ಗುರುವಾರ, ಆಗಸ್ಟ್ 20, 2015

ಅಣ್ಣನಿಗೆ ಊಟ ತಮ್ಮನಿಗೆ ಉಪವಾಸ !!

ಹೀಗೊಂದು ನ್ಯಾಯದ ವ್ಯವಸ್ಥೆ ನಮ್ಮ ದೇಶದಲ್ಲಿ ಕಾಣುತ್ತಿರುವುದು ನಮಗೆ ಅಚ್ಚರಿ ಅನ್ನಿಸಿದರೂ ಇದನ್ನು ಅರಗಿಸಿ ಕೊಳ್ಳಲೇ ಬೇಕು. ನ್ಯಾಯಾಲಯ ಅಂದ ಕೂಡಲೇ ಮನಸ್ಸಿನ ಮೂಲೆಯಲ್ಲಿ ಮೊಳಕೆ ಒಡೆಯುತ್ತದೆ , ನ್ಯಾಯ ಮರಿಚಿಕೆ ಅಸತ್ಯ. ಅನ್ಯಾಯ !!.. ರಾಜಕೀಯದ ಪ್ರಭಾವಿಗಳಿಗೆ , ಹಣವಂತರಿಗೆ ಮಾತ್ರ ಎಂಬೀತ್ಯಾದಿ ವಿಷಯಗಳು ಹಾದು ಹೊಗುತ್ತದೆ. ವಾಸ್ತವಕ್ಕೆ ಅರ್ಹವೂ ಕೂಡಾ ಹೌದು.. ಆದರೆ ಇಂತಹ ವಿಚಾರಗಳು ವ್ಯಕ್ತಿಗತ ವಯಕ್ತಿಕ ವಿಚಾರಗಳಲ್ಲಿ ಕಂಡು ಬರುವುದು ಸರ್ವೇ ಸಾಮಾನ್ಯವಾದರೂ , ಸಾಮಾಜಿಕವಾಗಿ ಪ್ರಜಾಪ್ರಭುತ್ವ ವ್ಯವಸ್ತೆಯಲ್ಲಿ ಸಮಾಜಕ್ಕೆ ಸಹಾಯವಾಗುವಂತಹ ನಾಲ್ಕಕ್ಕೆ ಮೂರು ಅನುಪಾತದಲ್ಲಿರುವ ವಿಚಾರಕ್ಕೆ ಸಾಮಾಜಿಕ ಬದ್ದತೆಗೆನುಗುಣವಾಗಿ ತೀರ್ಪುನೀಡಬೇಕು ,ನೀಡತಕ್ಕದ್ದು ಕೂಡಾ,ಭಾರತೀಯ ಸಂವಿಧಾನದ ಪ್ರಕಾರಗಳಲ್ಲಿದೆ ಆದರೆ ಆಧುನಿಕ ದಿನಗಳಲ್ಲಿ ಕೆಲವೋಂದು ವಿಚಾರಗಳಲ್ಲಿ ಕೋರ್ಟ್ ತೀರ್ಪು ಎಷ್ಟು ಕುಲಕೆಟ್ಟು ಹೋಗಿದೆ ಎಂದರೆ .. ?ನಿಜಕ್ಕೂ ಅಸಹ್ಯ.. ಇಲ್ಲದಿದ್ದರೆ ಕಂಬಳವನ್ನು ನಿಷೇಧಿಸುದೆಂದರೆ ? ಕಂಬಳ ನಿಷೇಧಿಸಲಿ ಇದರಿಂದ ಕೋಣಗಳಿಗೆ ಹಿಂಸೆಯಾಗುತ್ತದೆ ಎಂದು ಪ್ರಾಣಿದಯಾ ಸಮಿತಿಯ ಸದಸ್ಯರಂತೆವಾದ ಮಾಡುವ ವಕೀಲ ಮಹಾಪ್ರಭುಗಳಿಗೆ ಗೋಹತ್ಯೆ ಕಾಣಿಸುತ್ತಿಲ್ಲವೇ..? ಕುದುರೆ ಸವಾರಿ ಪ್ರಾಣಿ ಬಲಿ ಇವುಗಳೆಲ್ಲಾ ಸವೋಚ್ಚನ್ಯಾಯಲಯದ ಕಣ್ಣಿಗೆ ಬಿದ್ದಿಲ್ಲವೇ ? ಕೇವಲ ಕಂಬಳವನ್ನು ನಿಷೇಧಿಸುವುದರ ಗುಟ್ಟೀನು ? ಕರಾವಳಿಯ ತಲೆ ತಲಾಂತರ ದಿಂದ ನಡೇದು ಕೊಂಡು ಬರುತ್ತಿರುವ ಇತಿಹಾಸಭರಿತ ಸಾಂಪ್ರದಾಯಿಕ ಕ್ರೀಡೆ ಕಂಬಳಕ್ಕೆ ಅದರದ್ದೇಯಾದ ಒಂದು ಘನತೆ ಗೌರವ ವಿದೆ ವೈಶಿಷ್ಟತೆ ಇದೆ. ಭಾರತೀಯ ಸಂಸ್ಕ್ರತಿಯ ಕಣಜದಲ್ಲಿ ಸ್ಥಾನವನ್ನು ಪಡೆದು ಕೊಂಡಿರುವ ಇದರಲ್ಲಿ ಸ್ಪರ್ದಾತ್ಮಕತೆ ಬಂದಾಗ ಕೊಂಚ ಕೋಣಗಳು ನೋವನ್ನು ಉಣ್ಣುವುದು ಸಹಜ.. ಅದು ಅದನ್ನು ಒಡಿಸುವವವ ಪ್ರೀತಿಯ ಮಾರ್ಗದರ್ಶನದ ನೋವಾಗಿರುತ್ತದೇಯೆ ವಿನಾ: ಇದು ಹಿಂಸೆ ಎಂದು ಬಿಂಬಿತವಾಗಲ್ಲ. ಹೆತ್ತ ಮಕ್ಕಳಿಗೆ ಪೊಷಕರುಗಳು,ಗುರುಗಳು ಹೇಗೆ ತಿದ್ದಿತೀಡಿ ಆತ/ಆಕೆಯನ್ನು ಸಮಾಜದಲ್ಲಿ ಗುರುತಿಸಿ ಕೊಳ್ಳುವಂತೆ ಮಾಡುತ್ತಾರೋ ಅದೇ ಅರ್ಥವನ್ನು ಕಂಬಳದಲ್ಲ್ಲಿ ಕೋಣವನ್ನು ಒಡಿಸುವವದ್ದು ಆಗಿರುತ್ತದೆಅದೇನೇ ಇರಲಿ ಕಂಬಳ ನಿಷೀಧಿಸಲಿ ಅದರ ಬಗ್ಗೆ ನನ್ನ ನೇರನಿಲುವು ಇದೆ ಆದರೆ ಅದರ ಅಣ್ಣನಂತಿರುವ ಗೋಹತ್ಯೆಯನ್ನು ನಿಷೀಧಿಸಲಿ.. ಅದನ್ನು ಬಿಟ್ಟು ಅಣ್ಣನಿಗೆ ಬಾಳೆ ಎಲೆ ನೀಡಿ ತಮ್ಮನಿಗೆ ಉಪವಾಸ ಕೆಡುಹುವ ನ್ಯಾಯಲಯದ ಅನ್ಯಾಯದ ವ್ಯವಸ್ತೆಗೆ ನನ್ನ ದಿಕ್ಕಾರ .... ದಿಕ್ಕಾರ ಇದೆ!!!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ