ಶನಿವಾರ, ಜೂನ್ 16, 2012

public tv ರಂಗನಾಥ್ ರಿಗೊಂದು public ಪತ್ರ


ಪ್ರಿಯ ಹೆಚ್ .ಆರ್ .ರಂಗನಾಥ್ ರವರೇ,
ನಿಮ್ಮ ಕನಸ್ಸಿನ ಕೂಸಾದ public tv  ಯಲ್ಲಿ ಇಂದು (10 .06 .2012 ) ಗಂಟೆ ಗಟ್ಟಲೆ ಗಳ ಕಾಲ ನಿತ್ಯಾನ೦ದ ಸ್ವಾಮಿಯ ವಿವಾದದ ಬಗ್ಗೆ ವಿಶೇಷ live ಕಾರ್ಯಕ್ರಮ ಪ್ರಸಾರವಾಗಿತ್ತು ನಿರೂಪಕ ರಾಘವ್ ಸೂರ್ಯರಾಗಿದ್ದರು .ಸ್ಟುಡಿಯೋದೊಳಗೆ ಮಹಿಳಸಂಘಟನೆಯ ಅಧ್ಯಕ್ಷರಾದ ಸುನಂದಾ,ನಿರ್ಮಾಪಕ ಮುನಿರತ್ನ ,ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು .ಕಾರ್ಯಕ್ರಮದ ಉದ್ದೇಶ ನಿತ್ಯಾನ೦ದ ಸ್ವಾಮಿಯ ಕರ್ಮಕಾಂಡದ ಬಗ್ಗೆ ಇತರ ಕೆಲವು ಮಠ ,ಸ್ವಾಮಿಜಿಗಳ ಅಭಿಪ್ರಾಯವನ್ನು ಆಲಿಸುದಾಗಿತ್ತು ನಿಜಕ್ಕೂ ಉತ್ತಮ ಕಾರ್ಯಕ್ರಮವೇಯಾಗಿದ್ದರೂ, ಪೂರ್ವಗ್ರಹಪಿಡಿತವಾಗಿ ರೂಪುಗೊಳ್ಳಬಾರದಿತ್ತು . 
ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದಂತೆ ಎಂಬ ಉಕ್ತಿಗೆ ಪೂರಕವಾಗಿತ್ತು .ಪ್ರಸ್ತುತವಲ್ಲದ ವಿಚಾರವನ್ನು ಎಳೆದು ಒಂದೊಂದು ಸ್ವಾಮಿಜಿಗೆ ವಿಚಾರಹೀನವಾದ ಪ್ರಶ್ನೆಗಳ ಸುರಿಮಳೆಗೈಯುತ್ತಿದ್ದು , ಅದರಲ್ಲೂ ಮುಖ್ಯವಾಗಿ "ಪ್ರತಿಭಟನೆಯ ಮೂಲಕ ಕಠರಿವೀರ  ಚಿತ್ರದ ಪ್ರದರ್ಶನಕ್ಕೆ ಅಡ್ಡಿಪಡಿಸಿ ,ಉಡುಪಿ -ಮ೦ಗಳೂರಿನಲ್ಲಿ ಕಲೆಕ್ಷನ್ ಕುಂಟಿತಗೊಳ್ಳಲಿಕ್ಕೆ ಕಾರಣಿಕರತರಾದ  ಉಡುಪಿಯ ಶಿರೂರು ಮಠದ ಶ್ರೀ ಲಕ್ಷ್ಮಿ ತೀರ್ಥ ಸ್ವಾಮೀಜಿಗಳು ಈಗ ಪರಿಸ್ತಿತಿ ಗೊತ್ತಿದ್ದೂ ಮಠದಲ್ಲಿ ಕುಳಿತುಕೊಂಡಿರುದು ಯಾಕೆ ?" ನಿತ್ಯಾನ೦ದ ಸ್ವಾಮಿಯ ಬಗ್ಗೆ ಯಾಕೆ ಪ್ರತಿಭಟನೆಗೆ ಮುಂದಾಗಿಲ್ಲ ಎಂಬ ಕಾರಣವನ್ನು ನೀಡಿ ,ಸಂಕ ಮುರಿದಲ್ಲೇ ಸ್ನಾನ ಎನ್ನುವಂತೆ ,ಪುಂಖಾನು -ಪುಂಖವಾಗಿ ರಾಘವ್ ಸೂರ್ಯ, ಸುನಂದಾ,ಮುನಿರತ್ನ ಅದೇ ಪ್ರಶ್ನೆಯನ್ನು ಬಾರಿ -ಬಾರಿ ಕೇಳುತ್ತಿದ್ದ ರೀತಿ ,ಇನ್ನು ತೀರ personal ಎನ್ನುವ ವಿಚಾರಕ್ಕೆ ಕೈ ಹಾಕಿದ್ದು  public tv ಯೋಗ್ಯತೆಗೆ ತಕ್ಕುದಾದ್ದಲ್ಲ ಎನ್ನುದು ನನ್ನ ಅಭಿವ್ಯಕ್ತಿ .ನಿಜಕ್ಕೂ ಪೂರ್ಣ ಕಾರ್ಯಕ್ರಮವನ್ನು ವಿಕ್ಷಿಸುತ್ತ ತೆರಳುತ್ತಿದ್ದರೆ ,ಈ ಕಾರ್ಯಕ್ರಮ ಪೂರ್ವಯೋಜಿತವಾಗಿ ಉಡುಪಿ ಶ್ರಿರು ಮಠದ ಶ್ರೀ ಲಕ್ಷ್ಮಿತೀರ್ಥ ಸ್ವಾಮೀಜಿಗಳನ್ನು ಬೊಟ್ಟುಮಾಡಿ ತೋರಿಸುವ ಸಲುವಾಗಿ ರೂಪಿಸಲಾಗಿದೆ ಎಂದು ಭಾಸವಾಗುತಿತ್ತು .ಅಷ್ಟಕ್ಕೂ ಸ್ಟು ಡಿಯೋದೊಳಗೆ ನಿರ್ಮಾಪಕ ಮುನಿರತ್ನರ ಅವಶ್ಯಕತೆ ಇತ್ತೇ ? "ಚಿತ್ರದಲ್ಲಿ ಹಿಂದೂ ದೇವತೆಗಳ ಅವಹೇಳಕಾರಿ ಸನ್ನಿವೇಶವನ್ನು ಇದೆ ಅದನ್ನು ತೆರವು ಮಾಡಬೇಕು ಎಂಬ ಉದ್ದೇಶದಿಂದ ಚಿತ್ರ ಪ್ರದರ್ಶನದ ವಿರುದ್ದ ಪ್ರತಿಭಟನೆ ಮಾಡಲಾಯಿತು .ಅದರಲ್ಲಿ ನಾನು ಮಾತ್ರ ಭಾಗಿಯಾಗಿರದೇ, ಬಜರಂಗದಳ ಸೇರಿದಂತೆ ವಿವಿಧ ಹಿಂದೂ ಸಂಘಟನೆಗಳು ಪಾಲ್ಗೊಂಡಿದ್ದವು .ಆದರೆ ನಿತ್ಯಾನ೦ದ ಸ್ವಾಮಿಯ ವಿಚಾರವೇ ಬೇರೆ ರೀತಿಯದ್ದು .ಮಹಿಳೆಯರಿಗೆ ಲೈಂಗಿಕ ಕ್ರಿಯಗೆ ಬಳಸಿಕೊಳ್ಳಲಾಗುತ್ತಿದೆ ಎಂಬುದು .ನಿತ್ಯಾನ೦ದ ಸ್ವಾಮಿಯ ವಿವಾದ ಇಂದು ಮಾಧ್ಯಮಗಳ ಮೂಲಕ ನಾನು ತಿಳಿದಿದ್ದೇನೆ .ಇದಕ್ಕೆ ಖಂಡಿತವಾಗಿಯೂ ನನ್ನ ವಿರೋಧವಿದೆ ,ಇದು ಅಪರಾಧ . ನಾನು ಸಹ  ಇದರ ವಿರುದ್ದ ಪ್ರತಿಭಟಿಸಲು ಸಿದ್ದ" ಎಂದು  ಎಷ್ಟೇ ಸ್ವಾಮೀಜಿ ಅವಲತ್ತು ಕೊಂಡರೂ ,ಮುನಿರತ್ನ,ಸುನಂದಾ, ಮೇಲಿನಿಂದ -ಮೇಲೆ ಕಠರಿವೀರ ಚಿತ್ರ ದ ಬಗ್ಗೆಯೇ ಪ್ರಶ್ನೆಗಳನ್ನು,  ಮುಸಿನಗುತ್ತ ತಾವು ಒಂದಷ್ಟು ಸಂಭಂದ ರಹಿತ ಪ್ರಶ್ನೆಗಳ ಸುರಿಮಳೆ ಗೈದು ಅವರುಗಳಿಗೆ ಸಾಥ ನೀಡುತ್ತಿರುವ  ನಿರೂಪಕ ರಾಘವ್ ಸೂರ್ಯ ನ ಈ ಒಂದು ನಡೆ ನಿಜಕ್ಕೂ ಖಂಡನೀಯ .ಅಸಂಜಸವಾದದ್ದು . ಸ್ವರ್ಧಾತ್ಮಕ ಯುಗದಲ್ಲಿ ಸಂಚರಿಸುತ್ತಿರುವ ಮಾಧ್ಯಮಗಳ ಮಧ್ಯೆ ಇತ್ತೀಚಿಗೆ ರೂಪುಗೊಂಡಿರುವ ನಿಮ್ಮ  ಚಾನಲ್ನ ಏಳಿಗೆಗೆ ಆರೋಗ್ಯಕಾರಿಯಲ್ಲ .ಕೊನೆಯದಾಗಿ ಮಾತು   ಒಂದು ಬಿಗ್ ಬುಲೆಟ್ ನಂತೆ   ಸ್ಚರಿತ್ರ್ಯ ,ಸನ್ನಡತೆ ,ನ್ಯಾಪರದಿಕ್ಕಿನಲ್ಲಿ  ಸಾಗುತ್ತಿರುವ ನಿಮ್ಮ ಆ ಶಿಸ್ತುಬದ್ದ ಡೈಲಾಗ್ ಡೆಲಿವರಿ ಸ್ ನ  ನಿಮ್ಮ ಸಹ ಉದ್ಯೋಗಿಗಳಿಗೂ  ಕೊಂಚ ಹೇಳಿ ಕೊಡಿ

ಅಧುನಿಕ ಕೆಲವು ಅನುಪಯುಕ್ತ ತಂತ್ರಜ್ಞಾನದ ನಡುವೆಯೂ ಉತ್ತಮ ಫಲಿತಾಂಶ ದಾಖಲಿಸಿದ ಎಲ್ಲ ವಿಧ್ಯಾರ್ಥಿಗಳಿಗೂ ಶುಭಾಶಯಗಳು ..


ಅಧುನಿಕ ಕೆಲವು ಅನುಪಯುಕ್ತ ತಂತ್ರಜ್ಞಾನದ  ನಡುವೆಯೂ ಉತ್ತಮ ಫಲಿತಾಂಶ ದಾಖಲಿಸಿದ ಎಲ್ಲ ವಿಧ್ಯಾರ್ಥಿಗಳಿಗೂ ಶುಭಾಶಯಗಳು ..
ಮೊನ್ನೆ sslc  ರಿಸಲ್ಟ್ ಬಂದು ಒಂದಷ್ಟು ದಿನಗಳ ಕಾಲ ವಿವಿಧ ಮಧ್ಯಮಗಳು ಉನ್ನತ ಫಲಿತಾಂಶ ವನ್ನು ಪಡೆದವರ ಸಂದರ್ಶನ .ಅವರುಗಳ ಪೂರ್ವ ,ಪರ ವಿಚಾರ -ವಿವರಗಳು ಪುಂಖಾನು -ಪುಂಖ ವಾಗಿ ಹರಿಸು ತ್ತಿತ್ತು.ಇದು ಒಂದು ತರಹದಲ್ಲಿ ಉಪಯುಕ್ತ ಕಾರ್ಯಕ್ರಮವೇ  ಸರಿ ಯಾಕೆಂದರೆ ಅವರುಗಳು ಹೇಗೆ ವಿಧ್ಯಾಭ್ಯಸ ವನ್ನು ಕೈಗೊಂಡಿದ್ದರು ,ಟಾಪ್ ಸ್ಕೋರೆರ್ ಆಗಿ ರೂಪು ಗೊಂಡಿರುದಕ್ಕೆ ಅನುಕೂಲಕರವಾದ ಅಂಶ ಗಳು ಈ ಒಂದು ಉಪಯುಕ್ತ ಸಂದರ್ಶನದ ಮೂಲಕ ಕೆಲವಂದು ಟಿಪ್ಸ್ ಗಳು ಇತತರರಿಗೂ ಒಂದು ಮಾರ್ಗದರ್ಶನವನ್ನು ನೀಡುತ್ತದೆ .ಒಟ್ಟಾರೆ ಇಂದಿನ ಎಲೆಕ್ಟ್ರೋನಿಕ್ ಮಾದ್ಯಮಗಳ ಈ ಒಂದು ಕಾರ್ಯಕ್ರಮ ಉತ್ತಮ ವಾದದ್ದೇ..ವರ್ಷ -ವರ್ಷ ರಿಸಲ್ಟ್ ಬರುದೇ,ಒಂದಷ್ಟು ಮಂದಿಯನ್ನು ಆಯ್ಕೆ ಮಾಡಿ ಸಂದರ್ಶನ  ಮಾಡುವದೇ ,ಇದರಲ್ಲಿ ಏನು ವಿಶೇಷ ವಿಲ್ಲದಿದ್ದರೂ ,ನಂಗೆ ಈ ವರ್ಷದ ರಿಸಲ್ಟ್ ನೋಡಿ ,ಅವರುಗಳ ಸಂದರ್ಶನ ಚಿತ್ತ್ಕರ್ಷಕವಾಗಿ ,ಈ ವರ್ಷದ  ಪೈಪೋಟಿಯಾಕರದಲ್ಲಿ ಬೆಳೆಯುತ್ತಿರುವ ಮಾದ್ಯಮಗಳ ಬರಾಟೆ ,ಅಧುನಿಕ ಅಂತರಜಾಲ ,ಮೊಬೈಲ್ ಯುಗದಲ್ಲೂ ,ಪ್ರಶ್ನೆ ಪತ್ರಿಕೆ ಬಹಿರಂಗ ಗೊಂಡು ಉದ್ವಿಗ್ನ ಪರಿಸ್ಥಿತಿ ಉಂಟಾದರೂ ಗ್ರಾಮೀಣ ವಿಧ್ಯಾರ್ಥಿಗಳೂ ಟೋಪರ್ ಆಗಿ ಒಟ್ಟಾರೆ ,10 ವರ್ಷಗಳಿಂದ ಈಚೆಗೆ ದಾಖಲೆ ಫಲಿತಾಂಶ ವನ್ನು ಗಳಿಸಿದ್ದು ವಿಶೇಷವಾಗಿ ಕಾಣಿಸಿತ್ತು .
623 ಅಂಕಗಳೊಂದಿಗೆ ರಾಜ್ಯಕ್ಕೆ ಪ್ರಥಮ ಸ್ಥಾನಿಯಾದ ಬಂಟ್ವಳದ ನವ್ಯಶೆಟ್ಟಿ
ಎಂದಿನಂತೆ ಬಾಲಕಿಯರೇ ಮೇಲುಗೈ ಸಾಧಿಸಿದ್ದರೂ ,ಬಾಲಕರೂ ಸಹ ಪೈಪೋಟಿ ಯನ್ನು ಸಾಧಿಸಿದ್ದಾರೆ .ಗ್ರಾಮೀಣ ಪ್ರದೇಶದ ವಿಧ್ಯಾರ್ಥಿಗಳು ದಾಖಲೆಯನ್ನು ನಿರ್ಮಿಸುದೆಂದರೆ ಅದು ಹೆಗ್ಗಳಿಕೆಯ ಮಾತೆಂದರೆ ಅತಿಶಯೋಕ್ತಿಯಲ್ಲ .ಅವರ ಪ್ರಯತ್ನ ಶೀಲ ಕೌಶಲ್ಯಕ್ಕೆ ತಲೆಬಾಗಲೇ ಬೇಕು .ಗ್ರಾಮೀಣ ಪರಿಸರದಲ್ಲಿ ಮಕ್ಕಳನ್ನು ಶಾಲೆಗೆ ಕಳಿಸಲೂ ಅಸಾಧ್ಯ ಪರಿಸ್ತಿ ಒಂದೆಡೆ ಯಾದರೆ ,ಬಹಳಷ್ಟು ದೂರ ಶಾಲೆಯನ್ನು ಅವಲಂಭಿಸ ಬೇಕಾಗಿ ಬರುದು ಸಹ ಒಂದು ನೆಗಿಟಿವ್ ಪಾಯಿಂಟ್ .ಶಾಲೆ ಬಿಟ್ಟು ಮನೆಗೆ ಬಂದ ನಂತರವೂ ಸಹ ಮನೆಯಲ್ಲಿ ಗದ್ದೆ -ತೋಟ ಕೆಲಸ ಅನಿವಾರ್ಯ .ಟ್ಯೋಶನ್ ಅಂತೂ ಕನಸ್ಸಿನ ಮಾತೇ ಸರಿ .ಇಂತಹ ಪರಿಸ್ಥಿತಿಯಲ್ಲೂ 625 ಕ್ಕೆ 623 ಅಂಕ ಗಳಿಸುದೆಂದರೆ  ಸುಲಭದ ಮಾತೇ ?ಇನ್ನು ಪಟ್ಟಣ ಪ್ರದೇಶದ ವಿಧ್ಯಾರ್ಥಿಗಳಿಗೆ ಯಾವುದೇ ಒಂದು ದೊಡ್ಡ  ಕೆಲಸ -ಕಾರ್ಯವಿಲ್ಲದೇ ಉತ್ತಮ ಸ್ಕೋರ್ ಗಳಿಸಬಹುದು  ಎನ್ನುವ ವಿಚಾರ ವಿರಬಹುದು .ಮನೆಗೆ ಬಂದ ತಕ್ಷಣ ಟ್ಯೋಶನ್ ಸಿಗಬಹುದು ,ಮನೆಯಲ್ಲಿ ಉನ್ನತ ಶಿಕ್ಷಣ ಪಡೆದವರ ಒಂದು ಕ್ರಪೆ ಕೂಡ ಇರಬಹುದು. ಆದರೂ ಇಂದಿನ ಅಂತರ್ಜಲ ,ಮೊಬೈಲ್ ಯುಗಕ್ಕೆ ಹೆಚ್ಚಾಗಿ ಇವರುಗಳು ಅಂಟಿಕೊಂಡಿರುತ್ತಾರೆ .ಹಾಗಾಗಿ ಇಂಥ ಸಮಸ್ಯೆಗಳ ಮಧ್ಯೆಯೂ ಈ ಬಾರಿ ದಾಖಲೆ ಫಲಿತಾಂಶವನ್ನು ಗಳಿಸಿರುದು ಹೆಮ್ಮೆಯ ವಿಚಾರ .ಕಷ್ಟ -ಪಟ್ಟು ವಿಧ್ಯಾರ್ಜನೆ ಕಂಡು ಕೊಂಡು 10 ಗಳಿಂದ್ಚೆಗೆ ಉತ್ತಮ ಫಲಿತಾಂಶವನ್ನು ತಂದು ಕೊಟ್ಟ ಎಲ್ಲ ವಿಧ್ಯರ್ಥಿಗಳಿಗೂ ನೆಲ್ಮೆಯ ಹೃದಯಪೂರ್ವಕ ಅಭಿವಂದನೆಗಳು . 

ಶುಕ್ರವಾರ, ಜೂನ್ 15, 2012

ಕಠಾರಿವೀರ ಚಿತ್ರದ ವಿರುದ್ಧ ಹೋರಾಟ ಕರಾವಳಿ ಜಿಲ್ಲೆಯಲ್ಲಿ ಮಾತ್ರ ಸಿಮೀತವಾದದ್ದು ಯಾಕೆ ?

ಮುನಿರತ್ನ ಕನ್ನಡ ಚಿತ್ರ ರಂಗದ ಒಬ್ಬ ಪ್ರತಿಷ್ಟಿತ ನಿರ್ಮಾಪಕರಲ್ಲಿ ಒಬ್ಬರು .ಇವರ ಬ್ಯಾನರನಡಿಯಲ್ಲಿ ಹಲವಾರು ಚಿತ್ರಗಳು ಅರಳಿವೆ .ಯಾರೂ ಕೈಹಾಕದ ,ಕನ್ನಡ ಚಿತ್ರರ೦ಗದಲ್ಲಿ ಒಂದು ದಾಖಲೆ ಅನ್ನು ನಿರ್ಮಿಸಬೇಕು ಎನ್ನುವ ಆಶೆ ಇಂದ ಇತ್ತೀಚಿಗೆ ಸುಮಾರು 15 ಕೋಟಿ ರೂ .ವೆಚ್ಚದಲ್ಲಿ ಕಠಾರಿವೀರ ಸುರಸುಂದರಾಂಗಿ ಎನ್ನುವ ಉಪೇಂದ್ರ ,ರಮ್ಯ ,ವಿಶೇಷ ಪಾತ್ರದಲ್ಲಿ ಅಂಬರೀಶ್ ಅಬಿನಯದ 3 D, ಮತ್ತು 2D ತಂತ್ರಾಜನವನ್ನು ಒಳಗೊಂಡ ಚಿತ್ರವನ್ನು ರೂಪಿಸಿಬಿಟ್ಟರು .ಐತಿಹಾಸಿಕ ಟಚ್  ಕೊಟ್ಟು ಚಿತ್ರ ಪ್ರೇಮಿಗಳ ಮನಸನ್ನು ಗೆಲ್ಲುದರ ಜೊತೆ ಜೇಬನ್ನು ಭರ್ತಿ ಮಾಡಿಕೊಳ್ಳುವ ಉಪಾಯ ಅವರದಾಗಿತ್ತು .ಚಿತ್ರದ ಬಿಡುಗಡೆ ದಿನಾ೦ಕ ,ಚಿತ್ರದ ಕಥೆ ಕ್ರತಿ ಚವ್ರ್ಯಹೀಗೆ ಮುಂತಾದ ಸಮಸ್ಯೆಯನ್ನೋಲ್ಕೊಂಡಂತೆ ಚಿತ್ರ ಬಿಡುಗಡೆ ಯ ಮೊದಲೇ ವಿವಾದದ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿತ್ತು .ಬಿಡುಗಡೆ ನಂತರವೂ ಸಹಾ, ಇನ್ನಷ್ಟು ಸಮಸ್ಯೆ ಯೊಂದಿಗೆ ವಿವಾದ ದುಪ್ಪಟ್ಆಯ್ತು .ಕೆಲವು ಚಿತ್ರ ಮಂದಿರದಲ್ಲಿ 3D  ಗೊಂದಲ ವೆರ್ಪಟ್ಟರೆ,ಮುಖ್ಯವಾದ ಮತ್ತೊಂದು ವಿಚಾರವೆಂದರೆ  ಹಿಂದೂ ದೇವತೆಗಳ ಬಗ್ಗೆ ಚಿತ್ರದಲ್ಲಿ ಅವಹೇಳನಕಾರಿ ಯಾಗಿ ಬಿಂಬಿಸಲಾಗಿದೆ ಎಂದು ಹಿಂದೂ ಸಂಘಟನೆಗಳು ಪ್ರತಿಭಟನೆ ನೆಡಿಸಿದವು.ಕೆಲವಂದು ಸ್ಥಳಗಳಲ್ಲಿ ತಣ್ಣಗಾದರೆ ,ಉಡುಪಿ ಮತ್ತು ಮಂಗಳೂರಿನಲ್ಲಿ ಮಾತ್ರ ಪ್ರತಿಭಟನೆಯ ಕಾವು ಬಹಳ ಬಿಗುವರಿದಿತ್ತು 
ಉಡುಪಿ ಶಿರೂರು ಮಠದ ಲಕ್ಷ್ಮಿ ವರ ತೀರ್ಥ ಸ್ವಾಮೀಜಿ ನೇತೃತ್ವದಲ್ಲಿ ಮೊಟ್ಟಮೊದಲನೆಯದಾಗಿ , ಉಡುಪಿ ಗೀತಾಂಜಲಿ ಚಿತ್ರಮಂದಿರದಲ್ಲಿನ ಬ್ಯಾನರ್ ಗಳನ್ನೂ ತೆರವು ಗೊಳಿಸಿ ಉಗ್ರ ರೂಪದ ಪ್ರತಿಭಟನೆಯೊಂದಿಗೆ  ಚಿತ್ರಪ್ರದರ್ಶನವನ್ನು ಸಮೂರ್ಣವಾಗಿ ತಡೆಹಿಡಿಯಲಯ್ತು. ಮಂಗಳೂರಿನ ಜ್ಯೋತಿ ಚಿತಮಂದಿರದಲ್ಲೂ ಸಹಾ ಇದೆ ತರಹದ ಬೆಳವಣಿಗೆ ಉಂಟಾಯ್ತು .ಚಿತ್ರದ ವಿರುದ್ಧದ ಹೋರಾಟದ ಕಾವು ಮಿತಿಮೀರಿದನ್ನು ಅರಿತ ನಿರ್ಮಾಪಕ ಮುನಿರತ್ನ ,ನಾಯಕ ಉಪೇಂದ್ರ ಉಡುಪಿ ಕೃಷ್ಣ ಮಠ ಕ್ಕೆ ಆಗಮಿಸಿ ತಪ್ಪುಕಾಣಿಕೆ ಯನ್ನು ಸಲ್ಲಿಸಿ ಚಿತ್ರದಲ್ಲಿ ಬಳಸಿ ಕೊಳ್ಳಲಾಗಿರುವ ಎಲ್ಲ ಸನ್ನಿವೇಶಕ್ಕೆ ಕತ್ತರಿ ಹಾಕಲಾಗುದು ಎಂದ ಆ ಸಂಧರ್ಭದಲ್ಲಿ ತೀರ್ಮಾನಕ್ಕೆ ಬರಲಾಗಿತ್ತದರೂ ,ಒಂದೆರಡು ಸನ್ನಿವೇಶವನ್ನು ತೆರವವು ಗೊಳಿಸಿ ಕೈ ತೊಳೆದು ಕೊಂಡಿದ್ದರು 
ಇದನ್ನು ಅರಿತ ಭಜರ೦ಗ ದಳ ಸೇರಿದಂತೆ ಇತರ ಕೆಲವು ಹಿಂದೂ ಸಂಘಟನೆಗಳು ತೀವ್ರ ರೂಪದ ಪ್ರತಿಭಟನೆಗೆ  ನಾಂದಿ ಹಾಡಿದವು .ಒಂದೆರಡು ದಿನಗಳ ಕಾಲ ಪೋಲಿಸ್ ಬಿಗು ಬಂದೊಬ್ಸ್ತನಲ್ಲಿ ಉಡುಪಿ ಗೀತಾಂಜಲಿ ಚಿತ್ರಮಂದಿರದಲ್ಲಿ ಚಿತ್ರ ಪ್ರದರ್ಶನ ಕಂಡಿತ್ತ್ದರೂ ,ಪ್ರೇಕ್ಷಕರ ಕೊರತೆ ಉಂಟಾಗಿ ಒಂದೇ ವಾರದಲ್ಲಿ ಉಭಯ ಜಿಲ್ಲೆಗಲಲ್ಲಿ ಚಿತ್ರ ಎತ್ತಂಗಡಿ ಯಾಯಿತು .ಈ ಪ್ರದೇಶದಲ್ಲಿನ ಬೆಳವಣಿಗೆ ರಾಜ್ಯಾದ್ಯಂತ ಉಂಟಾಗಿದ್ದರೆ ,ಮುಂದೆ ಇಂಥಹ ಅಹಿತಕಾರಿ ,ಸಮಾಜಕ್ಕೆ ತಪ್ಪು ಭಾವನೆಯನ್ನು ರವಾನಿಸುವ ಚಿತ್ರ ನಿರ್ಮಾಣಕ್ಕೆ ನಿರ್ನಾಮ ದ ಪಾಠ ವಾಗುತ್ತಿತ್ತು . ಆದರೆ ?? "ಸಿನಿಮ ವೆಂದ ಮೇಲೆ ಅದು ಕಾಲ್ಪನಿಕ ,ಇಂಥ ಹಲವರು ಚಿತ್ರಗಳು ಹಿಂದೆ ಬಂದಿವೆ" ಎನ್ನುವ ಚಿತ್ರ ಬಳಗಕ್ಕೆ ಹಿಂದೂ ಧರ್ಮದ ಅನುಯಯಿಯೂ ಆಗಿ ಹಿಂದೂ ದೇವತೆಗಳ ಬಗ್ಗೆ ಅವಹೇಳನಕಾರಿಯಾಗಿ ಚಿತ್ರಿಸಿರುವ ಚಿತ್ರಬಳಗ ಆಗ್ಗ್ಗದ ರೀತಿಯಲ್ಲಿ ದುಡ್ಡು ಮಾಡಲು ಹೊರಟ ಈ ಉದ್ದಟತನ ಕ್ಕೆ ಏನು ಹೇಳಬೇಕೋ ಗೊತ್ತಿಲ್ಲ .
 
ಭೂ ಲೋಕದಲ್ಲಿ ಸತ್ತ ಒಬ್ಬ ವೇಶ್ಯಯನ್ನು ಯಮಲೋಕದಲ್ಲಿ ಚಿತ್ರಗುಪ್ತ ಚುಮ್ಬಿಸುದು ,ದೇವಲೋಕದಲ್ಲಿ ಇಂದ್ರನ ಮಗಳಾದ ದೇವಕನ್ಯ ಇಂದ್ರೆಜೆ ಯನ್ನು ನಾಯಕ ವಿವಿದ ಸರಸ ಸಲ್ಲಾಪದಲ್ಲಿ ಬಳಸಿಕೊಳ್ಳುದು,ದೇವಲೋಕದಲ್ಲಿ ಗ್ಲಾಮರ್ ,ಕ್ಯಾಬರೆ ನ್ರತ್ಯ ,ದೇವತೆಗಳಿಗೆ  ಅನಿಷ್ಟ ,ಅಸಂಬದ್ದ ರೀತಿಯಲ್ಲಿ ಬಯ್ಯು ವ ವಿಧಾನ,ಯಮನನ್ನು ಆತನ ಆಸ್ತನದಿಂದ ಕೆಳಗಿಳಿಸಿ ಆತನ ಆಸನಕ್ಕೆ ಪದಜ್ಯುತಿ ತರುವ ಈ  ಕೆಲವು ದ್ರಶ್ಯಗಳು ಹಿಂದೂ ಧಾರ್ಮಿಕ ಸಂಸೃತಿಗೆ ಘಾಸಿ ಪಡಿಸುವಂತ ಸನ್ನಿವೇಶಗಳು ತಪ್ಪು ವಿಚಾರವಲ್ಲವೇ ?