ಬುಧವಾರ, ಜುಲೈ 28, 2021
ಇದೆಂತಾ ನ್ಯಾಯ ಪರ ಹೋರಾಟ ಇಂದ್ರಜಿತ್ ಲಂಕೇಶ್ ಅವರೇ ??
ಹೌದು.! ಅದೇ ಇಂದ್ರಜಿತ್ ಲಂಕೇಶ್ !! ಕಳೆದ ವರ್ಷ ಡ್ರಗ್ಸ್ ವಿವಾದ ಬಗ್ಗೆ ಗಮನ ಸೆಳೆದಿದ್ದ ನಿರ್ದೇಶಕ, ಪತ್ರಕರ್ತ ಇಂದ್ರಜಿತ್ ಲಂಕೇಶ್ ಮತ್ತೆ ಗಮನ ಸೆಳೆಯುತ್ತಿದ್ದಾರೆ .ಕಳೆದ ಒಂದು ವಾರದಿಂದ ನಟ ದರ್ಶನ್ ವಿಚಾರಕ್ಕೆ ಉಪ್ಪು, ಹುಳಿ, ಖಾರ ಬೆರಿಸಿ ವಿವಾದಕ್ಕೆ ಕಾರಣೀಭೂತ ರಾಗಿದ್ದಾರೆ. ಸಾಮಾನ್ಯರಿಗೆ ನ್ಯಾಯ ದೊರಕಬೇಕು ಎಂದು ಡೈಲಾಗ್ ಹೊಡೆಯು ಲಂಕೇಶ್ ಲಂಕೇಶ್ ಸೆಲೆಬ್ರಿಟಿಗಳ ಹಿಂದೆ ಬೀಳುವ ಉದ್ದೇಶ ಅರ್ಥವಾಗುತ್ತಿಲ್ಲ .ನಿಜವಾಗಿಯೂ ಉತ್ತಮ ಅತ್ಯುತ್ತಮ ಕಾರ್ಯ .ಒಬ್ಬ ಪತ್ರಕರ್ತನಾಗಿ ಸಮಾಜದ ಬಗ್ಗೆ ಆಲೋಚಿಸುವುದು, ಅಂಕು -ಡೊಂಕು ತಿದ್ದುವ ಪ್ರಯತ್ನಕ್ಕೆ ಕೈ ಹಾಕಿರುವುದು ಅದ್ಬುತ ಕಾರ್ಯ ಆದರೆ ಅದ್ಯಾಕೋ ನಿನಿಮಾ ಮಂದಿಯನ್ನೇ ತನಗೆ ಆಗದವರನ್ನು ಟಾರ್ಗೆಟ್ ಮಾಡುವ ನೀತಿ ಸರಿಯಲ್ಲ .
ಕಳೆದ ಬಾರಿ ಡ್ರಗ್ಸ್ ವಿಚಾರದಲ್ಲಿ ಸಿನಿಮಾ ಮಂದಿಗಳು ಭಾಗಿಯಾಗಿದ್ದಾರೆ ಎಂದು ಸಮಾಜ ಹೋರಾಟಗಾರ ಪ್ರಶಾಂತ್ ಸಂಭರ್ಗಿ ಜೊತೆ ಒಂದಿಷ್ಟು ವಿವರಗಳನ್ನು ಬಹಿರಂಗ ಪಡಿಸಿದ್ದರು. ಸಾಕ್ಷಿ ,ಪುರಾವೆಗಳನ್ನ ಸಿಸಿಬಿ ಒದಗಿಸಿದ್ದರು. ಕೆಲವು ನಟ -ನಟಿಯರು ಸೇರಿದಂತೆ ಒಂದಷ್ಟು ಕಲಾವಿದರುಗಳನ್ನು ವಿಚಾರಣೆಗೆ ಒಳಪಡಿಸಿ ಸಿಸಿಬಿ ಟೀಮ್ ಕೈ ತೊಳೆದು ಕೊಂಡಿತ್ತು. ನಟಿ ಸಂಜನಾ ಮತ್ತು ರಾಗಿಣಿಯನ್ನು ಬಂಧಿಸಿ ಬಿಡುಗಡೆ ಮಾಡಿ ಅಲ್ಲಿಗೆ ಡ್ರಗ್ಸ್ ವಿಚಾರ ಅಂತ್ಯ ಗೊಂಡಿತ್ತು. ತತ್ಸಮಯದಲ್ಲಿ ಮಾಧ್ಯಮಗಳ ಮುಂದೆ ಪ್ರತ್ಯಕ್ಷಗೊಂಡ ಇಂದ್ರಜಿತ್ ಲಂಕೇಶ್ ಸಿಸಿಬಿ ಯಿಂದ "ಪಾರದರ್ಶಕ ವಿಚಾರಣೆಯಾಗಿಲ್ಲ ಅಪರಾಧಿಗಳಿಗೆ ಶಿಕ್ಷೆ ಕೊಡಲಿಲ್ಲ ನಾನು ಕೊಟ್ಟ ಲಿಸ್ಟ್ ಲ್ಲಿರಿರುವವರ ವಿಚಾರಣೆ ಆಗಿಲ್ಲ" ಎಂದು ಆರೋಪಿಸಿದ್ದರು .ರಾಜಕೀಯ ,ಹಣ ಬಲಗಳ ನಡುವೆ ಯಾಸ್ ಯುಸುವಲ್ ಮುಚ್ಚಿ ಹೋಗಿದ್ದು ದಿಟ !
ಈ ಎಲ್ಲಾ ಪ್ರಕರಣದ ಬಳಿಕ ಎಲ್ಲೂ ಇಂದ್ರಜಿತ್ ಲಂಕೇಶ್ ಮೇಲೆ ಒಂದಷ್ಟು ಜನರಿಗೆ ಅಭಿಮಾನ ಹುಟ್ಟಿತ್ತು , ಹೆಚ್ಚಿತ್ತು .ಒಂದೊಳ್ಳೆ ಸಮಾಜ ಮುಖಿ ಕಾರ್ಯಕ್ಕೆ ಮೆಚ್ಚುಗೆಯೂ ವ್ಯಕ್ತವಾಗಿತ್ತು .
ಇದೀಗ ಮತ್ತೆ ಸುದ್ದಿಯಾಗಿದ್ದಾರೆ ಇಂದ್ರಜಿತ್ ಲಂಕೇಶ್ . ನಟ ದರ್ಶನ್ ತೂಗುದೀಪ್ ಮತ್ತು ನಿರ್ಮಾಪಕ ಉಮಾಪತಿ ಹಾಗೂ ಅರುಣಾಕುಮಾರಿ ನಡುವೆ ನಡೆಯತೇನ್ನೆಲಾದ ೨೫ ಕೋಟಿ ವಿಚಾರದಲ್ಲಿ ದರ್ಶನ ಶೂರುಟಿ ಹಾಕಿದ್ದಾರೆ ಎಂಬಲ್ಲಿಂದ ಶುರುವಾಗಿತ್ತು.ದರ್ಶನ್ ಅರಿವಿಗೆ ಬರದೇ ವಿಚಾರ ಬಹಿರಂಗವಾದ ಬಳಿಕ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿಬಿಡುತ್ತಾರೆ . ನಿರ್ಮಾಪಕ ಉಮಾಪತಿಯವರ ಕಿತಾಪತಿ ಇದರಲ್ಲಿ ಮೇಲ್ನೋಟಕ್ಕೆ ಎದ್ದು ಕಾಣುತ್ತಿದ್ದರೂ , ಉಮಾಪತಿ ಅದನ್ನು ಮುಚ್ಚಿ ಹಾಕಲು ಬೇರೆ-ಬೇರೆ ಸ್ಟೇಟನ್ಮೆಂಟ್ ಕೊಡಲು ಪ್ರಾರಂಭಿಸುತ್ತಾರೆ . ದೊಡ್ಮನೆಯ ಜಮೀನು ,ಸಂದೇಶ್ ನಾಗರಾಜ್ ಹೋಟೆಲ್ ಕಥೆ . ಇದೆಲ್ಲವೂ ಹರಿದಾಡಲು ಪ್ರಾರಂಭಿಸಿಬಿಟ್ಟಿತು . ವಿಚಾರ ೨೫ ಕೋಟಿ ರೂಪಾಯಿ ಆದರೆ ಇನ್ನಿತರ ವಿಚಾರಗಳು ತೇಲಿ ವಿವಾದಗಳೇ ಸ್ರಷ್ಟಿಯಾದವು. ಇತ್ತ ಇಂದ್ರಜಿತ್ ಲಂಕೇಶ್ ಕೂಡ ಈ ಮ್ಯಾಟರ್ ಗೆ ಎಂಟ್ರಿಯಾಗುತ್ತಾರೆ . "ಹೋಟೆಲ್ ನಲ್ಲಿ ಹಲ್ಲೆ ಆಗಿದ್ದು ನಿಜ ,ತನ್ನ ಫಾರ್ಮ್ಹೌಸ್ ಗೆ ಕರೆಸಿಕೊಂಡ ಮಹಿಳೆ ಯಾರು ? ನನ್ನಲ್ಲಿ ಆಡಿಯೋ ಇದೆ ,ದರ್ಶನ್ ಗೂಂಡಾಗಿರಿ ಮಾಡುತ್ತಾರೆ "ಅದೂ ಇದೂ , ಇಲ್ಲ ಸಲ್ಲದನೆಲ್ಲವನ್ನೂ ಪತ್ರಿಕಾಗೋಷ್ಠಿ ಕರೆದು ಉಸುರುತ್ತಾರೆ . "ದರ್ಶನ್ ಗೂಂಡಾಗಿರಿ ಮಾಡುವುದು ಸರಿಯಲ್ಲ ಒಬ್ಬ ಹೋಟೆಲ್ ಸಪ್ಲೆಯರ್ ಹೊಡೆದಿದ್ದು ತಪ್ಪು ಸಾಮಾನ್ಯ ಜನರಿಗೆ ನ್ಯಾಯ ದೊರಕಬೇಕು ಎಂಬ ಉದ್ದೇಶ ಮಾತ್ರ ನನಗಿದೆ ಎನ್ನುತ್ತಾರೆ .
ಹೌದು ! ದರ್ಶನ ತಪ್ಪು ಮಾಡಿದ್ದೇಯಾದರೇ ಅವರಿಂದ ಹಲ್ಲೆಗೊಳಗಾದವರು ಪೊಲೀಸರಿಗೆ ದೂರು ನೀಡಬೇಕಾಗಿತ್ತು . ಅಥವಾ ಅವರೇ ಮುಖ್ಯವಾಹಿನಿಗೆ ಬಂದು ಹೇಳಬಹುದಿತ್ತು . ಅದು ಆಗಿಲ್ಲಾ . ಆಹಾರ ತಡವಾಗಿ ಬಂದಿದ್ದಕ್ಕೆ ಬೈದಿದ್ದಾರೆ ಅನ್ನುವುದು ದರ್ಶನ್ ಜೊತೆಗಿದ್ದವರ ಉತ್ತರ . ಒಬ್ಬ ಸಲೆಬ್ರಿಟಿಯಾಗಿ ಆಹಾರ ತಡವಾಗಿ ಬಂದಿದ್ದಕ್ಕೆ ಕೋಪದಲ್ಲಿ ಜಸ್ಟ್ ತಲೆ ಮೇಲೆ ಹೊಡೆದಿರಬಹುದು ಎಂಬ ಮಾತು ಇದೆ ಅದು ಪ್ರೀತಿಯಿಂದ ಸವರಿರಬಹುದು ಮಾರಣಾಂತಿಕವಾಗಿ ಹಲ್ಲೆ ಮಾಡಿಲ್ಲ ಪ್ರೀತಿಯಿಂದ ಯಾವಾಗಲೂ ಸರ್ವ್ ಮಾಡುವ ಆತ ಅದರಿಂದ ಆತನಿಗೇನೂ ದುಃಖವಾಗಿಲ್ಲ ಸುಖ -ಸುಮ್ಮನೆ ಕಪೋಲ ಕಲ್ಪಿತ ಆರೋಪ ಮಾಡುತ್ತಿದ್ದಾರೆ ಎಂದೇಳುವ ದರ್ಶನ್ ಮಾತಿನಲ್ಲಿ ಅರ್ಥವಿದೆ .
ಫಾರ್ಮ್ಹೌಸ್ ಗೆ ಬಂದ ಮಹಿಳೆ , ಪತ್ನಿಯ ಮೇಲಿನ ಹಲ್ಲೆ ಬೂತಕಾಲದಲ್ಲಿನ ವಿಚಾರ ಎತ್ತಿ ಹಿಡಿಯುವ ಇಂದ್ರಜಿತ್ ಗೆ ಪ್ರಜ್ಞಾವಂತರು ಹೇಳುವುದು ಇಷ್ಟೇ , ಇದು ಅವರ ಖಾಸಗಿ ವಿಚಾರವಲ್ಲವೇ ? ಇದರಿಂದ ಸಮಾಜಕ್ಕೆ ಕಂಟಕ ತರುವಂತ ಸಂದೇಶ ವಿದೆಯೇ ? ಇದ್ದರೂ ,ಕೇವಲ ದರ್ಶನ್ ತೂಗುದೀಪ್ ಮಾತ್ರ ಅರ್ಹರೇ ?ದೊಡ್ಡ ಸೆಲೆಬ್ರಿಟಿಗಳು ಇಂತಹ ತಪ್ಪು ಮಾಡಿಲ್ಲವೇ ? ದರ್ಶನ್ ನ ನೆಗೆಟಿವ್ ಪಾಯಿಂಟ್ ನ್ನು ಮಾತ್ರ ಉಸುರುವ ಇಂದ್ರಜಿತ್ ಲಂಕೇಶ್ ಅವರ ಒಳ್ಳೆಯ ಕಾರ್ಯವನ್ನು ಸಮಾಜಕ್ಕೆ ಬಹಿರಂಗ ಪಡಿಸಿ, ಇತ್ತೀಚೆಗೆ ಕರೋನಾ ಕಾಲ ಘಟ್ಟದಲ್ಲಿ ವಾರಿಯರ್ ಆಗಿ ಕೆಲಸ ಮಾಡಿದ್ದು ,ಆಹಾರ ಕಿಟ್ ಒದಗಿಸಿದ್ದರಿಂದ ಹಿಡಿದು ಸಮಾಜ ಮುಖಿ ಕಾರ್ಯ ದರ್ಶನ್ ನಿಂದ ಆಗಿದೆ ಅದ್ಯಾಕೆ ಇವರ ಕಣ್ಣಿಗೆ ಕಾಣಿಸುದಿಲ್ಲ ? ಒಬ್ಬ ಬಡ ವ್ಯಕ್ತಿಗೆ ನ್ಯಾಯ ದೊರಕಿಸಿ ಕೊಡಬೇಕೆಂದು ನಾನು ನ್ಯಾಯ ಪರವಾಗಿ ದರ್ಶನ ವಿಚಾರ ಎತ್ತಿದ್ದೇನೆ ಎಂದು ಹೇಳುವ ಇಂದ್ರಜಿತ್ ಗೆ ಕೇವಲ ದರ್ಶನ ನಿಂದ ಹಲ್ಲೆ ಗೊಳಗಾಗಿರುವ ಮಾತ್ರ ಕಣ್ಣಿಗೆ ಕಾಣಿಸುವುದೇ ?ಇತ್ತೀಚಿಗೆ ಮಾನ್ಯ ಉಪಮುಖ್ಯ ಮಂತ್ರಿ ಮಗನ ಕಾರು ಅಪಘಾತ ದಿಂದ ಒಬ್ಬ ಬಡ ರೈತ ಕೊನೆಯುಸೀರು ಎಳೆದಿದ್ದು ಕಾಣಿಸಲಿಲ್ಲವೇ ಹೀಗೆ ಹಲವಾರು ಉದಾಹರಣೆಗಳನ್ನ ಕೊಡಬಹುದು .ನಿಮ್ಮ ಸಮಾಜದ ಕಳಕಳಿಗೆ ಗೌರವವಿದೆ ಆದರೆ ಒಬ್ಬರನ್ನು ಟಾರ್ಗೆಟ್ ಮಾಡುವ ವಿಚಾರಕ್ಕೆ ಖಂಡಿತ ಧಿಕ್ಕಾರವಿದೆ .
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)

ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ