ಭಾನುವಾರ, ಮೇ 27, 2018

ಸಕಲ ಕಲಾ ವಲ್ಲಭ ;ಮುಸ್ತಾಕ್ ಹೆನ್ನಾಬೈಲ್


ಧರ್ಮಕ್ಕೂ ತೊಡಕಾಗದ ಅಪೂರೂಪದ ಅರಳುತ್ತಿರುವ ಬಹುಮುಖ ವ್ಯಕ್ತಿತ್ವ



ಯಕ್ಷಗಾನ ಕರ್ನಾಟಕ ಕರಾವಳಿಯ ಗಂಡುಕಲೆ .ಒಂದು ಕಾಲದಲ್ಲಿ ಕೇವಲ ಪುರುಷರಿಗೆ ಮಾತ್ರ ಸೀಮಿತವಾಗಿದ್ದ ಈ ಕಲೆಯಲ್ಲಿ ಇತ್ತೀಚೆಗೆ ಸ್ತ್ರೀಯರು ಪ್ರವೇಶ ಮಾಡಿ ಮಿಂಚುತ್ತಿದ್ದಾರೆ. ಇನ್ನೂ ಸಂತೋಷದ ವಿಚಾರವೆಂದರೆ ಅನ್ಯ ಧರ್ಮೀಯರ ಪ್ರವೇಶ. ಜಬ್ಬಾರ್ ಸಮೋ ಈ ಹೆಸರು ಕೇಳಿದಾಕ್ಷಣ ತಾಳಮದ್ದಲೆ ಪ್ರೇಕ್ಷಕರಿಗೆ ಏನೋ ರೋಮಾಂಚನ,ಜಬ್ಬಾರರಂತೆ ಈ ಕ್ಷೇತ್ರದಲ್ಲಿ ಹೆಸರು ಮಾಡಬಲ್ಲ ,ಈಗಷ್ಟೇ ಅಂಬೆಗಾಲಿಡುತ್ತಿರುವ ವಿನೂತನ ಪ್ರತಿಭೆ ಮುಸ್ತಾಕ್ ಹೆನ್ನಾಬೈಲ್.

ಅರಣ್ಯ ಇಲಾಖೆ ಸಿಬ್ಬಂದಿಯಾದ ಅಬ್ದುಲ್ ಹಮೀದ್ ಮತ್ತು ರಹಿಮುನ್ನಿಸಾ ದಂಪತಿಗಳ ಪುತ್ರರಾಗಿ ಕುಂದಾಪುರ ತಾಲೂಕು ಸಿದ್ಧಾಪುರ ಗಾೃಮದ ಹೆನ್ನಾಬೆೈಲುವಿನಲ್ಲಿ ಅಕ್ಟೋಬರ್ 26 ,1978 ರಲ್ಲಿ ಮುಸ್ತಾಕರು ಹುಟ್ಟಿದರು.ಪ್ರಾಥಮಿಕ ಶಿಕ್ಷಣವನ್ನು ಹೆನ್ನಾಬೆೈಲು,ಪ್ರೌಢ ಶಿಕ್ಷಣವನ್ನು ಹೊಸಂಗಡಿ ಮತ್ತು ಪದವಿ ಶಿಕ್ಷಣವನ್ನು ಸರಕಾರಿ ಕಾಲೇಜು ಶಂಕರನಾರಾಯಣದಲ್ಲಿ ಪೊರೆೈಸಿದರು.

ಮುಸ್ತಾಕರದು ಬಹುಮುಖ ಪ್ರತಿಭೆ.

ಹವ್ಯಾಸಿ ತಾಳಮದ್ದಲೆಯ ಅರ್ಥಧಾರಿ,ವೇಷಧಾರಿ.. ಆರ್ಕೆಸ್ಟ್ರಾ ಗಾಯಕ..ಸೊಗಸಾದ ಕಾರ್ಯಕ್ರಮ ನಿರೂಪಕ ..ಮೋಡಿ ಮಾಡುವ ಭಾಷಣಕಾರ..ಉತ್ತಮ ಬರಹಗಾರ , ರೋಟರಿಯಂತಹ ಅಂತರಾಷ್ಟ್ರೀಯ ಮಟ್ಟದ ಸಮಾಜ ಸೇವಾ ಸಂಘಟನೆಗಳಲಿ ಸಕ್ರಿಯರಾಗಿರುವ ಕ್ರಿಯಾಶೀಲ ವ್ಯಕ್ತಿತ್ವದವರು.
ಇಸ್ಲಾಮಿಕ್ ಧಾರ್ಮಿಕ ಗ್ರಂಥಗಳ ಆಳವಾದ ಜ್ಞಾನದ ಜೊತೆಗೆ ಹಿಂದೂ ಮಹಾಕಾವ್ಯಗಳಾದ ರಾಮಾಯಣ ,ಮಹಾಭಾರತ ,ಭಗವದ್ಗೀತೆ,ವೇದ ಉಪನಿಷತ್ತುಗಳ ಮೇಲೆ ಅರ್ಥ ವ್ಯಾಖ್ಯಾನ ಕೊಡಬಲ್ಲ ಆಕರ್ಷಕ ವಾಗ್ಮಿ....ತಾಳಮದ್ದಲೆ ಕ್ಷೇತ್ರಕ್ಕೆ ಇತ್ತೀಚೆಗಷ್ಟೇ ಪಾದಾರ್ಪಣೆ ಮಾಡಿದರೂ ,ಮಾಡಿದ ಎಲ್ಲಾ ಪಾತ್ರಗಳು ಜನಮನ್ನಣೆಗಳಿಸಿ
ರಂಗದಲ್ಲಿಯೂ ಮೋಡಿಯ ಮಾತಿನಿಂದ ಖ್ಯಾತಿಗಳಿಸುತ್ತಿದ್ದಾರೆ.....ಸತ್ಯ ಹರಿಶ್ಚಂದ್ರ ಪ್ರಸಂಗದ 'ವಿಶ್ವಾಮಿತ್ರ', ಗದಾಯುದ್ಧದ 'ಸಂಜಯ'ಭೀಷ್ಮ ವಿಜಯದ 'ಬ್ರಾಹ್ಮಣ',ಇಂದ್ರಜಿತು ಕಾಳಗದ 'ವಿಭೀಷಣ' ಶ್ರೀ ಕೃಷ್ಣ ಪರಂಧಾಮದ 'ಜರ' ಮುಂತಾದ ಪಾತ್ರಗಳಲ್ಲಿ ತನ್ನ ಅಭಿನಯ,ಮಾತುಗಾರಿಕೆ,ವಿಶೇಷ ಶೆೈಲಿಯ ಪ್ರಸ್ತುತಿಯ ಜೊತೆಗೆ ಸಾಮಾಜಿಕ ಸಾಮರಸ್ಯ ಸಾರುವಲ್ಲಿ ಮತ್ತು ಕಲೆ ಧರ್ಮಾತೀತವಾದುದು ಎನ್ನುವುದನ್ನು ಸಾಧಿಸಿ ತೋರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತಮ್ಮ ಬಿಡುವಿಲ್ಲದ ವೃತ್ತಿ ಜೀವನದ ನಡುವೆಯೂ ಹವ್ಯಾಸಿಯಾಗಿ ಹಲವಾರು ಇತರ ರಂಗಗಳಂತೆ ಯಕ್ಷರಂಗ ವನ್ನೂ ಆಯ್ದುಕೊಂಡ ಮುಸ್ತಾಕರು ವೃತ್ತಿಯಲ್ಲಿ ಚಿನ್ನಾಭರಣ ಕ್ಷೇತ್ರದಲ್ಲಿರುವವರು ..
ವಿಶ್ವದ ಪ್ರಮುಖ ಚಿನ್ನಾಭರಣ ಸಂಸ್ಥೆಯಾದಂತಹ ಚೆಮ್ಮನೂರು ಜ್ಯುವೆಲರ್ಸ್ನಲ್ಲಿ ಮತ್ತು ಭಾರತದ ಪ್ರಖ್ಯಾತ ಮುಕೇಶ ಅಂಬಾನಿಯವರ ರಿಲಾಯನ್ಸ್‌ ಸಂಸ್ಥೆಗಳಲ್ಲಿ ಸರಿಸುಮಾರು 18 ವರ್ಷ ಸೇವೆ ಸಲ್ಲಿಸಿ ಇದೀಗ Rsj Gold ಎನ್ನುವ ಸ್ವಂತ ಸಂಸ್ಥೆಯನ್ನು ನಡೆಸುತ್ತಿದ್ದಾರೆ ....ಯಕ್ಷಗಾನ ರಂಗದ ತನ್ನ ಪಯಣದಲ್ಲಿ ಈ ರಂಗಕ್ಕೆ ತನ್ನನ್ನು ಪರಿಚಯಿಸಿದ ಸಿದ್ಧಾಪುರ ಯಕ್ಷ ನುಡಿಸಿರಿ ಬಳಗದ ಅಧ್ಯಕ್ಷ ಡಾ।ಜಗದೀಶ ಶೆಟ್ಟಿಯವರನ್ನು ಸದಾ ಸ್ಮರಿಸುತ್ತಾರೆ.
ರಂಗದ ನಡೆಗಳ ಜೊತೆಗೆ ಪಾತ್ರಕ್ಕೆ ಬೇಕಾದ ಪೌರಾಣಿಕ ಜ್ಞಾನ ಮತ್ತು ಸ್ಫೂರ್ತಿಯನ್ನು ಹವ್ಯಾಸಿ ತಾಳಮದ್ದಲೆ ಅರ್ಥಧಾರಿ ಹಾಗೂ ತನ್ನ ಗುರುಗಳಾದಂತಹ ಶ್ರೀ ಧನಂಜಯ ಚಾತ್ರ ಹಳ್ಳಿಹೊಳೆ ನೀಡುತ್ತಿರುವುದನ್ನು ಕೃತಜ್ಞತೆಯಿಂದ ನೆನೆಯುತ್ತಾರೆ ...ಜೊತೆಗೆ ಕಮಲಶಿಲೆ ಮೇಳದ ಪ್ರಸಿದ್ಧ ಭಾಗವತ ಶ್ರೀ ಗಣೇಶ ಕುಮಾರ್ ಹೆಬಿೃ ಮತ್ತು ಮಿತ್ರ ಹಾಗೂ ಕಲಾವಿದ ಶ್ರೀ ಸತೀಶ ಮೂಡುಬಗೆಯವರ ಸಹಕಾರವನ್ನು ನೆನಪಿಸುತ್ತಾರೆ...ಮಂಗಳೂರು ವಿಶ್ವವಿದ್ಯಾನಿಲಯದಿಂದ ಕಲಾ ಪದವಿಯನ್ನುೂ ಮತ್ತು ಕುವೆಂಪು ವಿಶ್ವವಿದ್ಯಾನಿಲಯದಿಂದ ರಾಜಕೀಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿರುವ ಮುಸ್ತಾಕರು ಕಲೆಯ ಮೂಲಕ ಜ್ಞಾನ ಪ್ರಸರಣ ಮಾತ್ರವಲ್ಲದೆ ಸೌಹಾರ್ದತೆ ಮೂಡುವುದರ ಜೊತೆಗೆ ಸುಸಂಸ್ಕೃತ ಸಮಾಜ ನಿರ್ಮಾಣವಾಗಬೇಕೆಂಬ ಉನ್ನತ ಆಶಯವನ್ನು ಹೊಂದಿರುವವರು...

http://vknews.in/335976/

ಶನಿವಾರ, ಮೇ 26, 2018

ಜೆಡಿಎಸ್ –ಕಾಂಗ್ರೆಸ್ ಮೈತ್ರಿ ಎಷ್ಟು ದಿನ ? ಅದೃಷ್ಟದ ಮುಖ್ಯ ಮಂತ್ರಿ ಕುಮಾರಸ್ವಾಮಿ !!!


ಗೊತ್ತಿತ್ತು ..! ಪ್ರಜ್ನಾವಂತರಿಗೆ ಅರಿವಿತ್ತು. ಈ ಬಾರಿ ಖಂಡಿತವಾಗಿಯೂ ಸಹಾ ಯಾವುದೇ ಒಂದು ರಾಜಕೀಯ ಪಕ್ಷಕ್ಕೆ ಬಹುಮತ ದಕ್ಕುವುದು ಕಷ್ಟ ಸಾಧ್ಯ ಎಂದು ! ಬಾರತೀಯ ಜನತಾ ಪಾರ್ಟಿ ಪರ ಸಮೀಕ್ಷೆ ವಾಲುತ್ತಿದ್ದರೆ,ಹಾಗೂ ೧೦೪ ಬ್ರಹತ್ ಪ್ರಮಾಣದ ಸೀಟುಗಳನ್ನು ಪಡೆದಿದ್ದರೆ ಅದು ನಿಜವಾಗಿಯೂ “ಮೋದಿ ಹವಾ” ಎಂದು ಬೀಗದೇ ಬೇರೆ ಉಪಾಯವಿಲ್ಲ .
ಎಸ್ ! ಬಿಜೆಪಿ ಸ್ವತಂತ್ರ್ಯವಾಗಿ ಸರ್ಕಾರ ನಡೆಸುವುದು ಕಷ್ಟವೇನಲ್ಲ ಆದರೆ ಇಲ್ಲಿ ಕೊರತೆ ಕಾಣುವುದು ಮುಖ್ಯವಾಗಿ ಉತ್ತಮ ಕ್ಯಾಂಡಿಡಿಯೆಟ್ ನದು . ಪ್ರಸ್ತುತ ಇರುವ ಮುಖಂಡರುಗಳ ನಡುವೆ ಆಂತರಿಕ ಕಚ್ಚಾಟ , ಭಿನ್ನಾಭಿಪ್ರಾಯ ,ಮೈ ಮನಸ್ಸು ,ಬ್ರಷ್ಟಚಾರ ರೂಪಿ ವರ್ಚಿಸ್ಸಿನಿಂದ ಬಿಜಿಪಿ ರಾಜ್ಯದಲ್ಲಿ ತನ್ನ ಕಹಳೆಯನ್ನು ಮೊಳಗಿಸುವುದು ಕಷ್ಟವೇ ಸರಿ ! ಒಟ್ಟಾರೆ ಮೋದಿ ಹವಾ ಅಮಿತ್ ಷಾ ಬೆಂಬಲ, ಹೋರಾಟ ,ಪ್ರಚಾರ ತಂತ್ರ ಹಾಗೂ ಸಿದ್ದರಾಮಯ್ಯ ನೇತ್ರತ್ವದ ಕಾಂಗ್ರೆಸ್ ಸರ್ಕಾರದ ಕೆಲವು ಅಹಿತಕರ ಚಟುವಟಿಕೆಯಿಂದ ೧೦೪ ಸೀಟು ಪಡೆಯಲು ಶಕ್ತವಾಗಿದಂತೂ ಸತ್ಯ.
ಮ್ಯಾಜಿಕ್ ನಂಬರ್ ೧೧೨ ಕ್ಕಾಗಿ ಉಳಿಸಿದ ಸೀಟಿನ ಅನಿವಾರ್ಯತೆಗೆ ಬಿಜೆಪಿ ಪಾಳಯದಿಂದ ಕುದುರೆ ವ್ಯಾಪಾರ ನಡೆದರೂ ಸಹಾ ಅದು ಸಫಲವಾಗಲಿಲ್ಲ . ಸಾಧ್ಯವಾಗಲೇ ಇಲ್ಲ . ಈ ನಿಟ್ಟಿನಲ್ಲಿ ಜೆಡಿ ಎಸ್ ನ ಕುಮಾರ ಸ್ವಾಮೀ ಮತ್ತು ಕಾಂಗ್ರೆಸ್ ನ ಡಿಕೆ ಶಿವಕುಮಾರ್ ತಮ್ಮ ಶಾಸಕರನ್ನು ಹದ್ದು ಬಸ್ತಿನಲ್ಲಿ ಇಡಲು ಅವರ ಜಾಣ್ಮೆ ಮತ್ತು ಪಾತ್ರ ಬಲು ದೊಡ್ದದಾಗಿತ್ತು .
ಒಟ್ಟಾರೆಯಾಗಿ ಮೇ ೧೫ ರಿಂದ 8 -೧೦ ದಿನ ರಾಜಕೀಯ ರಂಗಿನಾಟ ನಿಜಕ್ಕೂ ಸೋಜಿಗವನ್ನು ಉಣಬಡಿಸಿತ್ತು . ರಾಷ್ಟ್ರದ್ಯಾದ್ಯಂತ ಸುದ್ದಿಗೆ ಗ್ರಾಸವಾಗಿತ್ತು. ಸುದ್ದಿ ವಾಹನಿಗಳಿಗೆ ಹಬ್ಬವೋ ಹಬ್ಬ ! ದಿನದ 24 ಗಂಟೆಯೂ ಸಹಾ ಎಡಬಿಡದೇ ನೇರ ಪ್ರಸಾರದಲ್ಲೇ ಸನ್ನದ್ದವಾಗಿದ್ದವು . ಅತೀ ಹೆಚ್ಚು ಬಹುಮತ ೧೦೪ ಸೀಟು ಪಡೆದ ಬಿಜೆಪಿ ಆಟಕುಂಟು ಲೆಕ್ಕಕಿಲ್ಲ ಎನ್ನುವಂತಾಗಿತ್ತು . ಕೇವಲ ೭೭ ಸೀಟು ಪಡೆದ ಕಾಂಗ್ರೆಸ್ ಹಾಗೂ ೩೭ ಸೀಟು ಮಾತ್ರ ಪಡೆದ ಜೆಡಿಎಸ್ ದೋಸ್ತಿಗಳಾಗಿವೆ . ರಾಜ್ಯದಲ್ಲಿ ಕಿಂಗ್ ಮೇಕರ್ ಎಂದೇ ಗುರುತಿಸಲ್ಪಟ್ಟ ದೇವೇಗೌಡ ನೇತೃತ್ವದ . ಜೆಡಿಸ್ನ ಕುಮಾರ ಸ್ವಾಮೀ ಅದೃಷ್ಟದ ಮುಖ್ಯ ಮಂತ್ರಿಯಾಗಿದ್ದಾರೆ. ಪ್ರತಿಪಕ್ಷಕ್ಕೂ ಯೋಗ್ಯತೆ ಇಲ್ಲ ಸೀಟು ಪಡೆದ ಕುಮಾರ ಸ್ವಾಮಿಗೆ ರಾಜಯೋಗ...11 ಒಟ್ಟಾರೆ ಈ ಮೈತ್ರಿ ಸರ್ಕಾರ ಎಷ್ಟು ದಿನ ವ್ಯಾಲಿಡಿಟಿ ಪಡೆದು ಕೊಳ್ಳುತ್ತೋ ಗೊತ್ತಿಲ್ಲ , ಪೂರ್ಣ ೫ ವರ್ಷ ಪೂರೈಸೋದು ಬವಿಷ್ಯ : ಕನಸ್ಸಿನ ಮಾತೇ ಸರಿ ಎಂಬ ವಿಧ್ಯಾಮಾನ ಸಾರಿ ಹೇಳುತ್ತಿದೆ . ಜೆಡಿಎಸ್ ನಿಂದ ಹೊರಗೆ ಬಂದ ಸಿದ್ದರಾಮಯ್ಯನಿಗೆ ದೇವೇಗೌಡ ,ಹಾಗೂ ಕುಮಾರ ಸ್ವಾಮೀ ಯಿಂದ ಹಾವು ಮುಂಗುಸಿ ಆಟ ಹೆಚ್ಚು ದಿನ ಬಾಳಲಿಕ್ಕೆ ಬಿಡಲಾಗದು!!
ಏನೇ ಇರಲಿ ಎಲ್ಲಕಿಂತ ಹೆಚ್ಚು ಪ್ರಭಾವಶಾಲಿಯ ಅಂಶ ಈ ನಾಟಕ ರಂಗದಲ್ಲಿ ಗಮನಿಸಬೇಕಾದದ್ದು ಯಡಿಯೂರಪ್ಪ ಅಂಡ್ ಟೀಮ್ ನಿಂದ 104 ಸೀಟು ಪಡೆದು ಅನಿವಾರ್ಯ ಇರುವ 8 ಸೀಟು ಹೇಗಾದರೂ ಕುದುರೆ ವ್ಯಾಪಾರ ಮೂಲಕ ಪಡೆದು ಸ್ವತಂತ್ರ್ಯ ಸರ್ಕಾರ ರಚಿಸಬೇಕು ಎಂಬ ಮಹಾದಾಸೆಯಿಂದ ಬಗೆ ಬಗೆಯ ಸರ್ಕಸ್ ನಡೆಸಿಯೇ ಬಿಟ್ಟಿತು .ಸುಪ್ರಿಂ ಕೋರ್ಟ್ ಮೊರೆ ಹೋಗಿ ರಾಜ್ಯಪಾಲರ ಮುಖಾಂತರ ಮುಂದಿರುವ ಸಂಕಷ್ಟವನ್ನು ಮನಗಾಣದೆ ತರಾತುರಿಯಲ್ಲಿ ಪ್ರಮಾಣ ವಚನವನ್ನು ಸ್ವೀಕರಿಸಿ ಬಿಟ್ಟಿದ್ದರು ಯಡಿಯೂರಪ್ಪ .ಇತ್ತ ವಿರೋಧ ಪಕ್ಷದವರ ಲಡಾಯಿ ಜೋರಾಗಿತ್ತು . ಸುಪ್ರಿಂ ಕೋರ್ಟ್ ನ ಕದ ರಾತ್ರಿ ೧೨ ಗಂಟೆಗೆ ವಿರೋಧ ಪಾರ್ಟಿಗಳು ಬಡಿದವು. ಸರ್ವೋಚ್ಚ ನ್ಯಾಯಾಲಯ ಬಹುಮತ ಸಾಬೀತಿಗೆ ಡೇಟ್ ಫಿಕ್ಸ್ ಮಾಡಿ ಆಗಿತ್ತು .ಆದರೇನು ಮಾಡೋದು ಸೇಮ್ ಟು ಸೇಮ್ ೧೯೯೬ ರಲ್ಲಿ ವಾಜಪೇಯಿಗೆ ಉಂಟಾದ ಸಂದಿಗ್ನ ಪರಿಸ್ತಿತಿ ಅಕ್ಷರಸ ಯಡ್ಡಿಗೂ ಕೂಡಾ ಅನುಭವಿಸಬೇಕಿತ್ತು . ಅಂತೂ ಯಡಿಯೂರಪ್ಪ ಸದನದಲ್ಲಿ ಬಹುಮತ ಸಾಬೀತು ಪಡಿಸಲಾಗದೇ ,ಫೀಲಿಂಗ್ ಬಾಷಣವನ್ನು ಮುಗಿಸಿ ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಯೇ ಬಿಟ್ಟರು .
ಸಿಕ್ಕ ಸೀಟುಗಳಿಂದ ವಿರೋಧ ಪಕ್ಷದವರ ಆಟೋಟೊಪ ದಿಂದ ಸರ್ಕಾರವನ್ನು ನಡೆಸಲು ಸಾಧ್ಯವಾಗುವುದಿಲ್ಲ .ಎಂದು ಗೊತ್ತಿದ್ದರೂ ಕೂಡಾ ಈ ಮೊದಲು ಬಹಿರಂಗ ಪಡಿಸಿದಂತೆ ಯಡ್ಡಿ ಇಂತಹ ದಿನವೇ ಮುಖ್ಯ ಮಂತ್ರಿ ಯಾಗಿ ಪ್ರಮಾಣವ ಚನವನ್ನು ಮಾಡುತ್ತೇನೆ ಎಂದು ಕೊಂಡ ರೀತಿಗೆ ಬೆಲೆ ಸಿಕ್ಕಿದಂತಾಗಿದಂತೂ ಸುಳ್ಳಲ್ಲ . ಸದನದಲ್ಲಿ ಮಂಡಿಸಿದ ಭಾವದ್ವೇಗದ ಬಾಷಣ ಎಂತವರಿಗೂ ಸಹಾ ಕನಿಕರವನ್ನು ತರುವಂತಿತ್ತು . ಮುಂದೊಮ್ಮೆ ಪ್ರಸ್ತುತ ಸರ್ಕಾರ ಮುರಿದು ಬಿದ್ದಿದ್ದೇ ಯಾದರೇ ಉಪಚುನಾವಣೆಯಲ್ಲಿ ಬಹುಮತ ಖಂಡಿತವಾಗಿಯೂ ಬಿಜೆಪಿಗೆ ದಕ್ಕಬಹುದೇನೋ ?! ಸಿಂಪತಿ ಮತ್ತು ಪ್ರಮಾಣ ಸ್ವೀಕರಿಸಿದ ಕ್ಷಣದಲ್ಲಿ ರೈತರ ಸಾಲ ಮನ್ನಾ ಎಂದು ಘೋಷಣೆ ಮಾಡಿದ ಕೆಲವೊಂದು ಅಂಶಗಳು ಇಲ್ಲಿ ವರ್ಕೌಟ್ ಆಗಬಹುದು ,,
ಯಾವುದಕ್ಕೂ ಕಾಲವೇ ಉತ್ತರ ಹೇಳಬೇಕು .

ವಿಧ್ಯಾರ್ಥಿಗಳ ಹಿತ ದ್ರಷ್ಟಿಯಿಂದ ಉತ್ತಮವಾದ ನಿರ್ಧಾರ !


ಹೌದು ಈ ವರ್ಷದಿಂದ ಪಿಯುಸಿ ತರಗತಿಗಳು ಬಲು ಬೇಗನೇ ಆರಂಭ ಕಾಣುತ್ತಿದೆ ,ಸರ್ಕಾರದ ಈ ಹೊಸ ಆದೇಶದ ಇದರ ವಿರುದ್ಧ ವಿಧ್ಯಾರ್ಥಿಗಳು ಹಾಗೂ ಉಪನ್ಯಾಕರುಗಳು ಅತೃಪ್ತರಾಗಿದ್ದಾರೆ . ನೀರಿನ ಸಮಸ್ಯೆ, ಬಿಸಿಲ ಝಳ , ಶುಭಕಾರ್ಯಗಳ ಸಮಯ ಈ ಸಂದರ್ಭದಲ್ಲಿ ತರಗತಿ ಪ್ರಾರಂಭವಾಗುವುದು ಸಮಂಜಸ ಅಲ್ಲ ಎಂಬ ಮಾತುಗಳೂ ಕೂಡಾ ಕೇಳಿಬರುತ್ತಿವೆ .

ಅವಧಿಗೆ ಮುನ್ನಾ ಪಿಯುಸಿ ತರಗತಿ ಪ್ರಾರಂಬವಾಗೋದು ಕೊಂಚ ಎಲ್ಲೂ ಹೊಸತು ಅನ್ನಿಸಿದರೂ ಇದು ಒಳ್ಳೆಯ ಬೆಳವಣಿಗೆ ಈ ಒಂದು ಕಾನೂನು ಜಾರಿಗೊಳಿಸಿದ ಪದವಿ ಪೂರ್ವ ಇಲಾಖೆಗೆ ಅಭಿನಂದನೆ ಸಲ್ಲಿಸಬೇಕು ..ಯಾವುದೋ ಒಂದು ನಿರ್ದಿಷ್ಟ ಕಾರಣವಿಲ್ಲದೇ ಪಿ ಯು ಮಂಡಳಿ ಈ ನಿರ್ಧಾರಕ್ಕೆ ಕೈ ಹಾಕಿಲ್ಲ ಬಲವಾದ ವಿಚಾರ ಇದರ ಹಿಂದೆ ವಿರಬಹುದು .ಇಲ್ಲಿ ನೀರಿನ ಸಮಸ್ಯೆ, ಬಿಸಿಲ ಝಳ , ಶುಭಕಾರ್ಯಗಳ ಗೊಡವೆಗಳೆಲ್ಲಾ ಇದಕ್ಕೆ ಸಂಬಂದ ಪಡುವುದಿಲ್ಲ .ಉಪನ್ಯಾಸಕರೂ ಅಷ್ಟೇ ಈ ಆದೇಶವನ್ನು ಪಾಲಿಸಲೇಬೇಕು. ಬೇಗನೇ ಪಾಠ ಪ್ರವಚನ ಶುರು ಮಾಡಿದರೆ ಕೊನೆಯ ದಿನಗಳಲ್ಲಿ ಸಾಕಷ್ಟು ಉಪಯೋಗ ವಿಧ್ಯಾರ್ಥಿಗಳಿಗೆ ಉಂಟಾಗುವುದರ ಜೊತೆಗೆ ಉಪನ್ಯಾಸಕ ಗಳಿಗೂ ಸಹಾ ಹೆಚ್ಚಿನ ಒತ್ತಡ ಬೀಳುವುದಿಲ್ಲ .. ವಿಧ್ಯಾರ್ಥಿಗಳ ಹಿತ ದ್ರಷ್ಟಿಯಿಂದ ಉತ್ತಮವಾದ ನಿರ್ಧಾರ !

ರಾಜಕೀಯ ಪಕ್ಷಗಳಲ್ಲಿ ಬಂಡಾಯ ಸರ್ವೆ ಸಾಮಾನ್ಯ!



ಈ ಚುನಾವಣೆಗಳು ಸಮೀಪಿಸಿದಾಗ ಟಿಕೇಟ್ ಸಮಸ್ಯೆ ಸಾಮನ್ಯವಾಗಿ ಕಾಡುತ್ತದೆ . ತನಗೆ ಬೇಕು ನನಗೆ ಬೇಕು ...ನಾ ಮುಂದು ತಾ ಮುಂದೆ ಎಂದು ಕಣಕ್ಕೆ ಇಳಿಯುವ ಆಕಾಂಕ್ಷೆಗಳ ದಂಡೇ ನಮ್ಮ ಎಲ್ಲಾ ರಾಜಕೀಯ ಪಕ್ಷಗಳಲ್ಲಿವೆ . ಒಂದೇ ಸೀಟನ್ನು ನಾಲ್ಕೈದು ಮಂದಿ ಗೆ ಹಂಚಲಾಗದ ಸಂದರ್ಭದಲ್ಲಿ ,ಟೀಕೆಟ್ ಸಿಗದ ವ್ಯಕ್ತಿ ಬಂಡಾಯ ಏಳುತ್ತಾನೆ !!
ಹೌದು ರಾಜಕೀಯ ಪಕ್ಷಗಳಲ್ಲಿ ಬಂಡಾಯ ಸರ್ವೆ ಸಾಮಾನ್ಯ..! ಮುಖಂಡರಿಗೆ ,ಹೈಕಮಾಂಡ್ ಮುಂದೆ ದೊಡ್ಡ ಸವಾಲು ಹಾಗೂ ಬಿನ್ನಾಭಿಪ್ರಾಯ ವನ್ನು ಟಿಕೇಟ್ ಹಂಚಿಕೆಯಲ್ಲಿ ಎದುರಿಸಬೇಕಾಗಿ ಬರುತ್ತದೆ .ಎಲ್ಲೋ ಆಕಾಂಕ್ಷೆಗಳಿಗೆ ಸೀಟು ಕೈ ತಪ್ಪಿ ಹೋದಾಗ ಬಂಡಾಯ ಆರಂಭವಾಗುತ್ತದೆ .ಆತ ಬೇರೆ ಪಕ್ಷ ಸೇರುವ ಅಥವಾ ಪಕ್ಷೇತರರಾಗಿ ನಿಂತು ತಮ್ಮ ಸ್ವಂತ ಪಕ್ಷದ ವಿರುದ್ದ ಇಲ್ಲ ಸಲ್ಲದ ಆರೋಪ ಹೊರಿಸಿ ತೊಡೆ ತಟ್ಟುತ್ತಾರೆ ಪಕ್ಷದ ವರಿಷ್ಠರು ಎಲ್ಲಾರಿಗೂ ಬೀ ಫಾರಂ ಕೊಡಲಿಕ್ಕೆ ಸಾಧ್ಯವಿಲ್ಲ.. ಇದ್ದವರಲ್ಲಿ ಉತ್ತಮರು ಯಾರೂ ಹಾಗೂ ಗೆಲ್ಲುವ ಕುದುರೆ , ಬೆಂಬಲದ ಅಂಶವನ್ನೂ ಅರಿತು ಕೊಡಲಾಗುತ್ತದೆ.ಎಲ್ಲೂ ಒಮೊಮ್ಮೆ ತಮ್ಮ ನಿಕಟವರ್ತಿ ಗಳಿಗೆ ಅದು ವರ್ಗಾವಣೆ ಯಾಗುತ್ತದೆ.. ಟಿಕೇಟ್ ಹಂಚಿಕೆ ಪಾರದರ್ಷಕವಾಗಿರಬೇಕು ಹಾಗೂ ಆಕಾ೦ಕ್ಷಿಗಳು ಪಕ್ಷದ ಆಶೋತ್ತರಗಳನ್ನು ಗಮನಿಸಿ ಆಯ್ಕೆ ಸಮಿತಿ ಜೊತೆ ಕೈ ಜೋಡಿಸಬೇಕು, ಆಗ ಬಂಡಾಯ ಶಮನ ಆಗಬಹುದು.