ಶನಿವಾರ, ಡಿಸೆಂಬರ್ 3, 2016

ದೇವರ ನಾಡಿನಲ್ಲಿ ದೇವಾಲಯದ ಸ್ಥಿತಿ ಎಲ್ಲಿಗೆ ಬಂದು ನಿಂತಿದೆ ?

ದೇವರ ಸ್ವಂತ ನಾಡು ಕೆರೆಯಿಸಿ ಕೊಳ್ಳುವ ಉತ್ತರ ಭಾರತದ ಪುಟ್ಟ ರಾಜ್ಯ ಕೇರಳ . ಹೌದು !ಹಲವು ಧರ್ಮೀಯರ ನಾಡು ಭಾರತದಲ್ಲಿ ಅತೀ ಹೆಚ್ಚು ಮಠ ಮಂದಿರ ಸೇರಿದಂತೆ ಹಲವಾರು ಧಾರ್ಮಿಕ ಸ್ಥಳವನ್ನು ಹೊoದಿರುವುದು ಕೇರಳ ಬಿಟ್ಟರೆ ಬೇರಾವುದೂ ಇಲ್ಲ ಅದಕ್ಕಾಗಿಯೇ ಏನೋ , ದೇವರ ಸ್ವಂತ ನಾಡು ಎಂದು ಪ್ರಖ್ಯಾತಿ ಪಡೆದಿದೆ .
ಕೇವಲ ಹಿಂದೂ ಧರ್ಮ ಮಾತ್ರವಲ್ಲದೇ ಮಾರಿಗೊಂದು ಚರ್ಚ್ ಮಸ್ಜಿದ್ ಗಳೂ ಕಾಣ ಸಿಗುತ್ತವೆ ಇದರರ್ಥ ಸಮಭಾವ ಸಮ್ಮಿಲನ ದೊಂದಿಗೆ ಧಾರ್ಮಿಕ ಚಟುವಟಿಕೆ ಅದರ ರೀತಿ ನೀತಿಯೇ ಎಂಬ ತಳ ಹದಿಯಲ್ಲಿ ನಡೆಯುತ್ತಿದೆ., ನಡೆಯಲ್ಪಡುತ್ತದೆ. ಅದು ಹಿಂದಿನಿಂದಲೂ ನಡೆದು ಕೊಂಡು ಬಂದ ಪದ್ಧತಿ. ಕೇರಳದಲ್ಲಿರುವ ಶಬರಿಮಲೈ ಸ್ವಾಮೀ ಅಯ್ಯಪ್ಪ ದೇವಸ್ಥಾನದ ಬಗ್ಗೆ ಹೆಚ್ಚೇನೂ ಹೇಳಬೇಕಾಗಿಲ್ಲ ಎಲ್ಲಾರಿಗೂ ಗೊತ್ತಿರುವ ವಿಚಾರ ಹನ್ನೆರಡು ವರ್ಷದ ದಾಟದ ಹಾಗೂ 40 ವರ್ಷಗಳ ಮೇಲಿನ ,ಮಹಿಳೆಯರಿಗೆ ಮಾತ್ರ ಶ್ರೀಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಪ್ರವೇಶ .
ಇದು ಪರಂಪರಾಗತವಾಗಿ ನಡೆದು ಕೊಂಡು ಬಂದಿರುವ ಅಚಾರ ವಿಚಾರ . ಅದರ ಹಿಂದಿನ ಕಥೆಯನ್ನೂ ಇಲ್ಲಿ ಅರಹಬೇಕಾಗಿಲ್ಲ ಸಮಸ್ತ ಸಮಾಜವೂ ಅರಿತಿರುವ ಸಂಗತಿ ,ಆದರೆ ಅದ್ಯಾಕೋ ಗೊತ್ತಿಲ್ಲ ಇತ್ತೀಚಿಗಿನ ದಿನಗಳಲಿ ಕೇರಳ ರಾಜ್ಯವು ಹೈಕೋರ್ಟ್ ನಿಂದ ಹಿಡಿದು ಸುಪ್ರಿಂ ಕೋರ್ಟ್ ವರೆಗೂ ಸಹಾ ಮಹಿಳೆಯರ ಪ್ರವೇಶಕ್ಕೆ ಅನುವು ಮಾಡಿ ಕೊಡಬೇಕೆಂಬ ಅತಿಯಾಸೆಯಸಾಹಸಕ್ಕೆ ಕೈ ಹಾಕಿದೆ
ಇದರ ಪರ ವಾದ -ವಿವಾದ ಇನ್ನೂ ನಡೆಯುತ್ತಲೇ ಇದೆ . ಮುಂದೆ ಇದು ಯಾವ ದಿಕ್ಕಿನಲ್ಲಿ ತೀರ್ಪು ಪಡೆದು ಕೊಳ್ಳುತದೋ ಗೊತ್ತಿಲ್ಲ. ಸಾಮನ್ಯವಾಗಿ ಎಲ್ಲಾರಲ್ಲೂ ಮೂಡುವುದು ಒಂದೇ ಮಹಿಳೆಯರಿಗೆ ಪ್ರವೇಶ ಬೇಡ ತಲತಲಾಂತರ ದಿಂದ ಬಂದಿರುವ ಈ ಸುಸಂಸ್ಕ್ರತಿ ,ಸಂಪ್ರದಾಯವನ್ನು ಒಮ್ಮೆಲೇ ಮುರಿಯುವುದು ಸರಿಯಲ್ಲ ಎಂಬುದು.ಮುಂದೆ ಇದರ ವಿರುದ್ದವಾಗಿ ಸುಪ್ರಿಂ ಕೋರ್ಟ್ ನಿಂದ ತೀರ್ಪು ಬಂದರೂ ಅಚ್ಚರಿ ಇಲ್ಲ. ಯಾಕೆಂದರೆ ನಿನ್ನೆ ಇನ್ನoತ್ತದ್ದೆ ಒಂದು ಮಾಹಾನ್ ತೀರ್ಪು ಹೊರಬಂದಿತ್ತು . ಈ ಮೊದಲೇ ನಾನು ಹೇಳಿದಂತೆ ದೇವರ ಸ್ವಂತ ನಾಡು ಎಂದು ತನ್ನ ಅಸ್ತಿತ್ವವನ್ನು ಉಳಿಸಿ ಕೊಂಡ ಬಂದಿರುವುದಕ್ಕೆ ಅಲ್ಲಿನ ಭಕ್ತರ ಧಾರ್ಮಿಕ ಪ್ರಜ್ಞೆ ದೇವರ ಮೇಲಿಟ್ಟಿರುವ ನಂಬಿಕೆ ವಿಧಿವಿಧಾನಗಳು ಬೇರೆಲ್ಲೂ ಕಾಣ ಸಿಗದು .
ಇಲ್ಲಿ ಯಾವುದೇ ಒಂದು ದೇವಸ್ಥಾನದ ಒಳ ಪ್ರವೇಶಾತಿಗೆ ಪುರುಷರು ಅಂಗಿ –ಬನಿಯಾನ್ ನ್ನು ತೆಗೆಯದೇ ಒಳ ಹೋಗುವಂತಿಲ್ಲ ಇನ್ನು ಕೆಲವೊಂದು ದೇವಸ್ಥಾನಗಳಲ್ಲಿ ಪುರುಷರು ಅಂಗಿಯನ್ನು ತೆಗೆಯುವುದರ ಜೊತೆಗೆ ಲುಂಗಿ-ಪಂಚೆಯನ್ನು ಧರಿಸಲೇ ಬೇಕು ಹಾಗೂ ಮಹಿಳೆಯರು ಕಟ್ಟುನಿಟ್ಟಾಗಿ ಸೀರೆಯನ್ನು ಧರಿಸಿರಬೇಕು ,ಚೂರಿದಾರ್ ಇದ್ದರೆ ಅದರ ಮೇಲೆ ಪಂಚೆ ಅಥವಾ ದೋತಿ- ಲುಂಗಿಯನ್ನು ಕಡ್ಡಾಯವಾಗಿಉಡಲೇ ಬೇಕು ಆಗ ಮಾತ್ರ ಪ್ರವೇಶ ಕಲ್ಪಿಸಲಾಗುತ್ತದೆ ಇದು ಇಂದಿನದಲ್ಲಾ ಸಾಕಷ್ಟು ದಶಕ ಗಳಿಂದ ನಡೆದು ಕೊಂಡು ಬಂದಿರುವ ಪದ್ಧತಿ . ನಿನ್ನೆ ಸುಪ್ರಿ ಕೋರ್ಟ್ ನಿಂದ ಒಂದು ತೀರ್ಪು ಹೊರಬಿದ್ದಿದೆ ಕೇರಳದ ರಾಜಧಾನಿ ತಿರುವನoತಪುರಂಲ್ಲಿರುವ ಅನಂತ ಪದ್ಮನಾಭ ದೇಗುಲದಲ್ಲಿ (ಚಿನ್ನ ಸಿಕ್ಕಿ ಜಗತಿನಾದ್ಯಂತ ಖ್ಯಾತಿ ಪಡೆದ ಮಂದಿರ ) ಮಹಿಳೆಯರು ಲುಂಗಿಯನ್ನು ಬಳಸದೇ ಚೂರಿದಾರ್ ರಿಂದಲೇ ನೇರವಾಗಿ ಪ್ರವೆಶಿಸಬಹುದೆಂದು , ಸುಪ್ರಿಂ ಕೋರ್ಟ್ ಗೆ ತೆಲೆಕೆಟ್ಟಿದೆ !! ,ಹಾಗಂತ ಭಕ್ತರೇ ನೀವೇಕೆ ಹೀಗೆ ? ಧಾರ್ಮಿಕತೆಯನ್ನು ಉನ್ನತ ಸ್ತರದಲ್ಲಿ ಮೇಳೈಸಿಕೊಂಡು ಬಂದಿರುವ ಭಾರತೀಯ ಅದರಲ್ಲೂ ಕೇರಳದಲ್ಲಿ ಈ ನೀತಿ ಜಾರಿಗೆ ಬಂದಿರುವುದು ಅಕ್ಷ್ಯಮ! ಸಹಿಸುವನ್ತದ್ದಲ್ಲ ಧಾರ್ಮಿಕತೆಗೆ ಪೆಟ್ಟು ನೀಡಿದಂತಾಗಿದೆ ತಲೆ ತಲಾಂತರ ದಿಂದ ನಡೆದು ಕೊಂಡು ಬಂದಿರುವ ಪದ್ದತಿಗೆ ಬೆಲೆ ಇಲ್ಲದಂತಾಗುತ್ತದೆ . ಸಮಾಧಾನ ಇಷ್ಟೇ ಈ ಬಗ್ಗೆ ಪ್ರಜ್ಞಾವಂತ ತಾಯಿ ಸಹೋದರಿಯರು ಈ ರೋಲ್ಸ್ ಗೆ ಒಗ್ಗಿ ಕೊಳ್ಳಲಿಲ್ಲ ಕೇರಳದಲ್ಲಿ ಹರತಾಳ ನಡೆಯುತ್ತಿದೆ ಆದಷ್ಟು ಬೇಗ ಈ ನೀತಿಯನ್ನು ಕೋರ್ಟು ಹಿಂತೆದುಕೊಳ್ಳಬೇಕು . ಅದಿಲ್ಲದಿದ್ದರೆ ದೇವರ ಸ್ವಂತ ನಾಡಿನಲ್ಲಿ ದೇವರಿಗೆ ಬೆಲೆ ನೆಲೆ ಇಲ್ಲದಂತಾಗುತ್ತದೆ ಇನ್ನು ಉಳಿದ ದೇಗುಲ ಸಹಾ ತೂಗುಯ್ಯಾಲೆಯಲ್ಲಿರುತ್ತವೆ ಕಲಿಯುಗದ ಬ್ರಹ್ಮಚಾರಿ ಮಾಣಿಕ೦ಟನಿಗೂ ಸಹಾ ಮುಂದೆ ಕಂಟಕ ತಪ್ಪಿದ್ದಲ್ಲ ಭಕ್ತರೆ ಎಚ್ಚೆತ್ತು ಕೊಳ್ಳಿ ಇದು ಕೇವಲ ಕೆರಳಿಗರಲ್ಲದೇ , ಭಾರತೀಯರಾದ ನಾವುಗಳು ದೇಗುಲದ ಸ್ಥಿತಿ ಅದೊಗತಿಗೆ ಬಾರದಂತೆ ಖಂಡಿಸಬೇಕು ,ಕೈ ಜೋಡಿಸಿ ದೇಗುಲಗಳ ಉದ್ದಾರಕ್ಕೆ ಪಣ ತೊಡಬೇಕಾಗಿದೆ .


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ