ಮಂಗಳವಾರ, ಜೂನ್ 12, 2018

ಪೂರ್ಣ ಐದು ವರ್ಷ ಅಧಿಕಾರ ಚಲಾಯಿಸಿತು :ಸಿದ್ದು ಸರ್ಕಾರ !!



ಬ್ರಷ್ಟಚಾರದ ಆರೋಪ ವಿಲ್ಲದೇ ತಮ್ಮಳೋಗಿನ ನಾಯಕರುಗಳ ಜೊತೆ ಯಾವುದೇ ಒಂದು ಹೇಳಿಕೊಳ್ಳುವಂತ ಆಂತರಿಕ ಜಗಳ ವಿಲ್ಲದೇ ,ರಾಜ್ಯದಲ್ಲಿ ಐದು ವರ್ಷ ಪೂರ್ಣ ಸರ್ಕಾರವನ್ನು ನಡೆಸಿದ ಕೀರ್ತಿ ಕಾಂಗ್ರೆಸ್ ನ ಮಾಜಿ ಸಿಎಂ ಸಿದ್ದರಾಮಯ್ಯನಿಗೆ ಸಲ್ಲ ಬೇಕು . ಸಾಕಷ್ಟು ವರ್ಷಗಳ ನಂತರ ಸ್ವತಂತ್ರವಾಗಿ ಏಕ ಪಕ್ಷ, ಗೊಂದಲವನ್ನು ತಾಳದೇ ಪೂರ್ಣ ಅವಧಿಯನ್ನು ಮುಗಿಸಿದ್ದು ಸಿದ್ದರಾಮಯ್ಯ ಕಾಂಗ್ರೆಸ್ ಸರ್ಕಾರ ಎನ್ನದೇ ವಿಧಿ ಇಲ್ಲ .
ಮುಖ್ಯ ಮಂತ್ರಿಯಾಗಿ ಸಿದ್ದರಾಮಯ್ಯ ಕೆಲವೊಂದು ಜನಪಯೋಗಿ ಯೋಜನೆಯನ್ನು ಜಾರಿಗೆ ತಂದರೂ ಭಾಗ್ಯಗಳ ಸರದಾರ ನಾಗಿ ಅಹಿತಕರ ಕೋಮು ಸಾಮರಸ್ಯ ಜಾತಿ ಮುಂತಾವುಗಳಿಂದ ಜನತೆ ಕೆಂಗಣ್ಣಿಗೆ ಗುರಿಯಾಗಿದ್ದೂ ಮಾತ್ರ ಸುಳ್ಳಲ್ಲ!
ಸಿದ್ದರಾಮಯ್ಯನಿಗೆ ಒಲಿದು ಬಂದ ಸಿಎಂ ಕುರ್ಚಿ :
ಬಿಜೆಪಿಯ ಆಂತರಿಕ ಕಚ್ಚಾಟ ,ಬ್ರಷ್ಟಚಾರರೂಪಿ ಆಡಳಿತ ವ್ಯವಸ್ತೆಯಿಂದ ಜನತೆ ಕಳೆದ ಬಾರಿ ಕಾಂಗ್ರೆಸ್ ಗೆ ಪೂರ್ಣ ಬಹುಮತ ವನ್ನು ಕೊಟ್ಟಿದ್ದರು . ಜೆಡಿಎಸ್ ನಿಂದ ಹೊರಬಂದ ಸಿದ್ದರಾಮಯ್ಯ ಕಾಂಗ್ರೆಸ್ ಸೇರಿ ಉನ್ನತ ಸ್ಥಾನವನ್ನು ಆ ಸಮಯದಲ್ಲಿ ಪಡೆದುಕೊಂಡಿದ್ದರು . ಆದರೆ ಅವರ ರಾಜ ಯೋಗ ನೋಡಿ ಕಾಂಗ್ರೆಸ್ ನ ಅದೆಸ್ಟೋ ಹಳೆಯ ತಲೆಮಾರುಗಳು ಸಿಮ್ ರೆಸ್ ನಲ್ಲಿದ್ದರೂ ,ಸಿದ್ದರಾಮಯ್ಯಗೆ ಸಿಎಂ ಕುರ್ಚಿ ಒಲಿದು ಬಂದಿತ್ತು . ಕೆಪಿಸಿಸಿ ಅಧ್ಯಕ್ಷರಾದ ಪರಮೆಶ್ವರಿಗೆ ಮುಖ್ಯ ಮಂತ್ರಿ ಪಟ್ಟ ಯಂದೇ ಚುನಾವಣೆ ಸಮೀಕ್ಷೆ ಪೂರ್ವ ಸಾಬೀತು ಆಗಿದ್ದರೂ,ಅವರೇ ಇದಕ್ಕೆ ಅರ್ಹ ರಾಗಿದ್ದರೂ, ತನ್ನ ಸ್ವಂತ ಕ್ಷೇತ್ರದಲ್ಲಿ ಪರಮೇಶ್ವರ್ ಸೋತ ಕಾರಣ ನಂತರ.ಸಿದ್ದರಾಮಯ್ಯರ ಅದೃಷ್ಟ ನೆಟ್ಟಗಿತ್ತು . ಮೇಜರ್ ರೋಲ್ ಸಿದ್ದರಾಮಯ್ಯನೇ ಆಗಿ ಬಿಟ್ಟರು !!
ಸಿದ್ದರಾಮಯ್ಯನ ವಿರೋಧದ ಅಲೆಯನ್ನು ಕಟ್ಟಿ ಕೊಂಡಿದ್ದರು :

ಸಾಕಷ್ಟು ಜನಪರ ಯೋಜನೆಗಳನ್ನೂ ಜಾರಿಗೆ ತಂದ ಸಿದ್ದರಾಮಯ್ಯ ತನ್ನೆಲ್ಲಾ ಈ ಯೋಜನೆಗಳು ಭಾಗ್ಯ ದಿಂದಲೇ ಹೆಸರು ಕೊನೆಗೊಳ್ಳುತ್ತಿತ್ತು . ಹೆಚ್ಚಿನ ಭಾಗ್ಯಗಳು ಕೋಮು ಸಾಮರಸ್ಯಕ್ಕೆ ಎಡೆಮಾಡಿ ಕೊಟ್ಟಿದ್ದವು . ಹಿಂದೂ ವಿರೋಧಿ ನೀತಿಯನ್ನು ಅನುಸರಿಸುತ್ತಿದ್ದದ್ದೂ ಸ್ವತಾ ಹಿಂದೂ ಆಗಿದ್ದೂ ಧರ್ಮದ ಭಾವನೆಗೆ ದಕ್ಕೆ ತರುವಂತ ಚಟುವಟಿಗೆಯಲ್ಲಿ ಬಾಗಿ ಯಾಗುತ್ತಾ ಹಿಂದೂ ಪರರಿಂದ ದ್ವೇಷವನ್ನು ಕಟ್ಟಿ ಕೊಂಡಿದ್ದರು . ಮಾತ್ರವಲ್ಲದೇ ವೀರಶೈವ ,ಲಿಂಗಾಯತ ಜಾತಿಗಳ ಒಡಕು ಮೂಡಿಸುವ ಪ್ರಯತ್ನ ,ಹಿರಿಯ ಅಧಿಕಾರಿಗಳ ವರ್ಗಾವಣೆ ,ಸಾವು ನೋವುಗಳಿಗೆ ಸೂಕ್ತವಾದ ನ್ಯಾಯವನ್ನು ಕೊಡಿಸುವುದರಲ್ಲಿ ವಿಫಲರಾಗಿದ್ದರು ಇವುಗಳಲ್ಲವೂ ಸಿದ್ದರಾಮಯ್ಯನ ಆಡಳಿತ ವ್ಯವಸ್ಥೆ ವಿರೋಧವನ್ನು ಕಟ್ಟಿ ಕೊಂಡಿದ್ದು ಹೊರತು ಪಡಿಸಿದರೆ ಅಧಿಕಾರಾವಧಿ ನಿಜಕ್ಕೂ ಉತ್ತಮವೇ ಆಗಿತ್ತು
ಮುಜುಗರ ತರುತ್ತಿತ್ತು ಆಗಾಗ ಸಿದ್ದರಾಮಯ್ಯನ ವೈವಾಟು :
ಹೌದು ! ಮಾನ್ಯ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ತಮ್ಮ ಐದು ವರ್ಷಗಳ ಅಲ್ಲಲ್ಲಿ ಸಭೆ ಸಮಾರಂಭ ಗಳಲ್ಲಿ ಮೈ ಮರೆತು ನಿದ್ರಿಸುತ್ತಿದ್ದ ಪರಿ ಹಾಗೂ ಭಾಷಾಣದಲ್ಲಿ ಅರಿವಿಲ್ಲದ ಮಾತುಗಳು ಹೊರಟು ನಗೆ ಪಾಟಾಲಿಗೆ ಈಡಾಗಿದ್ದೂ ಸಹಾ ಒಂದು ರೆಕಾರ್ಡ್ !. ವೇದಿಕೆಯಲ್ಲಿದ್ದ ಇತರ ನಾಯಕರಿಗೆ ಹೈಕಾಮಂಡ್ ಗೆ ಇದರಿಂದ ಮುಜುಗರವಾದರೂ ,ಜನರಿಗೆ ಮಾತ್ರ ಸಾಕಷ್ಟು ಎನ್ಜೋಯ್ಮೆಂಟ್ ಸಿಕ್ಕಿತ್ತು .ಏನೇ ಇರಲಿ ತೀಕ್ಷವಾದ,ಸ್ಟ್ರೇಟ್ ಪರ್ವಾರಡ್ ಮಾತುಗಳು ಸಿದ್ದರಾಮಯ್ಯರ ಬಳಿ ಇದ್ದದ್ದು ಮೆಚ್ಚುವಂತದ್ದು .!!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ