ಶನಿವಾರ, ಮೇ 26, 2018
ರಾಜಕೀಯ ಪಕ್ಷಗಳಲ್ಲಿ ಬಂಡಾಯ ಸರ್ವೆ ಸಾಮಾನ್ಯ!
ಈ ಚುನಾವಣೆಗಳು ಸಮೀಪಿಸಿದಾಗ ಟಿಕೇಟ್ ಸಮಸ್ಯೆ ಸಾಮನ್ಯವಾಗಿ ಕಾಡುತ್ತದೆ . ತನಗೆ ಬೇಕು ನನಗೆ ಬೇಕು ...ನಾ ಮುಂದು ತಾ ಮುಂದೆ ಎಂದು ಕಣಕ್ಕೆ ಇಳಿಯುವ ಆಕಾಂಕ್ಷೆಗಳ ದಂಡೇ ನಮ್ಮ ಎಲ್ಲಾ ರಾಜಕೀಯ ಪಕ್ಷಗಳಲ್ಲಿವೆ . ಒಂದೇ ಸೀಟನ್ನು ನಾಲ್ಕೈದು ಮಂದಿ ಗೆ ಹಂಚಲಾಗದ ಸಂದರ್ಭದಲ್ಲಿ ,ಟೀಕೆಟ್ ಸಿಗದ ವ್ಯಕ್ತಿ ಬಂಡಾಯ ಏಳುತ್ತಾನೆ !!
ಹೌದು ರಾಜಕೀಯ ಪಕ್ಷಗಳಲ್ಲಿ ಬಂಡಾಯ ಸರ್ವೆ ಸಾಮಾನ್ಯ..! ಮುಖಂಡರಿಗೆ ,ಹೈಕಮಾಂಡ್ ಮುಂದೆ ದೊಡ್ಡ ಸವಾಲು ಹಾಗೂ ಬಿನ್ನಾಭಿಪ್ರಾಯ ವನ್ನು ಟಿಕೇಟ್ ಹಂಚಿಕೆಯಲ್ಲಿ ಎದುರಿಸಬೇಕಾಗಿ ಬರುತ್ತದೆ .ಎಲ್ಲೋ ಆಕಾಂಕ್ಷೆಗಳಿಗೆ ಸೀಟು ಕೈ ತಪ್ಪಿ ಹೋದಾಗ ಬಂಡಾಯ ಆರಂಭವಾಗುತ್ತದೆ .ಆತ ಬೇರೆ ಪಕ್ಷ ಸೇರುವ ಅಥವಾ ಪಕ್ಷೇತರರಾಗಿ ನಿಂತು ತಮ್ಮ ಸ್ವಂತ ಪಕ್ಷದ ವಿರುದ್ದ ಇಲ್ಲ ಸಲ್ಲದ ಆರೋಪ ಹೊರಿಸಿ ತೊಡೆ ತಟ್ಟುತ್ತಾರೆ ಪಕ್ಷದ ವರಿಷ್ಠರು ಎಲ್ಲಾರಿಗೂ ಬೀ ಫಾರಂ ಕೊಡಲಿಕ್ಕೆ ಸಾಧ್ಯವಿಲ್ಲ.. ಇದ್ದವರಲ್ಲಿ ಉತ್ತಮರು ಯಾರೂ ಹಾಗೂ ಗೆಲ್ಲುವ ಕುದುರೆ , ಬೆಂಬಲದ ಅಂಶವನ್ನೂ ಅರಿತು ಕೊಡಲಾಗುತ್ತದೆ.ಎಲ್ಲೂ ಒಮೊಮ್ಮೆ ತಮ್ಮ ನಿಕಟವರ್ತಿ ಗಳಿಗೆ ಅದು ವರ್ಗಾವಣೆ ಯಾಗುತ್ತದೆ.. ಟಿಕೇಟ್ ಹಂಚಿಕೆ ಪಾರದರ್ಷಕವಾಗಿರಬೇಕು ಹಾಗೂ ಆಕಾ೦ಕ್ಷಿಗಳು ಪಕ್ಷದ ಆಶೋತ್ತರಗಳನ್ನು ಗಮನಿಸಿ ಆಯ್ಕೆ ಸಮಿತಿ ಜೊತೆ ಕೈ ಜೋಡಿಸಬೇಕು, ಆಗ ಬಂಡಾಯ ಶಮನ ಆಗಬಹುದು.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ