ಸೋಮವಾರ, ಡಿಸೆಂಬರ್ 19, 2016

ಬಂಡ ಬ್ರಷ್ಟಚಾರಿಗಳಿಂದಲೇ ಬಡವರು ಬರ್ಬಾದ್ !


ಎಲ್ಲಿಯವರೆಗೆ ಪೂರ್ಣ ಪ್ರಮಾಣದಲ್ಲಿ ಬ್ರಷ್ಟಚಾರಿಗಳು ನಮ್ಮ ಸಮಾಜದಿಂದ ನಿರ್ನಾಮವಾಗುವುದಿಲ್ಲವೋ ಅಲ್ಲಿಯವರಗೆ ದೇಶ ಉದ್ದಾರವಾಗಲು ಸಾಧ್ಯವಿಲ್ಲ, ಬಡವರ ಬರ್ಬಾದ್ ತನ ಮುಂದುವರಿಯತ್ತಲೇ ಇರುತ್ತದೆ . ಅದಿಲ್ಲವೆಂದರೆ ಹೀಗಾಗುತ್ತದೆಯೇ ? ದೇಶ ಕಂಡ ಅಪ್ರತಿಮ ಜನ ಸೇವಕ ಪ್ರಧಾನಿ ನರೇಂದ್ರ ಮೋದಿ ದೊಡ್ಡ ನೋಟುಗಳನ್ನು ನಿಷೇಧ ಮಾಡಿ ಕಾಳ ಧನ ಕರಗಿ ಹೋಗಿ ಮುಂದೊಂದು ದಿನ ಭಾರತ ಮಾದರಿ ದೇಶವಾಗಿ ಬಡಬಲ್ಲಿಗರಿಗೆ ಆಶ್ರಯವಾಗುತ್ತದೆ ಎಂದು ಅದ್ಭುತ ಸಾಹಸಕ್ಕೆ ಕೈ ಹಾಕಿದರೆ ಥೂ !ನಾಚಿಕೆ ಗೆಟ್ಟವರು ಹಣದ ಹಿಂದೆ ಅಂಡಿಲೆಯುವ ನೀಚ ಹೀನ ಮನಸ್ಥಿತಿಯ ರಕ್ತ ಬೀಜಾಸುರನ ಸಂತತಿ ಬ್ರಷ್ಟಾಚಾರಿಗಳು ಬಿಡಬಲ್ಲರೆ ?!.
ಕಂತೆ ಕಂತೆ ಹೊಸ ಹೊಸ ನೋಟುಗಳು ಐಟಿ ದಾಳಿಯಲ್ಲಿ ದಿನ ನಿತ್ಯ ಸಿಗ್ತಾನೆ ಇವೆ . ಸಾಮಾನ್ಯ ಒಬ್ಬ ವ್ಯಕ್ತಿ ದಿನವೀಡಿ ಕ್ಯೂ ನಲ್ಲಿ ನಿ೦ತರೂ 2500 ರೂ ATM ನಲ್ಲಿ ದೊರಕುದು ಕಷ್ಟ . ವಾರಕ್ಕೆ 24000 ರೂ. ಕಿಂತ ಮೇಲೆ ಹಣ ಸಿಗೋಲ್ಲ .. ಇಂತಿರುವಾಗ ದಿನ ನಿತ್ಯ ಈ ಪರಿಯ ಕೋಟಿ ಕೋಟಿ ಹೊಸ ಹೊಸ ನೋಟು ಕಂತೆಗಳು ಸೀಜ್ ಆಗ್ತಾ ಇವೆಯಲ್ಲ ? ಇಷ್ಟೊಂದು ಪ್ರಮಾಣದ ಇಷ್ಟು ದಿನಗಳಲ್ಲಿ ಬ್ಯಾಂಕ್ ಮುಂದೆ ಕಾವಲು ಕಾಯದೇ ನೇರವಾಗಿ ಇವರ ಬಚ್ಚಲ ಮೆನೆಯಿ೦ದ ಹಿಡಿದು ಮಲಗುವ ಹಾಸಿಗೆ ಕೆಳಗೆ ಸಿಗೋದು ಅಂದ್ರೆ ತಮಾಷೆನಾ ?
ಬೆಂಕಿ ಇಲ್ಲದೇ ಹೋಗೆ ಯಾಡುತ್ತದೆಯೇ ? ಚಾಪೆಯಡಿಯಲ್ಲಿ ನುಸುಳುವ ಯೋಜನೆ ಜಾರಿಗೆ ತಂದರೂ ಕೆಲವರ ರಂಗೋಲಿ ಯಡಿ ನುಸುಳುವ ಜಾಯಮಾನದ ಜಾಣ್ಮೆಯನ್ನು ಮೆಚ್ಚಲೇ ಬೇಕು !! ಇವರುಗಳಿಂದ ಹೇಗೆ ದೇಶದ ಅಭಿವೃದ್ಧಿಯನ್ನು ನಿರೀಕ್ಷಿಸಲು ಸಾಧ್ಯ ? ಕೆಲವು ಬ್ಯಾಂಕ್ ಉದ್ಯೋಗಿಗಳು ಬ್ಯಾಂಕ್ ಮೇನೇಜರ್ ಗಳು ಹೊಡೆಯದೇ ಬಡಿಯದೇ ಕೂತಲ್ಲೇ (ಬೆವರು ಹರಿಸದೇ ) ಕಮಿಷನ್ ವ್ಯವಹಾರದಲ್ಲಿ ತಮ್ಮ ಚಾಕಚಕ್ಯತೆಯನ್ನು ತೋರಿದ್ದರಲ್ಲ ಶೇಮ್ ! ಕೊಂಚ ಮನಸಾಕ್ಷಿ ಇದ್ದರೆ ಅಬಲರಿಂದ ವ್ರದ್ದರರೂ ಬಿಸಿಲಿನಲ್ಲಿ ತಮ್ಮ ದೈನಂದಿನ ಕೆಲಸ ಕಾರ್ಯವನ್ನು ಬಿಟ್ಟು ಕ್ಯೂ ನಲ್ಲಿ ನಿಂತು ತಮ್ಮ ಹಣವನ್ನು ಎಕ್ಸ್ ಚೆ೦ಜ್ ಮಾಡುವ ಪರಿಯನ್ನು ಒಮ್ಮೆ ನೋಡಿ, ಕನಿಕರ ವಿದ್ದರೆ ಕಂಬನಿ ಖಂಡಿತವಾಗಿಯೂ ಉದುರುತ್ತವೆ .ಅವರುಗಳಿಗೆ ಸಾಧ್ಯವಾದರೆ ಸಹಕಾರ ನೀಡಿ ಅದನ್ನು ಬಿಟ್ಟು ಯಾವುದೇ ಕಷ್ಟವಿಲ್ಲದೇ ಪರ್ಸೆಂಟ್ ಲೆಕ್ಕದಲ್ಲಿ ದೊಡ್ಡ ಕುಳಗಳಿಗೆ ಹಣ ಅಡಗಿಸುವುದಕ್ಕೆ ಸಾಥ್ ನೀಡುತ್ತಿದ್ದಿರಲ್ಲ ? ಛೆ ! ನಾಚಿಕೆ ಆಗಬೇಕು.. ದಿಕ್ಕಾರವಿರಲಿ ಇಂತಹ ವ್ಯವಸ್ಥೆಗೆ !!!.
ಇದು ಕೇವಲ ಮನಿಮಾಫಿಯಾದ ಬಗಗೆಗಿನ ವಿಚಾರವಲ್ಲ , ಯಾವುದೇ ಒಂದು ಯೋಜನೆ ಬಂದರೂ ಫಲಾನುಭವಿಗಳಿಗೆ ಸಿಗುವುದು ಎಳ್ಳು ಪ್ರಮಾಣ ಮಾತ್ರ .. ಉದಾಹರಣೆಗೆ ಒಂದು ರೂಪಯಿ ಅಕ್ಕಿ ಬಡವನಿಗೆ ಸೇರುವುದು ಎಲ್ಲೋ 30% ಮಾತ್ರ . ಲೋಡ್ ಗಟ್ಟಲೇ ಬೇರೆ ಗೋಡಾನ್ನಿಗೆ ಸರಬರಜಾಗುವುದು ಗುಟ್ಟೆನಲ್ಲ ..! ಒಂದು ರಸ್ತೆಯ ಗುತ್ತಿಗೆ ಕಾರ್ಯವೂ ಅಷ್ಟೇ 100% ಬಜೆಟ್ ನಲ್ಲಿ ಅವರಿವರ ಕೈ ಸೋಕಿ ಕೊನೆಗೆ ನಿರ್ಮಾಣವಾಗುವದು ಕೇವಲ ಹೆಚ್ಚೆಂದರೆ 25% ಮೊತ್ತದಲ್ಲಿ ಮಾತ್ರ ....ಸಿಂಹಪಾಲು ಸಂಬಂದ ಪಟ್ಟವರ ಖಜಾನೆಗೆ ಜಮಾವಣಯಾಗುತ್ತದೆ. ಇದೆಕ್ಕೆಲ್ಲಾ ಕೊನೆ ಎಂದು ? ಮಟ್ಟ ಹಾಕುವವರು ಯಾರು ? ಯಾವ ಕಾನೂನಿನಡಿ ಇದು ಸಾದ್ಯ ? ಮೋದಿ ಯಿಂದಲೇ ಸಾಧ್ಯವಿಲ್ಲ ಅಂದ ಮೇಲೆ ಇದನ್ನು ಇನ್ಯಾರಿಂದ ನಿರೀಕ್ಷಿಸಬಹುದು ? ಐಟಿ ದಾಳಿ ಆಗಿದೆ ..ಆಗ್ತಾನೂ ಇದೆ ಅಂದ ಮಾತ್ರಕ್ಕೆ ಒಂದಿಷ್ಟು ತಪ್ಪಿತಸ್ತರು ಬಲೆಗೆ ಬಿದ್ದಿದ್ದಾರೆ ಅಷ್ಟೇ !! ಇನ್ನು ಗುಟ್ಟಾಗಿ ಅದೆಷ್ಟೋ ತಿಮಿಂಗಿಲಗಳು ನಮ್ಮ ಸುತ್ತಾ ಮುತ್ತಾ ಮೂಲೆ ಮೂಲೆಗಳಲ್ಲಿ ಇದ್ದಾವೆ.. ಇದ್ದೆ ಇರುತ್ತವೆ . ಈ ರಹಸ್ಯವನ್ನು ಪೂರ್ಣ ಪ್ರಮಾಣದಲ್ಲಿ ಪತ್ತೆ ಹಚ್ಚುವುದು ಕಠಿಣವೇ ಸರಿ . ಎಲ್ಲಿಯವರೆಗೆ ಭಂಡ ಬಕಾಸುರ ವಂಶದ ಬ್ರಷ್ಟಚಾರಿಗಳು ನಿರ್ನಾಮವಾಗುತ್ತಾರೋ ಅಲ್ಲಿಯವರೆಗೆ ನಡಿತಾನೆ ಇರುತ್ತೆ .. ಏನೂ ಮಾಡಲು ಸಾಧ್ಯವಿಲ್ಲ ಕೊನೆಯಾದಾಗಿ ಒಂದು ಮಾತು ಬೆಂಕಿಯ ಪಕ್ಕ ಬೆಣ್ಣೆಯನ್ನು ಇಡಬಾರದು ಅಷ್ಟೇ !!!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ