ಶುಕ್ರವಾರ, ಆಗಸ್ಟ್ 21, 2020
ಕಣ್ತುಂಬಿಸಿ ಕೊಳ್ಳುವಂತಿಲ್ಲ ಈ ಬಾರಿಯ ಚೌತಿ ಹಬ್ಬವನ್ನಾ !
ಗಣೇಶ ಚತುರ್ಥಿ ಹಬ್ಬ ಮತ್ತೆ ಬಂದಿದೆ ..ಚೌತಿ ಹಬ್ಬವೆಂದ ಕೂಡಲೇ ಬಾರಿ ಗೌಜು . ಕುಟುಂಬದವರ ಜೊತೆ
ಊರವರ ಜೊತೆಗೆ ರಂಗು -ರಂಗಾಗಿ ಆಚರಿಸಬಲ್ಲ ಆಕರ್ಷಣೀಯ ಹಬ್ಬಗಳ ಪೈಕಿ ಮೇಲ್ಪಂಕ್ತಿಯಲ್ಲಿ ಕಂಡು
ಬರುತ್ತದೆ ಗೌರಿ -ಗಣೇಶ ಹಬ್ಬ. ಮನೆಯಲ್ಲೇ ಮೂರ್ತಿ ಇಟ್ಟು ಸಾಂಪ್ರದಾಯಿಕ ಪೂಜೆ ಮಾಡಿ ವಿಸರ್ಜನೆ
ಮಾಡುವ ಪದ್ಧತಿ ಒಂದೆಡೆಯಾದರೆ ಇನ್ನು ಸಾರ್ವಜನಿಕ ಗಣೇಶೋತ್ಸವ ಮತ್ತೊಂದು ಕಡೆ ಜಗಮಗಿಸುತ್ತದೆ .
ಮಹಾರಾಷ್ತ್ರ ಸೇರಿದಂತೆ ಅತೀ ಹೆಚ್ಚಾಗಿ ದಕ್ಷಿಣ ಭಾರತದ ಗಲ್ಲಿ -ಗಲ್ಲಿ ಗಳಲ್ಲಿ ಚೌತಿ ಗಣೇಶ ಮನೆ
ಮಾತಾಗುತ್ತಾನೆ . ಅದೆಷ್ಟು ಸಡಗರ ಅದೆಂತಾ ಅದ್ದೂರಿತನ ಎಂದು ವರ್ಣಿಸುವುದಕ್ಕೆ ಪದಗಳೇ ಸಿಗದು.
ಅಷ್ಟೊಂದು ಆಡಂಬರ ಮೇಳೈಸುತ್ತದೆ .ಊರು ಬಿಟ್ಟು ಪರ ಊರ ಸೇರಿದವರು ಉದ್ಯೋಗಸ್ತರು ,ಶಿಕ್ಷಣ
ಪಡೆಯುತ್ತಿರುವವರು ಈ ಹಬ್ಬಕ್ಕಾಗಿ ತಮ್ಮೂರಿಗೆ ಬಾರದೇ ಇರಲಾರರು. ಇಷ್ಟೊಂದು ಆಕರ್ಷಣೆ ಈ ಗೌರಿ
ಗಣೇಶ ಹಬ್ಬಕ್ಕೆ ಇದೆ. ಕರೋನ ಈ ಬಾರಿ ಮಾತ್ರ ಕಂಟಕ ತಂದು ಬಿಟ್ಟಿದೆ. ಹಾಗಂತ ಈ ಚೈನಾ ವೈರಸ್
ಪ್ರತಿಯೊಂದು ಹಬ್ಬ ಹರಿದಿನ ಶುಭ ಕಾರ್ಯಕ್ಕೆ ಕಡಿವಾಣ ತಂದಿದ್ದು ನಿಜವೇ ಯಾದರೂ, ಗಣೇಶನ
ಹಬ್ಬದವರೆಗಾದರೂ ಓಡಿ ಹೋಗಬಹುದುದೆಂಬಂತಿದ್ದ ನಿರೀಕ್ಷೆ ಹುಸಿಯಾಗಿದೆ.
ಒಂದು ದಿನದಿಂದ ಹಿಡಿದು ಮೂರು ದಿನ, ಹದಿನೈದು ದಿನ ,ತಿಂಗಳು ಗಟ್ಟಲೇವರೆಗೂ ತಾತ್ಕಾಲಿಕ ಪೆಂಡಾಲ್
ಗಳಲ್ಲಿ ಗಣೇಶನ ವಿಗ್ರಹವನ್ನು ವಿಟ್ಟು ಹಗಲು- ಇರುಳು ಎನ್ನದೇ ಧಾರ್ಮಿಕ ,ಸಾಂಸ್ಕ್ರತಿಕ
ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಮನೆಯಲ್ಲೂ ಅಷ್ಟೇ ಸಂಭ್ರಮದ ವಾತಾವರಣ ಸ್ರಷ್ಟಿಯಾಗುತ್ತದೆ.
ಸಾರ್ವಜನಿಕ ಗಣೇಶೋತ್ಸವದಲ್ಲಿ ಮುಸ್ಸಂಜೆ ಯಿಂದ ಮಧ್ಯರಾತ್ರಿವರೆಗೆ ಕೆಲವೆಡೆ ಮುಂಜಾನೆ ತನಕವೂ
ನಾಟಕ ,ನ್ರತ್ಯ, ರಸಮಂಜರಿ ಕಾರ್ಯಕ್ರಮಗಳು ಮನರಂಜಿಸುತ್ತದೆ . ಒಂದೊಂದು ಊರಿನಲ್ಲಿ ಕಡಿಮೆಯೆಂದರೂ
೨-೩ ಸಾರ್ವಜನಿಕ ಗಣೇಶೋತ್ಸವ ನಡೆಯುತ್ತದೆ ಊರಿಗೆ ಊರೇ ಹಬ್ಬದ ಸಂಭ್ರಮ ಸಡಗರದಲ್ಲಿ ತೇಲಿ
ಹೋಗುತ್ತದೆ.ಮದುವಣ ಗಿತ್ತಿಯಂತೆ ಊರು ಶ್ರ೦ಗಾರ ಗೊಳ್ಳುತ್ತದೆ .ಬಗೆ ಬಗೆಯ ಗಣೇಶನ ವಿಗ್ರಹ :ಚೌತಿಯ
ಗಣೇಶ ಆಸ್ತಿಕ ಮತ್ತು ನಾಸ್ತಿಕನಾಗಿ ಕಂಗೊಳಿಸುತ್ತಾನೆ. ಧಾರ್ಮಿಕ ಶ್ರದ್ಧೆಯ ಜೊತೆಗೆ
ಮೋನೋರಂಜನಾತ್ಮಕವಾಗಿಯೂ ಸೆಳೆಯುತ್ತಾನೆ ಚೌತಿಯ ಹಬ್ಬದಂದು ಪುಟಾಣಿ ಗಣೇಶ ನಿಂದ ಹಿಡಿದು ಆಳೆತ್ತರದ
ಗಣೇಶ ಕಾಣಸಿಗುತ್ತಾನೆ . ಇನ್ನು ಮುಂಬಾಯಿಯಂತ ಮಹಾನಗರದಲ್ಲಿ ಕಟ್ಟಡ ಗಾತ್ರದ ಗಣೇಶ ವಿಗ್ರಹ
ವನ್ನಿಟ್ಟು ಪೂಜಿಸಲಾಗುತ್ತದೆ . ಇನ್ನೊಂದು ವಿಶೇಷವೆಂದರೆ ಆಯಾಯ ಟ್ರೆಂಡ್ ಗೆ ಅನುಗುಣವಾಗಿ ವೈರಲ್
ವ್ಯಕ್ತಿಯನ್ನು ಹೋಲುವಂತ ಗಣೇಶನ ವಿಗ್ರಹವನ್ನು ರಚಿಸುತ್ತಾರೆ ವಿಗ್ರಹ ರಚನಾಕಾರರು . ಉದಾಹರಣೆಗೆ
ನರೇಂದ್ರ ಮೋದಿ ,ಕ್ರಿಕೆಟ್ ರುಗಳು, ಸೆಲೆಬ್ರಿಟಿಗಳ ಒಳಗೊಂಡ೦ತೆ ಚಿತ್ರ- ವಿಚಿತ್ರವಾಗಿ ಗಣೇಶನ
ರೂಪ, ಆಕಾರ ,ಸ್ರಷ್ಟಿಯಾಗುತ್ತದೆ. ಇದಕ್ಕೆ ಅಷ್ಟೇ ಬೇಡಿಕೆಯೂ ಇದೆ ಬೇಡಿಕೆದಾರರ ಅಭಿರುಚಿ ಬಯಕೆ
ಮೇರೆಗೆ ರಚಿತ ಗೊಳ್ಳುತ್ತದೆ ಎನ್ನುವ ಅಭಿಪ್ರಾಯ ರಚನಕಾರರ ವಲಯದ್ದು . ಒಟ್ಟಾರೆ ಇಲ್ಲಿ ಗಣೇಶ ಭಾವ
- ಭಕ್ತಿಗೆ ಮಾತ್ರವಲ್ಲದೇ ಮನೋರಂಜನಾ ವಸ್ತು ಕೂಡಾ ಆಗುವುದು ಸುಳ್ಳಲ್ಲ . ಇದಕ್ಕೆ ಹಲವರ
ಆಕ್ಷೇಪಗಳಿದ್ದರೂ,ಇದುವರೆಗೂ ರಚನೆಯಲ್ಲಿ ಒಂದಿನಿತು ಬದಲಾವಣೆ ಕಂಡಿಲ್ಲ.
ಮೆರವಣಿಗೆ :ಇನ್ನೊಂದು ಆಕರ್ಷಣೆ ಎಂದರೆ ಅದು ವಿಸರ್ಜನಾ ಮೆರವಣಿಗೆ . ಅದ್ಭುತ ಶೋಭಾಯಾತ್ರೆಯಲ್ಲಿ ಕಿ.ಮೀ. ಗೂ
ಅಧಿಕ ದೊರದವರೆಗೆ ಜನಸಂಧಣಿ . ನಾಸಿಕ್ ಬ್ಯಾಂಡ್ ,ಚಂಡೆ ,ಟ್ಯಾಬ್ಲೋ ,ಪಟಾಕಿ ಪ್ರತಾಪ ಸೇರಿದಂತೆ
ಇನ್ನಿತರ ಬಗೆ- ಬಗೆಯ ವೇಷ ಧಾರಿಗಳು ಮನಸೆಳೆಯುತ್ತಾರೆ. ಎಲ್ಲಾಕ್ಕಿಂತ ಹೆಚ್ಚಾಗಿ ಮೆರವಣಿಗೆಯಲ್ಲಿ
ಸಾಗುವ ಪ್ರತಿಯೊಬ್ಬರ ಹೆಜ್ಜೆ ಬದಲಾವಣೆ ಗೊಳ್ಳುತ್ತದೆ. ತಮಗೆ ಅರಿವಿಲ್ಲದಂತೆ ಕಾಲು ಕುಣಿತಕ್ಕೆ
ಒಗ್ಗಿ ಕೊಳ್ಳುತ್ತದೆ. ಇಂಥ ಕ್ಷಣಕ್ಕಾಗಿ ಜಾತಕಪಕ್ಷಿ ಯಂತಿರುವ ನಶೆ ಏರಿಸಿ ನಾಚುವ ವರ್ಗವನ್ನು
,ಡಿಜೆ ಸೌಂಡ್ ,ಕ್ಯಾಬರೇ ಸಾಂಗ್ ನಮಗೆ ಹಾಗೂ ವೀಕ್ಷಕರಿಗೆ ಖುಷಿ ಎಂಟರ್ಟೈನ್ಮೆಂಟ್ ಸಿಕ್ಕರೇ ಇತ್ತ
ಗಣೇಶ ಮರುಗದೇ ಇರಲಾರನು .!! ವಿಸರ್ಜನೆ :ಕೊನೆಯ ವಿಚಾರಕ್ಕೆ ಬಂದರೆ ,ಗಣೇಶನ ಉತ್ಸವ ವಿಗ್ರಹವಾದ
ಮಣ್ಣಿನ ಮೂರ್ತಿಯನ್ನು ವಿಸರ್ಜನೆ ಮಾಡಲೇ ಬೇಕಾಗುತ್ತದೆ ಬಾವಿ, ಕೆರೆ, ನದಿಯಲ್ಲಿ ವಿಧಿ
ವಿಧಾನಗಳಂತೆ ಪೂಜಾ ಕೈಂಕರ್ಯ ನಂತರ ವಿಸರ್ಜನೆ ಮಾಡುವುದು ರೂಢಿ. ಗ್ರಾಮೀಣ ಪ್ರದೇಶಗಳಲ್ಲಿ ಬಾವಿ
,ಕೆರೆ, ನದಿಗಳಿಗೆ ಬರಗಾಲವಿಲ್ಲ ಆದರೆ ಪಟ್ಟಣ ಪ್ರದೇಶಗಳಲ್ಲಿ ಗಣೇಶನನ್ನು ನೀರಿನಲ್ಲಿ
ತೇಲಿಸುವುದು ಕಷ್ಟದ ಕೆಲಸ . ಅಲ್ಲಿ -ಇಲ್ಲಿ ,ಆಚೆ -ಈಚೆ ಹೊತ್ತಲ್ಲದ ಹೊತ್ತಿನ ಗತ್ತಿನಲ್ಲಿ
ತಿರುಗಿಸಿ , ಗಣೇಶ ಅರ್ಧ ಜೀವ ಕೆಳೆದು ಕೊಂಡು ಕೊನೆಗೆ ನೀರಿನಲ್ಲಿ ಮುಳುಗುತ್ತಾನೆ . ಚೌತಿ
ರೂವಾರಿ ಊರಾದ ಮುಂಬೈಗೆ ಮಾತ್ರ ಸಮುದ್ರ ಸಾಕಾಗುವುದಿಲ್ಲ ಆಳೆತ್ತರದ ಗಣೇಶ ಮೂರ್ತಿ ವಿಸರ್ಜನೆ
ಗೊಂಡರೂ, ಮರುದಿನ ಪತ್ರಿಕೆಯಲ್ಲಿ ಗಣೇಶನ ಮೂರ್ತಿಯ ಚಿತ್ರಗಳನ್ನೂ ಕಂಡರೆ ಮನಸ್ಸು ಮರುಗುತ್ತದೆ
ಅರ್ಧಕರ್ಧ ತುಂಡರಿಸಿದ ಮೂರ್ತಿಗಳು ಸಮುದ್ರ ದಡದಲ್ಲಿ ಕಾಣ ಸಿಗುತ್ತದೆ. ಸಾಕಷ್ಟು ದಿನಗಳ ತನಕ
ಕಾಪಾಡಲು ಮೂರ್ತಿ ರಚನೆಯಲ್ಲಿ ಜೇಡಿ ಮಣ್ಣಿನ ಜೊತೆ ಒಂದಷ್ಟು ರಾಸಾಯನಿಕ ವಸ್ತು ಹಾಗೂ ಪೈಂಟ್ ಗಳ
ಬೆರೆಕೆಯಲ್ಲಿ ರೂಪುಗೊಳಿಸುವುದರಿಂದ ನೀರಿನಲ್ಲಿ ಕರಗುವುದು ತುಸು ಕಷ್ಟಕರವಾದರೇ , ಇನ್ನೊಂದೆಡೆ
ನೀರು ಕಲುಷಿತ ಗೊಳುತ್ತದೆ., ಮಾಲಿನ್ಯ ಭರಿತ ನೀರಿನಲ್ಲಿ ಸಮುದ್ರ ಸಸ್ತನಿ ಗಳಿಗೆ ಮಾರಕವಾಗುವುದರ
ಜೊತೆಗೆ ಅದನ್ನು ಸೇವಿಸುವ ಮನುಷ್ಯನಿಗೂ ಇಲ್ಲ ಸಲ್ಲದ ಖಾಯಿಲೆಗಳು ತಗುಲುವುದರಲ್ಲಿ ಎರಡು
ಮಾತಿಲ್ಲ. ಚೌತಿ ಗಣೇಶ ಇದೆನ್ನೆಲ್ಲಾವನ್ನೂ ಅರಗಿಸಿ ಕೊಳ್ಳಲಾರನಾದರೂ ,ಅನುಭವಿಸಲೇ ಬೇಕು
ವರ್ಷಕ್ಕೆ ಒಂದು ಬಾರಿ . ! ಈ ವರ್ಷ ಗಣೇಶನ ನೆಮ್ಮದಿಗೆ ಯಾವುದೇ ಭಂಗ ವಿಲ್ಲಾ .! ಡಿಜೆ ಸೌಂಡ್
ಇಲ್ಲ ,ಕ್ಯಾಬರೆ ನರ್ತನ ಇಲ್ಲ ದೇಹ ಛಿದ್ರ ಗೊಳ್ಳುವ ನೋಟವಿಲ್ಲ . ಎಲ್ಲಕ್ಕೂ ಕರೋನ ಕಡಿವಾಣ
ಹಾಕಿದೆ . ಕಾದು ಕುಳಿತು ಎಂಜಾಯ್ ಮಾಡುವ ನಮ್ಮಂತ ಮನಸ್ಸುಗಳಿಗೆ ಮಾತ್ರ ಬೇಸರ ತಂದಿದೆ.
ಕರೋನಕ್ಕಿಷ್ಟು ಹಿಡಿ ಶಾಪ ಹಾಕಿ ಮನೆಯಲ್ಲೇ ಕಾಲ ಕೆಳೆಯಬೇಕಾಗಿದೆ .
ಬುಧವಾರ, ಆಗಸ್ಟ್ 19, 2020
ಇವರುಗಳಿಗೆ ಯಾಕೆ ತಾರತಮ್ಯ ?
ಕರೋನ ದಿಂದ ಇಡೀ ಪ್ರಪಂಚ ಕಂಗೆಟ್ಟುಹೋಗಿರುವುದು ನಿಜ.,ಅದರಲ್ಲೂ ಜಗತ್ತಿನ ಎರಡನೇ ಅತೀ ದೊಡ್ಡ ಜನ ಸಂಖ್ಯೆಯನ್ನು ಹೊಂದಿರುವ ಆರ್ಥಿಕತೆಯಲ್ಲಿ ಅಷ್ಟೊಂದು ಸಧೃಢ ವಾಗಿರದ ಭಾರತಕ್ಕೆ ಸವಾಲೇ ಸರಿ. ತನ್ಮಧ್ಯೆ ಕೆಲವೊಂದು ರಾಜ್ಯಗಳು ಸರ್ಕಾರದ ವತಿಯಿಂದ ಒಂದಷ್ಟು ಯೋಜನೆಗಳನ್ನು ದಯಪಾಲಿಸಿವೆ. ಇದಕ್ಕೆ ನಮ್ಮ ಕರ್ನಾಟಕ ರಾಜ್ಯವು ಹೊರತಾಗಿಲ್ಲ.ನಿರ್ಗತಿಕರಿಗೆ,ವ್ಯಾಪಾರಿಗಳಿಗೆ,ಕಲಾವಿದರು ,ಹೋಟೆಲ್ ಕಾರ್ಮಿಕರು ಇನ್ನಿತರ ದಿನ ಕೂಲಿ ಕಾರ್ಮಿಕರ ಸ್ಥಿತಿ ಶೋಚನೀಯವಾಗಿದೆ. ಇದೆಲ್ಲಾ ಅರಿತ ಸರ್ಕಾರವು ಒಂದಷ್ಟು ಯೋಜನಾ ನೀತಿಯನ್ವಯ ಆಟೋ ,ಟಾಕ್ಸಿ ಚಾಲಕರಿಗೆ, ಅಗಸಿಗರಿಗೆ, ಕ್ಷೌರಿಕರಿಗೆ ಸಹಾಯಧನವನ್ನು ಕಲ್ಪಿಸಲಾಗಿದೆ . ಒಳ್ಳೆಯ ಬೆಳವಣಿಗೆ ಕೂಡಾ .,ಆದರೆ ಆದ್ಯಾಕೋ ತಾರತಮ್ಯವಾದಂತ ವಿಚಾರ ಮೂಡುತ್ತದೆ. ದಿನದ ಒಂದು ಹೊತ್ತಿನ ತುತ್ತಿಗಾಗಿ ಕೂಲಿ ಮಾಡುವವರ ಪೈಕಿ ಯಕ್ಷಗಾನ ಕಲಾವಿದರುಗಳು ಹೋಟೆಲ್ ನೌಕರುಗಳೂ ಸೇರಿದ್ದಾರೆ ಇವರುಗಳು ಆ ಯೋಜನೆಯಲ್ಲಿ ಸ್ಥಾನ ಪಡೆಯದಿರುವುದು ವಿಪರ್ಯಾಸ .ಕೆಲವೊಂದು ಯಕ್ಷಗಾನ ಮೇಳಗಳು ದೇವಸ್ಥಾನದ ವತಿಯಿಂದ ಅದರಲ್ಲೂ ,ಧಾರ್ಮಿಕ ದತ್ತಿ ಇಲಾಖೆಯಡಿಯಲ್ಲಿ ಕಾರ್ಯಾಚರಿಸುವುದರಿಂದ ಅದಕ್ಕೆ ಒಳಪಡುವ ಯಕ್ಷಗಾನ ಮೇಳಗಳಿಂದ ಕಲಾವಿದರುಗಳಿಗೆ ಕಿಂಚಿತ್ ಸಹಾಯಕವಾಗುತ್ತದೆ.ಧಾರ್ಮಿಕ ದತ್ತಿಯಿಂದ ಹೊರತಾಗಿರುವ ಯಕ್ಷಗಾನ ಮೇಳಕ್ಕೆ ಇದು ಲಭ್ಯತೆ ಇಲ್ಲ. ಡೇರೆ ಮೇಳಗಳು ಸೇರಿದಂತೆ ಕೆಲವು ಮೇಳಗಳು ದೇವಳದ ವತಿಯಿಂದ ನಡೆಯಲ್ಪಡುವ ಯಕ್ಷಗಾನ ಕಲಾವಿದರುಗಳಿಗೆ ಅನುಕೂಲವಾಗುವಂತೆ ಸರ್ಕಾರ ಯೋಚಿಸುವುದರ ಜೊತೆಗೆ ಹೋಟೆಲ್ ಕಾರ್ಮಿಕರ ಬಗ್ಗೆನೂ ಗಮನ ಹರಿಸಬೇಕಾಗಿದೆ .ಲಾಕ್ ದೌನ್ ಪರಿಣಾಮ ಅದೆಷ್ಟೋ ಹೋಟೆಲ್ ಗಳು ಮುಚ್ಚಿವೆ .ಹೋಟೆಲ್ ಕಟ್ಟಡಗಳ ಬಾಡಿಗೆ ಕಟ್ಟಲು ಸಹಾಯಕರಾದ ಸಾಕಷ್ಟು ಮಾಲೀಕರು ಹೋಟೆಲ್ ಗಳನ್ನೂ ಮಾರಾಟ ಮಾಡಿದ್ದಾರೆ. ಅದರಲ್ಲೂ ಅದನ್ನೇ ನಂಬಿಕೊಂಡು ಕರ್ತವ್ಯ ನಿರ್ವಹಿಸುತ್ತಿದ್ದ ಕಾರ್ಮಿಕರಿಗೆ ಉದ್ಯೋಗ ವಿಲ್ಲದಂತಾಗಿದೆ ಇನ್ನು ಅನ್ಲಾಕ್ ಆಗಿ ಹೋಟೆಲ್ ತೆರೆದರೂ, ವ್ಯಾಪಾರಿಗಳಿಲ್ಲದೇ ಬಿಕೋ ಎನ್ನುತ್ತಿದೆ . ತರುವಾಯ ಹೋಟೆಲ್ ನಲ್ಲಿ ದುಡಿಯುವವ ಕಾರ್ಮಿಕರ ಸಂಖ್ಯೆನ್ನು ಕೂಡಾ ತಗ್ಗಿಸಲಾಗಿದೆ . ಇನ್ನೊಂದೆಡೆ ಪಾರ್ಸೆಲ್ ಕೊಡುವ ಪದ್ದತಿ ಜಾರಿಯಾದ್ದರಿಂದ ಕಾರ್ಮಿಕರು ಉದ್ಯೋಗಕ್ಕೆ ಕತ್ತರಿ ಬಿದ್ದಿದೆ. ತಾವು ಮಾಡಿಟ್ಟ ಸಾಲ ಕಟ್ಟಲಾಗದೇ,ಮಾಸಿಕ ಬಾಡಿಗೆ ಪಾವತಿಸಲಾಗದೇ ,ಹೋಟೆಲ್ ವ್ಯವಹಾರದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಯಶ ಕಾಣದೇ ಹೋಟೆಲ್ ಮಾಲೀಕರಗಳು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ . ದಿನೇ -ದಿನೇ ಈ ಸಂಖ್ಯೆ ಏರುಗತಿಯತ್ತ ಸಾಗುತ್ತಿದೆ.ಈ ಎಲ್ಲಾ ಸಮಸ್ಯೆಯನ್ನು ಹೋಗಲಾಡಿಸಲು ಸರ್ಕಾರಕ್ಕೆ ತುಸು ಕಷ್ಟವೇ ಆದರೂ ಪರಿಹಾರ ಅಥವಾ ಪರ್ಯಾಯ ಮಾರ್ಗಗಳ ಮೂಲಕ ಇಂತವರಿಗೆ ಸಹಾಯವಾಗಬೇಕಿದೆ .ಇಂತಹ ಯೋಜನೆಗಳ ಮೂಲಕ ಬೇಧ -ಭಾವ ಮಾಡದೇ ಇದ್ದರೇ ಕಿಂಚಿತ್ ಉಪಕಾರವಾಗಬಲ್ಲದು.
ಭಾನುವಾರ, ಆಗಸ್ಟ್ 2, 2020
ಇದರ ಹಿಂದೆ ಇರುವವರ ಕೈವಾಡ ಯಾರದ್ದು ?
ಕರೋನಾ ಕರ್ನಾಟಕಕ್ಕೆ ಕಾಲಿಟ್ಟ ಘಳಿಗೆ ಯಿಂದ ಆಯುರ್ವೇದ ಪಂಡಿತ ಡಾl ಗಿರಿಧರ್ ಕಜೆಯವರು ನನ್ನಲ್ಲಿ ಔಷಧ ವಿದೆ , ನಾನು ಇದನ್ನು ಸಂಪೂರ್ಣವಾಗಿ ಗುಣಪಡಿಸುತ್ತೇನೆ ಎಂದು ಬಹಿರಂಗವಾಗಿ ಸವಾಲ್ ಹಾಕಿದ್ದರು ಅಂತೆಯೇ ಸರಕಾರಕ್ಕೆ ಮನವಿಯನ್ನೂ ಸಲ್ಲಿಸಿದ್ದರು ಆದರೇನು ಮಾಡೋಣ ಹೇಳಿ ದಪ್ಪ ಕಿವಿಯ ಸರ್ಕಾರಕ್ಕೆ ಇದೆನ್ನೆಲ್ಲಾ ಕೇಳುವ ವ್ಯವಧಾನ ವಿರಲಿಲ್ಲ ಯಾವುದರಲ್ಲಿ ಎಷ್ಟು ಪೀಕಬೇಕೋ ಎಂಬ ಆಲೋಚನಾ ಲೋಕದಲ್ಲಿರುವವರಿಗೆ ಇದು ಅರ್ಥವಾಗುವುದಿಲ್ಲ. ಅನುಮತಿಗೆ ಒಂದಷ್ಟು ಸಮಯ ಹಿಡಿಯುತ್ತದೆ ಎಂಬುದನ್ನು ಅಲ್ಲಗೆಳೆಯುವಂತಿಲ್ಲ ,ಸಮಯಕ್ಕೆ ಬೆಲೆ ಇಲ್ಲದಾಗ ಮಾತ್ರ ಅನುಮಾನ ಹೊಗೆಯಾಡುತ್ತವೆ . ದುಡ್ಡು ಮಾಡುವ ಆಸೆಯನ್ನು ಎಳ್ಳಷ್ಟೂ ಹೊಂದಿರದ ಅಪ್ರತಿಮ ,ಪ್ರಾಮಾಣಿಕ ವ್ಯಕ್ತಿ ಡಾ l ಕಜೆಯವರು ಅವರ ವ್ಯಕ್ತಿತ್ವವೇ ಅಂತದ್ದು ಎನ್ನುವುದಕ್ಕೆ ಇಲ್ಲಿರುವ ಕೆಲವು ಉದಾಹರಣೆಯನ್ನು ಗಮನಿಸಬಹುದು . ಕೋಟಿಗಟ್ಟಲೇ ಸುರಿದರೂ ವಾಸಿಯಾಗದ ಖಾಯಿಲೆ ಕೇವಲ ನೂರು ರೂಪಾಯಿಯಲ್ಲಿ ದಯಪಾಲಿಸುತ್ತಿದ್ದಾರೆ.ಅಷ್ಟು ಮಾತ್ರವಲ್ಲದೇ ಮಾಧ್ಯಮಗಳ ಮೂಲಕ ಮನೆಯಲ್ಲಿ ಹೇರಳವಾಗಿ, ಸುಲಭವಾಗಿ ಸಿಗುವ ಮದ್ದುಗಳನ್ನು ಪ್ರಚಾರ ಪಡಿಸುತ್ತಿದ್ದಾರೆ. ತಮ್ಮ ಬಳಿ ಬರುವ ರೋಗಿಗಳಿಗೆ ಉಚಿತವಾಗಿ ಮೆಡಿಸಿನ್ ನ್ನು ಹಂಚುತ್ತಿದ್ದಾರೆ. ಕೇವಲ ಕರೋನ ದಿಂದ ಮುಕ್ತರಾಗಬೇಕೆಂಬ ಅಭಿಲಾಷೆ ಮನಸ್ಥಿತಿ ಮಾತ್ರ ಅವರಲ್ಲಿದೆ. ಇತ್ತ ಅಪ್ರೂವಲ್ ಗೆ ಛಲ ಬಿಡದ ಇವರು ಸಾಕಷ್ಟು ಬಾರಿ ಸರ್ಕಾರದ ಸಂಬಂಧಪಟ್ಟ ಅಧಿಕಾರಿಗಳ ಹಿಂದೆ ಬಿದ್ದು ,ತಮ್ಮ ಔಷಧದ ಅನುಮತಿಗೆ ಬೇಡಿಕೆ ಇಡುತ್ತಾ ಕಚೇರಿ ಅಲೆದಾಡಿದ್ದರ ಫಲ ಶೃತಿಗಏನೋ ಎಂಬಂತೆ , ಕೊನೆಗೂ ದಾರಿ ಕಾಣದ ಸರ್ಕಾರದ ಸಂಬಂಧ ಪಟ್ಟ ಇಲಾಖೆ ಒಂದು ಶರತ್ತುವಿನ ಅನ್ವಯ ಡಾ l ಕಜೆ ಬಳಿ ಇರುವ ಎಲ್ಲಾ ಈ ಸಂಬಂಧ ಔಷಧವನ್ನು ಸರ್ಕಾರಕ್ಕೆ ಹಸ್ತಾ೦ತರಿಸಬೇಕು ಹಾಗೂ ಸ್ವತಃ ಯಾರಿಗೂ ಕೊಡುವಂತಿಲ್ಲ ಎಂಬ ಸರಕಾರದ ತೀರ್ಮಾನಕ್ಕೆ ಬದ್ಧರಾಗಿ ತಮ್ಮ ಸನಿಹಕ್ಕೆ ಬರುವ ರೋಗಿಗಳಿಗೆ ಔಷಧೋಪಚಾರವನ್ನು ನಿಲ್ಲಿಸಿ ಸರ್ಕಾರದ ದಿಂದಲೇ ಪೂರೈಕೆ ಕಂಡರೆ ಒಂದಿನಿತು ಒಳ್ಳೆದು ಎಂದಾಲೋಚಿಸಿದರೇ ,ಇತ್ತ ನಡೆದಿದ್ದೇ ಬೇರೆ ಕಜೆ ಔಷಧಗಳೆಲ್ಲವೂ ಸರಕಾರದ ಗೋದಾಮಿನಲ್ಲಿ ಬಂಧಿಯಾಯಿತೇ ವಿನಾ: ರೋಗಿಗಳಿಗೆ ತಲುಪಲೇ ಇಲ್ಲ . ಮಾಫಿಯಾದ ಕರಿ ಮೋಡ ಆವರಿಸಿ ಬಿಟ್ಟಿತ್ತು ,ಪಟ್ಟಭದ್ರ ಹಿತಾಸಕ್ತಿಗಳ ನಡುವೆ ಸಿಲುಕಿತು. ಖಾಸಗೀ ಆಸ್ಪತ್ರೆಗಳಿಗೆ ಹೊಡೆತ ಬೀಳುತ್ತದೆ ,ಔಷಧ ತಯಾರಿಸುವ ಕಂಪನಿಗಳಿಗೆ ಬರೆ ಬೀಳುತ್ತವೆ ಎಂಬ ಕಾರಣದಿಂದ ಈ ಔಷಧಿ ಮಾರುಕಟ್ಟೆಗೆ ಬಾರದಿರಲು ಕಾಣದ ಕೈಗಳು ಕೆಲಸ ಮಾಡಿವೆ. ಕೆಲವು ಸೆಲಬ್ರಿಟಿಗಳನ್ನೂ ಸೇರಿದಂತೆ ಅದೆಷ್ಟೋ ರೋಗಿಗಳನ್ನು ಗುಣ ಪಡಿಸಿದ ಡಾ l ಕಜೆಯವರು ಪ್ರಶಂಸಾರ್ಹರು .ಖುದ್ದು ಸಚಿವ ಸಿಟಿ ರವಿಯವರು ಸಹಾ ಮಾಧ್ಯಮದ ಮುಂದೆ ಹೇಳಿದ್ದರು ನಾನು ಡಾ l ಕಜೆಯವರ ಔಷಧ ದಿಂದಲೇ ಗುಣಮುಖನಾಗಿದ್ದೇನೆ ಎಂದು . ಅಸುರರ ಕ್ಷೇತ್ರದಲ್ಲಿ ಜಯ ಲಭಿಸುವುದು ಅಷ್ಟು ಸುಲಭದ ಮಾತು ಅಲ್ಲವೇ ಅಲ್ಲ. ನಮ್ಮವರಿಗೂ ಅಷ್ಟೇ ನಮ್ಮ ಮನೆಯ ಊಟ ಹಿಡಿಸುವುದಿಲ್ಲ ಆಯುರ್ವೇದ ಔಷಧ ನಮ್ಮ ಕೊಡುಗೆ ,ಭಾರತದ ಆಯುರ್ವೇಧ ಪದ್ಧತಿ ಮತ್ತಿನ್ನೇಲ್ಲೂ ಯಾವುದೇ ದೇಶದಲ್ಲಿ ಸಿಗುವುದಿಲ್ಲ. ಅದರದ್ದೇಯಾದ ಮಹತ್ವ ಗುಣ ವಿಶೇಷತೆಗಳಿವೆ . ರೋಗವನ್ನು ಹೊಡೆದು ಓಡಿಸುವ ಶಕ್ತಿ ಇದೆ . ಇಂಗ್ಲಿಷ್ ಮೆಡಿಸಿನ್ ಬಗ್ಗೆ ಹಾತೊರೆಯುವ ನಾವುಗಳು ಇದರ ಬಗ್ಗೆ ಕಿಂಚಿತ್ ಒಲವು ನೀಡಬೇಕಾಗಿದೆ. ಡಾ l ಕಜೆಯವರ ಔಷಧ ಮಾರುಕಟ್ಟೆಗೆ ಬರುವಂತಾಗಲಿ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳು (Atom)



