ಶನಿವಾರ, ನವೆಂಬರ್ 28, 2015
ಜನ ಪ್ರತಿನಿಧಿಗಳೇ ಶೇಮ್ ! ನಾಚಿಕೆಯಾಗಬೇಕು ನಿಮ್ಮ ಜನ್ಮಕ್ಕೆ !
ಮೂಡಬಿದಿರೆಯ ಬಜರಂಗದಳ ಕಾರ್ಯಕರ್ತ ಪ್ರಶಾಂತ್ ಪೂಜಾರಿ ಬರ್ಭರವಾಗಿ ಹಾಡು ಹಗಲೇ ಇತ್ತೀಚಿಗೆ ಹತ್ಯೆ ಮಾಡಲಾಗಿತ್ತು . ಆಡಳಿತ ರೂಢ ಕಾಂಗ್ರೆಸ್ ಪಾಳಯದ ಸರ್ಕಾರಕ್ಕೆ ಪ್ರಶಾಂತ್ ಪೂಜಾರಿ ಕೊಲೆ ಎಂಬುದು ಬೀದಿ ನಾಯಿ ಸತ್ತಂತ ಬುದ್ದಿ ಮತ್ತೆಯನ್ನು ಹೊಂದಿದೆ , ಶೇಮ್ ಎನ್ನಬೇಕು ಕರಾವಳಿಯ ಕಾಂಗ್ರೆಸ್ ತನ್ನನ್ನು ತಾನೇ ನಡುಬೀದಿಯಲ್ಲಿ ನಗ್ನವಾಗಿಸಿ ಜನರಿಂದ ಶೇಮ್ ಎನಿಸಿಕೊಳ್ಳುತ್ತಿದೆ. ಯಾವೊಬ್ಬ ಕಾಂಗ್ರೆಸ್ ಪ್ರತಿನಿಧಿ , ಕರಾವಳಿಯ ಐದು ಜನರ ಪೈಕಿ ಯಾವೊಬ್ಬನೋ ಸಹಾ ಅತ್ತ ತಲೆ ಹಾಕಿ ಮಲಗಿಲ್ಲ ಮೂಡಬಿದಿರೆಯ ಕಾಂಗ್ರೆಸ್ ಶಾಸಕ ಮತ್ತು ಸಚಿವ ಅಭಯಚಂದ್ರ ಜೈನ್ ಕೊಲೆಯಾದ ಪ್ರಶಾಂತ್ ಮನೆಗೆ ಭೇಟಿಯೂ ನೀಡಿಲ್ಲ. ಜಿಲ್ಲೆಯ ಉಸ್ತುವಾರಿ ಸಚಿವ ರಮಾನಾಥ ರೈ ಕೂಡ ಸೌಜನ್ಯಕ್ಕೂ ಈ ಘಟನೆಯನ್ನು ಖಂಡಿಸಿಲ್ಲ ಮತ್ತು ಪ್ರಶಾಂತ್ ತಂದೆ ತಾಯಿಯನ್ನು ಮಾತಾಡಿಸಿಲ್ಲ. ಇದು ನಿಜಕ್ಕೂ ಅಮಾನವೀಯ. ಕೊಲೆಯಾದವನ ಸಿದ್ಧಾಂತ ಏನೇ ಇರಲಿ ತನ್ನೂರಿನ ಒಬ್ಬ ಹುಡುಗ ಕೊಲೆಯಾಗಿದ್ದಾನೆ, ಕಾನೂನು ಬಾಹಿರ ಕೃತ್ಯವೊಂದು ನಡೆದಿದೆ. ಅದನ್ನು ಶಾಸಕ ಮತ್ತು ಮಂತ್ರಿ ಖಂಡಿಸಬೇಕಿತ್ತು. ತಂದೆತಾಯಿಗೆ ಸಾಂತ್ವನ ಹೇಳಬೇಕಿತ್ತು. ಅಟ್ ನೀಸ್ಟ್ ತಮ್ಮ ಎಂದಿನ ಮೊಸಳೆ ಕಣ್ಣೀರನ್ನದರೂ ಹಾಕಿ ಕೈ ತೊಳೆದು ಕೊಳ್ಳ ಬಹುದಾಗಿತ್ತು .. ಛೆ !ನಾಚಿಕೆ ಯಾಗಬೇಕು ಇವರ ಜನ್ಮಕ್ಕೆ !.. ರಾಜಕೀಯ, ಸಿದ್ಧಾಂತ ಭೇದ ಏನೇ ಇರಲಿ ಓರ್ವ ಸರ್ಕಾರದ ಮತ್ತು ಜನರ ಪ್ರತಿನಿಧಿಯಾಗಿದರೂ ಪ್ರಶಾಂತ್ ಮನೆಗೆ ಹೋಗಲೇಬೇಕಿತ್ತು. ಎಂತೆಂತಹ ರೌಡಿ ಶೀಟರ್ಗಳು, ಕೊಲೆಗಡುಕರೆಲ್ಲ ಸತ್ತಾಗ ಕಾಂಗ್ರೆಸಿಗರು ಅವರ ಮನೆಗೆ ಹೋಗಿಲ್ಲವೆ? ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿಲ್ಲವೆ? ಕುಟುಂಬದವರಿಗೆ ಸಾಂತವನ ಹೇಳಿಲ್ಲವೆ? ಹಾಗಾದರೆ ಪ್ರಶಾಂತ್ ಪೂಜಾರಿಯ ಮನೆಗೆ ಹೋಗಿ ಅವರ ತಂದೆ ತಾಯಿಗೆ ಸಾಂತ್ವನ ಹೇಳಿ ,ತನಿಖೆಯ ಭರವಸೆ ನೀಡಬಹುದದಿತ್ತು? ದನಗಳ್ಳ ಕಬೀರ್ ಕ್ಕಿಂತಲೂ ಈತ ಕಡೇಯಾದನೇ ?! ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳು ಮಾತಾಡಬೇಕಿದೆ !
ಯಕ್ಷಗಾನಕ್ಕೆ ಉಳಿವಿದೆ .. ಅಳಿವಿಲ್ಲ !!!
ವೈಜ್ಞಾನಿಕ ತಂತ್ರಜ್ಞಾನಗಳ ನಡುವೆ ಯಕ್ಷಗಾನ ಸ್ಥಿರವಲ್ಲ ಎಂಬ ಹಲವರ ಬಾವುಕತೆಯ ಆಲೋಚನೆಗೆ ನಿಜಕ್ಕೂ ವರ್ತಮಾನದ ವಾತಾವರಣ ಧೈರ್ಯ ತುಂಬುತ್ತಿದೆ . ಟೆಂಟ್ ಆಟ ಗಳ ಜೊತೆಗೆ ಬಯಲಾಟ ತನ್ನದೆಯಾದ ಛಾಪನ್ನು ಇಂದಿಗೂ ಇರಿಸಿಕೊಂಡು ಬಂದಿದೆ . ಜೊತೆಗೆ ಇನ್ನಷ್ಟು ಮತ್ತಷ್ಟು ಮೊಗದಷ್ಟು ಜನಪ್ರಿಯತೆ ಮಳೈಸಿ ಕೊಂಡು ನಾಗಾಲೋಟದಲ್ಲಿ ಮಿಂಚುತ್ತಿದೆ ಅಂದರೆ ಅತಿಶಯೋಕ್ತಿಯಾಗಲಾರದು 'ಕಾಲಕ್ಕೆ ತಕ್ಕಂತೆ ಕೋಲ' ಎಂಬ ಆಡು ನುಡಿಯಂತೆ ವೈವಿಧ್ಯಮಯವಾಗಿ ವಿವಿಧತೆಯನ್ನು ಪೋಣಿಸುತ್ತಿದೆ . ಸ್ವರ್ದಾತ್ಮಕತೆ ಎಷ್ಟೇ ಇದ್ದರೂ ಕಲೆಗೆ ಬೆಲೆ ಕೊಡುತ್ತಾ ಬಂದಿರುವ ಗಂಡು ಕಲೆ ಯಕ್ಷಗಾನ ತನ್ನದೆಯಾದ ಅಂಗ-ಆಕಾರ, ಗಟ್ಟಿತನವನ್ನು ಉಳಿಸಿ ,ಬೆಳಿಸಿ ,ಕಾಯ್ದಿರಿಕೊಂಡು ಬನ್ದಿದೆ. ಸಮಯಕ್ಕನುಗುಣವಾಗಿ ಕಾಲಮಿತಿಯ ಪ್ರದರ್ಶನ ತೋರುವುದರ ಜೊತೆಗೆ ಮನೋರಂಜನಾತ್ಮಕವಾಗಿ ಸಾಕಷ್ಟು ಅಭಿರುವುದ್ಧಿ ಪಥದತ್ತ ಮುನ್ನುಗ್ಗುತ್ತಿದೆ . ಅಟ್ಟಣಿಗೆ , ಜೋಡಾಟ , ಕೂಡಾಟಗಳ ಮೂಲಕ ಮನೋರಂಜನಾತ್ಮಕವಾಗಿ ಪ್ರೇಕ್ಷಕರ ಮನಗೆಲ್ಲುತ್ತಿದೆ. ವರ್ಷಕ್ಕೊಂದು ನವನವೀನ ಕಥಾನಕ ಗಳಿಂದ ಟೆಂಟ್ ಆಟಗಳು ಯಕ್ಷ ಪ್ರೇಮಿಗಳನ್ನು ಹಿಡಿದಿಟ್ಟು ಕೊಳ್ಳುತ್ತಿದೆ . ಇನ್ನು ಬಯಲಾಟಗಳಿಗೆ ಬರಗಾಲವೇ ಇಲ್ಲ ಬೆಳಕಿನ ಸೇವೆ ಅದೆಷ್ಟು ಭಕ್ತಿ ಪ್ರಧಾನ ದಿಂದ ನಡೆಯುತ್ತಿದೆ ಎಂದರೆ ಆಸ್ತಿಕರು ,ಆಸಕ್ತದಾರ ಪ್ರಮಾಣವೇ ಕಾರಣ ಎಂಬುದನ್ನು ತಳ್ಳಿ ಹಾಕುವಂತಿಲ್ಲ ವರ್ಷಪ್ರತಿಯಂತೆ ಒಂದೊಂದು ಸನ್ನಿಧಾನ ದಿಂದ ಹೊಸ ಹೊಸ ಯಕ್ಷಗಾನ ಮೇಳಗಳು ಉದಯವಾಗುತ್ತಿರುವುದರ ಜೊತೆಗೆ ಸಾಕಷ್ಟು ವರ್ಷಗಳ ವರೆಗಿನ ಬುಕ್ಕಿಂಗ್ ಕಾಣತ್ತಿರುವುದಕ್ಕೆ ಯಕ್ಷ ಅಭಿಮಾನಿಗಳ ಕ್ರಪಾ ಕಟಾಕ್ಷವಲ್ಲದೇ ಇನ್ನೇನು ?. ಕಟೀಲು ಆರು ಮೇಳಗಳನ್ನು ಹೊಂದಿದ್ದರೂ, ಮಂದಾರ್ತಿಯಲ್ಲಿ ಐದು ಮೇಳಗಳಿದ್ದರೂ , ಸುಮಾರು ಹದಿಮೂರು ವರ್ಷಗಳವರೆಗೆ ಬುಕ್ಕಿಂಗ್ !!!.ಹೆಚ್ಚುವರಿ ಮೇಳಗಳ ಅಗತ್ಯವಿದ್ದರೂ ಕಲಾವಿದರುಗಳ ಕೊರತೆಯಿಂದ ಇದ್ದದ್ದರಲ್ಲಿಯೇ ನಿಭಾಯಿಸಬೇಕಾದ ಅಗತ್ಯತೆಯನ್ನು ಅನುಭವಿಸಬೆಕಾಗಿದೆ. ಮಾರಣಕಟ್ಟೆ ಮೇಳವೂ ಸಹಾ ಹಲವಾರು ವರ್ಷಗಳಿಂದ ಎರಡು ಮೇಳಗಳನ್ನು ಕಟ್ಟಿಕೊಂಡು ತಿರುಗಾಟದಲ್ಲಿದೆ ಹರಕೆ ಆಟಗಳ ಸಂಖ್ಯೆ ಮಾತ್ರ ಏರುತ್ತಲೇ ಇದೆ .. ಈ ಸಾಲಿಗೆ ಇನ್ನೊಂದು ಸೇರ್ಪಡೆ ಕಮಶಿಲೆ ಮೇಳ . ಕುಂದಾಪುರ ದಿಂದ ಪೂರ್ವಾಭಿಮುಖವಾಗಿ ೩೦ ಕಿಲೋ ಸಾಗಿದರೆ ಸಹ್ಯಾದ್ರಿ ತಪ್ಪಲಿ ಸ್ವಚ್ಛ ಪರಿಸರದ ಕುಬ್ಜಾ ನದಿ ತೀರದಲ್ಲಿ ನೆಲೆ ನಿಂತಿರುವ ಶಕ್ತಿದಾಯಿನಿ ಕಮಲಶಿಲೆ ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನ ದಿಗ್ದರ್ಶನವಾಗುತ್ತದೆ. ಭಕ್ತರ ಸಕಲ ಇಷ್ಟರ್ಥವನ್ನು ನೀಗಿಸುತ್ತಾಳೆ ಎನ್ನುವುದಕ್ಕೆ ಬೆಳಕಿನ ಸೇವೆ ಯಕ್ಷಗಾನಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲ, ಒಂದು ಮೇಳವನ್ನು ಕಟ್ಟಿಕೊಂಡು ಎರಡು ದಶಕಕ್ಕೂ ಅಧಿಕ ಕಾಲದಿಂದ ನಡೆದು ಕೊಂಡು ಬರುತ್ತಿದ್ದ ಮಂಡಳಿ ಇದೀಗ ಹರಕೆ ಆಟವನ್ನು ತೀರಿಸಲು ಇನ್ನೊಂದು ಮೇಳವನ್ನು ಕಟ್ಟಬೇಕಾದ ಅನಿವಾರ್ಯತೆ ಉದ್ಬವಿಸಿದ್ದರಿಂದ ಈ ವರ್ಷದಿಂದ ಎರಡು ಮೇಳಗಳೊಂದಿಗೆ ತಿರುಗಾಟಕ್ಕೆ ಹೊರಟಿದೆ .ನ್ನೇನು ಬೇಕು ?ಯಕ್ಷಗಾನಕ್ಕೆ ಉಳಿವಿದೆ.. ! ಕಲಾವಿದರ ಕೊರೆತೆ ಕೊಂಚ ತಲ್ಲಣವನ್ನು ತರುತ್ತಿರುವುದನ್ನು ಬಿಟ್ಟರೆ, ಯಕ್ಷ ಪ್ರೇಮಿಗಳ ಸಂಖ್ಯೆ ಒಂದಿನಿತು ಕಡಿಮೆಯಾಗಿಲ್ಲ ಗುಣಮಟ್ಟವಲ್ಲದ (ಸಿನಿಮಾ ಶೈಲಿ ) ಕಥಾನಕ ಎಲ್ಲೋ ತುಸು ಮುನಿಸು ಕೆಲೆವೆಡೆ ಕೇಳಿ ಬರುತ್ತಿರುವುದು ಹೊರತು ಪಡಿಸಿದರೆ ,ಯಕ್ಷಗಾನಕ್ಕೆ ಬಾಳ್ವೆ ಇದೆ. ಬಗ್ಗೆ ಪ್ರಸಂಗ ಕರ್ತರು ಯೋಚಿಸಿದರೆ ಯಕ್ಷಗಾನಕ್ಕೆ ಯಾವುದೇ ಕಳಂಕಬಾರದು .
ಗುರುವಾರ, ಆಗಸ್ಟ್ 20, 2015
ಭಜರಂಗಿ ಭಾಯ್ ಜಾನ್; ನನಗೆ ಇಷ್ಟ ಆದ ಒಂದೊಳ್ಳೆ ಸಿನಿಮಾ ..
ಸಾಕಷ್ಟು ಸಮಯಗಳ ನಂತರ ಬಾಲಿವುಡ್ ನಿನಿಮಾಂಗಳದಲ್ಲಿ ಒoದೊಳ್ಳೆ ಸಿನಿಮಾ ನೋಡಿದ ಸಂತ್ರಪ್ತಿ , ಸಂತೋಷ ಸಿಕ್ಕಿದೆ. ವರ್ಷದಿಂದ ವರ್ಷಕ್ಕೆ ಹಿಟ್ ಮೇಲೆ ಹಿಟ್ ನಿನಿಮಾ ಕೊಡುತ್ತಾ ಬಂದಿರುವ ಬ್ಯಾಡ್ಬಾಯ್ ಸಲ್ಮಾನ್ ಖಾನ್ ಅಭಿನಯದ ಭಜರಂಗಿ ಭಾಯ್ ಜಾನ್ ..ನಿಜಕ್ಕೂ ಇದುವರೆ ಅಭಿನಯಿಸಿದ ಎಲ್ಲಾ ಸಿನಿಮಾಗಳಿಗಿಂತ ಇದು ಅದ್ಭುತ,ಆಮೋಘ ಎನ್ನುವುದರಲ್ಲಿ ಎರಡು ಮಾತಿಲ್ಲ.ನಿರ್ದೇಶಕ ಕಭೀರ್ ಖಾನ್ ಗೆದ್ದಿದ್ದಾರೆ, ಒಂದೊಳ್ಳೆ ಸಿನಿಮಾವನ್ನು ಈದ್ ಗೆ ಉಣಬಡಿಸಿದ್ದಾರೆ. ಮೊಟ್ಟ ಮೊದಲ ಬಾರಿಗೆ ಸ್ಯಾಂಡಲ್ವುಡ್ ನಿರ್ಮಾಪಕರೊಬ್ಬರು ಬಾಲಿವುಡ್ ನಿನಿಮಾಕ್ಕೆ ಬಂಡವಾಳ ಸುರಿಸಿ ಸದಭಿರುಚಿಯ ಸಿನಿಮಾ ಕೊಟ್ಟ ಧೀರ ರಾಕ್ ಲೈನ್ ವೆಂಕಟೇಶ್ ಧನ್ಯರು . ಕಾಲ್ಪನಿಕ ಕಥಾಹ0ದರವನ್ನು ಹೊಂದಿರುವ ಚಿತ್ರ ನಿಜಕ್ಕೂ ವಾಸ್ತವದ ಜಗತ್ತಿನ ಒಳ ಹೊರಣವನ್ನು ತಂದು ಕಣ್ಮು0ದೆನಿಲ್ಲಿಸುತ್ತದೆ. ಒಂದೆ ಎಳೆ ಯಲ್ಲಿ ಹೇಳಬೇಕೆಂದರೆ ಹಿಂದೂಸ್ಥಾನದ ನೆಲದಲ್ಲಿ ಪಾಕಿಸ್ಥಾನದ ದಂಪತಿಯ 6 ವರ್ಷದ ಮುಗ್ದೆ ಮುಖಿ ಬಾಲೆ ಶಾಯಿದಾ ಟ್ರೈನ್ ನಲ್ಲಿ ಮಿಸ್ ಆದವಳನ್ನು ಅವಳ ಹುಟ್ಟೂರು ಪಾಕಿಸ್ತಾನಕ್ಕೆ ಆವಳ ತಾಯಿಯ ಮಡಿಲಿಗೆ ಸೇರಿಸುವಲ್ಲಿ ನಾಯಕ ಪಡಬೇಕಾದ ಶ್ರಮ ಇಕ್ಕಟ್ಟು– ಬಿಕ್ಕಟ್ಟು, ಕಷ್ಟ –ನಷ್ಟ, ಛಲ- ಬಲ ಒತ್ತಡದ ಹಿಂದಿರುವ ಸಂಪೂರ್ಣ ಕಹಾನಿ ಇದು. ಸಲ್ಮಾನ್ ಖಾನ್ ಮತ್ತು ಹರ್ಷಾಲಿ ಮಲ್ಹೋತ್ರ ನಡುವಿನ ಭಾವನಾತ್ಮಕ ಸನ್ನಿವೇಶಗಳು ಮನಮುಟ್ಟುತ್ತದೆ , ತಾಯಿ-ಮಗಳ ಅನುಬಂಧ ಒಳಗೊಂಡ ಒಂದೊಳ್ಳೆ ಸುಂದರ ಸಾಂಸಾರಿಕ ಸಾಮಾಜಿಕ ಚತ್ರ ಭಜರಂಗಿ ಭಾಯ್ ಜಾನ್ !
ಭಜರಂಗಿ(ಹನುಮಂತನ) ಭಕ್ತನಾಗಿ ಸಲ್ಮಾನ್ (ಪವನ್ ) ಉತ್ತಮವಾಗಿ ಅಭಿನಯಿಸಿದ್ದಾರೆ. ಇಂತಹ ಶಿಸ್ತು ಶ್ರದ್ಧೆ,ಯೋಗ್ಯತೆಯ ಆಳ್ತನಕ್ಕೆಈ ಪಾತ್ರ ಸಲ್ಮಾನ್ ಗೆ ಬಿಟ್ಟರೇ ಬೇರೆ ಯಾರೂ ಸಹಾ ಜೀವಕಳೆ ತುಂಬಲಾರರು ಎಂಬ0ತೆ ಅಭಿನಯದ ನವರಸ ಧಾರೆ ಹರಿದು ಬಂದಿದೆ ಎಂದರೂ ಅತಿಶಯೋಕ್ತಿಯಾಗಲಾರದು . ನಾಯಕಿ ಕರೀನಾ ಕಪೂರ್ ಪಾತ್ರಕ್ಕೆ ಮೋಸ ಮಾಡಿಲ್ಲ ಸಂಪ್ರದಾಯಸ್ಥ ಮನೆತನದ ಹುಡುಗಿಯಾಗೆಯೇ ತೋರಿದ್ದಾರೆ ಎಲ್ಲಾಕ್ಕಿಂತಾ ಹೆಚ್ಚಾಗಿ ಪಾಕಿಸ್ಥಾನದ ಟಿವಿ ರಿಪೋರ್ಟರ್ ನ ಪಾತ್ರ
(ನವಾಜುದ್ದಿನ್ ಸಿದ್ದಿಕಿ ) ನಿಜಕ್ಕೂ ಮನ:ಪಟಲದಲ್ಲಿ ಹಚ್ಚಳಿಯದೇ ಉಳಿಯುವಂತೆ ಮಾಡುತ್ತದೆ. ಪ್ರಜಾ ಪ್ರಭುತ್ವದ ನಾಲ್ಕನೇ ಅoಗವಾಗಿರುವ ಪತ್ರಿಕೋದ್ಯಮದಲ್ಲಿ ಇಂತವರು ಸಿಗುವುದು ಸಿನಿಮಾದಲ್ಲಿ ಮಾತ್ರವೇನೋ ಎಂಬಂತೆ ಬಾಸವಾಗದೇ ಇರದು ಏನೇ ಇರಲಿ ಪ್ರಜೆಗಳಿಗೆ ನ್ಯಾಯ ಒದಗಿಸಿ ಪ್ರಭುಗಳ ಕಿವಿ ಹಿಂಡುವ ಪ್ರತಿಪಾದಕನಂತೆ ಕಂಡುಬರುವ ಚಾನಲ್ ಒಂದರ ಪತ್ರಕರ್ತ ನಿಜಕ್ಕೂ ಪಾಕಿಸ್ತಾನ ಭುವಿಯಲ್ಲಿ ಗೊಂದಲದಲ್ಲಿ ಸಿಲುಕುವ ನಾಯಕನಿಗೆ ಉಪಕಾರಿಯಾಗಿ ಪುಟಾಣಿ ಬಾಲೆಯನ್ನು ಅಮ್ಮನ ಮಡಿಲಿಗೆ ಸೇರಿಸುವರಿ0ದ ಹಿಡಿದು ನಾಯಕನ ವ್ಯಕ್ತಿತ್ವ ಜಾಗಜಾಹಿತಾಗುವಲ್ಲಿ ಕಾರಣಿ ಬೂತನಾಗುತ್ತಾನೆ.ಭಜರಂಗಿ ಭಕ್ತನಾಗಿ ಹೋದಲ್ಲೆಲ್ಲಾ ಸತ್ಯವನ್ನೇ ಹೇಳತ್ತಾ ನೇರ ನಿಲುಮೆಯ ಛಲದ ಪಥದಲ್ಲಿ ಸಾಧನೆಯ ದಿಕ್ಕನ್ನು ಅರಸುವ ಈತನ ಸೇವೆ ಸಾರ್ಥಕತೆ ಸ್ವಾರ್ಥಪರತೆಯ ಸರಳ ಸಜ್ಜನಿಕೆಗೆ ಉಭಯ ದೇಶದ ಪ್ರಜೆಗಳು ಕ್ಲೀನ್ ಬೋಲ್ಡ್ ಆಗುವುದರ ಜೊತೆಗೆ ಸಹಾಯ ಹಸ್ತದ ಬೆಂಬಲ , ಮಾತು ಬಾರದ ಪುಟಾಣಿ ಕ್ಲೆಮೆಕ್ಸ್ ನಲ್ಲಿ ಅಂಕಲ್ ಎಂದು ಕೆರೆದು ಜೈ ಶ್ರೀ ರಾಮ್ ಎನ್ನುವ ಉಕ್ತಿ ಹೊರ ಹಾಕುವ ದ್ರಶ್ಯ ಅತ್ತ ಕಡೆ ಬೇಸರದಿಂದ ಬೀಳ್ಕೊಡುವ ಪಾಕಿಸ್ತಾನಿಗಳು ಇತ್ತ ಈತನ ಸಾಹಸಕ್ಕೆ ಸಂಬ್ರಮದಿಂದ ಸ್ವಾಗತ ಬಯಸಲು ನಿಂತಿರುವ ಹಿಂದೂಸ್ಥಾನಿಗಳು.ನಾಯಕಿ ಆನಂದ ಬಾಷ್ವ ಕ್ಲೆಮೆಕ್ಸ್ ಕೊನೆಗೊಳ್ಳುತ್ತದೆ. ಗಡಿ ಪ್ರದೇಶದಲ್ಲಿನ ತಲ್ಲಣ ತಟ–ವಟ, ಕಾಶ್ಮೀರದ ಸುಂದರ ಪ್ರಕ್ರತಿಯ ಹಸಿರು ಹೊದಿಕೆ ಚಿತ್ರಣ ,ಬಿಳಿ ಮೋಡಗಳ ಗ್ರಾಫಿಕ್ಸ್ ಉತ್ತಮ ಸ್ಕ್ರಿಪ್ಟ್, ಲೋಕೆಶನ್, ಎಲ್ಲವೂ ಮನಸ್ಸಿಗೆ ಮುದ ನೀಡುತ್ತವೆ.
ಫಸ್ಟ್ ಹಾಪ್ಹ್ ಹಾಸ್ಯದ ಹೊನಲಿನಲ್ಲಿ ನಕ್ಕು ನಕ್ಕು ಸುಸ್ತಾದ ಚಿತ್ರಪ್ರೇಮಿಗಳಿಗೆ ಸೆಕೆಂಡ್ ಹಾಫ್ ಕಣ್ಣಂಚಿನಲ್ಲಿ ಕಣ್ಣೀರು ತನಗರಿಯದ೦ತೆ ಜಿನಿಗಿಸುವುದರಲ್ಲಿ ನಿರ್ದೇಶಕ ಕಬೀರ್ ಜಾಕಚಕ್ಯತೆಯನ್ನು ಮರೆದಿದ್ದಾರೆ. ಓಟ್ತಾರೆ ಹೊಡಿ,ಬಡಿ,ಕಡಿ,ರಕ್ತಪಾತ,ಬಿಚ್ಚಾಟ –ಕಚ್ಚಾಟಗಳಿಲ್ಲದ, ಸಂಸಾರ ಸಮೇತರಾಗಿ ಕುಳಿತು ನೋಡ ಬಹುದಂತ ,ಯಾವುದೇ ಒಂದು ಸಮುದಾಯದ,ಸಂಬಂದ ಸಾಮರಸ್ಯಕ್ಕೆ ಎಡೆಮಾಡಿ ಕೊಡದೇ ಮೂಡಿ ಬಂದ ಭಜರಂಗಿ ಭಾಯ್ ಜಾನ್ ಚಿತ್ರ ನಂಗೆ ಇಷ್ಟವಾಗಿದೆ.
.
ಅಣ್ಣನಿಗೆ ಊಟ ತಮ್ಮನಿಗೆ ಉಪವಾಸ !!
ಹೀಗೊಂದು ನ್ಯಾಯದ ವ್ಯವಸ್ಥೆ ನಮ್ಮ ದೇಶದಲ್ಲಿ ಕಾಣುತ್ತಿರುವುದು ನಮಗೆ ಅಚ್ಚರಿ ಅನ್ನಿಸಿದರೂ ಇದನ್ನು ಅರಗಿಸಿ ಕೊಳ್ಳಲೇ ಬೇಕು. ನ್ಯಾಯಾಲಯ ಅಂದ ಕೂಡಲೇ ಮನಸ್ಸಿನ ಮೂಲೆಯಲ್ಲಿ ಮೊಳಕೆ ಒಡೆಯುತ್ತದೆ , ನ್ಯಾಯ ಮರಿಚಿಕೆ ಅಸತ್ಯ. ಅನ್ಯಾಯ !!.. ರಾಜಕೀಯದ ಪ್ರಭಾವಿಗಳಿಗೆ , ಹಣವಂತರಿಗೆ ಮಾತ್ರ ಎಂಬೀತ್ಯಾದಿ ವಿಷಯಗಳು ಹಾದು ಹೊಗುತ್ತದೆ. ವಾಸ್ತವಕ್ಕೆ ಅರ್ಹವೂ ಕೂಡಾ ಹೌದು.. ಆದರೆ ಇಂತಹ ವಿಚಾರಗಳು ವ್ಯಕ್ತಿಗತ ವಯಕ್ತಿಕ ವಿಚಾರಗಳಲ್ಲಿ ಕಂಡು ಬರುವುದು ಸರ್ವೇ ಸಾಮಾನ್ಯವಾದರೂ , ಸಾಮಾಜಿಕವಾಗಿ ಪ್ರಜಾಪ್ರಭುತ್ವ ವ್ಯವಸ್ತೆಯಲ್ಲಿ ಸಮಾಜಕ್ಕೆ ಸಹಾಯವಾಗುವಂತಹ ನಾಲ್ಕಕ್ಕೆ ಮೂರು ಅನುಪಾತದಲ್ಲಿರುವ ವಿಚಾರಕ್ಕೆ ಸಾಮಾಜಿಕ ಬದ್ದತೆಗೆನುಗುಣವಾಗಿ ತೀರ್ಪುನೀಡಬೇಕು ,ನೀಡತಕ್ಕದ್ದು ಕೂಡಾ,ಭಾರತೀಯ ಸಂವಿಧಾನದ ಪ್ರಕಾರಗಳಲ್ಲಿದೆ ಆದರೆ ಆಧುನಿಕ ದಿನಗಳಲ್ಲಿ ಕೆಲವೋಂದು ವಿಚಾರಗಳಲ್ಲಿ ಕೋರ್ಟ್ ತೀರ್ಪು ಎಷ್ಟು ಕುಲಕೆಟ್ಟು ಹೋಗಿದೆ ಎಂದರೆ .. ?ನಿಜಕ್ಕೂ ಅಸಹ್ಯ.. ಇಲ್ಲದಿದ್ದರೆ ಕಂಬಳವನ್ನು ನಿಷೇಧಿಸುದೆಂದರೆ ? ಕಂಬಳ ನಿಷೇಧಿಸಲಿ ಇದರಿಂದ ಕೋಣಗಳಿಗೆ ಹಿಂಸೆಯಾಗುತ್ತದೆ ಎಂದು ಪ್ರಾಣಿದಯಾ ಸಮಿತಿಯ ಸದಸ್ಯರಂತೆವಾದ ಮಾಡುವ ವಕೀಲ ಮಹಾಪ್ರಭುಗಳಿಗೆ ಗೋಹತ್ಯೆ ಕಾಣಿಸುತ್ತಿಲ್ಲವೇ..? ಕುದುರೆ ಸವಾರಿ ಪ್ರಾಣಿ ಬಲಿ ಇವುಗಳೆಲ್ಲಾ ಸವೋಚ್ಚನ್ಯಾಯಲಯದ ಕಣ್ಣಿಗೆ ಬಿದ್ದಿಲ್ಲವೇ ? ಕೇವಲ ಕಂಬಳವನ್ನು ನಿಷೇಧಿಸುವುದರ ಗುಟ್ಟೀನು ? ಕರಾವಳಿಯ ತಲೆ ತಲಾಂತರ ದಿಂದ ನಡೇದು ಕೊಂಡು ಬರುತ್ತಿರುವ ಇತಿಹಾಸಭರಿತ ಸಾಂಪ್ರದಾಯಿಕ ಕ್ರೀಡೆ ಕಂಬಳಕ್ಕೆ ಅದರದ್ದೇಯಾದ ಒಂದು ಘನತೆ ಗೌರವ ವಿದೆ ವೈಶಿಷ್ಟತೆ ಇದೆ. ಭಾರತೀಯ ಸಂಸ್ಕ್ರತಿಯ ಕಣಜದಲ್ಲಿ ಸ್ಥಾನವನ್ನು ಪಡೆದು ಕೊಂಡಿರುವ ಇದರಲ್ಲಿ ಸ್ಪರ್ದಾತ್ಮಕತೆ ಬಂದಾಗ ಕೊಂಚ ಕೋಣಗಳು ನೋವನ್ನು ಉಣ್ಣುವುದು ಸಹಜ.. ಅದು ಅದನ್ನು ಒಡಿಸುವವವ ಪ್ರೀತಿಯ ಮಾರ್ಗದರ್ಶನದ ನೋವಾಗಿರುತ್ತದೇಯೆ ವಿನಾ: ಇದು ಹಿಂಸೆ ಎಂದು ಬಿಂಬಿತವಾಗಲ್ಲ. ಹೆತ್ತ ಮಕ್ಕಳಿಗೆ ಪೊಷಕರುಗಳು,ಗುರುಗಳು ಹೇಗೆ ತಿದ್ದಿತೀಡಿ ಆತ/ಆಕೆಯನ್ನು ಸಮಾಜದಲ್ಲಿ ಗುರುತಿಸಿ ಕೊಳ್ಳುವಂತೆ ಮಾಡುತ್ತಾರೋ ಅದೇ ಅರ್ಥವನ್ನು ಕಂಬಳದಲ್ಲ್ಲಿ ಕೋಣವನ್ನು ಒಡಿಸುವವದ್ದು ಆಗಿರುತ್ತದೆಅದೇನೇ ಇರಲಿ ಕಂಬಳ ನಿಷೀಧಿಸಲಿ ಅದರ ಬಗ್ಗೆ ನನ್ನ ನೇರನಿಲುವು ಇದೆ ಆದರೆ ಅದರ ಅಣ್ಣನಂತಿರುವ ಗೋಹತ್ಯೆಯನ್ನು ನಿಷೀಧಿಸಲಿ.. ಅದನ್ನು ಬಿಟ್ಟು ಅಣ್ಣನಿಗೆ ಬಾಳೆ ಎಲೆ ನೀಡಿ ತಮ್ಮನಿಗೆ ಉಪವಾಸ ಕೆಡುಹುವ ನ್ಯಾಯಲಯದ ಅನ್ಯಾಯದ ವ್ಯವಸ್ತೆಗೆ ನನ್ನ ದಿಕ್ಕಾರ .... ದಿಕ್ಕಾರ ಇದೆ!!!
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳು (Atom)






