ಶುಕ್ರವಾರ, ಆಗಸ್ಟ್ 26, 2011

ಮರೆತನೆಂದರೂ ಮರೆಯಲಿ ನಾ ಹೆಂಗೆ ?

                           ದೀಪಾವಳಿ ಯ ಆ ದಿನ .....
ನನ್ನ ಜೀವನದಲ್ಲಿ ಮರೆತನೆಂದರೂ ,ಮರೆಯಲಾಗದ, ಅದೂ ದೀಪಾವಳಿ ಹಬ್ಬ 0ದರಂತೂ, ಮನಸನ್ನು ಆಕ್ರಮಿಸಿ ಕೊಳ್ಳುವ ಘಟನೆ ಇಂದಿಗೂ ಹಚ್ಹ -ಹಸಿರು . ಘಟನೆ ನಡೆದ ತುಂಬಾ ವರ್ಷಗಳು ಕಳೆದು  ಹೋಗಿದೆ. ನಾನಾಗ ಐದನೇ ತರಗತಿಯಲ್ಲಿ ಕಲಿಯುತಿದ್ದೆ .ಶಾಲೆಗೆ ರಜೆ ಸಿಕ್ಕಿದ್ರೆ ಸಾಕು ,ನಮ್ಮದು ಕಳ್ಳ -ಪೋಲಿಸ್ ಆಟ ! ಆಟ ಎಸ್ಟೊಂದು ಜನಪ್ರಿಯ ವಾಗಿತಂದ್ರೆ ಶಾಲೆಯ ಆಟದ ಪಿರಿಡಿಗೂ,ಅದೇ ಆಟ!ರಜೆಯ ದಿನವು ಅದೇ !!ಅಮನ್ ,ಮಂಜೂ ,ರಾಜೇಶ್ ,ರಾಘು,ರವಿ ,ಹೀಗೆ ನಮ್ಮ ಏರಿಯದ್ - ಸ್ನೇಹಿತರ ಬಳಗ ಒಂದು ಖೇಲ್ ನಲ್ಲಿ ಪಾಲ್ಗೊಂಡರೆ ಇನ್ನಷ್ಟು ಜನ ಸೇರಿಕೊಲ್ಳುತಿದ್ದರು. ಇಂಥ ಹೊತ್ತಿನಲ್ಲಿ ನಮೆಗೆ ದೀಪಾವಳಿ ಹಬ್ಬಕ್ಕೆ ಮೂರೂ ದಿನ ರಜೆ ಕೊಟ್ಟಿದ್ದರು .
net
ರಜೆ ಅಂದ್ರೆ ಕೇಳಬೇಕೆ ? ಅನ್ನ-ನೀರು ಇಲ್ಲದೆ ಬರಿ ಆಟದಲ್ಲಿ ಬ್ಯುಸಿ ..ಆ ದಿನ ನನ್ನದೇ ಆದ ಹೊಸತೊಂದು  ಕಲ್ಪನೆಯಲ್ಲಿ ಹೊಸ ಐದಿಯಾದಲ್ಲಿ ಆಟ ಆಡಲು ಮುಂದಾದೆವು .ಕಳ್ಳರ ಕೈಲಲ್ಲಿ ಬಾಂಬ್, ಪೋಲೀಸರ ಕೈಲಲ್ಲಿ ಪಿಸ್ತೋಲ್ .ಬಾಂಬ್ ಅಂದರೆ ಪಟಾಕಿಯ ಗರ್ನಲ್ .ಪಿಸ್ತೂಲ್ ಅನದ್ರೆ ಕೇಪು ,(ರೀಲ್ ಪಟಾಕಿ ಬಿಡುವ ಆಟಿಕೆಯ ಪಿಸ್ತೂಲ್ ).
ಆ ಒಂದು ದುರಾದ್ರಷ್ಟದ ಹೊತ್ತಿನಲ್ಲಿ ನಾನೆ ಕಳ್ಳನಾಗಿದ್ದೆ, ಕಳ್ಳರ ತಂಡದಲ್ಲಿದ್ದ 'ಮಂಜು'ವನ್ನು ,ಪೊಲೀಸರು ಬೆನ್ನಟ್ಟುತಿದ್ದಾಗ, ನಾನು ಮರದಡಿಯಲ್ಲಿ ಅವಿತಿದ್ದೆ ."ಅವನ್ನನ್ನು ಬಚಾವ್ ಮಾಡೋ "ಎಂಬ 'ಅಮನ್'  ನ ಕರೆಗೆ ಓಗೊಟ್ಟು ,ನಾನು ಕೈಲಿರುವ ಗರ್ನಲ್ ಅನ್ನು ಅಗರಬತ್ತಿಯ ಮೂಲಕ ಬೆಂಕಿ ಹಚ್ಚಿ ಬೆನ್ನತ್ತುತ್ತಿದ್ದ,ಪೊಲೀಸರ ಕಡೆಗೆ ಎಸೆದು ಬಿಟ್ಟೆ .ನಾನು ಅವರು ಬರುವ ದಾರಿಗೆ ಅದನ್ನು ಯೆಸಯಬೇಕಿತ್ತು .ನಮ್ಮ ಆಟ ದ ಉದ್ದೇಶ ಕೇವಲ ಹೆದರಿಸುದಕ್ಕಾಗಿ ಮಾತ್ರ ಪಟಾಕಿ ಬಳಕೆ ..ಆದ್ರೆ ದುರದ್ರಷ್ಟವಷತ್, ಅದು ಹೋಗಿ ಬಿದ್ದಿದ್ದು ,ಪೋಲಿಸ್ ಪಾತ್ರದಲ್ಲಿದ್ದ ,'ರವಿ '
ಮೇಲೆ. ಅವನು ಆ ದಿನ ಹಬ್ಬಕ್ಕಾಗಿ ಹೊಸ ಬಟ್ಟೆಯನ್ನು ಧರಿಸ್ಸಿದ್ದ.ಅದು ಸುತ್ತು ಹೊದ್ದದ್ದಲ್ಲದೆ ,ಬೆನ್ನಿನ ಮೇಲೆ ಸುಟ್ಟಗಾಯ ಗಳಾಗಿತ್ತು .ರವಿಯ ಚೀರಾಟ  ಮುಗಿಲು ಮುಟ್ಟಿತ್ತು..ಕ್ಷಣ ಮಾತ್ರದಲ್ಲಿ ಎಲ್ಲ ಪೋಲಿಸ್ -ಕಳ್ಳ ಪಾತ್ರದಾರಿಗಳು ಒಂದಾಗಿದ್ದರು ಇಡಿ ಊರೇ ಒಟ್ಟಾಗಿತ್ತು .ನಾನು ಮಾತ್ರ ಮರದ ಹಿಂಬದಿಯಲ್ಲಿ , ಅವಿತು ಕೊಂಡಿದ್ದೆ .ಆಗ 'ಅಮನ್ ',ನನ್ನ ಬಳಿ ಬಂದು" ಅವನಿಗೆ ತುಂಬಾ ಗಾಯವಾಗಿದೆ ಯಾಕೆ ನೀನ್ ಹಂಗೆ ಮಾಡ್ದೆ ಮಾರಾಯ " ಎಂದು ಒಂದಷ್ಟು ಬೈತಾ ಇದ್ರೆ ,ಜನರ ಬೈಗುಳವೂ ಮುಗಿಲು ಮುತ್ತ್ತುತಿತ್ತು .ನನ್ನ ಮನಸ್ಸು ಮುಮ್ಮಲ ಮಲಗಿತ್ತು .ನಿಜಕ್ಕೂ ನಾನು ರೌಡಿ (ಕಳ್ಳ )ನಾಗಿ ಬಿಟ್ಟನಲ್ಲ .ಎಂಬ ಪಾಪ ಪ್ರಜ್ಞೆ ನನ್ನು ಕಾಡುತ್ತಿತ್ತು . ಇಂಥ ಹೊತ್ತಿನಲ್ಲಿ ಮನೆಗೆ ಹೋಗಲು ಸಾದ್ಯವೇ? ಮನೆಯಲ್ಲಿ  ಹಬ್ಬದ ತಿಂಡಿ ತಿನಿಸು ಬೇಕಾದಷ್ಟಿದ್ದ್ರೂನಾನು ಮಾತ್ರ ಉಪವಾಸ ..ಬೆಳಿಗ್ಗಿನಿಂದ ಸಂಜೆ ತನಕ ಮನೆ ಬಿಟ್ಟಿದ್ದ ನಾನು ಸೂರ್ಯ ಮನೆಗೆ ನಡೆದ ನಂತರ ,ನನ್ನ ಕಾಲೂಗಳು ಮನೆಯ ಕಡೆ ಜಾರಿತ್ತು ಆಟ ದ ಆಪಘಾತ ಒಂದೆಡೆ ಯಾದರೆ ,ಬೆಳಿಗ್ಗೆ ಇಂದ ಮನೆ ಬಿಟ್ಟ ಕಾರಣ ,ಎಲ್ಲ ಒಟ್ಟು ಸೇರಿ ಬಿಸಿ -ಬಿಸಿ ಹೋಳಿಗೆ ಪಾಯಸ ಕಾದಿತ್ತು .....
                                                                 - ಎಸ್ .ಕೆ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ