . ಒಂದು ಸಿನಿಮಾ ರಿಲೀಸ್ ಆದರೆ ಸಾಕು ಸಿಹಿ ಹಂಚುವುದು ಪೋಸ್ಟ್ ಗಳಿಗೆ ಹಾಲೆ ರೆಯುವದು ಹೂವಿನ ಅಭಿಷೇಕ ಮಾಡುವುದು ಒಂದೇ ಎರಡೇ ಎಲ್ಲವೂ ಭೂತ ಭವಿಷ್ಯತ್ ಕಾಲದಲ್ಲಿ ಕಣ್ಣು ಮಿಟುಕಿಸುತ್ತದೆ . ಆದರೆ ವರ್ತಮಾನದ ವಿಚಾರವೆಂದರೆ ನಿಜಕ್ಕೂ ಅಸಹ್ಯ ಮೂಡಿಸುತ್ತಿದೆ . ಈ ಪರಿಯ ಅಭಿಮಾನಕ್ಕೆ ಎಕ್ಕಡದಲ್ಲಿ ಹೊಡಿಬೇಕು ಅನ್ನುವಷ್ಟು ಮಟ್ಟಿಗೆ ಮನಸ್ಸು ಭಾರವಾಗುತ್ತದೆ . 'ದಿ ವಿಲನ್' ಜೋಗಿ ಪ್ರೇಮ್ ನಿರ್ದೇಶನದ ಶಿವರಾಜ್ ಕುಮಾರ್ ಮತ್ತು ಕಿಚ್ಚ ಸುದೀಪ್ ಅಭಿನಯದ ಸಿನಿಮಾ ರಿಲೀಸ್ ಆಗಿತ್ತು . ನೆಲಮಂಗಲದಲ್ಲಿ ಒಂದು ಜೀವಂತ ಕೋಣವನ್ನು ಬಲಿ ಕೊಡಲಾಯಿತು . ಅದರ ರಕ್ತವನ್ನು ಸಿನಿಮಾ ಪೋಸ್ಟರ್ ಗೆ ಹಿಡಿದಿದ್ದಾರೆ ನಿನಿಮಾ ಒಳ್ಳೆ ರೀತಿಯಿಂದ ಓಡಬೇಕೆಂತೆ .ನಾಗರಿಕ ಸಮಾಜ ಎತ್ತ ಸಾಗುತ್ತಿದೆ ?. ನಿನಿಮಾದ ಒಂದು ಪೋಸ್ಟರ್ ಗೆ ಪ್ರಾಣಿ ಬಲಿ ಕೊಡುವುದೇ ? ಪ್ರಾಣಿ ಹಿಂಸೆ ಆಗುತ್ತಿದೆ ಎಂಬ ಕಾರಣಕ್ಕೆ ಐತಿಹಾಸಿಕ ಸಾಂಪ್ರದಾಯ ಬದ್ದ ಕಂಬಳ ಮತ್ತು ಜಲ್ಲಿ ಕಟ್ಟುವನ್ನು ನಿಷೇಧಕ್ಕೆ ಹೊರಟ 'ಪ್ರಾಣಿ ದಯಾ ಸಂಘ' ದವರಿಗೆ ಇದು ಕಣ್ಣಿಗೆ ಕಾಣಿಸಲಿಲ್ವೇ ?ಯಾರೂ ಕೂಡಾ ಇದರ ಬಗ್ಗೆ ತುಟಿ ಬಿಚ್ಚುತ್ತಿಲ್ಲ ,ಯೇಟ್ ಲಿಸ್ಟ್ ಸಿನಿಮಾ ಮಂದಿಯಾದರೂ ? ಇಂಥ ಅಂಧ ಅಭಿಮಾನಿಗಳಿಗೆ ಧಿಕ್ಕಾರ ವಿರಲಿ !

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ