ಬುಧವಾರ, ಜುಲೈ 28, 2021
ಇದೆಂತಾ ನ್ಯಾಯ ಪರ ಹೋರಾಟ ಇಂದ್ರಜಿತ್ ಲಂಕೇಶ್ ಅವರೇ ??
ಹೌದು.! ಅದೇ ಇಂದ್ರಜಿತ್ ಲಂಕೇಶ್ !! ಕಳೆದ ವರ್ಷ ಡ್ರಗ್ಸ್ ವಿವಾದ ಬಗ್ಗೆ ಗಮನ ಸೆಳೆದಿದ್ದ ನಿರ್ದೇಶಕ, ಪತ್ರಕರ್ತ ಇಂದ್ರಜಿತ್ ಲಂಕೇಶ್ ಮತ್ತೆ ಗಮನ ಸೆಳೆಯುತ್ತಿದ್ದಾರೆ .ಕಳೆದ ಒಂದು ವಾರದಿಂದ ನಟ ದರ್ಶನ್ ವಿಚಾರಕ್ಕೆ ಉಪ್ಪು, ಹುಳಿ, ಖಾರ ಬೆರಿಸಿ ವಿವಾದಕ್ಕೆ ಕಾರಣೀಭೂತ ರಾಗಿದ್ದಾರೆ. ಸಾಮಾನ್ಯರಿಗೆ ನ್ಯಾಯ ದೊರಕಬೇಕು ಎಂದು ಡೈಲಾಗ್ ಹೊಡೆಯು ಲಂಕೇಶ್ ಲಂಕೇಶ್ ಸೆಲೆಬ್ರಿಟಿಗಳ ಹಿಂದೆ ಬೀಳುವ ಉದ್ದೇಶ ಅರ್ಥವಾಗುತ್ತಿಲ್ಲ .ನಿಜವಾಗಿಯೂ ಉತ್ತಮ ಅತ್ಯುತ್ತಮ ಕಾರ್ಯ .ಒಬ್ಬ ಪತ್ರಕರ್ತನಾಗಿ ಸಮಾಜದ ಬಗ್ಗೆ ಆಲೋಚಿಸುವುದು, ಅಂಕು -ಡೊಂಕು ತಿದ್ದುವ ಪ್ರಯತ್ನಕ್ಕೆ ಕೈ ಹಾಕಿರುವುದು ಅದ್ಬುತ ಕಾರ್ಯ ಆದರೆ ಅದ್ಯಾಕೋ ನಿನಿಮಾ ಮಂದಿಯನ್ನೇ ತನಗೆ ಆಗದವರನ್ನು ಟಾರ್ಗೆಟ್ ಮಾಡುವ ನೀತಿ ಸರಿಯಲ್ಲ .
ಕಳೆದ ಬಾರಿ ಡ್ರಗ್ಸ್ ವಿಚಾರದಲ್ಲಿ ಸಿನಿಮಾ ಮಂದಿಗಳು ಭಾಗಿಯಾಗಿದ್ದಾರೆ ಎಂದು ಸಮಾಜ ಹೋರಾಟಗಾರ ಪ್ರಶಾಂತ್ ಸಂಭರ್ಗಿ ಜೊತೆ ಒಂದಿಷ್ಟು ವಿವರಗಳನ್ನು ಬಹಿರಂಗ ಪಡಿಸಿದ್ದರು. ಸಾಕ್ಷಿ ,ಪುರಾವೆಗಳನ್ನ ಸಿಸಿಬಿ ಒದಗಿಸಿದ್ದರು. ಕೆಲವು ನಟ -ನಟಿಯರು ಸೇರಿದಂತೆ ಒಂದಷ್ಟು ಕಲಾವಿದರುಗಳನ್ನು ವಿಚಾರಣೆಗೆ ಒಳಪಡಿಸಿ ಸಿಸಿಬಿ ಟೀಮ್ ಕೈ ತೊಳೆದು ಕೊಂಡಿತ್ತು. ನಟಿ ಸಂಜನಾ ಮತ್ತು ರಾಗಿಣಿಯನ್ನು ಬಂಧಿಸಿ ಬಿಡುಗಡೆ ಮಾಡಿ ಅಲ್ಲಿಗೆ ಡ್ರಗ್ಸ್ ವಿಚಾರ ಅಂತ್ಯ ಗೊಂಡಿತ್ತು. ತತ್ಸಮಯದಲ್ಲಿ ಮಾಧ್ಯಮಗಳ ಮುಂದೆ ಪ್ರತ್ಯಕ್ಷಗೊಂಡ ಇಂದ್ರಜಿತ್ ಲಂಕೇಶ್ ಸಿಸಿಬಿ ಯಿಂದ "ಪಾರದರ್ಶಕ ವಿಚಾರಣೆಯಾಗಿಲ್ಲ ಅಪರಾಧಿಗಳಿಗೆ ಶಿಕ್ಷೆ ಕೊಡಲಿಲ್ಲ ನಾನು ಕೊಟ್ಟ ಲಿಸ್ಟ್ ಲ್ಲಿರಿರುವವರ ವಿಚಾರಣೆ ಆಗಿಲ್ಲ" ಎಂದು ಆರೋಪಿಸಿದ್ದರು .ರಾಜಕೀಯ ,ಹಣ ಬಲಗಳ ನಡುವೆ ಯಾಸ್ ಯುಸುವಲ್ ಮುಚ್ಚಿ ಹೋಗಿದ್ದು ದಿಟ !
ಈ ಎಲ್ಲಾ ಪ್ರಕರಣದ ಬಳಿಕ ಎಲ್ಲೂ ಇಂದ್ರಜಿತ್ ಲಂಕೇಶ್ ಮೇಲೆ ಒಂದಷ್ಟು ಜನರಿಗೆ ಅಭಿಮಾನ ಹುಟ್ಟಿತ್ತು , ಹೆಚ್ಚಿತ್ತು .ಒಂದೊಳ್ಳೆ ಸಮಾಜ ಮುಖಿ ಕಾರ್ಯಕ್ಕೆ ಮೆಚ್ಚುಗೆಯೂ ವ್ಯಕ್ತವಾಗಿತ್ತು .
ಇದೀಗ ಮತ್ತೆ ಸುದ್ದಿಯಾಗಿದ್ದಾರೆ ಇಂದ್ರಜಿತ್ ಲಂಕೇಶ್ . ನಟ ದರ್ಶನ್ ತೂಗುದೀಪ್ ಮತ್ತು ನಿರ್ಮಾಪಕ ಉಮಾಪತಿ ಹಾಗೂ ಅರುಣಾಕುಮಾರಿ ನಡುವೆ ನಡೆಯತೇನ್ನೆಲಾದ ೨೫ ಕೋಟಿ ವಿಚಾರದಲ್ಲಿ ದರ್ಶನ ಶೂರುಟಿ ಹಾಕಿದ್ದಾರೆ ಎಂಬಲ್ಲಿಂದ ಶುರುವಾಗಿತ್ತು.ದರ್ಶನ್ ಅರಿವಿಗೆ ಬರದೇ ವಿಚಾರ ಬಹಿರಂಗವಾದ ಬಳಿಕ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿಬಿಡುತ್ತಾರೆ . ನಿರ್ಮಾಪಕ ಉಮಾಪತಿಯವರ ಕಿತಾಪತಿ ಇದರಲ್ಲಿ ಮೇಲ್ನೋಟಕ್ಕೆ ಎದ್ದು ಕಾಣುತ್ತಿದ್ದರೂ , ಉಮಾಪತಿ ಅದನ್ನು ಮುಚ್ಚಿ ಹಾಕಲು ಬೇರೆ-ಬೇರೆ ಸ್ಟೇಟನ್ಮೆಂಟ್ ಕೊಡಲು ಪ್ರಾರಂಭಿಸುತ್ತಾರೆ . ದೊಡ್ಮನೆಯ ಜಮೀನು ,ಸಂದೇಶ್ ನಾಗರಾಜ್ ಹೋಟೆಲ್ ಕಥೆ . ಇದೆಲ್ಲವೂ ಹರಿದಾಡಲು ಪ್ರಾರಂಭಿಸಿಬಿಟ್ಟಿತು . ವಿಚಾರ ೨೫ ಕೋಟಿ ರೂಪಾಯಿ ಆದರೆ ಇನ್ನಿತರ ವಿಚಾರಗಳು ತೇಲಿ ವಿವಾದಗಳೇ ಸ್ರಷ್ಟಿಯಾದವು. ಇತ್ತ ಇಂದ್ರಜಿತ್ ಲಂಕೇಶ್ ಕೂಡ ಈ ಮ್ಯಾಟರ್ ಗೆ ಎಂಟ್ರಿಯಾಗುತ್ತಾರೆ . "ಹೋಟೆಲ್ ನಲ್ಲಿ ಹಲ್ಲೆ ಆಗಿದ್ದು ನಿಜ ,ತನ್ನ ಫಾರ್ಮ್ಹೌಸ್ ಗೆ ಕರೆಸಿಕೊಂಡ ಮಹಿಳೆ ಯಾರು ? ನನ್ನಲ್ಲಿ ಆಡಿಯೋ ಇದೆ ,ದರ್ಶನ್ ಗೂಂಡಾಗಿರಿ ಮಾಡುತ್ತಾರೆ "ಅದೂ ಇದೂ , ಇಲ್ಲ ಸಲ್ಲದನೆಲ್ಲವನ್ನೂ ಪತ್ರಿಕಾಗೋಷ್ಠಿ ಕರೆದು ಉಸುರುತ್ತಾರೆ . "ದರ್ಶನ್ ಗೂಂಡಾಗಿರಿ ಮಾಡುವುದು ಸರಿಯಲ್ಲ ಒಬ್ಬ ಹೋಟೆಲ್ ಸಪ್ಲೆಯರ್ ಹೊಡೆದಿದ್ದು ತಪ್ಪು ಸಾಮಾನ್ಯ ಜನರಿಗೆ ನ್ಯಾಯ ದೊರಕಬೇಕು ಎಂಬ ಉದ್ದೇಶ ಮಾತ್ರ ನನಗಿದೆ ಎನ್ನುತ್ತಾರೆ .
ಹೌದು ! ದರ್ಶನ ತಪ್ಪು ಮಾಡಿದ್ದೇಯಾದರೇ ಅವರಿಂದ ಹಲ್ಲೆಗೊಳಗಾದವರು ಪೊಲೀಸರಿಗೆ ದೂರು ನೀಡಬೇಕಾಗಿತ್ತು . ಅಥವಾ ಅವರೇ ಮುಖ್ಯವಾಹಿನಿಗೆ ಬಂದು ಹೇಳಬಹುದಿತ್ತು . ಅದು ಆಗಿಲ್ಲಾ . ಆಹಾರ ತಡವಾಗಿ ಬಂದಿದ್ದಕ್ಕೆ ಬೈದಿದ್ದಾರೆ ಅನ್ನುವುದು ದರ್ಶನ್ ಜೊತೆಗಿದ್ದವರ ಉತ್ತರ . ಒಬ್ಬ ಸಲೆಬ್ರಿಟಿಯಾಗಿ ಆಹಾರ ತಡವಾಗಿ ಬಂದಿದ್ದಕ್ಕೆ ಕೋಪದಲ್ಲಿ ಜಸ್ಟ್ ತಲೆ ಮೇಲೆ ಹೊಡೆದಿರಬಹುದು ಎಂಬ ಮಾತು ಇದೆ ಅದು ಪ್ರೀತಿಯಿಂದ ಸವರಿರಬಹುದು ಮಾರಣಾಂತಿಕವಾಗಿ ಹಲ್ಲೆ ಮಾಡಿಲ್ಲ ಪ್ರೀತಿಯಿಂದ ಯಾವಾಗಲೂ ಸರ್ವ್ ಮಾಡುವ ಆತ ಅದರಿಂದ ಆತನಿಗೇನೂ ದುಃಖವಾಗಿಲ್ಲ ಸುಖ -ಸುಮ್ಮನೆ ಕಪೋಲ ಕಲ್ಪಿತ ಆರೋಪ ಮಾಡುತ್ತಿದ್ದಾರೆ ಎಂದೇಳುವ ದರ್ಶನ್ ಮಾತಿನಲ್ಲಿ ಅರ್ಥವಿದೆ .
ಫಾರ್ಮ್ಹೌಸ್ ಗೆ ಬಂದ ಮಹಿಳೆ , ಪತ್ನಿಯ ಮೇಲಿನ ಹಲ್ಲೆ ಬೂತಕಾಲದಲ್ಲಿನ ವಿಚಾರ ಎತ್ತಿ ಹಿಡಿಯುವ ಇಂದ್ರಜಿತ್ ಗೆ ಪ್ರಜ್ಞಾವಂತರು ಹೇಳುವುದು ಇಷ್ಟೇ , ಇದು ಅವರ ಖಾಸಗಿ ವಿಚಾರವಲ್ಲವೇ ? ಇದರಿಂದ ಸಮಾಜಕ್ಕೆ ಕಂಟಕ ತರುವಂತ ಸಂದೇಶ ವಿದೆಯೇ ? ಇದ್ದರೂ ,ಕೇವಲ ದರ್ಶನ್ ತೂಗುದೀಪ್ ಮಾತ್ರ ಅರ್ಹರೇ ?ದೊಡ್ಡ ಸೆಲೆಬ್ರಿಟಿಗಳು ಇಂತಹ ತಪ್ಪು ಮಾಡಿಲ್ಲವೇ ? ದರ್ಶನ್ ನ ನೆಗೆಟಿವ್ ಪಾಯಿಂಟ್ ನ್ನು ಮಾತ್ರ ಉಸುರುವ ಇಂದ್ರಜಿತ್ ಲಂಕೇಶ್ ಅವರ ಒಳ್ಳೆಯ ಕಾರ್ಯವನ್ನು ಸಮಾಜಕ್ಕೆ ಬಹಿರಂಗ ಪಡಿಸಿ, ಇತ್ತೀಚೆಗೆ ಕರೋನಾ ಕಾಲ ಘಟ್ಟದಲ್ಲಿ ವಾರಿಯರ್ ಆಗಿ ಕೆಲಸ ಮಾಡಿದ್ದು ,ಆಹಾರ ಕಿಟ್ ಒದಗಿಸಿದ್ದರಿಂದ ಹಿಡಿದು ಸಮಾಜ ಮುಖಿ ಕಾರ್ಯ ದರ್ಶನ್ ನಿಂದ ಆಗಿದೆ ಅದ್ಯಾಕೆ ಇವರ ಕಣ್ಣಿಗೆ ಕಾಣಿಸುದಿಲ್ಲ ? ಒಬ್ಬ ಬಡ ವ್ಯಕ್ತಿಗೆ ನ್ಯಾಯ ದೊರಕಿಸಿ ಕೊಡಬೇಕೆಂದು ನಾನು ನ್ಯಾಯ ಪರವಾಗಿ ದರ್ಶನ ವಿಚಾರ ಎತ್ತಿದ್ದೇನೆ ಎಂದು ಹೇಳುವ ಇಂದ್ರಜಿತ್ ಗೆ ಕೇವಲ ದರ್ಶನ ನಿಂದ ಹಲ್ಲೆ ಗೊಳಗಾಗಿರುವ ಮಾತ್ರ ಕಣ್ಣಿಗೆ ಕಾಣಿಸುವುದೇ ?ಇತ್ತೀಚಿಗೆ ಮಾನ್ಯ ಉಪಮುಖ್ಯ ಮಂತ್ರಿ ಮಗನ ಕಾರು ಅಪಘಾತ ದಿಂದ ಒಬ್ಬ ಬಡ ರೈತ ಕೊನೆಯುಸೀರು ಎಳೆದಿದ್ದು ಕಾಣಿಸಲಿಲ್ಲವೇ ಹೀಗೆ ಹಲವಾರು ಉದಾಹರಣೆಗಳನ್ನ ಕೊಡಬಹುದು .ನಿಮ್ಮ ಸಮಾಜದ ಕಳಕಳಿಗೆ ಗೌರವವಿದೆ ಆದರೆ ಒಬ್ಬರನ್ನು ಟಾರ್ಗೆಟ್ ಮಾಡುವ ವಿಚಾರಕ್ಕೆ ಖಂಡಿತ ಧಿಕ್ಕಾರವಿದೆ .
ಭಾನುವಾರ, ಜುಲೈ 4, 2021
ವೈದ್ಯರನ್ನು /ವ್ಯವಸ್ಥೆಯನ್ನು ದೂರುವ ಮೊದಲು ಇದನ್ನು ಆಲೋಚಿಸಿ !
ಮೊನ್ನೆ ವಾಟ್ಸಾಪ್ ನಲ್ಲಿ ಬಂದ ವಿಡಿಯೋ ನೋಡ್ತಾ ಇದ್ದೆ ಅದರಲ್ಲೊಂದು ತೀರಾ ಬಾವುಕತೆ ಯಿಂದ ತನ್ನ ನೋವಿನ ವಿಚಾರ ಹೇಳುತ್ತಿದ್ದ ತಮಿಳು ನಾಡಿನ ನರ್ಸ್ ಒಬ್ಬಳ ಮಾತು ನಿಜಕ್ಕೂ ಮನಸ್ಸಿಗೆ ನಾಟುವಂತಿತ್ತು ನಾಗರಿಕ ಸಮಾಜ ತಲೆ ತಗ್ಗಿಸುವಂತ ವಿಚಾರ ಅದರಲ್ಲಿ ತುಂಬಿತ್ತು ಕೋವಿಡ್ ಸಂದರ್ಭದಲ್ಲಿ ಜನ ಸಾಮನ್ಯರು ಪ್ರದರ್ಶಿಸುವವರ ಉದ್ದಟತನಕ್ಕೆ ಬುದ್ದಿ ಹೇಳುವ ಸಂದೇಶ ಗಮನ ಸೆಳೆಯಿತು. ಸಾಮಾಜಿಕ ಅಂತರ ಒಂದೇ ಮಾರ್ಗ ಕೋವಿಡ್ ನಿಯಂತ್ರವನ್ನು ತರಬಹುದೇ ವಿನಾ: ಸಧ್ಯಕ್ಕೆ ಯಾವುದೇ ಮೆಡಿಸಿನ್ ಇಲ್ಲ ವ್ಯಾಕ್ಸಿನ್ ಇದ್ದರೂ, ಅದು ಅಷ್ಟು ಫಲಪ್ರಧ ಅಲ್ಲ ., ಇನ್ನು ನಮ್ಮ ದೇಶದ ಜನ ಸಂಖ್ಯೆಗೆ ಅನುಗುಣವಾಗಿ ಬೇಡಿಕೆಗೆ, ಪೂರೈಕೆ ಮತ್ತು ಲಭ್ಯತೆ ಅಷ್ಟಕಷ್ಟೇ !ಇದನ್ನೆಲ್ಲವನ್ನು ಮನಗೊಂಡು ನಮ್ಮ ಸುರಕ್ಷತೆ ಹಾಗೂ ನಮ್ಮವರ ರಕ್ಷಣೆಗಾಗಿ ಒಂದಷ್ಟು ದಿನ ಮನೆಯಲ್ಲೇ ಇದ್ದು ,ಸಾಮಾಜಿಕ ಅಂತರ ಕಾಪಾಡಿದ್ದೇಯಾದರೇ ಖಂಡಿತವಾಗಿಯೂ ಕರೋನ ವೈರಸ್ ನಿಂದ ಗೆಲ್ಲಬಹುದು ಜೊತೆಗೆ ದೇಶವನ್ನೂ ! ಆದರೆ ಜನ ಸಾಮನ್ಯರು ಯಾಕೆ ಇದರ ಬಗ್ಗೆ ಆಲೋಚಿಸುತ್ತಿಲ್ಲ ? ಬುದ್ದಿ ಹೀನ ರಾಗಿದ್ದಾರೆ .ನಿರ್ಲಕ್ಷತೆ ,ನಿರ್ಲಜ್ಜತೆ ,ಉದ್ದತನದಿಂದಲೇ ಇಷ್ಟೊಂದು ಪ್ರಮಾಣದಲ್ಲಿ ಏರಿಕೆ ಕಂಡೂ ,ಪ್ರಾಣ ಹಾನಿಗೆ ಕಾರಣವಾಗಿರುವುದು .ಕೋವಿಡ್ ನಿಯಮ ಪಾಲನೆ ,ಸರಕಾರದ ಮಾರ್ಗ ಸೂಚಿಯನ್ನು ಗಾಳಿಗೆ ತೋರಿ ಮಾಸ್ಕ್ ಉಪಯೋಗಿಸದೇ ಎಲ್ಲೆಂದರಲ್ಲಿ ತಿರುಗಾಡುವುದು ,ಇದೆಲ್ಲವೂ ಕೋವಿಡ್ ಹರಡುವುದಕ್ಕೆ ರಹದಾರಿಯಾಗಿದೆ . ರೋಗ ಉಲ್ಭಣ ಗೊಂಡ ನಂತರ ಆಸ್ಪತ್ರೆಗೆ ದಾಖಲಾಗುವುದು ಬೆಡ್ ,ಆಕ್ಸಿಜನ್ ಸಿಗದೇ ಇರುವುದು ಸಾವಿನ ಕದ ತಟ್ಟುತ್ತಿರುವವರ ಬಗ್ಗೆ ಉತ್ತಮ ಹೇಳುತ್ತಿದ್ದ ಆ ನರ್ಸ್ “ಜನಸಸಂಖ್ಯೆ ಅನುಗುಣವಾಗಿ ಅಷ್ಟೊಂದು ಆಸ್ಪತ್ರೆ ,ಬೆಡ್ ,ವೈದ್ಯಕೀಯ ಪರಿಕರ ,ಆಸ್ಪತ್ರೆಯ ಸಿಬ್ಬಂದಿಗಳು ನಮ್ಮಲ್ಲಿ ಇಲ್ಲ ,ಎಲ್ಲವನ್ನೂ ಒಮ್ಮತದಲ್ಲಿ ಸಮತೋಲನಕ್ಕೆ ತರುವುದು ಕೂಡಾ ಕಷ್ಟ ಸಾಧ್ಯ ,ರೋಗ ಲಕ್ಷಣ ಉಲ್ಬಣಗೊಂಡ ನಂತರ ಆಸ್ಪತ್ರೆಗೆ ದೌಡಾಯಿಸುವ ರೋಗಿಗಳು ಬೆಡ್ ,ಆಕ್ಸಿಜನ್ ಗೆ ಪರದಾಡುವುದು ,ವೈದ್ಯರ ಮೇಲೆ ರೇಗಾಡುವದು ಎಷ್ಟು ಸರಿ ? ರೋಗಿಗಳು ತುಂಬಾ ಸೀರಿಯಸ್ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗುವುದರಿಂದ ಅವರುಗಳ ಪ್ರಾಣ ಆ ಸಂದರ್ಭದಲ್ಲಿ ಉಳಿಯುವುದು ,ಮತ್ತು ಉಳಿಸುವುದು ತುಂಬಾನೇ ಕಷ್ಟ . ವೈದ್ಯರುಗಳು ಸಾಕಷ್ಟು ಪ್ರಯತ್ನ ಪಡುತ್ತಾರೆ ,ಇನ್ನು ನರ್ಸ್ಗಳು ಲ್ಯಾಬ್ ಟೆಕ್ನಿಷಿಯನ್ ಗಳು ತಮ್ಮ ಪ್ರಾಣದ ಹಂಗು ತೊರೆದು ಹೊರಡುತ್ತಾರೆ . 4 ಜನರನ್ನು ಆರೈಕೆ ಮಾಡುವ ಸಹಜ ಸ್ಥಿತಿಯಲ್ಲಿ 10-15 ಜನರನ್ನು ಕಷ್ಟ ಪಟ್ಟು ಇಷ್ಟದಿಂದಲೇ ರೆಸ್ಟ್ ಗಳನ್ನೆಲ್ಲಾ ಬಿಟ್ಟು ನಾವು ಪ್ರಯತ್ನ ಪಡುತ್ತವೆ ,ನಮಗೂ ಗಂಡ -ಹೆಂಡತಿ, ಮಕ್ಕಳು ಒಟ್ಟಾರೆ ಫ್ಯಾಮಿಲಿ ಇಲ್ಲವೇ ? ಪ್ರತಿಕ್ಷಣವೂ ಅವುಗಳನ್ನು ಮರೆತು,ಬದಿಗೊತ್ತಿ ಕೋವಿಡ್ ವೈರಸ್ ನಮ್ಮ ಸುತ್ತಲೂ ಇದ್ದರೂ ,ಅದರ ಭಯವನ್ನು ಬಿಟ್ಟಾಕಿ ,ರೋಗಿಗಳು ರಿಕಾವರಿಯಾಗಿ ಹೊರ ಹೋಗ್ಬೇಕು ಎಂದು 12-14 ಗಂಟೆಗಳ ಕಾಲ ನಿರಂತರವಾಗಿ ಪಿಪಿಈ ಕಿಟ್ ಧರಿಸಿ ಕೊಂಡು ರೋಗಿಗಳ ಉಪಚಾರವನ್ನು ಮಾಡುತ್ತೇವೆ , ಒಂದು ರೋಗಿ ನಮ್ಮ ಕಣ್ಣ ಮುಂದೆ ಮರಣ ಒಪ್ಪಿದಾಗ ಅವರ ಕುಟುಂಬ ಕ್ಕಿಂತ ಜಾಸ್ತಿ ನಮಗೆ ದುಃಖದ ಕಟ್ಟೆ ಒಡಿಯುತೇ ನಾವು ಕಲ್ಲು ಹೃದಯಿಗಳಲ್ಲ ,ನಾವು ಮನುಷ್ಯರೇ ಅಲ್ವೇ ?ಯಾವೊಬ್ಬ ಡಾಕ್ಟರ್ ,ನರ್ಸ್ ಅಥವಾ ಟೆಕ್ನಿಷಿಯನ್ ಗಳಾಗಲಿ ರೋಗಿಗಳ ಆದಷ್ಟು ಬೇಗ ಗುಣ ಮುಖರಾಗಿ ಹೊರ ಹೋಗ್ಬೇಕು ಅನ್ನುವ ಮನಸ್ಥಿಯನ್ನೇ ಹೊಂದಿರುತ್ತಾರೆ ತಮ್ಮ ಕಾರ್ಯಕ್ಕೆ ಪ್ರತಿಫಲ ಸಿಕ್ಕಾಗ ಅದಕ್ಕಿಂತ ಜಾಸ್ತಿ ಆನಂದ ಇನ್ನೊಂದಿರುವುದಿಲ್ಲ , ಆದರೆ ರೋಗಿಗಳು ಚಿಕಿತ್ಸೆಗೆ ಸ್ಪಂದಿಸದೇ ,ಮರಣ ಹೊಂದಿದಾಗ ರೋಗಿಗಳ ಸಂಬಂದಿಕರು ವೈದ್ಯರ ಮೇಲೇ ಹರಿಹಾಯುವುದು,ಹಲ್ಲೆ ಮಾಡುವದು ಆಸ್ಪತ್ರೆ ಧ್ವ೦ಸ ಮಾಡುವ ಕಾರ್ಯ ಚುಟವಟಿಕೆಯನ್ನು ಬೆಳಿಸಿಕೊಂಡಿದ್ದಾರೆ ! ವೈದ್ಯರುಗಳು ಕೇವಲ ಸ್ವಾರ್ಥ ಸಾಧನೆಗಾಗಿ ಹಂಬಲಿಸುತ್ತಾರೆ .ಅನವಶ್ಯಕವಾಗಿ ರೋಗಿಗಳನ್ನು ಸಾಯಿಸುತ್ತಾರೆ ಎಂಬಲ್ಲಾ ಸುದ್ದಿಗಳು ಸತ್ಯಕ್ಕೆ ದೂರವಾದವುಗಳು ಎಲ್ಲೂ ಬೆರಳೆಣಿಕೆ ಮಂದಿ ಮಾತ್ರ ಇಂಥ ಅಹಿತಕರ ಕಾರ್ಯಕ್ಕೆ ಕೈ ಹಾಕಿರಬಹುದು ಆದರೆ ಎಲ್ಲರನ್ನೂ ಅದೇ ದ್ರಷ್ಟಿ ಯಿಂದ ನೋಡುವ ಜಾಯಮಾನ ನಮ್ಮಲ್ಲಿ ಬೇರೂರಿದೆ . ನಮ್ಮನ್ನು ತೀರಾ ಕೀಳು ಮಟ್ಟದಲ್ಲಿ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತಿದ್ದಾರೆ ಕಷ್ಟ ಪಟ್ಟು ಹಗಲು ಇರಳು ರೋಗಿಗಳನ್ನು ಈ ಸಮಯದಲ್ಲಿ ಪ್ರಾಣವನ್ನು ಒತ್ತಿ ಇಟ್ಟು ಜಾಕರಿ ಮಾಡುವ ನಮಗೆ ನೀಡುವ ಬಹುಮಾನ ಇದೇನಾ ? ಸುಮಾರು ಎಂಟನೂರಕ್ಕೂ ಅಧಿಕ ಮಂದಿ ದೇಶದಲ್ಲಿ ವೈದ್ಯರು ಅದೆಷ್ಟು ಜಾಗ್ರತೆ ವಹಿಸಿಯೂ ಕೋವಿಡ್ ರೋಗಿಗಳಿಗೆ ಟ್ರೀಟ್ಮೆಂಟ್ ಕೊಟ್ಟು ಸಾನೊಪ್ಪಿದ್ದಾರೆ. ವೈದ್ಯಕೀಯ ಸಿಬಂದಿಗಳ ಮೇಲೆ ಅನೂ ಕ್ಷಣವೂ ತೂಗುಗತ್ತಿ ನೇತಾಡುತ್ತಿರುತ್ತದೆ .” ನಿಜಕ್ಕೂ ಆ ನರ್ಸ್ ಮಾತಿನಲ್ಲಿ ಅರ್ಥವಿತ್ತು, ಸಾಮಾಜಿಕ ಕಳಕಳಿ ಇದ್ದೇ ಇತ್ತು . ಹೌದು ! ವೈದ್ಯರುಗಳ ಬಗ್ಗೆ ಆಸ್ಪತ್ರೆಗಳ ಬಗ್ಗೆ ಉದ್ದುದ್ದ ದೂರುಗಳ ಸರಮಾಲೆಯನ್ನು ಹರಿಸುವ ನಾವುಗಳು ಯಾಕೆ ಆಲೋಚನಾ ಭಗ್ನರಾಗುತ್ತೇವೆ?.ಮೊದಲೇ ಪ್ರಿಕಾಶನ್ ನ್ನು ತಂದು ಕೊಂಡಿದ್ದರೇ ವೈದ್ಯರನ್ನು ,ವ್ಯವಸ್ಥೆಗೆ ಬೆಟ್ಟು ತೋರಿಸುವ ಅಗತ್ಯವಿರುವುದಿಲ್ಲ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳು (Atom)

