ಬುಧವಾರ, ನವೆಂಬರ್ 9, 2016

ಆಧುನಿಕ ತಂತ್ರಜ್ಞಾನಗಳ ನಡುವೆಯೂ ನಡೆಯಿತು ನಡೆಯಬಾರದ ಘಟನೆ : ಯೇ ವಿಧಿ ನೀನೆಷ್ಟು ಕ್ರೂರಿ

ಮಾಸ್ತಿಗುಡಿ ದುರಂತ : ಯಾರು ಹೊಣೆ ?
ಭಂಡ ದೈರ್ಯ ಪ್ರಾಣಕ್ಕೆ ಎರವಾಯಿತೆ ?
ನಿಮ್ಮ ಭಾರವನ್ನು ಸಹಿಸದಾದನೇ ವಿಧಿ ?
ಕಲಾವಿದರನ್ನು ದೂಡಿ ಆಳ ನೋಡುವ ನಿರ್ದೇಶಕರುಗಳೇ ನಿಮ್ಮ ಜನ್ಮಕ್ಕೆ ಇಷ್ಟು ಬೆಂಕಿ ಹಾಕ ! ಪ್ರಸ್ತುತ ವೈಜ್ಞಾನಿಕ ತಂತ್ರಜ್ಞಾನಗಳ ನಡುವೆಯೂ ಹೀಗೊಂದು ಘಟನೆ ನಡೆದಿರುವುದು ನಾಚಿಕೆ ಗೇಡು !ಹಾಸ್ಯಾಸ್ಪದ ! ನಿರ್ಲಕ್ಷವಲ್ಲದೆ ಮತ್ತಿನ್ನೇನು ? ಯಾರೂ ಮಾಡದ ಕಾರ್ಯಕ್ಕೆ ಕೈ ಹಾಕಿ ಗಿನ್ನಿಸ್ ಪುಸ್ತಕದಲ್ಲಿ ತಮ್ಮ ಹೆಸರು ನೊಂದಾಯಿಸಿ ದಾಖಲೆ ಮಾಡಬೇಕೆಂಬ ಹುಚ್ಚು ಹಂಬಲ ನಿರ್ದೇಶಕರದ್ದು ! ಪಾಪ ಏನೂ ಅರಿಯದ ಅಮಾಯಕ ನತದೃಷ್ಟ ಕಲಾವಿದರುಗಳ ಜೀವ ಮಾತ್ರ ತೂಗು ಗತ್ತಿ ಮೇಲೆ ತೇಲುತ್ತಿರುರುವುದು ಅಕ್ಷರಸ:ನಿಜ .
ಅದೃಷ್ಟ ಇದ್ದರೆ ಬದುಕಿ ಉಳಿಯಬಹುದು ಇಲ್ಲದಿದ್ದರೆ ಕುಟುಂಬದಲ್ಲಿ ಸೂತಕ ವೇ ಗತಿ ! ಯಾರೂ ಬರಲಾರರು ನಮ್ಮ ರಕ್ಷಣೆಗೆ ಇವನ್ ಭಗವಂತನೂ ಕೂಡಾ ! ಹೌದು ನಿಮ್ಮಿಂದ ನೋಡ ನೋಡುತ್ತಲೇ ದೂರವಾದ ಉದಯೋನ್ಮುಖ ಬಡ ಕಲಾವಿದರಾದ ಉದಯ್ ಹಾಗು ಅನಿಲ್ ರ ಚಿತ್ರಣ ಕಣ್ಣ ಮುಂದೆ ಹಾಯುತ್ತಿದೆ .. ಎಂತಾ ಕಲ್ಲು ಮನಸ್ಸಿನವರಿಗೂ ಕೂಡಾ ತಮಗೆ ಅರಿವಿಲ್ಲ ದಂತೆ ಕಂಬನಿ ಜಾರದೇ ಇರಲಾರದು ನಿನಿಮಾ ಅವಕಾಶಕ್ಕಾಗಿ ಅದೆಷ್ಟೋ ವರ್ಷ ವ್ರತ ಮಾಡ್ಬೇಕು ತಮ್ಮಲ್ಲಿ ಕಲೆಯ ಆಳ –ಅಂತರಾಳ ಕರಗತವಾಗಿದ್ದರೂ ಕಲಾ ವಿದನೆನಸಿ ಕೊಳ್ಳುವುದು ಅಷ್ಟು ಸುಲಭದ ಮಾತಲ್ಲ . ತೆರೆಯಲ್ಲಿ ಮೀನುಗ ಬೇಕಾದರೆ ತೆರೆಯ ಹಿಂದೆ ಅದೆಷ್ಟೋ ಕಷ್ಟ ಕಾರ್ಪಣ್ಯ ವನ್ನು ಉಂಡಿರುತ್ತಾರೆ , ಅವಕಾಶಕ್ಕಾಗಿ ಅದೆಷ್ಟೋ ನಿರ್ದೇಶಕ ಮನೆ ಬಾಗಿಲು ಬಡಿದು, ಸಿಕ್ಕ ಅವಕಾಶ ಹೇಗೆ ಇರಲಿ ದ್ರತಿ ಗೆಡದೆ ಮಾಡಿ ಮುಗಿಸಿ ನಾಳೆ ಭವ್ಯ ಭವಿಷ್ಯಕ್ಕೆ ಬೆಳಕು ಆಗಬೇಕೆಂಬ ಮಹತ್ವಕಾ೦ಕ್ಷೆ ಯಿಂದ ಕ್ಷಣದಲ್ಲಿ ಎಷ್ಟೇ ಕಠಿಣ ಪರಿಸ್ತಿತಿ ಇದ್ದರೂ ,ತಮ್ಮ ವಯಕ್ತಿಕವಾದ ತೊಂದರೆ ತಾಪತ್ರೆ ಗಳಿದ್ದರೂ , ದಿಡೀರ್ ನಿರ್ಧಾರಕ್ಕೆ ಕೈ ಹಾಕಿ , ತಮ್ಮ ಪ್ರಾಣವನ್ನೇ ಪಣಕ್ಕೆ ಇಡುವ ಪ್ರಮೇಯವನ್ನೂ ಕೂಡ ಮೆಟ್ಟಿ ನಿಲ್ಲುತ್ತಾರೆ ಎಂಬುದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲ . ಅದನ್ನೇ ಬಂಡವಾಳ ಮಾಡಿ ಕೊಂಡು ಕಲಾವಿದರುಗಳ ಪ್ರಾಣದ ಜೊತೆ ಚೆಲ್ಲಾಟ ವಾಡುವ ಕೆಲ ನಿರ್ದೇಶಕರುಗಳ ಮನಸ್ಸಿಗೆ ಕೊಳ್ಳಿ ಇಡಬೇಕಾಗಿದೆ . ತಂತ್ರಜ್ಞಾನ ಮುಂದುವರಿದಂತೆ ಇಂಥಹ ಹುಚ್ಚು ಸಾಹಸಗಳು ಬೇಕೇ ? ಅವಶ್ಯಕತೆ ಇದ್ದರೇ ಮುಂದಾಗುವ ಅನಾಹುತಗಳನ್ನು ಅರಿತು ಸುರಕ್ಷತೆ ಕಡೆ ಗಮನ ಹರಿಸುವಲ್ಲಿ ಆಗುವ ಅಡ್ಡಿಯಾದರೂ ಏನು ? ಮೂರು ಅಮೂಲ್ಯ ಜೀವಗಳ ರಕ್ಷಣೆಗೆ ಕೇವಲ ಒಂದೇ ಒಂದು ಬೋಟು ..! ಅದೂ ಕೊಡಾ ಕೆರೆಯ ದಡದಲ್ಲಿ! ಅಪಘಾತ ಸಂಬವಿಸಿದ ಬಳಿಕ ನೀರಿಗಿಳಿಯುವ ಪ್ಲಾನ್ ! ಸ್ಪಾಟ್ ಟು ಬೊಟ್ ಹತ್ತು ನಿಮಿಷ ದಾರಿ , ಹತ್ತು ಸೆಕೆಂಡ್ ನೀರಲ್ಲಿ ಈಜು ಬಾರದವರಿಗೆ ಉಸಿರುಬಿಗಿಹಿಡಿಯುವುದು ಕಷ್ಟ ಅಂತದ್ರಲ್ಲಿ ಹತ್ತು ನಿಮಿಷ ಪ್ರಯಾಣ ಮಾಡಿ ಬೋಟು ಅವರನ್ನು ಕಾಪಾಡಬೇಕು ಎಂಥಾ ಮುಟ್ಟಳ ಐಡಿಯಾ ಇದು ?!
“ ನನಗೆ ಆರೋಗ್ಯ ಸರಿ ಇಲ್ಲ ಎರಡು ದಿನಗಳಿಂದ ಜ್ವರದಲ್ಲಿ ಬಳಲುತ್ತಿದ್ದೇನೆ ಕೊನೆಯ ಚಿತ್ರೀಕರಣ ಕ್ಲೈ ಮೇಕ್ಸ್ ಉತ್ತಮವಾಗಿ ಬರಬೇಕು ನನ್ನಿಂದ ಇದು ನಿಲ್ಲಬಾರದು ಎಂಬ ಉದ್ದೇಶ ದಿಂದ ಪಾಲ್ಗೊಳ್ಳುತ್ತಾ ಇದ್ದೇವೆ 60 ಅಡಿ ಎಂದು ಇದೀಗ 100 ಅಡಿಗೆ ಡಿಕ್ಲೇರ್ ಮಾಡಿದ್ದಾರೆ ನಮ್ಮ ಪೈಟ್ ಮಾಸ್ತರ್ . ನಿಜಕ್ಕೂ ಭಯವಾಗುತ್ತದೆ . ಇದೆ ಪ್ರಥಮ ಬಾರಿಗೆ ಹೆಲಿಕಾಪ್ಟರ್ ನ್ನು ಏರುತ್ತಿರುವುದು . ಈಜು ಗೊತ್ತಿಲ್ಲ “ ಎಂದು ಉಭಯ ಕಲಾವಿದರು ಸಾಹಸಕ್ಕೆ ಮುನ್ನ ಮಾಧ್ಯಮಗಳ ಜೊತೆ ಹೇಳಿದ ಪರಿ ನೋಡಿದ್ದರೆ ನಿಜಕ್ಕೂ ಕರುಳು ಹಿಂಡಿ ಬರುತ್ತದೆ . ಇಷ್ಟಿದ್ದರೂ ಇದ್ಯಾವುದನ್ನೂ ಕಂಡೂ ,ಕೇಳದಂತೆ ಚಿತ್ರ ತಂಡ ಯಾವುದೇ ದೂಪ್ ಬಳಸದೇ ನೀರಿಗೆ ಧುಮುಕಿಸಿ ಪ್ರಾಣವನ್ನು ಕಸಿದು ಕೊಂಡು ಬಿಟ್ಟರಲ್ಲ ! ಛೆ .. ದಿಕ್ಕಾರ ವಿರಲಿ ! ಕೇಸು ಕಾನೂನು ಕಾಯ್ದೆ ಎಲ್ಲವೂ ಇದೆ ಎರಡು ದಿನ ತಪ್ಪಿತಸ್ತರು ಜೈಲ್ ಗೆ ಹೋಗಿ ಬರಬಹುದು ಆದರೆ ಆ ಅಮೂಲ್ಯವಾದ ಎರಡು ಜೀವಗಳು ಮರಳಿ ಬರಲು ಸಾದ್ಯವೇ ? ದೇವರ ಮೇಲೆ ಭಾರ ಹಾಕಿ ಅಪ್ಪ ಅಮ್ಮನ ನೆನೆದು ಕೊಂಡು ಹೆಲಿಪ್ಯಾಡ್ ಹತ್ತಿದ್ದ ಉದಯ ,ಅನಿಲ್ ರನ್ನು ಕೊನೆ ಪಕ್ಷ ಆ ಭಗವಂತನೂ ಕೂಡಾ ಕಾಪಾಡುವಲ್ಲಿ ವಿಫಲ ನಾದನೆ ? ವಿಧಿ ನೀನೆಷ್ಟು ಕ್ರೂರಿ ? ಇಷ್ಟೆಲ್ಲಾ ರಿಸ್ಕ್ ಅಂತ ಗೊತ್ತಿದ್ದರೂ , ಯಾಕೆ ಬೇಕಿತ್ತು ಆ ಭಂಡ ದೈರ್ಯ ? ಸಿನಿಮಾದಲ್ಲಿ ಚಾನ್ಸ್ ಸಿಗದಿದ್ದರೇನು ? ದುಡಿದು ತಿನ್ನುವುದಕ್ಕೆ ಸಾಕಷ್ಟು ಹಾದಿಗಳಿವೆ .. ತಮ್ಮನ್ನೇ ನಂಬಿ ಕೊಂಡಿರುವ ಕುಟುಂಬಸ್ತರ ಮನಸ್ಥಿತಿ ಅರ್ಥೈಸಿ ಕೊಳ್ಳುವವರು ಯಾರು ? ತಮ್ಮ ಪ್ರಾಣ ಕಾಪಾಡುವುದಕ್ಕೆ ಇತ್ತ ಗುರುವೂ ಇಲ್ಲ ಅತ್ತ ಸಾಹಸ ನಿರ್ದೇಶಕರೂ ಇಲ್ಲ ಇವರನ್ನೆಲ್ಲಾ ನಂಬಿ ಅಪಾಯಕಾರಿ ಯಾಗಿ ಸ್ಟಂಟ್ ಪ್ರದರ್ಶಿಸುವ ದರ್ದು ಏನಿತ್ತು ?
ಹಾಗೆ ನೋಡಿದರೆ ನಿನಿಮಾ ಗಳಲ್ಲಿ ಸಾಹಸ ದ್ರಷ್ಯವನ್ನು ಮಾಡುವಾಗ ಅಪಘಾತ ,ಅಪಾಯ ಕಟ್ಟಿಟ್ಟ ಬುತ್ತಿಯೇ ಆದರೆ ಅದಕ್ಕೂ ಮೊದಲು ಸುರಕ್ಷತೆ ದ್ರಷ್ಟಿ ಇದ್ದೆ ಇರುತ್ತದೆ . 1996 ಲಾಕಪ್ ಡೆತ್ ಸಿನಿಮಾದ ಚೇಸಿಂಗ್ ಚಿತ್ರೀಕರಣದ ವೇಳೆ ಬೈಕ್ ಹಾರಿಸುವಾಗ ಇಬ್ಬರು ಸಾಹಸ ಕಲಾವಿದರುಗಳು ಸಾವನ್ನು ಅಪ್ಪಿತ್ತದ್ದರು ಅದನ್ನೊಂದು ಬಿಟ್ಟರೆ ಇನ್ಯಾಂದೂ ಇಂತಹ ಘಟನೆಗಳು ನಡೆದಿರಲಿಲ್ಲ ಕೂದಲೆಳೆಯ ಅಂತರದಲ್ಲಿ ಸಾವನ್ನು ಗೆದ್ದ ಬಂದದ್ದೂ ನೋವನ್ನೂ ಉಂಡದ್ದೂ ಉದಾಹರಣೆಯಾಗಿ ಸಿಕ್ಕರೂ ನಿಯಮಿತವಾಗ ರಕ್ಷಣಾ ಸರಕು ತಂತ್ರಗಳಿಂದ ಇಂತಹ ಘಟನೆ ನಡೆದಿರಲಿಲ್ಲ. ನಿನ್ನೆಯ ಘಟನೆಯಲ್ಲಿ ಪೂರ್ಣ ಪ್ರಮಾಣದ ನಿರ್ಲಕ್ಷತನ ಎದ್ದು ಕಾಣುತ್ತಿದೆ . ರೋಪ್ ,ಲೈಫ್ ಜಾಕೆಟ್, ಟ್ಯೂಬ್ ,ಬೊಟ್ ಗಳಿದ್ದಿದ್ದರೆ ಖಂಡಿತವಾಗಿಯೂ ಈ ಎರಡು ಜೀವಗಳನ್ನು ಮುಂದಿನ ಸಿನಿಮಾಗಳಲ್ಲಿ ನಾವು ಜೀವಂತವಾಗಿ ಕಣ್ತುಂಬಿಸಿ ಕೊಳ್ಳ ಬಹುದಿತ್ತು .. ಚಿತ್ರ ರಂಗದಲ್ಲಿ ಇನ್ನೆಂದೂ ಈ ತರಹದ ಘಟನೆಗಳು ಮರುಕಳಿಸದೇ ಇರಲಿ ,ಕಲಾವಿದರುಗಳೇ ತಮ್ಮ ಜೀವ ತಮ್ಮ ಕೈ ಯಲ್ಲಿ ! ಯಾರ ಮಾತಿಗೂ ಬಗ್ಗದೇ ರಿಸ್ಕ್ ಗೆ ಮುನ್ನುಗದಿರಿ ! ನಿರ್ದೇಶಕರುಗಳಿಗೆ ಎಕ್ಷ್ಕ್ಲೋಸಿವ್ ಫಿಲಂ ಮಾತ್ರ ಮುಖ್ಯ , ಕಲಾವಿದರುಗಳಲ್ಲ !! ಅಗಲಿದ ಕಲಾವಿದರುಗಳ ಆತ್ಮಕ್ಕೆ ಶಾಂತಿ ದೊರಕಲಿ , ಇನ್ನೊಮ್ಮೆ ಹುಟ್ಟಿ ಬನ್ನಿ ಎಂದೆಷ್ಟೇ ಕೇಳಬೇಕು !

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ