ಮಂಗಳವಾರ, ಜುಲೈ 28, 2020
ಅಂತವರಿಗಿಂತ ಕೆಟ್ಟವನಾದನೇ ಡ್ರೋನ್ ಪ್ರತಾಪ್ ?
ಡ್ರೋನ್ ಪ್ರತಾಪ್ ಹೆಸರು ಕೇಳದವರು ಯಾರು ಇಲ್ಲ 2-3 ವರ್ಷಗಳ ಹಿಂದೆ ಅತೀ ಹೆಚ್ಚು ಜನಪ್ರೀಯ ಗೊಂಡ ಪ್ರತಾಪ್ ಮತ್ತೆ ಸುದ್ದಿಯಾಗುತ್ತಿದ್ದಾರೆ ಬಡತನ ದಿಂದ ಬಂದು ತನ್ನ ಪ್ರಯತ್ನ ಮತ್ತು ಯಶೋಗಾಥೆ ಯಿಂದ ಯುವ ವಿಜ್ಞಾನಿ ಎಂಬ ನಾಮಾಂಕಿತ ದೊಂದಿಗೆ ಎಲ್ಲಾರಿಗೂ ಮಾದರಿ ಎನಿಸಿಕೊಂಡ ಈತ ಕಳೆದ ಒಂದಷ್ಟು ದಿನಗಳಿಂದ ಈಚೆಗೆ ಸಾಮಾಜಿಕ ಜಾಲ ತಾಣ ಸೇರಿದಂತೆ ಮಾಧ್ಯಮಗಳ ಚಾವಡಿಯಲ್ಲಿ ವಸ್ತುವಾಗುತ್ತಿದ್ದಾರೆ . ಬಗೆ ಬಗೆಯ ಟ್ರೊಲ್ಸ್ ಗಳು ಅನೇಕಾನೇಕ ಆತನ ಕಥೆಗಳು ವಿಚಿತ್ರಕಾರಿಯಾಗಿ ತಾರಕಕ್ಕೇರುತ್ತಿದೆ . ಅಂತಹ ದೊಡ್ಡ ತಪ್ಪು ಮಾಡಿದ್ದಾನೆಯೇ ಪ್ರತಾಪ್ ? ತಪ್ಪು ದೊಡ್ಡದಿರಲಿ ಸಣ್ಣದಿರಲಿ ತಪ್ಪು ತಪ್ಪೇ ! ದ್ರೋಹ ವಂಚನೆ ಎಂಬಿತ್ಯಾದಿಗಳಿಂದ ಸುದ್ದಿಯಲ್ಲಿರುವ ಪ್ರತಾಪ್ ನನ್ನು ಈ ಸ್ಥಿತಿಗೆ ಕರೆತಂದವರು ಯಾರು ? ಈಗಿನ ಅದೇ ಮಾಧ್ಯಮ ವಲ್ಲವೇ ?ಹಾಗೆ ನೋಡಿದರೆ ಪ್ರತಾಪ್ ನದ್ದು ಎಲ್ಲವೂ ಸತ್ಯವಲ್ಲ ಹಾಗಂತ ಎಲ್ಲವೂ ಸುಳ್ಳೆಂದು ಹೇಳಲಾಗದು. ಪ್ರತಾಪ್ 'ಈ ತ್ಯಾಜ್ಯ' ವಸ್ತುಗಳನ್ನು ಬಳಸಿ ಡ್ರೋನ್ ಮಾಡದಿರಬಹುದು ,ಕೆಲವು ಸಿನಿಮಾ ಕಥೆಗಳನ್ನು ತನ್ನ ಭಾಷಣದಲ್ಲಿ ಬಿಸಾಕಿರಬಹುದು ,ದೇಶ ಸುತ್ತದಿರಬಹುದು . ಆದರೂ ಆತನಲ್ಲಿ ಸ್ವಲ್ಪ ಲಾಲೆಜ್ಡ್ ಇದೆ. ಅದಿದೆ ಅನ್ನುವುದಕ್ಕೆ ಎಲ್ಲೋ ಆತನ ಹಾವ -ಭಾವ ದಿಂದ ಆರ್ಥವಾಗುತ್ತಿದೆ ಮೆಡಲ್ ಗಳನ್ನೂ ಪಡೆಯದಿದ್ದರೂ ಆ ಸ್ಥಳ ಗಳಿಗೆ ಎಂಟ್ರಿಯನ್ನು ದಕ್ಕಿಸಿಕೊಂಡಿರುವುದು ಎಲ್ಲೋ ಅವನಲ್ಲಿನ ಪ್ರತಿಭೆ ಸಾಕ್ಷಿ ಒದಗಿಸುತ್ತಿದೆ ಒಂದಷ್ಟು ಪ್ರಯತ್ನ ಪಟ್ಟರೇ ಖಂಡಿತವಾಗಿಯೂ ಸಾಧಿಸಬಲ್ಲನು ಅದೆಲ್ಲಾ ಬದಿಗಿರಿಸಿದರೇ ,ಇಂದಿನ ಈ ಎಲ್ಲಾ ಗೊಂದಲ, ಗೊಡವೆಗಳಿಗೆ ಸೋಶಿಯಲ್ ನೆಟ್ವರ್ಕ್ ,ನ್ಯೂಸ್ ವಾಹಿನಿಗಳೇ ಕಾರಣ. ಇದೀಗ ಅದೂ ಇದೂ ಎಂದು ವರ್ಣರಂಜಿತವಾಗಿ ಕಥೆ ಕಟ್ಟುವ ಇವುಗಳು ಅಂದು ಈತನ ಪೂರ್ವಪರವನ್ನು ಕಂಡು ಕಾರ್ಯಕ್ರಮವನ್ನು ಪ್ರಸಾರ ಮಾಡ್ಬೇಕಿತ್ತು . ತಮ್ಮ ಟಿಆರ್ಪಿ ತೆವಲಿಗೋಸ್ಕರ ಇಂತಹ ಕಾರ್ಯಕ್ರಮಗಳಿಗೆ ಕಥನ ಹೆಣೆಯುವರ ಮಧ್ಯೆ ಸಿಕ್ಕಿದ್ದೇ ಛಾನ್ಸು ಎನ್ನುತ್ತಾ ಇಲ್ಲ ಸಲ್ಲದ ಸುಳ್ಳು -ಪೊಳ್ಳುಗಳನ್ನು ಹೇಳಲು ಒಳ್ಳೆಯ ಪ್ಲಾಟ್ ಪಾರ್ಮ್ ಸಿಕ್ಕಿತ್ತು ಪ್ರತಾಪ್ ಗೆ . ಅದನ್ನೇ ಬಂಡವಾಳ ಮಾಡ್ಕೊಂಡು ಬಿಟ್ಟದ್ದ . ಹಲವಾರು ಜನರಿಗೆ ,ಕಡಿಮೆ ಸಮಯದಲ್ಲಿ ರೋಲ್ ಮಾಡೆಲ್ ಆಗಿಬಿಟ್ಟ . ಆತನ ಮೇಲೆ ಕನಿಕರ ತೋರಿಸದ್ದ ಕೈಗಳಿಗೆ ಆತನ ಯಶೋಗಾಥೆಯನ್ನು ಆಲಿಸಿದ ಮನಸ್ಸುಗಳಿಗೆ ಘಾಸಿಯಾಗಿದ್ದು ಬಿಟ್ಟರೇ ತಲೆ ಹೋಗುವಂತ ವಿಚಾರವೇನೂ ಇರಲಿಲ್ಲ. ದಿನೇ -ದಿನೇ ಟ್ರೋಲ್ ಮಾಡುವವರು ಸುದ್ದಿ ರೆಡಿ ಮಾಡುವವರು ಆಲೋಚಿಸಿ . ಗುಬ್ಬಿ ಮೇಲೆ ಬ್ರಹ್ಮಸ್ತ್ರವೇಕೇ ? ದೇಶವನ್ನು ಲೂಟಿ ಗೈದವರು,ಕೊಳ್ಳೆ ಹೊಡೆದವರು ,ಆಶ್ವಾಸೆಯನ್ನು ಕೊಟ್ಟು ಓಟು ಪಡೆದು ಸ್ವಾರ್ಥ ಪರಿಧಿಯಲ್ಲಿ ಸುತ್ತುವ ರಾಜಕಾರಣಿ ಗಳಿಗೆ , ದೇಶದ ಅನ್ನ ತಿಂದು ಅನ್ಯ ದೇಶಗಳ ಎಂಜಲು ನೆಕ್ಕುವವರಿಗಿಂತ ದೊಡ್ಡ ತಪ್ಪು ಮಾಡಿಲ್ಲ ಪ್ರತಾಪ್. ಇವರುಗಳು ಮಾಧ್ಯಮ ಮತ್ತು ನೆಟ್ಟಿಗರಿಗೆ ಆಹಾರ ವಾಗದಿರುವುದು ವಿಪರ್ಯಾಸ . ಬಗ್ಗಿದವರಿಗೆ ಹಿಡಿದಷ್ಟು ಗುದ್ದು ಕೊಡುವುದು ತರವಲ್ಲ !
ಶುಕ್ರವಾರ, ಜುಲೈ 17, 2020
ಚೀನಾಕ್ಕೆ ಶರಣಾಯಿತೇ ಅಮೇರಿಕಾ ?!
ವಿಶ್ವದ ದೊಡ್ಡಣ್ಣ ಅಮೇರಿಕಾ. ಇದಕ್ಕೆ ಎದುರಾಳಿ ದೇಶವನ್ನು ಊಹಿಸುವುದೇ ಕಷ್ಟ.ಬಲಿಷ್ಟ ರಾಷ್ಟ್ರ. ವಿಜ್ಞಾನ ,ತಂತ್ರಜ್ಜಾನ,ಆರ್ಥಿಕತೆ ,ಸಾರ್ಥಕತೆ ಹೀಗೆ ಎಲ್ಲಾ ವಿಭಾಗದಲ್ಲಿ ಅಭಿವ್ರದ್ಧಿ ಹೊಂದಿರುವ ವಿಶ್ವದ ನಂಬರ್ ಒನ್ ರಾಷ್ಟ್ರ ಅಮೇರಿಕಾ ಎಂಬುವುದನ್ನು ಒತ್ತಿ ಹೇಳಬೇಕಾದ ಅವಶ್ಯಕತೆ ಇಲ್ಲ. ವಿಶ್ವದ ಎಲ್ಲಾ ದೇಶಗಳೂ ಅಮೇರಿಕಾದ ಮಾತನ್ನು ತಪ್ಪದೇ ಒಪ್ಪುತ್ತದೆ. ಅಮೇರಿಕಾ ನಮಗೇನಾದರೂ ಮಾಡಿಬಿಡಬಹುದೆಂಬ ಆತಂಕದ ಜೊತೆಗೆ ಸಂಕಷ್ಟ ಕಾಲದಲ್ಲಿ ಸಹಾಯಕ್ಕಾದರೂ, ಅಮೇರಿಕಾವನ್ನು ಅಪ್ಪಿಕೊಳ್ಳಲೇ ಬೇಕು. ಎಂಬುದು ಗಮನಾರ್ಹ ಸಂಗತಿ. ಯಾರಿಗೂ ಕ್ಯಾರೆ ಮಾಡದ ಸಧ್ಯದ ಟ್ರಂಪ್ ಸಾರಥ್ಯದ ಅಮೇರಿಕಾ, ಪ್ರಸ್ತುತ ಎಲ್ಲೊ ಒಂದು ಕಡೆ ಚೀನಾಕ್ಕೆ ಹೆದರುತ್ತಿದೇಯಾ ಎಂಬ ಭಾವನೆ ಉಂಟಾಗುತ್ತಿದೆ. ಸಾಮನ್ಯವಾಗಿ ಎಲ್ಲರಲ್ಲೂ ಇದ್ದ ಅಭಿವ್ಯಕ್ತಿ ಎಂದರೆ ಕ್ರೂರಿ ಕೊರೋನಾವನ್ನು ಕೊಟ್ಟ ಚೀನಾವನ್ನು ಮಟ್ಟಹಾಕಲು ,ಅದಕ್ಕೆ ತಕ್ಕ ಪಾಠ ಕಲಿಸುವುದು ಅಮೇರಿಕಾ ಬಿಟ್ಟರೇ ಇನ್ಯಾವುದರಿಂದಲೂ ಅಸಾಧ್ಯ. ಅದರಲ್ಲೂ ಅಮೇರಿಕಾ ಸ್ಕೂರ್ ಪಟ್ಟಿಯಲ್ಲಿ ಅಗ್ರಪಂಕ್ತಿಯ ಸ್ಥಾನ ಪಡೆದಿದೆ .ಕೋಪಾಗ್ನಿಯಲ್ಲಿ ಅದು ಕುದಿಯುತ್ತಿದೆ. ಪ್ರತ್ಯಕ್ಷವಾಗಿ ಅಲ್ಲದಿದ್ದರೂ, ಪರೋಕ್ಷವಾಗಿ ಮಾಡುತ್ತಿರುವ ಟೀಕಾ ಪ್ರಹಾರದಲ್ಲಿ ಸುಲಭವಾಗಿ ಅರ್ಥೈಸಿಕೊಳ್ಳಬಹುದು. ಉಂಟಾದ ನಷ್ಟ ಭರಿಸುವುದರಿಂದ ಹಿಡಿದು,ಯುದ್ದಕ್ಕೆ ಸನ್ನದ್ದವಾಗುವ ರೀತಿಯಲ್ಲಿ ಬಡಾಯಿ ಕೊಚ್ಚಿಕೊಳ್ಳುತ್ತಿದೆ.ಚೀನಾದ ಬೆಂಬಲಕ್ಕೆ ಕಡಿವಾಣ ಹಾಕಲು ಇತರ ದೇಶಗಳಿಗೆ ಖಡಾಕ್ ವಾರ್ನಿಂಗ್ ಕೊಟ್ಟಿದೆ . ವಿಶ್ವ ಆರೋಗ್ಯ ಸಂಸ್ಥೆಯ ವಿರುದ್ದ ಗುಡುಗಿದೆ.
ಬೆಂಬಲ ಒತ್ತಟ್ಟಿಗಿರಲಿ,ಇತರ ದೇಶಗಳು ಸಹಾ ಚೀನಾದ ವಿರುದ್ಧ ಕಿಡಿಕಾರುತ್ತಿವೆ. ಅವುಗಳಿಂದ ಪ್ರತಿಕಾರ ತೀರಿಸಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಸ್ವತಂತ್ರವಾಗಿ ಹೋರಾಡುವ ಶಕ್ತಿ ಇರುವುದು ವಿಶ್ವದ ದೊಡ್ಡಣ್ಣನಿಗೆ ಮಾತ್ರ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ಕೊಟ್ಟು ಸುಮ್ಮನಾಗುತ್ತಾರೆ ವಿನಹ ಪ್ರತಿರೋಧದ ಪ್ರಭಾವವಾಗಿಲ್ಲ. ಚೀನಾದ ವಸ್ತುಗಳನ್ನು ಬಹಿಷ್ಕರಿಸಬೇಕು .ಚೀನಾಕ್ಕೆ ಇರುವ ಬೆಂಬಲವನ್ನು ಹಿಂದುತೆಗೆದು ಕೊಳ್ಳಬೇಕೆಂಬ, ನಿಬಂಧನೆ-ನಿರ್ಭಂಧ ಮಾತುಗಳನ್ನು ಹೇಳುತ್ತದೆಯಾದರೂ, ಅದರ ಪಾಲನೆ ಕಟ್ಟುನಿಟ್ಟಾಗಿ ಖುದ್ದು ಅಮೇರಿಕಾ ದಿಂದಲೇ ಆಗುತ್ತಿಲ್ಲ. ಎಲ್ಲವೂ ಬಾಲಿಶ!
ಭಾರತ ಇತ್ತಿಚೆಗೆ 59 ಯಾಪ್ ಗಳನ್ನು ಬ್ಯಾನ್ ಮಾಡಿತ್ತು.ಅಮೇರಿಕಾ ಭಾರತವನ್ನು ಪ್ರಶಂಸಿಸಿತ್ತು .ಲಡಾಖ್ ಗಡಿಯಲ್ಲಿ ಯೋಧರ ಮೇಲಾದ ದಾಳಿಯನ್ನು ಖಂಡಿಸಿ,ಭಾರತಕ್ಕೆ ಬೆಂಬಲವನ್ನೂ ನೀಡಿತ್ತು. ಭಾರತ ಚೈನಾದ ಯಾಪ್ ನ್ನು ಬ್ಯಾನ್ ಮಾಡಿದ ಬೆನ್ನಲ್ಲೇ ತಾನೂ ಕೂಡಾ ನೀಷೇಧಿಸುತ್ತೇನೆಂದು ಘೋಷಿಸಿತ್ತು. ಕಾಲ ಉರುಳುತ್ತಿದೆ ಅಮೇರಿಕಾ ಸುಮ್ಮನಾಗಿದೆ. ಮಾತು ಮರೆತಂತಿದೆ.
ಚೀನಾದ ವೈರಸ್ ಹೆಚ್ವು ಪ್ರಭಾವ ಬೀರಿದ್ದು ಅಮೇರಿಕಾದ ಮೇಲೆ., ಚೇತರಿಕೆ ಹಂತಕ್ಕೂ ಸಾಗದ ಅಮೇರಿಕಾ ಚೀನಾಕ್ಕೆ ಶರಣಾದಂತಿದೆ. ಮತ್ತಿನ್ಯಾವುದಾದರೂ ವೈರಸ್ ನ್ನು ತಯಾರುಮಾಡಿ ಬಿಡಬಹುದೆಂಬ ದಿಗಿಲು ತಗುಲಿರಬಹುದೇ?!! ಈ ಸಂದರ್ಭ ಸಮಂಜಸವಲ್ಲಾ ಆ ಕಾಲಕ್ಕೆ ಕಾಯೋಣ ಎಂಬ ವಿಚಾರ ವಿರಬಹುದೇ ಗೊತ್ತಿಲ್ಲ ! ಅಮೇರಿಕಾ ದಿಂದ ಮುಂದೆ ನಾವೇನು ನಿರೀಕ್ಷಿಸಬಹುದು ? ಕಾದು ನೋಡೊಣ. !
-ಶಿವಕುಮಾರ್ ಹೊಸಂಗಡಿ
ಗುರುವಾರ, ಜುಲೈ 2, 2020
ಈ ಪರಿಯ ನಿರ್ಲಕ್ಷೆ ಯಾಕೆ?
ಇಟಲಿ,ಪ್ರಾನ್ ಸೇರಿದಂತೆ ಅನೇಕ ದೇಶಗಳಲ್ಲಿ ಕೊವೀಡ್ ಮ್ರತರನ್ನು ಲಾರಿಯಲ್ಲಿ ತುಂಬಿಸಿ ದೊಡ್ಡ ಹೊಂಡಕ್ಕೆ ಡಂಪ್ ಮಾಡುವ ವಿಡೀಯೋವನ್ನು ನಾವೇಲ್ಲಾ ಇತ್ತಿಚೆಗೆ ಕಂಡಿರುತ್ತೇವೆ. ಅಂತದ್ದೇ ಚಿತ್ರಣವನ್ನು ನಮ್ಮ ದೇಶದ ರಾಜ್ಯದಲ್ಲಿನ ಬಳ್ಳಾರಿ,ದಾವಣಗಿರಿ,ಯಾದಗಿರಿಯಲ್ಲಿ ನೋಡುವ೦ತಾಗಿದ್ದು ನಮ್ಮ ದೌರ್ಭಾಗ್ಯ ಸರಿ !ಯಾವುದೇ ಕರುಣೆ,ಅನುಕಂಪ,ಗೌರವ,ಸೌಜನ್ಯ,ನಾಚಿಕೆ,ಮರ್ಯಾದೆ ಇಲ್ಲದೇ ಬೀದಿ ನಾಯಿ ಸತ್ತಾಗ ಹೇಗೆ ಅದನ್ನು ದರ-ದರನೆ ಎಳೆದು ಹೊಂಡಕ್ಕೆ ಎಸಯಲಾಗುತ್ತದೋ ಕಾರ್ಯ ರೂಢಿಗತವಾಗಿದೆ. ಜೆಸಿಬಿ ಯಂತ್ರದ ಮೂಲಕ ಗುಂಡಿಗೆ ದೂಡುವ,ಒಂದೇ ಹೊಂಡದಲ್ಲಿ 4-5 ಶವವನ್ನು ಎಸೆಯುವ ಪರಿಸ್ತಿತಿಯನ್ನು ನೋಡಿದರೇ ಕರುಳು ಚುರುಕ್ ಅನ್ನುತ್ತದೆ. ಇನ್ನು ಇದನ್ನು ಗಮನಿಸುತ್ತಿರುವ ಅವರನ್ನು ಕಳೆದು ಕೊಂಡ ಕುಟುಂಬಸ್ಥರಿಗೆ ಹೇಗಾಗಬೇಡ. ನಾಯಿ,ಇಲಿ ಸತ್ತಾಗ ಅವುಗಳ ಬಾಲ ಹಿಡಿದು ದರ ದರನೇ ಎಳೆದು ಎಸೆಯುತ್ತೇವೆ ಸೇಮ್ ಟು ಸೇಮ್ ಎಸೆಯುತ್ತಿರುವ ಆರೋಗ್ಯ ಸಿಬ್ಬಂದಿಗಳಿಗೆ ಶೇಮ್ ಆಗಬೇಕು., ತಮ್ಮಂತಯೇ ಇನ್ನೊಬ್ಬರ ದೇಹ ಎಂಬ ಕಿಂಚಿತ್ ಅರಿವು ಇಲ್ಲವೇ? ಒಂದು ನಾಯಿ ಸತ್ತರೇ ಇನ್ನೊಂದು ನಾಯಿ ಅದೇಷ್ಟು ಉಪಚಾರ ಮಾಡುತ್ತದೆ. ಕಣ್ಣೀರು ಸುರಿಸುತ್ತದೆ. ತನ್ನ ಮೂತಿಯಿಂದ ಮಣ್ಣು ಮಾಡುತ್ತದೆ, ನಾಯಿಗಿಂತ ಕಡೆಯಾದೇವಾ?ಶ್ವಾನಕ್ಕಿರುವಷ್ಟು, ಬುದ್ದಿಮತ್ತೆ,ಪಾಪ ಪ್ರಜ್ನೆ ನಮ್ಮವರಿಗೆ ಇಲ್ಲದೇ ಇರುವುದು ಕಳವಳಕಾರಿ. ಕೋವಿಡ್ ರೋಗಿಗಳಿಂದ ದೂರವಿರಬೇಕು,ಮ್ರತದೇಹದಿಂದಲೂ ಕೂಡಾ ಹೌದು.ಭಯ,ಆತಂಕ ಎಲ್ಲಾರಲ್ಲೂ ಇರುತ್ತದೆ. ನರ್ಸ್ ,ಡಾಕ್ಟರ್ ಎಷ್ಟು ಕಾಳಜಿಯಿಂದ ರೋಗಿಗಳಿಗೆ ಟ್ರೀಟ್ ಮೆಂಟ್ ಕೊಡುತ್ತಾರೆ.ಆದರೆ ಇತ್ತ ಸತ್ತವರ ಶವವನ್ನು ದೂರದಿಂದ ಎಸೆಯುವರಿಗೆ ಇದು ಪಾಲನೆಯಾಗುವುದಿಲ್ಲವೇ? ಪಿಪಿಇ ಧಿರಿಸುಗಳನ್ನು ಧರಿಸಿಯೂ, ಇಂಥಹ ಕಾರ್ಯಕ್ಕೆ ಮುಂದಾಗುವುದು ಎಷ್ಟು ಸರಿ ?ಅಷ್ಟೊಂದು ಭಯವೇ? ಶವಕ್ಕೂ ಕೂಡಾ ಪುಲ್ ಕವರ್ ಮಾಡಲಾಗುತ್ತದೆ ಆ ಹೊದಿಕೆ ಯಿಂದ ವೈರಸ್ ಹೊರಬರಲು ಸಾಧ್ಯವೇ? ತಾವುಗಳು ಸಹಾ ತುಂಬಾನೆ ರಕ್ಷಣಾತ್ಮಕ ಕವಚವನ್ನೇ ತೊಟ್ಟೂ ಹೀಗೆ ಮಾಡಲು ತಮಗೆ ಮನಸ್ಸು ಹೇಗೆ ಬರುತ್ತದೆ ?ನಿಮ್ಮ ಮನೆಯ ಸದಸ್ಯಗಳಿಗೆ ಹೀಗೆ ಮಾಡುತ್ತೀರಾ ?" ಸತ್ತವರ ದೇಹ ಎತ್ತ ಬಿದ್ದರೇನು?" ಎಂಬ ನಾಣ್ಣುಡಿ ಇದೆ.ಆದರೂ ಕೂಡಾ ನಮ್ಮಲ್ಲಿ ಸತ್ತವರಿಗೆ ಎಷ್ಟು ಶಾಸ್ತ್ರ ,ಸಂಪ್ರದಾಯಯುತವಾಗಿ ಅಂತ್ಯಕ್ರೀಯೆಯನ್ನು ಮಾಡಲಾಗುತ್ತದೆ. ಅದು ಬದಿಗಿರಲಿ ಕಿಂಚಿತ್ ಸರಿಯಾಗಿ ಹೊಂಡಕ್ಕೆ ಹಾಕಿ ದಫನ ಮಾಡಲೂ ನಿಮ್ಮಿಂದ ಸಾಧ್ಯವಾಗುತ್ತಿಲ್ಲ ,ಒಂದೇ ಗುಂಡಿಗೆ ಒಂದೇ ಮ್ರತ ದೇಹ ಅಂತ ಗೋತ್ತಿದ್ದರೂ, 4-5 ಶವವನ್ನು ಒಂದೇ ಸಮನೆ ಸುರಿಯುವ ನೀವುಗಳು ಬುದ್ದಿಭ್ರಮಣೆರೇ? ಅಂದರೂ ಅತಿಶಯೊಕ್ತಿ ಯಾಗಲಾರದು .ಒಂದು ಸರ್ಕಾರಿ ಹುದ್ದೆಯನ್ನು ಹೊಂದಿರುವ ವ್ಯಕ್ತಿ ಮ್ರತರಾದರೇ ಸಕಲ ಸರ್ಕಾರಿ ಗೌರವ ಲಭಿಸುತ್ತದೆ ಆದರೆ ಇಲ್ಲಿ ಕೋವಿಡ್ ಗೆ ತುತ್ತಾದರೇ ಜೆಸಿಬಿಯ ಮೂಲಕ ಕಸವನ್ನು ಬೀಸಾಡುವ ಹಾಗೆ ಗುಂಡಿಗೆ ದೂಡಿ ಅಂತ್ಯಸಂಸ್ಕಾರ ಕಾರ್ಯ ಮುಗಿದು ಬಿಡುವ ಪದ್ದತಿ ಜಾರಿಯಲ್ಲಿದೆ .ಎಂತಹ ಕಾಲಘಟ್ಟದಲ್ಲಿ ನಾವಿದ್ದೇವೆ ? ಹೌದು !ಕರೋನ ಸಮಸ್ಯೆಇದೆ .ಪ್ರಸ್ತುತದ ಪರಿಸ್ಥಿತಿ ಎಲ್ಲರಿಗೂ ಅರ್ಥವಾಗುತ್ತದೆ. ಆದರೂ ಈ ಪರಿಯ ನಿರ್ಲಕ್ಷೆ,ನಿರ್ಲಜ್ಜೆ ಯಾಕೆ?ದ್ರಷ್ಠಿ ಕೋನ ಬದಲಾಗಿದೆ!!
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳು (Atom)


