ಗುರುವಾರ, ಆಗಸ್ಟ್ 20, 2015
ಭಜರಂಗಿ ಭಾಯ್ ಜಾನ್; ನನಗೆ ಇಷ್ಟ ಆದ ಒಂದೊಳ್ಳೆ ಸಿನಿಮಾ ..
ಸಾಕಷ್ಟು ಸಮಯಗಳ ನಂತರ ಬಾಲಿವುಡ್ ನಿನಿಮಾಂಗಳದಲ್ಲಿ ಒoದೊಳ್ಳೆ ಸಿನಿಮಾ ನೋಡಿದ ಸಂತ್ರಪ್ತಿ , ಸಂತೋಷ ಸಿಕ್ಕಿದೆ. ವರ್ಷದಿಂದ ವರ್ಷಕ್ಕೆ ಹಿಟ್ ಮೇಲೆ ಹಿಟ್ ನಿನಿಮಾ ಕೊಡುತ್ತಾ ಬಂದಿರುವ ಬ್ಯಾಡ್ಬಾಯ್ ಸಲ್ಮಾನ್ ಖಾನ್ ಅಭಿನಯದ ಭಜರಂಗಿ ಭಾಯ್ ಜಾನ್ ..ನಿಜಕ್ಕೂ ಇದುವರೆ ಅಭಿನಯಿಸಿದ ಎಲ್ಲಾ ಸಿನಿಮಾಗಳಿಗಿಂತ ಇದು ಅದ್ಭುತ,ಆಮೋಘ ಎನ್ನುವುದರಲ್ಲಿ ಎರಡು ಮಾತಿಲ್ಲ.ನಿರ್ದೇಶಕ ಕಭೀರ್ ಖಾನ್ ಗೆದ್ದಿದ್ದಾರೆ, ಒಂದೊಳ್ಳೆ ಸಿನಿಮಾವನ್ನು ಈದ್ ಗೆ ಉಣಬಡಿಸಿದ್ದಾರೆ. ಮೊಟ್ಟ ಮೊದಲ ಬಾರಿಗೆ ಸ್ಯಾಂಡಲ್ವುಡ್ ನಿರ್ಮಾಪಕರೊಬ್ಬರು ಬಾಲಿವುಡ್ ನಿನಿಮಾಕ್ಕೆ ಬಂಡವಾಳ ಸುರಿಸಿ ಸದಭಿರುಚಿಯ ಸಿನಿಮಾ ಕೊಟ್ಟ ಧೀರ ರಾಕ್ ಲೈನ್ ವೆಂಕಟೇಶ್ ಧನ್ಯರು . ಕಾಲ್ಪನಿಕ ಕಥಾಹ0ದರವನ್ನು ಹೊಂದಿರುವ ಚಿತ್ರ ನಿಜಕ್ಕೂ ವಾಸ್ತವದ ಜಗತ್ತಿನ ಒಳ ಹೊರಣವನ್ನು ತಂದು ಕಣ್ಮು0ದೆನಿಲ್ಲಿಸುತ್ತದೆ. ಒಂದೆ ಎಳೆ ಯಲ್ಲಿ ಹೇಳಬೇಕೆಂದರೆ ಹಿಂದೂಸ್ಥಾನದ ನೆಲದಲ್ಲಿ ಪಾಕಿಸ್ಥಾನದ ದಂಪತಿಯ 6 ವರ್ಷದ ಮುಗ್ದೆ ಮುಖಿ ಬಾಲೆ ಶಾಯಿದಾ ಟ್ರೈನ್ ನಲ್ಲಿ ಮಿಸ್ ಆದವಳನ್ನು ಅವಳ ಹುಟ್ಟೂರು ಪಾಕಿಸ್ತಾನಕ್ಕೆ ಆವಳ ತಾಯಿಯ ಮಡಿಲಿಗೆ ಸೇರಿಸುವಲ್ಲಿ ನಾಯಕ ಪಡಬೇಕಾದ ಶ್ರಮ ಇಕ್ಕಟ್ಟು– ಬಿಕ್ಕಟ್ಟು, ಕಷ್ಟ –ನಷ್ಟ, ಛಲ- ಬಲ ಒತ್ತಡದ ಹಿಂದಿರುವ ಸಂಪೂರ್ಣ ಕಹಾನಿ ಇದು. ಸಲ್ಮಾನ್ ಖಾನ್ ಮತ್ತು ಹರ್ಷಾಲಿ ಮಲ್ಹೋತ್ರ ನಡುವಿನ ಭಾವನಾತ್ಮಕ ಸನ್ನಿವೇಶಗಳು ಮನಮುಟ್ಟುತ್ತದೆ , ತಾಯಿ-ಮಗಳ ಅನುಬಂಧ ಒಳಗೊಂಡ ಒಂದೊಳ್ಳೆ ಸುಂದರ ಸಾಂಸಾರಿಕ ಸಾಮಾಜಿಕ ಚತ್ರ ಭಜರಂಗಿ ಭಾಯ್ ಜಾನ್ !
ಭಜರಂಗಿ(ಹನುಮಂತನ) ಭಕ್ತನಾಗಿ ಸಲ್ಮಾನ್ (ಪವನ್ ) ಉತ್ತಮವಾಗಿ ಅಭಿನಯಿಸಿದ್ದಾರೆ. ಇಂತಹ ಶಿಸ್ತು ಶ್ರದ್ಧೆ,ಯೋಗ್ಯತೆಯ ಆಳ್ತನಕ್ಕೆಈ ಪಾತ್ರ ಸಲ್ಮಾನ್ ಗೆ ಬಿಟ್ಟರೇ ಬೇರೆ ಯಾರೂ ಸಹಾ ಜೀವಕಳೆ ತುಂಬಲಾರರು ಎಂಬ0ತೆ ಅಭಿನಯದ ನವರಸ ಧಾರೆ ಹರಿದು ಬಂದಿದೆ ಎಂದರೂ ಅತಿಶಯೋಕ್ತಿಯಾಗಲಾರದು . ನಾಯಕಿ ಕರೀನಾ ಕಪೂರ್ ಪಾತ್ರಕ್ಕೆ ಮೋಸ ಮಾಡಿಲ್ಲ ಸಂಪ್ರದಾಯಸ್ಥ ಮನೆತನದ ಹುಡುಗಿಯಾಗೆಯೇ ತೋರಿದ್ದಾರೆ ಎಲ್ಲಾಕ್ಕಿಂತಾ ಹೆಚ್ಚಾಗಿ ಪಾಕಿಸ್ಥಾನದ ಟಿವಿ ರಿಪೋರ್ಟರ್ ನ ಪಾತ್ರ
(ನವಾಜುದ್ದಿನ್ ಸಿದ್ದಿಕಿ ) ನಿಜಕ್ಕೂ ಮನ:ಪಟಲದಲ್ಲಿ ಹಚ್ಚಳಿಯದೇ ಉಳಿಯುವಂತೆ ಮಾಡುತ್ತದೆ. ಪ್ರಜಾ ಪ್ರಭುತ್ವದ ನಾಲ್ಕನೇ ಅoಗವಾಗಿರುವ ಪತ್ರಿಕೋದ್ಯಮದಲ್ಲಿ ಇಂತವರು ಸಿಗುವುದು ಸಿನಿಮಾದಲ್ಲಿ ಮಾತ್ರವೇನೋ ಎಂಬಂತೆ ಬಾಸವಾಗದೇ ಇರದು ಏನೇ ಇರಲಿ ಪ್ರಜೆಗಳಿಗೆ ನ್ಯಾಯ ಒದಗಿಸಿ ಪ್ರಭುಗಳ ಕಿವಿ ಹಿಂಡುವ ಪ್ರತಿಪಾದಕನಂತೆ ಕಂಡುಬರುವ ಚಾನಲ್ ಒಂದರ ಪತ್ರಕರ್ತ ನಿಜಕ್ಕೂ ಪಾಕಿಸ್ತಾನ ಭುವಿಯಲ್ಲಿ ಗೊಂದಲದಲ್ಲಿ ಸಿಲುಕುವ ನಾಯಕನಿಗೆ ಉಪಕಾರಿಯಾಗಿ ಪುಟಾಣಿ ಬಾಲೆಯನ್ನು ಅಮ್ಮನ ಮಡಿಲಿಗೆ ಸೇರಿಸುವರಿ0ದ ಹಿಡಿದು ನಾಯಕನ ವ್ಯಕ್ತಿತ್ವ ಜಾಗಜಾಹಿತಾಗುವಲ್ಲಿ ಕಾರಣಿ ಬೂತನಾಗುತ್ತಾನೆ.ಭಜರಂಗಿ ಭಕ್ತನಾಗಿ ಹೋದಲ್ಲೆಲ್ಲಾ ಸತ್ಯವನ್ನೇ ಹೇಳತ್ತಾ ನೇರ ನಿಲುಮೆಯ ಛಲದ ಪಥದಲ್ಲಿ ಸಾಧನೆಯ ದಿಕ್ಕನ್ನು ಅರಸುವ ಈತನ ಸೇವೆ ಸಾರ್ಥಕತೆ ಸ್ವಾರ್ಥಪರತೆಯ ಸರಳ ಸಜ್ಜನಿಕೆಗೆ ಉಭಯ ದೇಶದ ಪ್ರಜೆಗಳು ಕ್ಲೀನ್ ಬೋಲ್ಡ್ ಆಗುವುದರ ಜೊತೆಗೆ ಸಹಾಯ ಹಸ್ತದ ಬೆಂಬಲ , ಮಾತು ಬಾರದ ಪುಟಾಣಿ ಕ್ಲೆಮೆಕ್ಸ್ ನಲ್ಲಿ ಅಂಕಲ್ ಎಂದು ಕೆರೆದು ಜೈ ಶ್ರೀ ರಾಮ್ ಎನ್ನುವ ಉಕ್ತಿ ಹೊರ ಹಾಕುವ ದ್ರಶ್ಯ ಅತ್ತ ಕಡೆ ಬೇಸರದಿಂದ ಬೀಳ್ಕೊಡುವ ಪಾಕಿಸ್ತಾನಿಗಳು ಇತ್ತ ಈತನ ಸಾಹಸಕ್ಕೆ ಸಂಬ್ರಮದಿಂದ ಸ್ವಾಗತ ಬಯಸಲು ನಿಂತಿರುವ ಹಿಂದೂಸ್ಥಾನಿಗಳು.ನಾಯಕಿ ಆನಂದ ಬಾಷ್ವ ಕ್ಲೆಮೆಕ್ಸ್ ಕೊನೆಗೊಳ್ಳುತ್ತದೆ. ಗಡಿ ಪ್ರದೇಶದಲ್ಲಿನ ತಲ್ಲಣ ತಟ–ವಟ, ಕಾಶ್ಮೀರದ ಸುಂದರ ಪ್ರಕ್ರತಿಯ ಹಸಿರು ಹೊದಿಕೆ ಚಿತ್ರಣ ,ಬಿಳಿ ಮೋಡಗಳ ಗ್ರಾಫಿಕ್ಸ್ ಉತ್ತಮ ಸ್ಕ್ರಿಪ್ಟ್, ಲೋಕೆಶನ್, ಎಲ್ಲವೂ ಮನಸ್ಸಿಗೆ ಮುದ ನೀಡುತ್ತವೆ.
ಫಸ್ಟ್ ಹಾಪ್ಹ್ ಹಾಸ್ಯದ ಹೊನಲಿನಲ್ಲಿ ನಕ್ಕು ನಕ್ಕು ಸುಸ್ತಾದ ಚಿತ್ರಪ್ರೇಮಿಗಳಿಗೆ ಸೆಕೆಂಡ್ ಹಾಫ್ ಕಣ್ಣಂಚಿನಲ್ಲಿ ಕಣ್ಣೀರು ತನಗರಿಯದ೦ತೆ ಜಿನಿಗಿಸುವುದರಲ್ಲಿ ನಿರ್ದೇಶಕ ಕಬೀರ್ ಜಾಕಚಕ್ಯತೆಯನ್ನು ಮರೆದಿದ್ದಾರೆ. ಓಟ್ತಾರೆ ಹೊಡಿ,ಬಡಿ,ಕಡಿ,ರಕ್ತಪಾತ,ಬಿಚ್ಚಾಟ –ಕಚ್ಚಾಟಗಳಿಲ್ಲದ, ಸಂಸಾರ ಸಮೇತರಾಗಿ ಕುಳಿತು ನೋಡ ಬಹುದಂತ ,ಯಾವುದೇ ಒಂದು ಸಮುದಾಯದ,ಸಂಬಂದ ಸಾಮರಸ್ಯಕ್ಕೆ ಎಡೆಮಾಡಿ ಕೊಡದೇ ಮೂಡಿ ಬಂದ ಭಜರಂಗಿ ಭಾಯ್ ಜಾನ್ ಚಿತ್ರ ನಂಗೆ ಇಷ್ಟವಾಗಿದೆ.
.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)

ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ