ಶನಿವಾರ, ಜೂನ್ 16, 2012

ಅಧುನಿಕ ಕೆಲವು ಅನುಪಯುಕ್ತ ತಂತ್ರಜ್ಞಾನದ ನಡುವೆಯೂ ಉತ್ತಮ ಫಲಿತಾಂಶ ದಾಖಲಿಸಿದ ಎಲ್ಲ ವಿಧ್ಯಾರ್ಥಿಗಳಿಗೂ ಶುಭಾಶಯಗಳು ..


ಅಧುನಿಕ ಕೆಲವು ಅನುಪಯುಕ್ತ ತಂತ್ರಜ್ಞಾನದ  ನಡುವೆಯೂ ಉತ್ತಮ ಫಲಿತಾಂಶ ದಾಖಲಿಸಿದ ಎಲ್ಲ ವಿಧ್ಯಾರ್ಥಿಗಳಿಗೂ ಶುಭಾಶಯಗಳು ..
ಮೊನ್ನೆ sslc  ರಿಸಲ್ಟ್ ಬಂದು ಒಂದಷ್ಟು ದಿನಗಳ ಕಾಲ ವಿವಿಧ ಮಧ್ಯಮಗಳು ಉನ್ನತ ಫಲಿತಾಂಶ ವನ್ನು ಪಡೆದವರ ಸಂದರ್ಶನ .ಅವರುಗಳ ಪೂರ್ವ ,ಪರ ವಿಚಾರ -ವಿವರಗಳು ಪುಂಖಾನು -ಪುಂಖ ವಾಗಿ ಹರಿಸು ತ್ತಿತ್ತು.ಇದು ಒಂದು ತರಹದಲ್ಲಿ ಉಪಯುಕ್ತ ಕಾರ್ಯಕ್ರಮವೇ  ಸರಿ ಯಾಕೆಂದರೆ ಅವರುಗಳು ಹೇಗೆ ವಿಧ್ಯಾಭ್ಯಸ ವನ್ನು ಕೈಗೊಂಡಿದ್ದರು ,ಟಾಪ್ ಸ್ಕೋರೆರ್ ಆಗಿ ರೂಪು ಗೊಂಡಿರುದಕ್ಕೆ ಅನುಕೂಲಕರವಾದ ಅಂಶ ಗಳು ಈ ಒಂದು ಉಪಯುಕ್ತ ಸಂದರ್ಶನದ ಮೂಲಕ ಕೆಲವಂದು ಟಿಪ್ಸ್ ಗಳು ಇತತರರಿಗೂ ಒಂದು ಮಾರ್ಗದರ್ಶನವನ್ನು ನೀಡುತ್ತದೆ .ಒಟ್ಟಾರೆ ಇಂದಿನ ಎಲೆಕ್ಟ್ರೋನಿಕ್ ಮಾದ್ಯಮಗಳ ಈ ಒಂದು ಕಾರ್ಯಕ್ರಮ ಉತ್ತಮ ವಾದದ್ದೇ..ವರ್ಷ -ವರ್ಷ ರಿಸಲ್ಟ್ ಬರುದೇ,ಒಂದಷ್ಟು ಮಂದಿಯನ್ನು ಆಯ್ಕೆ ಮಾಡಿ ಸಂದರ್ಶನ  ಮಾಡುವದೇ ,ಇದರಲ್ಲಿ ಏನು ವಿಶೇಷ ವಿಲ್ಲದಿದ್ದರೂ ,ನಂಗೆ ಈ ವರ್ಷದ ರಿಸಲ್ಟ್ ನೋಡಿ ,ಅವರುಗಳ ಸಂದರ್ಶನ ಚಿತ್ತ್ಕರ್ಷಕವಾಗಿ ,ಈ ವರ್ಷದ  ಪೈಪೋಟಿಯಾಕರದಲ್ಲಿ ಬೆಳೆಯುತ್ತಿರುವ ಮಾದ್ಯಮಗಳ ಬರಾಟೆ ,ಅಧುನಿಕ ಅಂತರಜಾಲ ,ಮೊಬೈಲ್ ಯುಗದಲ್ಲೂ ,ಪ್ರಶ್ನೆ ಪತ್ರಿಕೆ ಬಹಿರಂಗ ಗೊಂಡು ಉದ್ವಿಗ್ನ ಪರಿಸ್ಥಿತಿ ಉಂಟಾದರೂ ಗ್ರಾಮೀಣ ವಿಧ್ಯಾರ್ಥಿಗಳೂ ಟೋಪರ್ ಆಗಿ ಒಟ್ಟಾರೆ ,10 ವರ್ಷಗಳಿಂದ ಈಚೆಗೆ ದಾಖಲೆ ಫಲಿತಾಂಶ ವನ್ನು ಗಳಿಸಿದ್ದು ವಿಶೇಷವಾಗಿ ಕಾಣಿಸಿತ್ತು .
623 ಅಂಕಗಳೊಂದಿಗೆ ರಾಜ್ಯಕ್ಕೆ ಪ್ರಥಮ ಸ್ಥಾನಿಯಾದ ಬಂಟ್ವಳದ ನವ್ಯಶೆಟ್ಟಿ
ಎಂದಿನಂತೆ ಬಾಲಕಿಯರೇ ಮೇಲುಗೈ ಸಾಧಿಸಿದ್ದರೂ ,ಬಾಲಕರೂ ಸಹ ಪೈಪೋಟಿ ಯನ್ನು ಸಾಧಿಸಿದ್ದಾರೆ .ಗ್ರಾಮೀಣ ಪ್ರದೇಶದ ವಿಧ್ಯಾರ್ಥಿಗಳು ದಾಖಲೆಯನ್ನು ನಿರ್ಮಿಸುದೆಂದರೆ ಅದು ಹೆಗ್ಗಳಿಕೆಯ ಮಾತೆಂದರೆ ಅತಿಶಯೋಕ್ತಿಯಲ್ಲ .ಅವರ ಪ್ರಯತ್ನ ಶೀಲ ಕೌಶಲ್ಯಕ್ಕೆ ತಲೆಬಾಗಲೇ ಬೇಕು .ಗ್ರಾಮೀಣ ಪರಿಸರದಲ್ಲಿ ಮಕ್ಕಳನ್ನು ಶಾಲೆಗೆ ಕಳಿಸಲೂ ಅಸಾಧ್ಯ ಪರಿಸ್ತಿ ಒಂದೆಡೆ ಯಾದರೆ ,ಬಹಳಷ್ಟು ದೂರ ಶಾಲೆಯನ್ನು ಅವಲಂಭಿಸ ಬೇಕಾಗಿ ಬರುದು ಸಹ ಒಂದು ನೆಗಿಟಿವ್ ಪಾಯಿಂಟ್ .ಶಾಲೆ ಬಿಟ್ಟು ಮನೆಗೆ ಬಂದ ನಂತರವೂ ಸಹ ಮನೆಯಲ್ಲಿ ಗದ್ದೆ -ತೋಟ ಕೆಲಸ ಅನಿವಾರ್ಯ .ಟ್ಯೋಶನ್ ಅಂತೂ ಕನಸ್ಸಿನ ಮಾತೇ ಸರಿ .ಇಂತಹ ಪರಿಸ್ಥಿತಿಯಲ್ಲೂ 625 ಕ್ಕೆ 623 ಅಂಕ ಗಳಿಸುದೆಂದರೆ  ಸುಲಭದ ಮಾತೇ ?ಇನ್ನು ಪಟ್ಟಣ ಪ್ರದೇಶದ ವಿಧ್ಯಾರ್ಥಿಗಳಿಗೆ ಯಾವುದೇ ಒಂದು ದೊಡ್ಡ  ಕೆಲಸ -ಕಾರ್ಯವಿಲ್ಲದೇ ಉತ್ತಮ ಸ್ಕೋರ್ ಗಳಿಸಬಹುದು  ಎನ್ನುವ ವಿಚಾರ ವಿರಬಹುದು .ಮನೆಗೆ ಬಂದ ತಕ್ಷಣ ಟ್ಯೋಶನ್ ಸಿಗಬಹುದು ,ಮನೆಯಲ್ಲಿ ಉನ್ನತ ಶಿಕ್ಷಣ ಪಡೆದವರ ಒಂದು ಕ್ರಪೆ ಕೂಡ ಇರಬಹುದು. ಆದರೂ ಇಂದಿನ ಅಂತರ್ಜಲ ,ಮೊಬೈಲ್ ಯುಗಕ್ಕೆ ಹೆಚ್ಚಾಗಿ ಇವರುಗಳು ಅಂಟಿಕೊಂಡಿರುತ್ತಾರೆ .ಹಾಗಾಗಿ ಇಂಥ ಸಮಸ್ಯೆಗಳ ಮಧ್ಯೆಯೂ ಈ ಬಾರಿ ದಾಖಲೆ ಫಲಿತಾಂಶವನ್ನು ಗಳಿಸಿರುದು ಹೆಮ್ಮೆಯ ವಿಚಾರ .ಕಷ್ಟ -ಪಟ್ಟು ವಿಧ್ಯಾರ್ಜನೆ ಕಂಡು ಕೊಂಡು 10 ಗಳಿಂದ್ಚೆಗೆ ಉತ್ತಮ ಫಲಿತಾಂಶವನ್ನು ತಂದು ಕೊಟ್ಟ ಎಲ್ಲ ವಿಧ್ಯರ್ಥಿಗಳಿಗೂ ನೆಲ್ಮೆಯ ಹೃದಯಪೂರ್ವಕ ಅಭಿವಂದನೆಗಳು . 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ