ಭಾನುವಾರ, ಅಕ್ಟೋಬರ್ 23, 2016

ಸವಾಲ್ ಗೆ ಜವಾಬ್ ಕೊಟ್ಟ ನ್ಯೂಸ್ ಚಾನೆಲ್ ಗಳು ! ಎಲ್ಲಿ ಯಶ್ ?ತಮ್ಮ ಬಿಸಿ ರಕ್ತದ ಪವರ್ ಇಷ್ಟೇನಾ ಯಶ್ ?!

ರಾಕಿಂಗ್ ಸ್ಟಾರ್ ಯಶ್ ಕನ್ನಡ ನಿನಿಮಾ ರಂಗದಲ್ಲಿ ಇತ್ತೀಚಿಗೆ (2007-08) ಕೇಳಿಬರುತ್ತಿರುವ ಹೆಸರು ಕಿರುತೆರೆ ಯಿಂದ ಹಿರಿ ತೆರೆಗೆ (ಬೆಳ್ಳಿ ತೆರೆಗೆ ) ನೇರವಾಗಿ ಬಡ್ತಿ ಪಡೆದು ಪಯಣವನ್ನು ಬೆಳಸಿದ ಯಶ್ ಮೊದಲ ಸಿನಿಮಾ 2007 ರಲ್ಲಿ ತೆರೆ ಕಂಡ “ಜಂಬದ ಹುಡುಗಿ”. ಮೊದಲ ಸಿನಿಮಾ ಆದರೂ ಅದು ಹೇಳ ಹೆಸರಿಲ್ಲದಂತೆ ನೆಲಕಚ್ಚಿತ್ತು ನಂತರ 2008 ರಲ್ಲಿ ತೆರಕಂಡ ಮೊಗ್ಗಿನ ಮನಸ್ಸು ಸಿನಿಮಾ ಗಾಂಧೀ ನಗರದಲ್ಲಿ ಕೊಂಚ ಸದ್ದು ಮಾಡಿದ್ದಲ್ಲದೇ ಹೆಸರು ಜೊತೆಗೆ ಉತ್ತಮ ಅಭಿನಯಕ್ಕೆ ಪ್ರಶಸ್ತಿಯನ್ನು ಅರಸಿಕೊಂಡು ಬಂದಿತ್ತು . ಇದರ ಮೂಲಕವೇ ಯಶಸ್ಸು ಕಂಡ ನಟ ಯಶ್ ತಂದ ನಂತರ ತಮ್ಮ ನಟನೆಯ ಬೆರಳಣಿಕೆಯ ಸಿನಿಮಾಗಳಲ್ಲಿ ಒಂದಷ್ಟು ಗಲ್ಲಪೆಟ್ಟಿಗೆಯಲ್ಲಿ ಹೆಸರ ಮಾಡಿದ್ದು ಸತ್ಯ. ಇಂತಿಪ್ಪ ಯಶ್ ಸಿನಿಮಾತ್ತೆರವಾಗಿಯೂ ಕಡಿಮೆ ಸಮಯದಲ್ಲೇ ಸಾಕಷ್ಟು ಕಾಂಟ್ವರ್ಸಿಯನ್ನು ಕ್ರೀಯೇಟ್ ಮಾಡಿದ ಮಹಾನುಭಾವನೂ ಹೌದು!.
ತಮ್ಮ ಸಮಕಾಲೀನ ನಟರುಗಳ ವಿರುದ್ದ ತನ್ನ ಅಸಮಾಧಾನದ ಹೊ(ಹ)ಗೆಯನ್ನು ಹೊರ ಹಾಕಿದ್ದ ಯಶ್ ನಂತರ ವಿವಿಧ ಹೋರಾಟಗಳಿಗೆ ತಾನೂ ಸೈ ಎಂದು ಎಲ್ಲಿ ಏನೇ ನಡೆದರೂ ಎಲ್ಲರಿಗಿಂತ ಒಂದು ಸ್ಟೆಪ್ ಮುಂದೆ ಹೋಗಿ ಪ್ರತಿಭಟನಾ ನಿರತನಾಗಿ ಅಣ್ತಮ್ಮ ಎನ್ನುತ್ತಾ ಜನ ಮಾನಸದಲ್ಲಿ ಮಾಸ್ತರ್ ಪೀಸ್ ಎಂದು ಗುರುತಿಸಿಕೊಂಡಿದ್ದು ಎಲ್ಲರಿಗೂ ಗೊತ್ತಿರುವುವಂತ್ತದ್ದೆ! ಯಶಸ್ಸು ಸಿಕ್ಕ ಯಶ್ ಜೊತೆಗೆ ನಟಿ ರಾಧಿಕಾಳ ಪಂಡಿತ್ ಮೊದಲ ಸಿನಿಮಾ ಮೊಗ್ಗಿನ ಮನಸ್ಸು. ಈ ಜೋಡಿಗಳು ಕೆಲವು ಸಿನಿಮಾಗಳಲ್ಲಿ ಕಪಲ್ಸ್ ಗಳಾಗಿ ಗುರುತಿಸಿ ಜೋಡಿ ಹಕ್ಕಿಗಳು ಎಂದು ಜನಪ್ರಿಯತೆ ಗೊಂಡಿದ್ದವು . ಇತ್ತೀಚಿಗಷ್ಟೇ ಮಿಷ್ಟ್ರ್ ಅಂಡ್ ಮಿಸೆಸ್ ರಾಮಾಚಾರಿ ನಿಶ್ಚಿತಾರ್ಥ ವಾಗಿ ಪಬ್ಲಿಕ್ಸಿಟಿ ಪಡೆದು ಅದರಲ್ಲೂ ಕರ್ನಾಟಕ ಬಿಟ್ಟು ಗೋವಾಕ್ಕೆ ಹೋಗಿ ಉಂಗುರ ಬದಲಾಯಿಸುವ ಅವಶ್ಯಕತೆ ಏನಿತ್ತು ಎಂದು ಸ್ವತ: ಆತನ ಅಭಿಮಾನಿಗಳೂ ಕೂಡಾ ದಂಗೆಗೆ ಎದ್ದಿದ್ದು ಹಳೆ ವಿಷಯ ! ಕಾವೇರಿ ವಿವಾದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದು,ಮಹಾದಾಯಿ ವಿಚಾರದಲ್ಲೂ ಕೂಡಾ ಉಪಸ್ತಿತಿ ತೋರ್ಪಡಿಸಿದ್ದು ಎಲ್ಲಾವನ್ನೂ ನೆನಪಿಸಬಹುದು. ಕಾವೇರಿ ವಿವಾದ ಉತ್ತುಂಗಕ್ಕೆ ಏರುತ್ತಿದ್ದ ಸಂದರ್ಭ ,ಸಿನಿಮಾ ಶೂಟಿಂಗ್ ಅಂತ ವಿದೇಶ ಪ್ರಯಾಣದಲ್ಲಿದ್ದಾಗಲೂ ತಾವೇ ಸ್ವತ :ವೀಡಿಯೊ ಮೂಲಕವೇ ಡೈಲಾಗ್ (ನಿನಿಮಾ ) ಡೆಲಿವೆರಿ ಮಾಡುತ್ತಾ ಇದ್ದ ಯಶ್ ಬಗ್ಗೆ ಕೆಲವೊಂದು ಊಹಾ ಪೋಹಾ ಹೊರ ಬೀಳುತ್ತಿತ್ತು .. ಸ್ವಾಮೀ ಕಾರ್ಯದ ಜೊತೆ ಸ್ವ ಕಾರ್ಯವನ್ನು ಮಾಡಿ ಕೊಳ್ಳುವುದು ಅಂತಾರಲ್ಲ ಹಾಗೆ ! “ಈತ ಕೆಲವ ತಮ್ಮ ಸಿನಿಮಾದ ಕಾಂಟ್ವರ್ಸಿ ಗಾಗಿ ಹೀಗೆಲ್ಲಾ ಆಡುತ್ತಿದ್ದಾನೆ “ ಅಂತಾ ಪ್ರಜ್ಞಾವಂತರ ಆಡು ನುಡಿ ಹೊರಬಿಳಲಿಕ್ಕೆ ಪ್ರಾರಂಭವಾಯ್ತೋ ಆಗ ಕೆಲವು ಟಿವಿ ಚಾನೆಲ್ ಗಳು ಡೈರೆಕ್ಟ್ ಆಗಿ ಯಶ್ ನದ್ದು ಮೊಸಳೆ ಕಣ್ಣೀರು ಎಂಬಂತೆ ಅತೀರೇಕವಾಗಿ ರಂಜಿಸಿ ನ್ಯೂಸ್ ಮಾಡೇ ಬಿಟ್ಟವು.
ಅದರಲ್ಲೂ ಪಬ್ಲಿಕ್ ಟಿವಿ ಮುಂಚೂಣಿಯಲ್ಲಿತ್ತು ಇದರಿಂದ ಕುಪಿತ ಕೊಂಡ ಯಶ್ ನ ಬಿಸಿ ರಕ್ತ ಸೆಂಟಿ ಗ್ರೇಡ್ ದಾಟಿ ಹೋಗಿತ್ತು .. ಅದರಲ್ಲೂ ಕೆಲವೊಂದು ಗೂಗ್ಲಿ ವಿಷಯಗಳನ್ನು ತನ್ನ ಮೈ ಮೇಲೆ ವಿನಾ ಕಾರಣ ಹಾಕಿ ಕೊಳ್ಳುವುದರಲ್ಲಿ ನಿಸ್ಸಿಮನಾಗಿದ್ದ ಯಶ್ ಸಿಕ್ಕಿದ್ದೆ ಚಾನ್ಸ್ ಎನ್ನುತ್ತಾ ಎಲ್ಲೋ ಕುಳಿತು ರಾಜಾ ಹುಲಿಯಂತೆ ಘರ್ಜಿಸ ತೊಡಗಿದ ನಿನಿಮಾದ ಡೈಲಾಗ್ ತರಹ ನ್ಯೂಸ್ ಚಾನೆಲ್ ಗಳಿಗೆ ಬಹಿರಂಗ ಸವಾಲ್ ಹಾಕ್ತಾನೆ !.. “ರೈತರಿಗೆ ಸಂಬಂದದಪಟ್ಟ ಕಾರ್ಯಕ್ರಮ ಮಾಡಿ ಅವರುಗಳ ಕಷ್ಟ ಕಾರ್ಪಣ್ಯ ನೆಲ ಜಲದ ವಿಚಾರ ಪ್ರೈಮ್ ಟೈಮ್ ನಲ್ಲಿ ನಡೆಯಬೇಕು ಅವರುಗಳ ಪರವಾಗಿ ಜಾಹೀರಾತು ದಿನವೀಡಿ ಪ್ರಸಾರವಾಗ ಬೇಕು ಈ ಸವಾಲ್ ಗೆ ಸೈ ಅಂದ್ರೆ ನಾನು ಯಾವುದೇ ಸಮಯದಲ್ಲಿ ಯಾದರೂ ಯವೋದೇ ಚಾನಲ್ ನಲ್ಲಿಯಾದರೂ ಪಾಲ್ಗೊಳ್ಳಲು ಶತ ಸಿದ್ದ” ಎಂದು ಇದ್ದ ವಿಡಿಯೋ ಸಂದೇಶವನ್ನು ನ್ಯೂಸ್ ಚಾನೆಲ್ ಒಪ್ಪಿದವು ಅವರುಗಳಿಗೆ ಬೇಕಾದದ್ದು ಅದೇ ! ರೊಟ್ಟಿ ಜಾರಿ ತುಪ್ಪಕ್ಕೆ ಬಿತ್ತು !.
ಸೇರಿಗೆ ಸಾವ್ವಾ ಸೇರು :ಬಿಡ್ತಾವೆಯೇ ಟಿವಿ ಚಾನೆಲ್ ಗಳು ! ಈತನ ಸವಾಲ್ ಗೆ ಜವಾಬ್ ಕೊಡಲಿಕ್ಕೆ ಟೊಂಕ ಕಟ್ಟಿ ನಿಂತ್ತಿದ್ದು ಪಬ್ಲಿಕ್ ಟಿವಿ ಮತ್ತು ಪ್ರಜಾ ಟಿವಿ ! ವೇದಿಕೆ ಸಿದ್ದವಾಯಿತು ಬಗೆ ಬಗೆ ಟಿವಿ ಪ್ರೊಮೊಗಳು ದಿನವೀಡೀ ಟಿವಿ ಪರದೆ ಮೇಲೆ ಅಲ್ಲದೇ ಸೋಶಿಯಲ್ ನೆಟ್ವರ್ಕ್ ಗಳ ಮೂಲಕ ಹರಿದಾಡಿದವು. ಯಶ್ ಕಾದಿತ್ತು ಮಾರಿ ಹಬ್ಬ :ಹಬ್ಬ ತಪ್ಪಿದ್ದರೂ ಹೋಳಿಗೆ ತಪ್ಪಲ್ಲ !! ಹೋಗಿ ಹೋಗಿ ನ್ಯೂಸ್ ಚಾನೆಲ್ ಗಳ ವಿರುದ್ದ ತೊಡೆ ತಟ್ಟುವುದೇ ? ನಿನಿಮಾ ರೀಲ್ , ನ್ಯೂಸ್ ರಿಯಲ್ !ಅರ್ಥೈಸಿ ಕೊಳ್ಳದೇ ಸುಮ್ನೆ ಒಂದೆಡೆ ತಮ್ಮ ಕೆಲಸ ಕಂಡು ಕಣ್ಣು ಕೂರೂದು ಬಿಟ್ಟೂ ಅಧಿಕ ಪ್ರಸಂಗ ಮಾಡಲು ಹೋದ ಯಶ್ ಕೊಲು ಕೊಟ್ಟು ಪೆಟ್ಟು ತಿಂದ ಅವಸ್ತೆಗೆ ಜಾರಿ ಬಿಟ್ಟಿದ್ದ . ಪ್ರೊಗ್ರಾಮ್ ಶುರು ಆದರೂ ಸ್ಟುಡಿಯೋದೊಳಗೆ ಯಶ್ ನಾಪತ್ತೆ ! ಟಿವಿಯವರ ಫೋನ್ ಕಾಲ್ ಗೆ ಇನ್ನೊಂದು ರೀತಿಯ ಡೈಲಾಗ್ ಗಳ ಸುರಿಮಳೆ ! ಬೇಕಿತ್ತಾ ಇದೆಲ್ಲಾ ,? ಏನೇ ಇರಲಿ ಮುಂದೇನು ಕಾದು ನೋಡೋಣ ! ಎಂಜಾಯ್ ಮಾಡೋಣ !ಒಟ್ಟಾರೆ ಸೆಲೆಬ್ರಿಟಿ ಗಳು ಹೇಗೆ ಮಾಡಿದ್ದರೂ ಚೆಂದ ಅಲ್ವೇ ಅದನ್ನೆಲ್ಲಾ ವಿಮರ್ಶೆ ಮಾಡುವ ನಾವುಗಳು ಮಾತ್ರ ಇಂಗು ತಿಂದ ಮಂಗಗಳು ಅಷ್ಟೇ ! ಏನಂತೀರಿ ? ನನ್ನ ಓಡಲಧ್ವನಿಯ ಇದು -ಕೊನೆಯದಾಗಿ ಕಟ್ಟ ಕಡೆಯಲ್ಲಿ ಮೂಡುವುದು ಒಂದೇ ಪ್ರಶ್ನೆ “ತಮ್ಮ ಬಿಸಿ ರಕ್ತದ ಪವರ್ ಇಷ್ಟೇನಾ ಯಶ್ ?!”

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ